ಭೀಷ್ಮ ಪರ್ವ: ಭೀಷ್ಮವಧ ಪರ್ವ
೮೫
ಧೃತರಾಷ್ಟ್ರನ ಪ್ರಶ್ನೆಗೆ ಉತ್ತಾರಿಸುತ್ತಾ ಸಂಜಯನು ಯುದ್ಧವರ್ಣನೆಯನ್ನು ಮುಂದುವರಿಸಿದುದು (೧-೧೪). ಸಂಕುಲಯುದ್ಧ (೧೫-೩೬).
06085001 ಧೃತರಾಷ್ಟ್ರ ಉವಾಚ|
06085001a ದೃಷ್ಟ್ವಾ ಮಮ ಹತಾನ್ಪುತ್ರಾನ್ಬಹೂನೇಕೇನ ಸಂಜಯ|
06085001c ಭೀಷ್ಮೋ ದ್ರೋಣಃ ಕೃಪಶ್ಚೈವ ಕಿಮಕುರ್ವತ ಸಂಯುಗೇ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಒಬ್ಬನಿಂದಲೇ ನನ್ನ ಅನೇಕ ಮಕ್ಕಳು ಹತರಾದುದನ್ನು ಕಂಡು ಭೀಷ್ಮ-ದ್ರೋಣ-ಕೃಪರು ಸಂಯುಗದಲ್ಲಿ ಏನು ಮಾಡಿದರು?
06085002a ಅಹನ್ಯಹನಿ ಮೇ ಪುತ್ರಾಃ ಕ್ಷಯಂ ಗಚ್ಛಂತಿ ಸಂಜಯ|
06085002c ಮನ್ಯೇಽಹಂ ಸರ್ವಥಾ ಸೂತ ದೈವೇನೋಪಹತಾ ಭೃಶಂ||
ದಿನ ದಿನವೂ ನನ್ನ ಮಕ್ಕಳು ಕ್ಷೀಣವಾಗುತ್ತಿದ್ದಾರೆ ಸಂಜಯ! ಸೂತ! ಹೆಚ್ಚುಭಾಗ ಅವರು ದೈವದಿಂದಲೇ ಹತರಾಗುತ್ತಿದ್ದಾರೆ ಎಂದು ನನಗನ್ನಿಸುತ್ತದೆ.
06085003a ಯತ್ರ ಮೇ ತನಯಾಃ ಸರ್ವೇ ಜೀಯಂತೇ ನ ಜಯಂತ್ಯುತ|
06085003c ಯತ್ರ ಭೀಷ್ಮಸ್ಯ ದ್ರೋಣಸ್ಯ ಕೃಪಸ್ಯ ಚ ಮಹಾತ್ಮನಃ||
06085004a ಸೌಮದತ್ತೇಶ್ಚ ವೀರಸ್ಯ ಭಗದತ್ತಸ್ಯ ಚೋಭಯೋಃ|
06085004c ಅಶ್ವತ್ಥಾಮ್ನಸ್ತಥಾ ತಾತ ಶೂರಾಣಾಂ ಸುಮಹಾತ್ಮನಾಂ||
06085005a ಅನ್ಯೇಷಾಂ ಚೈವ ವೀರಾಣಾಂ ಮಧ್ಯಗಾಸ್ತನಯಾ ಮಮ|
06085005c ಯದಹನ್ಯಂತ ಸಂಗ್ರಾಮೇ ಕಿಮನ್ಯದ್ಭಾಗಧೇಯತಃ||
ಅಯ್ಯಾ! ನನ್ನ ಮಕ್ಕಳೆಲ್ಲರೂ ಜಯಿಸಲ್ಪಡುತ್ತಿದ್ದಾರೆಯೇ ಹೊರತು ಜಯಿಸುತ್ತಿಲ್ಲ. ಭೀಷ್ಮ-ದ್ರೋಣ-ಮಹಾತ್ಮ ಕೃಪ-ಸೌಮದತ್ತ-ವೀರ ಭಗದತ್ತ-ಅಶ್ವತ್ಥಾಮ ಮೊದಲಾದ ಶೂರ ಮಹಾತ್ಮರು ಹಾಗೂ ಅನ್ಯ ವೀರರ ಮಧ್ಯದಲ್ಲಿದ್ದುಕೊಂಡೂ ನನ್ನ ಮಕ್ಕಳು ಸಂಗ್ರಾಮದಲ್ಲಿ ಸಾಯುತ್ತಿದ್ದಾರೆಂದರೆ ಇದು ಭಾಗ್ಯವು ಕೊಟ್ಟಿದ್ದಲ್ಲದೇ ಇನ್ನೇನು?
