ಭೀಷ್ಮ ಪರ್ವ: ಭೀಷ್ಮವಧ ಪರ್ವ
೭೬
ದುರ್ಯೋಧನ-ಭೀಷ್ಮರ ಸಂವಾದ (೧-೧೨). ಕುರುಸೇನೆಯು ಪುನಃ ಯುದ್ಧಕ್ಕೆ ಹೊರಟಿದುದು (೧೩-೧೯).
06076001 ಸಂಜಯ ಉವಾಚ|
06076001a ಅಥ ಶೂರಾ ಮಹಾರಾಜ ಪರಸ್ಪರಕೃತಾಗಸಃ|
06076001c ಜಗ್ಮುಃ ಸ್ವಶಿಬಿರಾಣ್ಯೇವ ರುಧಿರೇಣ ಸಮುಕ್ಷಿತಾಃ||
ಸಂಜಯನು ಹೇಳಿದನು: “ಮಹಾರಾಜ! ಪರಸ್ಪರರ ಅಪರಾಧಿಗಳಾಗಿ ಶೂರರು ರಕ್ತದಿಂದ ತೋಯ್ದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
06076002a ವಿಶ್ರಮ್ಯ ಚ ಯಥಾನ್ಯಾಯಂ ಪೂಜಯಿತ್ವಾ ಪರಸ್ಪರಂ|
06076002c ಸನ್ನದ್ಧಾಃ ಸಮದೃಶ್ಯಂತ ಭೂಯೋ ಯುದ್ಧಚಿಕೀರ್ಷಯಾ||
ಯಥಾನ್ಯಾಯವಾಗಿ ವಿಶ್ರಮಿಸಿ ಪರಸ್ಪರರನ್ನು ಗೌರವಿಸಿ ಪುನಃ ಯುದ್ಧಮಾಡಲು ಬಯಸಿ ಸನ್ನದ್ಧರಾಗುತ್ತಿರುವುದು ಕಂಡುಬಂದಿತು.
06076003a ತತಸ್ತವ ಸುತೋ ರಾಜಂಶ್ಚಿಂತಯಾಭಿಪರಿಪ್ಲುತಃ|
06076003c ವಿಸ್ರವಚ್ಚೋಣಿತಾಕ್ತಾಂಗಃ ಪಪ್ರಚ್ಛೇದಂ ಪಿತಾಮಹಂ||
ರಾಜನ್! ಆಗ ಅಂಗಗಳಿಂದ ರಕ್ತವು ಸುರಿಯುತ್ತಿರಲು ನಿನ್ನ ಮಗನು ಚಿಂತೆಯಲ್ಲಿ ಮುಳುಗಿ ಪಿತಾಮಹನನ್ನು ಪ್ರಶ್ನಿಸಿದನು:
06076004a ಸೈನ್ಯಾನಿ ರೌದ್ರಾಣಿ ಭಯಾನಕಾನಿ
ವ್ಯೂಢಾನಿ ಸಮ್ಯಗ್ಬಹುಲಧ್ವಜಾನಿ|
06076004c ವಿದಾರ್ಯ ಹತ್ವಾ ಚ ನಿಪೀಡ್ಯ ಶೂರಾಸ್
ತೇ ಪಾಂಡವಾನಾಂ ತ್ವರಿತಾ ರಥೌಘಾಃ||
“ಅನೇಕ ಧ್ವಜಗಳಿರುವ, ಚೆನ್ನಾಗಿ ವ್ಯೂಹದಲ್ಲಿ ರಚಿತವಾಗಿರುವ ರೌದ್ರ ಭಯಾನಿಕ ಸೇನೆಯನ್ನೂ ಕೂಡ ಪಾಂಡವರು ಬೇಗನೇ ಭೇದಿಸಿ, ಪೀಡಿಸಿ, ರಥಗಳಲ್ಲಿ ಹೊರಟುಹೋಗುತ್ತಿದ್ದಾರೆ.
