Aranyaka Parva: Chapter 296

ಆರಣ್ಯಕ ಪರ್ವ: ಆರಣೇಯ ಪರ್ವ

೨೯೬

ನಾಲ್ವರು ಪಾಂಡವರು ಸರೋವರದಲ್ಲಿ ಹತರಾಗಿ ಬಿದ್ದುದು

ಬಾಯಾರಿಕೆಯಿಂದ ಬಳಲಿ ನೀರನ್ನು ತರಲು ನಕುಲನನ್ನು ಹತ್ತಿರದಲ್ಲಿದ್ದ ಕೊಳಕ್ಕೆ ಕಳುಹಿಸುವುದು (೧-೧೦). ಕೇಳುವ ಪ್ರಶ್ನೆಗಳಿಗೆ ಉತ್ತರಿಸದೇ ನೀರನ್ನು ಕುಡಿಯಬೇಡವೆಂದ ಅಶರೀರವಾಣಿಯನ್ನು ಅನಾದರಿಸಿ ನೀರನ್ನು ಕಡಿಯಲು ಹೋದ ನಕುಲನು ಬಿದ್ದುದು (೧೧-೧೩). ಅವನಂತೆ ನೀರುತರಲು ಹೋದ ಸಹದೇವ, ಅರ್ಜುನ ಮತ್ತು ಭೀಮರು ಹಿಂದಿರುಗದೇ ಇದ್ದುದು (೧೪-೩೮). ಯುಧಿಷ್ಠಿರನೇ ಆ ಸರೋವರದ ಬಳಿ ಬಂದು ನೋಡಿ ವಿಸ್ಮಿತನಾದುದು (೩೯-೪೩).

03296001 ಯುಧಿಷ್ಠಿರ ಉವಾಚ|

03296001a ನಾಪದಾಮಸ್ತಿ ಮರ್ಯಾದಾ ನ ನಿಮಿತ್ತಂ ನ ಕಾರಣಂ|

03296001c ಧರ್ಮಸ್ತು ವಿಭಜತ್ಯತ್ರ ಉಭಯೋಃ ಪುಣ್ಯಪಾಪಯೋಃ||

ಯುಧಿಷ್ಠಿರನು ಹೇಳಿದನು: “ಆಪತ್ತಿಗೆ ಗಡಿಯಿಲ್ಲ, ನಿಮಿತ್ತವೂ ಇಲ್ಲ ಮತ್ತು ಕಾರಣವಿಲ್ಲ. ಪುಣ್ಯ ಮತ್ತು ಪಾಪ ಇವೆರಡರ ಪ್ರಕಾರ ಧರ್ಮವು ಅದನ್ನು ಪಾಲುಮಾಡಿ ಇಲ್ಲಿ ನೀಡುತ್ತದೆ.”

03296002 ಭೀಮ ಉವಾಚ|

03296002a ಪ್ರಾತಿಕಾಮ್ಯನಯತ್ಕೃಷ್ಣಾಂ ಸಭಾಯಾಂ ಪ್ರೇಷ್ಯವತ್ತದಾ|

03296002c ನ ಮಯಾ ನಿಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ||

ಭೀಮನು ಹೇಳಿದನು: “ಕೃಷ್ಣೆಯನ್ನು ಸೇವಕಿಯಂತೆ ಸಭೆಗೆ ತಂದ ಆ ಪ್ರತಿಕಾಮಿಯನ್ನು ನಾನು ಅಲ್ಲಿಯೇ ಕೊಲ್ಲಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”

03296003 ಅರ್ಜುನ ಉವಾಚ|

03296003a ವಾಚಸ್ತೀಕ್ಷ್ಣಾಸ್ಥಿಭೇದಿನ್ಯಃ ಸೂತಪುತ್ರೇಣ ಭಾಷಿತಾಃ|

03296003c ಅತಿತೀಕ್ಷ್ಣಾ ಮಯಾ ಕ್ಷಾಂತಾಸ್ತೇನ ಪ್ರಾಪ್ತಾಃ ಸ್ಮ ಸಂಶಯಂ||

ಅರ್ಜುನನು ಹೇಳಿದನು: “ಎಲುಬುಗಳನ್ನು ಭೇದಿಸುವಂಥಹ ತೀಕ್ಷ್ಣ ಮಾತುಗಳನ್ನಾಡಿದ ಸೂತಪುತ್ರನನ್ನು ಅತಿತೀಕ್ಷ್ಣನಾದ ನಾನು ಸಹಿಸಿಕೊಂಡೆನು. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”

