|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೧
ವಿರಾಟ ಸಭೆಯಲ್ಲಿ ಪಾಂಡವ ಪಕ್ಷದವರ ಸಮಾಲೋಚನೆ; ಕೃಷ್ಣನಿಂದ ವಿಷಯ ಪ್ರಸ್ತಾವನೆ
ವಿವಾಹದ ನಂತರ ವಿರಾಟನ ಸಭೆಯಲ್ಲಿ ಪಾಂಡವರು, ವೃಷ್ಣಿಗಳು, ಪಾಂಚಾಲರು ಮತ್ತು ವಿರಾಟರು ಆಸೀನರಾದುದು (೧-೯). ಒಪ್ಪಂದದಂತೆ ಪಾಂಡವರು ವನವಾಸ-ಅಜ್ಞಾತವಾಸಗಳನ್ನು ಮುಗಿಸಿದ್ದಾರೆಂದೂ, ಅವರ ರಾಜ್ಯವು ಅವರಿಗೆ ದೊರೆಯಬೇಕೆಂದೂ, ಒಂದುವೇಳೆ ದುರ್ಯೋಧನನು ಅವರಿಗೆ ರಾಜ್ಯವನ್ನು ಹಿಂದಿರುಗಿಸದೇ ಇದ್ದರೆ ಈಗ ಪಾಂಡವರಿಗೆ ಸಹಾಯಕರಿದ್ದಾರೆಂದೂ, ಆದರೆ ನಿರ್ಧರಿಸುವುದರ ಮೊದಲು ಕೌರವರ ವಿಚಾರಗಳೇನೆಂದು ತಿಳಿದುಕೊಳ್ಳಲು ಅವರಲ್ಲಿಗೆ ಸಮರ್ಥ ದೂತನನ್ನು ಕಳುಹಿಸಬೇಕೆಂದು ಕೃಷ್ಣನು ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದುದು (೧೦-೨೫).
05001001 ವೈಶಂಪಾಯನ ಉವಾಚ
05001001a ಕೃತ್ವಾ ವಿವಾಹಂ ತು ಕುರುಪ್ರವೀರಾಸ್|
ತದಾಭಿಮನ್ಯೋರ್ಮುದಿತಸ್ವಪಕ್ಷಾಃ|
05001001c ವಿಶ್ರಮ್ಯ ಚತ್ವಾರ್ಯುಷಸಃ ಪ್ರತೀತಾಃ|
ಸಭಾಂ ವಿರಾಟಸ್ಯ ತತೋಽಭಿಜಗ್ಮುಃ||
ವೈಶಂಪಾಯನನು ಹೇಳಿದನು: “ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು.
05001002a ಸಭಾ ತು ಸಾ ಮತ್ಸ್ಯಪತೇಃ ಸಮೃದ್ಧಾ|
ಮಣಿಪ್ರವೇಕೋತ್ತಮರತ್ನಚಿತ್ರಾ|
05001002c ನ್ಯಸ್ತಾಸನಾ ಮಾಲ್ಯವತೀ ಸುಗಂಧಾ|
ತಾಮಭ್ಯಯುಸ್ತೇ ನರರಾಜವರ್ಯಾಃ||
ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು.
05001003a ಅಥಾಸನಾನ್ಯಾವಿಶತಾಂ ಪುರಸ್ತಾದ್|
ಉಭೌ ವಿರಾಟದ್ರುಪದೌ ನರೇಂದ್ರೌ|
05001003c ವೃದ್ಧಶ್ಚ ಮಾನ್ಯಃ ಪೃಥಿವೀಪತೀನಾಂ|
ಪಿತಾಮಹೋ ರಾಮಜನಾರ್ದನಾಭ್ಯಾಂ||
ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ ರಾಜರೀರ್ವರು, ಮತ್ತು ತಂದೆಯೊಂದಿಗೆ ಬಲರಾಮ ಜನಾರ್ದನರಿಬ್ಬರೂ ಕುಳಿತಿದ್ದರು.
