ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ
೨
ವ್ಯಾಸದರ್ಶನ
ವ್ಯಾಸನು ಸಂಜಯನಿಗೆ ದಿವ್ಯದೃಷ್ಠಿಯನ್ನಿತ್ತು ಧೃತರಾಷ್ಟ್ರನಿಗೆ ಯುದ್ಧದ ವರ್ಣನೆಯನ್ನು ಮಾಡಲು ಹೇಳಿದುದು (೧-೧೪). ಯುದ್ಧದಲ್ಲಿ ಮಹಾಕ್ಷಯವನ್ನು ಸೂಚಿಸುವ ಭಯಾನಕ ನಿಮಿತ್ತಗಳ ಕುರಿತು ವ್ಯಾಸನು ಹೇಳಿದುದು (೧೫-೩೩).
06002001 ವೈಶಂಪಾಯನ ಉವಾಚ|
06002001a ತತಃ ಪೂರ್ವಾಪರೇ ಸಂಧ್ಯೇ ಸಮೀಕ್ಷ್ಯ ಭಗವಾನೃಷಿಃ|
06002001c ಸರ್ವವೇದವಿದಾಂ ಶ್ರೇಷ್ಠೋ ವ್ಯಾಸಃ ಸತ್ಯವತೀಸುತಃ||
06002002a ಭವಿಷ್ಯತಿ ರಣೇ ಘೋರೇ ಭರತಾನಾಂ ಪಿತಾಮಹಃ|
06002002c ಪ್ರತ್ಯಕ್ಷದರ್ಶೀ ಭಗವಾನ್ಭೂತಭವ್ಯಭವಿಷ್ಯವಿತ್||
06002003a ವೈಚಿತ್ರವೀರ್ಯಂ ರಾಜಾನಂ ಸ ರಹಸ್ಯಂ ಬ್ರವೀದಿದಂ|
06002003c ಶೋಚಂತಮಾರ್ತಂ ಧ್ಯಾಯಂತಂ ಪುತ್ರಾಣಾಮನಯಂ ತದಾ||
ವೈಶಂಪಾಯನನು ಹೇಳಿದನು: “ಹೀಗೆ ಪೂರ್ವ-ಪಶ್ಚಿಮ ಮುಖಗಳಾಗಿ ಸೇರಿದ್ದ ಅವರನ್ನು ನೋಡಿ ಭಗವಾನ್ ಋಷಿ, ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸ ಸತ್ಯವತೀ ಸುತ, ಭರತರ ಪಿತಾಮಹ, ಭೂತ-ಭವ್ಯ-ಭವಿಷ್ಯಗಳನ್ನು ತಿಳಿದಿದ್ದ, ಘೋರ ರಣವು ನಡೆಯಲಿದೆಯೆಂದು ಪ್ರತ್ಯಕ್ಷವಾಗಿ ಕಂಡ ಭಗವಾನನು ತನ್ನ ಪುತ್ರರ ಅನ್ಯಾಯದ ಕುರಿತು ಯೋಚಿಸಿ ಶೋಕಿಸಿ ಆರ್ತನಾಗಿರುವ ರಾಜ ವೈಚಿತ್ರವೀರ್ಯನಿಗೆ ರಹಸ್ಯದಲ್ಲಿ ಇದನ್ನು ಹೇಳಿದನು.
06002004 ವ್ಯಾಸ ಉವಾಚ|
06002004a ರಾಜನ್ಪರೀತಕಾಲಾಸ್ತೇ ಪುತ್ರಾಶ್ಚಾನ್ಯೇ ಚ ಭೂಮಿಪಾಃ|
06002004c ತೇ ಹನಿಷ್ಯಂತಿ ಸಂಗ್ರಾಮೇ ಸಮಾಸಾದ್ಯೇತರೇತರಂ||
ವ್ಯಾಸನು ಹೇಳಿದನು: “ರಾಜನ್! ನಿನ್ನ ಪುತ್ರರು ಮತ್ತು ಅನ್ಯ ಭೂಮಿಪರ ಕಾಲವು ಬಂದಾಗಿದೆ. ಅವರು ಸಂಗ್ರಾಮದಲ್ಲಿ ಪರಸ್ಪರರರನ್ನು ಕೊಲ್ಲುತ್ತಾರೆ.
