ಹದಿನೇಳನೇ ದಿನದ ಯುದ್ಧ-೧: ಶಲ್ಯನು ಕರ್ಣನ ಸಾರಥಿಯಾದುದು

[spacer height=”20px”] ಹದಿನೇಳನೇ ದಿನದ ಯುದ್ಧ – ೧: ಶಲ್ಯನು ಕರ್ಣನ ಸಾರಥಿಯಾದುದು ಪ್ರಹಾರಗಳಿಂದ ಹತರಾಗಿ, ವಿಧ್ವಸ್ಥರಾಗಿದ್ದ, ಕವಚ-ಆಯುಧ-ವಾಹನಗಳಿಂದ ವಿಹೀನರಾಗಿದ್ದ, ಶತ್ರುಗಳಿಂದ ಸೋತಿದ್ದ ಮಾನಿನಿಗಳಾದ ಕೌರವರು, ಹಲ್ಲುಗಳು ಕಿತ್ತು ವಿಷವನ್ನು ಕಳೆದುಕೊಂಡ ಮತ್ತು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪಗಳಂತೆ, ಶಿಬಿರದಲ್ಲಿ ಕುಳಿತು ದೀನಸ್ವರದಲ್ಲಿ ಮಾತನಾಡಿಕೊಳ್ಳುತ್ತಾ ಮಂತ್ರಾಲೋಚನೆ ಮಾಡಿದರು. ಆಗ ಕ್ರುದ್ಧ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಕರ್ಣನು ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ದುರ್ಯೋಧನನನ್ನು ನೋಡಿ ಹೇಳಿದನು:  “ಅರ್ಜುನನು ಸದಾ ಪ್ರಯತ್ನಶೀಲನು, ದೃಢನು, ದಕ್ಷನು…

Continue reading

ಹದಿನೇಳನೇ ದಿನದ ಯುದ್ಧ – ೭: ದುಃಶಾಸನ-ವೃಷಸೇನರ ವಧೆ

ಹದಿನೇಳನೇ ದಿನದ ಯುದ್ಧ – ೭: ದುಃಶಾಸನ-ವೃಷಸೇನರ ವಧೆ ಬೇಸಗೆಯ ಕೊನೆಯಲ್ಲಿ ಮೇಘಗಣಗಳು ಹೇಗೆ ಸೇರಿಕೊಳ್ಳುವವೋ ಹಾಗೆ ದೊಡ್ಡ ದೊಡ್ಡ ಧ್ವಜಗಳನ್ನುಳ್ಳ ಕೌರವ-ಪಾಂಡವರ ಸಮೃದ್ಧ ಸೇನೆಗಳು ಭೇರೀನಿನಾದಗಳನ್ನು ಮಾಡಿ ಗರ್ಜಿಸುತ್ತಾ ರಣದಲ್ಲಿ ಬಂದು ಸೇರಿದವು. ಮಹಾಗಜಗಳ ಸಮೂಹಗಳು ಮೇಘಗಳಂತಿದ್ದವು. ರಣವಾದ್ಯಗಳ ಮತ್ತು ರಥಚಕ್ರಗಳ ಶಬ್ಧವು ಗುಡುಗಿನ ಶಬ್ಧಗಳಂತಿದ್ದವು. ಮಹಾರಥರಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಬಣ್ಣಗಳ ಆಯುಧಗಳು ಶಬ್ಧಮಾಡಿ ಮಿಂಚಿನಂತೆ ಹೊಳೆಯುತ್ತಿದ್ದವು. ಆ ಭೀಮವೇಗದಿಂದ ಬೀಳುತ್ತಿದ್ದ, ರಕ್ತದ ಪ್ರವಾಹವನ್ನೇ ಹರಿಸುತ್ತಿದ್ದ, ಕ್ಷತ್ರಿಯರ ಜೀವವನ್ನು…