05001004a ಪಾಂಚಾಲರಾಜಸ್ಯ ಸಮೀಪತಸ್ತು|
ಶಿನಿಪ್ರವೀರಃ ಸಹರೌಹಿಣೇಯಃ|
05001004c ಮತ್ಸ್ಯಸ್ಯ ರಾಜ್ಞಾಸ್ತು ಸುಸಮ್ನಿಕೃಷ್ಟೌ|
ಜನಾರ್ದನಶ್ಚೈವ ಯುಧಿಷ್ಠಿರಶ್ಚ||
05001005a ಸುತಾಶ್ಚ ಸರ್ವೇ ದ್ರುಪದಸ್ಯ ರಾಜ್ಞೋ|
ಭೀಮಾರ್ಜುನೌ ಮಾದ್ರವತೀಸುತೌ ಚ|
05001005c ಪ್ರದ್ಯುಮ್ನಸಾಂಬೌ ಚ ಯುಧಿ ಪ್ರವೀರೌ|
ವಿರಾಟಪುತ್ರಶ್ಚ ಸಹಾಭಿಮನ್ಯುಃ||
ಪಾಂಚಾಲನ ಸಮೀಪದಲ್ಲಿ ಶಿನಿಪ್ರವೀರನು ರೌಹಿಣೀಯನ ಸಹಿತಲೂ, ಮತ್ಸ್ಯರಾಜನ ಹತ್ತಿರ ಜನಾರ್ದನನೂ, ಯುಧಿಷ್ಠಿರನೂ, ರಾಜ ದ್ರುಪದನ ಎಲ್ಲ ಮಕ್ಕಳೂ, ಭೀಮಾರ್ಜುನರೂ, ಮಾದ್ರಿಯ ಮಕ್ಕಳೀರ್ವರೂ, ಯುದ್ಧಪ್ರವೀರ ಪ್ರದ್ಯುಮ್ನ-ಸಾಂಬರೂ, ವಿರಾಟಪುತ್ರರೊಂದಿಗೆ ಅಭಿಮನ್ಯುವೂ ಕುಳಿತಿದ್ದರು.
05001006a ಸರ್ವೇ ಚ ಶೂರಾಃ ಪಿತೃಭಿಃ ಸಮಾನಾ|
ವೀರ್ಯೇಣ ರೂಪೇಣ ಬಲೇನ ಚೈವ|
05001006c ಉಪಾವಿಶನ್ದ್ರೌಪದೇಯಾಃ ಕುಮಾರಾಃ|
ಸುವರ್ಣಚಿತ್ರೇಷು ವರಾಸನೇಷು||
ವೀರ್ಯ ರೂಪ ಬಲಗಳಲ್ಲಿ ತಂದೆಯಂದಿರ ಸಮಾನರಾಗಿದ್ದ ಶೂರರಾದ ಎಲ್ಲ ದ್ರೌಪದೇಯ ಕುಮಾರರೂ ಬಣ್ಣಬಣ್ಣದ ಸುವರ್ಣಖಚಿತ ಶ್ರೇಷ್ಠ ಆಸನಗಳಲ್ಲಿ ಕುಳಿತಿದ್ದರು.
05001007a ತಥೋಪವಿಷ್ಟೇಷು ಮಹಾರಥೇಷು|
ವಿಭ್ರಾಜಮಾನಾಂಬರಭೂಷಣೇಷು|
05001007c ರರಾಜ ಸಾ ರಾಜವತೀ ಸಮೃದ್ಧಾ|
ಗ್ರಹೈರಿವ ದ್ಯೌರ್ವಿಮಲೈರುಪೇತಾ||
ವಸ್ತ್ರಭೂಷಣಗಳಿಂದ ವಿಭ್ರಾಜಮಾನರಾಗಿ ಅಲ್ಲಿ ಕುಳಿತಿದ್ದ ಮಹಾರಥಿಗಳಿಂದ ಸಮೃದ್ಧ ಆ ರಾಜಸಭೆಯು ವಿಮಲ ಆಕಾಶದಲ್ಲಿ ಕಾಣುವ ಗ್ರಹಗಳಂತೆ ತೋರುತ್ತಿತ್ತು.
