ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ
೫
ಭೌಮಗುಣಕಥನ
“ಭೂಮಿಯ ಐಶ್ವರ್ಯವನ್ನು ಇಚ್ಛಿಸಿ ಈ ಎಲ್ಲ ರಾಜರುಗಳೂ ಯುದ್ಧಕ್ಕಾಗಿ ಇಲ್ಲಿ ಸೇರಿದ್ದಾರೆಂದರೆ ಭೂಮಿಯು ಮಹಾ ಗುಣವತಿಯಾಗಿರಬೇಕು; ಭೂಮಿಯ ಗುಣಗಳನ್ನು ಹೇಳು” ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಭೂಮಿಯ ಗುಣಗಳನ್ನು ಹೇಳಲು ಪ್ರಾರಂಭಿಸಿದುದು (೧-೨೧).
06005001 ವೈಶಂಪಾಯನ ಉವಾಚ|
06005001a ಏವಮುಕ್ತ್ವಾ ಯಯೌ ವ್ಯಾಸೋ ಧೃತರಾಷ್ಟ್ರಾಯ ಧೀಮತೇ|
06005001c ಧೃತರಾಷ್ಟ್ರೋಽಪಿ ತಚ್ಚ್ರುತ್ವಾ ಧ್ಯಾನಮೇವಾನ್ವಪದ್ಯತ||
ವೈಶಂಪಾಯನನು ಹೇಳಿದನು: “ಹೀಗೆ ಧೀಮತ ಧೃತರಾಷ್ಟ್ರನಿಗೆ ಹೇಳಿ ವ್ಯಾಸನು ಹೋದನು. ಅದನ್ನು ಕೇಳಿ ಧೃತರಾಷ್ಟ್ರನಾದರೋ ಯೋಚನೆಯಲ್ಲಿ ಬಿದ್ದನು.
06005002a ಸ ಮುಹೂರ್ತಮಿವ ಧ್ಯಾತ್ವಾ ವಿನಿಃಶ್ವಸ್ಯ ಮುಹುರ್ಮುಹುಃ|
06005002c ಸಂಜಯಂ ಸಂಶಿತಾತ್ಮಾನಮಪೃಚ್ಛದ್ ಭರತರ್ಷಭ||
ಭರತರ್ಷಭ! ಒಂದು ಕ್ಷಣ ಆಲೋಚಿಸಿ, ಮತ್ತೆ ಮತ್ತೆ ನಿಟ್ಟಿಸಿರು ಬಿಡುತ್ತಾ ಸಂಶಿತಾತ್ಮ ಸಂಜಯನನ್ನು ಕೇಳಿದನು:
06005003a ಸಂಜಯೇಮೇ ಮಹೀಪಾಲಾಃ ಶೂರಾ ಯುದ್ಧಾಭಿನಂದಿನಃ|
06005003c ಅನ್ಯೋನ್ಯಮಭಿನಿಘ್ನಂತಿ ಶಸ್ತ್ರೈರುಚ್ಚಾವಚೈರಪಿ||
“ಸಂಜಯ! ಯುದ್ಧದಲ್ಲಿ ಸಂತೋಷಪಡುವ ಈ ಶೂರ ಮಹೀಪಾಲರು ಅನ್ಯೋನ್ಯರನ್ನು ಶಸ್ತ್ರಗಳಿಂದ ಹೊಡೆಯುವವರಿದ್ದಾರೆ.
06005004a ಪಾರ್ಥಿವಾಃ ಪೃಥಿವೀಹೇತೋಃ ಸಮಭಿತ್ಯಕ್ತಜೀವಿತಾಃ|
06005004c ನ ಚ ಶಾಮ್ಯಂತಿ ನಿಘ್ನಂತೋ ವರ್ಧಯಂತೋ ಯಮಕ್ಷಯಂ||
ಭೂಮಿಗಾಗಿ ಈ ಪಾರ್ಥಿವರು ತಮ್ಮ ಜೀವವನ್ನು ತೊರೆದವರಾಗಿ ಪರಸ್ಪರರನ್ನು ಕೊಂದು ಯಮಕ್ಷಯವನ್ನು ವೃದ್ಧಿಸದೇ ಶಾಂತರಾಗುವವರಲ್ಲ.
