Adi Parva: Chapter 45

ಆದಿ ಪರ್ವ: ಆಸ್ತೀಕ ಪರ್ವ

೪೫

ಜನಮೇಜಯನಿಗೆ ತಂದೆ ಪರಿಕ್ಷಿತನ ಸಾವಿನ ಕುರಿತ ವರದಿ (೧-೨೫).

01045001 ಶೌನಕ ಉವಾಚ

01045001a ಯದಪೃಚ್ಛತ್ತದಾ ರಾಜಾ ಮಂತ್ರಿಣೋ ಜನಮೇಜಯ|

01045001c ಪಿತುಃ ಸ್ವರ್ಗಗತಿಂ ತನ್ಮೇ ವಿಸ್ತರೇಣ ಪುನರ್ವದ||

ಶೌನಕನು ಹೇಳಿದನು: “ರಾಜ ಜನಮೇಜಯನು ತನ್ನ ತಂದೆಯ ಸ್ವರ್ಗಗತಿಯಬಗ್ಗೆ ಮಂತ್ರಿಗಳೊಂದಿಗೆ ಏನನ್ನು ಕೇಳಿದನು ಎನ್ನುವುದನ್ನು ಪುನಃ ನನಗೆ ವಿಸ್ತಾರವಾಗಿ ಹೇಳು.”

01045002 ಸೂತ ಉವಾಚ

01045002a ಶೃಣು ಬ್ರಹ್ಮನ್ಯಥಾ ಪೃಷ್ಟಾ ಮಂತ್ರಿಣೋ ನೃಪತೇಸ್ತದಾ|

01045002c ಆಖ್ಯಾತವಂತಸ್ತೇ ಸರ್ವೇ ನಿಧನಂ ತತ್ಪರಿಕ್ಷಿತಃ||

ಸೂತನು ಹೇಳಿದನು: “ಬ್ರಾಹ್ಮಣ! ಪರಿಕ್ಷಿತನ ನಿಧನದ ಕುರಿತು ನೃಪತಿಯು ಮಂತ್ರಿಗಳಲ್ಲಿ ಏನನ್ನು ಕೇಳಿದನು ಮತ್ತು ಅವರು ಅವನಿಗೆ ಏನನ್ನು ಹೇಳಿದರು ಎನ್ನುವುದನ್ನು ಕೇಳು.

01045003 ಜನಮೇಜಯ ಉವಾಚ

01045003a ಜಾನಂತಿ ತು ಭವಂತಸ್ತದ್ಯಥಾವೃತ್ತಃ ಪಿತಾ ಮಮ|

01045003c ಆಸೀದ್ಯಥಾ ಚ ನಿಧನಂ ಗತಃ ಕಾಲೇ ಮಹಾಯಶಾಃ||

ಜನಮೇಜಯನು ಹೇಳಿದನು: “ನನ್ನ ತಂದೆ ಮಹಾಯಶಸ್ವಿಯು ಹೇಗಿದ್ದ ಮತ್ತು ಅವನು ಹೇಗೆ ಸಾವನ್ನಪ್ಪಿದ ಎನ್ನುವುದನ್ನು ನೀವು ಯಥಾವತ್ತಾಗಿ ತಿಳಿದಿದ್ದೀರಿ.

01045004a ಶ್ರುತ್ವಾ ಭವತ್ಸಕಾಶಾದ್ಧಿ ಪಿತುರ್ವೃತ್ತಮಶೇಷತಃ|

01045004c ಕಲ್ಯಾಣಂ ಪ್ರತಿಪತ್ಸ್ಯಾಮಿ ವಿಪರೀತಂ ನ ಜಾತು ಚಿತ್||

ತಂದೆಯ ಕುರಿತು ಎಲ್ಲವನ್ನೂ ನಿಮ್ಮಿಂದ ಕೇಳಿದ ನಂತರವೇ ಯಾವುದು ಕಲ್ಯಾಣಕರವಾದುದೋ ಅದನ್ನು ಮಾಡುತ್ತೇನೆ. ಅನ್ಯಥಾ ಇಲ್ಲ.””

