ಭೀಷ್ಮ ಪರ್ವ: ಭೀಷ್ಮವಧ ಪರ್ವ
೫೬
ನಾಲ್ಕನೆಯ ದಿನದ ಯುದ್ಧ
ಯುದ್ಧಾರಂಭ (೧-೨೦). ಭೀಷ್ಮಾರ್ಜುನರ ರಥಯುದ್ಧ (೨೧-೨೮).
06056001 ಸಂಜಯ ಉವಾಚ|
06056001a ವ್ಯುಷ್ಟಾಂ ನಿಶಾಂ ಭಾರತ ಭಾರತಾನಾಂ
ಅನೀಕಿನೀನಾಂ ಪ್ರಮುಖೇ ಮಹಾತ್ಮಾ|
06056001c ಯಯೌ ಸಪತ್ನಾನ್ಪ್ರತಿ ಜಾತಕೋಪೋ
ವೃತಃ ಸಮಗ್ರೇಣ ಬಲೇನ ಭೀಷ್ಮಃ||
ಸಂಜಯನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ಭಾರತರ ಸೇನೆಗಳ ಪ್ರಮುಖ ಮಹಾತ್ಮ ಭೀಷ್ಮನು ಕೋಪೋದ್ರಿಕ್ತನಾಗಿ ಸಮಗ್ರ ಸೇನೆಗಳಿಂದ ಆವೃತನಾಗಿ ದಾಯಾದಿಗಳೊಡನೆ ಯುದ್ಧಮಾಡಲು ಹೊರಟನು.
06056002a ತಂ ದ್ರೋಣದುರ್ಯೋಧನಬಾಹ್ಲಿಕಾಶ್ಚ
ತಥೈವ ದುರ್ಮರ್ಷಣಚಿತ್ರಸೇನೌ|
06056002c ಜಯದ್ರಥಶ್ಚಾತಿಬಲೋ ಬಲೌಘೈರ್
ನೃಪಾಸ್ತಥಾನ್ಯೇಽನುಯಯುಃ ಸಮಂತಾತ್||
ಅವನನ್ನು ದ್ರೋಣ, ದುರ್ಯೋಧನ, ಬಾಹ್ಲೀಕ, ಹಾಗೆಯೇ ದುರ್ಮರ್ಷಣ, ಚಿತ್ರಸೇನ, ಅತಿಬಲ ಜಯದ್ರಥರು ಇತರ ರಾಜರ ಬಲಗಳೊಂದಿಗೆ ಸುತ್ತುವರೆದು ಮುಂದುವರೆದರು.
06056003a ಸ ತೈರ್ಮಹದ್ಭಿಶ್ಚ ಮಹಾರಥೈಶ್
ಚ ತೇಜಸ್ವಿಭಿರ್ವೀರ್ಯವದ್ಭಿಶ್ಚ ರಾಜನ್|
06056003c ರರಾಜ ರಾಜೋತ್ತಮ ರಾಜಮುಖ್ಯೈರ್
ವೃತಃ ಸ ದೇವೈರಿವ ವಜ್ರಪಾಣಿಃ||
ರಾಜನ್! ರಾಜೋತ್ತಮ! ಆ ಮಹಾತ್ಮ, ಮಹಾರಥ, ತೇಜಸ್ವಿ, ವೀರ್ಯವಂತ ರಾಜಮುಖ್ಯರಿಂದ ಆವೃತನಾದ ಅವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ವಜ್ರಪಾಣಿಯಂತೆ ರಾರಾಜಿಸಿದನು.
06056004a ತಸ್ಮಿನ್ನನೀಕಪ್ರಮುಖೇ ವಿಷಕ್ತಾ
ದೋಧೂಯಮಾನಾಶ್ಚ ಮಹಾಪತಾಕಾಃ|
06056004c ಸುರಕ್ತಪೀತಾಸಿತಪಾಂಡುರಾಭಾ
ಮಹಾಗಜಸ್ಕಂಧಗತಾ ವಿರೇಜುಃ||
ಆ ಸೇನೆಯ ಮುಂದೆ ಸಾಗುತ್ತಿದ್ದ ಮಹಾಗಜಗಳ ಭುಜಗಳ ಮೇಲೆ ಕೆಂಪು-ಹಳದೀ-ಕಪ್ಪು-ಬಿಳೀ ಬಣ್ಣದ ಮಹಾ ಪತಾಕೆಗಳು ಹಾರಾಡುತ್ತಿದ್ದವು.