06002005a ತೇಷು ಕಾಲಪರೀತೇಷು ವಿನಶ್ಯತ್ಸು ಚ ಭಾರತ|
06002005c ಕಾಲಪರ್ಯಾಯಮಾಜ್ಞಾಯ ಮಾ ಸ್ಮ ಶೋಕೇ ಮನಃ ಕೃಥಾಃ||
ಭಾರತ! ಕಾಲದ ಬದಲಾವಣೆಗಳಿಂದ ಆಗುವ ಈ ವಿನಾಶವನ್ನು ಕಾಲಪರ್ಯಾಯವೆಂದು ತಿಳಿದು ಮನಸ್ಸಿನಲ್ಲಿ ಶೋಕಪಡಬೇಡ.
06002006a ಯದಿ ತ್ವಿಚ್ಛಸಿ ಸಂಗ್ರಾಮೇ ದ್ರಷ್ಟುಮೇನಂ ವಿಶಾಂ ಪತೇ|
06002006c ಚಕ್ಷುರ್ದದಾನಿ ತೇ ಹಂತ ಯುದ್ಧಮೇತನ್ನಿಶಾಮಯ||
ವಿಶಾಂಪತೇ! ಈ ಸಂಗ್ರಾಮವನ್ನು ನೋಡಲು ಬಯಸುವೆಯಾದರೆ ನಿನಗೆ ಕಣ್ಣುಗಳನ್ನು ಕೊಡುತ್ತೇನೆ. ಅದನ್ನು ನೋಡು!”
06002007 ಧೃತರಾಷ್ಟ್ರ ಉವಾಚ|
06002007a ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ|
06002007c ಯುದ್ಧಮೇತತ್ತ್ವಶೇಷೇಣ ಶೃಣುಯಾನ್ತವ ತೇಜಸಾ||
ಧೃತರಾಷ್ಟ್ರನು ಹೇಳಿದನು: “ಬ್ರಹ್ಮರ್ಷಿಸತ್ತಮ! ಜ್ಞಾತಿವಧೆಯನ್ನು ನೋಡಲು ನನಗೆ ಇಷ್ಟವಿಲ್ಲ. ಆದರೆ ನಿನ್ನ ತೇಜಸ್ಸಿನಿಂದ ಈ ಯುದ್ಧದ ಕುರಿತು ಯಾವುದನ್ನೂ ಬಿಟ್ಟುಹೋಗದ ಹಾಗೆ ಕೇಳುತ್ತೇನೆ.””
06002008 ವೈಶಂಪಾಯನ ಉವಾಚ|
06002008a ತಸ್ಮಿನ್ನನಿಚ್ಛತಿ ದ್ರಷ್ಟುಂ ಸಂಗ್ರಾಮಂ ಶ್ರೋತುಮಿಚ್ಛತಿ|
06002008c ವರಾಣಾಮೀಶ್ವರೋ ದಾತಾ ಸಂಜಯಾಯ ವರಂ ದದೌ||
ವೈಶಂಪಾಯನನು ಹೇಳಿದನು: “ಅವನು ಸಂಗ್ರಾಮವನ್ನು ನೋಡಲು ಇಚ್ಛಿಸುವುದಿಲ್ಲ. ಕೇಳಲು ಬಯಸುತ್ತಾನೆ ಎಂದು ತಿಳಿದ ಈಶ್ವರ ವ್ಯಾಸನು ಸಂಜಯನಿಗೆ ವರವನ್ನಿತ್ತನು.
06002009 ವ್ಯಾಸ ಉವಾಚ|
06002009a ಏಷ ತೇ ಸಂಜಯೋ ರಾಜನ್ಯುದ್ಧಮೇತದ್ವದಿಷ್ಯತಿ|
06002009c ಏತಸ್ಯ ಸರ್ವಂ ಸಂಗ್ರಾಮೇ ನಪರೋಕ್ಷಂ ಭವಿಷ್ಯತಿ||
ವ್ಯಾಸನು ಹೇಳಿದನು: “ರಾಜನ್! ಈ ಸಂಜಯನು ನಿನಗೆ ಯುದ್ಧದಲ್ಲಿ ನಡೆಯುವ ಸಕಲ ಸಮಾಚಾರಗಳನ್ನೂ ಹೇಳುತ್ತಾನೆ. ಸಂಗ್ರಾಮದಲ್ಲಿ ಎಲ್ಲವೂ ಇವನಿಗೆ ಕಾಣುವಂತಾಗುತ್ತದೆ.
