ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೯
ಇಂದ್ರವಿಜಯೋಽಪಖ್ಯಾನ
ಯುಧಿಷ್ಠಿರನು ಕೇಳಲು ಶಲ್ಯನು ಇಂದ್ರ ವಿಜಯೋಪಾಖ್ಯಾನವನ್ನು ಪ್ರಾಂಭಿಸುವುದು (೧-೨). ತ್ವಷ್ಟನು ಪ್ರಜಾಪತಿಯಾಗಿದ್ದಾಗ ಸೃಷ್ಟಿಸಿದ ಇಂದ್ರದ್ರೋಹೀ ಮಗ ತ್ರಿಶಿರನ ತಪಸ್ಸಿನಿಂದ ಹೆದರಿದ ಇಂದ್ರನು ಅವನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದುದು (೩-೧೨). ಪ್ರಯತ್ನಿಸಿದರೂ ಅಪ್ಸರೆಯರು ಅದರಲ್ಲಿ ಸೋಲಲು ಚಿಂತಿತನಾದ ಇಂದ್ರನು ವಜ್ರಾಯುಧದಿಂದ ತ್ರಿಶಿರನನ್ನು ಕೊಂದುದು (೧೩-೨೩). ಓರ್ವ ಬಡಿಗನ ಸಹಾಯದಿಂದ ಹತನಾಗಿ ಬಿದ್ದಿದ್ದ ತ್ರಿಶಿರನ ಶಿರಗಳನ್ನು ಕತ್ತರಿಸಿ ಇಂದ್ರನು ಸ್ವರ್ಗಕ್ಕೆ ಮರಳಿದುದು (೨೪-೩೯). ಕುಪಿತನಾದ ತ್ವಷ್ಟನು ತನ್ನ ಮಗನನ್ನು ಕೊಂದ ಇಂದ್ರನನ್ನು ಕೊಲ್ಲಲು ವೃತ್ರನನ್ನು ಸೃಷ್ಟಿಸಿ ಕಳುಹಿಸಿದುದು (೪೦-೪೫). ವೃತ್ರ-ಇಂದ್ರರ ಯುದ್ಧದಲ್ಲಿ ಇಂದ್ರನು ಸೋಲಲು ಸಮಾಲೋಚನೆ (೪೬-೫೨).
05009001 ಯುಧಿಷ್ಠಿರ ಉವಾಚ|
05009001a ಕಥಮಿಂದ್ರೇಣ ರಾಜೇಂದ್ರ ಸಭಾರ್ಯೇಣ ಮಹಾತ್ಮನಾ|
05009001c ದುಃಖಂ ಪ್ರಾಪ್ತಂ ಪರಂ ಘೋರಮೇತದಿಚ್ಚಾಮಿ ವೇದಿತುಂ||
ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಮಹಾತ್ಮ ಇಂದ್ರನು ಭಾರ್ಯೆಯೊಡನೆ ಹೇಗೆ ಪರಮ ಘೋರ ದುಃಖವನ್ನು ಹೊಂದಿದನು ಎನ್ನುವುದನ್ನು ತಿಳಿಯಲು ಬಯಸುತ್ತೇನೆ.”
05009002 ಶಲ್ಯ ಉವಾಚ|
05009002a ಶೃಣು ರಾಜನ್ಪುರಾ ವೃತ್ತಮಿತಿಹಾಸಂ ಪುರಾತನಂ|
05009002c ಸಭಾರ್ಯೇಣ ಯಥಾ ಪ್ರಾಪ್ತಂ ದುಃಖಮಿಂದ್ರೇಣ ಭಾರತ||
ಶಲ್ಯನು ಹೇಳಿದನು: “ರಾಜನ್! ಭಾರತ! ಹಿಂದೆ ಇಂದ್ರನು ಭಾರ್ಯೆಯೊಡನೆ ಹೇಗೆ ದುಃಖವನ್ನು ಪಡೆದನು ಎನ್ನುವ ಈ ಪುರಾತನ ಇತಿಹಾಸ ವೃತ್ತಾಂತವನ್ನು ಕೇಳು.
05009003a ತ್ವಷ್ಟಾ ಪ್ರಜಾಪತಿರ್ಹ್ಯಾಸೀದ್ದೇವಶ್ರೇಷ್ಠೋ ಮಹಾತಪಾಃ|
05009003c ಸ ಪುತ್ರಂ ವೈ ತ್ರಿಶಿರಸಮಿಂದ್ರದ್ರೋಹಾತ್ಕಿಲಾಸೃಜತ್||
ದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನಷ್ಟೆ?
05009004a ಐಂದ್ರಂ ಸ ಪ್ರಾರ್ಥಯತ್ಸ್ಥಾನಂ ವಿಶ್ವರೂಪೋ ಮಹಾದ್ಯುತಿಃ|
05009004c ತೈಸ್ತ್ರಿಭಿರ್ವದನೈರ್ಘೋರೈಃ ಸೂರ್ಯೇಂದುಜ್ವಲನೋಪಮೈಃ||
05009005a ವೇದಾನೇಕೇನ ಸೋಽಧೀತೇ ಸುರಾಮೇಕೇನ ಚಾಪಿಬತ್|
05009005c ಏಕೇನ ಚ ದಿಶಃ ಸರ್ವಾಃ ಪಿಬನ್ನಿವ ನಿರೀಕ್ಷತೇ||
ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು ಮತ್ತು ಇನ್ನೊಂದರಿಂದ ಎಲ್ಲ ದಿಕ್ಕುಗಳನ್ನೂ ಕುಡಿದುಬಿಡುತ್ತಾನೋ ಎನ್ನುವಂತೆ ನೋಡುತ್ತಿದ್ದನು.
05009006a ಸ ತಪಸ್ವೀ ಮೃದುರ್ದಾಂತೋ ಧರ್ಮೇ ತಪಸಿ ಚೋದ್ಯತಃ|
05009006c ತಪೋಽತಪ್ಯನ್ಮಹತ್ತೀವ್ರಂ ಸುದುಶ್ಚರಮರಿಂದಮ||
ಆ ತಪಸ್ವಿಯು ಮೃದುವೂ ದಾಂತನೂ ಆಗಿದ್ದು ಧರ್ಮದ ತಪಸ್ಸಿನಲ್ಲಿ ತೊಡಗಿಕೊಂಡಿದ್ದನು. ಅರಿಂದಮ! ಅವನು ಆಚರಿಸಲು ಅತಿಕಷ್ಟವಾದ ಮಹಾ ತೀವ್ರ ತಪಸ್ಸನ್ನು ತಪಿಸಿದನು.
