Aranyaka Parva: Chapter 234

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೪

ಭೀಕರ ಯುದ್ಧವು ನಡೆಯುತ್ತಿರುವಾಗ ಹೋರಾಡುತ್ತಿದ್ದ ಗಂಧರ್ವರಾಜನ ಅಂತರ್ಧಾನತ್ವವನ್ನು ಶಬ್ಧವೇದಿ ಅಸ್ತ್ರವನ್ನು ಬಳಸಿ ಅರ್ಜುನನು ಕೊನೆಗೊಳಿಸಲು, ಹೋರಾಡುವವನು ತನ್ನ ಮಿತ್ರ ಚಿತ್ರರಥನೆಂದು ಗುರುತಿಸಿ, ಯುದ್ಧವು ನಿಲ್ಲುವುದು; ಪಾಂಡವ-ಗಂಧರ್ವರಾಜರು ರಥದಲ್ಲಿದ್ದುಕೊಂಡೇ ಪರಸ್ಪರರ ಕುಶಲಗಳನ್ನು ಕೇಳಿಕೊಂಡಿದುದು (೧-೨೮).

03234001 ವೈಶಂಪಾಯನ ಉವಾಚ|

03234001a ತತೋ ದಿವ್ಯಾಸ್ತ್ರಸಂಪನ್ನಾ ಗಂಧರ್ವಾ ಹೇಮಮಾಲಿನಃ|

03234001c ವಿಸೃಜಂತಃ ಶರಾನ್ದೀಪ್ತಾನ್ಸಮಂತಾತ್ಪರ್ಯವಾರಯನ್||

ವೈಶಂಪಾಯನನು ಹೇಳಿದನು: “ಆಗ ದ್ವಿವ್ಯಾಸ್ತ್ರಸಂಪನ್ನರೂ ಹೇಮಮಾಲಿನಿಗಳೂ ಆದ ಗಂಧರ್ವರು ಅವರನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಉರಿಯುತ್ತಿರುವ ಬಾಣಗಳನ್ನು ಪ್ರಯೋಗಿಸಿದರು.

03234002a ಚತ್ವಾರಃ ಪಾಂಡವಾ ವೀರಾ ಗಂಧರ್ವಾಶ್ಚ ಸಹಸ್ರಶಃ|

03234002c ರಣೇ ಸಂನ್ಯಪತನ್ರಾಜಂಸ್ತದದ್ಭುತಮಿವಾಭವತ್||

ರಾಜನ್! ನಾಲ್ವರು ವೀರ ಪಾಂಡವರು ಮತ್ತು ಸಹಸ್ರಾರು ಗಂಧರ್ವರು ಪರಸ್ಪರರ ಮೇಲೆ ಎರಗಲು ಅದ್ಭುತವೆನಿಸಿತು.

03234003a ಯಥಾ ಕರ್ಣಸ್ಯ ಚ ರಥೋ ಧಾರ್ತರಾಷ್ಟ್ರಸ್ಯ ಚೋಭಯೋಃ|

03234003c ಗಂಧರ್ವೈಃ ಶತಶಶ್ಚಿನ್ನೌ ತಥಾ ತೇಷಾಂ ಪ್ರಚಕ್ರಿರೇ||

ಕರ್ಣ ಮತ್ತು ಧಾರ್ತರಾಷ್ಟ್ರ ಇಬ್ಬರ ರಥವನ್ನು ಹೇಗೆ ನೂರಾರು ಚೂರುಗಳನ್ನಾಗಿ ಮಾಡಿದ್ದರೋ ಹಾಗೆ ಇವರದ್ದನ್ನೂ ಮಾಡಲು ಗಂಧರ್ವರು ತೊಡಗಿದರು.

03234004a ತಾನ್ಸಮಾಪತತೋ ರಾಜನ್ಗಂಧರ್ವಾಂ ಶತಶೋ ರಣೇ|

03234004c ಪ್ರತ್ಯಗೃಹ್ಣನ್ನರವ್ಯಾಘ್ರಾಃ ಶರವರ್ಷೈರನೇಕಶಃ||

ರಾಜನ್! ರಣದಲ್ಲಿ ನೂರಾರು ಗಂಧರ್ವರು ಮೇಲೆ ಬೀಳಲು ನರವ್ಯಾಘ್ರರು ಅನೇಕ ಶರವರ್ಷಗಳಿಂದ ತಡೆಹಿಡಿದರು.

