ದ್ರೋಣ ಪರ್ವ: ಘಟೋತ್ಕಚವಧ ಪರ್ವ
೧೩೦
ಧೃತರಾಷ್ಟ್ರನು ರಾತ್ರಿಯುದ್ಧದ ಕುರಿತು ಪುನಃ ಪ್ರಶ್ನಿಸಿದುದು (೧-೧೦). ದ್ರೋಣನಿಂದ ಶಿಬಿಯ ವಧೆ (೧೧-೧೭). ಭೀಮನು ಕಳಿಂಗ ರಾಜಕುಮಾರ, ಧ್ರುವ ಮತ್ತು ಜಯರಾತರನ್ನು ಸಂಹರಿಸಿದುದು (೧೮-೨೫). ಭೀಮನಿಂದ ದುರ್ಮದ-ದುಷ್ಕರ್ಣರ ಸಂಹಾರ (೨೬-೪೦).
07130001 ಧೃತರಾಷ್ಟ್ರ ಉವಾಚ|
07130001a ತಸ್ಮಿನ್ಪ್ರವಿಷ್ಟೇ ದುರ್ಧರ್ಷೇ ಸೃಂಜಯಾನಮಿತೌಜಸಿ|
07130001c ಅಮೃಷ್ಯಮಾಣೇ ಸಂರಬ್ಧೇ ಕಾ ವೋಽಭೂದ್ವೈ ಮತಿಸ್ತದಾ||
ಧೃತರಾಷ್ಟ್ರನು ಹೇಳಿದನು: “ಅಸಹನಶೀಲ ಕ್ರುದ್ಧ ಅಮಿತೌಜಸ ದ್ರೋಣನು ಆ ದುರ್ಧರ್ಷ ಸೃಂಜಯರನ್ನು ಪ್ರವೇಶಿಸಿದಾಗ ನಮ್ಮವರ ಮನಸ್ಥಿತಿಯು ಹೇಗಿದ್ದಿತು?
07130002a ದುರ್ಯೋಧನಂ ತಥಾ ಪುತ್ರಮುಕ್ತ್ವಾ ಶಾಸ್ತ್ರಾತಿಗಂ ಮಮ|
07130002c ಯತ್ಪ್ರಾವಿಶದಮೇಯಾತ್ಮಾ ಕಿಂ ಪಾರ್ಥಃ ಪ್ರತ್ಯಪದ್ಯತ||
ಶಾಸ್ತ್ರಗಳನ್ನು ಉಲ್ಲಂಘಿಸಿ ನಡೆಯುವ ನನ್ನ ಮಗ ದುರ್ಯೋಧನನೊಂದಿಗೆ ಮಾತನಾಡಿದ ಆ ಅಮೇಯಾತ್ಮನು ಸೇನೆಯನ್ನು ಪ್ರವೇಶಿಸಿದಾಗ ಪಾರ್ಥನು ಏನು ಮಾಡಿದನು?
07130003a ನಿಹತೇ ಸೈಂಧವೇ ವೀರೇ ಭೂರಿಶ್ರವಸಿ ಚೈವ ಹಿ|
07130003c ಯದಭ್ಯಗಾನ್ಮಹಾತೇಜಾಃ ಪಾಂಚಾಲಾನಪರಾಜಿತಃ||
07130004a ಕಿಮಮನ್ಯತ ದುರ್ಧರ್ಷಃ ಪ್ರವಿಷ್ಟೇ ಶತ್ರುತಾಪನೇ|
07130004c ದುರ್ಯೋಧನಶ್ಚ ಕಿಂ ಕೃತ್ಯಂ ಪ್ರಾಪ್ತಕಾಲಮಮನ್ಯತ||
ವೀರ ಸೈಂಧವ ಮತ್ತು ಭೂರಿಶ್ರವರು ಹತರಾಗಲು ಮಹಾತೇಜಸ್ವಿ ಪಾಂಚಾಲರನ್ನು ಆ ಅಪರಾಜಿತ ದುರ್ಧರ್ಷ ಶತ್ರುತಾಪನನು ಪ್ರವೇಶಿಸಿ ಆಕ್ರಮಿಸಲು ಆ ಸಮಯದಲ್ಲಿ ದುರ್ಯೋಧನನು ಯಾವ ಕೆಲಸವು ಉಚಿತವೆಂದು ಯೋಚಿಸಿದನು?