Continue reading

ಹದಿನೇಳನೇ ದಿನದ ಯುದ್ಧ-೩

ಹದಿನೇಳನೇ ದಿನದ ಯುದ್ಧ-೩ ಧೃಷ್ಟದ್ಯುಮ್ನನಿಂದ ರಕ್ಷಿತ ಶತ್ರುಸೇನೆಯಿಂದ ಭೇದಿಸಲು ಅಸಾಧ್ಯವಾದ ಪಾರ್ಥರ ಅಪ್ರತಿಮ ವ್ಯೂಹವನ್ನು ನೋಡಿ ಕರ್ಣನು ರಥಘೋಷ-ಸಿಂಹನಾದ-ವಾದ್ಯನಿನಾದಗಳೊಂದಿಗೆ ಮೇದಿನಿಯನ್ನು ನಡುಗಿಸುತ್ತಾ ಮುಂದುವರೆದನು. ಕ್ರೋಧದಿಂದ ನಡುಗುತ್ತಾ ಆ ಮಹಾತೇಜಸ್ವಿಯು ಯಥಾವತ್ತಾಗಿ ಪ್ರತಿವ್ಯೂಹವನ್ನು ರಚಿಸಿ ಅಸುರೀಸೇನೆಯನ್ನು ಮಘವಾನನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ವಧಿಸುತ್ತಾ ಯುಧಿಷ್ಠಿರನನ್ನೂ ಗಾಯಗೊಳಿಸಿ ಅವನನ್ನು ತನ್ನ ಬಲಕ್ಕೆ ಮಾಡಿಕೊಂಡನು. ಕೃಪ, ಮಾಗಧ, ಮತ್ತು ಕೃತವರ್ಮರು ಸೇನೆಯ ಎಡಭಾಗದಲ್ಲಿದ್ದರು. ಅವರ ಬಲಭಾಗದಲ್ಲಿ ಶಕುನಿ-ಉಲೂಕರು ಥಳಥಳಿಸುವ ಪ್ರಾಸಗಳನ್ನು ಹಿಡಿದಿದ್ದ ಕುದುರೆ…

Continue reading

ಹದಿನೇಳನೇ ದಿನದ ಯುದ್ಧ-೪

ಹದಿನೇಳನೇ ದಿನದ ಯುದ್ಧ-೪ ಕರ್ಣ-ಧೃಷ್ಟದ್ಯುಮ್ನರ ಯುದ್ಧ ರಾಜನ ಹಿತಾಕಾಂಕ್ಷೀ ಮಹಾಬಲ ಕರ್ಣನಾದರೋ ಸಾತ್ಯಕಿಯನ್ನು ಗೆದ್ದು ರಣದಲ್ಲಿ ಉಗ್ರ ದ್ರೋಣಹಂತಾರ ಧೃಷ್ಟದ್ಯುಮ್ನನನ್ನು ಎದುರಿಸಿ ಹೋದನು. ಒಂದು ಆನೆಯು ಇನ್ನೊಂದು ಆನೆಯ ಹಿಂಭಾಗವನ್ನು ದಂತಗಳಿಂದ ತಿವಿಯುವಂತೆ ಶೈನೇಯನು ವೇಗವಾಗಿ ಶರಗಳಿಂದ ಕರ್ಣನನ್ನು ಪೀಡಿಸುತ್ತಾ ಅವನ ಹಿಂದೆಯೇ ಹೋದನು. ಆಗ ಮಹಾರಣದಲ್ಲಿ ಕರ್ಣ-ಪಾರ್ಷತರ ಮಧ್ಯೆ ಮತ್ತು ಕೌರವ ಯೋಧರ ಮಹಾಯುದ್ಧವು ನಡೆಯಿತು. ಆಗ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು. ಮಧ್ಯಾಹ್ನದ ಆ ಸಮಯದಲ್ಲಿ ಎರಡೂ…

