ಹರಿವಂಶ: ಹರಿವಂಶ ಪರ್ವ
Contents
Toggle೫೨
ವಿಷ್ಣುಂ ಪ್ರತಿ ಪೃಥಿವ್ಯಾ ವಾಕ್ಯಮ್
ಮೇರು ಪರ್ವತದಲ್ಲಿ ಭಗವಾನ್ ವಿಷ್ಣು ಮತ್ತು ದೇವತೆಗಳ ದಿವ್ಯ ಸಭೆ; ಅಲ್ಲಿ ಪೃಥ್ವಿಯು ಭಗವಂತನಲ್ಲಿ ಭಾರಹರಣಮಾಡಲು ಪ್ರಾರ್ಥಿಸಿಕೊಂಡಿದುದು (೧-೬೦).
ವೈಶಂಪಾಯನ ಉವಾಚ|
ಬಾಢಮಿತ್ಯೇವ ಸಹ ತೈರ್ದುರ್ದಿನಾಂಭೋದನಿಃಸ್ವನಃ |
ಪ್ರತಸ್ಥೇ ದುರ್ದಿನಾಕಾರಃ ಸದುರ್ದಿನ ಇವಾಚಲಃ ||೧-೫೨-೧
ವೈಶಂಪಾಯನನು ಹೇಳಿದನು: “ಮೇಘಯುಕ್ತ ಪರ್ವತದಂತೆ ಕಾಣುತ್ತಿದ್ದ ಮೇಘದ ಆಕಾರವನ್ನೇ ಹೊಂದಿದ್ದ ವಿಷ್ಣುವು ವರ್ಷಾಕಾಲದ ಮೇಘದಂಥಹ ಗಂಭೀರ ಧ್ವನಿಯಲ್ಲಿ “ಒಳ್ಳೆಯದೇ ಆಯಿತು!” ಎಂದು ಹೇಳಿ ಅಲ್ಲಿಂದ ಹೊರಟನು.
ಸಮುಕ್ತಾಮಣಿವಿದ್ಯೋತಂ ಸಚಂದ್ರಾಂಭೋದವರ್ಚಸಮ್ |
ಸಜಟಾಮಂಡಲಂ ಕೃತ್ಸ್ನಂ ಸ ಬಿಭ್ರಚ್ಛ್ರೀಧರೋ ಹರಿಃ ||೧-೫೨-೨
ಶ್ರೀಧರ ಹರಿಯು ಮೊಳಕಾಲವರೆಗೂ ಮುಟ್ಟುವ, ಚಂದ್ರನ ಪ್ರಭೆಯಿದ್ದ ಮುಕ್ತಾಮಣಿಗಳ ಮಾಲೆಯನ್ನು ಧರಿಸಿದ್ದನು. ಬೇರೆ ಎಲ್ಲ ರೀತಿಯಲ್ಲಿಯೂ ಜಟಾಮಂಡಲಧರನಾಗಿ ಶೋಭಿಸುತ್ತಿದ್ದನು[1].
ಸ ಚಾಸ್ಯೋರಸಿ ವಿಸ್ತೀರ್ಣೇ ರೋಮಾಂಚೋದ್ಗತರಾಜಿಮಾನ್ |
ಶ್ರೀವತ್ಸೋ ರಾಜತೇ ಶ್ರೀಮಾಂಸ್ತನದ್ವಯಮುಖಾಂಚಿತಃ ||೧-೫೨-೩
ಅವನ ವಿಶಾಲ ವಕ್ಷಸ್ಥಲದಲ್ಲಿ ರೋಮಾಂಚನಮಾಡುವಂತೆ ರಾಜಿಸುತ್ತಿದ್ದ ಶ್ರೀವತ್ಸವು ರಾಜಿಸುತ್ತಿತ್ತು. ಅದು ಆ ಶ್ರೀಮಾನನ ಎರಡನೇ ಮುಖವೋ ಎಂಬಂತೆ ಕಾಣುತ್ತಿತ್ತು[2].
ಪೀತೇ ವಸಾನೋ ವಸನೇ ಲೋಕಾನಾಂ ಗುರುರವ್ಯಯಃ |
ಹರಿಃ ಸೋಽಭವದಾಲಕ್ಷ್ಯಃ ಸ ಸಂಧ್ಯಾಭ್ರ ಇವಾಚಲಃ ||೧-೫೨-೪
ಪೀತವಸ್ತ್ರವನ್ನುಟ್ಟಿದ್ದ ಆ ಲೋಕಗಳ ಗುರು ಅವ್ಯಯ ಹರಿಯು ಸಂಧ್ಯಾಕಾಲದ ಮೇಘಯುಕ್ತ ಪರ್ವತದಂತೆ ಮನೋಹರವಾಗಿ ಕಾಣುತ್ತಿದ್ದನು.
ತಂ ವ್ರಜಂತಂ ಸುಪರ್ಣೇನ ಪದ್ಮಯೋನಿಗತಾನುಗಮ್ |
ಅನುಜಗ್ಮುಃ ಸುರಾಃ ಸರ್ವೇ ತದ್ಗತಾಸಕ್ತಚಕ್ಷುಷಃ ||೧-೫೨-೫
ಸುಪರ್ಣನನ್ನೇರಿ ಹೋಗುತ್ತಿದ್ದ ಅವನನ್ನು ಪದ್ಮಯೋನಿ ಬ್ರಹ್ಮನು ಹಿಂಬಾಲಿಸಿದನು. ಅವನನ್ನು ಸರ್ವ ಸುರರೂ ಆಸಕ್ತರಾಗಿ ಅವನನ್ನೇ ನೋಡುತ್ತಾ ಹಿಂದೆ ಹಿಂದೆ ಹೋದರು.
ನಾತಿದೀರ್ಘೇಣ ಕಾಲೇನ ಸಂಪ್ರಾಪ್ತಾ ರತ್ನಪರ್ವತಮ್ |
ದದೃಶುರ್ದೇವತಾಸ್ತತ್ರ ತಾಂ ಸಭಾಂ ಕಾಮರೂಪಿಣೀಮ್ ||೧-೫೨-೬
ಸ್ವಲ್ಪವೇ ಸಮಯದಲ್ಲಿ ದೇವತೆಗಳು ರತ್ನಪರ್ವತ ಮೇರುವನ್ನು ಸೇರಿ ಅಲ್ಲಿ ಆ ಕಾಮರೂಪಿಣೀ ಬ್ರಹ್ಮಸಭೆಯನ್ನು ನೋಡಿದರು.