01045005 ಸೂತ ಉವಾಚ

01045005a ಮಂತ್ರಿಣೋಽಥಾಬ್ರುವನ್ವಾಕ್ಯಂ ಪೃಷ್ಟಾಸ್ತೇನ ಮಹಾತ್ಮನಾ|

01045005c ಸರ್ವಧರ್ಮವಿದಃ ಪ್ರಾಜ್ಞಾ ರಾಜಾನಂ ಜನಮೇಜಯಂ||

ಸೂತನು ಹೇಳಿದನು: “ಆ ಮಾಹಾತ್ಮ ರಾಜ ಜನಮೇಜಯನ ಮಾತುಗಳನ್ನು ಕೇಳಿದ ಸರ್ವ ಧರ್ಮವಿದ ಪ್ರಾಜ್ಞ ಮಂತ್ರಿಗಳು ಹೇಳಿದರು:

01045006a ಧರ್ಮಾತ್ಮಾ ಚ ಮಹಾತ್ಮಾ ಚ ಪ್ರಜಾಪಾಲಃ ಪಿತಾ ತವ|

01045006c ಆಸೀದಿಹ ಯಥಾವೃತ್ತಃ ಸ ಮಹಾತ್ಮಾ ಶೃಣುಷ್ವ ತತ್||

“ನಿನ್ನ ತಂದೆಯು ಧರ್ಮಾತ್ಮನೂ, ಮಹಾತ್ಮನೂ, ಪ್ರಜಾಪಾಲಕನೂ ಆಗಿದ್ದನು. ಆ ಮಹಾತ್ಮನು ಹೇಗೆ ನಡೆದುಕೊಳ್ಳುತ್ತಿದ್ದನು ಎನ್ನುವುದನ್ನು ಕೇಳು.

01045007a ಚಾತುರ್ವರ್ಣ್ಯಂ ಸ್ವಧರ್ಮಸ್ಥಂ ಸ ಕೃತ್ವಾ ಪರ್ಯರಕ್ಷತ|

01045007c ಧರ್ಮತೋ ಧರ್ಮವಿದ್ರಾಜಾ ಧರ್ಮೋ ವಿಗ್ರಹವಾನಿವ||

ಸ್ವಧರ್ಮದಲ್ಲಿ ನಿಷ್ಠನಾಗಿದ್ದು ನಾಲ್ಕೂವರ್ಣದವರನ್ನು ರಕ್ಷಿಸುತ್ತಿದ್ದನು. ರಾಜನು ಧರ್ಮನಂತೆಯೇ ಧರ್ಮವತ್ತಾಗಿ ಧಾರ್ಮಿಕನಾಗಿದ್ದನು.

01045008a ರರಕ್ಷ ಪೃಥಿವೀಂ ದೇವೀಂ ಶ್ರೀಮಾನತುಲವಿಕ್ರಮಃ|

01045008c ದ್ವೇಷ್ಟಾರಸ್ತಸ್ಯ ನೈವಾಸನ್ಸ ಚ ನ ದ್ವೇಷ್ಟಿ ಕಂಚನ|

01045008e ಸಮಃ ಸರ್ವೇಷು ಭೂತೇಷು ಪ್ರಜಾಪತಿರಿವಾಭವತ್||

ಶ್ರೀಮಂತನೂ ಅತುಲ ವಿಕ್ರಮಿಯೂ ಆದ ಅವನು ಪೃಥ್ವೀ ದೇವಿಯನ್ನು ರಕ್ಷಿಸುತ್ತಿದ್ದನು. ಅವನಿಗೆ ಯಾರ ಮೇಲೂ ದ್ವೇಷವಿರಲಿಲ್ಲ ಮತ್ತು ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ. ಪ್ರಜಾಪತಿಯಂತೆ ಸರ್ವರನ್ನೂ ಒಂದೇಸಮನಾಗಿ ಕಾಣುತ್ತಿದ್ದನು.

01045009a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಸ್ವಕರ್ಮಸು|

01045009c ಸ್ಥಿತಾಃ ಸುಮನಸೋ ರಾಜಂಸ್ತೇನ ರಾಜ್ಞಾ ಸ್ವನುಷ್ಠಿತಾಃ||

ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರೆಲ್ಲರೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದು, ಸುಖಮನಸ್ಕರಾಗಿ, ರಾಜನ ರಾಜ್ಯಭಾರದಿಂದ ಸುರಕ್ಷಿತರಾಗಿದ್ದರು.