06002010a ಚಕ್ಷುಷಾ ಸಂಜಯೋ ರಾಜನ್ದಿವ್ಯೇನೈಷ ಸಮನ್ವಿತಃ|
06002010c ಕಥಯಿಷ್ಯತಿ ತೇ ಯುದ್ಧಂ ಸರ್ವಜ್ಞಶ್ಚ ಭವಿಷ್ಯತಿ||
ರಾಜನ್! ದಿವ್ಯದೃಷ್ಟಿಯಿಂದ ಸಮನ್ವಿತನಾದ ಈ ಸಂಜಯನು ಸರ್ವಜ್ಞನಾಗುತ್ತಾನೆ ಮತ್ತು ನಿನಗೆ ಯುದ್ಧದ ಎಲ್ಲವನ್ನೂ ಹೇಳುತ್ತಾನೆ.
06002011a ಪ್ರಕಾಶಂ ವಾ ರಹಸ್ಯಂ ವಾ ರಾತ್ರೌ ವಾ ಯದಿ ವಾ ದಿವಾ|
06002011c ಮನಸಾ ಚಿಂತಿತಮಪಿ ಸರ್ವಂ ವೇತ್ಸ್ಯತಿ ಸಂಜಯಃ||
ಬಹಿರಂಗವಾಗಿರಲಿ ಅಥವಾ ರಹಸ್ಯವಾಗಿರಲಿ, ರಾತ್ರಿಯಾಗಿರಲಿ ಅಥವಾ ದಿನವಾಗಿರಲಿ, ಮನಸ್ಸಿನಲ್ಲಿ ಯೋಚಿಸಿದ್ದು ಕೂಡ ಏಲ್ಲವೂ ಸಂಜಯನಿಗೆ ತಿಳಿಯುತ್ತದೆ.
06002012a ನೈನಂ ಶಸ್ತ್ರಾಣಿ ಭೇತ್ಸ್ಯಂತಿ ನೈನಂ ಬಾಧಿಷ್ಯತೇ ಶ್ರಮಃ|
06002012c ಗಾವಲ್ಗಣಿರಯಂ ಜೀವನ್ಯುದ್ಧಾದಸ್ಮಾದ್ವಿಮೋಕ್ಷ್ಯತೇ||
ಇವನನ್ನು ಶಸ್ತ್ರಗಳು ಭೇದಿಸುವುದಿಲ್ಲ. ಇವನನ್ನು ಶ್ರಮವು ಬಾಧಿಸುವುದಿಲ್ಲ. ಈ ಗಾವಲ್ಗಣಿಯು ಜೀವಂತನಾಗಿಯೇ ಯುದ್ಧದಿಂದ ಆಚೆ ಬರುತ್ತಾನೆ.
06002013a ಅಹಂ ಚ ಕೀರ್ತಿಮೇತೇಷಾಂ ಕುರೂಣಾಂ ಭರತರ್ಷಭ|
06002013c ಪಾಂಡವಾನಾಂ ಚ ಸರ್ವೇಷಾಂ ಪ್ರಥಯಿಷ್ಯಾಮಿ ಮಾ ಶುಚಃ||
ಭರತರ್ಷಭ! ನಾನಾದರೋ ಈ ಕುರುಗಳ ಮತ್ತು ಪಾಂಡವರ ಎಲ್ಲರ ಕೀರ್ತಿಯನ್ನು ಪಸರಿಸುತ್ತೇನೆ. ಶೋಕಿಸಬೇಡ.
06002014a ದಿಷ್ಟಮೇತತ್ಪುರಾ ಚೈವ ನಾತ್ರ ಶೋಚಿತುಮರ್ಹಸಿ[1]|
06002014c ನ ಚೈವ ಶಕ್ಯಂ ಸಮ್ಯಂತುಂ ಯತೋ ಧರ್ಮಸ್ತತೋ ಜಯಃ||
ಇದು ಮೊದಲೇ ದೈವನಿಶ್ಚಯವಾದುದು. ಇದರ ಕುರಿತು ಶೋಕಿಸಬಾರದು. ಅದನ್ನು ತಡೆಯಲು ಶಕ್ಯವಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.””