ಮೇರೋಃ ಶಿಖರವಿನ್ಯಸ್ತಾಂ ಸಂಯುಕ್ತಾಂ ಸೂರ್ಯವರ್ಚಸಾ |
ಕಾಂಚನಸ್ತಂಭರಚಿತಾಂ ವಜ್ರಸಂಧಾನತೋರಣಾಮ್ ||೧-೫೨-೭
ಮೇರುವಿನ ಶಿಖರದ ಮೇಲೆ ಸ್ಥಾಪಿತವಾಗಿದ್ದ ಆ ದಿವ್ಯ ಸಭೆಯು ಸೂರ್ಯನಂತೆ ತೇಜೋಯುಕ್ತವಾಗಿತ್ತು. ಕಂಚನ ಸ್ಥಂಬಗಳನ್ನು ರಚಿಸಲಾಗಿತ್ತು. ಅದಕ್ಕೆ ವಜ್ರಗಳ ತೋರಣಗಳನ್ನು ಕಟ್ಟಲಾಗಿತ್ತು.
ಮನೋನಿರ್ಮಾಣಚಿತ್ರಾಢ್ಯಾಂ ವಿಮಾನಶತಮಾಲಿನೀಮ್ |
ರತ್ನಜಾಲಾಂತರವತೀಂ ಕಾಮಗಾಂ ರತ್ನಭೂಷಿತಾಮ್ ||೧-೫೨-೮
ಮನಸ್ಸಿನಿಂದ ನಿರ್ಮಾಣವಾದ ಚಿತ್ರಗಳಿಂದ ಕೂಡಿತ್ತು. ನೂರಾರು ವಿಮಾನಗಳು ಮಾಲೆಯ ರೂಪದಲ್ಲಿದ್ದವು. ರತ್ನಜಾಲಗಳನ್ನು ಹೊಂದಿತ್ತು. ರತ್ನಭೂಷಿತವಾಗಿದ್ದ ಅದು ಕಾಮಗವಾಗಿತ್ತು.
ಕ್ಲೃಪ್ತರತ್ನಸಮಾಕೀರ್ಣಾಂ ಸರ್ವರ್ತುಕುಸುಮೋತ್ಕಟಾಮ್ |
ದೇವಮಾಯಾಧರಾಂ ದಿವ್ಯಾಂ ವಿಹಿತಾಂ ವಿಶ್ವಕರ್ಮಣಾ ||೧-೫೨-೯
ಬಹುಮೂಲ್ಯ ರತ್ನಗಳಿಂದ ತುಂಬಿಕೊಂಡಿತ್ತು. ಸರ್ವಋತುಗಳ ಕುಸುಮಗಳಿಂದ ಕೂಡಿತ್ತು. ದಿವ್ಯ ದೇವಮಾಯೆಗಳನ್ನು ಹೊಂದಿದ್ದ ವಿಶ್ವಕರ್ಮನಿಂದ ನಿರ್ಮಿತಗೊಂಡಿತ್ತು.
ತಾಂ ಹೃಷ್ಟಮನಸಃ ಸರ್ವೇ ಯಥಾಸ್ಥಾನಂ ಯಥಾವಿಧಿ |
ಯಥಾನಿದೇಶಂ ತ್ರಿದಶಾ ವಿವಿಶುಸ್ತೇ ಸಭಾಂ ಶುಭಾಮ್ ||೧-೫೨-೧೦
ಹೃಷ್ಟಮನಸ್ಕರಾದ ಆ ಎಲ್ಲ ತ್ರಿದಶರೂ ಬ್ರಹ್ಮನ ನಿರ್ದೇಶನದಂತೆ ಯಥಾವಿಧಿಯಾಗಿ ಬಂದು ಆ ಶುಭ ಸಭೆಯನ್ನು ಪ್ರವೇಶಿಸಿ ಯಥಾಸ್ಥಾನಗಳಲ್ಲಿ ಕುಳಿತುಕೊಂಡರು.
ತೇ ನಿಷೇದುರ್ಯಥೋಕ್ತೇಷು ವಿಮಾನೇಷ್ವಾಸನೇಷು ಚ |
ಭದ್ರಾಸನೇಷು ಪೀಠೇಷು ಕುಥಾಸ್ವಾಸ್ತರಣೇಷು ಚ ||೧-೫೨-೧೧
ಅವರು ಅಲ್ಲಿ ಯೋಗ್ಯತಾನುಸಾರವಾಗಿ ಹೇಳಿದ್ದ ವಿಮಾನಗಳು, ಆಸನಗಳು, ಭದ್ರಾಸನಗಳು, ಪೀಠಗಳು ಮತ್ತು ಇತರರು ಹಾಸಿದ ಹಚ್ಚಡಗಳ ಮೇಲೆ ವಿರಾಜಮಾನರಾದರು.
ತತಃ ಪ್ರಭಂಜನೋ ವಾಯುರ್ಬ್ರಹ್ಮಣಾ ಸಾಧು ಚೋದಿತಃ |
ಮಾ ಶಬ್ದಮಿತಿ ಸರ್ವತ್ರ ಪ್ರಚಕ್ರಾಮಾಥ ತಾಂ ಸಭಾಮ್ ||೧-೫೨-೧೨
ಆಗ ಸಾಧು ಬ್ರಹ್ಮನಿಂದ ಚೋದಿತನಾಗಿ ಪ್ರಭಂಜನ ವಾಯುವು ಶಬ್ದಮಾಡ ಬೇಡಿ ಎಂದು ಸಭೆಯ ಎಲ್ಲೆಡೆಯಲ್ಲಿ ಹೇಳಿ ಮೌನವಾಗಿರಿಸಿದನು.
ನಿಃಶಬ್ದಸ್ತಿಮಿತೇ ತಸ್ಮಿನ್ಸಮಾಜೇ ತ್ರಿದಿವೌಕಸಾಂ |
ಬಭಾಷೇ ಧರಣೀ ವಾಕ್ಯಂ ಖೇದಾತ್ಕರುಣಭಾಷಿನೀ ||೧-೫೨-೧೩
ತ್ರಿದಿವೌಕಸರ ಆ ಸಮಾಜವು ನಿಃಶಬ್ದವಾಗಲು ಕರುಣಭಾಷಿನೀ ಧರಣಿಯು ಖೇದದಿಂದ ಈ ಮಾತನ್ನಾಡಿದಳು.
ಧರಣ್ಯುವಾಚ|
ತ್ವಯಾ ಧಾರ್ಯಾ ತ್ವಹಂ ದೇವ ತ್ವಯಾ ವೈ ಧಾರ್ಯತೇ ಜಗತ್ |
ತ್ವಂ ಧಾರಯಸಿ ಭೂತಾನಿ ಭುವನಾನಿ ಬಿಭರ್ಷಿ ಚ ||೧-೫೨-೧೪
ಧರಣಿಯು ಹೇಳಿದಳು: “ದೇವ! ನಾನು ನಿನ್ನಿಂದ ಧರಿಸಲ್ಪಟ್ಟಿದ್ದೇನೆ. ನಿನ್ನಿಂದ ಈ ಜಗತ್ತೇ ಧರಿಸಲ್ಪಟ್ಟಿದೆ. ನೀನು ಭೂತಗಳನ್ನೂ ಭುವನಗಳನ್ನೂ ಧರಿಸುತ್ತೀಯೆ ಮತ್ತು ಭರಣ-ಪೋಷಣ ಮಾಡುತ್ತೀಯೆ.