06085006a ನ ಹಿ ದುರ್ಯೋಧನೋ ಮಂದಃ ಪುರಾ ಪ್ರೋಕ್ತಮಬುಧ್ಯತ|
06085006c ವಾರ್ಯಮಾಣೋ ಮಯಾ ತಾತ ಭೀಷ್ಮೇಣ ವಿದುರೇಣ ಚ||
06085007a ಗಾಂಧಾರ್ಯಾ ಚೈವ ದುರ್ಮೇಧಾಃ ಸತತಂ ಹಿತಕಾಮ್ಯಯಾ|
06085007c ನಾವಬುಧ್ಯತ್ಪುರಾ ಮೋಹಾತ್ತಸ್ಯ ಪ್ರಾಪ್ತಮಿದಂ ಫಲಂ||
ಅಯ್ಯಾ! ದುರ್ಯೋಧನನು ದಡ್ಡ. ಹಿಂದೆ ಹೇಳಿದುದನ್ನು ತಿಳಿದುಕೊಳ್ಳಲಿಲ್ಲ. ನಾನು, ಭೀಷ್ಮ, ವಿದುರ ಮತ್ತು ಗಾಂಧಾರಿಯರು ಅವನ ಹಿತವನ್ನೇ ಬಯಸಿ ಆಗ ಯಾವಾಗಲೂ ತಡೆದರೂ ಅವನು ಮೋಹದಿಂದ ಅರ್ಥಮಾಡಿಕೊಳ್ಳದೇ ಇರುವುದರಿಂದಲೇ ಈ ಫಲವನ್ನು ಪಡೆಯುತ್ತಿದ್ದಾನೆ.
06085008a ಯದ್ಭೀಮಸೇನಃ ಸಮರೇ ಪುತ್ರಾನ್ಮಮ ವಿಚೇತಸಃ|
06085008c ಅಹನ್ಯಹನಿ ಸಂಕ್ರುದ್ಧೋ ನಯತೇ ಯಮಸಾದನಂ||
ಸಮರದಲ್ಲಿ ಭೀಮಸೇನನು ದಿನ ದಿನವೂ ಸಂಕ್ರುದ್ಧನಾಗಿ ಮೂಢರಾದ ನನ್ನ ಮಕ್ಕಳನ್ನು ಯಮಸಾದನಕ್ಕೆ ಕಳುಹಿಸುತ್ತಿರುವುದೇ ಅದರ ಫಲ.”
06085009 ಸಂಜಯ ಉವಾಚ|
06085009a ಇದಂ ತತ್ಸಮನುಪ್ರಾಪ್ತಂ ಕ್ಷತ್ತುರ್ವಚನಮುತ್ತಮಂ|
06085009c ನ ಬುದ್ಧವಾನಸಿ ವಿಭೋ ಪ್ರೋಚ್ಯಮಾನಂ ಹಿತಂ ತದಾ||
ಸಂಜಯನು ಹೇಳಿದನು: “ವಿಭೋ! ಅಂದು ಕ್ಷತ್ತನಾಡಿದ ಉತ್ತಮ ಹಿತವಚನಗಳನ್ನು ನೀನು ತಿಳಿದುಕೊಳ್ಳದೇ ಇದ್ದುದರಿಂದಲೇ ಈ ಪರಿಸ್ಥಿತಿಯು ಬಂದೊದಗಿದೆ.