01045010a ವಿಧವಾನಾಥಕೃಪಣಾನ್ವಿಕಲಾಂಶ್ಚ ಬಭಾರ ಸಃ|

01045010c ಸುದರ್ಶಃ ಸರ್ವಭೂತಾನಾಮಾಸೀತ್ಸೋಮ ಇವಾಪರಃ||

ವಿಧವೆಯರ, ಅನಾಥರ ಮತ್ತು ಬಡವರ ಜೀವನ ಜವಾಬ್ದಾರಿಯನ್ನು ಹೊತ್ತ ಆ ಸುಂದರನು ಸರ್ವರಿಗೂ ಚಂದ್ರನಂತಿದ್ದನು.

01045011a ತುಷ್ಟಪುಷ್ಟಜನಃ ಶ್ರೀಮಾನ್ಸತ್ಯವಾಗ್ದೃಢವಿಕ್ರಮಃ|

01045011c ಧನುರ್ವೇದೇ ಚ ಶಿಷ್ಯೋಽಭೂನ್ನೃಪಃ ಶಾರದ್ವತಸ್ಯ ಸಃ||

ಜನರೆಲ್ಲರೂ ತುಷ್ಟಪುಷ್ಟರೂ, ಶ್ರೀಮಂತರೂ, ಸತ್ಯವಂತರೂ, ದೃಢವಿಕ್ರಮಿಗಳೂ ಆಗಿದ್ದರು. ಧನುರ್ವೇದದಲ್ಲಿ ನೃಪನು ಶಾರದ್ವತ ಕೃಪನ ಶಿಷ್ಯನಾಗಿದ್ದನು.

01045012a ಗೋವಿಂದಸ್ಯ ಪ್ರಿಯಶ್ಚಾಸೀತ್ಪಿತಾ ತೇ ಜನಮೇಜಯ|

01045012c ಲೋಕಸ್ಯ ಚೈವ ಸರ್ವಸ್ಯ ಪ್ರಿಯ ಆಸೀನ್ಮಹಾಯಶಾಃ||

ಜನಮೇಜಯ! ಗೋವಿಂದನ ಪ್ರಿಯಕರನಾಗಿದ್ದ ನಿನ್ನ ತಂದೆಯು ಲೋಕದಲ್ಲಿ ಸರ್ವರ ಪ್ರಿಯಕರನಾಗಿ ಮಹಾ ಯಶಸ್ವಿಯಾಗಿದ್ದನು.

01045013a ಪರಿಕ್ಷೀಣೇಷು ಕುರುಷು ಉತ್ತರಾಯಾಮಜಾಯತ|

01045013c ಪರಿಕ್ಷಿದಭವತ್ತೇನ ಸೌಭದ್ರಸ್ಯಾತ್ಮಜೋ ಬಲೀ||

ಕುರುಗಳ ಪರಿಕ್ಷೀಣವಾದಾಗ ಉತ್ತರೆಯಲ್ಲಿ ಹುಟ್ಟಿದ ಆ ಅಭಿಮನ್ಯುವಿನ ಬಲಶಾಲಿ ಮಗನನ್ನು ಪರಿಕ್ಷಿತ ಎಂದು ಕರೆದಿದ್ದರು.

01045014a ರಾಜಧರ್ಮಾರ್ಥಕುಶಲೋ ಯುಕ್ತಃ ಸರ್ವಗುಣೈರ್ನೃಪಃ|

01045014c ಜಿತೇಂದ್ರಿಯಶ್ಚಾತ್ಮವಾಂಶ್ಚ ಮೇಧಾವೀ ವೃದ್ಧಸೇವಿತಃ||

ರಾಜಧರ್ಮಾರ್ಥ ಕುಶಲನಾಗಿದ್ದ ಆ ರಾಜನು ಸರ್ವಗುಣ ಸಂಪನ್ನನೂ, ಸ್ವತಃ ಜಿತೇಂದ್ರಿಯನೂ, ಮೇಧಾವಿಯೂ, ವೃದ್ಧರ ಸೇವನಿರತನೂ ಆಗಿದ್ದನು.