05009007a ತಸ್ಯ ದೃಷ್ಟ್ವಾ ತಪೋವೀರ್ಯಂ ಸತ್ತ್ವಂ ಚಾಮಿತತೇಜಸಃ|
05009007c ವಿಷಾದಮಗಮಚ್ಚಕ್ರ ಇಂದ್ರೋಽಯಂ ಮಾ ಭವೇದಿತಿ||
ಆ ತಪೋವೀರ್ಯ, ಸತ್ವಯುತ, ಅಮಿತತೇಜಸನನ್ನು ನೋಡಿ ಇಂದ್ರನು ಇವನು ಇಂದ್ರನಾಗಬಾರದು ಎಂದು ವಿಷಾದಿಸಿದನು.
05009008a ಕಥಂ ಸಜ್ಜೇತ ಭೋಗೇಷು ನ ಚ ತಪ್ಯೇನ್ಮಹತ್ತಪಃ|
05009008c ವಿವರ್ಧಮಾನಸ್ತ್ರಿಶಿರಾಃ ಸರ್ವಂ ತ್ರಿಭುವನಂ ಗ್ರಸೇತ್||
“ಇವನು ಭೋಗಗಳಲ್ಲಿ ತೊಡಗುವಂತೆ ಹೇಗೆಮಾಡಬೇಕು? ಇವನು ಮಹಾತಪಸ್ಸನ್ನು ತಪಿಸದಂತೆ ಏನು ಮಾಡಬೇಕು? ವರ್ಧಿಸುತ್ತಿರುವ ತ್ರಿಶಿರನು ತ್ರಿಭುವನವೆಲ್ಲವನ್ನೂ ಕಬಳಿಸಿಬಿಡುತ್ತಾನೆ.”
05009009a ಇತಿ ಸಂಚಿಂತ್ಯ ಬಹುಧಾ ಬುದ್ಧಿಮಾನ್ಭರತರ್ಷಭ|
05009009c ಆಜ್ಞಾಪಯತ್ಸೋಽಪ್ಸರಸಸ್ತ್ವಷ್ಟೃಪುತ್ರಪ್ರಲೋಭನೇ||
ಭರತರ್ಷಭ! ಹೀಗೆ ಬಹಳಷ್ಟು ಯೋಚಿಸಿದ ಬುದ್ಧಿಮಾನನು ತ್ವಷ್ಟಪುತ್ರನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದನು.
05009010a ಯಥಾ ಸ ಸಜ್ಜೇತ್ತ್ರಿಶಿರಾಃ ಕಾಮಭೋಗೇಷು ವೈ ಭೃಶಂ|
05009010c ಕ್ಷಿಪ್ರಂ ಕುರುತ ಗಚ್ಚಧ್ವಂ ಪ್ರಲೋಭಯತ ಮಾಚಿರಂ||
“ತ್ರಿಶಿರನನ್ನು ಕಾಮಭೋಗಗಳಲ್ಲಿ ತೊಡಗಿಸಿ. ಬೇಗನೇ ಹೋಗಿ ಕ್ಷಿಪ್ರದಲ್ಲಿಯೇ ಅವನನ್ನು ಪ್ರಲೋಭಗೊಳಿಸಿ.
05009011a ಶೃಂಗಾರವೇಷಾಃ ಸುಶ್ರೋಣ್ಯೋ ಭಾವೈರ್ಯುಕ್ತಾ ಮನೋಹರೈಃ|
05009011c ಪ್ರಲೋಭಯತ ಭದ್ರಂ ವಃ ಶಮಯಧ್ವಂ ಭಯಂ ಮಮ||
ಸುಶ್ರೋಣಿಯರೇ! ಶೃಂಗಾರವೇಷಗಳನ್ನು ಧರಿಸಿ ಮನೋಹರ ಭಾವಗಳಿಂದೊಡಗೂಡಿ ಅವನನ್ನು ಪ್ರಲೋಭಗೊಳಿಸಿ ಮತ್ತು ನನ್ನ ಭಯವನ್ನು ಶಮನಗೊಳಿಸಿ.
05009012a ಅಸ್ವಸ್ಥಂ ಹ್ಯಾತ್ಮನಾತ್ಮಾನಂ ಲಕ್ಷಯಾಮಿ ವರಾಂಗನಾಃ|
05009012c ಭಯಮೇತನ್ಮಹಾಘೋರಂ ಕ್ಷಿಪ್ರಂ ನಾಶಯತಾಬಲಾಃ||
ವರಾಂಗನೆಯರೇ! ನಾನು ಅತ್ಮದಲ್ಲಿ ಅಸ್ವಸ್ಥ್ಯನಾಗಿರುವುದನ್ನು ಗಮನಿಸಿದ್ದೇನೆ. ಅಬಲೆಯರೇ! ಈ ಮಹಾಘೋರ ಭಯವನ್ನು ಕ್ಷಿಪ್ರದಲ್ಲಿ ನಾಶಗೊಳಿಸಿ.”
05009013 ಅಪ್ಸರಸ ಊಚುಃ|
05009013a ತಥಾ ಯತ್ನಂ ಕರಿಷ್ಯಾಮಃ ಶಕ್ರ ತಸ್ಯ ಪ್ರಲೋಭನೇ|
05009013c ಯಥಾ ನಾವಾಪ್ಸ್ಯಸಿ ಭಯಂ ತಸ್ಮಾದ್ಬಲನಿಷೂದನ||
ಅಪ್ಸರೆಯರು ಹೇಳಿದರು: “ಶಕ್ರ! ಅವನನ್ನು ಪ್ರಲೋಭನಗೊಳಿಸಲು ಪ್ರಯತಿಸುತ್ತೇವೆ. ಬಲನಿಷೂದನ! ಅವನಿಂದ ನೀನು ಯಾವುದೇ ಭಯವನ್ನು ಹೊಂದಬೇಕಾಗಿಲ್ಲ.