ಯತ್ತ್ವಯಾ ಧಾರ್ಯತೇ ಕಿಂಚಿತ್ತೇಜಸಾ ಚ ಬಲೇನ ಚ |
ತತಸ್ತವ ಪ್ರಸಾದೇನ ಮಯಾ ಯತ್ನಾಚ್ಚ ಧಾರ್ಯತೇ |೧-೫೨-೧೫
ತೇಜಸ್ಸು ಬಲದಿಂದ ನೀನು ಧರಿಸುವುದನ್ನು ನಿನ್ನ ಪ್ರಸಾದವೆಂದು ತಿಳಿದು ಪ್ರಯತ್ನಪಟ್ಟು ನಾನು ಧರಿಸುತ್ತಿದ್ದೇನೆ.
ತ್ವಯಾ ಧೃತಂ ಧಾರಯಾಮಿ ನಾಧೃತಂ ಧಾರಯಾಮ್ಯಹಮ್ |
ನ ಹಿ ತದ್ವಿದ್ಯತೇ ಭೂತಂ ಯತ್ತ್ವಯಾ ನಾನುಧಾರ್ಯತೇ ||೧-೫೨-೧೬
ನೀನು ಧಾರಣೆಮಾಡಿರುವುದನ್ನೇ ನಾನು ಧರಿಸಿದ್ದೇನೆ. ನೀನು ಧರಿಸದೇ ಇದ್ದುದನ್ನು ನಾನು ಧರಿಸುವುದಿಲ್ಲ. ನೀನು ಧರಿಸದೇ ಇರುವ ಭೂತವು ಯಾವುದೂ ಇಲ್ಲ.
ತ್ವಮೇವ ಕುರುಷೇ ದೇವ ನಾರಾಯಣ ಯುಗೇ ಯುಗೇ |
ಮಮ ಭಾರಾವತರಣಂ ಜಗತೋ ಹಿತಕಾಮ್ಯಯಾ ||೧-೫೨-೧೭
ದೇವ! ನಾರಾಯಣ! ಜಗತ್ತಿನ ಹಿತವನ್ನು ಬಯಸಿ ನೀನೇ ಯುಗಯುಗದಲ್ಲಿಯೂ ನನ್ನ ಭಾರವನ್ನು ಹಗುರಾಗಿಸುತ್ತೀಯೆ.
ತವೈವ ತೇಜಸಾ ಕ್ರಾಂತಾಂ ರಸಾತಲತಲಂ ಗತಾಮ್ |
ತ್ರಾಯಸ್ವ ಮಾಂ ಸುರಶ್ರೇಷ್ಠ ತ್ವಾಮೇವ ಶರಣಂ ಗತಾಮ್ ||೧-೫೨-೧೮
ನಿನ್ನದೇ ತೇಜಸ್ಸಿನಿಂದ ಆಕ್ರಾಂತಳಾಗಿ ನಾನು ರಸಾತಲದ ಅಡಿಯನ್ನು ಸೇರಿದ್ದೇನೆ. ಸುರಶ್ರೇಷ್ಠ! ನಿನ್ನನ್ನೇ ಶರಣುಬಂದಿರುವ ನನ್ನನ್ನು ಉದ್ಧರಿಸು.
ದಾನವೈಃ ಪೀಡ್ಯಮಾನಾಹಂ ರಾಕ್ಷಸೈಶ್ಚ ದುರಾತ್ಮಭಿಃ |
ತ್ವಾಮೇವ ಶರಣಂ ನಿತ್ಯಮುಪಾಯಾಸ್ಯೇ ಸನಾತನಮ್ ||೧-೫೨-೧೯
ದುರಾತ್ಮರಾದ ರಾಕ್ಷಸರು ಮತ್ತು ದಾನವರಿಂದ ಪೀಡಿತಳಾದ ನಾಅನು ನಿತ್ಯವೂ ಉಪಾಸ್ಯನಾಗಿರುವ ಸನಾತನ ನಿನ್ನನ್ನೇ ಶರಣು ಬಂದಿದ್ದೇನೆ.
ತಾವನ್ಮೇಽಸ್ತಿ ಭಯಂ ಭೂಯೋ ಯಾವನ್ನ ತ್ವಾಂ ಕಕುದ್ಮಿನಮ್ |
ಶರಣಂ ಯಾಮಿ ಮನಸಾ ಶತಶೋ ಹ್ಯುಪಲಕ್ಷಯೇ ||೧-೫೨-೨೦
ಕಕುದ್ಮಿಯಾದ ನಿನ್ನನ್ನು ಮತ್ತೆ ಯಾವಾಗ ಕಾಣುತ್ತೀನೋ ಎಂಬ ಭಯವು ನನ್ನಲ್ಲಿತ್ತು. ನೂರಾರು ಸಲ ಮನಸ್ಸಿನಲ್ಲಿಯೇ ಯೋಚನೆಮಾಡಿ ನಿನ್ನ ಶರಣು ಬಂದಿದ್ದೇನೆ.
ಅಹಮಾದೌ ಪುರಾಣಸ್ಯ ಸಂಕ್ಷಿಪ್ತಾ ಪದ್ಮಯೋನಿನಾ |
ಮಾವರುಂಧಾಂ ಕೃತೌ ಪೂರ್ವಂ ಮೃನ್ಮಯೌ ದ್ವೌ ಮಹಾಸುರೌ ||೧-೫೨-೨೧
ಹಿಂದಿನ ಯುಗದ ಪ್ರಾರಂಭದಲ್ಲಿ ಪದ್ಮಯೋನಿಯು ನನ್ನನ್ನು ಜಲದ ಮೇಲೆ ಸ್ಥಾಪಿಸಿದ್ದನು ಮತ್ತು ನನ್ನ ಮೃತ್ತಿಕವನ್ನು ಮುಷ್ಟಿಯಲ್ಲಿ ಹಿಡಿದು ಅದರಿಂದ ಎರಡು ದೊಡ್ಡ ಅಸುರರ ಮೂರ್ತಿಗಳನ್ನು ರಚಿಸಿದನು.
ಕರ್ಣಸ್ರೋತೋದ್ಭವೌ ತೌ ಹಿ ವಿಷ್ಣೋರಸ್ಯ ಮಹಾತ್ಮನಃ |
ಮಹಾರ್ಣವೇ ಪ್ರಸ್ವಪತಃ ಕಾಷ್ಠಕುಡ್ಯಸಮೌ ಸ್ಥಿತೌ ||೧-೫೨-೨೨
ಅವರಿಬ್ಬರೂ ಮಹಾರ್ಣವದಲ್ಲಿ ನಿದ್ರಿಸುತ್ತಿದ್ದ ಮಹಾತ್ಮ ವಿಷ್ಣುವಿನ ಕಿವಿಗಳ ಮಲದಿಂದ ಉತ್ಪನ್ನರಾಗಿದ್ದರು ಮತ್ತು ಕಾಷ್ಠ ಮತ್ತು ಕುಂಡಗಳಂತೆ ಅಚೇತನರಾಗಿದ್ದರು.