03234005a ಅವಕೀರ್ಯಮಾಣಾಃ ಖಗಮಾಃ ಶರವರ್ಷೈಃ ಸಮಂತತಃ|

03234005c ನ ಶೇಕುಃ ಪಾಂಡುಪುತ್ರಾಣಾಂ ಸಮೀಪೇ ಪರಿವರ್ತಿತುಂ||

ಎಲ್ಲಕಡೆಯಿಂದಲೂ ಶರವರ್ಷಗಳಿಗೆ ಸಿಲುಕಿದ ಆಕಾಶಗಾಮಿಗಳು ಪಾಂಡುಪುತ್ರರ ಸಮೀಪ ಬರಲೂ ಅಶಕ್ಯರಾದರು.

03234006a ಅಭಿಕ್ರುದ್ಧಾನಭಿಪ್ರೇಕ್ಷ್ಯ ಗಂಧರ್ವಾನರ್ಜುನಸ್ತದಾ|

03234006c ಲಕ್ಷಯಿತ್ವಾಥ ದಿವ್ಯಾನಿ ಮಹಾಸ್ತ್ರಾಣ್ಯುಪಚಕ್ರಮೇ||

ಗಂಧರ್ವರು ಸಿಟ್ಟಿಗೇಳುತ್ತಿದ್ದಾರೆ ಎಂದು ಕಂಡ ಅರ್ಜುನನು ದಿವ್ಯ ಮಹಾಸ್ತ್ರಗಳನ್ನು ಪ್ರಯೋಗಿಸಿದನು.

03234007a ಸಹಸ್ರಾಣಾಂ ಸಹಸ್ರಂ ಸ ಪ್ರಾಹಿಣೋದ್ಯಮಸಾದನಂ|

03234007c ಆಗ್ನೇಯೇನಾರ್ಜುನಃ ಸಂಖ್ಯೇ ಗಂಧರ್ವಾಣಾಂ ಬಲೋತ್ಕಟಃ||

ಆ ಯುದ್ಧದಲ್ಲಿ ಬಲೋತ್ಕಟ ಅರ್ಜುನನು ಆಗ್ನೇಯದಿಂದ ಸಹಸ್ರ ಸಹಸ್ರ ಗಂಧರ್ವರನ್ನು ಯಮಸಾದನಕ್ಕೆ ಕಳುಹಿಸಿದನು.

03234008a ತಥಾ ಭೀಮೋ ಮಹೇಷ್ವಾಸಃ ಸಂಯುಗೇ ಬಲಿನಾಂ ವರಃ|

03234008c ಗಂಧರ್ವಾಂ ಶತಶೋ ರಾಜಂ ಜಘಾನ ನಿಶಿತೈಃ ಶರೈಃ||

ರಾಜನ್! ಆಗ ಬಲಿಗಳಲ್ಲಿ ಶ್ರೇಷ್ಠ ಮಹೇಷ್ವಾಸ ಭೀಮನು ನಿಶಿತ ಶರಗಳಿಂದ ನೂರಾರು ಗಂಧರ್ವರನ್ನು ಸಂಹರಿಸಿದನು.

03234009a ಮಾದ್ರೀಪುತ್ರಾವಪಿ ತಥಾ ಯುಧ್ಯಮಾನೌ ಬಲೋತ್ಕಟೌ|

03234009c ಪರಿಗೃಹ್ಯಾಗ್ರತೋ ರಾಜಂ ಜಘ್ನತುಃ ಶತಶಃ ಪರಾನ್||

ರಾಜನ್! ಯುದ್ಧಮಾಡುತ್ತಿದ್ದ ಬಲೋತ್ಕಟ ಮಾದ್ರೀಪುತ್ರರಿಬ್ಬರೂ ಕೂಡ ನೂರಾರು ಶತ್ರುಗಳನ್ನು ಕಟ್ಟಿ ಸಂಹರಿಸಿದರು.

