ಹರಿವಂಶ: ಹರಿವಂಶ ಪರ್ವ

ಪೃಥೂಪಾಖ್ಯಾನಮ್

19006001 ಪೃಥುರುವಾಚ|

19006001a ಏಕಸ್ಯಾರ್ಥಾಯ ಯೋ ಹನ್ಯಾದಾತ್ಮನೋ ವಾ ಪರಸ್ಯ ವಾ |

19006001c ಬಹೂನ್ವೈ ಪ್ರಾಣಿನೋ ಲೋಕೇ ಭವೇತ್ತಸ್ಯೇಹ ಪಾತಕಮ್ ||

ಪೃಥುವು ಹೇಳಿದನು: “ತನ್ನವರ ಅಥವಾ ಇತರರ ಯಾವುದೇ ಓರ್ವ ವ್ಯಕ್ತಿಗಾಗಿ ಅನೇಕ ಪ್ರಾಣಿಗಳನ್ನು ವಧಿಸುವುದು ಈ ಲೋಕದಲ್ಲಿ ಪಾತಕವೆನಿಸಿಕೊಳ್ಳುತ್ತದೆ.

19006002a ಸುಖಮೇಧಂತಿ ಬಹವೋ ಯಸ್ಮಿಂಸ್ತು ನಿಹತೇಽಶುಭೇ |

19006002c ತಸ್ಮಿನ್ನಾಸ್ತಿ ಹತೇ ಭದ್ರೇ ಪಾತಕಂ ಚೋಪಪಾತಕಮ್ ||

ಭದ್ರೇ! ಅನೇಕ ಪ್ರಾಣಿಗಳಿಗೆ ಸುಖವನ್ನೀಡಲು ಓರ್ವ ಅಶುಭನನ್ನು ಸಂಹರಿಸಿದರೆ ಆ ಕೊಲೆಯು ಪಾತಕ ಅಥವಾ ಉಪಪಾತಕವೆಂದು ಎನಿಸಿಕೊಳ್ಳುವುದಿಲ್ಲ.

19006003a ಏಕಸ್ಮಿನ್ಯತ್ರ ನಿಧನಂ ಪ್ರಾಪಿತೇ ದುಷ್ಟಕಾರಿಣಿ |

19006003c ಬಹೂನಾಂ ಭವತಿ ಕ್ಷೇಮಂ ತತ್ರ ಪುಣ್ಯಪ್ರದೋ ವಧಃ ||

ದುಷ್ಟಕಾರಿಣಿ ಓರ್ವನನ್ನು ಕೊಲ್ಲುವುದರಿಂದ ಅನೇಕರಿಗೆ ಕ್ಷೇಮವೊದಗಿದರೆ ಆ ವಧೆಯು ಪುಣ್ಯಪ್ರದವೇ ಆಗುತ್ತದೆ.

19006004a ಸೋಽಹಂ ಪ್ರಜಾನಿಮಿತ್ತಂ ತ್ವಾಂ ಹನಿಷ್ಯಾಮಿ ವಸುಂಧರೇ |

19006004c ಯದಿ ಮೇ ವಚನಾಂ ನಾದ್ಯ ಕರಿಷ್ಯಸಿ ಜಗದ್ಧಿತಮ್ ||

ವಸುಂಧರೇ! ಇಂದು ನೀನು ಜಗತ್ತಿನ ಹಿತಕ್ಕಾಗಿ ನಾನು ಹೇಳಿದುದನ್ನು ಮಾಡದೇ ಇದ್ದರೆ, ಪ್ರಜೆಗಳ ನಿಮಿತ್ತ ನಾನು ನಿನ್ನನ್ನು ಸಂಹರಿಸುತ್ತೇನೆ.

19006005a ತ್ವಾಂ ನಿಹತ್ಯಾದ್ಯ ಬಾಣೇನ ಮಚ್ಛಾಸನಪರಾಙ್ಮುಖೀಮ್ |

19006005c ಆತ್ಮಾನಂ ಪ್ರಥಯಿತ್ವಾಹಂ ಪ್ರಜಾ ಧಾರಯಿತಾ ಚಿರಮ್ ||

ನನ್ನ ಶಾಸನದಿಂದ ಓಡಿಹೋಗುತ್ತಿರುವ ನಿನ್ನನ್ನು ಇಂದು ಬಾಣದಿಂದ ಸಂಹರಿಸಿ, ನನ್ನನ್ನು ನಾನೇ ಹರಡಿಕೊಂಡು ಚಿರಕಾಲದವರೆಗೆ ಪ್ರಜೆಗಳನ್ನು ಧರಿಸುತ್ತೇನೆ.

19006006a ಸಾ ತ್ವಂ ಶಾಸನಮಾಸ್ಥಾಯ ಮಮ ಧರ್ಮಭೃತಾಂ ವರೇ |

19006006c ಸಂಜೀವಯ ಪ್ರಜಾಃ ಸರ್ವಾಃ ಸಮರ್ಥಾ ಹ್ಯಸಿ ಧಾರಣೇ ||

ಧರ್ಮಭೃತರಲ್ಲಿ ಶ್ರೇಷ್ಠಳೇ! ನನ್ನ ಶಾಸನವನ್ನನುಸರಿಸಿ ಪ್ರಜೆಗಳೆಲ್ಲರನ್ನೂ ಜೀವಂತವಿಡು. ಅವರನ್ನು ಪೋಷಿಸಲು ನೀನು ಸಮರ್ಥಳಾಗಿದ್ದೀಯೆ.

19006007a ದುಹಿತೃತ್ವಂ ಚ ಮೇ ಗಚ್ಛ ತತ ಏನಮಹಂ ಶರಮ್ |

19006007c ನಿಯಚ್ಛೇಯಂ ತ್ವದ್ವಧಾರ್ಥಮುದ್ಯತಂ ಘೋರದರ್ಶನಮ್ ||

ನೀನು ನನ್ನ ಮಗಳಾಗು. ಆಗ ನಾನು ನಿನ್ನನ್ನು ವಧಿಸಲು ಎತ್ತಿ ಹಿಡಿದಿರುವ ಈ ಘೋರದರ್ಶನ ಶರವನ್ನು ಹಿಂತೆಗೆದುಕೊಳ್ಳುತ್ತೇನೆ.”