ತೌ ವಿವೇಶ ಸ್ವಯಂ ವಾಯುರ್ಬ್ರಹ್ಮನಾ ಸಾಧು ಚೋದಿತಃ |
ದಿವಂ ಪ್ರಚ್ಛಾದಯಂತೌ ತು ವವೃಧಾತೇ ಮಹಾಸುರೌ ||೧-೫೨-೨೩
ಸಾಧು ಬ್ರಹ್ಮನಿಂದ ಪ್ರಚೋದಿತನಾದ ಸ್ವಯಂ ವಾಯುವು ಆ ಎರಡು ಮೂರ್ತಿಗಳನ್ನೂ ಪ್ರವೇಶಿಸಿದನು. ಅದರಿಂದ ದಿವವನ್ನು ಮುಚ್ಚಿಬಿಡುತ್ತಿರುವರೋ ಎಂಬಂತೆ ಇಬ್ಬರು ಮಹಾಸುರರು ಬೆಳೆದರು.
ವಾಯುಪ್ರಾಣೌ ತು ತೌ ಗೃಹ್ಯ ಬ್ರಹ್ಮಾ ಪರ್ಯಮೃಶಚ್ಛನೈಃ |
ಏಕಂ ಮೃದುತರಂ ಮೇನೇ ಕಠಿನಂ ವೇದ ಚಾಪರಮ್ ||೧-೫೨-೨೪
ವಾಯುವಿನಿಂದ ಪ್ರಾಣಗಳನ್ನು ಪಡೆದುಕೊಂಡ ಅವರಿಬ್ಬರನ್ನು ಎತ್ತಿಹಿಡಿದು ಬ್ರಹ್ಮನು ಮೆಲ್ಲನೇ ಅವರ ಅಂಗಾಂಗಗಳನ್ನು ಸವರತೊಡಗಿದನು. ಅವುಗಳಲ್ಲಿ ಒಬ್ಬನ ಶರೀರವು ಅತ್ಯಂತ ಮೃದುವಾಗಿತ್ತು ಮತ್ತು ಇನ್ನೊಬ್ಬನ ಶರೀರವು ಅತ್ಯಂತ ಕಠಿಣವಾಗಿತ್ತು.
ನಾಮನೀ ತು ತಯೋಶ್ಚಕ್ರೇ ಸ ವಿಭುಃ ಸಲಿಲೋದ್ಭವಃ |
ಮೃದುಸ್ತ್ವಯಂ ಮಧುರ್ನಾಮ ಕಠಿನಃ ಕೈಟಭೋಽಭವತ್ ||೧-೫೨-೨೫
ಸಲಿಲೋದ್ಭವ ವಿಭುವು ಅವರಿಗೆ ಹೆಸರನ್ನಿಟ್ಟನು: ಮೃದುವಾಗಿರುವವನ ಹೆಸರು ಮಧು ಎಂದಾಯಿತು ಮತ್ತು ಕಠಿಣನಾಗಿರುವವನ ಹೆಸರು ಕೈಟಭ ಎಂದಾಯಿತು.
ತೌ ದೈತ್ಯೌ ಕೃತನಾಮಾನೌ ಚೇರತುರ್ಬಲದರ್ಪಿತೌ |
ಸರ್ವಮೇಕಾರ್ಣವಂ ಲೋಕಂ ಯೋದ್ಧುಕಾಮೌ ಸುದುರ್ಜಯೌ ||೧-೫೨-೨೬
ನಾಮಕರಣಗಳನ್ನು ಮಾಡಿಸಿಕೊಂಡ ಆ ಇಬ್ಬರು ಸುದುರ್ಜಯ ದೈತ್ಯರೂ ಬಲದರ್ಪಿತರಾಗಿ ಯುದ್ಧವನ್ನು ಬಯಸಿ ಏಕಾರ್ಣವ ಲೋಕಗಳೆಲ್ಲಾ ಸಂಚರಿಸತೊಡಗಿದರು.
ತಾವಾಗತೌ ಸಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ |
ಏಕಾರ್ಣವಾಂಬುನಿಚಯೇ ತತ್ರೈವಾಂತರಧೀಯತ ||೧-೫೨-೨೭
ಆಗಮಿಸಿದ ಅವರಿಬ್ಬರನ್ನೂ ನೋಡಿ ಲೋಕಪಿತಾಮಹ ಬ್ರಹ್ಮನು ಏಕಾರ್ಣವದ ಜಲರಾಶಿಯಲ್ಲಿಯೇ ಅಂತರ್ಧಾನನಾದನು.
ಸ ಪದ್ಮೇ ಪದ್ಮನಾಭಸ್ಯ ನಾಭಿಮಧ್ಯಾತ್ಸಮುತ್ಥಿತೇ |
ರೋಚಯಾಮಾಸ ವಸತಿಂ ಗುಹ್ಯಾಂ ಬ್ರಹ್ಮಾ ಚತುರ್ಮುಖಃ ||೧-೫೨-೨೮
ಚತುರ್ಮುಖ ಬ್ರಹ್ಮನು ಪದ್ಮನಾಭನ ನಾಭಿಮಧ್ಯದಿಂದ ಮೇಲೆದ್ದಿದ್ದ ಪದ್ಮದಲ್ಲಿ ಗುಪ್ತನಾಗಿ ವಾಸಮಾಡಲಿಚ್ಛಿಸಿದನು.
ತಾವುಭೌ ಜಲಗರ್ಭಸ್ಥೌ ನಾರಾಯಣಪಿತಾಮಹೌ |
ಬಹೂನ್ವರ್ಷಗಣಾನಪ್ಸು ಶಯಾನೌ ನ ಚಕಂಪತುಃ ||೧-೫೨-೨೯
ನಾರಾಯಣ ಮತ್ತು ಪಿತಾಮಹರು ಜಲಗರ್ಭಸ್ಥರಾಗಿದ್ದಾಗ ಆ ಇಬ್ಬರು ದೈತ್ಯರೂ ಅನೇಕ ವರ್ಷಗಳ ಕಾಲ ಜಲದಮೇಲೆಯೇ ಮಲಗಿದರು. ಹಂದಾಡಲೂ ಇಲ್ಲ.
ಅಥ ದೀರ್ಘಸ್ಯ ಕಾಲಸ್ಯ ತಾವುಭೌ ಮಧುಕೈಟಭೌ |
ಆಜಗ್ಮತುಸ್ತಮುದ್ದೇಶಂ ಯತ್ರ ಬ್ರಹ್ಮಾ ವ್ಯವಸ್ಥಿತಃ ||೧-೫೨-೩೦
ದೀರ್ಘಕಾಲದ ನಂತರ ಮಧುಕೈಟಭರಿಬ್ಬರೂ ಬ್ರಹ್ಮನು ವ್ಯವಸ್ಥಿತನಾಗಿದ್ದ ಪ್ರದೇಶಕ್ಕೆ ಬಂದರು.