07130005a ಕೇ ಚ ತಂ ವರದಂ ವೀರಮನ್ವಯುರ್ದ್ವಿಜಸತ್ತಮಂ|
07130005c ಕೇ ಚಾಸ್ಯ ಪೃಷ್ಠತೋಽಗಚ್ಚನ್ವೀರಾಃ ಶೂರಸ್ಯ ಯುಧ್ಯತಃ|
07130005e ಕೇ ಪುರಸ್ತಾದಯುಧ್ಯಂತ ನಿಘ್ನತಃ ಶಾತ್ರವಾನ್ರಣೇ||
ಆ ವರದ ವೀರ ದ್ವಿಜಸತ್ತಮನನ್ನು ಯಾರು ಅನುಸರಿಸಿದರು? ಯುದ್ಧಮಾಡುತ್ತಿರುವ ಆ ಶೂರನ ಹಿಂದಿನಿಂದ ಯಾವ ವೀರರು ಹೋದರು? ಅವನು ರಣದಲ್ಲಿ ಯುದ್ಧಮಾಡಿ ಶತ್ರುಗಳನ್ನು ಸಂಹರಿಸುತ್ತಿರುವಾಗ ಅವನ ಮುಂದೆ ಯಾರಿದ್ದರು?
07130006a ಮನ್ಯೇಽಹಂ ಪಾಂಡವಾನ್ಸರ್ವಾನ್ಭಾರದ್ವಾಜಶರಾರ್ದಿತಾನ್|
07130006c ಶಿಶಿರೇ ಕಂಪಮಾನಾ ವೈ ಕೃಶಾ ಗಾವ ಇವಾಭಿಭೋ||
ಭಾರದ್ವಾಜನ ಶರಗಳಿಂದ ಗಾಯಗೊಂಡ ಪಾಂಡವರೆಲ್ಲರೂ ಛಳಿಗಾಲದಲ್ಲಿ ನಡುಗುವ ಬಡಕಲು ಆಕಳುಗಳಂತೆ ತೋರುತ್ತಿದ್ದಿರಬಹುದಲ್ಲವೇ?
07130007a ಪ್ರವಿಶ್ಯ ಸ ಮಹೇಷ್ವಾಸಃ ಪಾಂಚಾಲಾನರಿಮರ್ದನಃ|
07130007c ಕಥಂ ನು ಪುರುಷವ್ಯಾಘ್ರಃ ಪಂಚತ್ವಮುಪಜಗ್ಮಿವಾನ್||
ಪಾಂಚಾಲರನ್ನು ಪ್ರವೇಶಿಸಿ ಆ ಮಹೇಷ್ವಾಸ, ಪುರುಷವ್ಯಾಘ್ರ, ಅರಿಮರ್ದನನು ಹೇಗೆ ಪಂಚತ್ವವನ್ನು ಹೊಂದಿದನು?
07130008a ಸರ್ವೇಷು ಸೈನ್ಯೇಷು ಚ ಸಂಗತೇಷು
ರಾತ್ರೌ ಸಮೇತೇಷು ಮಹಾರಥೇಷು|
07130008c ಸಂಲೋಡ್ಯಮಾನೇಷು ಪೃಥಗ್ವಿಧೇಷು
ಕೇ ವಸ್ತದಾನೀಂ ಮತಿಮಂತ ಆಸನ್||
ಆ ರಾತ್ರಿ ಎಲ್ಲಸೇನೆಗಳೂ ಸೇರಿರಲು, ಮಹಾರಥರು ಒಟ್ಟಾಗಿರಲು, ಭೂಮಿ-ಆಕಾಶಗಳನ್ನು ಅಲ್ಲಾಡಿಸುತ್ತಿರಲು ನಮ್ಮವರಲ್ಲಿ ಅತಿ ಬುದ್ಧಿವಂತನಾದವನು ಯಾರಿದ್ದನು?
07130009a ಹತಾಂಶ್ಚೈವ ವಿಷಕ್ತಾಂಶ್ಚ ಪರಾಭೂತಾಂಶ್ಚ ಶಂಸಸಿ|
07130009c ರಥಿನೋ ವಿರಥಾಂಶ್ಚೈವ ಕೃತಾನ್ಯುದ್ಧೇಷು ಮಾಮಕಾನ್||
ಯುದ್ಧ ಮಾಡುತ್ತಿರುವ ನನ್ನವರಾದ ಮಹಾರಥರು “ಹತರಾದರು!” “ಪರಾಜಿತರಾದರು!” “ಶಕ್ತಿಯನ್ನು ಕಳೆದುಕೊಂಡರು!” “ವಿರಥರಾದರು!” ಎಂದು ಹೇಳಿಕೊಂಡೇ ಇದ್ದೀಯೆ!