Continue reading

ಹದಿನೈದನೆಯ ದಿನದ ಯುದ್ಧ ಸಮಾಪ್ತಿ

ಹದಿನೈದನೆಯ ದಿನದ ಯುದ್ಧ ಸಮಾಪ್ತಿ ಅಶ್ವತ್ಥಾಮ ಪರಾಕ್ರಮ ಆ ಅಸ್ತ್ರದಿಂದ ಹತಗೊಳ್ಳದೇ ವ್ಯವಸ್ಥಿತವಾಗಿ ನಿಂತಿದ್ದ ಆ ಸೇನೆಯನ್ನು ನೋಡಿ ದುರ್ಯೋಧನನು ದ್ರೋಣಪುತ್ರನಿಗೆ ಹೇಳಿದನು: “ಅಶ್ವತ್ಥಾಮ! ಶೀಘ್ರದಲ್ಲಿಯೇ ಪುನಃ ಆ ಅಸ್ತ್ರವನ್ನು ಪ್ರಯೋಗಿಸು! ಜಯೈಷಿ ಪಾಂಚಾಲರು ಪುನಃ ಯುದ್ಧಕ್ಕೆ ಸಿದ್ಧರಾಗಿದ್ದಾರೆ!” ದುರ್ಯೋಧನನು ಹಾಗೆ ಹೇಳಲು ಅಶ್ವತ್ಥಾಮನು ದೀನನಾಗಿ ನಿಟ್ಟುಸಿರುಬಿಡುತ್ತಾ ರಾಜನಿಗೆ ಈ ಮಾತನ್ನಾಡಿದನು: “ರಾಜನ್! ಈ ಅಸ್ತ್ರವನ್ನು ಮರುಕಳಿಸಲಾಗುವುದಿಲ್ಲ. ಎರಡನೆಯ ಬಾರಿ ಪ್ರಯೋಗಿಸಲಿಕ್ಕಾಗುವುದಿಲ್ಲ. ಪುನಃ ಪ್ರಯೋಗಿಸಿದ್ದಾದರೆ ಪ್ರಯೋಗಿಸಿದವನನ್ನೇ ಅದು ಸಂಹರಿಸುತ್ತದೆ ಎನ್ನುವುದರಲ್ಲಿ…

Continue reading

ಹದಿನೈದನೆಯ ದಿನದ ಯುದ್ಧ – ೩: ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ

[spacer height=”20px”]   ಹದಿನೈದನೆಯ ದಿನದ ಯುದ್ಧ – ೩: ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ ಪಾಪಕರ್ಮಿ ಧೃಷ್ಟದ್ಯುಮ್ನನಿಂದ ತನ್ನ ತಂದೆಯು ಹತನಾದನೆಂದು ಕೇಳಿ ದ್ರೌಣಿ ಅಶ್ವತ್ಥಾಮನ ಕಣ್ಣುಗಳು ರೋಷದ ಕಣ್ಣೀರಿನಿಂದ ತುಂಬಿದವು. ಪ್ರಳಯ ಕಾಲದಲ್ಲಿ ಪ್ರಾಣಿಗಳ ಅಸುವನ್ನು ಹೀರಿಕೊಳ್ಳುವ ಅಂತಕನೋಪಾದಿಯಲ್ಲಿ ಕ್ರುದ್ಧನಾದ ಅವನ ಶರೀರವು ದಿವ್ಯವಾಗಿ ಕಂಡಿತು. ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಳ್ಳುತ್ತಿರಲು ಅವನು ಪುನಃ ಪುನಃ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಕೋಪದಿಂದ ನಿಟ್ಟುಸಿರು ಬಿಡುತ್ತಾ ದುರ್ಯೋಧನನೊಡನೆ ಈ ಮಾತುಗಳನ್ನಾಡಿದನು: “ಶಸ್ತ್ರಸಂನ್ಯಾಸವನ್ನು ಮಾಡಿದ…