05001008a ತತಃ ಕಥಾಸ್ತೇ ಸಮವಾಯಯುಕ್ತಾಃ|
ಕೃತ್ವಾ ವಿಚಿತ್ರಾಃ ಪುರುಷಪ್ರವೀರಾಃ|
05001008c ತಸ್ಥುರ್ಮುಹೂರ್ತಂ ಪರಿಚಿಂತಯಂತಃ|
ಕೃಷ್ಣಂ ನೃಪಾಸ್ತೇ ಸಮುದೀಕ್ಷಮಾಣಾಃ||
ಆಗ ಪರಸ್ಪರರಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಿ ಆ ಪುರುಷಪ್ರವೀರರು ಒಂದು ಕ್ಷಣ ಪರಿಚಿಂತಿಸುತ್ತಾ ಕೃಷ್ಣನನ್ನೇ ನೋಡುತ್ತಾ ಸುಮ್ಮನಾದರು.
05001009a ಕಥಾಂತಮಾಸಾದ್ಯ ಚ ಮಾಧವೇನ|
ಸಂಘಟ್ಟಿತಾಃ ಪಾಂಡವಕಾರ್ಯಹೇತೋಃ|
05001009c ತೇ ರಾಜಸಿಂಹಾಃ ಸಹಿತಾ ಹ್ಯಶೃಣ್ವನ್|
ವಾಕ್ಯಂ ಮಹಾರ್ಥಂ ಚ ಮಹೋದ|ಯಂ ಚ|
ಅವರ ಮಾತುಗಳ ಕೊನೆಯಲ್ಲಿ ಮಾಧವನು ಪಾಂಡವರ ವಿಷಯದ ಕುರಿತು ಅವರ ಮನಸ್ಸನ್ನು ಸೆಳೆದನು. ಆ ರಾಜಸಿಂಹರು ಒಟ್ಟಿಗೇ ಅವನ ಮಹಾರ್ಥವುಳ್ಳ ಮಹೋದಯಕಾರಕ ವಾಕ್ಯಗಳನ್ನು ಕೇಳಿದರು.
05001010 ಕೃಷ್ಣ ಉವಾಚ|
05001010a ಸರ್ವೈರ್ಭವದ್ಭಿರ್ವಿದಿತಂ ಯಥಾಯಂ|
ಯುಧಿಷ್ಠಿರಃ ಸೌಬಲೇನಾಕ್ಷವತ್ಯಾಂ|
05001010c ಜಿತೋ ನಿಕೃತ್ಯಾಪಹೃತಂ ಚ ರಾಜ್ಯಂ|
ಪುನಃ ಪ್ರವಾಸೇ ಸಮಯಃ ಕೃತಶ್ಚ||
ಕೃಷ್ಣನು ಹೇಳಿದನು: “ಸೌಬಲನಿಂದ ದಾಳದಾಟದಲ್ಲಿ ಗೆಲ್ಲಲ್ಪಟ್ಟು ಮೋಸದಿಂದ ಹೇಗೆ ಯುಧಿಷ್ಠಿರನ ರಾಜ್ಯವು ಅಪಹರಿಸಲ್ಪಟ್ಟಿತು ಮತ್ತು ನಂತರದ ಒಪ್ಪಂದದಂತೆ ಅವರು ಹೊರಗೆ ವಾಸಿಸಿದ್ದುದನ್ನೂ ನೀವೆಲ್ಲರೂ ಚೆನ್ನಾಗಿ ತಿಳಿದಿದ್ದೀರಿ.
05001011a ಶಕ್ತೈರ್ವಿಜೇತುಂ ತರಸಾ ಮಹೀಂ ಚ|
ಸತ್ಯೇ ಸ್ಥಿತೈಸ್ತಚ್ಚರಿತಂ ಯಥಾವತ್|
05001011c ಪಾಂಡೋಃ ಸುತೈಸ್ತದ್ವ್ರತಮುಗ್ರರೂಪಂ|
ವರ್ಷಾಣಿ ಷಟ್ಸಪ್ತ ಚ ಭಾರತಾಗ್ರ್ಯೈಃ||
ಕ್ಷಣದಲ್ಲಿಯೇ ಮಹಿಯನ್ನು ಗೆಲ್ಲಲು ಶಕ್ತರಾಗಿದ್ದರೂ ಸತ್ಯದಲ್ಲಿ ಸ್ಥಿತರಾದ ಭಾರತಾಗ್ರ ಪಾಂಡುಸುತರು ಯಥಾವತ್ತಾಗಿ ನಡೆದುಕೊಂಡು ಹದಿಮೂರು ವರ್ಷಗಳ ಆ ಉಗ್ರರೂಪೀ ವ್ರತವನ್ನು ಪೂರೈಸಿದ್ದಾರೆ.