05009014a ನಿರ್ದಹನ್ನಿವ ಚಕ್ಷುರ್ಭ್ಯಾಂ ಯೋಽಸಾವಾಸ್ತೇ ತಪೋನಿಧಿಃ|
05009014c ತಂ ಪ್ರಲೋಭಯಿತುಂ ದೇವ ಗಚ್ಚಾಮಃ ಸಹಿತಾ ವಯಂ|
05009014e ಯತಿಷ್ಯಾಮೋ ವಶೇ ಕರ್ತುಂ ವ್ಯಪನೇತುಂ ಚ ತೇ ಭಯಂ||
ದೇವ! ಕಣ್ಣುಗಳಿಂದ ಎಲ್ಲವನ್ನೂ ಸುಟ್ಟುಬಿಡುವನೋ ಎಂದು ಕುಳಿತಿರುವ ಆ ತಪೋನಿಧಿಯನ್ನು ಪ್ರಲೋಭಗೊಳಿಸಲೂ ನಾವು ಒಟ್ಟಾಗಿ ಹೋಗುತ್ತೇವೆ. ಅವನನ್ನು ವಶೀಕರಿಸಲು ಮತ್ತು ನಿನ್ನ ಭಯವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ.””
05009015 ಶಲ್ಯ ಉವಾಚ|
05009015a ಇಂದ್ರೇಣ ತಾಸ್ತ್ವನುಜ್ಞಾತಾ ಜಗ್ಮುಸ್ತ್ರಿಶಿರಸೋಽಂತಿಕಂ|
05009015c ತತ್ರ ತಾ ವಿವಿಧೈರ್ಭಾವೈರ್ಲೋಭಯಂತ್ಯೋ ವರಾಂಗನಾಃ|
05009015e ನೃತ್ಯಂ ಸಂದರ್ಶಯಂತ್ಯಶ್ಚ ತಥೈವಾಂಗೇಷು ಸೌಷ್ಠವಂ||
ಶಲ್ಯನು ಹೇಳಿದನು: “ಇಂದ್ರನಿಂದ ಅನುಜ್ಞಾತರಾದ ಅವರು ತ್ರಿಶಿರನ ಬಳಿ ಹೋದರು. ಅಲ್ಲಿ ಆ ವರಾಂಗನೆಯರು ವಿವಿಧಭಾವಗಳಿಂದ, ನೃತ್ಯವನ್ನು ಮತ್ತು ಹಾಗೆಯೇ ಅಂಗ ಸೌಷ್ಟವವನ್ನು ಪ್ರದರ್ಶಿಸುತ್ತಾ ಅವನನ್ನು ಲೋಭಗೊಳಿಸಲು ಪ್ರಯತ್ನಿಸಿದರು.
05009016a ವಿಚೇರುಃ ಸಂಪ್ರಹರ್ಷಂ ಚ ನಾಭ್ಯಗಚ್ಚನ್ಮಹಾತಪಾಃ|
05009016c ಇಂದ್ರಿಯಾಣಿ ವಶೇ ಕೃತ್ವಾ ಪೂರ್ಣಸಾಗರಸಮ್ನಿಭಃ||
ಆ ಮಹಾತಪಸ್ವಿಯು ಅವರನ್ನು ನೋಡಿದರೂ ಹರ್ಷಿತನಾಗಲಿಲ್ಲ. ಇಂದ್ರಿಯಗಳನ್ನು ವಶೀಕರಿಸಿ ತುಂಬಿದ ಸಾಗರದಂತೆ ತೋರುತ್ತಿದ್ದನು.
05009017a ತಾಸ್ತು ಯತ್ನಂ ಪರಂ ಕೃತ್ವಾ ಪುನಃ ಶಕ್ರಮುಪಸ್ಥಿತಾಃ|
05009017c ಕೃತಾಂಜಲಿಪುಟಾಃ ಸರ್ವಾ ದೇವರಾಜಮಥಾಬ್ರುವನ್||
ಪರಮ ಯತ್ನವನ್ನು ಮಾಡಿ ಅವರು ಪುನಃ ಶಕ್ರನ ಉಪಸ್ಥಿತಿಯಲ್ಲಿ ಬಂದು, ಎಲ್ಲರೂ ಕೈಮುಗಿದು ದೇವರಾಜನಿಗೆ ಹೀಗೆ ಹೇಳಿದರು:
05009018a ನ ಸ ಶಕ್ಯಃ ಸುದುರ್ಧರ್ಷೋ ಧೈರ್ಯಾಚ್ಚಾಲಯಿತುಂ ಪ್ರಭೋ|
05009018c ಯತ್ತೇ ಕಾರ್ಯಂ ಮಹಾಭಾಗ ಕ್ರಿಯತಾಂ ತದನಂತರಂ||
“ಪ್ರಭೋ! ಆ ದುರ್ಧರ್ಷನನ್ನು ಧೈರ್ಯದಿಂದ ಅಲುಗಾಡಿಸಲು ಶಕ್ಯವಿಲ್ಲ. ಮಹಾಭಾಗ! ಇದರ ನಂತರ ಏನು ಮಾಡಬೇಕೋ ಅದನ್ನು ಮಾಡು.”
05009019a ಸಂಪೂಜ್ಯಾಪ್ಸರಸಃ ಶಕ್ರೋ ವಿಸೃಜ್ಯ ಚ ಮಹಾಮತಿಃ|
05009019c ಚಿಂತಯಾಮಾಸ ತಸ್ಯೈವ ವಧೋಪಾಯಂ ಮಹಾತ್ಮನಃ||
ಮಹಾಮತಿ ಶಕ್ರನು ಅಪ್ಸರೆಯರನ್ನು ಗೌರವಿಸಿ ಕಳುಹಿಸಿಕೊಟ್ಟು ಆ ಮಹಾತ್ಮನ ವಧೆಯ ಉಪಾಯವನ್ನು ಚಿಂತಿಸತೊಡಗಿದನು.
05009020a ಸ ತೂಷ್ಣೀಂ ಚಿಂತಯನ್ವೀರೋ ದೇವರಾಜಃ ಪ್ರತಾಪವಾನ್|
05009020c ವಿನಿಶ್ಚಿತಮತಿರ್ಧೀಮಾನ್ವಧೇ ತ್ರಿಶಿರಸೋಽಭವತ್||
ಆ ವೀರ ಪ್ರತಾಪವಾನ್ ಧೀಮಾನ್ ದೇವರಾಜನು ತುಂಬಾ ಚಿಂತಿಸಿ ತ್ರಿಶಿರನ ವಧೆಯ ಕುರಿತು ನಿಶ್ಚಯಿಸಿದನು.