06056005a ಸಾ ವಾಹಿನೀ ಶಾಂತನವೇನ ರಾಜ್ಞಾ
ಮಹಾರಥೈರ್ವಾರಣವಾಜಿಭಿಶ್ಚ|
06056005c ಬಭೌ ಸವಿದ್ಯುತ್ಸಂತನಯಿತ್ನುಕಲ್ಪಾ
ಜಲಾಗಮೇ ದ್ಯೌರಿವ ಜಾತಮೇಘಾ||
ಮಹಾರಥಗಳಿಂದ, ವಾರಣ-ವಾಜಿಗಳಿಂದ ಕೂಡಿದ್ದ ರಾಜ ಶಾಂತನುವಿನ ಆ ಸೇನೆಯು ಮಿಂಚಿನಿಂದ ಕೂಡಿದ ಮೇಘಗಳಂತೆ ಮತ್ತು ಮಳೆಬರುವ ಮುನ್ನ ದಿವಿಯಲ್ಲಿ ಮೋಡಗಳು ತುಂಬಿಕೊಂಡಿರುವಂತೆ ಕಂಡಿತು.
06056006a ತತೋ ರಣಾಯಾಭಿಮುಖೀ ಪ್ರಯಾತಾ
ಪ್ರತ್ಯರ್ಜುನಂ ಶಾಂತನವಾಭಿಗುಪ್ತಾ|
06056006c ಸೇನಾ ಮಹೋಗ್ರಾ ಸಹಸಾ ಕುರೂಣಾಂ
ವೇಗೋ ಯಥಾ ಭೀಮ ಇವಾಪಗಾಯಾಃ||
ಆಗ ಶಾಂತನವನಿಂದ ರಕ್ಷಿತವಾದ ರಣಾಭಿಮುಖವಾಗಿದ್ದ ಕುರುಗಳ ಉಗ್ರ ಮಹಾಸೇನೆಯು ಸಮುದ್ರವನ್ನು ಸೇರುವ ಗಂಗೆಯಂತೆ ಭಯಂಕರ ವೇಗದಲ್ಲಿ ಅರ್ಜುನನ ಮೇಲೆ ಎರಗಿತು.
06056007a ತಂ ವ್ಯಾಲನಾನಾವಿಧಗೂಢಸಾರಂ
ಗಜಾಶ್ವಪಾದಾತರಥೌಘಪಕ್ಷಂ|
06056007c ವ್ಯೂಹಂ ಮಹಾಮೇಘಸಮಂ ಮಹಾತ್ಮಾ
ದದರ್ಶ ದೂರಾತ್ಕಪಿರಾಜಕೇತುಃ||
ನಾನಾ ವಿಧದ ಗೂಢಸಾರಗಳನ್ನು ಹೊಂದಿದ್ದ, ಗಜ-ಅಶ್ವ-ಪದಾತಿ-ರಥಪಕ್ಷಗಳಿಂದ ಕೂಡಿದ್ದ ಮಹಾ ಮೇಘ ಸಮನಾಗಿದ್ದ ಆ ವ್ಯೂಹವನ್ನು ದೂರದಿಂದ ಕಪಿರಾಜಕೇತುವು ನೋಡಿದನು.
06056008a ಸ ನಿರ್ಯಯೌ ಕೇತುಮತಾ ರಥೇನ
ನರರ್ಷಭಃ ಶ್ವೇತಹಯೇನ ವೀರಃ|
06056008c ವರೂಥಿನಾ ಸೈನ್ಯಮುಖೇ ಮಹಾತ್ಮಾ
ವಧೇ ಧೃತಃ ಸರ್ವಸಪತ್ನಯೂನಾಂ||
ಆ ಕೇತುಮತ ನರರ್ಷಭ ಶ್ವೇತಹಯ ವೀರ ಮಹಾತ್ಮನು ಸೈನ್ಯಮುಖದಲ್ಲಿದ್ದುಕೊಂಡು ತನ್ನವರೆಲ್ಲರಿಂದ ಆವೃತನಾಗಿ ಸೇನೆಗಳ ವಧೆಗೆಂದು ಹೊರಟನು.