06002015 ವೈಶಂಪಾಯನ ಉವಾಚ|
06002015a ಏವಮುಕ್ತ್ವಾ ಸ ಭಗವಾನ್ಕುರೂಣಾಂ ಪ್ರಪಿತಾಮಹಃ|
06002015c ಪುನರೇವ ಮಹಾಬಾಹುಂ ಧೃತರಾಷ್ಟ್ರಂ ಉವಾಚ ಹ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಕುರುಗಳ ಪ್ರಪಿತಾಮಹ ಭಗವಾನನು ಪುನಃ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು:
06002016a ಇಹ ಯುದ್ಧೇ ಮಹಾರಾಜ ಭವಿಷ್ಯತಿ ಮಹಾನ್ ಕ್ಷಯಃ|
06002016c ಯಥೇಮಾನಿ ನಿಮಿತ್ತಾನಿ ಭಯಾಯಾದ್ಯೋಪಲಕ್ಷಯೇ||
“ಮಹಾರಾಜ! ಭಯವನ್ನು ಸೂಚಿಸುವ ಈ ನಿಮಿತ್ತಗಳ ಪ್ರಕಾರ ಈ ಯುದ್ಧದಲ್ಲಿ ಮಹಾ ಕ್ಷಯವುಂಟಾಗುತ್ತದೆ.
06002017a ಶ್ಯೇನಾ ಗೃಧ್ರಾಶ್ಚ ಕಾಕಾಶ್ಚ ಕಂಕಾಶ್ಚ ಸಹಿತಾ ಬಲೈಃ|
06002017c ಸಂಪತಂತಿ ವನಾಂತೇಷು ಸಮವಾಯಾಂಶ್ಚ ಕುರ್ವತೇ||
ಗಿಡುಗ, ಹದ್ದು, ಕಾಗೆ, ಮತ್ತು ಕಂಕಗಳು ಗುಂಪುಗುಂಪಾಗಿ ಮರಗಳ ಮೇಲೆ ಬಂದಿಳಿಯುತ್ತಿವೆ ಮತ್ತು ಕೆಳಗೆ ನೋಡುತ್ತಾ ಕಾಯುತ್ತಿವೆ.
06002018a ಅತ್ಯುಗ್ರಂ ಚ ಪ್ರಪಶ್ಯಂತಿ ಯುದ್ಧಮಾನಂದಿನೋ ದ್ವಿಜಾಃ|
06002018c ಕ್ರವ್ಯಾದಾ ಭಕ್ಷಯಿಷ್ಯಂತಿ ಮಾಂಸಾನಿ ಗಜವಾಜಿನಾಂ||
ಉಗ್ರವಾದವುಗಳು ಯುದ್ಧದಲ್ಲಿ ಕುದುರೆ ಆನೆಗಳ ಮಾಂಸವನ್ನು ಭಕ್ಷಿಸಲು ಕಾಯುತ್ತ ಕುಳಿತಿವೆ.
06002019a ಖಟಾಖಟೇತಿ ವಾಶಂತೋ ಭೈರವಂ ಭಯವೇದಿನಃ|
06002019c ಕಹ್ವಾಃ ಪ್ರಯಾಂತಿ ಮಧ್ಯೇನ ದಕ್ಷಿಣಾಮಭಿತೋ ದಿಶಂ||
ಖಟಾ ಖಟಾ ಎಂದು ಭೈರವ ಭಯವೇದನೆಯನ್ನುಂಟುಮಾಡುವ ಕೂಗನ್ನು ಕೂಗುತ್ತಾ ಕಾಗೆಗಳು ಮಧ್ಯದಿಂದ ದಕ್ಷಿಣಾಭಿಮುಖವಾಗಿ ಹಾರಿಹೋಗುತ್ತಿವೆ.