03296004 ಸಹದೇವ ಉವಾಚ|

03296004a ಶಕುನಿಸ್ತ್ವಾಂ ಯದಾಜೈಷೀದಕ್ಷದ್ಯೂತೇನ ಭಾರತ|

03296004c ಸ ಮಯಾ ನ ಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ||

ಸಹದೇವನು ಹೇಳಿದನು: “ಭಾರತ! ನಿನ್ನನ್ನು ಅಕ್ಷದ್ಯೂತದಲ್ಲಿ ಸೋಲಿಸಿದಾಗ ಶಕುನಿಯನ್ನು ನಾನು ಕೊಲ್ಲಲ್ಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.””

03296005 ವೈಶಂಪಾಯನ ಉವಾಚ|

03296005a ತತೋ ಯುಧಿಷ್ಠಿರೋ ರಾಜಾ ನಕುಲಂ ವಾಕ್ಯಮಬ್ರವೀತ್|

03296005c ಆರುಹ್ಯ ವೃಕ್ಷಂ ಮಾದ್ರೇಯ ನಿರೀಕ್ಷಸ್ವ ದಿಶೋ ದಶ||

ವೈಶಂಪಾಯನನು ಹೇಳಿದನು: “ಆಗ ರಾಜ ಯುಧಿಷ್ಠಿರನು ನಕುಲನಿಗೆ ಹೇಳಿದನು: “ಮಾದ್ರೇಯ! ಮರವನ್ನು ಹತ್ತಿ ಹತ್ತು ದಿಕ್ಕುಗಳಲ್ಲಿಯೂ ನೋಡು.

03296006a ಪಾನೀಯಮಂತಿಕೇ ಪಶ್ಯ ವೃಕ್ಷಾನ್ವಾಪ್ಯುದಕಾಶ್ರಯಾನ್|

03296006c ಇಮೇ ಹಿ ಭ್ರಾತರಃ ಶ್ರಾಂತಾಸ್ತವ ತಾತ ಪಿಪಾಸಿತಾಃ||

ಮಗೂ! ಹತ್ತಿರದಲ್ಲಿ ನೀರಿದೆಯೋ ಅಥವಾ ನೀರಿನ ಬಳಿ ಬೆಳೆಯುವ ಮರಗಳಿವೆಯೋ ನೋಡು. ಇಲ್ಲಿ ನಿನ್ನ ಸಹೋದರರು ಬಾಯಾರಿಕೆಯಿಂದ ಬಳಲಿದ್ದಾರೆ.”

03296007a ನಕುಲಸ್ತು ತಥೇತ್ಯುಕ್ತ್ವಾ ಶೀಘ್ರಮಾರುಹ್ಯ ಪಾದಪಂ|

03296007c ಅಬ್ರವೀದ್ಭ್ರಾತರಂ ಜ್ಯೇಷ್ಠಮಭಿವೀಕ್ಷ್ಯ ಸಮಂತತಃ||

ಅದನ್ನು ಕೇಳಿ ನಕುಲನು ಶೀಘ್ರವಾಗಿ ಮರವನ್ನು ಹತ್ತಿ ಸುತ್ತಲೂ ನೋಡಿ ಹಿರಿಯಣ್ಣನಿಗೆ ಹೇಳಿದನು:

03296008a ಪಶ್ಯಾಮಿ ಬಹುಲಾನ್ರಾಜನ್ವೃಕ್ಷಾನುದಕಸಂಶ್ರಯಾನ್|

03296008c ಸಾರಸಾನಾಂ ಚ ನಿರ್ಹ್ರಾದಮತ್ರೋದಕಮಸಂಶಯಂ||

“ರಾಜನ್! ನೀರಿನ ಬಳಿ ಬೆಳೆಯುವ ಬಹಳ ವೃಕ್ಷಗಳನ್ನು ನೋಡುತ್ತಿದ್ದೇನೆ. ಸಾರಸಗಳ ಕೂಗುಗಳನ್ನೂ ಕೇಳುತ್ತಿದ್ದೇನೆ. ಅಲ್ಲಿ ನೀರಿದೆಯೆನ್ನುವುದರಲ್ಲಿ ಸಂಶಯವಿಲ್ಲ.”