06085010a ನಿವಾರಯ ಸುತಾನ್ದ್ಯೂತಾತ್ಪಾಂಡವಾನ್ಮಾ ದ್ರುಹೇತಿ ಚ|
06085010c ಸುಹೃದಾಂ ಹಿತಕಾಮಾನಾಂ ಬ್ರುವತಾಂ ತತ್ತದೇವ ಚ||
“ಮಕ್ಕಳು ದ್ಯೂತವಾಡುವುದನ್ನು ತಡೆ. ಪಾಂಡವರನ್ನು ದ್ವೇಷಿಸಬೇಡ!” ಎಂದು ಸುಹೃದಯರು ಹೇಳಿದ ಹಿತಮಾತುಗಳನ್ನು ಆಗ ನೀನು ಸ್ವೀಕರಿಸಲಿಲ್ಲ.
06085011a ನ ಶುಶ್ರೂಷಸಿ ಯದ್ವಾಕ್ಯಂ ಮರ್ತ್ಯಃ ಪಥ್ಯಮಿವೌಷಧಂ|
06085011c ತದೇವ ತ್ವಾಮನುಪ್ರಾಪ್ತಂ ವಚನಂ ಸಾಧು ಭಾಷಿತಂ||
ಸಾಯುವವನಿಗೆ ಔಷಧಿಯಂತೆ ಪಥ್ಯವಾಗಿರುವ ಆ ಮಾತನ್ನು ನೀನು ಕೇಳಲಿಲ್ಲ. ಒಳ್ಳೆಯವರು ಹೇಳಿದುದನ್ನೇ ಇಂದು ನೀನು ಅನುಭವಿಸುತ್ತಿದ್ದೀಯೆ.
06085012a ವಿದುರದ್ರೋಣಭೀಷ್ಮಾಣಾಂ ತಥಾನ್ಯೇಷಾಂ ಹಿತೈಷಿಣಾಂ|
06085012c ಅಕೃತ್ವಾ ವಚನಂ ಪಥ್ಯಂ ಕ್ಷಯಂ ಗಚ್ಛಂತಿ ಕೌರವಾಃ||
ವಿದುರ-ದ್ರೋಣ-ಭೀಷ್ಮರ ಮತ್ತು ಅನ್ಯ ಹಿತೈಷಿಗಳ ಪಥ್ಯವಾದ ಮಾತಿನಂತೆ ನಡೆದುಕೊಳ್ಳದೇ ಕೌರವರು ಕ್ಷಯವನ್ನು ಹೋಗುತ್ತಾರೆ.
06085013a ತದೇತತ್ಸಮತಿಕ್ರಾಂತಂ ಪೂರ್ವಮೇವ ವಿಶಾಂ ಪತೇ|
06085013c ತಸ್ಮಾನ್ಮೇ ಶೃಣು ತತ್ತ್ವೇನ ಯಥಾ ಯುದ್ಧಮವರ್ತತ||
ವಿಶಾಂಪತೇ! ಅದನ್ನು ಉಲ್ಲಂಘಿಸಿದರೆ ಹೀಗಾಗುತ್ತದೆಂದು ಮೊದಲೇ ಗೊತ್ತಿತ್ತು. ಆದರಿಂದಲೇ ಉಂಟಾದ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ಯಥಾವತ್ತಾಗಿ ನನ್ನಿಂದ ಕೇಳು.