05009021a ವಜ್ರಮಸ್ಯ ಕ್ಷಿಪಾಮ್ಯದ್ಯ ಸ ಕ್ಷಿಪ್ರಂ ನ ಭವಿಷ್ಯತಿ|
05009021c ಶತ್ರುಃ ಪ್ರವೃದ್ಧೋ ನೋಪೇಕ್ಷ್ಯೋ ದುರ್ಬಲೋಽಪಿ ಬಲೀಯಸಾ||
“ಇಂದು ಈ ವಜ್ರವನ್ನು ಅವನ ಮೇಲೆ ಎಸೆಯುತ್ತೇನೆ. ಇದರಿಂದ ಅವನು ಕ್ಷಿಪ್ರವಾಗಿ ಕೊಲ್ಲಲ್ಪಡುತ್ತಾನೆ. ಎಷ್ಟೇ ದುರ್ಬಲನಾಗಿದ್ದ ಶತ್ರುವು ಪ್ರವೃದ್ಧನಾಗುತ್ತಿದ್ದಾನೆಂದರೆ ಬಲಶಾಲಿಯೂ ನಿರ್ಲಕ್ಷಿಸಬಾರದು.”
05009022a ಶಾಸ್ತ್ರಬುದ್ಧ್ಯಾ ವಿನಿಶ್ಚಿತ್ಯ ಕೃತ್ವಾ ಬುದ್ಧಿಂ ವಧೇ ದೃಢಾಂ|
05009022c ಅಥ ವೈಶ್ವಾನರನಿಭಂ ಘೋರರೂಪಂ ಭಯಾವಹಂ|
05009022e ಮುಮೋಚ ವಜ್ರಂ ಸಂಕ್ರುದ್ಧಃ ಶಕ್ರಸ್ತ್ರಿಶಿರಸಂ ಪ್ರತಿ||
ಶಾಸ್ತ್ರಬುದ್ಧಿಯನ್ನುಪಯೋಗಿಸಿ ನಿಶ್ಚಯಿಸಿ ವಧೆಗೆ ದೃಢ ಮನಸ್ಸುಮಾಡಿದನು. ಆಗ ಶಕ್ರನು ಸಂಕ್ರುದ್ಧನಾಗಿ ಅಗ್ನಿಯಂತೆ ಹೊಳೆಯುತ್ತಿರುವ, ಘೋರರೂಪೀ, ಭಯವನ್ನುಂಟುಮಾಡುವ ವಜ್ರವನ್ನು ತ್ರಿಶಿರನ ಮೇಲೆ ಎಸೆದನು.
05009023a ಸ ಪಪಾತ ಹತಸ್ತೇನ ವಜ್ರೇಣ ದೃಢಮಾಹತಃ|
05009023c ಪರ್ವತಸ್ಯೇವ ಶಿಖರಂ ಪ್ರಣುನ್ನಂ ಮೇದಿನೀತಲೇ||
ವಜ್ರದಿಂದ ಜೋರಾಗಿ ಹೊಡೆಯಲ್ಪಟ್ಟು ಹತನಾಗಿ ಅವನು ಪರ್ವತಶಿಖರವು ಮಣ್ಣಾಗಿ ನೆಲಕ್ಕೆ ಬೀಳುವಂತೆ ಬಿದ್ದನು.
05009024a ತಂ ತು ವಜ್ರಹತಂ ದೃಷ್ಟ್ವಾ ಶಯಾನಮಚಲೋಪಮಂ|
05009024c ನ ಶರ್ಮ ಲೇಭೇ ದೇವೇಂದ್ರೋ ದೀಪಿತಸ್ತಸ್ಯ ತೇಜಸಾ|
05009024e ಹತೋಽಪಿ ದೀಪ್ತತೇಜಾಃ ಸ ಜೀವನ್ನಿವ ಚ ದೃಶ್ಯತೇ||
ಅವನು ವಜ್ರದಿಂದ ಹತನಾಗಿ ಮಲಗಿದ ಪರ್ವತದಂತಿರುವುದನ್ನು ನೋಡಿ ದೇವೇಂದ್ರನು ಶಾಂತಿಯನ್ನು ಪಡೆಯಲಿಲ್ಲ. ಅವನು ತೇಜಸ್ಸಿನಿಂದ ಬೆಳಗುತ್ತಿದ್ದನು. ಹತನಾದರೂ ಆ ದೀಪ್ತ ತೇಜಸ್ವಿಯು ಜೀವಂತನಾಗಿದ್ದಾನೋ ಎಂದು ತೋರಿದನು.
05009025a ಅಭಿತಸ್ತತ್ರ ತಕ್ಷಾಣಂ ಘಟಮಾನಂ ಶಚೀಪತಿಃ|
05009025c ಅಪಶ್ಯದಬ್ರವೀಚ್ಚೈನಂ ಸತ್ವರಂ ಪಾಕಶಾಸನಃ|
05009025e ಕ್ಷಿಪ್ರಂ ಚಿಂಧಿ ಶಿರಾಂಸ್ಯಸ್ಯ ಕುರುಷ್ವ ವಚನಂ ಮಮ||
ಭಯಕ್ಕೆ ಸಿಲುಕಿದ ಶಚೀಪತಿಯು ಆಗ ಅಲ್ಲಿಗೆ ಬಂದ ಬಡಿಗನನ್ನು ನೋಡಿದನು. ತಕ್ಷಣವೇ ಪಾಕಶಾಸನನು ಅವನಿಗೆ ಹೇಳಿದನು: “ಬೇಗನೇ ಇವನ ಶಿರಗಳನ್ನು ಕತ್ತರಿಸು. ನನ್ನ ಮಾತಿನಂತೆ ಮಾಡು.”
05009026 ತಕ್ಷೋವಾಚ|
05009026a ಮಹಾಸ್ಕಂಧೋ ಭೃಶಂ ಹ್ಯೇಷ ಪರಶುರ್ನ ತರಿಷ್ಯತಿ|
05009026c ಕರ್ತುಂ ಚಾಹಂ ನ ಶಕ್ಷ್ಯಾಮಿ ಕರ್ಮ ಸದ್ಭಿರ್ವಿಗರ್ಹಿತಂ||
ಬಡಿಗನು ಹೇಳಿದನು: “ಇವನ ಭುಜಗಳು ತುಂಬಾ ದೊಡ್ಡವು. ಈ ಗರಗಸೆಯಿಂದ ಅದು ತುಂಡಾಗುವುದಿಲ್ಲ. ಒಳ್ಳೆಯವರು ಅಲ್ಲಗಳೆಯುವ ಕೆಲಸವನ್ನು ಮಾಡಲೂ ನನಗೆ ಇಷ್ಟವಿಲ್ಲ.”