06076005a ಸಮ್ಮೋಹ್ಯ ಸರ್ವಾನ್ಯುಧಿ ಕೀರ್ತಿಮಂತೋ
ವ್ಯೂಹಂ ಚ ತಂ ಮಕರಂ ವಜ್ರಕಲ್ಪಂ|
06076005c ಪ್ರವಿಶ್ಯ ಭೀಮೇನ ನಿಬರ್ಹಿತೋಽಸ್ಮಿ
ಘೋರೈಃ ಶರೈರ್ಮೃತ್ಯುದಂಡಪ್ರಕಾಶೈಃ||
ವಜ್ರದಂತಿರುವ ಮಕರವ್ಯೂಹವನ್ನು ಕೂಡ ಎಲ್ಲವನ್ನೂ ಸಮ್ಮೋಹಗೊಳಿಸಿ ಯುದ್ಧದಲ್ಲಿ ಕೀರ್ತಿಮಂತರಾಗಿದ್ದಾರೆ. ವ್ಯೂಹವನ್ನು ಪ್ರವೇಶಿಸಿದ ಭೀಮನ ಮೃತ್ಯುದಂಡದಂತೆ ಹೊಳೆಯುತ್ತಿದ್ದ ಘೋರ ಶರಗಳಿಂದ ಗಾಯಗೊಂಡಿದ್ದೇನೆ.
06076006a ಕ್ರುದ್ಧಂ ತಮುದ್ವೀಕ್ಷ್ಯ ಭಯೇನ ರಾಜನ್
ಸಮ್ಮೂರ್ಚಿತೋ ನಾಲಭಂ ಶಾಂತಿಮದ್ಯ|
06076006c ಇಚ್ಛೇ ಪ್ರಸಾದಾತ್ತವ ಸತ್ಯಸಂಧ
ಪ್ರಾಪ್ತುಂ ಜಯಂ ಪಾಂಡವೇಯಾಂಶ್ಚ ಹಂತುಂ||
ರಾಜನ್! ಕ್ರುದ್ಧನಾದ ಅವನನ್ನು ನೋಡಿಯೇ ಭಯದಿಂದ ನಾನು ಮೂರ್ಛಿತನಾಗುತ್ತೇನೆ. ಸತ್ಯಸಂಧ! ಇಂದು ನನಗೆ ಶಾಂತಿಯೇ ಇಲ್ಲದಾಗಿದೆ. ಕೇವಲ ನಿನ್ನ ಪ್ರಸಾದದಿಂದ ಪಾಂಡವೇಯರನ್ನು ಕೊಂದು ಜಯವನ್ನು ಗಳಿಸಲು ಶಕ್ಯನಾಗಿದ್ದೇನೆ.”
06076007a ತೇನೈವಮುಕ್ತಃ ಪ್ರಹಸನ್ಮಹಾತ್ಮಾ
ದುರ್ಯೋಧನಂ ಜಾತಮನ್ಯುಂ ವಿದಿತ್ವಾ|
06076007c ತಂ ಪ್ರತ್ಯುವಾಚಾವಿಮನಾ ಮನಸ್ವೀ
ಗಂಗಾಸುತಃ ಶಸ್ತ್ರಭೃತಾಂ ವರಿಷ್ಠಃ||
ಅವನು ಹೀಗೆ ಹೇಳಲು ಮಹಾತ್ಮಾ ಮನಸ್ವೀ ಶಸ್ತ್ರಭೃತರಲ್ಲಿ ವರಿಷ್ಠ ಗಂಗಾಸುತನು ವಿನಯನಾಗಿ ಕೇಳಿಕೊಂಡರೂ ಅವನು ಕುಪಿತನಾಗಿದ್ದಾನೆಂದು ತಿಳಿದು ದುರ್ಯೋಧನನಿಗೆ ನಗುತ್ತಾ ಹೇಳಿದನು.
06076008a ಪರೇಣ ಯತ್ನೇನ ವಿಗಾಹ್ಯ ಸೇನಾಂ
ಸರ್ವಾತ್ಮನಾಹಂ ತವ ರಾಜಪುತ್ರ|
06076008c ಇಚ್ಛಾಮಿ ದಾತುಂ ವಿಜಯಂ ಸುಖಂ ಚ
ನ ಚಾತ್ಮಾನಂ ಚಾದಯೇಽಹಂ ತ್ವದರ್ಥೇ||
“ರಾಜಪುತ್ರ! ಸೇನೆಯನ್ನು ಹೊಕ್ಕು ಸರ್ವಾತ್ಮದಿಂದ ನಿನಗೆ ವಿಜಯವನ್ನೂ ಸುಖವನ್ನೂ ಕೊಡಲು ಬಯಸಿ ಪರಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಅದರಿಂದಾಗಿ ನನ್ನ ರಕ್ಷಣೆಯ ಕುರಿತೂ ನಾನು ಯೋಚಿಸುತ್ತಿಲ್ಲ.