06056009a ಸೂಪಸ್ಕರಂ ಸೋತ್ತರಬಂಧುರೇಷಂ
ಯತ್ತಂ ಯದೂನಾಂ ಋಷಭೇಣ ಸಂಖ್ಯೇ|
06056009c ಕಪಿಧ್ವಜಂ ಪ್ರೇಕ್ಷ್ಯ ವಿಷೇದುರಾಜೌ
ಸಹೈವ ಪುತ್ರೈಸ್ತವ ಕೌರವೇಯಾಃ||
ನಿನ್ನ ಪುತ್ರರೊಂದಿಗೆ ಕೌರವೇಯರು ಉತ್ತಮ ಸೂಪಸ್ಕರಗಳಿಂದ ಕೂಡಿದ ಯದುಗಳ ಋಷಭನೊಂದಿಗಿರುವ ಕಪಿಧ್ವಜನನ್ನು ರಣದಲ್ಲಿ ನೋಡಿ ವಿಷಾದಿತರಾದರು.
06056010a ಪ್ರಕರ್ಷತಾ ಗುಪ್ತಮುದಾಯುಧೇನ
ಕಿರೀಟಿನಾ ಲೋಕಮಹಾರಥೇನ|
06056010c ತಂ ವ್ಯೂಹರಾಜನ್ದದೃಶುಸ್ತ್ವದೀಯಾಶ್
ಚತುಶ್ಚತುರ್ವ್ಯಾಲಸಹಸ್ರಕೀರ್ಣಂ||
ರಾಜನ್! ಆಯುಧಗಳನ್ನು ಎತ್ತಿಹಿಡಿದಿದ್ದ ಲೋಕಮಹಾರಥ ಕಿರೀಟಿಯಿಂದ ರಕ್ಷಿತವಾಗಿ ಮುಂದುವರೆಯುತ್ತಿದ್ದ ಆ ವ್ಯೂಹದ ನಾಲ್ಕೂ ಕಡೆಗಳಲ್ಲಿ ನಾಲ್ಕು ಸಾವಿರ ಆನೆಗಳಿದ್ದವು.
06056011a ಯಥಾ ಹಿ ಪೂರ್ವೇಽಹನಿ ಧರ್ಮರಾಜ್ಞಾ
ವ್ಯೂಹಃ ಕೃತಃ ಕೌರವನಂದನೇನ|
06056011c ತಥಾ ತಥೋದ್ದೇಶಮುಪೇತ್ಯ ತಸ್ಥುಃ
ಪಾಂಚಾಲಮುಖ್ಯೈಃ ಸಹ ಚೇದಿಮುಖ್ಯಾಃ||
ಹಿಂದಿನ ದಿನ ಕೌರವನಂದನ ಧರ್ಮರಾಜನು ಹೇಗೆ ವ್ಯೂಹವನ್ನು ರಚಿಸಿದ್ದನೋ ಅದರಂತೆಯೇ ಆಯಾ ಸ್ಥಳಗಳಲ್ಲಿ ಚೇದಿಮುಖ್ಯರೊಂದಿಗೆ ಪಾಂಚಾಲಮುಖ್ಯರು ನಿಂತಿದ್ದರು.
06056012a ತತೋ ಮಹಾವೇಗಸಮಾಹತಾನಿ
ಭೇರೀಸಹಸ್ರಾಣಿ ವಿನೇದುರಾಜೌ|
06056012c ಶಂಖಸ್ವನಾ ದುಂದುಭಿನಿಸ್ವನಾಶ್ಚ
ಸರ್ವೇಷ್ವನೀಕೇಷು ಸಸಿಂಹನಾದಾಃ||
ಆಗ ಮಹಾವೇಗದಿಂದ ಕೂಡಿ ಸಹಸ್ರಾರು ಭೇರಿಗಳು ಮೊಳಗಿದವು. ಎಲ್ಲ ಸೇನೆಗಳಲ್ಲಿ ಸಿಂಹನಾದಗಳೊಂದಿಗೆ ಶಂಖಸ್ವನ, ದುಂದುಭಿ ನಿಸ್ವನಗಳು ಕೇಳಿಬಂದವು.