19006008 ಪೃಥಿವ್ಯುವಾಚ|

19006008a ಸರ್ವಮೇತದಹಂ ವೀರ ವಿಧಾಸ್ಯಾಮಿ ನ ಸಂಶಯಃ |

19006008c ಉಪಾಯತಃ ಸಮಾರಬ್ಧಾಃ ಸರ್ವೇ ಸಿದ್ಧ್ಯಂತ್ಯುಪಕ್ರಮಾಃ ||

ಪೃಥ್ವಿಯು ಹೇಳಿದಳು: “ವೀರ! ನಾನು ಇವೆಲ್ಲವನ್ನೂ ಮಾಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಉಪಾಯದಿಂದ ಪ್ರಾರಂಭಿಸಿದ ಸರ್ವ ಕಾರ್ಯಗಳೂ ಸಿದ್ಧಿಗೊಳ್ಳುತ್ತವೆ.

19006009a ಉಪಾಯಂ ಪಶ್ಯ ಯೇನ ತ್ವಂ ಧಾರಯೇಥಾಃ ಪ್ರಜಾ ಇಮಾಃ|

19006009c ವತ್ಸಂ ತು ಮಮ ಸಂಪಶ್ಯ ಕ್ಷರೇಯಂ ಯೇನ ವತ್ಸಲಾ ||

ಪ್ರಜೆಗಳನ್ನು ನೀನು ಧರಿಸಬಹುದಾದ ಈ ಉಪಾಯವನ್ನು ನೋಡು. ನನಗೊಂದು ಕರುವನ್ನು ಹುಡುಕಿ ತಾ. ಅದರ ಮೇಲಿನ ವಾತ್ಸಲ್ಯದಿಂದ ನಾನು ಹಾಲನ್ನು ನೀಡುತ್ತೇನೆ.

19006010a ಸಮಾಂ ಚ ಕುರು ಸರ್ವತ್ರ ಮಾಂ ತ್ವಂ ಧರ್ಮಭೃತಾಂ ವರ |

19006010c ಯಥಾ ನಿಸ್ಪಂದಮಾನಂ ಮೇ ಕ್ಷೀರಂ ಸರ್ವತ್ರ ಭಾವಯೇತ್ ||

ಧರ್ಮಭೃತರಲ್ಲಿ ಶ್ರೇಷ್ಠ! ನೀನು ನನ್ನನ್ನು ಎಲ್ಲಕಡೆ ಸಮತಟ್ಟಾಗಿ ಮಾಡು. ಇದರಿಂದ ನನ್ನ ಹಾಲು ಎಲ್ಲಕಡೆ ಹರಿಯುತ್ತದೆ.””

19006011 ವೈಶಂಪಾಯನ ಉವಾಚ|

19006011a ತತ ಉತ್ಸಾರಯಾಮಾಸ ಶೈಲಾಂಶತಸಹಸ್ರಶಃ |

19006011c ಧನುಷ್ಕೋಟ್ಯಾ ತದಾ ವೈನ್ಯಸ್ತೇನ ಶೈಲಾ ವಿವರ್ಧಿತಾಃ ||

ವೈಶಂಪಾಯನನು ಹೇಳಿದನು: “ಆಗ ವೈನ್ಯನು ತನ್ನ ಧನುಷ್ಕೋಟಿಯಿಂದ ನೂರಾರು ಸಹಸ್ರಾರು ಪರ್ವತಗಳನ್ನು ಮೇಲಕ್ಕೆತ್ತಿದನು. ಅದರಿಂದ ಪರ್ವತಗಳು ವರ್ಧಿಸಿದವು.

19006012a ಪೃಥುರ್ವೈನ್ಯಸ್ತದಾ ರಾಜಾ ಮಹೀಂ ಚಕ್ರೇ ಸಮಾಂ ತತಃ |

19006012c ಮನ್ವಂತರೇಷ್ವತೀತೇಷು ವಿಷಮಾಸೀದ್ವಸುಂಧರಾ ||

ಅನಂತರ ವೈನ್ಯ ರಾಜಾ ಪೃಥುವು ಭೂಮಿಯನ್ನು ಸಮತಟ್ಟನ್ನಾಗಿ ಮಾಡಿದನು. ಹಿಂದಿನ ಮನ್ವಂತರದಲ್ಲಿ ವಸುಂಧರೆಯು ಏರು-ಪೇರಾಗಿದ್ದಳು.

19006013a ಸ್ವಭಾವೇನಾಭವನ್ಹ್ಯಸ್ಯಾಃ ಸಮಾನಿ ವಿಷಮಾಣಿ ಚ |

19006013c ಚಾಕ್ಷುಷಸ್ಯಾಂತರೇ ಪೂರ್ವಮಾಸೀದೇವಂ ತದಾ ಕಿಲ ||

ಹಿಂದಿನ ಚಾಕ್ಷುಷ ಮನ್ವಂತರದಲ್ಲಿ ಪೃಥ್ವಿಯು ಸ್ವಭಾವತಃ ಏರು-ಪೇರಾಗಿದ್ದಳು.

19006014a ನ ಹಿ ಪೂರ್ವವಿಸರ್ಗೇ ವೈ ವಿಷಮೇ ಪೃಥಿವೀತಲೇ |

19006014c ಪ್ರವಿಭಾಗಃ ಪುರಾಣಾಂ ಚ ಗ್ರಾಮಾಣಾಂ ವಾ ತದಾಭವತ್||

ಪೂರ್ವವಿಸರ್ಗದಲ್ಲಿ ಭೂಮಿಯು ವಿಷಮವಾಗಿದ್ದಿದರಿಂದ ನಗರ-ಗ್ರಾಮಗಳ ವಿಭಜನೆಯಿರಲಿಲ್ಲ.