03234010a ತೇ ವಧ್ಯಮಾನಾ ಗಂಧರ್ವಾ ದಿವ್ಯೈರಸ್ತ್ರೈರ್ಮಹಾತ್ಮಭಿಃ|

03234010c ಉತ್ಪೇತುಃ ಖಮುಪಾದಾಯ ಧೃತರಾಷ್ಟ್ರಸುತಾಂಸ್ತತಃ||

ಆ ಮಹಾತ್ಮರ ದಿವ್ಯಾಸ್ತ್ರಗಳಿಂದ ಗಂಧರ್ವರು ವಧೆಗೊಳ್ಳುತ್ತಿರಲು ಅವರು ಧೃತರಾಷ್ಟ್ರನ ಮಕ್ಕಳೊಂದಿಗೆ ಆಕಾಶದ ಕಡೆ ಏರಿದರು.

03234011a ತಾನುತ್ಪತಿಷ್ಣೂನ್ಬುದ್ಧ್ವಾ ತು ಕುಂತೀಪುತ್ರೋ ಧನಂಜಯಃ|

03234011c ಮಹತಾ ಶರಜಾಲೇನ ಸಮಂತಾತ್ಪರ್ಯವಾರಯತ್||

ಆಗ ಕುಂತೀಪುತ್ರ ಧನಂಜಯನು ಮಹಾ ಶರಜಾಲದಿಂದ ಎಲ್ಲ ಕಡೆಯಿಂದಲೂ ಅವರನ್ನು ಮುಚ್ಚಿ ತಡೆಹಿಡಿದನು.

03234012a ತೇ ಬದ್ಧಾಃ ಶರಜಾಲೇನ ಶಕುಂತಾ ಇವ ಪಂಜರೇ|

03234012c ವವರ್ಷುರರ್ಜುನಂ ಕ್ರೋಧಾದ್ಗದಾಶಕ್ತ್ಯೃಷ್ಟಿವೃಷ್ಟಿಭಿಃ||

ಪಕ್ಷಿಗಳಂತೆ ಪಂಜರದಲ್ಲಿ ಬಂಧಿತರಾದ ಅವರು ಕ್ರೋಧದಿಂದ ಅರ್ಜುನನ ಮೇಲೆ ಗದೆ-ಶಕ್ತಿಗಳ ಮಳೆಯನ್ನು ಸುರಿಸಿದರು.

03234013a ಗದಾಶಕ್ತ್ಯಸಿವೃಷ್ಟೀಸ್ತಾ ನಿಹತ್ಯ ಸ ಮಹಾಸ್ತ್ರವಿತ್|

03234013c ಗಾತ್ರಾಣಿ ಚಾಹನದ್ಭಲ್ಲೈರ್ಗಂಧರ್ವಾಣಾಂ ಧನಂಜಯಃ||

ಆ ಮಹಾಸ್ತ್ರವಿದು ಧನಂಜಯನು ಗದೆ-ಶಕ್ತಿ-ಖಡ್ಗಗಳ ಮಳೆಯಿಂದ ಅವರನ್ನು ಸಂಹರಿಸಿ ಗಂಧರ್ವರ ಶರೀರಗಳನ್ನು ಭಲ್ಲೆಗಳಿಂದ ಹೊಡೆದನು.

03234014a ಶಿರೋಭಿಃ ಪ್ರಪತದ್ಭಿಶ್ಚ ಚರಣೈರ್ಬಾಹುಭಿಸ್ತಥಾ|

03234014c ಅಶ್ಮವೃಷ್ಟಿರಿವಾಭಾತಿ ಪರೇಷಾಮಭವದ್ಭಯಂ||

ತಲೆ-ಕಾಲು-ಬಾಹುಗಳು ಬೀಳುತ್ತಿರಲು ಕಲ್ಲುಗಳ ಮಳೆಯೋ ಎಂಬಂತೆ ಭಯಂಕರವಾಗಿ ತೋರಿತು.