03296009a ತತೋಽಬ್ರವೀತ್ಸತ್ಯಧೃತಿಃ ಕುಂತೀಪುತ್ರೋ ಯುಧಿಷ್ಠಿರಃ|

03296009c ಗಚ್ಚ ಸೌಮ್ಯ ತತಃ ಶೀಘ್ರಂ ತೂರ್ಣಂ ಪಾನೀಯಮಾನಯ||

ಆಗ ಸತ್ಯಧೃತಿ ಕುಂತೀಪುತ್ರ ಯುಧಿಷ್ಠಿರನು ಅವನಿಗೆ ಹೇಳಿದನು: “ಸೌಮ್ಯ! ಶೀಘ್ರವಾಗಿ ಅಲ್ಲಿಗೆ ಹೋಗಿ ಕುಡಿಯಲು ನೀರನ್ನು ತೆಗೆದುಕೊಂಡು ಬಾ!”

03296010a ನಕುಲಸ್ತು ತಥೇತ್ಯುಕ್ತ್ವಾ ಭ್ರಾತುರ್ಜ್ಯೇಷ್ಠಸ್ಯ ಶಾಸನಾತ್|

03296010c ಪ್ರಾದ್ರವದ್ಯತ್ರ ಪಾನೀಯಂ ಶೀಘ್ರಂ ಚೈವಾನ್ವಪದ್ಯತ||

ನಕುಲನು ಒಪ್ಪಿ ಹಿರಿಯಣ್ಣನ ಶಾಸನದಂತೆ ನೀರಿನೆಡೆಗೆ ಧಾವಿಸಿದನು ಮತ್ತು ಅಲ್ಲಿ ತಲುಪಿದನು.

03296011a ಸ ದೃಷ್ಟ್ವಾ ವಿಮಲಂ ತೋಯಂ ಸಾರಸೈಃ ಪರಿವಾರಿತಂ|

03296011c ಪಾತುಕಾಮಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ||

ಸಾರಸಗಳಿಂದ ಸುತ್ತುವರೆಯಲ್ಪಟ್ಟ ಆ ಶುದ್ಧ ನೀರನ್ನು ನೋಡಿದನು. ಆದರೆ ಅವನು ಕುಡಿಯಲು ತೊಡಗಿದಾಗ ಅಂತರಿಕ್ಷದಿಂದ ಮಾತುಗಳು ಕೇಳಿಬಂದವು:

03296012a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|

03296012c ಪ್ರಶ್ನಾನುಕ್ತ್ವಾ ತು ಮಾದ್ರೇಯ ತತಃ ಪಿಬ ಹರಸ್ವ ಚ||

“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”

03296013a ಅನಾದೃತ್ಯ ತು ತದ್ವಾಕ್ಯಂ ನಕುಲಃ ಸುಪಿಪಾಸಿತಃ|

03296013c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ|

ತುಂಬಾ ಬಾಯಾರಿಕೆಗೊಂಡಿದ್ದ ನಕುಲನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.

03296014a ಚಿರಾಯಮಾಣೇ ನಕುಲೇ ಕುಂತೀಪುತ್ರೋ ಯುಧಿಷ್ಠಿರಃ|

03296014c ಅಬ್ರವೀದ್ಭ್ರಾತರಂ ವೀರಂ ಸಹದೇವಮರಿಂದಮಂ||

ನಕುಲನು ತಡವಾಗಲು ಕುಂತೀಪುತ್ರ ಯುಧಿಷ್ಠಿರನು ತಮ್ಮ ವೀರ ಅರಿಂದಮ ಸಹದೇವನಿಗೆ ಹೇಳಿದನು:

03296015a ಭ್ರಾತಾ ಚಿರಾಯತೇ ತಾತ ಸಹದೇವ ತವಾಗ್ರಜಃ|

03296015c ತಂ ಚೈವಾನಯ ಸೋದರ್ಯಂ ಪಾನೀಯಂ ಚ ತ್ವಮಾನಯ||

“ಮಗೂ! ಸಹದೇವ! ತಮ್ಮ! ನಿನ್ನ ಅಣ್ಣನು ತಡವಾಗಿದ್ದಾನೆ. ಹೋಗು. ಅವನನ್ನೂ ನೀರನ್ನು ಜೊತೆಯಲ್ಲಿ ತಾ.”