06085014a ಮಧ್ಯಾಹ್ನೇ ಸುಮಹಾರೌದ್ರಃ ಸಂಗ್ರಾಮಃ ಸಮಪದ್ಯತ|
06085014c ಲೋಕಕ್ಷಯಕರೋ ರಾಜಂಸ್ತನ್ಮೇ ನಿಗದತಃ ಶೃಣು||
ರಾಜನ್! ಅಂದಿನ ಮದ್ಯಾಹ್ನ ಲೋಕಕ್ಷಯವನ್ನುಂಟುಮಾಡುವ ಮಹಾ ರೌದ್ರ ಸಂಗ್ರಾಮವು ನಡೆಯಿತು. ಅದನ್ನು ವರ್ಣಿಸುತ್ತೇನೆ. ಕೇಳು.
06085015a ತತಃ ಸರ್ವಾಣಿ ಸೈನ್ಯಾನಿ ಧರ್ಮಪುತ್ರಸ್ಯ ಶಾಸನಾತ್|
06085015c ಸಂರಬ್ಧಾನ್ಯಭ್ಯಧಾವಂತ ಭೀಷ್ಮಮೇವ ಜಿಘಾಂಸಯಾ||
ಆಗ ಸೈನ್ಯಗಳೆಲ್ಲವೂ ಧರ್ಮಪುತ್ರನ ಶಾಸನದಂತೆ ಸಂರಬ್ಧಗೊಂಡು ಭೀಷ್ಮನನ್ನೇ ಕೊಲ್ಲಲು ಅವನನ್ನೇ ಆಕ್ರಮಣಿಸಿದವು.
06085016a ಧೃಷ್ಟದ್ಯುಮ್ನಃ ಶಿಖಂಡೀ ಚ ಸಾತ್ಯಕಿಶ್ಚ ಮಹಾರಥಃ|
06085016c ಯುಕ್ತಾನೀಕಾ ಮಹಾರಾಜ ಭೀಷ್ಮಮೇವ ಸಮಭ್ಯಯುಃ||
ಮಹಾರಾಜ! ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಸೇನೆಗಳನ್ನೊಡಗೂಡಿ ಭೀಷ್ಮನನ್ನೇ ಆಕ್ರಮಿಸಿದರು.
06085017a ಅರ್ಜುನೋ ದ್ರೌಪದೇಯಾಶ್ಚ ಚೇಕಿತಾನಶ್ಚ ಸಂಯುಗೇ|
06085017c ದುರ್ಯೋಧನಸಮಾದಿಷ್ಟಾನ್ರಾಜ್ಞಃ ಸರ್ವಾನ್ಸಮಭ್ಯಯುಃ||
ಅರ್ಜುನ, ದ್ರೌಪದಿಯ ಮಕ್ಕಳು ಮತ್ತು ಚೇಕಿತಾನರು ಸಂಯುಗದಲ್ಲಿ ದುರ್ಯೋಧನನು ಕಳುಹಿಸಿದ್ದ ರಾಜರೆಲ್ಲರ ಮೇಲೆ ಧಾಳಿ ಮಾಡಿದರು.
06085018a ಅಭಿಮನ್ಯುಸ್ತಥಾ ವೀರೋ ಹೈಡಿಂಬಶ್ಚ ಮಹಾರಥಃ|
06085018c ಭೀಮಸೇನಶ್ಚ ಸಂಕ್ರುದ್ಧಸ್ತೇಽಭ್ಯಧಾವಂತ ಕೌರವಾನ್||
ಹಾಗೆಯೇ ವೀರ ಅಭಿಮನ್ಯು, ಮಹಾರಥ ಹೈಡಿಂಬಿ ಮತ್ತು ಭೀಮಸೇನರು ಸಂಕ್ರುದ್ಧರಾಗಿ ಕೌರವರನ್ನು ಎದುರಿಸಿದರು.