06005005a ಭೌಮಮೈಶ್ವರ್ಯಮಿಚ್ಛಂತೋ ನ ಮೃಷ್ಯಂತೇ ಪರಸ್ಪರಂ|
06005005c ಮನ್ಯೇ ಬಹುಗುಣಾ ಭೂಮಿಸ್ತನ್ಮಮಾಚಕ್ಷ್ವ ಸಂಜಯ||
ಭೂಮಿಯ ಐಶ್ವರ್ಯವನ್ನು ಇಚ್ಛಿಸುವ ಅವರು ಪರಸ್ಪರರನ್ನು ಸಹಿಸುತ್ತಿಲ್ಲ. ಹಾಗಿದ್ದರೆ ಭೂಮಿಗೆ ಬಹಳ ಗುಣಗಳಿರಬಹುದೆಂದು ನನಗನ್ನಿಸುತ್ತದೆ. ಅವುಗಳನ್ನು ನನಗೆ ಹೇಳು ಸಂಜಯ!
06005006a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|
06005006c ಕೋಟ್ಯಶ್ಚ ಲೋಕವೀರಾಣಾಂ ಸಮೇತಾಃ ಕುರುಜಾಂಗಲೇ||
ಬಹಳಷ್ಟು ಸಹಸ್ರ, ಲಕ್ಷ, ಕೋಟಿ, ಅರ್ಬುದ ಸಂಖ್ಯೆಗಳಲ್ಲಿ ಲೋಕವೀರರು ಕುರಜಾಂಗಲದಲ್ಲಿ ಬಂದು ಸೇರಿದ್ದಾರೆ.
06005007a ದೇಶಾನಾಂ ಚ ಪರೀಮಾಣಂ ನಗರಾಣಾಂ ಚ ಸಂಜಯ|
06005007c ಶ್ರೋತುಮಿಚ್ಛಾಮಿ ತತ್ತ್ವೇನ ಯತ ಏತೇ ಸಮಾಗತಾಃ||
ಹೀಗೆ ಬಂದಿರುವವರ ದೇಶ ನಗರಗಳ ಲಕ್ಷಣಗಳ ಕುರಿತು ಸರಿಯಾಗಿ ಕೇಳಲು ಬಯಸುತ್ತೇನೆ ಸಂಜಯ!
06005008a ದಿವ್ಯಬುದ್ಧಿಪ್ರದೀಪೇನ ಯುಕ್ತಸ್ತ್ವಂ ಜ್ಞಾನಚಕ್ಷುಷಾ|
06005008c ಪ್ರಸಾದಾತ್ತಸ್ಯ ವಿಪ್ರರ್ಷೇರ್ವ್ಯಾಸಸ್ಯಾಮಿತತೇಜಸಃ||
ಆ ಅಮಿತ ತೇಜಸ್ವಿ ವಿಪ್ರರ್ಷಿ ವ್ಯಾಸದ ಕರುಣೆಯಿಂದ ನೀನು ದಿವ್ಯ ಬುದ್ಧಿಯ ದೀಪದ ಬೆಳಕಿನಿಂದ ಜ್ಞಾನದ ದೃಷ್ಟಿಯನ್ನು ಪಡೆದುಕೊಂಡಿರುವೆ.”