07130010a ಕಥಮೇಷಾಂ ತದಾ ತತ್ರ ಪಾರ್ಥಾನಾಮಪಲಾಯಿನಾಂ|
07130010c ಪ್ರಕಾಶಮಭವದ್ರಾತ್ರೌ ಕಥಂ ಕುರುಷು ಸಂಜಯ||
ಸಂಜಯ! ಪಲಾಯನ ಮಾಡದೇ ಇದ್ದ ಪಾರ್ಥರಿಗೆ ಮತ್ತು ಕುರುಗಳಿಗೆ ಆ ರಾತ್ರಿ ಅಲ್ಲಿ ಬೆಳಕು ಹೇಗೆ ಉಂಟಾಯಿತು?”
07130011 ಸಂಜಯ ಉವಾಚ|
07130011a ರಾತ್ರಿಯುದ್ಧೇ ತದಾ ರಾಜನ್ವರ್ತಮಾನೇ ಸುದಾರುಣೇ|
07130011c ದ್ರೋಣಮಭ್ಯದ್ರವನ್ರಾತ್ರೌ ಪಾಂಡವಾಃ ಸಹಸೈನಿಕಾಃ||
ಸಂಜಯನು ಹೇಳಿದನು: “ರಾಜನ್! ಆ ಸುದಾರುಣ ರಾತ್ರಿಯುದ್ಧವು ನಡೆಯುತ್ತಿರಲು ಸೈನಿಕರೊಂದಿಗೆ ಪಾಂಡವರು ದ್ರೋಣನನ್ನು ಆಕ್ರಮಣಿಸಿದರು.
07130012a ತತೋ ದ್ರೋಣಃ ಕೇಕಯಾಂಶ್ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾನ್|
07130012c ಪ್ರೇಷಯನ್ಮೃತ್ಯುಲೋಕಾಯ ಸರ್ವಾನಿಷುಭಿರಾಶುಗೈಃ||
ಆಗ ದ್ರೋಣನು ಕೇಕಯರನ್ನೂ, ಧೃಷ್ಟದ್ಯುಮ್ನನ ಎಲ್ಲ ಮಕ್ಕಳನ್ನೂ ಆಶುಗಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು.
07130013a ತಸ್ಯ ಪ್ರಮುಖತೋ ರಾಜನ್ಯೇಽವರ್ತಂತ ಮಹಾರಥಾಃ|
07130013c ತಾನ್ಸರ್ವಾನ್ಪ್ರೇಷಯಾಮಾಸ ಪರಲೋಕಾಯ ಭಾರತ||
ರಾಜನ್! ಭಾರತ! ಅವನ ಎದುರಾದ ಎಲ್ಲ ಮಹಾರಥರನ್ನೂ ಅವನು ಪರಲೋಕಕ್ಕೆ ಕಳುಹಿಸಿದನು.
07130014a ಪ್ರಮಥ್ನಂತಂ ತದಾ ವೀರಂ ಭಾರದ್ವಾಜಂ ಮಹಾರಥಂ|
07130014c ಅಭ್ಯವರ್ತತ ಸಂಕ್ರುದ್ಧಃ ಶಿಬೀ ರಾಜನ್ಪ್ರತಾಪವಾನ್||
ರಾಜನ್! ಆಗ ಸಂಕ್ರುದ್ಧ ಪ್ರತಾಪವಾನ ಶಿಬಿಯು ವೀರ ಮಹಾರಥ ಭಾರದ್ವಾಜನ ಮೇಲೆ ದಾಳಿ ಮಾಡಿದನು.
07130015a ತಮಾಪತಂತಂ ಸಂಪ್ರೇಕ್ಷ್ಯ ಪಾಂಡವಾನಾಂ ಮಹಾರಥಂ|
07130015c ವಿವ್ಯಾಧ ದಶಭಿರ್ದ್ರೋಣಃ ಸರ್ವಪಾರಶವೈಃ ಶರೈಃ||
ಪಾಂಡವರ ಮಹಾರಥನು ತನ್ನ ಮೇಲೆ ಆಕ್ರಮಣ ಮಾಡುತ್ತಿರುವನ್ನು ನೋಡಿ ದ್ರೋಣನು ಹತ್ತು ಲೋಹಮಯ ಬಾಣಗಳಿಂದ ಅವನನ್ನು ಹೊಡೆದನು.