06085019a ತ್ರಿಧಾಭೂತೈರವಧ್ಯಂತ ಪಾಂಡವೈಃ ಕೌರವಾ ಯುಧಿ|
06085019c ತಥೈವ ಕೌರವೇ ರಾಜನ್ನವಧ್ಯಂತ ಪರೇ ರಣೇ||
ಪಾಂಡವರು ಯುದ್ಧದಲ್ಲಿ ಮೂರು ವಿಭಾಗಗಳಾಗಿ ಕೌರವರನ್ನು ವಧಿಸುತ್ತಿದ್ದರು. ರಾಜನ್! ಹಾಗೆಯೇ ರಣದಲ್ಲಿ ಕೌರವರೂ ಕೂಡ ಶತ್ರುಗಳನ್ನು ವಧಿಸುತ್ತಿದ್ದರು.
06085020a ದ್ರೋಣಸ್ತು ರಥಿನಾಂ ಶ್ರೇಷ್ಠಃ ಸೋಮಕಾನ್ಸೃಂಜಯೈಃ ಸಹ|
06085020c ಅಭ್ಯದ್ರವತ ಸಂಕ್ರುದ್ಧಃ ಪ್ರೇಷಯಿಷ್ಯನ್ಯಮಕ್ಷಯಂ||
ರಥಿಗಳಲ್ಲಿ ಶ್ರೇಷ್ಠ ದ್ರೋಣನಾದರೋ ಸೃಂಜಯರೊಂದಿಗಿದ್ದ ಸೋಮಕರನ್ನು ಸಂಕ್ರುದ್ಧನಾಗಿ ಆಕ್ರಮಿಸಿ, ಯಮಲೋಕಕ್ಕೆ ಕಳುಹಿಸಿದನು.
06085021a ತತ್ರಾಕ್ರಂದೋ ಮಹಾನಾಸೀತ್ಸೃಂಜಯಾನಾಂ ಮಹಾತ್ಮನಾಂ|
06085021c ವಧ್ಯತಾಂ ಸಮರೇ ರಾಜನ್ಭಾರದ್ವಾಜೇನ ಧನ್ವಿನಾ||
ರಾಜನ್! ಸಮರದಲ್ಲಿ ಧನ್ವಿ ಭಾರದ್ವಾಜನಿಂದ ವಧಿಸಲ್ಪಡುತ್ತಿದ್ದ ಮಹಾತ್ಮಾ ಸೃಂಜಯರಲ್ಲಿ ಮಹಾ ಆಕ್ರಂದನವು ಉಂಟಾಯಿತು.
06085022a ದ್ರೋಣೇನ ನಿಹತಾಸ್ತತ್ರ ಕ್ಷತ್ರಿಯಾ ಬಹವೋ ರಣೇ|
06085022c ವಿವೇಷ್ಟಂತಃ ಸ್ಮ ದೃಶ್ಯಂತೇ ವ್ಯಾಧಿಕ್ಲಿಷ್ಟಾ ನರಾ ಇವ||
ಅಲ್ಲಿ ದ್ರೋಣನಿಂದ ನಿಹತರಾದ ಹಲವಾರು ಕ್ಷತ್ರಿಯರು ರಣದಲ್ಲಿ ವ್ಯಾಧಿಪೀಡಿತರಾದ ಮನುಷ್ಯರಂತೆ ಸಂಕಟದಿಂದ ಹೊರಳಾಡುತ್ತಿದ್ದುದನ್ನು ನೋಡಿದೆವು.
06085023a ಕೂಜತಾಂ ಕ್ರಂದತಾಂ ಚೈವ ಸ್ತನತಾಂ ಚೈವ ಸಂಯುಗೇ|
06085023c ಅನಿಶಂ ಶ್ರೂಯತೇ ಶಬ್ದಃ ಕ್ಷುತ್ಕೃಶಾನಾಂ ನೃಣಾಮಿವ||
ಹಸಿವೆಯಿಂದ ಬಳಲಿದವರಂತೆ ಸಂಯುಗದಲ್ಲಿ ಗಾಯಗೊಂಡು ಬಿದ್ದಿರುವವರ ಕೂಗು, ಅಳು ಮತ್ತು ಕಿರುಚಾಟಗಳು ಕೇಳಿ ಬರುತ್ತಿದ್ದವು.