03234015a ತೇ ವಧ್ಯಮಾನಾ ಗಂಧರ್ವಾಃ ಪಾಂಡವೇನ ಮಹಾತ್ಮನಾ|

03234015c ಭೂಮಿಷ್ಠಮಂತರಿಕ್ಷಸ್ಥಾಃ ಶರವರ್ಷೈರವಾಕಿರನ್||

ಮಹಾತ್ಮ ಪಾಂಡವನಿಂದ ಗಂಧರ್ವರು ಹೀಗೆ ಸಾಯುತ್ತಿರಲು ಅವರು ಆಕಾಶದಲ್ಲಿ ನಿಂತು ಭೂಮಿಯ ಮೇಲಿದ್ದ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು.

03234016a ತೇಷಾಂ ತು ಶರವರ್ಷಾಣಿ ಸವ್ಯಸಾಚೀ ಪರಂತಪಃ|

03234016c ಅಸ್ತ್ರೈಃ ಸಂವಾರ್ಯ ತೇಜಸ್ವೀ ಗಂಧರ್ವಾನ್ಪ್ರತ್ಯವಿಧ್ಯತ||

ಆದರೆ ಅವರ ಶರವರ್ಷಗಳನ್ನು ಪರಂತಪ ಸವ್ಯಸಾಚಿಯು ಅಸ್ತ್ರಗಳಿಂದ ತಡೆದನು. ಆ ತೇಜಸ್ವಿಯು ಗಂಧರ್ವರನ್ನು ತಿರುಗಿ ಹೊಡೆದನು.

03234017a ಸ್ಥೂಣಾಕರ್ಣೇಂದ್ರಜಾಲಂ ಚ ಸೌರಂ ಚಾಪಿ ತಥಾರ್ಜುನಃ|

03234017c ಆಗ್ನೇಯಂ ಚಾಪಿ ಸೌಮ್ಯಂ ಚ ಸಸರ್ಜ ಕುರುನಂದನಃ||

ಕುರುನಂದನ ಅರ್ಜುನನು ಸ್ಥೂಣಕರ್ಣ, ಇಂದ್ರಜಾಲ, ಸೌರ ಮತ್ತು ಸೌಮ್ಯಾಸ್ತ್ರಗಳನ್ನು ಪ್ರಯೋಗಿಸಿದನು.

03234018a ತೇ ದಹ್ಯಮಾನಾ ಗಂಧರ್ವಾಃ ಕುಂತೀಪುತ್ರಸ್ಯ ಸಾಯಕೈಃ|

03234018c ದೈತೇಯಾ ಇವ ಶಕ್ರೇಣ ವಿಷಾದಮಗಮನ್ಪರಂ||

ಕುಂತೀಪುತ್ರನ ಶರಗಳಿಂದ ಸುಡುತ್ತಿದ್ದ ಗಂಧರ್ವರು ಶಕ್ರನಿಂದ ದೈತ್ಯರು ಹೇಗೋ ಹಾಗೆ ಪರಮ ದುಃಖವನ್ನು ಅನುಭವಿಸಿದರು.

03234019a ಊರ್ಧ್ವಮಾಕ್ರಮಮಾಣಾಶ್ಚ ಶರಜಾಲೇನ ವಾರಿತಾಃ|

03234019c ವಿಸರ್ಪಮಾಣಾ ಭಲ್ಲೈಶ್ಚ ವಾರ್ಯಂತೇ ಸವ್ಯಸಾಚಿನಾ||

ಮೇಲೆ ಹಾರಲು ಪ್ರಯತ್ನಿಸಿದಾಗ ಶರಜಾಲವು ಅವರನ್ನು ತಡೆಯುತ್ತಿತ್ತು; ಭೂಮಿಯ ಮೇಲೆ ಹರಿದು ಹೋಗಬೇಕೆಂದರೆ ಸವ್ಯಸಾಚಿಯ ಭಲ್ಲೆಗಳು ತಡೆಯುತ್ತಿದ್ದವು.