03296016a ಸಹದೇವಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ|

03296016c ದದರ್ಶ ಚ ಹತಂ ಭೂಮೌ ಭ್ರಾತರಂ ನಕುಲಂ ತದಾ||

ಹಾಗೆಯೇ ಆಗಲೆಂದು ಹೇಳಿ ಸಹದೇವನು ಅವನು ಹೋದ ದಿಕ್ಕಿನಲ್ಲಿಯೇ ಹೋಗಿ ಅಲ್ಲಿ ನೆಲದಮೇಲೆ ಹತನಾಗಿ ಬಿದ್ದಿದ್ದ ಅಣ್ಣ ನಕುಲನನ್ನು ನೋಡಿದನು.

03296017a ಭ್ರಾತೃಶೋಕಾಭಿಸಂತಪ್ತಸ್ತೃಷಯಾ ಚ ಪ್ರಪೀಡಿತಃ|

03296017c ಅಭಿದುದ್ರಾವ ಪಾನೀಯಂ ತತೋ ವಾಗಭ್ಯಭಾಷತ||

ಭ್ರಾತೃಶೋಕದಿಂದ ಸಂತಪ್ತನಾಗಿ, ಬಾಯಾರಿಕೆಯಿಂದಲೂ ಪೀಡಿತನಾಗಿ ನೀರಿನೆಡೆಗೆ ಓಡಿದನು. ಆಗ ಧ್ವನಿಯು ಹೇಳಿತು:

03296018a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|

03296018c ಪ್ರಶ್ನಾನುಕ್ತ್ವಾ ಯಥಾಕಾಮಂ ತತಃ ಪಿಬ ಹರಸ್ವ ಚ||

“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”

03296019a ಅನಾದೃತ್ಯ ತು ತದ್ವಾಕ್ಯಂ ಸಹದೇವಃ ಪಿಪಾಸಿತಃ|

03296019c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ||

ತುಂಬಾ ಬಾಯಾರಿಕೆಗೊಂಡಿದ್ದ ಸಹದೇವನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.

03296020a ಅಥಾಬ್ರವೀತ್ಸ ವಿಜಯಂ ಕುಂತೀಪುತ್ರೋ ಯುಧಿಷ್ಠಿರಃ|

03296020c ಭ್ರಾತರೌ ತೇ ಚಿರಗತೌ ಬೀಭತ್ಸೋ ಶತ್ರುಕರ್ಶನ|

ಆಗ ಕುಂತೀಪುತ್ರ ಯುಧಿಷ್ಠಿರನು ವಿಜಯನಿಗೆ ಹೇಳಿದನು: “ಶತ್ರುಕರ್ಶನ! ಬೀಭತ್ಸು! ನಿನ್ನ ತಮ್ಮಂದಿರಿಬ್ಬರೂ ಹೋಗಿ ಬಹಳ ಸಮಯವಾಯಿತು.

03296020e ತೌ ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ||

03296021a ಏವಮುಕ್ತೋ ಗುಡಾಕೇಶಃ ಪ್ರಗೃಹ್ಯ ಸಶರಂ ಧನುಃ|

03296021c ಆಮುಕ್ತಖಡ್ಗೋ ಮೇಧಾವೀ ತತ್ಸರಃ ಪ್ರತ್ಯಪದ್ಯತ||

ನಿನಗೆ ಮಂಗಳವಾಗಲಿ! ಅವರಿಬ್ಬರನ್ನೂ ಕರೆದುಕೊಂಡು ಬಾ! ನೀರನ್ನೂ ತೆಗೆದುಕೊಂಡು ಬಾ!” ಹೀಗೆ ಹೇಳಲು ಆ ಮೇಧಾವೀ ಗುಡಾಕೇಶನು ಧನುರ್ಬಾಣಗಳನ್ನು ಹಿಡಿದು ಖಡ್ಗವನ್ನು ಎಳೆದು ಆ ಸರೋವರದ ಕಡೆ ಅವಸರದಿಂದ ಹೋದನು.

03296022a ಯತಃ ಪುರುಷಶಾರ್ದೂಲೌ ಪಾನೀಯಹರಣೇ ಗತೌ|

03296022c ತೌ ದದರ್ಶ ಹತೌ ತತ್ರ ಭ್ರಾತರೌ ಶ್ವೇತವಾಹನಃ||

ನೀರನ್ನು ತರಲು ಹೋಗಿದ್ದ ಆ ಪುರುಷಶಾರ್ದೂಲ ತಮ್ಮಂದಿರಿಬ್ಬರೂ ಅಲ್ಲಿ ಹತರಾಗಿ ಬಿದ್ದಿರುವುದನ್ನು ಶ್ವೇತವಾಹನನು ಕಂಡನು.