05001012a ತ್ರಯೋದಶಶ್ಚೈವ ಸುದುಸ್ತರೋಽಯಂ|
ಅಜ್ಞಾಯಮಾನೈರ್ಭವತಾಂ ಸಮೀಪೇ|
05001012c ಕ್ಲೇಶಾನಸಹ್ಯಾಂಶ್ಚ ತಿತಿಕ್ಷಮಾಣೈಃ|
ಯಥೋಷಿತಂ ತದ್ವಿದಿತಂ ಚ ಸರ್ವಂ||
ಸುದುಸ್ತರವಾಗಿದ್ದ ಈ ಹದಿಮೂರನೆಯ ವರ್ಷವನ್ನೂ ಕೂಡ ನಿಮ್ಮ ಸಮೀಪದಲ್ಲಿಯೇ ಯಾರಿಗೂ ತಿಳಿಯದಂತೆ ಎಲ್ಲ ರೀತಿಯ ಕ್ಲೇಶಗಳನ್ನು ಸಹಿಸಿಕೊಂಡು ಹೇಗೆ ಕಳೆದರು ಎನ್ನುವುದೂ ನಿಮಗೆಲ್ಲರಿಗೆ ತಿಳಿದಿದೆ.
05001013a ಏವಂ ಗತೇ ಧರ್ಮಸುತಸ್ಯ ರಾಜ್ಞೋ|
ದುರ್ಯೋಧನಸ್ಯಾಪಿ ಚ ಯದ್ಧಿತಂ ಸ್ಯಾತ್|
05001013c ತಚ್ಚಿಂತಯಧ್ವಂ ಕುರುಪಾಂಡವಾನಾಂ|
ಧರ್ಮ್ಯಂ ಚ ಯುಕ್ತಂ ಚ ಯಶಸ್ಕರಂ ಚ||
ಹೀಗಿರಲು ರಾಜ ಧರ್ಮಸುತನಿಗೂ ದುರ್ಯೋಧನನಿಗೂ ಇಬ್ಬರಿಗೂ ಒಳ್ಳೆಯದಾಗುವ ಹಾಗೆ ಕುರುಪಾಂಡವರಿಗೆ ಧರ್ಮವೂ, ಯುಕ್ತವೂ, ಯಶಸ್ಕರವೂ ಆದುದು ಏನು ಎಂದು ಯೋಚಿಸಬೇಕಾಗಿದೆ.
05001014a ಅಧರ್ಮಯುಕ್ತಂ ಚ ನ ಕಾಮಯೇತ|
ರಾಜ್ಯಂ ಸುರಾಣಾಮಪಿ ಧರ್ಮರಾಜಃ|
05001014c ಧರ್ಮಾರ್ಥಯುಕ್ತಂ ಚ ಮಹೀಪತಿತ್ವಂ|
ಗ್ರಾಮೇಽಪಿ ಕಸ್ಮಿಂಶ್ಚಿದಯಂ ಬುಭೂಷೇತ್||
ಧರ್ಮರಾಜನು ಸುರರ ರಾಜ್ಯವೇ ಆದರೂ ಅಧರ್ಮಯುಕ್ತವಾದುದನ್ನು ಬಯಸುವುದಿಲ್ಲ. ಆದರೆ ಒಂದೇ ಗ್ರಾಮದ ಒಡೆತನವನ್ನಾದರೂ, ಅದು ಧರ್ಮಾರ್ಥಯುಕ್ತವಾಗಿದ್ದರೆ, ಅವನು ಸ್ವೀಕರಿಸುತ್ತಾನೆ.