06005009 ಸಂಜಯ ಉವಾಚ|
06005009a ಯಥಾಪ್ರಜ್ಞಂ ಮಹಾಪ್ರಾಜ್ಞ ಭೌಮಾನ್ವಕ್ಷ್ಯಾಮಿ ತೇ ಗುಣಾನ್|
06005009c ಶಾಸ್ತ್ರಚಕ್ಷುರವೇಕ್ಷಸ್ವ ನಮಸ್ತೇ ಭರತರ್ಷಭ||
ಸಂಜಯನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ನಿನಗೆ ನಮನಗಳು. ನನಗೆ ತಿಳಿದಂತೆ ಭೂಮಿಯ ಗುಣಗಳನ್ನು ಹೇಳುತ್ತೇನೆ. ನಿನ್ನ ಶಾಸ್ತ್ರಗಳ ಕಣ್ಣುಗಳಿಂದ ಇದನ್ನು ಕೇಳು.
06005010a ದ್ವಿವಿಧಾನೀಹ ಭೂತಾನಿ ತ್ರಸಾನಿ ಸ್ಥಾವರಾಣಿ ಚ|
06005010c ತ್ರಸಾನಾಂ ತ್ರಿವಿಧಾ ಯೋನಿರಂಡಸ್ವೇದಜರಾಯುಜಾಃ||
ಇಲ್ಲಿ ಇರುವವುಗಳು ಎರಡು ರೀತಿಯವು: ಚಲಿಸುವವು ಮತ್ತು ಚಲಿಸದೇ ಇರುವವು. ಚಲಿಸುವವುಗಳಲ್ಲಿ ಮೂರು ವಿಧಗಳವು - ಯೋನಿಯಿಂದ ಜನಿಸುವವು, ಅಂಡದಿಂದ ಜನಿಸುವವು ಮತ್ತು ಉಷ್ಣ-ತೇವಗಳಿಂದ ಜನಿಸುವವು.
06005011a ತ್ರಸಾನಾಂ ಖಲು ಸರ್ವೇಷಾಂ ಶ್ರೇಷ್ಠಾ ರಾಜನ್ಜರಾಯುಜಾಃ|
06005011c ಜರಾಯುಜಾನಾಂ ಪ್ರವರಾ ಮಾನವಾಃ ಪಶವಶ್ಚ ಯೇ||
ರಾಜನ್! ಚಲಿಸುವವುಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದವು ಯೋನಿಯಿಂದ ಹುಟ್ಟಿದವು. ಯೋನಿಜನ್ಮರಲ್ಲಿ ಪ್ರಮುಖರಾದವರು ಮಾನವರು ಮತ್ತು ಪಶುಗಳು.
06005012a ನಾನಾರೂಪಾಣಿ ಬಿಭ್ರಾಣಾಸ್ತೇಷಾಂ ಭೇದಾಶ್ಚತುರ್ದಶ|
06005012c ಅರಣ್ಯವಾಸಿನಃ ಸಪ್ತ ಸಪ್ತೈಷಾಂ ಗ್ರಾಮವಾಸಿನಃ||
ನಾನಾರೂಪಗಳಲ್ಲಿರುವ ಇವುಗಳಲ್ಲಿ ಹದಿನಾಲ್ಕು ಭೇದಗಳಿವೆ. ಅವುಗಳಲ್ಲಿ ಏಳು ಅರಣ್ಯಗಳಲ್ಲಿ ವಾಸಿಸುವಂಥವು (ವನ್ಯ) ಮತ್ತು ಇನ್ನೊಂದು ಏಳು ಗ್ರಾಮವಾಸಿಗಳು.
06005013a ಸಿಂಹವ್ಯಾಘ್ರವರಾಹಾಶ್ಚ ಮಹಿಷಾ ವಾರಣಾಸ್ತಥಾ|
06005013c ಋಕ್ಷಾಶ್ಚ ವಾನರಾಶ್ಚೈವ ಸಪ್ತಾರಣ್ಯಾಃ ಸ್ಮೃತಾ ನೃಪ||
ನೃಪ! ಸಿಂಹ, ಹುಲಿ, ಹಂದಿ, ಕಾಡೆಮ್ಮೆ, ಆನೆ, ಕರಡಿ, ಮತ್ತು ಮಂಗಗಳು ಈ ಏಳು ಅರಣ್ಯವಾಸಿಗಳೆಂದು ಹೇಳುತ್ತಾರೆ.