03296023a ಪ್ರಸುಪ್ತಾವಿವ ತೌ ದೃಷ್ಟ್ವಾ ನರಸಿಂಹಃ ಸುದುಃಖಿತಃ|

03296023c ಧನುರುದ್ಯಮ್ಯ ಕೌಂತೇಯೋ ವ್ಯಲೋಕಯತ ತದ್ವನಂ||

ಮಲಗಿದ್ದಾರೋ ಎಂಬಂತಿದ್ದ ಅವರಿಬ್ಬರನ್ನು ಕಂಡು ನರಸಿಂಹ ಕೌಂತೇಯನು ಸುದುಃಖಿತನಾಗಿ ಧನುಸ್ಸನ್ನು ಮೇಲೆತ್ತಿ ಆ ವನವನ್ನು ಅವಲೋಕಿಸಿದನು.

03296024a ನಾಪಶ್ಯತ್ತತ್ರ ಕಿಂ ಚಿತ್ಸ ಭೂತಂ ತಸ್ಮಿನ್ಮಹಾವನೇ|

03296024c ಸವ್ಯಸಾಚೀ ತತಃ ಶ್ರಾಂತಃ ಪಾನೀಯಂ ಸೋಽಭ್ಯಧಾವತ||

ಅಲ್ಲಿ ಆ ಮಹಾವನದಲ್ಲಿ ಯಾವ ಜೀವವನ್ನೂ ಕಾಣದೇ ಸವ್ಯಸಾಚಿಯು ಆಯಾಸಗೊಂಡು ನೀರನ್ನು ಕುಡಿಯಲು ಮುಂದಾದನು.

03296025a ಅಭಿಧಾವಂಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ|

03296025c ಕಿಮಾಸೀದಸಿ ಪಾನೀಯಂ ನೈತಚ್ಚಕ್ಯಂ ಬಲಾತ್ತ್ವಯಾ||

ಅವನು ಮುಂದೆಬರಲು ಅಂತರಿಕ್ಷದಲ್ಲಿ ಮಾತು ಕೇಳಿಬಂದಿತು. “ಇಲ್ಲಿಗೆ ಏಕೆ ಬಂದೆ. ಬಲವನ್ನುಪಯೋಗಿಸಿ ನೀರನ್ನು ಕುಡಿಯಲು ಶಕ್ಯವಿಲ್ಲ.

03296026a ಕೌಂತೇಯ ಯದಿ ವೈ ಪ್ರಶ್ನಾನ್ಮಯೋಕ್ತಾನ್ಪ್ರತಿಪತ್ಸ್ಯಸೇ|

03296026c ತತಃ ಪಾಸ್ಯಸಿ ಪಾನೀಯಂ ಹರಿಷ್ಯಸಿ ಚ ಭಾರತ||

ಕೌಂತೇಯ! ಭಾರತ! ನಾನು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟ ನಂತರವೇ ನೀನು ನೀರನ್ನು ತೆಗೆದು ಕುಡಿಯಬಲ್ಲೆ.”

03296027a ವಾರಿತಸ್ತ್ವಬ್ರವೀತ್ಪಾರ್ಥೋ ದೃಶ್ಯಮಾನೋ ನಿವಾರಯ|

03296027c ಯಾವದ್ಬಾಣೈರ್ವಿನಿರ್ಭಿನ್ನಃ ಪುನರ್ನೈವಂ ವದಿಷ್ಯಸಿ||

ಹೀಗೆ ತಡೆಯಲ್ಪಟ್ಟ ಪಾರ್ಥನು ಹೇಳಿದನು: “ಕಣ್ಣಿಗೆ ಕಾಣಿಸಿಕೊಂಡು ತಡೆ! ಆಗ ನನ್ನ ಬಾಣಗಳಿಂದ ನಿರ್ಭಿನ್ನನಾಗಿ ಪುನಃ ಎಂದೂ ಮಾತನಾಡುವುದಿಲ್ಲ!”