19006015a ನ ಸಸ್ಯಾನಿ ನ ಗೋರಕ್ಷಾ ನ ಕೃಷಿರ್ನ ವಣಿಕ್ಪಥಃ |

19006015c ನೈವ ಸತ್ಯಾನೃತಂ  ತತ್ರ ನ ಲೋಭೋ ನ ಚ ಮತ್ಸರಃ ||

ಆ ಕಾಲದಲ್ಲಿ ಸಸ್ಯಗಳಿರಲಿಲ್ಲ, ಗೋರಕ್ಷಣೆಯಿರಲಿಲ್ಲ, ಕೃಷಿಯಾಗಲೀ ವ್ಯಾಪಾರಗಳಾಗಲೀ ಇರಲಿಲ್ಲ. ಆಗ ಸತ್ಯ-ಸುಳ್ಳುಗಳಿರಲಿಲ್ಲ, ಲೋಭವಿರಲಿಲ್ಲ ಮತ್ತು ಮತ್ಸರವಿರಲಿಲ್ಲ.

19006016a ವೈವಸ್ವತೇಽಂತರೇ ಚಾಸ್ಮಿನ್ಸಾಂಪ್ರತಂ ಸಮುಪಸ್ಥಿತೇ |

19006016c ವೈನ್ಯಾತ್ಪ್ರಭೃತಿ ರಾಜೇಂದ್ರ ಸರ್ವಸ್ಯೈತಸ್ಯ ಸಂಭವಃ ||

ರಾಜೇಂದ್ರ! ಈ ವೈವಸ್ವತ ಮನ್ವಂತರದಲ್ಲಿಯೇ ವೈನ್ಯನಿಂದ ಪ್ರಾರಂಭವಾಗಿ ಭೂಮಿಯ ಮೇಲೆ ಈ ಎಲ್ಲವುಗಳೂ ಉತ್ಪನ್ನವಾದವು.

19006017a ಯತ್ರ ಯತ್ರ ಸಮಂ ತ್ವಸ್ಯಾ ಭೂಮೇರಾಸೀತಿಹಾನಘ |

19006017c ತತ್ರ ತತ್ರ ಪ್ರಜಾಃ ಸರ್ವಾಃ ಸಂವಾಸಂ ಸಮರೋಚಯನ್ ||

ಅನಘ! ಭೂಮಿಯು ಎಲ್ಲೆಲ್ಲಿ ಸಮತಟ್ಟಾಗುತ್ತಿತ್ತೋ ಅಲ್ಲಲ್ಲಿ ಪ್ರಜೆಗಳೆಲ್ಲರೂ ವಾಸಿಸಲು ಬಯಸಿದರು.

19006018a ಆಹಾರಃ ಫಲಮೂಲಾನಿ ಪ್ರಜಾನಾಮಭವತ್ತದಾ |

19006018c ಕೃಚ್ಛ್ರೇಣ ಮಹತಾ ಯುಕ್ತ ಇತ್ಯೇವಮನುಶುಶ್ರುಮ ||

ಆಗ ಪೃಥುವು ಮಹಾ ಕಷ್ಟದಿಂದ ಪ್ರಜೆಗಳಿಗೆ ಆಹಾರ, ಫಲ-ಮೂಲಗಳನ್ನು ಒದಗಿಸಿಕೊಟ್ಟನೆಂದು ಕೇಳಿದ್ದೇವೆ.

19006019a ಸಂಕಲ್ಪಯಿತ್ವಾ ವತ್ಸಂ ತು ಮನುಂ ಸ್ವಾಯಂಭುವಂ ಪ್ರಭುಮ್ |

19006019c ಸ್ವಪಾಣೌ ಪುರುಷಶ್ರೇಷ್ಠ ದುದೋಹ ಪೃಥಿವೀಂ ತತಃ |

19006019e ಸಸ್ಯಜಾತಾನಿ ಸರ್ವಾಣಿ ಪೃಥುರ್ವೈನ್ಯಃ ಪ್ರತಾಪವಾನ್ ||

ಪುರುಷಶ್ರೇಷ್ಠ! ಪ್ರತಾಪವಾನ್ ವೈನ್ಯ ಪೃಥುವು ಪ್ರಭು ಸ್ವಾಯಂಭುವ ಮನುವನ್ನು ಕರುವನ್ನಾಗಿ ಸಂಕಲ್ಪಿಸಿ, ತನ್ನದೇ ಕೈಗಳಿಂದ ಗೋರೂಪಿಣೀ ಪೃಥ್ವಿಯ ಹಾಲು ಕರೆದನು. ಅದರಿಂದ ಸರ್ವ ಸಸ್ಯಜಾತಿಗಳೂ ಹುಟ್ಟಿಕೊಂಡವು.

19006020a ತೇನಾನ್ನೇನ ಪ್ರಜಾಸ್ತಾತ ವರ್ತಂತೇಽದ್ಯಾಪಿ ನಿತ್ಯಶಃ |

19006020c ಋಷಿಭಿಃ ಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ ||

ತಾತ! ಅದೇ ಅನ್ನದಿಂದ ಈಗಲೂ ನಿತ್ಯವೂ ಪ್ರಜೆಗಳು ಜೀವಿಸುತ್ತಿದ್ದಾರೆ. ಪುನಃ ಋಷಿಗಳೂ ವಸುಂಧರೆಯ ಹಾಲುಕರೆದರೆಂದು ಕೇಳಿದ್ದೇವೆ.

19006021a ವತ್ಸಃ ಸೋಮೋಽಭವತ್ತೇಷಾಂ ದೋಗ್ಧಾ ಚಾಂಗಿರಸಃ ಸುತಃ |

19006021c ಬೃಹಸ್ಪತಿರ್ಮಹಾತೇಜಾಃ ಪಾತ್ರಂ ಛಂದಾಂಸಿ ಭಾರತ |

19006021e ಕ್ಷೀರಮಾಸೀದನುಪಮಂ ತಪೋ ಬ್ರಹ್ಮ ಚ ಶಾಶ್ವತಮ್ ||

ಭಾರತ! ಸೋಮನು ಕರುವಾಗಿದ್ದನು. ಆಂಗೀರಸನ ಮಗ ಮಹಾತೇಜಸ್ವಿ ಬೃಹಸ್ಪತಿಯು ಅವರ ಪರವಾಗಿ ಹಾಲುಕರೆದನು. ಛಂದಸ್ಸುಗಳು ಪಾತ್ರೆಯಾಗಿದ್ದವು. ಕರೆದ ಹಾಲು ಅನುಪಮ ತಪಸ್ಸು ಮತ್ತು ಶಾಶ್ವತ ಬ್ರಹ್ಮವಾಗಿತ್ತು.