06085024a ತಥೈವ ಕೌರವೇಯಾಣಾಂ ಭೀಮಸೇನೋ ಮಹಾಬಲಃ|
06085024c ಚಕಾರ ಕದನಂ ಘೋರಂ ಕ್ರುದ್ಧಃ ಕಾಲ ಇವಾಪರಃ||
ಹಾಗೆಯೇ ಕೌರವರೊಡನೆಯೂ ಮಹಾಬಲ ಭೀಮಸೇನನು ಇನ್ನೊಬ್ಬ ಕ್ರುದ್ಧ ಕಾಲನಂತೆ ಘೋರ ಕದನವನ್ನು ನಡೆಸಿದನು.
06085025a ವಧ್ಯತಾಂ ತತ್ರ ಸೈನ್ಯಾನಾಮನ್ಯೋನ್ಯೇನ ಮಹಾರಣೇ|
06085025c ಪ್ರಾವರ್ತತ ನದೀ ಘೋರಾ ರುಧಿರೌಘಪ್ರವಾಹಿನೀ||
ಸೇನೆಗಳು ಅನ್ಯೋನ್ಯರನ್ನು ವಧಿಸುತ್ತಿರುವ ಆ ಮಹಾರಣದಲ್ಲಿ ರಕ್ತ-ಮಾಂಸಗಳೇ ಹರಿದಿದ್ದ ಘೋರ ನದಿಯು ಹುಟ್ಟಿತು.
06085026a ಸ ಸಂಗ್ರಾಮೋ ಮಹಾರಾಜ ಘೋರರೂಪೋಽಭವನ್ಮಹಾನ್|
06085026c ಕುರೂಣಾಂ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ||
ಮಹಾರಾಜ! ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಕುರು-ಪಾಂಡವರ ಆ ಮಹಾ ಸಂಗ್ರಾಮವು ಘೋರ ರೂಪವನ್ನು ತಾಳಿತು.
06085027a ತತೋ ಭೀಮೋ ರಣೇ ಕ್ರುದ್ಧೋ ರಭಸಶ್ಚ ವಿಶೇಷತಃ|
06085027c ಗಜಾನೀಕಂ ಸಮಾಸಾದ್ಯ ಪ್ರೇಷಯಾಮಾಸ ಮೃತ್ಯವೇ||
ಆಗ ಭೀಮನು ರಣದಲ್ಲಿ ಕ್ರುದ್ಧನಾಗಿ ವಿಶೇಷ ರಭಸದಿಂದ ಗಜಸೇನೆಯ ಮೇಲೆ ಧಾಳಿ ನಡೆಸಿ ಅವುಗಳನ್ನು ಮೃತ್ಯುವಿಗೆ ಕಳುಹಿಸಿದನು.
06085028a ತತ್ರ ಭಾರತ ಭೀಮೇನ ನಾರಾಚಾಭಿಹತಾ ಗಜಾಃ|
06085028c ಪೇತುಃ ಸೇದುಶ್ಚ ನೇದುಶ್ಚ ದಿಶಶ್ಚ ಪರಿಬಭ್ರಮುಃ||
ಭಾರತ! ಅಲ್ಲಿ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಬೀಳುತ್ತಿದ್ದವು, ಕಿರುಚಿಕೊಳ್ಳುತ್ತಿದ್ದವು, ಮರಣಹೊಂದಿದ್ದವು ಮತ್ತು ದಿಕ್ಕಾಪಾಲಾಗಿ ತಿರುಗುತ್ತಿದ್ದವು.