05001015a ಪಿತ್ರ್ಯಂ ಹಿ ರಾಜ್ಯಂ ವಿದಿತಂ ನೃಪಾಣಾಂ|
ಯಥಾಪಕೃಷ್ಟಂ ಧೃತರಾಷ್ಟ್ರಪುತ್ರೈಃ|
05001015c ಮಿಥ್ಯೋಪಚಾರೇಣ ತಥಾಪ್ಯನೇನ|
ಕೃಚ್ಚ್ರಂ ಮಹತ್ಪ್ರಾಪ್ತಮಸಹ್ಯರೂಪಂ||
ಧೃತರಾಷ್ಟ್ರನ ಮಕ್ಕಳು ಇವನ ಪಿತ್ರಾರ್ಜಿತ ರಾಜ್ಯವನ್ನು ಹೇಗೆ ಸುಳ್ಳುಕೆಲಸವನ್ನು ಮಾಡಿ ಅಪಹರಿಸಿದರು ಮತ್ತು ಇವನು ಹೇಗೆ ಸಹಿಸಲಸಾಧ್ಯ ಮಹಾ ಕಷ್ಟಗಳನ್ನು ಅನುಭವಿಸಿದನು ಎನ್ನುವುದು ನೃಪರೆಲ್ಲರಿಗೂ ತಿಳಿದೇ ಇದೆ.
05001016a ನ ಚಾಪಿ ಪಾರ್ಥೋ ವಿಜಿತೋ ರಣೇ ತೈಃ|
ಸ್ವತೇಜಸಾ ಧೃತರಾಷ್ಟ್ರಸ್ಯ ಪುತ್ರೈಃ|
05001016c ತಥಾಪಿ ರಾಜಾ ಸಹಿತಃ ಸುಹೃದ್ಭಿಃ|
ಅಭೀಪ್ಸತೇಽನಾಮಯಮೇವ ತೇಷಾಂ||
ಧೃತರಾಷ್ಟ್ರನ ಮಕ್ಕಳಿಗೆ ತಮ್ಮದೇ ಬಲದಿಂದ ಪಾರ್ಥನನ್ನು ರಣದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಕೂಡ ಹಿತೈಷಿಗಳೊಂದಿಗೆ ರಾಜನು ಅವರಿಗೆ ಒಳ್ಳೆಯದಾಗುವುದರ ಹೊರತಾಗಿ ಏನನ್ನೂ ಬಯಸುವುದಿಲ್ಲ.
05001017a ಯತ್ತತ್ಸ್ವಯಂ ಪಾಂಡುಸುತೈರ್ವಿಜಿತ್ಯ|
ಸಮಾಹೃತಂ ಭೂಮಿಪತೀನ್ನಿಪೀಡ್ಯ|
05001017c ತತ್ಪ್ರಾರ್ಥಯಂತೇ ಪುರುಷಪ್ರವೀರಾಃ|
ಕುಂತೀಸುತಾ ಮಾದ್ರವತೀಸುತೌ ಚ||
ಸ್ವಪ್ರಯತ್ನದಿಂದ ಭೂಮಿಪತಿಗಳನ್ನು ಸೋಲಿಸಿ ಗೆದ್ದು ಒಟ್ಟುಗೂಡಿಸಿದುದನ್ನೇ ಈ ಪುರುಷಪ್ರವೀರ, ಪಾಂಡುಸುತರೂ, ಕುಂತೀಸುತರೂ, ಮಾದ್ರವತೀಸುತರೀರ್ವರೂ ಕೇಳುತ್ತಿದ್ದಾರೆ.
05001018a ಬಾಲಾಸ್ತ್ವಿಮೇ ತೈರ್ವಿವಿಧೈರುಪಾಯೈಃ|
ಸಂಪ್ರಾರ್ಥಿತಾ ಹಂತುಮಮಿತ್ರಸಾಹಾಃ|
05001018c ರಾಜ್ಯಂ ಜಿಹೀರ್ಷದ್ಭಿರಸದ್ಭಿರುಗ್ರೈಃ|
ಸರ್ವಂ ಚ ತದ್ವೋ ವಿದಿತಂ ಯಥಾವತ್||
ಇವರು ಬಾಲಕರಾಗಿರುವಾಗ ಕೂಡ ಇವರ ಅ ಅಮಿತ್ರರು ಹೇಗೆ ರಾಜ್ಯವನ್ನು ತಮ್ಮದನ್ನಾಗಿಯೇ ಮಾಡಿಕೊಳ್ಳಲು ವಿವಿಧ ಉಪಾಯಗಳಿಂದ ಇವರನ್ನು ಕೊಲ್ಲಲು ಪ್ರಯತ್ನಿಸಿದರು ಎನ್ನುವುದನ್ನು ಯಥಾವತ್ತಾಗಿ ನೀವೆಲ್ಲರೂ ತಿಳಿದಿದ್ದೀರಿ.