19006022a ಪುನರ್ದೇವಗಣೈಃ ಸರ್ವೈಃ ಪುರಂದರಪುರೋಗಮೈಃ |

19006022c ಕಾಂಚನಂ ಪಾತ್ರಮಾದಾಯ ದುಗ್ಧೇಯಂ ಶ್ರೂಯತೇ ಮಹೀ ||

ಅನಂತರ ಪುರಂದರನ ನಾಯಕತ್ವದಲ್ಲಿ ದೇವಗಣಗಳೆಲ್ಲವೂ ಕಾಂಚನ ಪಾತ್ರೆಯನ್ನು ಹಿಡಿದು ಪುನಃ ಭೂಮಿಯ ಹಾಲುಕರೆದರೆಂದು ಕೇಳಿದ್ದೇವೆ.

19006023a ವತ್ಸಸ್ತು ಮಘವಾನಾಸೀದ್ದೋಗ್ಧಾ ಚ ಸವಿತಾ ಪ್ರಭುಃ |

19006023c ಕ್ಷೀರಮೂರ್ಜಸ್ಕರಂ ಚೈವ  ವರ್ತಂತೇ ಯೇನ ದೇವತಾಃ ||

ಆಗ ಮಘವಾನನೇ ಕರುವಾಗಿದ್ದನು. ಪ್ರಭು ಸೂರ್ಯನು ಹಾಲುಕರೆದನು. ಯಾವುದರಿಂದ ದೇವತೆಗಳು ಜೀವಿಸಿರುವರೋ ಆ ಅಮೃತರೂಪೀ ಹಾಲನ್ನು ಕರೆಯಲಾಯಿತು.

19006024a ಪಿತೄಭಿಃ ಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ |

19006024c ರಾಜತಂ ಪಾತ್ರಮಾದಾಯ ಸ್ವಧಾಮಮಿತವಿಕ್ರಮೈಃ ||

ಪುನಃ ಅಮಿತವಿಕ್ರಮಿ ಪಿತೃಗಳೂ ಕೂಡ ಬೆಳ್ಳಿಯ ಪಾತ್ರೆಯನ್ನು ಹಿಡಿದು ವಸುಂಧರೆಯಿಂದ ಸ್ವಧಾ ರೂಪಿನ ಹಾಲನ್ನು ಕರೆದರೆಂದು ಕೇಳಿದ್ದೇವೆ.

19006025a ಯಮೋ ವೈವಸ್ವರಸ್ತೇಷಾಮಾಸೀದ್ವತ್ಸಃ ಪ್ರತಾಪವಾನ್ |

19006025c ಅಂತಕಶ್ಚಾಭವದ್ದೋಗ್ಧಾ ಕಾಲೋ ಲೋಕಪ್ರಕಾಲನಃ ||

ಪ್ರತಾಪವಾನ್ ವೈವಸ್ವತ ಯಮನು ಅವರ ಕರುವಾಗಿದ್ದನು. ಲೋಕಪ್ರಕಾಲನ ಕಾಲ ಅಂತಕನು ಅವರಿಗೆ ಹಾಲುಕರೆಯುವವನಾಗಿದ್ದನು.

19006026a ನಾಗೈಶ್ಚ ಶ್ರೂಯತೇ ದುಗ್ಧ್ದಾ ವತ್ಸಂ ಕೃತ್ವಾ ತು ತಕ್ಷಕಮ್ |

19006026c ಅಲಾಬುಂ ಪಾತ್ರಮಾದಾಯ ವಿಷಂ ಕ್ಷೀರಂ ನರೋತ್ತಮ ||

ನರೋತ್ತಮ! ನಾಗಗಳೂ ಕೂಡ ತಕ್ಷಕನನ್ನು ಕರುವನ್ನಾಗಿ ಮಾಡಿಕೊಂಡು ಸೋರೆಕಾಯಿಯನ್ನು ಪಾತ್ರೆಯನ್ನಾಗಿಸಿಕೊಂಡು, ವಿಷವೆಂಬ ಹಾಲನ್ನು ಕರೆದರೆಂದು ಕೇಳಿದ್ದೇವೆ.

19006027a ತೇಷಾಮೈರಾವತೋ ದೋಗ್ಧಾ ಧೃತರಾಷ್ಟ್ರಃ ಪ್ರತಾಪವಾನ್|

19006027c ನಾಗಾನಾಂ ಭರತಶ್ರೇಷ್ಠ ಸರ್ಪಾಣಾಂ ಚ ಮಹೀಪತೇ ||

ಭರತಶ್ರೇಷ್ಠ! ಮಹೀಪತೇ! ನಾಗಗಳಿಗೆ ಹಾಲುಕರೆಯುವವನು ಐರಾವತನಾಗಿದ್ದನು ಮತ್ತು ಸರ್ಪಗಳಿಗೆ ಪ್ರತಾಪವಾನ್ ಧೃತರಾಷ್ಟನು ಹಾಲುಕರೆಯುವವನಾಗಿದ್ದನು.

19006028a ತೇನೈವ ವರ್ತಯಂತ್ಯುಗ್ರಾ ಮಹಾಕಾಯಾ ವಿಷೋಲ್ಬಣಾಃ |

19006028c ತದಾಹಾರಾಸ್ತದಾಚಾರಾಸ್ತದ್ವೀರ್ಯಾಸ್ತದುಪಾಶ್ರಯಾಃ ||

ಈ ವಿಷದಿಂದಲೇ ಆ ಉಗ್ರ ಮಹಾಕಾಯ ವಿಷೋಲ್ಬಣ ನಾಗಗಳು ವರ್ತಿಸುತ್ತವೆ. ಅದರಿಂದಲೇ ತಮಗೆ ಆಹಾರವನ್ನು ಒದಗಿಸಿಕೊಳ್ಳುತ್ತವೆ. ಅದರ ವೀರ್ಯವನ್ನೇ ಉಪಾಶ್ರಯಿಸಿಕೊಂಡಿವೆ.