06002020a ಉಭೇ ಪೂರ್ವಾಪರೇ ಸಂಧ್ಯೇ ನಿತ್ಯಂ ಪಶ್ಯಾಮಿ ಭಾರತ|
06002020c ಉದಯಾಸ್ತಮನೇ ಸೂರ್ಯಂ ಕಬಂಧೈಃ ಪರಿವಾರಿತಂ||
ಭಾರತ! ಬೆಳಿಗ್ಗೆ ಮತ್ತು ಸಂಧ್ಯಾಕಾಲಗಳೆರಡೂ ಹೊತ್ತು ನಿತ್ಯವೂ ನಾನು ಉದಯ-ಅಸ್ತಮಾನಗಳ ವೇಳೆಗಳಲ್ಲಿ ಸೂರ್ಯನು ಕಬಂಧ (ತಲೆಯಿಲ್ಲದ ದೇಹ) ಗಳಿಂದ ಸುತ್ತುವರೆದಿದ್ದುದನ್ನು ನೋಡುತ್ತಿದ್ದೇನೆ.
06002021a ಶ್ವೇತಲೋಹಿತಪರ್ಯಂತಾಃ ಕೃಷ್ಣಗ್ರೀವಾಃ ಸವಿದ್ಯುತಃ|
06002021c ತ್ರಿವರ್ಣಾಃ ಪರಿಘಾಃ ಸಂಧೌ ಭಾನುಮಾವಾರಯಂತ್ಯುತ||
ಬಿಳಿ ಮತ್ತು ಕೆಂಪು ರೆಕ್ಕೆಗಳು ಹಾಗೂ ಕಪ್ಪು ಕೊರಳು - ಈ ಮೂರು ವರ್ಣದ ಪಕ್ಷಿಗಳು ಸಂಧ್ಯಾಸಮಯದಲ್ಲಿ ಸೂರ್ಯನನ್ನು ಗುಂಪಾಗಿ ಮುತ್ತುತ್ತಿವೆ.
06002022a ಜ್ವಲಿತಾರ್ಕೇಂದುನಕ್ಷತ್ರಂ ನಿರ್ವಿಶೇಷದಿನಕ್ಷಪಂ|
06002022c ಅಹೋರಾತ್ರಂ ಮಯಾ ದೃಷ್ಟಂ ತತ್ಕ್ಷಯಾಯ ಭವಿಷ್ಯತಿ||
ಪ್ರಜ್ವಲಿಸುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವಿಶೇಷ ದಿನಗಳಲ್ಲದಿದ್ದರೂ ನಾನು ಆಹೋ ರಾತ್ರಿ ನೋಡುತ್ತಿದ್ದೇನೆ. ಇದರಿಂದ ಕ್ಷಯವಾಗುತ್ತದೆ.
06002023a ಅಲಕ್ಷ್ಯಃ ಪ್ರಭಯಾ ಹೀನಃ ಪೌರ್ಣಮಾಸೀಂ ಚ ಕಾರ್ತ್ತಿಕೀಂ|
06002023c ಚಂದ್ರೋಽಭೂದಗ್ನಿವರ್ಣಶ್ಚ ಸಮವರ್ಣೇ ನಭಸ್ತಲೇ||
ಕಾರ್ತೀಕ ಪೂರ್ಣಿಮೆಯಂದೂ ಪ್ರಭೆಯನ್ನು ಕಳೆದುಕೊಂಡ ಚಂದ್ರನು ಕಾಣದಂತಾಗಿದ್ದಾನೆ. ಅವನು ನಭಸ್ತಲದಲ್ಲಿ ಅಗ್ನಿವರ್ಣದ ಮಂಡಲದಲ್ಲಿ ಕಾಣುತ್ತಾನೆ.
06002024a ಸ್ವಪ್ಸ್ಯಂತಿ ನಿಹತಾ ವೀರಾ ಭೂಮಿಮಾವೃತ್ಯ ಪಾರ್ಥಿವಾಃ|
06002024c ರಾಜಾನೋ ರಾಜಪುತ್ರಾಶ್ಚ ಶೂರಾಃ ಪರಿಘಬಾಹವಃ||
ಪರಿಘದಂಥಹ ಬಾಹುಗಳಿಂದ ವೀರ ಪಾರ್ಥಿವರು, ರಾಜರು, ರಾಜಪುತ್ರರು, ಶೂರರು ಭೂಮಿಯಲ್ಲಿ ಹತರಾಗಿ ಮಲಗುತ್ತಾರೆ.