06056013a ತತಃ ಸಬಾಣಾನಿ ಮಹಾಸ್ವನಾನಿ
ವಿಸ್ಫಾರ್ಯಮಾಣಾನಿ ಧನೂಂಷಿ ವೀರೈಃ|
06056013c ಕ್ಷಣೇನ ಭೇರೀಪಣವಪ್ರಣಾದಾನ್
ಅಂತರ್ದಧುಃ ಶಂಖಮಹಾಸ್ವನಾಶ್ಚ||
ಆಗ ವೀರರ ಬಾಣಗಳ ಮಹಾಸ್ವನಗಳು ಅವರ ಧನುಸ್ಸಿನ ಟೇಂಕಾರಗಳು ಸೇರಿ, ಕ್ಷಣದಲ್ಲಿಯೇ ಭೇರಿ-ಪಣವ-ಪ್ರಣಾದಗಳ ಮತ್ತು ಶಂಖಗಳ ಮಹಾಸ್ವನಗಳು ಕೇಳಿಬಂದವು.
06056014a ತಚ್ಚಂಖಶಬ್ದಾವೃತಮಂತರಿಕ್ಷಂ
ಉದ್ಧೂತಭೌಮದ್ರುತರೇಣುಜಾಲಂ|
06056014c ಮಹಾವಿತಾನಾವತತಪ್ರಕಾಶಂ
ಆಲೋಕ್ಯ ವೀರಾಃ ಸಹಸಾಭಿಪೇತುಃ||
ಶಂಖಧ್ವನಿಯು ಅಂತರಿಕ್ಷದಲ್ಲಿ ಆವೃತವಾದುದನ್ನು, ಭೂಮಿಯಿಂದ ಮೇಲೆದ್ದ ಧೂಳಿನ ಜಾಲವು ಉಂಟಾದುದನ್ನು, ಮತ್ತು ಬೆಳಕನ್ನು ಮಹಾ ಕತ್ತಲೆಯು ಆವರಿಸಿದುದನ್ನು ನೋಡಿ ವೀರರು ತಕ್ಷಣವೇ ಮೇಲೆರಗಿದರು.
06056015a ರಥೀ ರಥೇನಾಭಿಹತಃ ಸಸೂತಃ
ಪಪಾತ ಸಾಶ್ವಃ ಸರಥಃ ಸಕೇತುಃ|
06056015c ಗಜೋ ಗಜೇನಾಭಿಹತಃ ಪಪಾತ
ಪದಾತಿನಾ ಚಾಭಿಹತಃ ಪದಾತಿಃ||
ರಥಿಕನಿಂದ ಹೊಡೆಯಲ್ಪಟ್ಟ ರಥಿಕನು ಸೂತ, ಕುದುರೆ, ಧ್ವಜಗಳೊಂದಿಗೆ ಕೆಳಗುರುಳಿದನು. ಆನೆಗಳು ಆನೆಗಳಿಂದ ಹೊಡೆಯಲ್ಪಟ್ಟು ಮತ್ತು ಪದಾತಿಗಳು ಪದಾತಿಗಳಿಂದ ಹೊಡೆಯಲ್ಪಟ್ಟು ಬಿದ್ದರು.
06056016a ಆವರ್ತಮಾನಾನ್ಯಭಿವರ್ತಮಾನೈರ್
ಬಾಣೈಃ ಕ್ಷತಾನ್ಯದ್ಭುತದರ್ಶನಾನಿ|
06056016c ಪ್ರಾಸೈಶ್ಚ ಖಡ್ಗೈಶ್ಚ ಸಮಾಹತಾನಿ
ಸದಶ್ವವೃಂದಾನಿ ಸದಶ್ವವೃಂದೈಃ||
ಅಶ್ವವೃಂದಗಳು ಅಶ್ವವೃಂದಗಳಿಂದ ಆವರ್ತನ-ಪ್ರತ್ಯಾವರ್ತನಗಳಿಂದ ನಡೆದು ಬಾಣಗಳಿಂದ ಸಾಯುತ್ತಿದ್ದ, ಪ್ರಾಸ-ಖಡ್ಗಗಳಿಂದ ಸಂಹರಿಸಲ್ಪಡುತ್ತಿದ್ದ ದೃಶ್ಯವು ಅದ್ಭುತವಾಗಿತ್ತು.