07130016a ತಂ ಶಿಬಿಃ ಪ್ರತಿವಿವ್ಯಾಧ ತ್ರಿಂಶತಾ ನಿಶಿತೈಃ ಶರೈಃ|
07130016c ಸಾರಥಿಂ ಚಾಸ್ಯ ಭಲ್ಲೇನ ಸ್ಮಯಮಾನೋ ನ್ಯಪಾತಯತ್||
ಆಗ ಶಿಬಿಯು ನಸುನಗುತ್ತಾ ಮೂವತ್ತು ನಿಶಿತ ಶರಗಳಿಂದ ಅವನನ್ನು ಹೊಡೆದು, ಭಲ್ಲದಿಂದ ಸಾರಥಿಯನ್ನು ರಥದಿಂದ ಉರುಳಿಸಿದನು.
07130017a ತಸ್ಯ ದ್ರೋಣೋ ಹಯಾನ್ ಹತ್ವಾ ಸಾರಥಿಂ ಚ ಮಹಾತ್ಮನಃ|
07130017c ಅಥಾಸ್ಯ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್||
ಮಹಾತ್ಮ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ ಕಿರೀಟದೊಂದಿಗಿನ ಅವನ ಶಿರವನ್ನು ಕಾಯದಿಂದ ಬೇರ್ಪಡಿಸಿದನು.
07130018a ಕಲಿಂಗಾನಾಂ ಚ ಸೈನ್ಯೇನ ಕಲಿಂಗಸ್ಯ ಸುತೋ ರಣೇ|
07130018c ಪೂರ್ವಂ ಪಿತೃವಧಾತ್ಕ್ರುದ್ಧೋ ಭೀಮಸೇನಮುಪಾದ್ರವತ್||
ಹಿಂದೆ ತಂದೆಯನ್ನು ಸಂಹರಿಸಿದುದರಿಂದ ಭೀಮಸೇನನ ಮೇಲೆ ಕ್ರುದ್ಧನಾದ ಕಲಿಂಗನ ಮಗನು ಕಲಿಂಗರ ಸೇನೆಯೊಂದಿಗೆ ರಣದಲ್ಲಿ ಭೀಮಸೇನನನ್ನು ಆಕ್ರಮಣಿಸಿದನು.
07130019a ಸ ಭೀಮಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ|
07130019c ವಿಶೋಕಂ ತ್ರಿಭಿರಾಜಘ್ನೇ ಧ್ವಜಮೇಕೇನ ಪತ್ರಿಣಾ||
ಅವನು ಭೀಮನನ್ನು ಮೊದಲು ಐದರಿಂದ ಮತ್ತು ಪುನಃ ಏಳರಿಂದ ಹೊಡೆದು ಸಾರಥಿ ವಿಶೋಕನನ್ನು ಮೂರರಿಂದಲೂ ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು.
07130020a ಕಲಿಂಗಾನಾಂ ತು ತಂ ಶೂರಂ ಕ್ರುದ್ಧಂ ಕ್ರುದ್ಧೋ ವೃಕೋದರಃ|
07130020c ರಥಾದ್ರಥಮಭಿದ್ರುತ್ಯ ಮುಷ್ಟಿನಾಭಿಜಘಾನ ಹ||
ಕಲಿಂಗರ ಆ ಕ್ರುದ್ಧ ಶೂರನನ್ನು ಕ್ರುದ್ಧ ವೃಕೋದರನು ಅವನ ರಥಕ್ಕೆ ಹಾರಿ ಮುಷ್ಟಿಯಿಂದಲೇ ಗುದ್ದಿ ಸಂಹರಿಸಿದನು.
07130021a ತಸ್ಯ ಮುಷ್ಟಿಹತಸ್ಯಾಜೌ ಪಾಂಡವೇನ ಬಲೀಯಸಾ|
07130021c ಸರ್ವಾಣ್ಯಸ್ಥೀನಿ ಸಹಸಾ ಪ್ರಾಪತನ್ವೈ ಪೃಥಕ್ ಪೃಥಕ್||
ಬಲಿಷ್ಟ ಭೀಮಸೇನನ ಮುಷ್ಟಿಯಿಂದ ಹತನಾದ ಅವನ ಎಲ್ಲ ಮೂಳೆಗಳೂ ಚೂರಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಳಗೆ ಬಿದ್ದವು.