Continue reading

ಹದಿನೈದನೆಯ ದಿನದ ಯುದ್ಧ – ೧: ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ

ಹದಿನೈದನೆಯ ದಿನದ ಯುದ್ಧ-೧: ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ ಹದಿನಾಲ್ಕನೆಯ ದಿನದ ರಾತ್ರಿಯುದ್ಧದಲ್ಲಿ ರಣಾಂಗಣದಲ್ಲಿಯೇ ಸೇನೆಗಳು ನಿದ್ರೆಹೋದುದು ಸೂತಪುತ್ರನಿಂದ ಘಟೋತ್ಕಚನು ಹತನಾದ ರಾತ್ರಿ ಯುಧಿಷ್ಠಿರನು ದುಃಖ-ರೋಷಗಳ ವಶನಾದನು. ಭೀಮನಿಂದ ಕೌರವ ಮಹಾಸೇನೆಯು ತಡೆಹಿಡಿಯಲ್ಪಟ್ಟಿರುವುದನ್ನು ನೋಡಿ ಕುಂಭಯೋನಿ ದ್ರೋಣನನ್ನು ತಡೆಯುವಂತೆ ಧೃಷ್ಟದ್ಯುಮ್ನನಿಗೆ ಹೇಳಿದನು: “ಶತ್ರುತಾಪನ! ದ್ರೋಣನ ವಿನಾಶಕ್ಕಾಗಿಯೇ ನೀನು ಅಗ್ನಿಯಿಂದ ಶರ, ಕವಚ, ಖಡ್ಗ ಮತ್ತು ಧನುಸ್ಸುಗಳೊಡನೆ ಸಮುತ್ಪನ್ನನಾಗಿದ್ದೀಯೆ. ಆದುದರಿಂದ ನೀನು ಸ್ವಲ್ಪವೂ ಭಯಪಡದೇ ಸಂತೋಷದಿಂದ ರಣದಲ್ಲಿ ಅವನನ್ನು ಆಕ್ರಮಣಿಸು! ಜನಮೇಜಯ,…

Continue reading

ಹದಿನೈದನೇ ದಿನದ ಯುದ್ಧ – ೨: ದ್ರೋಣವಧೆ

[spacer height=”20px”] ಹದಿನೈದನೇ ದಿನದ ಯುದ್ಧ – ೨: ದ್ರೋಣವಧೆ ಸೂರ್ಯೋದಯಕ್ಕೆ ಮೊದಲು ಅಲ್ಲಿ ಯಾರ್ಯಾರು ದ್ವಂದ್ವಯುದ್ಧದಲ್ಲಿ ತೊಡಗಿದ್ದರೋ ಅವರೇ ಸೂರ್ಯೋದಯದ ನಂತರವೂ ದ್ವಂದ್ವಯುದ್ಧವನ್ನು ಮುಂದುವರೆಸಿದರು. ರಥಗಳು ಕುದುರೆಗಳೊಂದಿಗೆ, ಕುದುರೆಗಳು ಆನೆಗಳೊಂದಿಗೆ, ಪಾದಾತಿಗಳು ಆನೆಗಳೊಂದಿಗೆ, ಕುದುರೆಗಳು ಕುದುರೆಗಳೊಂದಿಗೆ ಮತ್ತು ಪದಾತಿಗಳು ಪದಾತಿಗಳೊಂದಿಗೆ ಎದುರಾಗಿ ಯುದ್ಧಮಾಡಿದರು. ಒಬ್ಬರಿಗೊಬ್ಬರು ಅಂಟಿಕೊಂಡು ಮತ್ತು ಬೇರೆ ಬೇರಾಗಿ ಯೋಧರು ರಣದಲ್ಲಿ ಬೀಳುತ್ತಿದ್ದರು. ರಾತ್ರಿಯೆಲ್ಲಾ ಯುದ್ಧಮಾಡುತ್ತಿದ್ದು ಈಗ ಸೂರ್ಯನ ತೇಜಸ್ಸಿನಿಂದ ಬಳಲಿ, ಹಸಿವು-ಬಾಯಾರಿಕೆಗಳಿಂದ ಆಯಾಸಗೊಂಡವರಾಗಿ ಅನೇಕರು ಮೂರ್ಛಿತರಾದರು.…