05009027 ಇಂದ್ರ ಉವಾಚ|
05009027a ಮಾ ಭೈಸ್ತ್ವಂ ಕ್ಷಿಪ್ರಮೇತದ್ವೈ ಕುರುಷ್ವ ವಚನಂ ಮಮ|
05009027c ಮತ್ಪ್ರಸಾದಾದ್ಧಿ ತೇ ಶಸ್ತ್ರಂ ವಜ್ರಕಲ್ಪಂ ಭವಿಷ್ಯತಿ||
ಇಂದ್ರನು ಹೇಳಿದನು: “ಹೆದರಬೇಡ! ಬೇಗನೆ ನಾನು ಹೇಳಿದಂತೆ ಮಾಡು. ನನ್ನ ಪ್ರಸಾದದಿಂದ ನಿನ್ನ ಗರಗಸವು ವಜ್ರಕಲ್ಪವಾಗುತ್ತದೆ.”
05009028 ತಕ್ಷೋವಾಚ|
05009028a ಕಂ ಭವಂತಮಹಂ ವಿದ್ಯಾಂ ಘೋರಕರ್ಮಾಣಮದ್ಯ ವೈ|
05009028c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವೇನ ಕಥಯಸ್ವ ಮೇ||
ಬಡಿಗನು ಹೇಳಿದನು: “ಇಂದು ಈ ಘೋರಕರ್ಮವನ್ನು ಮಾಡಿರುವ ನೀನು ಯಾರೆಂದು ನಾನು ತಿಳಿಯಬೇಕು? ಇದನ್ನು ಕೇಳಲು ಬಯಸುತ್ತೇನೆ. ಸತ್ಯವನ್ನು ಹೇಳು.”
05009029 ಇಂದ್ರ ಉವಾಚ|
05009029a ಅಹಮಿಂದ್ರೋ ದೇವರಾಜಸ್ತಕ್ಷನ್ವಿದಿತಮಸ್ತು ತೇ|
05009029c ಕುರುಷ್ವೈತದ್ಯಥೋಕ್ತಂ ಮೇ ತಕ್ಷನ್ಮಾ ತ್ವಂ ವಿಚಾರಯ||
ಇಂದ್ರನು ಹೇಳಿದನು: “ನಾನು ದೇವರಾಜ ಇಂದ್ರ. ಇದು ನಿನಗೆ ತಿಳಿದಿರಲಿ. ನಾನು ಹೇಳಿದಹಾಗೆ ನೀನು ಮಾಡುತ್ತೀಯೆ. ಬಡಿಗ! ವಿಚಾರಮಾಡಬೇಡ!”
05009030 ತಕ್ಷೋವಾಚ|
05009030a ಕ್ರೂರೇಣ ನಾಪತ್ರಪಸೇ ಕಥಂ ಶಕ್ರೇಹ ಕರ್ಮಣಾ|
05009030c ಋಷಿಪುತ್ರಮಿಮಂ ಹತ್ವಾ ಬ್ರಹ್ಮಹತ್ಯಾಭಯಂ ನ ತೇ||
ಬಡಿಗನು ಹೇಳಿದನು: “ಶಕ್ರ! ಈ ಕ್ರೂರ ಕರ್ಮದಿಂದ ನೀನು ಹೇಗೆ ತಾನೇ ಪರಿತಪಿಸುತ್ತಿಲ್ಲ? ಈ ಋಷಿಪುತ್ರನನ್ನು ಕೊಂದು ನಿನಗೆ ಹೇಗೆ ಬ್ರಹ್ಮಹತ್ಯೆಯ ಭಯವಿಲ್ಲ?”
05009031 ಇಂದ್ರ ಉವಾಚ|
05009031a ಪಶ್ಚಾದ್ಧರ್ಮಂ ಚರಿಷ್ಯಾಮಿ ಪಾವನಾರ್ಥಂ ಸುದುಶ್ಚರಂ|
05009031c ಶತ್ರುರೇಷ ಮಹಾವೀರ್ಯೋ ವಜ್ರೇಣ ನಿಹತೋ ಮಯಾ||
ಇಂದ್ರನು ಹೇಳಿದನು: “ಈ ರೀತಿ ಕೆಟ್ಟದ್ದಾಗಿ ನಡೆದುಕೊಂಡಿದ್ದುದಕ್ಕೆ ಪಾವನಗೊಳ್ಳಲು ನಾನು ಅನಂತರ ಧರ್ಮದಿಂದ ನಡೆದುಕೊಳ್ಳುತ್ತೇನೆ. ಈ ಮಹಾವೀರ್ಯವಂತನು ನನ್ನ ಶತ್ರುವಾಗಿದ್ದನು. ನನ್ನ ವಜ್ರದಿಂದ ಹತನಾದನು.
05009032a ಅದ್ಯಾಪಿ ಚಾಹಮುದ್ವಿಗ್ನಸ್ತಕ್ಷನ್ನಸ್ಮಾದ್ಬಿಭೇಮಿ ವೈ|
05009032c ಕ್ಷಿಪ್ರಂ ಚಿಂಧಿ ಶಿರಾಂಸಿ ತ್ವಂ ಕರಿಷ್ಯೇಽನುಗ್ರಹಂ ತವ||
ಬಡಿಗ! ಈಗಲೂ ಕೂಡ ನಾನು ಉದ್ವಿಗ್ನನಾಗಿದ್ದೇನೆ. ಇವನಿಂದ ಈಗಲೂ ಭಯಗೊಳ್ಳುತ್ತೇನೆ. ಬೇಗನೆ ಇವನ ಶಿರಗಳನ್ನು ಕತ್ತರಿಸು. ನಿನಗೆ ಅನುಗ್ರಹವನ್ನು ಮಾಡುತ್ತೇನೆ.