07130022a ತಂ ಕರ್ಣೋ ಭ್ರಾತರಶ್ಚಾಸ್ಯ ನಾಮೃಷ್ಯಂತ ಮಹಾರಥಾಃ|
07130022c ತೇ ಭೀಮಸೇನಂ ನಾರಾಚೈರ್ಜಘ್ನುರಾಶೀವಿಷೋಪಮೈಃ||
ಆ ಕೃತ್ಯವನ್ನು ಮಹಾರಥ ಕರ್ಣನೂ ಕಳಿಂಗನ ಸಹೋದರರೂ ಸಹಿಸಿಕೊಳ್ಳಲಿಲ್ಲ. ಅವರು ಭೀಮಸೇನನನ್ನು ಸರ್ಪಗಳಂತಿದ್ದ ನಾರಾಚಗಳಿಂದ ಪ್ರಹರಿಸಿದರು.
07130023a ತತಃ ಶತ್ರುರಥಂ ತ್ಯಕ್ತ್ವಾ ಭೀಮೋ ಧ್ರುವರಥಂ ಗತಃ|
07130023c ಧ್ರುವಂ ಚಾಸ್ಯಂತಮನಿಶಂ ಮುಷ್ಟಿನಾ ಸಮಪೋಥಯತ್|
07130023e ಸ ತಥಾ ಪಾಂಡುಪುತ್ರೇಣ ಬಲಿನಾ ನಿಹತೋಽಪತತ್||
ಆಗ ಭೀಮನು ಶತ್ರುವಿನ ರಥವನ್ನು ಬಿಟ್ಟು ಧ್ರುವನ ರಥಕ್ಕೆ ಹಾರಿ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಧ್ರುವನನ್ನು ಕೂಡ ಮುಷ್ಟಿಯಿಂದ ಜಜ್ಜಿದನು. ಬಲಶಾಲಿ ಪಾಂಡುಪುತ್ರನ ಪೆಟ್ಟಿಗೆ ಸಿಲುಕಿದ ಅವನು ಕೂಡ ಹತನಾದನು.
07130024a ತಂ ನಿಹತ್ಯ ಮಹಾರಾಜ ಭೀಮಸೇನೋ ಮಹಾಬಲಃ|
07130024c ಜಯರಾತರಥಂ ಪ್ರಾಪ್ಯ ಮುಹುಃ ಸಿಂಹ ಇವಾನದತ್||
ಮಹಾರಾಜ! ಅವನನ್ನು ಸಂಹರಿಸಿ ಮಹಾಬಲ ಭೀಮಸೇನನು ಜಯರಾತನ ರಥಕ್ಕೆ ಹಾರಿ ಸಿಂಹನಾದಗೈದನು.
07130025a ಜಯರಾತಮಥಾಕ್ಷಿಪ್ಯ ನದನ್ಸವ್ಯೇನ ಪಾಣಿನಾ|
07130025c ತಲೇನ ನಾಶಯಾಮಾಸ ಕರ್ಣಸ್ಯೈವಾಗ್ರತಃ ಸ್ಥಿತಂ||
ಆಗ ಜಯರಾತನ ತಲೆಯನ್ನು ಎಡಗೈಯಿಂದ ಹಿಡಿದುಕೊಂಡು ಬಲಗೈಯಿಂದ ಅವನನ್ನು ಪ್ರಹರಿಸಿ ಕೊಂದು ಕರ್ಣನ ಎದುರೇ ಹೋಗಿ ನಿಂತುಕೊಂಡನು.
07130026a ಕರ್ಣಸ್ತು ಪಾಂಡವೇ ಶಕ್ತಿಂ ಕಾಂಚನೀಂ ಸಮವಾಸೃಜತ್|
07130026c ತತಸ್ತಾಮೇವ ಜಗ್ರಾಹ ಪ್ರಹಸನ್ಪಾಂಡುನಂದನಃ||
ಕರ್ಣನಾದರೋ ಸುವರ್ಣಮಯ ಶಕ್ತ್ಯಾಯುಧವನ್ನು ಪಾಂಡವನ ಮೇಲೆ ಪ್ರಯೋಗಿಸಿದನು. ಅದನ್ನು ಕೂಡ ಪಾಂಡುನಂದನನು ನಸುನಗುತ್ತಾ ಹಿಡಿದುಕೊಂಡನು.