06005014a ಗೌರಜೋ ಮನುಜೋ ಮೇಷೋ ವಾಜ್ಯಶ್ವತರಗರ್ದಭಾಃ|
06005014c ಏತೇ ಗ್ರಾಮ್ಯಾಃ ಸಮಾಖ್ಯಾತಾಃ ಪಶವಃ ಸಪ್ತ ಸಾಧುಭಿಃ||
ಹಸು, ಆಡು, ಕುರಿ, ಮನುಷ್ಯ, ಕುದುರೆ, ಹೇಸರಗತ್ತೆ ಮತ್ತು ಕತ್ತೆ ಈ ಏಳು ಪಶುಗಳು ಗ್ರಾಮ್ಯವೆಂದೂ ಸಾಧುಗಳೆಂದೂ ಹೇಳಲ್ಪಟ್ಟಿವೆ.
06005015a ಏತೇ ವೈ ಪಶವೋ ರಾಜನ್ಗ್ರಾಮ್ಯಾರಣ್ಯಾಶ್ಚತುರ್ದಶ|
06005015c ವೇದೋಕ್ತಾಃ ಪೃಥಿವೀಪಾಲ ಯೇಷು ಯಜ್ಞಾಃ ಪ್ರತಿಷ್ಠಿತಾಃ||
ರಾಜನ್! ಈ ಹದಿನಾಲ್ಕು ಗ್ರಾಮ್ಯ ಮತ್ತು ಅರಣ್ಯ ಪಶುಗಳ ಕುರಿತು ವೇದಗಳಲ್ಲಿ ಹೇಳಲಾಗಿದೆ[1]. ಪೃಥಿವೀಪಾಲ! ಇವುಗಳ ಮೇಲೆಯೇ ಯಜ್ಞಗಳು ಅವಲಂಬಿಸಿವೆ.
06005016a ಗ್ರಾಮ್ಯಾಣಾಂ ಪುರುಷಃ ಶ್ರೇಷ್ಠಃ ಸಿಂಹಶ್ಚಾರಣ್ಯವಾಸಿನಾಂ|
06005016c ಸರ್ವೇಷಾಮೇವ ಭೂತಾನಾಮನ್ಯೋನ್ಯೇನಾಭಿಜೀವನಂ||
ಗ್ರಾಮ್ಯ ಪಶುಗಳಲ್ಲಿ ಪುರುಷನು ಶ್ರೇಷ್ಠ[2] ಮತ್ತು ಅರಣ್ಯವಾಸಿಗಳಲ್ಲಿ ಸಿಂಹವು ಶ್ರೇಷ್ಠ. ಅನ್ಯೋನ್ಯರೊಂದಿಗೆ ಜೀವನವನ್ನು ಅವಲಂಬಿಸಿಕೊಂಡು ಇವೆಲ್ಲವೂ ಜೀವಿಸುತ್ತವೆ.
06005017a ಉದ್ಭಿಜ್ಜಾಃ[3] ಸ್ಥಾವರಾಃ ಪ್ರೋಕ್ತಾಸ್ತೇಷಾಂ ಪಂಚೈವ ಜಾತಯಃ|
06005017c ವೃಕ್ಷಗುಲ್ಮಲತಾವಲ್ಲ್ಯಸ್ತ್ವಕ್ಸಾರಾಸ್ತೃಣಜಾತಯಃ||
ಸಸ್ಯಗಳು ಚಲಿಸದೇ ಇರುವವು. ಇವುಗಳಲ್ಲಿ ಐದು ಜಾತಿಗಳಿವೆಯೆಂದು ಹೇಳುತ್ತಾರೆ: ವೃಕ್ಷ (ಮರ), ಗುಲ್ಮ[4], ಲತೆ[5], ವಲ್ಲಿ[6], ಮತ್ತು ತ್ವಕ್ಷಾರ[7]ಗಳು.