01045015a ಷಢ್ವರ್ಗವಿನ್ಮಹಾಬುದ್ಧಿರ್ನೀತಿಧರ್ಮವಿದುತ್ತಮಃ|

01045015c ಪ್ರಜಾ ಇಮಾಸ್ತವ ಪಿತಾ ಷಷ್ಟಿಂ ವರ್ಷಾಣ್ಯಪಾಲಯತ್|

01045015e ತತೋ ದಿಷ್ಟಾಂತಮಾಪನ್ನಃ ಸರ್ಪೇಣಾನತಿವರ್ತಿತಂ||

ಷಡ್ವರ್ಗಗುಣಯುಕ್ತನಾದ ಮಹಾಬುದ್ಧಿಶಾಲಿಯೂ, ನೀತಿಧರ್ಮ ವಿದುತ್ತಮನೂ ಆದ ನಿನ್ನ ತಂದೆಯು ಅರವತ್ತು ವರ್ಷಗಳ ಕಾಲ ಪ್ರಜಾಪಾಲನೆಯನ್ನು ಮಾಡಿದನು. ನಂತರ ಅವನಿಗೆ ಒಂದು ಸರ್ಪದಿಂದ ತಡೆಗಟ್ಟಲಾಗದಂಥಹ ಆಪತ್ತು ಸಂಭವಿಸಿತು.

01045016a ತತಸ್ತ್ವಂ ಪುರುಷಶ್ರೇಷ್ಠ ಧರ್ಮೇಣ ಪ್ರತಿಪೇದಿವಾನ್|

01045016c ಇದಂ ವರ್ಷಸಹಸ್ರಾಯ ರಾಜ್ಯಂ ಕುರುಕುಲಾಗತಂ|

01045016e ಬಾಲ ಏವಾಭಿಜಾತೋಽಸಿ ಸರ್ವಭೂತಾನುಪಾಲಕಃ||

ಅವನ ನಂತರ ಪುರುಷಶ್ರೇಷ್ಠನಾದ ನೀನು ಸಹಸ್ರಾರು ವರ್ಷಗಳಿಂದ ಕುರುಕುಲಾಗತವಾಗಿದ್ದ ಈ ರಾಜ್ಯವನ್ನು ಧರ್ಮಪೂರ್ವಕವಾಗಿ ಪಡೆದೆ. ಸರ್ವಭೂತಾನುಪಾಲಕ! ನೀನು ಬಾಲಕನಾಗಿರುವಾಗಲೇ ನಿನ್ನನ್ನು ಅಭಿಷಿಕ್ತನನ್ನಾಗಿ ಮಾಡಲಾಗಿತ್ತು.”

01045017 ಜನಮೇಜಯ ಉವಾಚ

01045017a ನಾಸ್ಮಿನ್ಕುಲೇ ಜಾತು ಬಭೂವ ರಾಜಾ

         ಯೋ ನ ಪ್ರಜಾನಾಂ ಹಿತಕೃತ್ಪ್ರಿಯಶ್ಚ|

01045017c ವಿಶೇಷತಃ ಪ್ರೇಕ್ಷ್ಯ ಪಿತಾಮಹಾನಾಂ

         ವೃತ್ತಂ ಮಹದ್ವೃತ್ತಪರಾಯಣಾನಾಂ||

ಜನಮೇಜಯನು ಹೇಳಿದನು: “ಪ್ರಜೆಗಳ ಹಿತವನ್ನಾಗಲೀ ಅವರಿಗೆ ಬೇಕಾಗಿದ್ದುದನ್ನಾಗಲೀ ಮಾಡದೇ ಇದ್ದ ರಾಜರು ಯಾರೂ ನನ್ನ ಈ ಕುಲದಲ್ಲಿ ಹುಟ್ಟಲಿಲ್ಲ. ವಿಶೇಷವಾಗಿ ನನ್ನ ಪಿತಾಮಹರು ಮಹಾ ಕಾರ್ಯಗಳನ್ನೆಸಗಿದವರು.

01045018a ಕಥಂ ನಿಧನಮಾಪನ್ನಃ ಪಿತಾ ಮಮ ತಥಾವಿಧಃ|

01045018c ಆಚಕ್ಷಧ್ವಂ ಯಥಾವನ್ಮೇ ಶ್ರೋತುಮಿಚ್ಛಾಮಿ ತತ್ತ್ವತಃ||

ಹೀಗಿರುವಾಗ ನನ್ನ ತಂದೆಯಾದರೋ ಹೇಗೆ ಸಾವೆಂಬ ಆಪತ್ತಿಗೆ ಒಳಗಾದನು? ನನಗೆ ವಿವರಿಸಿ. ಯಥಾವತ್ತಾಗಿ ಕೇಳಲು ಬಯಸುತ್ತೇನೆ.””