03234020a ಗಂಧರ್ವಾಂಸ್ತ್ರಾಸಿತಾನ್ದೃಷ್ಟ್ವಾ ಕುಂತೀಪುತ್ರೇಣ ಧೀಮತಾ|

03234020c ಚಿತ್ರಸೇನೋ ಗದಾಂ ಗೃಹ್ಯ ಸವ್ಯಸಾಚಿನಮಾದ್ರವತ್||

ಧೀಮಂತ ಕುಂತೀಪುತ್ರನಿಂದ ಗಂಧರ್ವರು ಕಾಟಕ್ಕೊಳಗಾಗಿದ್ದುದನ್ನು ನೋಡಿ ಚಿತ್ರಸೇನನು ಗದೆಯನ್ನು ಹಿಡಿದು ಸವ್ಯಸಾಚಿಯ ಕಡೆ ಧಾವಿಸಿ ಬಂದನು.

03234021a ತಸ್ಯಾಭಿಪತತಸ್ತೂರ್ಣಂ ಗದಾಹಸ್ತಸ್ಯ ಸಂಯುಗೇ|

03234021c ಗದಾಂ ಸರ್ವಾಯಸೀಂ ಪಾರ್ಥಃ ಶರೈಶ್ಚಿಚ್ಚೇದ ಸಪ್ತಧಾ||

ಅವನ ಮೇಲೆರಗಲು ಪಾರ್ಥನು ಆ ಬಲವಾದ ಉಕ್ಕಿನ ಗದೆಯನ್ನು ಬಾಣಗಳಿಂದ ಏಳು ಭಾಗಗಳನ್ನಾಗಿ ತುಂಡರಿಸಿದನು.

03234022a ಸ ಗದಾಂ ಬಹುಧಾ ದೃಷ್ಟ್ವಾ ಕೃತ್ತಾಂ ಬಾಣೈಸ್ತರಸ್ವಿನಾ|

03234022c ಸಂವೃತ್ಯ ವಿದ್ಯಯಾತ್ಮಾನಂ ಯೋಧಯಾಮಾಸ ಪಾಂಡವಂ|

03234022e ಅಸ್ತ್ರಾಣಿ ತಸ್ಯ ದಿವ್ಯಾನಿ ಯೋಧಯಾಮಾಸ ಖೇ ಸ್ಥಿತಃ||

ಆ ತರಸ್ವಿಯ ಬಾಣಗಳಿಂದ ಗದೆಯು ತುಂಡಾದುದನ್ನು ನೋಡಿ ಅವನು ತನ್ನ ಮಾಯೆಯಿಂದ ತನ್ನನ್ನು ಅದೃಷ್ಯನನ್ನಾಗಿಸಿಕೊಂಡು ಆಕಾಶದಲ್ಲಿ ನಿಂತು ದಿವ್ಯಾಸ್ತ್ರಗಳೊಂದಿಗೆ ಪಾಂಡವನೊಡನೆ ಯುದ್ಧ ಮಾಡಿದನು.

03234023a ಗಂಧರ್ವರಾಜೋ ಬಲವಾನ್ಮಾಯಯಾಂತರ್ಹಿತಸ್ತದಾ|

03234023c ಅಂತರ್ಹಿತಂ ಸಮಾಲಕ್ಷ್ಯ ಪ್ರಹರಂತಮಥಾರ್ಜುನಃ|

03234023e ತಾಡಯಾಮಾಸ ಖಚರೈರ್ದಿವ್ಯಾಸ್ತ್ರಪ್ರತಿಮಂತ್ರಿತೈಃ||

ಆಗ ಬಲವಾನ್ ಗಂಧರ್ವರಾಜನು ಮಾಯೆಯಿಂದ ಅಂತರ್ಧಾನನಾದನು. ಅವನು ಅಂತರ್ಧಾನನಾದುದನ್ನು ಕಂಡು ಅರ್ಜುನನು ಆಕಾಶಗಾಮಿ ಅಸ್ತ್ರಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿ ಅವನನ್ನು ಹೊಡೆದನು.

03234024a ಅಂತರ್ಧಾನವಧಂ ಚಾಸ್ಯ ಚಕ್ರೇ ಕ್ರುದ್ಧೋಽರ್ಜುನಸ್ತದಾ|

03234024c ಶಬ್ದವೇಧ್ಯಮುಪಾಶ್ರಿತ್ಯ ಬಹುರೂಪೋ ಧನಂಜಯಃ||

ಆಗ ಕೃದ್ಧನಾದ ಬಹುರೂಪಿ ಧನಂಜಯ ಅರ್ಜುನನು ಶಬ್ಧವೇದಿಯನ್ನು ಉಪಯೋಗಿಸಿ ಅವನ ಅಂತರ್ಧಾನತ್ವವನ್ನು ಕೊನೆಗೊಳಿಸಿದನು.