06005018a ಏಷಾಂ ವಿಂಶತಿರೇಕೋನಾ ಮಹಾಭೂತೇಷು ಪಂಚಸು|
06005018c ಚತುರ್ವಿಂಶತಿರುದ್ದಿಷ್ಟಾ ಗಾಯತ್ರೀ ಲೋಕಸಮ್ಮತಾ||
ಈ ಹತ್ತೊಂಭತ್ತು ಮತ್ತು ಐದು ಮಹಾಭೂತಗಳು - ಒಟ್ಟು ಇಪ್ಪತ್ನಾಲ್ಕು ಗಾಯತ್ರಿಯೆಂದು ಲೋಕಸಮ್ಮತಗೊಂಡಿದೆ[8].
06005019a ಯ ಏತಾಂ ವೇದ ಗಾಯತ್ರೀಂ ಪುಣ್ಯಾಂ ಸರ್ವಗುಣಾನ್ವಿತಾಂ|
06005019c ತತ್ತ್ವೇನ ಭರತಶ್ರೇಷ್ಠ ಸ ಲೋಕಾನ್ನ ಪ್ರಣಶ್ಯತಿ||
ಭರತಶ್ರೇಷ್ಠ! ಈ ಪುಣ್ಯೆ ಸರ್ವಗುಣಾನ್ವಿತೆ ಗಾಯತ್ರಿಯನ್ನು ತತ್ವಶಃ[9] ತಿಳಿದುಕೊಂಡವರು ಈ ಲೋಕಗಳಲ್ಲಿ ನಾಶಹೊಂದುವುದಿಲ್ಲ.
06005020a ಭೂಮೌ ಹಿ ಜಾಯತೇ ಸರ್ವಂ ಭೂಮೌ ಸರ್ವಂ ಪ್ರಣಶ್ಯತಿ|
06005020c ಭೂಮಿಃ ಪ್ರತಿಷ್ಠಾ ಭೂತಾನಾಂ ಭೂಮಿರೇವ ಪರಾಯಣಂ||
ಇವೆಲ್ಲವೂ ಭೂಮಿಯಲ್ಲಿಯೇ ಹುಟ್ಟುತ್ತವೆ. ಮತ್ತು ಎಲ್ಲವೂ ಭೂಮಿಯಲ್ಲಿಯೇ ನಾಶಹೊಂದುತ್ತವೆ. ಇರುವ ಎಲ್ಲವಕ್ಕೆ ಭೂಮಿಯೇ ಆಧಾರ. ಭೂಮಿಯೇ ಆಶ್ರಯ.
06005021a ಯಸ್ಯ ಭೂಮಿಸ್ತಸ್ಯ ಸರ್ವಂ ಜಗತ್ ಸ್ಥಾವರಜಂಗಮಂ|
06005021c ತತ್ರಾಭಿಗೃದ್ಧಾ ರಾಜಾನೋ ವಿನಿಘ್ನಂತೀತರೇತರಂ||
ಈ ಭೂಮಿಯು ಯಾರದ್ದೋ ಅವರಿಗೇ ಅದರಲ್ಲಿರುವ ಎಲ್ಲ ಸ್ಥಾವರ-ಜಂಗಮಗಳು ಸೇರುತ್ತವೆ. ಅದನ್ನೇ ಬಯಸಿ ರಾಜರು ಪರಸ್ಪರರನ್ನು ಸಂಹರಿಸುತ್ತಾರೆ.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭೌಮಗುಣಕಥನೇ ಪಂಚಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭೌಮಗುಣಕಥನ ಎನ್ನುವ ಐದನೇ ಅಧ್ಯಾಯವು.