05009033a ಶಿರಃ ಪಶೋಸ್ತೇ ದಾಸ್ಯಂತಿ ಭಾಗಂ ಯಜ್ಞೇಷು ಮಾನವಾಃ|
05009033c ಏಷ ತೇಽನುಗ್ರಹಸ್ತಕ್ಷನ್ ಕ್ಷಿಪ್ರಂ ಕುರು ಮಮ ಪ್ರಿಯಂ||
ಯಜ್ಞಗಳಲ್ಲಿ ಮಾನವರು ಪಶುವಿನ ಶಿರೋಭಾಗವನ್ನು ನಿನಗೆ ನೀಡುತ್ತಾರೆ. ಬಡಿಗ! ಈ ಅನುಗ್ರಹವನ್ನು ನಾನು ನಿನಗೆ ನೀಡುತ್ತಿದ್ದೇನೆ. ನನಗೆ ಪ್ರಿಯವಾದುದನ್ನು ಬೇಗ ಮಾಡು!””
05009034 ಶಲ್ಯ ಉವಾಚ|
05009034a ಏತಚ್ಚ್ರುತ್ವಾ ತು ತಕ್ಷಾ ಸ ಮಹೇಂದ್ರವಚನಂ ತದಾ|
05009034c ಶಿರಾಂಸ್ಯಥ ತ್ರಿಶಿರಸಃ ಕುಠಾರೇಣಾಚ್ಚಿನತ್ತದಾ||
ಶಲ್ಯನು ಹೇಳಿದನು: “ಆಗ ಮಹೇಂದ್ರನ ಈ ಮಾತನ್ನು ಕೇಳಿದ ಬಡಿಗನು ತಕ್ಷಣವೇ ತ್ರಿಶಿರನ ತಲೆಗಳನ್ನು ಕೊಡಲಿಯಿಂದ ತುಂಡರಿಸಿದನು.
05009035a ನಿಕೃತ್ತೇಷು ತತಸ್ತೇಷು ನಿಷ್ಕ್ರಾಮಂಸ್ತ್ರಿಶಿರಾಸ್ತ್ವಥ|
05009035c ಕಪಿಂಜಲಾಸ್ತಿತ್ತಿರಾಶ್ಚ ಕಲವಿಂಕಾಶ್ಚ ಸರ್ವಶಃ||
ತಲೆಗಳನ್ನು ತುಂಡರಿಸಲು ತ್ರಿಶಿರಗಳಿಂದ ಬಹಳಷ್ಟು ಗಿಳಿಗಳು, ಕೋಗಿಲೆಗಳು ಮತ್ತು ಗುಬ್ಬಿಗಳು ಹೊರಹಾರಿ ಬಂದವು.
05009036a ಯೇನ ವೇದಾನಧೀತೇ ಸ್ಮ ಪಿಬತೇ ಸೋಮಮೇವ ಚ|
05009036c ತಸ್ಮಾದ್ವಕ್ತ್ರಾನ್ವಿನಿಷ್ಪೇತುಃ ಕ್ಷಿಪ್ರಂ ತಸ್ಯ ಕಪಿಂಜಲಾಃ||
ಯಾವ ಬಾಯಿಯಿಂದ ವೇದಗಳನ್ನು ಪಠಿಸುತ್ತಿದ್ದನೋ ಮತ್ತು ಸೋಮವನ್ನು ಕುಡಿಯುತ್ತಿದ್ದನೋ ಆ ಬಾಯಿಯಿಂದ ಒಂದೇಸಮನೆ ಕಪಿಂಜಲಗಳು ಹಾರಿಬಂದವು.
05009037a ಯೇನ ಸರ್ವಾ ದಿಶೋ ರಾಜನ್ಪಿಬನ್ನಿವ ನಿರೀಕ್ಷತೇ|
05009037c ತಸ್ಮಾದ್ವಕ್ತ್ರಾದ್ವಿನಿಷ್ಪೇತುಸ್ತಿತ್ತಿರಾಸ್ತಸ್ಯ ಪಾಂಡವ||
ರಾಜನ್! ಯಾವುದರಿಂದ ದಿಕ್ಕುಗಳೆಲ್ಲವನ್ನೂ ಕುಡಿದುಬಿಡುವವನಂತೆ ನೋಡುತ್ತಿದ್ದನೋ ಆ ಮುಖದಿಂದ ಬಹಳಷ್ಟು ಕೋಗಿಲೆಗಳು ಹೊರಬಂದವು.
05009038a ಯತ್ಸುರಾಪಂ ತು ತಸ್ಯಾಸೀದ್ವಕ್ತ್ರಂ ತ್ರಿಶಿರಸಸ್ತದಾ|
05009038c ಕಲವಿಂಕಾ ವಿನಿಷ್ಪೇತುಸ್ತೇನಾಸ್ಯ ಭರತರ್ಷಭ||
ಭರತಶ್ರೇಷ್ಠ! ಯಾವುದರಿಂದ ಸುರಾಪಾನ ಮಾಡುತ್ತಿದ್ದನೋ ತ್ರಿಶಿರನ ಆ ಮುಖದಿಂದ ಗುಬ್ಬಿ-ಗಿಡುಗಗಳು ಹೊರಬಂದವು
05009039a ತತಸ್ತೇಷು ನಿಕೃತ್ತೇಷು ವಿಜ್ವರೋ ಮಘವಾನಭೂತ್|
05009039c ಜಗಾಮ ತ್ರಿದಿವಂ ಹೃಷ್ಟಸ್ತಕ್ಷಾಪಿ ಸ್ವಗೃಹಾನ್ಯಯೌ||
ತಲೆಗಳು ತುಂಡರಿಸಲ್ಪಡಲು ಮಘವತನು ವಿಜ್ವರನಾದನು. ಸಂತೋಷಗೊಂಡು ತ್ರಿದಿವಕ್ಕೆ ಹೋಗಿ ಸ್ವಗೃಹವನ್ನು ಸೇರಿದನು.