Continue reading

ಹದಿಮೂರನೇ ದಿನದ ಯುದ್ಧ – ೧: ಅಭಿಮನ್ಯು ವಧೆ

[spacer height=”20px”] ಹದಿಮೂರನೇ ದಿನದ ಯುದ್ಧ – ೧: ಅಭಿಮನ್ಯು ವಧೆ ಚಕ್ರವ್ಯೂಹ ನಿರ್ಮಾಣ ಅಮಿತೌಜಸ ಫಲ್ಗುನನು ಕೌರವರನ್ನು ಮೊದಲೇ ಭಗ್ನಗೊಳಿಸಿದ್ದನು. ಯುಧಿಷ್ಠಿರನನ್ನು ರಕ್ಷಿಸಿ ದ್ರೋಣನ ಸಂಕಲ್ಪವನ್ನು ಅಸಫಲಗೊಳಿಸಿದ್ದನು. ಕೌರವರೆಲ್ಲರೂ ಯುದ್ಧದಲ್ಲಿ ಸೋತು, ಕವಚಗಳನ್ನು ಕಳೆದುಕೊಂಡು ಧೂಳಿನಿಂತ ತುಂಬಿಕೊಂಡು, ತುಂಬಾ ಉದ್ವಿಗ್ನರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಿದ್ದರು. ಭಾರದ್ವಾಜನ ಸಮ್ಮತಿಯಂತೆ ಯುದ್ಧದಿಂದ ಹಿಂದಿರುಗಿದರು. ಅರ್ಜುನನ ಗುರಿಗೆ ಸಿಲುಕಿದ್ದ ಅವರು ರಣದಲ್ಲಿ ಶತ್ರುಗಳಿಂದ ದೀನರಾಗಿಸಿಕೊಂಡಿದ್ದರು ಮತ್ತು ಅವಹೇಳನಕ್ಕೊಳಗಾಗಿದ್ದರು. ಎಲ್ಲ ಭೂತಗಳು ಫಲ್ಗುನನ ಅಮಿತ…

Continue reading

ಹನ್ನೆರಡನೇ ದಿನದ ಯುದ್ಧ: ಸಂಶಪ್ತಕವಧೆ

[spacer height=”20px”] ಹನ್ನೆರಡನೇ ದಿನದ ಯುದ್ಧ: ಸಂಶಪ್ತಕವಧೆ ಸಂಶಪ್ತಕರ ಶಪಥ; ಯುದ್ಧಾರಂಭ ಕೌರವ-ಪಾಂಡವ ಸೇನೆಗಳು ಶಿಬಿರಕ್ಕೆ ಹೋಗಿ ಎಲ್ಲಾ  ಕಡೆ ಯಥಾಭಾಗವಾಗಿ, ಯಥಾನ್ಯಾಯವಾಗಿ ಮತ್ತು ಯಥಾಗುಲ್ಮವಾಗಿ ವಿಶ್ರಾಂತಿಪಡೆದರು. ಸೇನೆಗಳನ್ನು ಹಿಂದೆ ತೆಗೆದುಕೊಂಡ ದ್ರೋಣನು ಪರಮ ದುಃಖಿತನಾಗಿ ನಾಚಿಕೆಗೊಂಡು ದುರ್ಯೋಧನನನ್ನು ನೋಡಿ ಹೇಳಿದನು: “ನಾನು ಮೊದಲೇ ನಿನಗೆ ಹೇಳಿದ್ದೆ. ಧನಂಜಯನು ಸಂಗ್ರಾಮದಲ್ಲಿ ನಿಂತಿರಲು ದೇವತೆಗಳೂ ಕೂಡ ಯುಧಿಷ್ಠಿರನನ್ನು ಸೆರೆಹಿಡಿಯಲು ಶಕ್ಯರಾಗಲಾರರು. ನೀವೆಲ್ಲರೂ ಪ್ರಯತ್ನಿಸಿದರೂ ಸಂಯುಗದಲ್ಲಿ ಪಾರ್ಥನದೇ ಮೇಲುಗೈಯಾಗಿತ್ತು. ನನ್ನ ಮಾತನ್ನು ಶಂಕಿಸಬೇಡ.…

Continue reading