ದೃಷ್ಟ್ವಾ ತಾವಸುರೌ ಘೋರೌ ಮಹಾಕಾಯೌ ದುರಾಸದೌ |
ಬ್ರಹ್ಮಣಾ ತಾಡಿತೋ ವಿಷ್ಣುಃ ಪದ್ಮನಾಲೇನ ವೈ ತದಾ |
ಉತ್ಪಪಾತಾಥ ಶಯನಾತ್ಪದ್ಮನಾಭೋ ಮಹಾದ್ಯುತಿಃ ||೧-೫೨-೩೧
ದುರಾಸದರೂ ಮಹಾಕಾಯರೂ ಆದ ಆ ಘೋರ ಅಸುರರನ್ನು ನೋಡಿ ಬ್ರಹ್ಮನು ಪದ್ಮನಾಲದಿಂದ ವಿಷ್ಣುವನ್ನು ಹೊಡೆದು ಎಬ್ಬಿಸಿದನು. ಆಗ ಮಹಾದ್ಯುತಿ ಪದ್ಮನಾಭನು ನಿದ್ರೆಯಿಂದ ಎಚ್ಚೆದ್ದನು.
ತದ್ಯುದ್ಧಮಭವದ್ಘೋರಂ ತಯೋಸ್ತಸ್ಯ ಚ ವೈ ತದಾ |
ಏಕಾರ್ಣವೇ ತದಾ ಲೋಕೇ ತ್ರೈಲೋಕ್ಯೇ ಜಲತಾಂ ಗತೇ ||೧-೫೨-೩೨
ಮೂರೂ ಲೋಕಗಳೂ ಜಲಮಯವಾಗಿದ್ದ ಆ ಏಕಾರ್ಣವ ಲೋಕದಲ್ಲಿ ಆಗ ಅವರಿಬ್ಬರು ಮತ್ತು ವಿಷ್ಣುವಿನ ನಡುವೆ ಘೋರ ಯುದ್ಧವು ನಡೆಯಿತು.
ತದಾಭೂತ್ತುಮುಲಂ ಯುದ್ಧಂ ವರ್ಷಸಂಖ್ಯಾಸಹಸ್ರಶಃ |
ನ ಚ ತಾವಸುರೌ ಯುದ್ಧೇ ತದಾ ಶ್ರಮಮವಾಪತುಃ ||೧-೫೨-೩೩
ಸಹಸ್ರಸಂಖ್ಯೆಗಳ ವರ್ಷಗಳ ಪರ್ಯಂತ ತುಮುಲ ಯುದ್ಧವು ನಡೆಯಿತು. ಆದರೂ ಆ ಇಬ್ಬರು ಅಸುರರು ಯುದ್ಧದಲ್ಲಿ ಬಳಲಲಿಲ್ಲ.
ಅಥಾತೋ ದೀರ್ಘಕಾಲಸ್ಯ ತೌ ದೈತ್ಯೌ ಯುದ್ಧದುರ್ಮದೌ |
ಊಚತುಃ ಪ್ರೀತಮನಸೌ ದೇವಂ ನಾರಾಯಣಂ ಹರಿಮ್ ||೧-೫೨-೩೪
ದೀರ್ಘಕಾಲದ ನಂತರ ಆ ಯುದ್ಧದುರ್ಮದ ದೈತ್ಯರಿಬ್ಬರೂ ಪ್ರೀತರಾಗಿ ದೇವ ನಾರಾಯಣ ಹರಿಗೆ ಹೇಳಿದರು:
ಪ್ರೀತೌ ಸ್ವಸ್ತವ ಯುದ್ಧೇನ ಶ್ಲಾಘ್ಯಸ್ತ್ವಂ ಮೃತ್ಯುರಾವಯೋಃ |
ಆವಾಂ ಜಹಿ ನ ಯತ್ರೋರ್ವೀ ಸಲಿಲೇನ ಪರಿಪ್ಲುತಾ ||೧-೫೨-೩೫
“ನಿನ್ನ ಈ ಯುದ್ಧದಿಂದ ನಾವಿಬ್ಬರೂ ಪಿತರಾಗಿದ್ದೇವೆ. ನಿನ್ನಿಂದ ಶ್ಲಾಘನೀಯ ಮೃತ್ಯುವನ್ನು ಬಯಸುತ್ತೇವೆ. ಎಲ್ಲಿ ಉರ್ವಿಯು ಜಲದಲ್ಲಿ ಮುಳುಗಿಲ್ಲವೋ ಅಲ್ಲಿ ನಮ್ಮನ್ನು ವಧಿಸು.
ಹತೌ ಚ ತವ ಪುತ್ರತ್ವಂ ಪ್ರಾಪ್ನುಯಾವಃ ಸುರೋತ್ತಮ |
ಯೋ ಹ್ಯಾವಾಂ ಯುಧಿ ನಿರ್ಜೇತಾ ತಸ್ಯಾವಾಂ ವಿಹಿತೌ ಸುತೌ ||೧-೫೨-೩೬
ಸುರೋತ್ತಮ! ಹತರಾದ ನಾವು ನಿನ್ನ ಪುತ್ರತ್ವವನ್ನು ಪಡೆದುಕೊಳ್ಳುತ್ತೇವೆ. ನಾವು ಯುದ್ಧದಲ್ಲಿ ನಮ್ಮನ್ನು ಜಯಿಸುವವನ ಪುತ್ರರಾಗುತ್ತೇವೆ ಎಂದು ವಿಹಿತವಾಗಿದೆ.”
ಸ ತು ಗೃಹ್ಯ ಮೃಧೇ ದೋರ್ಭ್ಯಾಂ ದೈತ್ಯೌ ತಾವಭ್ಯಪೀಡಯತ್ |
ಜಗ್ಮತುರ್ನಿಧನಂ ಚಾಪಿ ತಾವುಭೌ ಮಧುಕೈಟಭೌ ||೧-೫೨-೩೭
ಆಗ ಅವನು ಯುದ್ಧದಲ್ಲಿ ಅವರಿಬ್ಬರು ದೈತ್ಯರನ್ನೂ ಹಿಡಿದು ಪೀಡಿಸಿದನು. ಇದರಿಂದ ಮಧುಕೈಟಭರಿಬ್ಬರೂ ನಿಧನ ಹೊಂದಿದರು.