06056017a ಸುವರ್ಣತಾರಾಗಣಭೂಷಿತಾನಿ
ಶರಾವರಾಣಿ ಪ್ರಹಿತಾನಿ ವೀರೈಃ|
06056017c ವಿದಾರ್ಯಮಾಣಾನಿ ಪರಶ್ವಧೈಶ್ಚ
ಪ್ರಾಸೈಶ್ಚ ಖಡ್ಗೈಶ್ಚ ನಿಪೇತುರುರ್ವ್ಯಾಂ||
ವೀರರ ಸುವರ್ಣ ತಾರಾಗಣಗಳಿಂದ ವಿಭೂಷಿತ ಕತ್ತಿ ಮತ್ತು ಗುರಾಣಿಗಳು, ಪರಶಗಳು, ಪ್ರಾಸಗಳು, ಖಡ್ಗಗಳು ತುಂಡಾಗಿ ಭೂಮಿಯ ಮೇಲೆ ಬಿದ್ದಿದ್ದವು.
06056018a ಗಜೈರ್ವಿಷಾಣೈರ್ವರಹಸ್ತರುಗ್ಣಾಃ
ಕೇ ಚಿತ್ಸಸೂತಾ ರಥಿನಃ ಪ್ರಪೇತುಃ|
06056018c ಗಜರ್ಷಭಾಶ್ಚಾಪಿ ರಥರ್ಷಭೇಣ
ನಿಪೇತಿರೇ ಬಾಣಹತಾಃ ಪೃಥಿವ್ಯಾಂ||
ಮದಿಸಿದ ಆನೆಗಳ ಕೋರೆದಾಡೆಗಳ ಮತ್ತು ಸೊಂಡಿಲುಗಳ ಪ್ರಹಾರದಿಂದಾಗಿ ಎಲವು ರಥಿಗಳು ಸೂತರೊಂದಿಗೆ ಬಿದ್ದರು. ಗಜರ್ಷಭರೂ ಕೂಡ ರಥರ್ಷಭರ ಬಾಣಗಳಿಂದ ಹತರಾಗಿ ಭೂಮಿಯ ಮೇಲೆ ಬಿದ್ದರು.
06056019a ಗಜೌಘವೇಗೋದ್ಧತಸಾದಿತಾನಾಂ
ಶ್ರುತ್ವಾ ನಿಷೇದುರ್ವಸುಧಾಂ ಮನುಷ್ಯಾಃ|
06056019c ಆರ್ತಸ್ವರಂ ಸಾದಿಪದಾತಿಯೂನಾಂ
ವಿಷಾಣಗಾತ್ರಾವರತಾಡಿತಾನಾಂ||
ಆನೆಗಳ ಸಮೂಹಗಳು ವೇಗದಿಂದ ಬಂದು ಕುದುರೆಸವಾರರನ್ನು ಕೆಡವಿ ನೆಲದ ಮೇಲೆ ಬಿದ್ದ ಮನುಷ್ಯರ ಆಕ್ರಂದನ ಮತ್ತು ದೇಹದ ಕೆಳಗೆ ಕೋರೆದಾಡೆಗಳಿಂದ ಆಘಾತಗೊಂಡ ಕುದುರೆಸವಾರರು ಮತ್ತು ಪದಾತಿಗಳ ಆರ್ತಸ್ವರವು ಕೇಳಿಬರುತ್ತಿತ್ತು.
06056020a ಸಂಭ್ರಾಂತನಾಗಾಶ್ವರಥೇ ಪ್ರಸೂತೇ
ಮಹಾಭಯೇ ಸಾದಿಪದಾತಿಯೂನಾಂ|
06056020c ಮಹಾರಥೈಃ ಸಂಪರಿವಾರ್ಯಮಾಣಂ
ದದರ್ಶ ಭೀಷ್ಮಃ ಕಪಿರಾಜಕೇತುಂ||
ಕುದುರೆ ಸವಾರರು ಮತ್ತು ಪದಾತಿಗಳ ಆ ಮಹಾಭಯದಿಂದ ನಾಗಾಶ್ವರಥಿಕರು ಸಂಭ್ರಾಂತರಾದರು. ಆಗ ಭೀಷ್ಮನು ಮಹಾರಥರಿಂದ ಪರಿವಾರಿತನಾದ ಕಪಿರಾಜಕೇತುವನ್ನು ನೋಡಿದನು.