06085029a ಚಿನ್ನಹಸ್ತಾ ಮಹಾನಾಗಾಶ್ಚಿನ್ನಪಾದಾಶ್ಚ ಮಾರಿಷ|
06085029c ಕ್ರೌಂಚವದ್ವ್ಯನದನ್ಭೀತಾಃ ಪೃಥಿವೀಮಧಿಶಿಶ್ಯಿರೇ||
ಮಾರಿಷ! ಸೊಂಡಿಲುಗಳು ತುಂಡಾಗಿ ಅಥವಾ ಕಾಲು ತುಂಡಾಗಿ ಮಹಾ ಗಜಗಳು ಕ್ರೌಂಚಗಳಂತೆ ಕೂಗುತ್ತಾ ಭೀತಿಗೊಂಡು ಭೂಮಿಯ ಮೇಲೆ ಮಲಗಿದ್ದವು.
06085030a ನಕುಲಃ ಸಹದೇವಶ್ಚ ಹಯಾನೀಕಮಭಿದ್ರುತೌ|
06085030c ತೇ ಹಯಾಃ ಕಾಂಚನಾಪೀಡಾ ರುಕ್ಮಭಾಂಡಪರಿಚ್ಛದಾಃ|
06085030e ವಧ್ಯಮಾನಾ ವ್ಯದೃಶ್ಯಂತ ಶತಶೋಽಥ ಸಹಸ್ರಶಃ||
ನಕುಲ-ಸಹದೇವರು ಕುದುರೆಗಳ ಸೇನೆಯನ್ನು ಆಕ್ರಮಿಸಿದರು. ಅವರು ಕಾಂಚನ ಆಭರಣಗಳಿಂದ ಮತ್ತು ಮೇಲು ಹೊದಿಕೆಗಳಿಂದ ಅಲಂಕೃತಗೊಂಡಿದ್ದ ನೂರಾರು ಸಹಸ್ರಾರು ಕುದುರೆಗಳನ್ನು ವಧಿಸುತ್ತಿರುವುದು ಕಂಡುಬಂದಿತು.
06085031a ಪತದ್ಭಿಶ್ಚ ಹಯೈ ರಾಜನ್ಸಮಾಸ್ತೀರ್ಯತ ಮೇದಿನೀ|
06085031c ನಿರ್ಜಿಹ್ವೈಶ್ಚ ಶ್ವಸದ್ಭಿಶ್ಚ ಕೂಜದ್ಭಿಶ್ಚ ಗತಾಸುಭಿಃ|
06085031e ಹಯೆರ್ಬಭೌ ನರಶ್ರೇಷ್ಠ ನಾನಾರೂಪಧರೈರ್ಧರಾ||
ಕೆಳಗೆ ಬಿದ್ದಿದ್ದ ಕುದುರೆಗಳಿಂದ ಮೇದಿನಿಯು ತುಂಬಿ ಹೋಗಿತ್ತು. ನಾಲಿಗೆಗಳಿರಲಿಲ್ಲ, ದೀರ್ಘ ನಿಟ್ಟುಸಿರು ಬಿಡುತ್ತಿದ್ದವು, ಕೂಗುತ್ತಿದ್ದವು, ಮತ್ತು ತೀರಿಕೊಂಡಿದ್ದವು. ನರಶ್ರೇಷ್ಠ! ಹೀಗೆ ಕುದುರೆಗಳು ನಾನಾ ರೂಪಗಳನ್ನು ಧರಿಸಿದ್ದವು.
06085032a ಅರ್ಜುನೇನ ಹತೈಃ ಸಂಖ್ಯೇ ತಥಾ ಭಾರತ ವಾಜಿಭಿಃ|
06085032c ಪ್ರಬಭೌ ವಸುಧಾ ಘೋರಾ ತತ್ರ ತತ್ರ ವಿಶಾಂ ಪತೇ||
ಭಾರತ! ವಿಶಾಂಪತೇ! ರಣದಲ್ಲಿ ಅರ್ಜುನನಿಂದ ಹತವಾದ ಕುದುರೆಗಳಿಂದ ವಸುಧೆಯು ಅಲ್ಲಲ್ಲಿ ಘೋರವಾಗಿ ಕಾಣುತ್ತಿತ್ತು.