19006029a ಅಸುರೈಃಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ |

19006029c ಆಯಸಂ ಪಾತ್ರಮಾದಾಯ ಮಾಯಾಂ ಶತ್ರುನಿಬರ್ಹಿಣೀಮ್||

ಪುನಃ ಅಸುರರೂ ಕೂಡ ಕಬ್ಬಿಣದ ಪಾತ್ರೆಯನ್ನು ತೆಗೆದುಕೊಂಡು ಶತ್ರುಗಳನ್ನು ನಾಶಗೊಳಿಸಬಲ್ಲ ಮಾಯೆಯನ್ನು ವಸುಂಧರೆಯ ಹಾಲಿನ ರೂಪದಲ್ಲಿ ಕರೆದರೆಂದು ಕೇಳಿದ್ದೇವೆ.

19006030a ವಿರೋಚನಸ್ತು ಪ್ರಾಹ್ರಾದಿರ್ವತ್ಸಸ್ತೇಷಾಮಭೂತ್ತದಾ |

19006030c ಋತ್ವಿಗ್ವಿಮೂರ್ದ್ಧಾ ದೈತ್ಯಾನಾಂ ಮಧುರ್ದೋಗ್ಧಾ ಮಹಾಬಲಃ||

ಪ್ರಹ್ರಾದನ ಮಗ ವಿರೋಚನನು ಅವರ ಕರುವಾಗಿದ್ದನು. ದೈತ್ಯರ ಋತ್ವಿಜ ಎರಡು ಶಿರಸ್ಸುಗಳಿದ್ದ ಮಹಾಬಲ ಮಧುವು ಹಾಲುಕರೆಯುವವನಾಗಿದ್ದನು.

19006031a ತಯೈತೇ ಮಾಯಯಾದ್ಯಾಪಿ ಸರ್ವೇ ಮಾಯಾವಿನೋಽಸುರಾಃ |

19006031c ವರ್ತಯಂತ್ಯಮಿತಪ್ರಜ್ಞಾಸ್ತದೇಷಾಮಮಿತಂ ಬಲಮ್ ||

ಆ ಮಾಯೆಯಿಂದಲೇ ಈಗಲೂ ಕೂಡ ಅತ್ಯಂತ ಬುದ್ಧಿಶಾಲೀ ಸರ್ವ ಅಸುರರು ಮಾಯಾವಿಗಳಾಗಿ ವರ್ತಿಸುತ್ತಾರೆ. ಮಾಯೆಯೇ ಅವರ ಅಮಿತ ಬಲವಾಗಿದೆ.

19006032a ಯಕ್ಷೈಶ್ಚ ಶ್ರೂಯತೇ ತಾತ ಪುನರ್ದುಗ್ಧಾ ವಸುಂಧರಾ |

19006032c ಆಮಪಾತ್ರೇ ಮಹಾರಾಜ ಪುರಾಂತರ್ದ್ಧಾನಮಕ್ಷಯಮ್ ||

ತಾತ! ಮಹಾರಾಜ! ಪುನಃ ಯಕ್ಷರೂ ಕೂಡ ವಸುಂಧರೆಯ ಕಾಲುಕರೆದರೆಂದು ಕೇಳಿದ್ದೇವೆ. ಅವರು ಬೇಯಿಸದ ಮಣ್ಣಿನ ಪಾತ್ರೆಯಲ್ಲಿ ಅಂತರ್ಧಾನವೆಂಬ ಅಕ್ಷಯ ವಿದ್ಯೆಯನ್ನು ಹಾಲನ್ನಾಗಿ ಕರೆದಿದ್ದರು.

19006033a ವತ್ಸಂ ವೈಶ್ರವಣಂ ಕೃತ್ವಾ ಯಕ್ಷೈಃ ಪುಣ್ಯಜನೈಸ್ತದಾ |

19006033c ದೋಗ್ಧಾ ರಜತನಾಭಸ್ತು ಪಿತಾ ಮಣಿವರಸ್ಯ ಚ ||

ಪುಣ್ಯಜನ ಯಕ್ಷರು ವೈಶ್ರವಣ ಕುಬೇರನನ್ನು ಕರುವನ್ನಾಗಿ ಮಾಡಿಕೊಂಡಿದ್ದರು. ಮಣಿವರನ ತಂದೆ ರಜತನಾಭನು ಹಾಲುಕರೆಯುವವನಾಗಿದ್ದನು.

19006034a ಯಕ್ಷಾನುಜೋ ಮಹಾತೇಜಾಸ್ತ್ರಿಶೀರ್ಷಾಃ ಸುಮಹಾತಪಾಃ |

19006034c ತೇನ ತೇ ವರ್ತಯಂತೀತಿ ಪರಮರ್ಷಿರುವಾಚ ಹ ||

ಮೂರು ಶಿರಗಳಿದ್ದ ಆ ಯಕ್ಷನ ಅನುಜ ರಜತನಾಭನು ಮಹಾತೇಜಸ್ವಿಯೂ ಮಹಾತಪಸ್ವಿಯೂ ಆಗಿದ್ದನು. ಅಂತರ್ಧಾನ ವಿದ್ಯೆಯಿಂದಲೇ ಯಕ್ಷರು ಜೀವಿಸಿರುತ್ತಾರೆ ಎಂದು ಪರಮಋಷಿಗಳು ಹೇಳುತ್ತಾರೆ.

19006035a ರಾಕ್ಷಸೈಶ್ಚ ಪಿಶಾಚೈಶ್ಚ ಪುನರ್ದುಗ್ಧಾ ವಸುಂಧರಾ |

19006035c ಶಾವಂ ಕಪಾಲಮಾದಾಯ ಪ್ರಜಾ ಭೋಕ್ತುಂ ನರರ್ಷಭ ||

ನರರ್ಷಭ! ಪುನಃ ರಾಕ್ಷರರೂ-ಪಿಶಾಚಿಗಳೂ ಶವದ ಕಪಾಲವನ್ನು ಹಿಡಿದು ತಮ್ಮ ಸಂತಾನಗಳನ್ನು ಪೋಷಿಸಲು ವಸುಂಧರೆಯ ಹಾಲುಕರೆದರು.