03234025a ಸ ವಧ್ಯಮಾನಸ್ತೈರಸ್ತ್ರೈರರ್ಜುನೇನ ಮಹಾತ್ಮನಾ|

03234025c ಅಥಾಸ್ಯ ದರ್ಶಯಾಮಾಸ ತದಾತ್ಮಾನಂ ಪ್ರಿಯಃ ಸಖಾ||

ಮಹಾತ್ಮ ಅರ್ಜುನನ ಅಸ್ತ್ರಗಳಿಂದ ಹೊಡೆಯಲ್ಪಟ್ಟ ಅವನು ಪ್ರಿಯಸಖನಾಗಿ ಕಾಣಿಸಿಕೊಂಡನು.

03234026a ಚಿತ್ರಸೇನಮಥಾಲಕ್ಷ್ಯ ಸಖಾಯಂ ಯುಧಿ ದುರ್ಬಲಂ|

03234026c ಸಂಜಹಾರಾಸ್ತ್ರಮಥ ತತ್ಪ್ರಸೃಷ್ಟಂ ಪಾಂಡವರ್ಷಭಃ||

ಯುದ್ಧದಲ್ಲಿ ದರ್ಬಲನಾಗಿದ್ದ ಸಖ ಚಿತ್ರಸೇನನನ್ನು ನೋಡಿ ಪಾಂಡವರ್ಷಭನು ತಾನು ಬಿಟ್ಟಿದ್ದ ಅಸ್ತ್ರಗಳನ್ನು ಹಿಂದೆ ತೆಗೆದುಕೊಂಡನು.

03234027a ದೃಷ್ಟ್ವಾ ತು ಪಾಂಡವಾಃ ಸರ್ವೇ ಸಂಹೃತಾಸ್ತ್ರಂ ಧನಂಜಯಂ|

03234027c ಸಂಜಹ್ರುಃ ಪ್ರದ್ರುತಾನಶ್ವಾಂ ಶರವೇಗಾನ್ಧನೂಂಷಿ ಚ||

ಧನಂಜಯನು ಅಸ್ತ್ರಗಳನ್ನು ಹಿಂದೆ ತೆಗೆದುಕೊಂಡಿದ್ದುದನ್ನು ನೋಡಿದ ಎಲ್ಲ ಪಾಂಡವರೂ ಹಾರುತ್ತಿದ್ದ ಕುದುರೆಗಳನ್ನು, ವೇಗವಾಗಿ ಹೋಗುತ್ತಿದ್ದ ಬಾಣಗಳನ್ನೂ ಬಿಲ್ಲುಗಳನ್ನೂ ತಡೆಹಿಡಿದರು.

03234028a ಚಿತ್ರಸೇನಶ್ಚ ಭೀಮಶ್ಚ ಸವ್ಯಸಾಚೀ ಯಮಾವಪಿ|

03234028c ಪೃಷ್ಟ್ವಾ ಕೌಶಲಮನ್ಯೋನ್ಯಂ ರಥೇಷ್ವೇವಾವತಸ್ಥಿರೇ||

ಚಿತ್ರಸೇನ, ಭೀಮ, ಸವ್ಯಸಾಚೀ, ಮತ್ತು ಯಮಳರು ರಥದಲ್ಲಿ ಇದ್ದುಕೊಂಡೇ ಪರಸ್ಪ್ವರರ ಕುಶಲವನ್ನು ಕೇಳಿಕೊಂಡರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಗಂದರ್ವಪರಾಭವೇ ಚತುಸ್ತ್ರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಗಂದರ್ವಪರಾಭವದಲ್ಲಿ ಇನ್ನೂರಾಮೂವತ್ನಾಲ್ಕನೆಯ ಅಧ್ಯಾಯವು.

Related image

Comments are closed.