06056021a ತಂ ಪಂಚತಾಲೋಚ್ಛ್ರಿತತಾಲಕೇತುಃ
ಸದಶ್ವವೇಗೋದ್ಧತವೀರ್ಯಯಾತಃ|
06056021c ಮಹಾಸ್ತ್ರಬಾಣಾಶನಿದೀಪ್ತಮಾರ್ಗಂ
ಕಿರೀಟಿನಂ ಶಾಂತನವೋಽಭ್ಯಧಾವತ್||
ಐದು ತಾಳೇಮರಗಳಷ್ಟು ಎತ್ತರದ ತಾಲವೃಕ್ಷವೇ ಚಿಹ್ನೆಯಾಗಿದ್ದ ಧ್ವಜವುಳ್ಳ, ವೇಗಿಗಳಾದ ವೀರ ಕುದುರೆಗಳನ್ನು ಕಟ್ಟಿದ್ದ ರಥವುಳ್ಳ ಶಾಂತನವನು ಮಹಾ ಅಸ್ತ್ರಗಳನ್ನು ಹೊಂದಿದ್ದ, ಪ್ರದೀಪ್ತನಾಗಿದ್ದ ಕಿರೀಟಿಯನ್ನು ಎದುರಿಸಿದನು.
06056022a ತಥೈವ ಶಕ್ರಪ್ರತಿಮಾನಕಲ್ಪಂ
ಇಂದ್ರಾತ್ಮಜಂ ದ್ರೋಣಮುಖಾಭಿಸಸ್ರುಃ|
06056022c ಕೃಪಶ್ಚ ಶಲ್ಯಶ್ಚ ವಿವಿಂಶತಿಶ್ಚ
ದುರ್ಯೋಧನಃ ಸೌಮದತ್ತಿಶ್ಚ ರಾಜನ್||
ರಾಜನ್! ಹಾಗೆಯೇ ಶಕ್ರಪ್ರತಿಮಾನಕಲ್ಪನಾದ ಇಂದ್ರಾತ್ಮಜನನ್ನು ದ್ರೋಣಪ್ರಮುಖರಾದ ಕೃಪ, ಶಲ್ಯ, ವಿವಿಂಶತಿ, ದುರ್ಯೋಧನ ಮತ್ತು ಸೌಮದತ್ತಿಯರು ಎದುರಿಸಿದರು.
06056023a ತತೋ ರಥಾನೀಕಮುಖಾದುಪೇತ್ಯ
ಸರ್ವಾಸ್ತ್ರವಿತ್ಕಾಂಚನಚಿತ್ರವರ್ಮಾ|
06056023c ಜವೇನ ಶೂರೋಽಭಿಸಸಾರ ಸರ್ವಾಂಸ್
ತಥಾರ್ಜುನಸ್ಯಾತ್ರ ಸುತೋಽಭಿಮನ್ಯುಃ||
ಆಗ ರಥಾನೀಕದ ಎದುರಿನಿಂದ ಸರ್ವಾಸ್ತ್ರವಿದು, ಕಾಂಚನ-ಬಣ್ಣದ ಕವಚಗಳನ್ನು ತೊಟ್ಟಿದ್ದ ಶೂರ ಅರ್ಜುನನ ಸುತ ಅಭಿಮನ್ಯುವು ವೇಗದಿಂದ ಅಲ್ಲಿಗೆ ಬಂದೊದಗಿದನು.
06056024a ತೇಷಾಂ ಮಹಾಸ್ತ್ರಾಣಿ ಮಹಾರಥಾನಾಂ
ಅಸಕ್ತಕರ್ಮಾ ವಿನಿಹತ್ಯ ಕಾರ್ಷ್ಣಿಃ|
06056024c ಬಭೌ ಮಹಾಮಂತ್ರಹುತಾರ್ಚಿಮಾಲೀ
ಸದೋಗತಃ ಸನ್ಭಗವಾನಿವಾಗ್ನಿಃ||
ಆ ಮಹಾರಥರ ಮಹಾಸ್ತ್ರಗಳನ್ನು ನಿರಸನಗೊಳಿಸಿ ಕಾರ್ಷ್ಣಿಯು ಸಹಿಸಲಸಾಧ್ಯ ಕರ್ಮವನ್ನು ಮಾಡಿ ತೋರಿಸಿ, ಮಹಾಮತ್ರದಿಂದ ಅರ್ಪಿಸಿದ ಆಹುತಿಯನ್ನು ತೆಗೆದುಕೊಂಡ ಭಗವಾನ್ ಅಗ್ನಿಯಂತೆ ಪ್ರಜ್ವಲಿಸಿದನು.