07130027a ಕರ್ಣಾಯೈವ ಚ ದುರ್ಧರ್ಷಶ್ಚಿಕ್ಷೇಪಾಜೌ ವೃಕೋದರಃ|
07130027c ತಾಮಂತರಿಕ್ಷೇ ಚಿಚ್ಚೇದ ಶಕುನಿಸ್ತೈಲಪಾಯಿನಾ||
ಅದನ್ನೇ ದುರ್ಧರ್ಷ ವೃಕೋದರನು ಕರ್ಣನ ಮೇಲೆ ಎಸೆಯಲು ಪಲಾಯನಮಾಡದಿರುವ ಶಕುನಿಯು ಅದನ್ನು ಅಂತರಿಕ್ಷದಲ್ಲಿಯೇ ತುಂಡರಿಸಿದನು.
07130028a ತತಸ್ತವ ಸುತಾ ರಾಜನ್ಭೀಮಸ್ಯ ರಥಮಾವ್ರಜನ್|
07130028c ಮಹತಾ ಶರವರ್ಷೇಣ ಚಾದಯಂತೋ ವೃಕೋದರಂ||
ರಾಜನ್! ಆಗ ನಿನ್ನ ಮಕ್ಕಳು ಭೀಮನ ರಥವನ್ನು ಸುತ್ತುವರೆದು ಮಹಾ ಶರವರ್ಷಗಳಿಂದ ವೃಕೋದರನನ್ನು ಮುಚ್ಚಿದರು.
07130029a ದುರ್ಮದಸ್ಯ ತತೋ ಭೀಮಃ ಪ್ರಹಸನ್ನಿವ ಸಮ್ಯುಗೇ|
07130029c ಸಾರಥಿಂ ಚ ಹಯಾಂಶ್ಚೈವ ಶರೈರ್ನಿನ್ಯೇ ಯಮಕ್ಷಯಂ||
ಆಗ ರಣದಲ್ಲಿ ಭೀಮನು ನಗುತ್ತಾ ದುರ್ಮದನ ಸಾರಥಿಯನ್ನೂ ಕುದುರೆಗಳನ್ನೂ ಬಾಣಗಳಿಂದ ಹೊಡೆದು ಯಮಸದನಕ್ಕೆ ಕಳುಹಿಸಿದನು.
07130029e ದುರ್ಮದಸ್ತು ತತೋ ಯಾನಂ ದುಷ್ಕರ್ಣಸ್ಯಾವಪುಪ್ಲುವೇ||
07130030a ತಾವೇಕರಥಮಾರೂಢೌ ಭ್ರಾತರೌ ಪರತಾಪನೌ|
07130030c ಸಂಗ್ರಾಮಶಿರಸೋ ಮಧ್ಯೇ ಭೀಮಂ ದ್ವಾವಭ್ಯಧಾವತಾಂ|
07130030e ಯಥಾಂಬುಪತಿಮಿತ್ರೌ ಹಿ ತಾರಕಂ ದೈತ್ಯಸತ್ತಮಂ||
ಆಗ ದುರ್ಮದನಾದರೋ ಹಾರಿ ದುಷ್ಕರ್ಣನ ರಥವನ್ನೇರಿದನು. ಆ ಇಬ್ಬರು ಪರತಾಪನ ಸಹೋದರರೂ ಒಂದೇ ರಥವನ್ನೇರಿ ಯುದ್ಧಭೂಮಿಯ ಮಧ್ಯದಲ್ಲಿ ಮಿತ್ರಾವರುಣರು ದೈತ್ಯಸತ್ತಮ ತಾರಕನನ್ನು ಎದುರಿಸಿ ಯುದ್ಧಮಾಡಿದಂತೆ ಭೀಮನನ್ನು ಆಕ್ರಮಣಿಸಿದರು.
07130031a ತತಸ್ತು ದುರ್ಮದಶ್ಚೈವ ದುಷ್ಕರ್ಣಶ್ಚ ತವಾತ್ಮಜೌ|
07130031c ರಥಮೇಕಂ ಸಮಾರುಹ್ಯ ಭೀಮಂ ಬಾಣೈರವಿಧ್ಯತಾಂ||
ನಿನ್ನ ಮಕ್ಕಳಾದ ದುರ್ಮದ-ದುಷ್ಕರ್ಣರು ಒಂದೇ ರಥವನ್ನೇರಿ ಬಾಣಗಳಿಂದ ಭೀಮನನ್ನು ಪ್ರಹರಿಸಿದರು.