06076009a ಏತೇ ತು ರೌದ್ರಾ ಬಹವೋ ಮಹಾರಥಾ
ಯಶಸ್ವಿನಃ ಶೂರತಮಾಃ ಕೃತಾಸ್ತ್ರಾಃ|
06076009c ಯೇ ಪಾಂಡವಾನಾಂ ಸಮರೇ ಸಹಾಯಾ
ಜಿತಕ್ಲಮಾಃ ಕ್ರೋಧವಿಷಂ ವಮಂತಿ||
ಸಮರದಲ್ಲಿ ಪಾಂಡವರ ಸಹಾಯಕ್ಕೆಂದು ಬಂದ ಅನೇಕ ಮಹಾರಥರು ರೌದ್ರರು, ಯಶಸ್ವಿಗಳು, ಶೂರತಮರು, ಕೃತಾಸ್ತ್ರರು, ಆಯಾಸವನ್ನು ಗೆದ್ದವರು ಮತ್ತು ಕ್ರೋಧವಿಷವನ್ನು ಕಾರುವವರು.
06076010a ತೇ ನೇಹ ಶಕ್ಯಾಃ ಸಹಸಾ ವಿಜೇತುಂ
ವೀರ್ಯೋನ್ನದ್ಧಾಃ ಕೃತವೈರಾಸ್ತ್ವಯಾ ಚ|
06076010c ಅಹಂ ಹ್ಯೇತಾನ್ಪ್ರತಿಯೋತ್ಸ್ಯಾಮಿ ರಾಜನ್
ಸರ್ವಾತ್ಮನಾ ಜೀವಿತಂ ತ್ಯಜ್ಯ ವೀರ||
ರಾಜನ್! ವೀರ! ನಿನ್ನೊಂದಿಗೆ ವೈರವನ್ನಿಟ್ಟುಕೊಂಡಿರುವ, ವೀರ್ಯದಿಂದ ಉನ್ಮತ್ತರಾಗಿರುವ ಅವರನ್ನು ಶೀಘ್ರವಾಗಿ ಸೋಲಿಸಲು ಶಕ್ಯವಿಲ್ಲ. ನಾನಾದರೋ ಮನಃಪೂರ್ವಕವಾಗಿ ಜೀವವನ್ನೇ ತೊರೆದು ಇವರೊಂದಿಗೆ ಯುದ್ಧ ಮಾಡುತ್ತಿದ್ದೇನೆ.
06076011a ರಣೇ ತವಾರ್ಥಾಯ ಮಹಾನುಭಾವ
ನ ಜೀವಿತಂ ರಕ್ಷ್ಯತಮಂ ಮಮಾದ್ಯ|
06076011c ಸರ್ವಾಂಸ್ತವಾರ್ಥಾಯ ಸದೇವದೈತ್ಯಾಽಲ್
ಲೋಕಾನ್ದಹೇಯಂ ಕಿಮು ಶತ್ರೂಂಸ್ತವೇಹ||
ಮಹಾನುಭಾವ! ನಿನಗೋಸ್ಕರವಾಗಿ ನಾನು ನನ್ನ ಜೀವವನ್ನು ರಕ್ಷಿಸಿಕೊಳ್ಳುವ ಆಸೆಯನ್ನಿಟ್ಟುಕೊಂಡಿಲ್ಲ. ನಿನಗೋಸ್ಕರವಾಗಿ ದೇವ-ದೈತ್ಯರೊಂದಿಗೆ ಸರ್ವಲೋಕಗಳನ್ನೂ ನಾನು ದಹಿಸಬಲ್ಲೆ. ಇನ್ನು ನಿನ್ನ ಈ ಶತ್ರುಗಳು ಯಾವ ಲೆಕ್ಕಕ್ಕೆ?