ತೌ ಹತೌ ಚಾಪ್ಲುತೌ ತೋಯೇ ವಪುರ್ಭ್ಯಾಮೇಕತಾಂ ಗತೌ |
ಮೇದೋ ಮುಮುಚತುರ್ದೈತ್ಯೌ ಮಥ್ಯಮಾನೌ ಜಲೋರ್ಮಿಭಿಃ ||೧-೫೨-೩೮
ಮೇದಸಾ ತಜ್ಜಲಂ ವ್ಯಾಪ್ತಂ ತಾಭ್ಯಾಮಂತರ್ದಧೇಽನಘಃ |
ನಾರಾಯಣಶ್ಚ ಭಗವಾನಸೃಜತ್ಸ ಪುನಃ ಪ್ರಜಾಃ ||೧-೫೨-೩೯
ಹತರಾಗಲು ಅವರಿಬ್ಬರ ಶರೀರಗಳು ನೀರಿನಲ್ಲಿ ಒಂದಾದವು. ನಂತರ ಜಲದ ಅಲೆಗಳಿಂದ ಮಥಿಸಲ್ಪಟ್ಟು ಆ ಇಬ್ಬರು ದೈತ್ಯರೂ ಬಿಟ್ಟ ಮೇದಸ್ಸು ಹರಡಿದಲ್ಲೆಲ್ಲಾ ನೀರು ಇಲ್ಲದಂತಾಯಿತು. ಅದರ ಮೇಲೆಯೇ ಭಗವಾನ್ ನಾರಾಯಣನು ಪುನಃ ಪ್ರಜೆಗಳನ್ನು ಸೃಷ್ಟಿಸಿದನು.
ದೈತ್ಯಯೋರ್ಮೇಧಸಾ ಚ್ಛನ್ನಾ ಮೇದಿನೀತಿ ತತಃ ಸ್ಮೃತಾ |
ಪ್ರಭಾವಾತ್ಪದ್ಮನಾಭಸ್ಯ ಶಾಶ್ವತೀ ಜಗತೀ ಕೃತಾ ||೧-೫೨-೪೦
ದೈತ್ಯರ ಮೇಧಸ್ಸಿನಿಂದ ಮುಚ್ಚಲ್ಪಟ್ಟಿದುದರಿಂದ ಮೇದಿನಿ ಎಂದು ಕರೆಯಲ್ಪಟ್ಟಿತು. ಪದ್ಮನಾಭನ ಪ್ರಭಾವದಿಂದ ಇದು ಜಗತ್ತಿಗೆ ಶಾಶತ ಆಧಾರವಾಯಿತು.
ವಾರಾಹೇಣ ಪುರಾ ಭೂತ್ವಾ ಮಾರ್ಕಂಡೇಯಸ್ಯ ಪಶ್ಯತಃ |
ವಿಷಾಣೇನಾಹಮೇಕೇನ ತೋಯಮಧ್ಯಾತ್ಸಮುದ್ಧೃತಾ ||೧-೫೨-೪೧
ಹಿಂದೆ ವಾರಾಹರೂಪವನ್ನು ಧರಿಸಿ ಇದೇ ಭಗವಾನ್ ನಾರಾಯಣನು ಮಾರ್ಕಂಡೇಯನು ನೋಡುತ್ತಿದ್ದಂತೆಯೇ ನನ್ನನ್ನು ಒಂದು ಕೋರೆದಾಡೆಯಿಂದ ಹಿಡಿದು ನೀರಿನೊಳಗಿಂದ ಮೇಲೆತ್ತಿದ್ದನು.
ಹೃತಾಹಂ ಕ್ರಮತೋ ಭೂಯಸ್ತದಾ ಯುಷ್ಮಾಕಮಗ್ರತಃ |
ಬಲೇಃ ಸಕಾಶಾದ್ದೈತ್ಯಸ ವಿಷ್ಣುನಾ ಪ್ರಭವಿಷ್ಣುನಾ ||೧-೫೨-೪೨
ಮತ್ತೆ ಇನ್ನೊಮ್ಮೆ ನಿಮ್ಮೆಲ್ಲರ ಎದುರಿಗೆ ವಿಷ್ಣು ಪ್ರಭುವಿಷ್ಣುವು ತ್ರಿವಿಕ್ರಮನಾಗಿ ಬಲಿಯ ಬಳಿಯಿಂದ ನನ್ನನ್ನು ಅಪಹರಿಸಿದನು.
ಸಾಂಪ್ರತಂ ಖಿದ್ಯಮಾನಾಹಮೇನಮೇವ ಗದಾಧರಮ್ |
ಅನಾಥಾ ಜಗತೋ ನಾಥಂ ಶರಣ್ಯಂ ಶರಣಂ ಗತಾ ||೧-೫೨-೪೩
ಈಗಲೂ ಕೂಡ ಅತ್ಯಂತ ಕಷ್ಟದಲ್ಲಿ ಬಿದ್ದು ಅನಾಥಳಂತಾಗಿದ್ದೇನೆ ಮತ್ತು ಅದೇ ಶರಣ್ಯ ಜಗನ್ನಾಥ ಗದಾಧರನ ಶರಣು ಬಂದಿದ್ದೇನೆ.
ಅಗ್ನಿಃ ಸುವರ್ಣಸ್ಯ ಗುರುರ್ಗವಾಂ ಸೂರ್ಯೋ ಗುರುಃ ಸ್ಮೃತಃ |
ನಕ್ಷತ್ರಾಣಾಂ ಗುರುಃ ಸೋಮೋ ಮಮ ನಾರಾಯಣೋ ಗುರುಃ ||೧-೫೨-೪೪
ಅಗ್ನಿಯು ಸುವರ್ಣದ ಗುರು. ಸೂರ್ಯನು ಕಿರಣಗಳಿಗೆ ಗುರು. ನಕ್ಷತ್ರಗಳ ಗುರು ಸೋಮ. ನನಗೆ ನಾರಾಯಣನು ಗುರು.
ಯದಹಂ ಧಾರಯಾಮ್ಯೇಕಾ ಜಗತ್ಸ್ಥಾವರಜಂಗಮಂ |
ಮಯಾ ಧೃತಂ ಧಾರಯತೇ ಸರ್ವಮೇತದ್ಗದಾಧರಃ ||೧-೫೨-೪೫
ನಾನೊಬ್ಬಳೇ ಹೊತ್ತಿರುವ ಈ ಸ್ಥಾವರಜಂಗಮ ಜಗತ್ತನ್ನೂ ಮತ್ತು ನನ್ನನ್ನೂ ಎಲ್ಲವನ್ನೂ ಗದಾಧರನು ಧರಿಸಿಕೊಂಡಿದ್ದಾನೆ.
ಜಾಮದಗ್ನ್ಯೇನ ರಾಮೇಣ ಭಾರಾವತರಣೇಪ್ಸಯಾ |
ರೋಷಾತ್ತ್ರಿಃಸಪ್ತಕ್ರಿತ್ತ್ವೋಹಂ ಕ್ಷತ್ರಿಯೈರ್ವಿಪ್ರಯೋಜಿತಾ ||೧-೫೨-೪೬
ನನ್ನ ಭಾರವನ್ನು ಹಗುರಗೊಳಿಸಲೋಸುಗ ರೋಷದಿಂದ ಇವನು ಜಾಮದಗ್ನಿ ರಾಮನಾಗಿ ಇಪ್ಪತೊಂದು ಬಾರಿ ನನ್ನನ್ನು ಕ್ಷತ್ರಿಯರಿಲ್ಲದಂತೆ ಮಾಡಿದ್ದನು.