07130032a ತತಃ ಕರ್ಣಸ್ಯ ಮಿಷತೋ ದ್ರೌಣೇರ್ದುರ್ಯೋಧನಸ್ಯ ಚ|
07130032c ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಪಾಂಡವಃ||
07130033a ದುರ್ಮದಸ್ಯ ಚ ವೀರಸ್ಯ ದುಷ್ಕರ್ಣಸ್ಯ ಚ ತಂ ರಥಂ|
07130033c ಪಾದಪ್ರಹಾರೇಣ ಧರಾಂ ಪ್ರಾವೇಶಯದರಿಂದಮಃ||
ಆಗ ಕರ್ಣ, ದುರ್ಯೋಧನ, ಕೃಪ, ಸೋಮದತ್ತ ಮತ್ತು ಬಾಹ್ಲೀಕರು ನೋಡುತ್ತಿದ್ದಂತೆಯೇ ಅರಿಂದಮ ಪಾಂಡವನು ವೀರ ದುರ್ಮದ-ದುಷ್ಕರ್ಣರ ಆ ರಥವನ್ನು ಕಾಲಿನಿಂದಲೇ ಒದೆದು ಭೂಮಿಗುರುಳಿಸಿದನು.
07130034a ತತಃ ಸುತೌ ತೇ ಬಲಿನೌ ಶೂರೌ ದುಷ್ಕರ್ಣದುರ್ಮದೌ|
07130034c ಮುಷ್ಟಿನಾಹತ್ಯ ಸಂಕ್ರುದ್ಧೋ ಮಮರ್ದ ಚರಣೇನ ಚ||
ಸಂಕ್ರುದ್ಧನಾದ ಅವನು ನಿನ್ನ ಮಕ್ಕಳಾದ ಆ ಬಲಶಾಲೀ ದುಷ್ಕರ್ಣ-ದುರ್ಮದರನ್ನು ಮುಷ್ಟಿಯಿಂದ ಹೊಡೆದು ಕಾಲಿನಿಂದ ತುಳಿದು ಸಂಹರಿಸಿದನು.
07130035a ತತೋ ಹಾಹಾಕೃತೇ ಸೈನ್ಯೇ ದೃಷ್ಟ್ವಾ ಭೀಮಂ ನೃಪಾಬ್ರುವನ್|
07130035c ರುದ್ರೋಽಯಂ ಭೀಮರೂಪೇಣ ಧಾರ್ತರಾಷ್ಟ್ರೇಷು ಗೃಧ್ಯತಿ||
ಆಗ ಭೀಮನನ್ನು ಕಂಡು ಸೈನ್ಯದಲ್ಲಿದ್ದ ನೃಪರು “ಭೀಮರೂಪದ ರುದ್ರನೇ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ!” ಎಂದು ಹೇಳಿಕೊಳ್ಳುತ್ತಾ ಹಾಹಾಕಾರಗೈದರು.
07130036a ಏವಮುಕ್ತ್ವಾಪಲಾಯಂತ ಸರ್ವೇ ಭಾರತ ಪಾರ್ಥಿವಾಃ|
07130036c ವಿಸಂಜ್ಞಾವಾಹಯನ್ವಾಹಾನ್ನ ಚ ದ್ವೌ ಸಹ ಧಾವತಃ||
ಭಾರತ! ಹೀಗೆ ಮಾತನಾಡಿಕೊಳ್ಳುತ್ತ ಎಲ್ಲರೂ ಬುದ್ಧಿಗೆಟ್ಟವರಾಗಿ ಕಂಡ ಕಂಡ ಕಡೆಗೆ ತಮ್ಮ ವಾಹನಗಳನ್ನು ಓಡಿಸಿಕೊಂಡು ಪಲಾಯನಮಾಡಿದರು.