19006036a ದೋಗ್ಧಾ ರಜತನಾಭಸ್ತು ತೇಷಾಮಾಸೀತ್ಕುರೂದ್ವಹ |

19006036c ವತ್ಸಃ ಸುಮಾಲೀ ಕೌರವ್ಯಃ ಕ್ಷೀರಂ ರುಧಿರಮೇವ ಚ ||

ಕುರೂದ್ವಹ! ಅವರಿಗೆ ಹಾಲುಕರೆಯುವವನು ರಜತನಾಭನಾಗಿದ್ದನು. ಕೌರವ್ಯ! ಸುಮಾಲಿಯು ಕರುವಾಗಿದ್ದನು. ಮತ್ತು ರಕ್ತವೇ ಹಾಲಾಗಿತ್ತು.

19006037a ತೇನ ಕ್ಷೀರೇಣ ಯಕ್ಷಾಶ್ಚ ರಾಕ್ಷಸಾಶ್ಚಾಮರೋಪಮಾಃ |

19006037c ವರ್ತಯಂತಿ ಪಿಶಾಚಾಶ್ಚ ಭೂತಸಂಘಾಸ್ತಥೈವ ಚ ||

ಆ ಹಾಲಿನಿಂದಲೇ ಅಮರೋಪಮ ಯಕ್ಷರೂ, ರಾಕ್ಷಸರೂ ಮತ್ತು ಪಿಶಾಚ-ಭೂತಗಣಗಳೂ ಜೀವಿತರಾಗಿರುತ್ತಾರೆ.

19006038a ಪದ್ಮಪಾತ್ರಂ ಪುನರ್ದುಗ್ಧಾ ಗಂಧರ್ವೈಃ ಸಾಪ್ಸರೋಗಣೈಃ |

19006038c ವತ್ಸಂ ಚಿತ್ರರಥಂ ಕೃತ್ವಾ ಶುಚೀನ್ಗಂಧಾನ್ನರರ್ಷಭ ||

ನರರ್ಷಭ! ಪುನಃ ಅಪ್ಸರಗಣಗಳೊಂದಿಗೆ ಗಂಧರ್ವರು ಪದ್ಮಪಾತ್ರೆಯನ್ನು ಹಿಡಿದು ಚಿತ್ರರಥನನ್ನು ಕರುವನ್ನಾಗಿ ಮಾಡಿಕೊಂಡು ಶುದ್ಧ ಗಂಧವನ್ನು ಕರೆದರು.

19006039a ತೇಷಾಂ ಚ ಸುರುಚಿಸ್ತ್ವಾಸೀದ್ದೋಗ್ಧಾ ಭರತಸತ್ತಮ |

19006039c ಗಂಧರ್ವರಾಜೋಽತಿಬಲೋ ಮಹಾತ್ಮಾ ಸೂರ್ಯಸನ್ನಿಭಃ ||

ಭರತಸತ್ತಮ! ಅತಿಬಲ ಮಹಾತ್ಮಾ ಸೂರ್ಯಸನ್ನಿಭ ಗಂಧರ್ವರಾಜ ಸುರುಚಿಯು ಅವರ ಹಾಲುಕರೆಯುವವನಾಗಿದ್ದನು.

19006040a ಶೈಲೈಶ್ಚ ಶ್ರೂಯತೇ ರಾಜನ್ಪುನರ್ದುಗ್ಧಾ ವಸುಂಧರಾ |

19006040c ಔಷಧೀರ್ವೈ ಮೂರ್ತಿಮತೀ ರತ್ನಾನಿ ವಿವಿಧಾನಿ ಚ ||

ರಾಜನ್! ಪರ್ವತಗಳೂ ಕೂಡ ಪುನಃ ವಸುಂಧರೆಯಿಂದ ಮೂರ್ತಿಮತ್ತಾದ ಔಷಧಿಗಳನ್ನೂ ವಿವಿಧ ರತ್ನಗಳನ್ನೂ ಹಾಲಾಗಿ ಕರೆದರೆಂದು ಕೇಳಿದ್ದೇವೆ.

19006041a ವತ್ಸಸ್ತು ಹಿಮವಾನಾಸೀನ್ಮೇರುರ್ದೋಗ್ಧಾ ಮಹಾಗಿರಿಃ |

19006041c ಪಾತ್ರಂ ತು ಶೈಲಮೇವಾಸೀತ್ತೇನ ಶೈಲಾ ವಿವರ್ಧಿತಾಃ ||

ಹಿಮವಾನನು ಕರುವಾಗಿದ್ದನು. ಮಹಾಗಿರಿ ಮೇರುವು ಹಾಲುಕರೆಯುವವನಾಗಿದ್ದನು. ಪಾತ್ರೆಯು ಕಲ್ಲಿನದಾಗಿತ್ತು. ಅವರು ಕರೆದ ಹಾಲಿನಿಂದ ಪರ್ವತಗಳು ವರ್ಧಿಸಿದವು.

19006042a ವೀರುದ್ಭಿಃ ಶ್ರೂಯತೇ ರಾಜನ್ಪುನರ್ದುಗ್ಧಾ ವಸುಂಧರಾ |

19006042c ಪಾಲಾಶಂ ಪಾತ್ರಮಾದಾಯ ದಗ್ಧಚ್ಛಿನ್ನಪ್ರರೋಹಣಮ್ ||

ರಾಜನ್! ಪಲಾಶ ಪತ್ರದ ಪಾತ್ರೆಯನ್ನು ಹಿಡಿದು ವೃಕ್ಷಗಳೂ ಕೂಡ ವಸುಂಧರೆಯ ಹಾಲುಕರೆದರೆಂದು ಕೇಳಿಬರುತ್ತದೆ. ಸುಟ್ಟುಹೋದನಂತರವೂ ಪುನಃ ಚಿಗುರುವ ಸಾಮರ್ಥ್ಯವೇ ಹಾಲಾಗಿತ್ತು.