06002025a ಅಂತರಿಕ್ಷೇ ವರಾಹಸ್ಯ ವೃಷದಂಶಸ್ಯ ಚೋಭಯೋಃ|
06002025c ಪ್ರಣಾದಂ ಯುಧ್ಯತೋ ರಾತ್ರೌ ರೌದ್ರಂ ನಿತ್ಯಂ ಪ್ರಲಕ್ಷಯೇ||
ನಿತ್ಯವೂ ರಾತ್ರಿಯಲ್ಲಿ ಅಂತರಿಕ್ಷದಲ್ಲಿ ವರಾಹ ವೃಷದಂಶಗಳೀರ್ವರ ರೌದ್ರ ರೋದನೆಯು ಕ್ಷಯವನ್ನು ಸೂಚಿಸುತ್ತದೆ.
06002026a ದೇವತಾಪ್ರತಿಮಾಶ್ಚಾಪಿ ಕಂಪಂತಿ ಚ ಹಸಂತಿ ಚ|
06002026c ವಮಂತಿ ರುಧಿರಂ ಚಾಸ್ಯೈಃ ಸ್ವಿದ್ಯಂತಿ ಪ್ರಪತಂತಿ ಚ||
ದೇವತೆಗಳ ಪ್ರತಿಮೆಗಳೂ ಕೂಡ ಅಲುಗಾಡುತ್ತವೆ ಮತ್ತು ನಗುತ್ತವೆ. ಕೆಲವೊಮ್ಮೆ ರಕ್ತವನ್ನು ಕಾರುತ್ತವೆ, ಮುಕ್ಕರಿಸಿ ಬೀಳುತ್ತಿವೆ.
06002027a ಅನಾಹತಾ ದುಂದುಭಯಃ ಪ್ರಣದಂತಿ ವಿಶಾಂ ಪತೇ|
06002027c ಅಯುಕ್ತಾಶ್ಚ ಪ್ರವರ್ತಂತೇ ಕ್ಷತ್ರಿಯಾಣಾಂ ಮಹಾರಥಾಃ||
ವಿಶಾಂಪತೇ! ಬಾರಿಸದೆಯೇ ನಗಾರಿಗಳು ಶಬ್ಧಮಾಡುತ್ತಿವೆ. ಕ್ಷತ್ರಿಯರ ಮಹಾರಥಗಳು ಕುದುರೆಗಳನ್ನು ಕಟ್ಟದೆಯೇ ನಡೆಯುತ್ತಿವೆ.
06002028a ಕೋಕಿಲಾಃ ಶತಪತ್ರಾಶ್ಚ ಚಾಷಾ ಭಾಸಾಃ ಶುಕಾಸ್ತಥಾ|
06002028c ಸಾರಸಾಶ್ಚ ಮಯೂರಾಶ್ಚ ವಾಚೋ ಮುಂಚಂತಿ ದಾರುಣಾಃ||
ಕೋಕಿಲಗಳು, ಮರಕುಟುಕಗಳು, ನೀರು ಕಾರುಂಡೆಗಳು, ಗಿಳಿಗಳು, ಸಾರಸಗಳು, ನವಿಲುಗಳು ದಾರುಣವಾಗಿ ಕೂಗುತ್ತಿವೆ.
06002029a ಗೃಹೀತಶಸ್ತ್ರಾಭರಣಾ ವರ್ಮಿಣೋ ವಾಜಿಪೃಷ್ಠಗಾಃ|
06002029c ಅರುಣೋದಯೇಷು ದೃಶ್ಯಂತೇ ಶತಶಃ ಶಲಭವ್ರಜಾಃ||
ಶಸ್ತ್ರಾಭರಣಗಳನ್ನು ಹಿಡಿದ, ಕವಚಧಾರಿಗಳು ಕುದುರೆಗಳ ಮೇಲೆ ಇರುತ್ತಾರೆ. ಅರುಣೋದಯದಲ್ಲಿ ನೂರಾರು ಚಿಟ್ಟೆಗಳು ಕಾಣುತ್ತವೆ.