[1]ಸಪ್ತಗ್ರಾಮ್ಯಾಃ ಪಶವಃ ಸಪ್ತಾರಣ್ಯಾಃ|
[2]ಪುರುಷನಿಗೂ ಪಶು ಎಂಬ ಶಬ್ಧವನ್ನು ಬಳಸಲಾಗಿದೆ. ಪುರುಷಂ ವೈ ದೇವಾಃ ಪಶುಪಾಲಭಂತ| ತಸ್ಮಾತ್ರಯಃ ಪಶೂನಾಗೂಂಹಸ್ತಾದಾನಾಃ ಪುರುಷೋ ಹಸ್ತೀ ಮರ್ಕಟಃ| ಎಂಬ ವೇದವಾಕ್ಯವಿದೆ.
[3]ಉದ್ಭಿಜ್ಜಗಳೆಂದರೆ ಭೂಮಿಯನ್ನು ಭೇದಿಸಿಕೊಂಡು ಹುಟ್ಟುವವು.
[4]ಗುಲ್ಮವೆಂದರೆ ಮಧ್ಯದ ಕಾಂಡವಿಲ್ಲದ ಗಿಡ, ದರ್ಭೆ, ಜೆಂಡುಹುಲ್ಲು ಮುಂತಾದವು.
[5]ಬಳ್ಳಿ, ಹಂಬು, ಮರಗಳಿಗೆ ಹಂಬಿಕೊಳ್ಳುವ ಬಳ್ಳಿಗಳು
[6]ನೆಲದ ಮೇಲೆ ಹರಡಿಕೊಳ್ಳುವ ವರ್ಷಮಾತ್ರವಿರುವ - ಸೋರೆಕಾಯಿ, ಸೌತೇಕಾಯಿ - ಮೊದಲಾದ ಬಳ್ಳಿಗಳು
[7]ಕಾಂಡಗಳಿರುವ ಹುಲ್ಲು ಜಾತಿಯವು - ಬಿದಿರು
[8]ಇದೇ ಅಧ್ಯಾಯದ ೧೦ನೆಯ ಶ್ಲೋಕದಲ್ಲಿ ಹೇಳಿದ ಅಂಡಜ ಮತ್ತು ಸ್ವೇದಜಗಳು ಈ ಇಪ್ಪತ್ನಾಲ್ಕರಿಂದ ಹೊರತಾಗಿವೆಯೇ? ಇಲ್ಲ. ಅಂಡಜಗಳಿಗೆ ಮೈಥುನವಿರುವುದರಿಂದ ಅವು ಪಶುಗಳ ಗುಂಪಿಗೆ ಸೇರುತ್ತವೆ. ಸ್ವೇದಜಗಳು ಸಸ್ಯಗಳ ಗುಂಪಿಗೆ ಸೇರುತ್ತವೆ.
[9]ಛಾಂದೋಗ್ಯದಲ್ಲಿ ಗಾಯತ್ರಿಯನ್ನು ಭೂಮಿಯನ್ನಾಕ್ರಮಿಸಿರುವವಳೆಂದೇ ವರ್ಣಿಸಲಾದೆ - ಗಾಯತ್ರೀ ವಾ ಇದಂ ಸರ್ವಂ ಭೂತಂ...ಸೈಷಾ ಚತುಷ್ಪದಾ ಷಡ್ವಿಧಾ ಗಾಯತ್ರೀ ತದೇತದೃತಾಭ್ಯನೂಕ್ತಂ ಏತಾವಾನಸ್ಯ ಮಹಿಮಾ ತತೋ ಜ್ಯಾಯಾಂಶ್ಚ ಪೂರುಷಃ| ಪಾದೋಸ್ಯ ಸರ್ವಾಭೂತಾನೀ| ತ್ರಿಪಾದಸ್ಯಾಮೃತಂ ದಿವಿ||