19006043a ದುದೋಹ ಪುಷ್ಪಿತಃ ಸಾಲೋ ವತ್ಸಃ ಪ್ಲಕ್ಷೋಽಭವತ್ತದಾ |

19006043c ಸೇಯಂ ಧಾತ್ರೀ ವಿಧಾತ್ರೀ ಚ ಪಾವನೀ ಚ ವಸುಂಧರಾ ||

ಪುಷ್ಟ ಸಾಲವೃಕ್ಷವು ಹಾಲುಕರೆಯುವವನಾಗಿತ್ತು. ಪ್ಲಕ್ಷವು ಕರುವಾಗಿತ್ತು. ಈ ಕಾರಣದಿಂದಲೇ ವಸುಂಧರೆಯು ಧಾತ್ರೀ, ವಿಧಾತ್ರೀ ಮತ್ತು ಪಾವನೀ ಎಂದೆನಿಸಿಕೊಂಡಿದ್ದಾಳೆ.

19006044a ಚರಾಚರಸ್ಯ ಸರ್ವಸ್ಯ ಪ್ರತಿಷ್ಠಾ ಯೋನಿರೇವ ಚ |

19006044c ಸರ್ವಕಾಮದುಘಾ ದೋಗ್ಧ್ರೀ ಸರ್ವಸಸ್ಯಪ್ರರೋಹಿಣೀ ||

ಪೃಥ್ವಿಯೇ ಸರ್ವ ಚರಾಚರಗಳ ವಾಸಸ್ಥಾನ ಮತ್ತು ಉಗಮಸ್ಥಾನ. ಸರ್ವ ಕಾಮಗಳನ್ನು ಹಾಲಿನರೂಪದಲ್ಲಿ ನೀಡುವ ಕಾಮಧೇನು. ಸರ್ವ ಸಸ್ಯಗಳನ್ನು ಬೆಳೆಸುವವಳು.

19006045a ಆಸೀದಿಯಂ ಸಮುದ್ರಾಂತಾ ಮೇದಿನೀತಿ ಪರಿಶ್ರುತಾ |

19006045c ಮಧುಕೈಟಭಯೋಃ ಕೃತ್ಸ್ನಾ ಮೇದಸಾಭಿಪರಿಪ್ಲುತಾ |

19006045e ತೇನೇಯಂ ಮೇದಿನೀ ದೇವೀ ಪ್ರೋಚ್ಯತೇ ಬ್ರಹ್ಮವಾದಿಭಿಃ ||

ಮೊದಲು ಸಮುದ್ರದ ಅಂತ್ಯದವರೆಗೆ ಮಧು-ಕೈಟಭರ ಮೇದದಿಂದ ತುಂಬಿಹೋಗಿತ್ತು. ಆಗ ಮೇದಿನಿಯೆಂದು ಕರೆಯಲ್ಪಟ್ಟಿದ್ದಳು. ಅವಳನ್ನೇ ದೇವೀ ಮೇದಿನಿಯೆಂದು ಬ್ರಹ್ಮವಾದಿಗಳು ಕರೆಯುತ್ತಾರೆ.

19006046a ತತೋಽಭ್ಯುಪಗಮಾದ್ರಾಜ್ಞಃ ಪೃಥೋರ್ವೈನ್ಯಸ್ಯ ಭಾರತ |

19006046c ದುಹಿತೃತ್ವಮನುಪ್ರಾಪ್ತಾ ದೇವೀ ಪೃಥ್ವೀತಿ ಚೋಚ್ಯತೇ |

19006046e ಪೃಥುನಾ ಪ್ರವಿಭಕ್ತಾ ಚ ಶೋಧಿತಾ ಚ ವಸುಂಧರಾ ||

ಭಾರತ! ಅನಂತರ ರಾಜ ವೈನ್ಯ ಪೃಥುವಿನ ಪುತ್ರಿತ್ವವನ್ನು ಸ್ವೀಕರಿಸಿದ ದೇವಿಯನ್ನು ಪೃಥ್ವಿಯೆಂದು ಕರೆಯಲಾಯಿತು. ಪೃಥುವು ವಸುಂಧರೆಯನ್ನು ವಿಭಜಿಸಿ ಶುದ್ಧಗೊಳಿಸಿದನು.

19006047a ಸಸ್ಯಾಕರವತೀ ಸ್ಫೀತಾ ಪುರಪತ್ತನಮಾಲಿನೀ |

19006047c ಏವಂಪ್ರಭಾವೋ ವೈನ್ಯಃ ಸ ರಾಜಾಸೀದ್ರಾಜಸತ್ತಮಃ ||

ಅವನು ಭೂಮಿಯನ್ನು ಸಸ್ಯಶಾಲಿನಿಯನ್ನಾಗಿಯೂ, ಪುರ-ಪಟ್ಟಣಗಳಿಂದ ತುಂಬಿತುಳುಕುವಂತೆಯೂ ಮಾಡಿದನು. ರಾಜಸತ್ತಮ! ಹೀಗೆ ರಾಜಾ ವೈನ್ಯನು ಪ್ರಭಾವಶಾಲಿಯಾಗಿದ್ದನು.

19006048a ನಮಸ್ಯಶ್ಚೈವ ಪೂಜ್ಯಶ್ಚ ಭೂತಗ್ರಾಮೈರ್ನ ಸಂಶಯಃ |

19006048c ಬ್ರಾಹ್ಮಣೈಶ್ಚ ಮಹಾಭಾಗೈರ್ವೇದವೇದಾಂಗಪಾರಗಃ ||

19006049a ಪೃಥುರೇವ ನಮಸ್ಕಾರ್ಯೋ ಬ್ರಹ್ಮಯೋನಿಃ ಸನಾತನಃ |

ಆದುದರಿಂದ ಇರುವ ಎಲ್ಲ ಗಣಗಳೂ ಅವನನ್ನು ನಮಸ್ಕರಿಸಿ ಪೂಜಿಸಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ವೇದ-ವೇದಾಂಗ ಪಾರಂಗತ ಮಹಾಭಾಗ ಬ್ರಾಹ್ಮಣರಿಗೂ ಕೂಡ ಆ ಸನಾತನ ಬ್ರಹ್ಮಯೋನಿ ಪೃಥುವು ನಮಸ್ಕಾರ್ಯನು.