05001019a ತೇಷಾಂ ಚ ಲೋಭಂ ಪ್ರಸಮೀಕ್ಷ್ಯ ವೃದ್ಧಂ|
ಧರ್ಮಾತ್ಮತಾಂ ಚಾಪಿ ಯುಧಿಷ್ಠಿರಸ್ಯ|
05001019c ಸಂಬಂಧಿತಾಂ ಚಾಪಿ ಸಮೀಕ್ಷ್ಯ ತೇಷಾಂ|
ಮತಿಂ ಕುರುಧ್ವಂ ಸಹಿತಾಃ ಪೃಥಕ್ಚ||
ಬೆಳೆದಿರುವ ಅವರ ಲೋಭವನ್ನು ಮತ್ತು ಯುಧಿಷ್ಠಿರನ ಧರ್ಮಾತ್ಮತೆಯನ್ನೂ ನೋಡಿ, ಅವರೀರ್ವರ ನಡುವೆಯಿರುವ ಸಂಬಂಧವನ್ನೂ ನೋಡಿ ನೀವೆಲ್ಲರೂ ಒಂದಾಗಿ ಮತ್ತು ಪ್ರತ್ಯೇಕವಾಗಿ ವಿಚಾರಮಾಡಬೇಕು.
05001020a ಇಮೇ ಚ ಸತ್ಯೇಽಭಿರತಾಃ ಸದೈವ|
ತಂ ಪಾರಯಿತ್ವಾ ಸಮಯಂ ಯಥಾವತ್|
05001020c ಅತೋಽನ್ಯಥಾ ತೈರುಪಚರ್ಯಮಾಣಾ|
ಹನ್ಯುಃ ಸಮೇತಾನ್ಧೃತರಾಷ್ಟ್ರಪುತ್ರಾನ್||
ಸದಾ ಸತ್ಯನಿರತರಾಗಿರುವ ಇವರು ಆ ಒಪ್ಪಂದವನ್ನು ಯಥಾವತ್ತಾಗಿ ಪಾಲಿಸಿದ್ದಾರೆ. ಈಗ ಧೃತರಾಷ್ಟ್ರ ಪುತ್ರರು ಅವರೊಂದಿಗೆ ಅನ್ಯಥಾ ನಡೆದುಕೊಂಡರೆ ಅವರನ್ನು ಅವರ ಬೆಂಬಲಿಗರೊಂದಿಗೆ ಇವರು ಕೊಲ್ಲುತ್ತಾರೆ.
05001021a ತೈರ್ವಿಪ್ರಕಾರಂ ಚ ನಿಶಮ್ಯ ರಾಜ್ಞಾಃ|
ಸುಹೃಜ್ಜನಾಸ್ತಾನ್ಪರಿವಾರಯೇಯುಃ|
05001021c ಯುದ್ಧೇನ ಬಾಧೇಯುರಿಮಾಂಸ್ತಥೈವ|
ತೈರ್ವಧ್ಯಮಾನಾ ಯುಧಿ ತಾಂಶ್ಚ ಹನ್ಯುಃ||
ಈಗ ರಾಜನಿಂದ ಇವರಿಗೆ ತಪ್ಪು ನಡೆಯಿತೆಂದರೆ ಇವರನ್ನು ಸುತ್ತುವರೆದಿರುವ ಸ್ನೇಹಿತರಿದ್ದಾರೆ. ಯುದ್ಧದಲ್ಲಿ ತಾವು ಸತ್ತರೂ ಅವರ ಶತ್ರುಗಳೊಂದಿಗೆ ಹೋರಾಡುವವರು ಅವರಿಗೆ ಈಗ ಇದ್ದಾರೆ.