01045019 ಸೂತ ಉವಾಚ

01045019a ಏವಂ ಸಂಚೋದಿತಾ ರಾಜ್ಞಾ ಮಂತ್ರಿಣಸ್ತೇ ನರಾಧಿಪಂ|

01045019c ಊಚುಃ ಸರ್ವೇ ಯಥಾವೃತ್ತಂ ರಾಜ್ಞಃ ಪ್ರಿಯಹಿತೇ ರತಾಃ||

ಸೂತನು ಹೇಳಿದನು: “ಈ ರೀತಿ ರಾಜನಿಂದ ಆಜ್ಞೆಯಾದಾಗ ಮಂತ್ರಿಗಳು ಪ್ರಿಯಹಿತ ನಿರತ ರಾಜ ನರಾಧಿಪನಿಗೆ ಎಲ್ಲವನ್ನೂ ವರದಿಮಾಡಿದರು.

01045020a ಬಭೂವ ಮೃಗಯಾಶೀಲಸ್ತವ ರಾಜನ್ಪಿತಾ ಸದಾ|

01045020c ಯಥಾ ಪಾಂಡುರ್ಮಹಾಭಾಗೋ ಧನುರ್ಧರವರೋ ಯುಧಿ|

01045020e ಅಸ್ಮಾಸ್ವಾಸಜ್ಯ ಸರ್ವಾಣಿ ರಾಜಕಾರ್ಯಾಣ್ಯಶೇಷತಃ||

“ರಾಜನ್! ಯುದ್ಧದಲ್ಲಿ ಮಹಾಭಾಗ ಪಾಂಡುವಿನಂತೆ ಶ್ರೇಷ್ಠ ಧನುರ್ಧರನಾದ ನಿನ್ನ ತಂದೆಯು ಸದಾ ಮೃಗಯಾಶೀಲನಾಗಿ ರಾಜಕಾರ್ಯಗಳೊಂದನ್ನೂ ಬಿಡದೇ ಎಲ್ಲವನ್ನು ನಮಗೊಪ್ಪಿಸಿದ್ದನು.

01045021a ಸ ಕದಾ ಚಿದ್ವನಚರೋ ಮೃಗಂ ವಿವ್ಯಾಧ ಪತ್ರಿಣಾ|

01045021c ವಿದ್ಧ್ವಾ ಚಾನ್ವಸರತ್ತೂರ್ಣಂ ತಂ ಮೃಗಂ ಗಹನೇ ವನೇ||

01045022a ಪದಾತಿರ್ಬದ್ಧನಿಸ್ತ್ರಿಂಶಸ್ತತಾಯುಧಕಲಾಪವಾನ್|

01045022c ನ ಚಾಸಸಾದ ಗಹನೇ ಮೃಗಂ ನಷ್ಟಂ ಪಿತಾ ತವ||

ಒಮ್ಮೆ ಅವನು ವನದಲ್ಲಿ ಸಂಚರಿಸುತ್ತಿದ್ದ ಮೃಗವೊಂದನ್ನು ಬಾಣದಿಂದ ಹೊಡೆದು, ಖಡ್ಗ ಮತ್ತು ಧನುಸ್ಸು ಭತ್ತಳಿಗೆಗಳನ್ನು ಹಿಡಿದು ಕಾಲ್ನಡುಗೆಯಲ್ಲಿಯೇ ಹೊಡೆತ ತಿಂದ ಮೃಗವನ್ನು ಆ ದಟ್ಟಡವಿಯಲ್ಲಿ ಹಿಂಬಾಲಿಸುತ್ತಾ ಹೋದನು.  ಆದರೆ ನಿನ್ನ ತಂದೆಗೆ ಆ ಮೃಗವು ದೊರೆಯಲೇ ಇಲ್ಲ.

01045023a ಪರಿಶ್ರಾಂತೋ ವಯಃಸ್ತಶ್ಚ ಷಷ್ಟಿವರ್ಷೋ ಜರಾನ್ವಿತಃ|

01045023c ಕ್ಷುಧಿತಃ ಸ ಮಹಾರಣ್ಯೇ ದದರ್ಶ ಮುನಿಮಂತಿಕೇ||

ಅರವತ್ತು ವರ್ಷ ವಯಸ್ಸಿನ ವೃದ್ಧನಾಗಿದ್ದ ಅವನು ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ, ಆ ಮಹಾರಣ್ಯದಲ್ಲಿ ಓರ್ವ ಮುನಿಯನ್ನು ಕಂಡನು.