06002030a ಉಭೇ ಸಂಧ್ಯೇ ಪ್ರಕಾಶೇತೇ ದಿಶಾಂ ದಾಹಸಮನ್ವಿತೇ|
06002030c ಆಸೀದ್ರುಧಿರವರ್ಷಂ ಚ ಅಸ್ಥಿವರ್ಷಂ ಚ ಭಾರತ||
ಭಾರತ! ಎರಡೂ ಸಂಧ್ಯೆಗಳಲ್ಲಿ ಪ್ರಕಾಶಿಸುವ ದಿಕ್ಕುಗಳು ಬಾಯಾರಿಕೆಗೊಂಡಿವೆಯೋ ಎನ್ನುವಂತೆ ರಕ್ತ ಮತ್ತು ಎಲುಬುಗಳ ಮಳೆಯಾಗುತ್ತಿವೆ.
06002031a ಯಾ ಚೈಷಾ ವಿಶ್ರುತಾ ರಾಜಂಸ್ತ್ರೈಲೋಕ್ಯೇ ಸಾಧುಸಮ್ಮತಾ|
06002031c ಅರುಂಧತೀ ತಯಾಪ್ಯೇಷ ವಸಿಷ್ಠಃ ಪೃಷ್ಠತಃ ಕೃತಃ||
ರಾಜನ್! ತ್ರೈಲೋಕ್ಯಗಳಲ್ಲಿ ಸಾಧುಸಮ್ಮತಳಾದ ಅರುಂಧತಿಯು ವಸಿಷ್ಠನನ್ನು ಹಿಂದೆ ಹಾಕಿದಳೆಂದು ತೋರುತ್ತಿದೆ.
06002032a ರೋಹಿಣೀಂ ಪೀಡಯನ್ನೇಷ ಸ್ಥಿತೋ ರಾಜನ್ ಶನೈಶ್ಚರಃ|
06002032c ವ್ಯಾವೃತ್ತಂ ಲಕ್ಷ್ಮ ಸೋಮಸ್ಯ ಭವಿಷ್ಯತಿ ಮಹದ್ಭಯಂ||
ರಾಜನ್! ರೋಹಿಣಿಯನ್ನು ಪೀಡಿಸುತ್ತಿರುವಂತೆ ಶನೈಶ್ಚರನು ನಿಂತಿದ್ದಾನೆ. ಚಂದ್ರನ ಲಕ್ಷಣವಾಗಿರುವ ಜಿಂಕೆಯು ತನ್ನ ಸ್ಥಾನವನ್ನು ತಪ್ಪಿ ಮಹಾಭಯವುಂಟಾಗಲಿದೆ.
06002033a ಅನಭ್ರೇ ಚ ಮಹಾಘೋರಂ ಸ್ತನಿತಂ ಶ್ರೂಯತೇಽನಿಶಂ|
06002033c ವಾಹನಾನಾಂ ಚ ರುದತಾಂ ಪ್ರಪತಂತ್ಯಶ್ರುಬಿಂದವಃ||
ಮೋಡಗಳಿಲ್ಲದಿದ್ದರೂ ಆಕಾಶದಲ್ಲಿ ಮಹಾಘೋರ ಶಬ್ಧವು ಕೇಳಿಬರುತ್ತಿದೆ. ವಾಹನ ಪ್ರಾಣಿಗಳೆಲ್ಲವೂ ಅಳುತ್ತಾ ಕಣ್ಣೀರನ್ನು ಬೀಳಿಸುತ್ತಿವೆ.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಶ್ರೀವೇದವ್ಯಾಸದರ್ಶನೇ ದ್ವಿತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಶ್ರೀವೇದವ್ಯಾಸದರ್ಶನ ಎನ್ನುವ ಎರಡನೇ ಅಧ್ಯಾಯವು.
[1] ದಿಷ್ಟಮೇತನ್ನರವ್ಯಾಘ್ರ ನಾಭಿಶೋಚಿತುಮರ್ಹಸಿ| ಎಂಬ ಪಾಠಾಂತರವಿದೆ [ಭಾರತ ದರ್ಶನ, ಸಂಪುಟ ೧೨, ಪುಟಸಂಖ್ಯೆ ೧೧].