06056025a ತತಃ ಸ ತೂರ್ಣಂ ರುಧಿರೋದಫೇನಾಂ
ಕೃತ್ವಾ ನದೀಂ ವೈಶಸನೇ ರಿಪೂಣಾಂ|
06056025c ಜಗಾಮ ಸೌಭದ್ರಮತೀತ್ಯ ಭೀಷ್ಮೋ
ಮಹಾರಥಂ ಪಾರ್ಥಮದೀನಸತ್ತ್ವಃ||
ಆಗ ಬೇಗನೇ ರಕ್ತದ ನೀರು ಮತ್ತು ನೊರೆಗಳ ನದಿಯನ್ನು ರಚಿಸಿ ರಿಪುಗಳನ್ನು ಯಮನಲ್ಲಿಗೆ ಕಳುಹಿಸಿ ಅದೀನ ಸತ್ತ್ವ ಭೀಷ್ಮನು ಸೌಭದ್ರನನ್ನು ಅತಿಕ್ರಮಿಸಿ ಮಹಾರಥ ಪಾರ್ಥನಲ್ಲಿಗೆ ಹೋದನು.
06056026a ತತಃ ಪ್ರಹಸ್ಯಾದ್ಭುತದರ್ಶನೇನ
ಗಾಂಡೀವನಿರ್ಹ್ವಾದಮಹಾಸ್ವನೇನ|
06056026c ವಿಪಾಠಜಾಲೇನ ಮಹಾಸ್ತ್ರಜಾಲಂ
ವಿನಾಶಯಾಮಾಸ ಕಿರೀಟಮಾಲೀ||
ಆಗ ಅವನ ಅದ್ಭುತ ದರ್ಶನದಿಂದ ನಗುತ್ತಾ ಕಿರೀಟಮಾಲಿಯು ಗಾಂಡೀವವನ್ನು ಮಹಾಸ್ವನದಿಂದ ಟೇಂಕರಿಸಿ ವಿಪಾಠಜಾಲವೆಂಬ ಮಹಾಸ್ತ್ರಜಾಲದಿಂದ ಸೇನೆಗಳನ್ನು ನಾಶಮಾಡತೊಡಗಿದನು.
06056027a ತಮುತ್ತಮಂ ಸರ್ವಧನುರ್ಧರಾಣಾಂ
ಅಸಕ್ತಕರ್ಮಾ ಕಪಿರಾಜಕೇತುಃ|
06056027c ಭೀಷ್ಮಂ ಮಹಾತ್ಮಾಭಿವವರ್ಷ ತೂರ್ಣಂ
ಶರೌಘಜಾಲೈರ್ವಿಮಲೈಶ್ಚ ಭಲ್ಲೈಃ||
ಸರ್ವಧನುರ್ಧರರಲ್ಲಿ ಉತ್ತಮನಾದ ಮಹಾತ್ಮ ಭೀಷ್ಮನ ಮೇಲೆ ಅಸಕ್ತಕರ್ಮ ಕಪಿರಾಜಕೇತುವು ಬೇಗನೆ ವಿಮಲ ಭಲ್ಲಗಳ ಶರಜಾಲಗಳ ಮಳೆಯನ್ನು ಸುರಿಸಿದನು.
06056028a ಏವಂವಿಧಂ ಕಾರ್ಮುಕಭೀಮನಾದಂ
ಅದೀನವತ್ಸತ್ಪುರುಷೋತ್ತಮಾಭ್ಯಾಂ|
06056028c ದದರ್ಶ ಲೋಕಃ ಕುರುಸೃಂಜಯಾಶ್ಚ
ತದ್ದ್ವೈರಥಂ ಭೀಷ್ಮಧನಂಜಯಾಭ್ಯಾಂ||
ಈ ರೀತಿ ಸತ್ಪುರುಷೋತ್ತಮರಾದ ಭೀಷ್ಮ-ಧನಂಜಯರಿಬ್ಬರ ಧನುಸ್ಸುಗಳ ಭಯಂಕರ ನಿನಾದವನ್ನೂ, ದೈನ್ಯರಹಿತ ಆ ದ್ವೈರಥಯುದ್ಧವನ್ನು ಕುರುಸೃಂಜಯರೂ ಲೋಕವೂ ನೋಡಿತು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾರ್ಜುನದ್ವೈರಥೇ ಷಟ್ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾರ್ಜುನದ್ವೈರಥ ಎನ್ನುವ ಐವತ್ತಾರನೇ ಅಧ್ಯಾಯವು.