06076012a ತತ್ಪಾಂಡವಾನ್ಯೋಧಯಿಷ್ಯಾಮಿ ರಾಜನ್
ಪ್ರಿಯಂ ಚ ತೇ ಸರ್ವಮಹಂ ಕರಿಷ್ಯೇ|
06076012c ಶ್ರುತ್ವೈವ ಚೈತತ್ಪರಮಪ್ರತೀತೋ
ದುರ್ಯೋಧನಃ ಪ್ರೀತಮನಾ ಬಭೂವ||
ರಾಜನ್! ಆ ಪಾಂಡವರೊಡನೆಯೂ ಯುದ್ಧ ಮಾಡುತ್ತೇನೆ. ನಿನಗೆ ಪ್ರಿಯವಾದುದೆಲ್ಲವನ್ನೂ ನಾನು ಮಾಡುತ್ತೇನೆ.” ಅವನ ಆ ಮಾತುಗಳನ್ನು ಕೇಳಿ ದುರ್ಯೋಧನನು ಪರಮ ಪ್ರತೀತನಾದನು.
06076013a ಸರ್ವಾಣಿ ಸೈನ್ಯಾನಿ ತತಃ ಪ್ರಹೃಷ್ಟೋ
ನಿರ್ಗಚ್ಛತೇತ್ಯಾಹ ನೃಪಾಂಶ್ಚ ಸರ್ವಾನ್|
06076013c ತದಾಜ್ಞಯಾ ತಾನಿ ವಿನಿರ್ಯಯುರ್ದ್ರುತಂ
ರಥಾಶ್ವಪಾದಾತಗಜಾಯುತಾನಿ||
ಆಗ ಪ್ರಹೃಷ್ಟನಾಗಿ ಎಲ್ಲ ಸೈನ್ಯಗಳಿಗೂ ಎಲ್ಲ ರಾಜರಿಗೂ “ಹೊರಡಿ!” ಎಂದು ಹೇಳಿದನು. ಅವನ ಆಜ್ಞಾನುಸಾರವಾಗಿ ಹತ್ತತ್ತು ಸಾವಿರ ರಥ-ಅಶ್ವ-ಪದಾತಿ-ಗಜಗಳಿಂದ ಕೂಡಿದ ಮಹಾಸೇನೆಯು ಹೊರಟಿತು.
06076014a ಪ್ರಹರ್ಷಯುಕ್ತಾನಿ ತು ತಾನಿ ರಾಜನ್
ಮಹಾಂತಿ ನಾನಾವಿಧಶಸ್ತ್ರವಂತಿ|
06076014c ಸ್ಥಿತಾನಿ ನಾಗಾಶ್ವಪದಾತಿಮಂತಿ
ವಿರೇಜುರಾಜೌ ತವ ರಾಜನ್ಬಲಾನಿ||
ರಾಜನ್! ನಾನಾವಿಧದ ಶಸ್ತ್ರಗಳನ್ನು ಹೊಂದಿದ್ದ, ನಾಗಾಶ್ವಪದಾತಿಗಳಿಂದ ತುಂಬಿದ್ದ ನಿನ್ನ ಸೇನೆಗಳು ಹರ್ಷಿತವಾಗಿದ್ದವು ಮತ್ತು ಬಹಳವಾಗಿ ರಾರಾಜಿಸುತ್ತಿದ್ದವು.
06076015a ವೃಂದೈಃ ಸ್ಥಿತಾಶ್ಚಾಪಿ ಸುಸಂಪ್ರಯುಕ್ತಾಶ್
ಚಕಾಶಿರೇ ದಂತಿಗಣಾಃ ಸಮಂತಾತ್|
06076015c ಶಸ್ತ್ರಾಸ್ತ್ರವಿದ್ಭಿರ್ನರದೇವ ಯೋಧೈರ್
ಅಧಿಷ್ಠಿತಾಃ ಸೈನ್ಯಗಣಾಸ್ತ್ವದೀಯಾಃ||
ನರದೇವ! ನಿನ್ನ ಸೈನ್ಯಗಣಗಳು ಶಸ್ತ್ರಾಸ್ತ್ರಗಳನ್ನು ತಿಳಿದಿರುವ ಯೋಧರಿಂದ ನಿಯಂತ್ರಿಸಲ್ಪಟ್ಟಿದ್ದವು.