06085033a ರಥೈರ್ಭಗ್ನೈರ್ಧ್ವಜೈಶ್ಚಿನ್ನೈಶ್ಚತ್ರೈಶ್ಚ ಸುಮಹಾಪ್ರಭೈಃ|
06085033c ಹಾರೈರ್ನಿಷ್ಕೈಃ ಸಕೇಯೂರೈಃ ಶಿರೋಭಿಶ್ಚ ಸಕುಂಡಲೈಃ||
06085034a ಉಷ್ಣೀಷೈರಪವಿದ್ಧೈಶ್ಚ ಪತಾಕಾಭಿಶ್ಚ ಸರ್ವಷಃ|
06085034c ಅನುಕರ್ಷೈಃ ಶುಭೈ ರಾಜನ್ಯೋಕ್ತ್ರೈಶ್ಚವ್ಯಸುರಶ್ಮಿಭಿಃ||
06085034e ಸಂಚನ್ನಾ ವಸುಧಾ ಭಾತಿ ವಸಂತೇ ಕುಸುಮೈರಿವ||
ರಾಜನ್! ಭಗ್ನವಾಗಿದ್ದ ರಥಗಳಿಂದ, ತುಂಡಾದ ಮಹಾಪ್ರಭೆಯ ಧ್ವಜ-ಚತ್ರಗಳಿಂದ, ಸುವರ್ಣಮಯ ಹಾರಗಳಿಂದ, ಕೇಯೂರ-ಕುಂಡಲಗಳನ್ನು ಧರಿಸಿದ್ದ ಶಿರಗಳಿಂದ, ಬಿಚ್ಚಿಹೋದ ಶಿರಸ್ತ್ರಾಣಗಳಿಂದ, ತುಂಡಾದ ಪತಾಕೆಗಳಿಂದ, ಸುಂದರ ನೊಗದ ಕೆಳಭಾಗಗಳಿಂದಲೂ, ಕಡಿವಾಣಗಳಿಂದಲೂ ವ್ಯಾಪ್ತವಾಗಿದ್ದ ರಣಭೂಮಿಯು ವಸಂತ ಋತುವಿನಲ್ಲಿ ಕುಸುಮಗಳಿಂದ ಆಚ್ಛಾದಿತವಾದ ಭೂಪ್ರದೇಶದಂತೆ ಕಾಣುತ್ತಿತ್ತು.
06085035a ಏವಮೇಷ ಕ್ಷಯೋ ವೃತ್ತಃ ಪಾಂಡೂನಾಮಪಿ ಭಾರತ|
06085035c ಕ್ರುದ್ಧೇ ಶಾಂತನವೇ ಭೀಷ್ಮೇ ದ್ರೋಣೇ ಚ ರಥಸತ್ತಮೇ||
06085036a ಅಶ್ವತ್ಥಾಮ್ನಿ ಕೃಪೇ ಚೈವ ತಥೈವ ಕೃತವರ್ಮಣಿ|
06085036c ತಥೇತರೇಷು ಕ್ರುದ್ಧೇಷು ತಾವಕಾನಾಮಪಿ ಕ್ಷಯಃ||
ಹೀಗೆಯೇ ಭಾರತ! ಕ್ರುದ್ಧ ಶಾಂತನವ ಭೀಷ್ಮನಿಂದ, ರಥಸತ್ತಮ ದ್ರೋಣನಿಂದ, ಅಶ್ವತ್ಥಾಮನಿಂದ, ಕೃಪನಿಂದ ಮತ್ತು ಕೃತವರ್ಮನಿಂದ ಪಾಂಡವರ ನಾಶವೂ ನಡೆಯಿತು. ಹಾಗೆಯೇ ಕ್ರುದ್ಧರಾದ ಅವರಿಂದ ನಿನ್ನವರೂ ಹತರಾದರು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧೇ ಪಂಚಾಶೀತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧ ಎನ್ನುವ ಎಂಭತ್ತೈದನೇ ಅಧ್ಯಾಯವು.