03296028a ಏವಮುಕ್ತ್ವಾ ತತಃ ಪಾರ್ಥಃ ಶರೈರಸ್ತ್ರಾನುಮಂತ್ರಿತೈಃ|

03296028c ವವರ್ಷ ತಾಂ ದಿಶಂ ಕೃತ್ಸ್ನಾಂ ಶಬ್ದವೇಧಂ ಚ ದರ್ಶಯನ್||

ಹೀಗೆ ಹೇಳಿ ಪಾರ್ಥನು ಅಸ್ತ್ರಗಳಿಂದ ಅನುಮಂತ್ರಿಸಿದ ಬಾಣಗಳಿಂದ ಎಲ್ಲ ದಿಕ್ಕುಗಳಲ್ಲಿಯೂ ಬಾಣದ ಮಳೆಗರೆದು ತನ್ನ ಶಬ್ಧವೇದಿ ವಿದ್ಯೆಯನ್ನು ಪ್ರದರ್ಶಿಸಿದನು.

03296029a ಕರ್ಣಿನಾಲೀಕನಾರಾಚಾನುತ್ಸೃಜನ್ಭರತರ್ಷಭ|

03296029c ಅನೇಕೈರಿಷುಸಂಘಾತೈರಂತರಿಕ್ಷಂ ವವರ್ಷ ಹ||

ಭರತರ್ಷಭ! ಕಿವಿಗಳಿದ್ದ ಉಕ್ಕಿನ ಬಾಣಗಳನ್ನು ಬಿಟ್ಟು ಅವನು ಅನೇಕ ಶರಗುಂಪುಗಳಿಂದ ಅಂತರಿಕ್ಷದಲ್ಲಿ ಮಳೆಗರೆಸಿದನು.

03296030 ಯಕ್ಷ ಉವಾಚ|

03296030a ಕಿಂ ವಿಘಾತೇನ ತೇ ಪಾರ್ಥ ಪ್ರಶ್ನಾನುಕ್ತ್ವಾ ತತಃ ಪಿಬ|

03296030c ಅನುಕ್ತ್ವಾ ತು ತತಃ ಪ್ರಶ್ನಾನ್ಪೀತ್ವೈವ ನ ಭವಿಷ್ಯಸಿ||

ಯಕ್ಷನು ಹೇಳಿದನು: “ಈ ವಿಘಾತವೇಕೆ ಪಾರ್ಥ? ಪ್ರಶ್ನೆಗಳನ್ನು ಉತ್ತರಿಸಿ ಕುಡಿ. ಉತ್ತರಿಸದೇ ಇದ್ದರೆ ಕುಡಿದ ತಕ್ಷಣವೇ ಇಲ್ಲವಾಗುತ್ತೀಯೆ.””

03296031 ವೈಶಂಪಾಯನ ಉವಾಚ|

03296031a ಸ ತ್ವಮೋಘಾನಿಷೂನ್ಮುಕ್ತ್ವಾ ತೃಷ್ಣಯಾಭಿಪ್ರಪೀಡಿತಃ|

03296031c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ||

ವೈಶಂಪಾಯನನು ಹೇಳಿದನು: “ಆ ಅಮೋಘ ಬಾಣಗಳನ್ನು ಬಿಟ್ಟು ಅವನು ಬಾಯಾರಿಕೆಯಿಂದ ಪೀಡಿತನಾಗಿ ಅವನ ಪ್ರಶ್ನೆಗಳಿಗೆ ಮನಸ್ಸನ್ನು ಕೊಡದೇ ಕುಡಿದು ಬಿದ್ದನು.

03296032a ಅಥಾಬ್ರವೀದ್ಭೀಮಸೇನಂ ಕುಂತೀಪುತ್ರೋ ಯುಧಿಷ್ಠಿರಃ|

03296032c ನಕುಲಃ ಸಹದೇವಶ್ಚ ಬೀಭತ್ಸುಶ್ಚಾಪರಾಜಿತಃ||

03296033a ಚಿರಂ ಗತಾಸ್ತೋಯಹೇತೋರ್ನ ಚಾಗಚ್ಚಂತಿ ಭಾರತ|

03296033c ತಾಂಶ್ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ||

ಆಗ ಕುಂತೀಪುತ್ರ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು: “ನಕುಲ, ಸಹದೇವ, ಮತ್ತು ಅಪರಾಜಿತ ಬೀಭತ್ಸುವೂ ಹೋಗಿ ಬಹಳ ಸಮಯವಾಯಿತು ಮತ್ತು ಮರಳಿ ಬಂದಿಲ್ಲ. ಭಾರತ! ನಿನಗೆ ಮಂಗಳವಾಗಲಿ! ಹೋಗಿ ಅವರನ್ನು ಕರೆದುಕೊಂಡು ಬಾ ಮತ್ತು ನೀರನ್ನೂ ತೆಗೆದುಕೊಂಡು ಬಾ.”

03296034a ಭೀಮಸೇನಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ|

03296034c ಯತ್ರ ತೇ ಪುರುಷವ್ಯಾಘ್ರಾ ಭ್ರಾತರೋಽಸ್ಯ ನಿಪಾತಿತಾಃ||

ಹಾಗೆಯೇ ಆಗಲೆಂದು ಭೀಮಸೇನನು ಅವರು ಹೋದ ಕಡೆಯಲ್ಲಿಯೇ, ತನ್ನ ಪುರುಷವ್ಯಾಘ್ರ ತಮ್ಮಂದಿರು ಬಿದ್ದಿದ್ದಲ್ಲಿಗೆ, ಅವಸರಮಾಡಿ ಹೋದನು.

03296035a ತಾನ್ದೃಷ್ಟ್ವಾ ದುಃಖಿತೋ ಭೀಮಸ್ತೃಷಯಾ ಚ ಪ್ರಪೀಡಿತಃ|

03296035c ಅಮನ್ಯತ ಮಹಾಬಾಹುಃ ಕರ್ಮ ತದ್ಯಕ್ಷರಕ್ಷಸಾಂ|

03296035e ಸ ಚಿಂತಯಾಮಾಸ ತದಾ ಯೋದ್ಧವ್ಯಂ ಧ್ರುವಮದ್ಯ ಮೇ||

ಅವರನ್ನು ನೋಡಿ ದುಃಖಿತನಾಗಿ ಬಾಯಾರಿಕೆಯಿಂದ ಪೀಡಿತನಾಗಿ ಮಹಾಬಾಹು ಭೀಮನು “ಇದು ಯಾರೋ ಯಕ್ಷ ಅಥವಾ ರಾಕ್ಷಸರ ಕಾರ್ಯವಾಗಿರಬಹುದು ಮತ್ತು ಅವರೊಡನೆ ಯುದ್ಧಮಾಡಬೇಕಾಗುವುದು ನನಗೆ ತಪ್ಪಿದ್ದಲ್ಲ” ಎಂದು ಯೋಚಿಸಿದನು.

03296036a ಪಾಸ್ಯಾಮಿ ತಾವತ್ಪಾನೀಯಮಿತಿ ಪಾರ್ಥೋ ವೃಕೋದರಃ|

03296036c ತತೋಽಭ್ಯಧಾವತ್ಪಾನೀಯಂ ಪಿಪಾಸುಃ ಪುರುಷರ್ಷಭಃ||

ಆದರೆ “ಅದಕ್ಕೆ ಮೊದಲು ನೀರನ್ನು ಕುಡಿಯುತ್ತೇನೆ” ಎಂದು ಆ ಪುರುಷರ್ಷಭ ಪಾರ್ಥ ವೃಕೋದರನು ಬಾಯಾರಿಕೆಯಿಂದ ನೀರಿನ ಬಳಿ ಬಂದನು.

03296037 ಯಕ್ಷ ಉವಾಚ|

03296037a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|

03296037c ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ||

ಯಕ್ಷನು ಹೇಳಿದನು: “ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಕೌಂತೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.””

03296038 ವೈಶಂಪಾಯನ ಉವಾಚ|

03296038a ಏವಮುಕ್ತಸ್ತತೋ ಭೀಮೋ ಯಕ್ಷೇಣಾಮಿತತೇಜಸಾ|

03296038c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ||

ವೈಶಂಪಾಯನನು ಹೇಳಿದನು: “ಯಕ್ಷನು ಹೀಗೆ ಹೇಳಲು ಅಮಿತತೇಜಸ್ವಿ ಭೀಮನು ಆ ಪ್ರಶ್ನೆಗಳನ್ನು ಕಡೆಗೆಣಿಸಿ ನೀರನ್ನು ಕುಡಿದು ನಂತರ ಬಿದ್ದನು.