ಸಾಽಸ್ಮಿ ವೇದ್ಯಾಂ ಸಮಾರೋಪ್ಯ ತರ್ಪಿತಾ ನೃಪಶೋಣಿತೈಃ |
ಭಾರ್ಗವೇಣ ಪಿತುಃ ಶ್ರಾದ್ಧೇ ಕಶ್ಯಪಾಯ ನಿವೇದಿತಾ ||೧-೫೨-೪೭
ಆ ರಣಯಜ್ಞದ ವೇದಿಯಲ್ಲಿ ನನ್ನನ್ನು ಪ್ರತಿಷ್ಠಾಪಿಸಿ ಆ ಭಾರ್ಗವನು ನೃಪರ ರಕ್ತದಿಂದ ಅವನು ತೃಪ್ತಿಪಡಿಸಿದ್ದನು ಮತ್ತು ಪಿತೃಶ್ರಾದ್ಧದಲ್ಲಿ ನನ್ನನ್ನು ಕಶ್ಯಪನಿಗೆ ದಾನವನ್ನಾಗಿತ್ತಿದ್ದನು.
ಮಾಮ್ಸಮೇದೋಸ್ಥಿದುರ್ಗಂಧಾ ದಿಗ್ಧಾ ಕ್ಷತ್ರಿಯಶೋಣಿತೈಃ |
ರಜಸ್ವಲೇವ ಯುವತಿಃ ಕಶ್ಯಪಂ ಸಮುಪಸ್ಥಿತಾ ||೧-೫೨-೪೮
ಕ್ಷತ್ರಿಯರ ರಕ್ತದಿಂದ ತೋಯ್ದುಹೋಗಿದ್ದ, ಮಾಂಸ-ಮೇದ-ಅಸ್ಥಿಗಳ ದುರ್ಗಂಧದಿಂದ ಕೂಡಿದ್ದ ನಾನು ರಜಸ್ವಲೆಯಾಗಿದ್ದ ಯುವತಿಯಂತೆ ಕಾಣುತ್ತಾ ಕಶ್ಯಪನ ಸೇವೆಯಲ್ಲಿ ಉಪಸ್ಥಿತಳಾಗಿದ್ದೆ.
ಸ ಮಾಂ ಬ್ರಹ್ಮರ್ಷಿರಪ್ಯಾಹ ಕಿಮುರ್ವಿ ತ್ವಮವಾಙ್ಮುಖೀ |
ವೀರಪತ್ನೀವ್ರತಮಿದಂ ಧಾರಯಂತೀ ವಿಷೀದಸಿ ||೧-೫೨-೪೯
ಆ ಬ್ರಹ್ಮರ್ಷಿ ಕಶ್ಯಪನು ನನಗೆ ಹೇಳಿದ್ದನು: “ಉರ್ವೀ! ನೀನು ತಲೆತಗ್ಗಿಸಿರುವೆಯೇಕೆ? ವೀರಪತ್ನಿಯ ಈ ವ್ರತವನ್ನು ಧರಿಸಿ ವಿಷಾದಿಸುತ್ತಿದ್ದೀಯೆ ಏಕೆ?”
ಸಾಹಂ ವಿಜ್ಞಾಪಿತವತೀ ಕಶ್ಯಪಂ ಲೋಕಭಾವನಮ್ |
ಪತಯೋ ಮೇ ಹತಾ ಬ್ರಹ್ಮನ್ಭಾರ್ಗವೇಣ ಮಹಾತ್ಮನಾ ||೧-೫೨-೫೦
ಆಗ ನಾನು ಲೋಕಭಾವನ ಕಶ್ಯಪನಿಗೆ ವಿಜ್ಞಾಪಿಸಿದ್ದೆನು: “ಬ್ರಹ್ಮನ್! ಮಹಾತ್ಮ ಭಾರ್ಗವನು ನನ್ನ ಪತಿಗಳನ್ನು ಸಂಹರಿಸಿದ್ದಾನೆ.
ಸಾಹಂ ವಿಹೀನಾ ವಿಕ್ರಾಂತೈಃ ಕ್ಷತ್ರಿಯೈಃ ಶಸ್ತ್ರವೃತ್ತಿಭಿಃ |
ವಿಧವಾ ಶೂನ್ಯನಗರಾ ನ ಧಾರಯಿತುಮುತ್ಸಹೇ ||೧-೫೨-೫೧
ಶಸ್ತ್ರವೃತ್ತಿಯಲ್ಲಿದ್ದ ವಿಕ್ರಾಂತ ಕ್ಷತ್ರಿಯರಿಂದ ನಾನು ವಿಹೀನಳಾಗಿ ವಿಧವೆಯಾಗಿಬಿಟ್ಟಿದ್ದೇನೆ. ರಾಜರಿಂದ ಶೂನ್ಯವಾದ ನಗರಗಳನ್ನು ಧರಿಸಲು ಇಚ್ಛಿಸುವುದಿಲ್ಲ.
ತನ್ಮಹ್ಯಂ ದೀಯತಾಂ ಭರ್ತಾ ಭಗವಂಸ್ತ್ವತ್ಸಮೋ ನೃಪಃ |
ರಕ್ಷೇತ್ಸಗ್ರಾಮನಗರಾಂ ಯೋ ಮಾಂ ಸಾಗರಮಾಲಿನೀಮ್ ||೧-೫೨-೫೨
ಭಗವನ್! ಸಾಗರ ಮಾಲಿನಿಯಾದ ಮತ್ತು ಗ್ರಾಮನಗರಗಳಿಂದ ಕೂಡಿದ ನನ್ನನ್ನು ರಕ್ಷಿಸಬಲ್ಲ ನಿನ್ನ ಸಮನಾಗಿರುವ ಭರ್ತಾ ನೃಪನನ್ನು ನೀಡು.”
ಸ ಶ್ರುತ್ವಾ ಭಗವಾನ್ವಾಕ್ಯಂ ಬಾಢಮಿತ್ಯಬ್ರವೀತ್ಪ್ರಭುಃ |
ತತೋ ಮಾಂ ಮಾನವೇಂದ್ರಾಯ ಮನವೇ ಸ ಪ್ರದತ್ತವಾನ್ ||೧-೫೨-೫೩
ನನ್ನ ಮಾತನ್ನು ಕೇಳಿ ಭಗವಾನ್ ಪ್ರಭುವು ಒಳ್ಳೆಯದು ಎಂದು ಹೇಳಿ ನನಗೆ ಮಾನವೇಂದ್ರ ಮನುವನ್ನು ನೀಡಿದ್ದನು.
ಸಾ ಮನುಪ್ರಭವಂ ದಿವ್ಯಂ ಪ್ರಾಪ್ಯೇಕ್ಷ್ವಾಕುಕುಲಂ ನೃಪಮ್ |
ವಿಪುಲೇನಾಸ್ಮಿ ಕಾಲೇನ ಪಾರ್ಥಿವಾತ್ಪಾರ್ಥಿವಂ ಗತಾ ||೧-೫೨-೫೪
ವೈವಸ್ವತ ಮನುವಿನಿಂದ ಹುಟ್ಟಿದ್ದ ಆ ಇಕ್ಷ್ವಾಕುನೃಪನ ಕುಲವನ್ನು ನಾನು ಪಡೆದುಕೊಂಡೆನು. ದೀರ್ಘಕಾಲದವರೆಗೆ ಆ ಕುಲದ ಒಬ್ಬ ಪಾರ್ಥಿವನಿಂದ ಇನ್ನೊಬ್ಬ ಪಾರ್ಥಿವನ ಬಳಿಯಲ್ಲಿದ್ದೆ.