07130037a ತತೋ ಬಲೇ ಭೃಶಲುಲಿತೇ ನಿಶಾಮುಖೇ
ಸುಪೂಜಿತೋ ನೃಪವೃಷಭೈರ್ವೃಕೋದರಃ|
07130037c ಮಹಾಬಲಃ ಕಮಲವಿಬುದ್ಧಲೋಚನೋ
ಯುಧಿಷ್ಠಿರಂ ನೃಪತಿಮಪೂಜಯದ್ಬಲೀ||
ಆಗ ರಾತ್ರಿಯ ಪ್ರಥಮ ಯಾಮದಲ್ಲಿ ನೃಪರು ವೃಕೋದರನನ್ನು ಗೌರವಿಸಿದರು. ಮಹಾಬಲ, ಕಮಲಲೋಚನ ಬಲಶಾಲೀ ಭೀಮನೂ ಕೂಡ ನೃಪತಿ ಯುಧಿಷ್ಠಿರನನ್ನು ಪೂಜಿಸಿದನು.
07130038a ತತೋ ಯಮೌ ದ್ರುಪದವಿರಾಟಕೇಕಯಾ
ಯುಧಿಷ್ಠಿರಶ್ಚಾಪಿ ಪರಾಂ ಮುದಂ ಯಯುಃ|
07130038c ವೃಕೋದರಂ ಭೃಶಮಭಿಪೂಜಯಂಶ್ಚ ತೇ
ಯಥಾಂಧಕೇ ಪ್ರತಿನಿಹತೇ ಹರಂ ಸುರಾಃ||
ಆಗ ಯಮಳರೂ, ದ್ರುಪದ-ವಿರಾಟ-ಕೇಕಯರೂ ಮತ್ತು ಯುಧಿಷ್ಠಿರನೂ ಪರಮ ಸಂತೋಷಗೊಂಡರು. ಅಂಧಕನನ್ನು ಸಂಹರಿಸಿದ ಹರನನ್ನು ಸುರರು ಹೇಗೋ ಹಾಗೆ ಅವರು ವೃಕೋದರನನ್ನು ತುಂಬಾ ಗೌರವಿಸಿದರು.
07130039a ತತಃ ಸುತಾಸ್ತವ ವರುಣಾತ್ಮಜೋಪಮಾ
ರುಷಾನ್ವಿತಾಃ ಸಹ ಗುರುಣಾ ಮಹಾತ್ಮನಾ|
07130039c ವೃಕೋದರಂ ಸರಥಪದಾತಿಕುಂಜರಾ
ಯುಯುತ್ಸವೋ ಭೃಶಮಭಿಪರ್ಯವಾರಯನ್||
ಆಗ ವರುಣನ ಮಕ್ಕಳ ಪರಾಕ್ರಮವುಳ್ಳ ನಿನ್ನ ಮಕ್ಕಳು ರೋಷಾನ್ವಿತರಾಗಿ ಮಹಾತ್ಮ ಗುರು ದ್ರೋಣನೊಂದಿಗೆ ರಥ-ಪದಾತಿ-ಕುಂಜರಗಳೊಂದಿಗೆ ಯುದ್ಧವನ್ನು ಮಾಡಲು ಬಯಸಿ ವೃಕೋದರನನ್ನು ಸುತ್ತುವರೆದರು.
07130040a ತತೋಽಭವತ್ತಿಮಿರಘನೈರಿವಾವೃತಂ
ಮಹಾಭಯೇ ಭಯದಮತೀವ ದಾರುಣಂ|
07130040c ನಿಶಾಮುಖೇ ಬಡವೃಕಗೃಧ್ರಮೋದನಂ
ಮಹಾತ್ಮನಾಂ ನೃಪವರಯುದ್ಧಮದ್ಭುತಂ||
ಆಗ ದಟ್ಟ ಕತ್ತಲೆಯಿಂದ ಆವೃತ ರಾತ್ರಿವೇಳೆಯಲ್ಲಿ ಮಹಾಭಯಂಕರ, ಭಯದಾಯಕ, ದಾರುಣ, ತೋಳ-ಕಾಗೆ-ರಣಹದ್ದುಗಳಿಗೆ ಆನಂದದಾಯಕ ಅದ್ಭುತ ಮಹಾತ್ಮ ನೃಪವರರ ಯುದ್ಧವು ಪುನಃ ಪ್ರಾರಂಭವಾಯಿತು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಭೀಮಪರಾಕ್ರಮೇ ತ್ರಿಂಶಾಧಿಕಶತತಮೋಽಧ್ಯಾಯಃ ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಭೀಮಪರಾಕ್ರಮ ಎನ್ನುವ ನೂರಾಮೂವತ್ತನೇ ಅಧ್ಯಾಯವು.