05009040a ತ್ವಷ್ಟಾ ಪ್ರಜಾಪತಿಃ ಶ್ರುತ್ವಾ ಶಕ್ರೇಣಾಥ ಹತಂ ಸುತಂ|
05009040c ಕ್ರೋಧಸಂರಕ್ತನಯನ ಇದಂ ವಚನಮಬ್ರವೀತ್||
ಪ್ರಜಾಪತಿ ತ್ವಷ್ಟನು ಶಕ್ರನಿಂದ ತನ್ನ ಮಗನು ಹತನಾದುದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಹೀಗೆ ಹೇಳಿದನು:
05009041a ತಪ್ಯಮಾನಂ ತಪೋ ನಿತ್ಯಂ ಕ್ಷಾಂತಂ ದಾಂತಂ ಜಿತೇಂದ್ರಿಯಂ|
05009041c ಅನಾಪರಾಧಿನಂ ಯಸ್ಮಾತ್ಪುತ್ರಂ ಹಿಂಸಿತವಾನ್ಮಮ||
05009042a ತಸ್ಮಾಚ್ಚಕ್ರವಧಾರ್ಥಾಯ ವೃತ್ರಮುತ್ಪಾದಯಾಮ್ಯಹಂ|
“ತಪಸ್ಸನ್ನು ತಪಿಸುತ್ತಿರುವ, ನಿತ್ಯವೂ ಕ್ಷಾಂತ, ದಾಂತ ಮತ್ತು ಜಿತೇಂದ್ರಿಯನಾಗಿ ಅನಾಪರಾಧಿಯಾಗಿದ್ದ ನನ್ನ ಪುತ್ರನನ್ನು ಯಾರು ಹಿಂಸಿಸಿದ್ದಾನೋ ಆ ಶಕ್ರನ ವಧೆಗಾಗಿ ನಾನು ವೃತ್ರನನ್ನು ಉತ್ಪಾದಿಸುತ್ತಿದ್ದೇನೆ.
05009042c ಲೋಕಾಃ ಪಶ್ಯಂತು ಮೇ ವೀರ್ಯಂ ತಪಸಶ್ಚ ಬಲಂ ಮಹತ್|
05009042e ಸ ಚ ಪಶ್ಯತು ದೇವೇಂದ್ರೋ ದುರಾತ್ಮಾ ಪಾಪಚೇತನಃ||
ನನ್ನ ವೀರ್ಯವನ್ನು ಮತ್ತು ತಪಸ್ಸಿನ ಮಹಾಬಲವನ್ನು ಲೋಕಗಳು ನೋಡಲಿ! ದುರಾತ್ಮ ಪಾಪಚೇತನ ದೇವೇಂದ್ರನೂ ಇದನ್ನು ನೋಡಲಿ.”
05009043a ಉಪಸ್ಪೃಶ್ಯ ತತಃ ಕ್ರುದ್ಧಸ್ತಪಸ್ವೀ ಸುಮಹಾಯಶಾಃ|
05009043c ಅಗ್ನಿಂ ಹುತ್ವಾ ಸಮುತ್ಪಾದ್ಯ ಘೋರಂ ವೃತ್ರಮುವಾಚ ಹ|
05009043e ಇಂದ್ರಶತ್ರೋ ವಿವರ್ಧಸ್ವ ಪ್ರಭಾವಾತ್ತಪಸೋ ಮಮ||
ಆಗ ಆ ಸುಮಹಾಯಶ ಕೃದ್ಧತಪಸ್ವಿಯು ನೀರನ್ನು ಮುಟ್ಟಿ, ಅಗ್ನಿಯಲ್ಲಿ ಆಹುತಿಯನ್ನು ಹಾಕಿ ಘೋರ ವೃತ್ರನನ್ನು ಉತ್ಪಾದಿಸಿ ಹೇಳಿದನು: “ಇಂದ್ರಶತ್ರುವೇ! ನನ್ನ ತಪಸ್ಸಿನ ಪ್ರಭಾವದಿಂದ ವಿವರ್ಧನಾಗು.”
05009044a ಸೋಽವರ್ಧತ ದಿವಂ ಸ್ತಬ್ಧ್ವಾ ಸೂರ್ಯವೈಶ್ವಾನರೋಪಮಃ|
05009044c ಕಿಂ ಕರೋಮೀತಿ ಚೋವಾಚ ಕಾಲಸೂರ್ಯ ಇವೋದಿತಃ|
ಸೂರ್ಯ-ಅಗ್ನಿಯರ ಸರಿಸಮನಾದ ಅವನು ದಿವವನ್ನು ಸ್ತಬ್ಧಗೊಳಿಸಿ ಬೆಳೆದನು. ಕಾಲಸೂರ್ಯನಂತೆ ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದನು.
05009044e ಶಕ್ರಂ ಜಹೀತಿ ಚಾಪ್ಯುಕ್ತೋ ಜಗಾಮ ತ್ರಿದಿವಂ ತತಃ||
05009045a ತತೋ ಯುದ್ಧಂ ಸಮಭವದ್ವೃತ್ರವಾಸವಯೋಸ್ತದಾ|
05009045c ಸಂಕ್ರುದ್ಧಯೋರ್ಮಹಾಘೋರಂ ಪ್ರಸಕ್ತಂ ಕುರುಸತ್ತಮ||
“ಇಂದ್ರನನ್ನು ಕೊಲ್ಲು!” ಎಂದು ಹೇಳಿ ಅವನು ತ್ರಿದಿವಕ್ಕೆ ತೆರಳಿದನು. ಆಗ ವೃತ್ರ-ವಾಸವರ ನಡುವೆ ಯುದ್ಧವು ನಡೆಯಿತು.
05009046a ತತೋ ಜಗ್ರಾಹ ದೇವೇಂದ್ರಂ ವೃತ್ರೋ ವೀರಃ ಶತಕ್ರತುಂ|
05009046c ಅಪಾವೃತ್ಯ ಸ ಜಗ್ರಾಸ ವೃತ್ರಃ ಕ್ರೋಧಸಮನ್ವಿತಃ||
ಆಗ ವೃತ್ರನು ವೀರ ಶತಕ್ರತು ದೇವೇಂದ್ರನನ್ನು ಹಿಡಿದನು. ಅವನನ್ನು ಜೋರಾಗಿ ತಿರುಗಿಸಿ ಕ್ರೋಧಸಮನ್ವಿತನಾದ ವೃತ್ರನು ನುಂಗಿದನು.