ಏವಂ ದತ್ತಾಸ್ಮಿ ಮನವೇ ಮಾನವೇಂದ್ರಾಯ ಧೀಮತೇ |
ಭುಕ್ತಾ ರಾಜಸಹಸ್ರೈಶ್ಚ ಮಹರ್ಷಿಕುಲಸಂಮಿತೈಃ ||೧-೫೨-೫೫
ಹೀಗೆ ಧೀಮತ್ ರಾಜ ಮನುವಿಗೆ ಕೊಡಲ್ಪಟ್ಟ ನಾನು ಸಹಸ್ರಾರು ಮಹರ್ಷಿಕುಲಸಂಮಿತ ರಾಜರ ಉಪಭೋಗ್ಯಳಾದೆ.
ಬಹವಃ ಕ್ಷತ್ರಿಯಾಃ ಶೂರಾ ಮಾಂ ಜಿತ್ವಾ ದಿವಮಾಶ್ರಿತಾಃ |
ತೇ ಚ ಕಾಲವಶಂ ಪ್ರಾಪ್ಯ ಮಯ್ಯೇವ ಪ್ರಲಯಂ ಗತಾಃ ||೧-೫೨-೫೬
ಅನೇಕ ಕ್ಷತ್ರಿಯ ಶೂರರು ನನ್ನನ್ನು ಗೆದ್ದು ದಿವವನ್ನು ಆಶ್ರಯಿಸಿದ್ದಾರೆ. ಅವರು ಕಾಲವಶರಾಗಿ ನನ್ನಲ್ಲಿಯೇ ಲಯಹೊಂದಿದರು.
ಮತ್ಕೃತೇ ವಿಗ್ರಹಾ ಲೋಕೇ ವೃತ್ತಾ ವರ್ತಂತ ಏವ ಚ |
ಕ್ಷತ್ರಿಯಾಣಾಂ ಬಲವತಾಂ ಸಂಗ್ರಾಮೇಷ್ವನಿವರ್ತಿನಾಮ್ ||೧-೫೨-೫೭
ಲೋಕದಲ್ಲಿ ನನಗಾಗಿಯೇ ಸಂಗ್ರಾಮದಿಂದ ಪಲಾಯನಮಾಡದಿದ್ದ ಬಲವಂತ ಕ್ಷತ್ರಿಯರ ನಡುವೆ ಯುದ್ಧವು ನಡೆಯಿತು ಮತ್ತು ನಡೆಯುತ್ತಿದೆ.
ಏತದ್ಯುಷ್ಮತ್ಪ್ರವೃತ್ತೇನ ದೈವೇನ ಪರಿಪಾಲ್ಯತೇ |
ಜಗದ್ಧಿತಾರ್ಥಂ ಕುರುತ ರಾಜ್ಞಾಂ ಹೇತುಂ ರಣಕ್ಷಯೇ ||೧-೫೨-೫೮
ನಿಮ್ಮ ಪ್ರವೃತ್ತಿಯ ದೈವದಿಂದ ಈ ಜಗತ್ತು ಪರಿಪಾಲಿತಗೊಂಡಿದೆ. ಆದುದರಿಂದ ನೀವು ಜಗತ್ತಿನ ಹಿತಕ್ಕಾಗಿ ರಣದಲ್ಲಿ ರಾಜರ ಕ್ಷಯವಾಗುವಂತೆ ಮಾಡಿ.
ಯದ್ಯಸ್ತಿ ಮಯಿ ಕಾರುಣ್ಯಂ ಭಾರಶೈಥಿಲ್ಯಕಾರಣಾತ್ |
ಏಕಶ್ಚಕ್ರಧರಃ ಶ್ರೀಮಾನಭಯಂ ಮೇ ಪ್ರಯಚ್ಛತು ||೧-೫೨-೫೯
ನನ್ನಮೇಲೆ ಕಾರುಣ್ಯಭಾವವಿದ್ದರೆ ಚಕ್ರಧರ ಶೀಮಾನ್ ವಿಷ್ಣುವು ಭಾರವನ್ನು ಕಡಿಮೆಮಾಡುವ ಕಾರಣದಿಂದ ನನಗೆ ಅಭಯವನ್ನು ನೀಡಲಿ.
ಯಮಹಂ ಭಾರಸಂತಪ್ತಾ ಸಂಪ್ರಾಪ್ತಾ ಶರಣಾರ್ಥಿನೀ |
ಭಾರೋ ಯದ್ಯವರೋಪ್ತವ್ಯೋ ವಿಷ್ಣುರೇಷ ಬ್ರವೀತು ಮಾಮ್ ||೧-೫೨-೬೦
ಭಾರದಿಂದ ಸಂತಪ್ತಳಾಗಿ ಶರಣಾರ್ಥಿನಿಯಾಗಿ ಯಾರ ಬಳಿ ಬಂದಿದ್ದೇನೋ ಆ ವಿಷ್ಣುವು ನನ್ನ ಭಾರವನ್ನು ಇಳಿಸುವುದು ಉಚಿತವೆಂದು ತಿಳಿದರೆ ನನಗೆ ಆಶ್ವಾಸನೆಯನ್ನು ನೀಡಲಿ.””
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಧರಣೀವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ |
[1] ಅವನ ಜಟಾಮಂಡಲಮಂಡಿತ ಉದರಭಾಗವು ಮುಕ್ತಾಮಣಿಯ ಮಾಲೆಯು ಬೆಳಗಿ ಚಂದ್ರಮನ ಪ್ರಭಾಯುಕ್ತ ಮೇಘದ ಸಮಾನ ಕಾಂತಿಯುಕ್ತವಾಗಿತ್ತು. ಆ ಉದರವನ್ನು ಧರಿಸಿದ್ದ ಭಗವಾನ್ ಶ್ರೀಹರಿಯು ಅಪೂರ್ವ ಶೋಭಸಂಪನ್ನನಾಗಿ ಕಾಣುತ್ತಿದ್ದನು (ಗೀತಾ ಪ್ರೆಸ್).
[2] ಅವನ ವಿಸ್ತೃತ ವಕ್ಷಸ್ಥಲದಲ್ಲಿ ರೋಮಾಂಚಕಾರಯುಕ್ತ ಶೋಭೆಯ ಶ್ರೀವತ್ಸವು ಎರಡೂ ಸ್ತನಗಳ ಮುಖಗಳ ವರೆಗೆ ಹರಡಿ ಉದ್ಭಾಸಿಸುತ್ತಿತ್ತು (ಗೀತಾ ಪ್ರೆಸ್).