01045024a ಸ ತಂ ಪಪ್ರಚ್ಛ ರಾಜೇಂದ್ರೋ ಮುನಿಂ ಮೌನವ್ರತಾನ್ವಿತಂ|

01045024c ನ ಚ ಕಿಂ ಚಿದುವಾಚೈನಂ ಸ ಮುನಿಃ ಪೃಚ್ಛತೋಽಪಿ ಸನ್||

ಆ ಸಮಯದಲ್ಲಿ ಮೌನವ್ರತವನ್ನಾಚರಿಸುತ್ತಿದ್ದ ಆ ಮುನಿಯನ್ನು ರಾಜೇಂದ್ರನು ಕೇಳಿದನು. ಪುನಃ ಪುನಃ ಕೇಳಿದರೂ ಆ ಮುನಿಯು ಯಾವ ಉತ್ತರವನ್ನೂ ನೀಡಲಿಲ್ಲ.

01045025a ತತೋ ರಾಜಾ ಕ್ಷುಚ್ಛ್ರಮಾರ್ತಸ್ತಂ ಮುನಿಂ ಸ್ಥಾಣುವತ್ಸ್ಥಿತಂ|

01045025c ಮೌನವ್ರತಧರಂ ಶಾಂತಂ ಸದ್ಯೋ ಮನ್ಯುವಶಂ ಯಯೌ||

ಹಸಿವು ಬಾಯಾರಿಕೆಗಳಿಂದ ಬಳಲಿದ್ದ ರಾಜನು ಮೌನವ್ರತಧರನಾಗಿ ಶಾಂತವಾಗಿ ಅಲುಗಾಡದೇ ಕುಳಿತಿದ್ದ ಮುನಿಯನ್ನು ಕಂಡು ಸಿಟ್ಟಿಗೆದ್ದನು.

01045026a ನ ಬುಬೋಧ ಹಿ ತಂ ರಾಜಾ ಮೌನವ್ರತಧರಂ ಮುನಿಂ|

01045026c ಸ ತಂ ಮನ್ಯುಸಮಾವಿಷ್ಟೋ ಧರ್ಷಯಾಮಾಸ ತೇ ಪಿತಾ||

ಮುನಿಯು ಮೌನವ್ರತವನ್ನು ಪಾಲಿಸುತ್ತಿದ್ದಾನೆಂದು ತಿಳಿಯದೇ ನಿನ್ನ ತಂದೆ ರಾಜನು ಸಿಟ್ಟಿನ ಆವೇಶದಲ್ಲಿ ಅವನನ್ನು ಅಪಮಾನಿಸಿದನು.

01045027a ಮೃತಂ ಸರ್ಪಂ ಧನುಷ್ಕೋಟ್ಯಾ ಸಮುತ್ಕ್ಷಿಪ್ಯ ಧರಾತಲಾತ್|

01045027c ತಸ್ಯ ಶುದ್ಧಾತ್ಮನಃ ಪ್ರಾದಾತ್ಸ್ಕಂಧೇ ಭರತಸತ್ತಮ||

ಭರತಸತ್ತಮನು ತನ್ನ ಧನುಸ್ಸಿನ ತುದಿಯಿಂದ ನೆಲದ ಮೇಲೆ ಸತ್ತು ಬಿದ್ದಿದ್ದ ಸರ್ಪವನ್ನು ಮೇಲೆತ್ತಿ ಆ ಶುದ್ಧಾತ್ಮನ ಭುಜಗಳ ಮೇಲೆ ಹಾಕಿದನು.

01045028a ನ ಚೋವಾಚ ಸ ಮೇಧಾವೀ ತಮಥೋ ಸಾಧ್ವಸಾಧು ವಾ|

01045028c ತಸ್ಥೌ ತಥೈವ ಚಾಕ್ರುಧ್ಯನ್ಸರ್ಪಂ ಸ್ಕಂಧೇನ ಧಾರಯನ್||

ಆದರೂ ಆ ಮೇಧಾವಿಯು ಒಳ್ಳೆಯದಾಗಲೀ ಕೆಟ್ಟುದಾಗಲೀ ಒಂದು ಮಾತನ್ನೂ ಆಡಲಿಲ್ಲ. ಸರ್ಪವನ್ನು ತನ್ನ ಭುಜದ ಮೇಲೆ ಹೊತ್ತು ಹಾಗೆಯೇ ನಿಂತುಕೊಂಡಿದ್ದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪಂಚಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ನಲವತ್ತೈದನೆಯ ಅಧ್ಯಾಯವು.

Comments are closed.