05009047a ಗ್ರಸ್ತೇ ವೃತ್ರೇಣ ಶಕ್ರೇ ತು ಸಂಭ್ರಾಂತಾಸ್ತ್ರಿದಶಾಸ್ತದಾ|
05009047c ಅಸೃಜಂಸ್ತೇ ಮಹಾಸತ್ತ್ವಾ ಜೃಂಭಿಕಾಂ ವೃತ್ರನಾಶಿನೀಂ||
ವೃತ್ರನಿಂದ ಶಕ್ರನು ನುಂಗಲ್ಪಡಲು ಮಹಾಸತ್ವಶಾಲೀ ತ್ರಿದಶರು ಸಂಭ್ರಾಂತರಾಗಿ ವೃತ್ರನಾಶಿನೀ ಜೃಂಭಿಕೆ (ಆಕಳಿಕೆ) ಯನ್ನು ಸೃಷ್ಟಿಸಿದರು.
05009048a ವಿಜೃಂಭಮಾಣಸ್ಯ ತತೋ ವೃತ್ರಸ್ಯಾಸ್ಯಾದಪಾವೃತಾತ್|
05009048c ಸ್ವಾನ್ಯಂಗಾನ್ಯಭಿಸಂಕ್ಷಿಪ್ಯ ನಿಷ್ಕ್ರಾಂತೋ ಬಲಸೂದನಃ|
05009048e ತತಃ ಪ್ರಭೃತಿ ಲೋಕೇಷು ಜೃಂಭಿಕಾ ಪ್ರಾಣಿಸಂಶ್ರಿತಾ||
ವೃತ್ರನು ಆಕಳಿಸಲು ಬಾಯಿ ತೆರೆದಾಗ ಬಲಸೂದನನು ತನ್ನ ಅಂಗಾಂಗಗಳನ್ನು ಸಂಕ್ಷಿಪ್ತಗೊಳಿಸಿ ಹೊರಬಂದನು. ಅಂದಿನಿಂದ ಲೋಕದಲ್ಲಿ ಜೃಂಭಿಕೆಯು ಪ್ರಾಣಿಗಳಲ್ಲಿ ಸಂಶ್ರಿತಳಾದಳು.
05009049a ಜಹೃಷುಶ್ಚ ಸುರಾಃ ಸರ್ವೇ ದೃಷ್ಟ್ವಾ ಶಕ್ರಂ ವಿನಿಹ್ಸೃತಂ|
05009049c ತತಃ ಪ್ರವವೃತೇ ಯುದ್ಧಂ ವೃತ್ರವಾಸವಯೋಃ ಪುನಃ|
05009049e ಸಂರಬ್ಧಯೋಸ್ತದಾ ಘೋರಂ ಸುಚಿರಂ ಭರತರ್ಷಭ||
ಶಕ್ರನು ಹೊರಬಂದುದನ್ನು ನೋಡಿದ ಎಲ್ಲ ಸುರರೂ ಸಂತುಷ್ಟರಾದರು. ಆಗ ಪುನಃ ವೃತ್ರ-ವಾಸವರ ನಡುವೆ ಯುದ್ಧವು ಪ್ರಾರಂಭವಾಯಿತು. ಭರತರ್ಷಭ! ಆ ಘೋರ ಮಹಾಯುದ್ಧವು ತುಂಬಾ ಸಮಯದವರೆಗೆ ನಡೆಯಿತು.
05009050a ಯದಾ ವ್ಯವರ್ಧತ ರಣೇ ವೃತ್ರೋ ಬಲಸಮನ್ವಿತಃ|
05009050c ತ್ವಷ್ಟುಸ್ತಪೋಬಲಾದ್ವಿದ್ವಾಂಸ್ತದಾ ಶಕ್ರೋ ನ್ಯವರ್ತತ||
ರಣದಲ್ಲಿ ತನ್ನ ಮತ್ತು ತ್ವಷ್ಟನ ತಪೋಬಲದಿಂದ ಬಲಸಮನ್ವಿತ ವೃತ್ರನು ವರ್ಧಿಸಿ ಅವನದೇ ಮೇಲ್ಗೈಯಾಗಲು ಶಕ್ರನು ಹಿಂದೆ ಸರಿದನು.
05009051a ನಿವೃತ್ತೇ ತು ತದಾ ದೇವಾ ವಿಷಾದಮಗಮನ್ಪರಂ|
05009051c ಸಮೇತ್ಯ ಶಕ್ರೇಣ ಚ ತೇ ತ್ವಷ್ಟುಸ್ತೇಜೋವಿಮೋಹಿತಾಃ|
05009051e ಅಮಂತ್ರಯಂತ ತೇ ಸರ್ವೇ ಮುನಿಭಿಃ ಸಹ ಭಾರತ||
ಅವನು ಹಿಂದೆ ಸರಿಯಲು ದೇವತೆಗಳು ಪರಮ ವಿಷಾದಗೊಂಡರು. ಶಕ್ರನ ಜೊತೆಗೆ ಅವರೂ ಕೂಡ ತ್ವಷ್ಟನ ತೇಜಸ್ಸಿನಿಂದ ವಿಮೋಹಿತರಾದರು. ಭಾರತ! ಆಗ ಅವರೆಲ್ಲರೂ ಮುನಿಗಳನ್ನು ಕೂಡಿ ಮಂತ್ರಾಲೋಚನೆಗೈದರು.
05009052a ಕಿಂ ಕಾರ್ಯಮಿತಿ ತೇ ರಾಜನ್ವಿಚಿಂತ್ಯ ಭಯಮೋಹಿತಾಃ|
05009052c ಜಗ್ಮುಃ ಸರ್ವೇ ಮಹಾತ್ಮಾನಂ ಮನೋಭಿರ್ವಿಷ್ಣುಮವ್ಯಯಂ||
05009052e ಉಪವಿಷ್ಟಾ ಮಂದರಾಗ್ರೇ ಸರ್ವೇ ವೃತ್ರವಧೇಪ್ಸವಃ||
ರಾಜನ್! ಏನು ಮಾಡಬೇಕು ಎಂದು ಚಿಂತಿಸಿ ಭಯಮೋಹಿತರಾಗಿ, ವೃತ್ರನ ವಧೆಯನ್ನುಬಯಸಿದ ಎಲ್ಲರೂ ಮಹಾತ್ಮ, ಅವ್ಯಯ, ಮಂದರಾಗ್ರದಲ್ಲಿ ಕುಳಿತಿರುವ ವಿಷ್ಣುವನ್ನು ನೆನೆದರು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರವಿಜಯೇ ನವಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರವಿಜಯದಲ್ಲಿ ಒಂಭತ್ತನೆಯ ಅಧ್ಯಾಯವು|