19006049c ಪಾರ್ಥಿವೈಶ್ಚ ಮಹಾಭಾಗೈಃ ಪಾರ್ಥಿವತ್ವಮಭೀಪ್ಸುಭಿಃ ||

19006050a ಆದಿರಾಜೋ ನಮಸ್ಕಾರ್ಯಃ ಪೃಥುರ್ವೈನ್ಯಃ ಪ್ರತಾಪವಾನ್|

ಪಾರ್ಥಿವತ್ವವನ್ನು ಬಯಸುವ ಮಹಾಭಾಗ ಪಾರ್ಥಿವರಿಗೂ ಕೂಡ ಆದಿರಾಜ ಪ್ರತಾಪವಾನ್ ವೈನ್ಯ ಪೃಥುವು ನಮಸ್ಕಾರ್ಯನು.

19006050c ಯೋಧೈರಪಿ ಚ ವಿಕ್ರಾಂತೈಃ ಪ್ರಾಪ್ತುಕಾಮೈರ್ಜಯಂ ಯುಧಿ |

19006050e ಪೄಥುರೇವ ನಮಸ್ಕಾರ್ಯೋ ಯೋಧಾನಾಂ ಪ್ರಥಮೋ ನೃಪಃ||

ನೃಪ! ಯುದ್ಧದಲ್ಲಿ ವಿಜಯವನ್ನು ಪಡೆಯಲು ಇಚ್ಛಿಸುವ ವಿಕ್ರಾಂತ ಯೋಧರಿಗೂ ಕೂಡ ಯೋಧರ ಪ್ರಥಮ ಪೃಥುವೇ ನಮಸ್ಕಾರ್ಯನು.

19006051a ಯೋ ಹಿ ಯೋದ್ಧಾ ರಣಂ ಯಾತಿ ಕೀರ್ತಯಿತ್ವಾ ಪೃಥುಂ ನೃಪಮ್|

19006051c ಸ ಘೋರರೂಪಾನ್ಸಂಗ್ರಾಮಾನ್ಕ್ಷಮೀ ತರತಿ ಕೀರ್ತಿಮಾನ್ ||

ನೃಪ ಪೃಥುವನ್ನು ಕೀರ್ತಿಸುತ್ತಾ ಯಾವ ಯೋದ್ಧನು ರಣಕ್ಕೆ ಹೋಗುತ್ತಾನೋ ಅವನು ಘೋರರೂಪದ ಸಂಗ್ರಾಮವನ್ನೂ ಕ್ಷೇಮದಿಂದ ಗೆದ್ದು ಕೀರ್ತಿವಂತನಾಗುತ್ತಾನೆ.

19006052a ವೈಶ್ಯೈರಪಿ ಚ ವಿತ್ತಾಢ್ಯೈಃ ಪಣ್ಯವೃತ್ತಿಮನುಷ್ಠಿತೈಃ|

19006052c ಪೃಥುರೇವ ನಮಸ್ಕಾರ್ಯೋ ವೃತ್ತಿದಾತಾ ಮಹಾಯಶಾಃ ||

ವ್ಯಾಪಾರವೇ ಮೊದಲಾದ ವೃತ್ತಿಗಳನ್ನು ಅವಲಂಬಿಸಿರುವ ಧನಿಕ ವೈಶ್ಯರಿಗೂ ಕೂಡ ವೃತ್ತಿದಾತಾ ಮಹಾಯಶಸ್ವೀ ಪೃಥುವು ನಮಸ್ಕಾರ್ಯನು.

19006053a ತಥೈವ ಶೂದ್ರೈಃ ಶುಚಿಭಿಸ್ತ್ರಿವರ್ಣಪರಿಚಾರಿಭಿಃ |

19006053c ಆದಿರಾಜೋ ನಮಸ್ಕಾರ್ಯಃ ಶ್ರೇಯಃ ಪರಮಭೀಪ್ಸುಭಿಃ ||

ಹಾಗೆಯೇ ಮೂರು ವರ್ಣದವರಿಗೆ ಸೇವಕರಾದ ಪರಮ ಶ್ರೇಯಸ್ಸನ್ನು ಬಯಸುವ ಶುಚಿ ಶೂದ್ರರಿಗೂ ಕೂಡ ಆದಿರಾಜ ಪೃಥುವು ನಮಸ್ಕಾರ್ಯನು.

19006054a ಏತೇ ವತ್ಸವಿಶೇಷಾಶ್ಚ ದೋಗ್ಧಾರಃ ಕ್ಷೀರಮೇವ ಚ |

19006054c ಪಾತ್ರಾಣಿ ಚ ಮಯೋಕ್ತಾನಿ ಕಿಂ ಭೂಯೋ ವರ್ಣಯಾಮಿ ತೇ||

ಹೀಗೆ ಭೂಮಿಯ ಹಾಲುಕರೆಯುವಾಗ ಕರು, ಹಾಲುಕರೆಯುವವರು, ಪಾತ್ರೆ ಮತ್ತು ಹಾಲಿನ ಕುರಿತಾದ ವಿಶೇಷತೆಗಳನ್ನು ಹೇಳಿದ್ದೇನೆ. ಇನ್ನೂ ಯಾವುದರ ಕುರಿತು ನಿನಗೆ ಹೇಳಲಿ?

19006055a ಯ ಇದಂ ಶೃಣುಯಾನ್ನಿತ್ಯಂ ಪೃಥೋಶ್ಚರಿತಮಾದಿತಃ |

19006055c ಪುತ್ರಪೌತ್ರಸಮಾಯುಕ್ತೋ ಮೋದತೇ ಸುಚಿರಂ ಭುವಿ ||

ಪೃಥುವಿನ ಈ ಚರಿತ್ರೆಯನ್ನು ಮೊದಲಿನಿಂದ ಯಾರು ನಿತ್ಯವೂ ಕೇಳುತ್ತಾರೋ ಅವರು ಪುತ್ರ-ಪೌತ್ರ ಸಮಾಯುಕ್ತರಾಗಿ ಚಿರಕಾಲದ ವರೆಗೆ ಭೂಮಿಯಲ್ಲಿ ಮೋದಿಸುತ್ತಾರೆ.” 

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪೃಥೂಪಾಖ್ಯಾನೇ ಷಷ್ಠೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಪೃಥೂಪಾಖ್ಯಾನ ಎನ್ನುವ ಆರನೆಯ ಅಧ್ಯಾಯವು.Related image

Comments are closed.