03296039a ತತಃ ಕುಂತೀಸುತೋ ರಾಜಾ ವಿಚಿಂತ್ಯ ಪುರುಷರ್ಷಭಃ|

03296039c ಸಮುತ್ಥಾಯ ಮಹಾಬಾಹುರ್ದಹ್ಯಮಾನೇನ ಚೇತಸಾ||

ಆಗ ಕುಂತೀಸುತ ರಾಜ ಪುರುಷರ್ಷಭ ಮಹಾಬಾಹುವು ಚಿಂತಿಸಿ ಚೇತಸದಿಂದ ದಹಿಸುತ್ತಾ ಮೇಲೆದ್ದನು.

03296040a ಅಪೇತಜನನಿರ್ಘೋಷಂ ಪ್ರವಿವೇಶ ಮಹಾವನಂ|

03296040c ರುರುಭಿಶ್ಚ ವರಾಹೈಶ್ಚ ಪಕ್ಷಿಭಿಶ್ಚ ನಿಷೇವಿತಂ||

03296041a ನೀಲಭಾಸ್ವರವರ್ಣೈಶ್ಚ ಪಾದಪೈರುಪಶೋಭಿತಂ|

03296041c ಭ್ರಮರೈರುಪಗೀತಂ ಚ ಪಕ್ಷಿಭಿಶ್ಚ ಮಹಾಯಶಾಃ||

ಜನರ ಸುಳಿಯೂ ಸದ್ದೂ ಹೊರಟುಹೋಗಿದ್ದ, ರುರು, ವರಾಹ ಮತ್ತು ಪಕ್ಷಿಗಳು ವಾಸಿಸುತ್ತಿದ್ದ, ಕಪ್ಪಾಗಿ ಹೊಳೆಯುತ್ತಿದ್ದ ಮರಗಳಿಂದ ಉಪಶೋಭಿಸುತ್ತಿದ್ದ, ಭ್ರಮರಗಳ ಮತ್ತು ಮಹಾಯಶ ಪಕ್ಷಿಗಳ ಉಪಗೀತೆಗಳಿಂದ ಕೂಡಿದ್ದ ಆ ಮಹಾವನವನ್ನು ಪ್ರವೇಶಿಸಿದನು.

03296042a ಸ ಗಚ್ಚನ್ಕಾನನೇ ತಸ್ಮಿನ್ ಹೇಮಜಾಲಪರಿಷ್ಕೃತಂ|

03296042c ದದರ್ಶ ತತ್ಸರಃ ಶ್ರೀಮಾನ್ವಿಶ್ವಕರ್ಮಕೃತಂ ಯಥಾ||

ಆ ಕಾನನದಲ್ಲಿ ನಡೆದು ಹೇಮಜಾಲಗಳಿಂದ ಪರಿಷ್ಕೃತವಾದ, ಶ್ರೀಮಾನ್ ವಿಶ್ವಕರ್ಮನು ನಿರ್ಮಿಸಿದಂತಿರುವ ಆ ಸರೋವರವನ್ನು ನೋಡಿದನು.

03296043a ಉಪೇತಂ ನಲಿನೀಜಾಲೈಃ ಸಿಂಧುವಾರೈಶ್ಚ ವೇತಸೈಃ|

03296043c ಕೇತಕೈಃ ಕರವೀರೈಶ್ಚ ಪಿಪ್ಪಲೈಶ್ಚೈವ ಸಂವೃತಂ|

03296043e ಶ್ರಮಾರ್ತಸ್ತದುಪಾಗಮ್ಯ ಸರೋ ದೃಷ್ಟ್ವಾಥ ವಿಸ್ಮಿತಃ||

ಶ್ರಮಪಟ್ಟು ಹತ್ತಿರಬಂದು ಆ ನಲಿನೀ ಜಾಲಗಳಿಂದ, ಸಿಂಧುವಾರಗಳಿಂದ ಕೂಡಿದ್ದ, ಕೇತಕಿ, ಕರವೀರ, ಮತ್ತು ಪಿಪ್ಪಲ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಆ ಸರೋವರವನ್ನು ನೋಡಿ ವಿಸ್ಮಿತವಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ನಕುಲಾದಿಪತನೇ ಷಣ್ಣಾವತ್ಯಧಿಕದ್ವಿಶತತಮೋಽಧ್ಯಾಯ😐

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ನಕುಲಾದಿಪತನದಲ್ಲಿ ಇನ್ನೂರಾತೊಂಭತ್ತಾರನೆಯ ಅಧ್ಯಾಯವು.

Related image

Comments are closed.