05001022a ತಥಾಪಿ ನೇಮೇಽಲ್ಪತಯಾ ಸಮರ್ಥಾಃ|
ತೇಷಾಂ ಜಯಾಯೇತಿ ಭವೇನ್ಮತಂ ವಃ|
05001022c ಸಮೇತ್ಯ ಸರ್ವೇ ಸಹಿತಾಃ ಸುಹೃದ್ಭಿಃ|
ತೇಷಾಂ ವಿನಾಶಾಯ ಯತೇಯುರೇವ||
ಅಂಥವರು ಸ್ವಲ್ಪವೇ ಮಂದಿ ಇದ್ದು ಇವರಿಗೆ ಜಯವನ್ನು ಪಡೆಯುವ ಸಮರ್ಥರಿಲ್ಲರೆಂದು ನೀವು ತಿಳಿದರೂ ಕೂಡ ಇವರ ಸುಹೃದಯಿಗಳಾದ ಎಲ್ಲರೂ ಸೇರಿ ಒಟ್ಟಿಗೇ ಅವರ ವಿನಾಶಕ್ಕೆ ಯತ್ನಿಸಬಹುದು.
05001023a ದುರ್ಯೋಧನಸ್ಯಾಪಿ ಮತಂ ಯಥಾವನ್|
ನ ಜ್ಞಾಯತೇ ಕಿಂ ನು ಕರಿಷ್ಯತೀತಿ|
05001023c ಅಜ್ಞಾಯಮಾನೇ ಚ ಮತೇ ಪರಸ್ಯ|
ಕಿಂ ಸ್ಯಾತ್ಸಮಾರಭ್ಯತಮಂ ಮತಂ ವಃ||
ದುರ್ಯೋಧನ ವಿಚಾರವೇನು ಮತ್ತು ಅವನು ಏನು ಮಾಡುವವನಿದ್ದಾನೆ ಎನ್ನುವುದು ನಮಗೆ ತಿಳಿದಿಲ್ಲ. ಇನ್ನೊಂದು ಪಕ್ಷದವರ ವಿಚಾರವೇನೆಂದು ತಿಳಿಯದೇ ನಾವಾದರೂ ಮಾಡಬೇಕಾದುದರಲ್ಲಿ ಒಳ್ಳೆಯದು ಏನು ಎಂದು ಹೇಗೆ ತಾನೇ ನಿರ್ಧರಿಸಬಹುದು?
05001024a ತಸ್ಮಾದಿತೋ ಗಚ್ಚತು ಧರ್ಮಶೀಲಃ|
ಶುಚಿಃ ಕುಲೀನಃ ಪುರುಷೋಽಪ್ರಮತ್ತಃ|
05001024c ದೂತಃ ಸಮರ್ಥಃ ಪ್ರಶಮಾಯ ತೇಷಾಂ|
ರಾಜ್ಯಾರ್ಧದಾನಾಯ ಯುಧಿಷ್ಠಿರಸ್ಯ||
ಆದುದರಿಂದ ಅವರ ಕಡೆ ಯುಧಿಷ್ಠಿರನ ಅರ್ಧರಾಜ್ಯವನ್ನು ನೀಡಬೇಕೆಂದು ಸಮರ್ಥ ದೂತನನ್ನು – ಧರ್ಮಶೀಲ, ಶುಚಿ, ಕುಲೀನ, ಅಪ್ರಮತ್ತ – ಪುರುಷನನ್ನು ಕಳುಹಿಸಬೇಕು.”
05001025a ನಿಶಮ್ಯ ವಾಕ್ಯಂ ತು ಜನಾರ್ದನಸ್ಯ|
ಧರ್ಮಾರ್ಥಯುಕ್ತಂ ಮಧುರಂ ಸಮಂ ಚ|
05001025c ಸಮಾದದೇ ವಾಕ್ಯಮಥಾಗ್ರಜೋಽಸ್ಯ|
ಸಂಪೂಜ್ಯ ವಾಕ್ಯಂ ತದತೀವ ರಾಜನ್||
ರಾಜನ್! ಜನಾರ್ದನನ ಆ ಮಧುರ, ಸಮ, ಧರ್ಮಾರ್ಥಯುಕ್ತ ಮಾತನ್ನು ಕೇಳಿ ಅವನ ಅಣ್ಣನು ಅವನ ಮತವನ್ನು ಗೌರವಿಸಿ ಈ ಮಾತುಗಳನ್ನಾಡಿದನು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಕೃಷ್ಣವಾಕ್ಯೇ ಪ್ರಥಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ಒಂದನೆಯ ಅಧ್ಯಾಯವು|