06076016a ರಥೈಶ್ಚ ಪಾದಾತಗಜಾಶ್ವಸಂಘೈಃ
ಪ್ರಯಾದ್ಭಿರಾಜೌ ವಿಧಿವತ್ಪ್ರಣುನ್ನೈಃ|
06076016c ಸಮುದ್ಧತಂ ವೈ ತರುಣಾರ್ಕವರ್ಣಂ
ರಜೋ ಬಭೌ ಚಾದಯತ್ಸೂರ್ಯರಶ್ಮೀನ್||
ವಿಧಿವತ್ತಾಗಿ ಅನುಶಾಸಿತರಾಗಿ ರಣರಂಗಕ್ಕೆ ಪ್ರಯಾಣಮಾಡುತ್ತಿದ್ದ ರಥ-ಪದಾತಿ-ಗಜ-ಅಶ್ವ ಸಮೂಹಗಳಿಂದ ಮೇಲೆದ್ದ ಧೂಳು ಸೂರ್ಯನ ಕಿರಣಗಳನ್ನು ಮುಸುಕಿ ಬಾಲಸೂರ್ಯನ ರಶ್ಮಿಗಳಂತೆ ತೋರುತ್ತಿದ್ದವು.
06076017a ರೇಜುಃ ಪತಾಕಾ ರಥದಂತಿಸಂಸ್ಥಾ
ವಾತೇರಿತಾ ಭ್ರಾಮ್ಯಮಾಣಾಃ ಸಮಂತಾತ್|
06076017c ನಾನಾರಂಗಾಃ ಸಮರೇ ತತ್ರ ರಾಜನ್
ಮೇಘೈರ್ಯುಕ್ತಾ ವಿದ್ಯುತಃ ಖೇ ಯಥೈವ||
ರಾಜನ್! ರಥ ಮತ್ತು ಆನೆಗಳ ಮೇಲೆ ಕಟ್ಟಿದ್ದ ನಾನಾ ಬಣ್ಣದ ಪತಾಕೆಗಳು ಗಾಳಿಯಿಂದ ಬೀಸುತ್ತಾ ಎಲ್ಲ ಕಡೆಗಳಿಂದಲೂ ಸಮರದಲ್ಲಿ ಆಕಾಶದಲ್ಲಿ ಮೇಘಗಳಿಗೆ ತಾಗಿದ ಮಿಂಚುಗಳಂತೆ ಪ್ರಕಾಶಿಸುತ್ತಿದ್ದವು.
06076018a ಧನೂಂಷಿ ವಿಸ್ಫಾರಯತಾಂ ನೃಪಾಣಾಂ
ಬಭೂವ ಶಬ್ದಸ್ತುಮುಲೋಽತಿಘೋರಃ|
06076018c ವಿಮಥ್ಯತೋ ದೇವಮಹಾಸುರೌಘೈರ್
ಯಥಾರ್ಣವಸ್ಯಾದಿಯುಗೇ ತದಾನೀಂ||
ಟೇಂಕರಿಸುತ್ತಿದ್ದ ನೃಪರ ಧನುಸ್ಸುಗಳಿಂದ ಅತಿಘೋರ ತುಮುಲ ಶಬ್ಧವುಂಟಾಗುತ್ತಿತ್ತು. ಅದು ಆದಿಯುಗದಲ್ಲಿ ದೇವತೆಗಳೂ ಮಹಾಸುರರೂ ಸಾಗರವನ್ನು ಮಥಿಸುವಾಗ ಉಂಟಾದ ಶಬ್ಧದಂತಿತ್ತು.
06076019a ತದುಗ್ರನಾದಂ ಬಹುರೂಪವರ್ಣಂ
ತವಾತ್ಮಜಾನಾಂ ಸಮುದೀರ್ಣಮೇವಂ|
06076019c ಬಭೂವ ಸೈನ್ಯಂ ರಿಪುಸೈನ್ಯಹಂತೃ
ಯುಗಾಂತಮೇಘೌಘನಿಭಂ ತದಾನೀಂ||
ಆ ಉಗ್ರನಾದದೊಂದಿಗೆ, ಬಹುಬಣ್ಣದ ರೂಪವುಳ್ಳ ನಿನ್ನ ಮಕ್ಕಳ ಆ ಸೇನೆಯು ರಿಪುಸೈನ್ಯಗಳನ್ನು ನಾಶಪಡಿಸುವ ಯುಗಾಂತದ ಘನ ಕಪ್ಪು ಮೋಡಗಳಂತೆ ಕಂಡಿತು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಷಟ್ಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ಎಪ್ಪತ್ತಾರನೇ ಅಧ್ಯಾಯವು.