Harivamsha: Chapter 27

ಹರಿವಂಶ: ಹರಿವಂಶ ಪರ್ವ

ಸಪ್ತವಿಂಶೋಽಧ್ಯಾಯಃ

ಅಮಾವಸುವಂಶಕೀರ್ತನಮ್

19027001a ವೈಶಂಪಾಯನ ಉವಾಚ|

19027001a ಐಲಪುತ್ರಾ ಬಭೂವುಸ್ತೇ ಸರ್ವೇ ದೇವಸುತೋಪಮಾಃ |

19027001c ದಿವಿ ಜಾತಾ ಮಹಾತ್ಮಾನ ಆಯುರ್ಧೀಮಾನಮಾವಸುಃ ||

19027002a ವಿಶ್ವಾಯುಶ್ಚೈವ ಧರ್ಮಾತ್ಮಾ ಶ್ರುತಾಯುಶ್ಚ ತಥಾಪರಃ |

19027002c ಧೃಢಾಯುಶ್ಚ ವನಾಯುಶ್ಚ ಶತಾಯುಶ್ಚೋರ್ವಶೀಸುತಾಃ |

19027002e ಅಮಾವಸೋಶ್ಚ ದಾಯಾದೋ ಭೀಮೋ ರಾಜಾಥ ನಗ್ನಜಿತ್||

ವೈಶಂಪಾಯನನು ಹೇಳಿದನು: “ಐಲ ಪುರೂರವನ ಪುತ್ರರೆಲ್ಲರೂ ದೇವಸುತರಂತಿದ್ದರು. ಆ ಮಹಾತ್ಮರು ಸ್ವರ್ಗದಲ್ಲಿ ಹುಟ್ಟಿದ ಉರ್ವಶೀಸುತರಾಗಿದ್ದರು. ಅವರ ಹೆಸರುಗಳು ಇಂತಿವೆ: ಆಯು, ಧೀಮಾನ್ ಅಮಾವಸು, ವಿಶ್ವಾಯು, ಧರ್ಮಾತ್ಮಾ ಶ್ರುತಾಯು, ಅನಂತರ ಧೃಢಾಯು, ವನಾಯು, ಮತ್ತು ಶತಾಯು. ಅಮಾವಸುವಿಗೆ ರಾಜಾ ಭೀಮ ಮತ್ತು ನಗ್ನಜಿತ್ ಇವರು ಪುತ್ರರಾದರು.

19027003a ಶ್ರೀಮಾನ್ಭೀಮಸ್ಯ ದಾಯಾದೋ ರಾಜಾಸೀತ್ಕಾಂಚನಪ್ರಭಃ |

19027003c ವಿದ್ವಾಂಸ್ತು ಕಾಂಚನಸ್ಯಾಪಿ ಸುಹೋತ್ರೋಽಭೂನ್ಮಹಾಬಲಃ ||

ಭೀಮನ ಮಗನು ಶ್ರೀಮಾನ್ ರಾಜಾ ಕಾಂಚನಪ್ರಭನು. ಕಾಂಚನಪ್ರಭನ ಮಗನು ಮಹಾಬಲ ವಿದ್ವಾನ್ ಸುಹೋತ್ರ.

19027004a ಸೌಹೋತ್ರಿರಭವಜ್ಜಹ್ನುಃ ಕೇಶಿನ್ಯಾ ಗರ್ಭಸಂಭವಃ |

19027004c ಆಜಹ್ರೇ ಯೋ ಮಹತ್ಸತ್ರಂ ಸರ್ವಮೇಧಮಹಾಮಖಮ್ ||

ಸುಹೋತ್ರನಿಗೆ ಕೇಶಿನಿಯ ಗರ್ಭದಲ್ಲಿ ಜಹ್ನುವು ಹುಟ್ಟಿದನು. ಅವನು ಸರ್ವಮೇಧವೆನ್ನುವ ಮಹಾಮಖ ಮಹಾ ಸತ್ರವನ್ನು ನೆರವೇರಿಸಿದನು.

19027005a ಪತಿಲೋಭೇನ ಯಂ ಗಂಗಾ ಪತಿತ್ವೇಽಭಿಸಸಾರ ಹ |

19027005c ನೇಚ್ಛತಃ ಪ್ಲಾವಯಾಮಾಸ ತಸ್ಯ ಗಂಗಾ ಚ ತತ್ಸದಃ |

ಅವನನ್ನು ಪತಿಯನ್ನಾಗಿ ಪಡೆಯಲು ಬಯಸಿ ಗಂಗೆಯು ಪತಿತ್ವದಿಂದ ಅವನ ಬಳಿಸಾರಿದ್ದಳು. ಅವನು ಅವಳನ್ನು ಬಯಸದೇ ಇದ್ದಾಗ ಗಂಗೆಯು ಅವನ ಸಭೆಯನ್ನೇ ನೀರಿನಿಂದ ತುಂಬಿಸಿಬಿಟ್ಟಿದ್ದಳು.

19027005e ಸ ತಯಾ ಪ್ಲಾವಿತಂ ದೃಷ್ಟ್ವಾ ಯಜ್ಞವಾಟಂ ಸಮಂತತಃ ||

19027006a ಸೌಹಿತ್ರಿರಬ್ರವೀದ್ಗಂಗಾಂ ಕ್ರುದ್ಧೋ ಭರತಸತ್ತಮ ||

ಭರತಸತ್ತಮ! ಯಜ್ಞವಾಟಿಯನ್ನು ಎಲ್ಲಕಡೆಯಿಂದಲೂ ಮುಳುಗಿಸಿದುದನ್ನು ನೋಡಿ ಸೌಹಿತ್ರಿ ಜಹ್ನುವು ಕ್ರುದ್ಧನಾಗಿ ಗಂಗೆಗೆ ಹೇಳಿದನು:

19027007a ಏಷ ತೇ ವಿಫಲಂ ಯತ್ನಂ ಪಿಬನ್ನಂಭಃ ಕರೋಮ್ಯಹಮ್ |

19027007c ಅಸ್ಯ ಗಂಗೇಽವಲೇಪಸ್ಯ ಸದ್ಯಃ ಫಲಮವಾಪ್ನುಹಿ ||

“ಗಂಗೇ! ನಿನ್ನ ನೀರನ್ನು ಕುಡಿದು ನಾನು ನಿನ್ನ ಈ ಯತ್ನವನ್ನು ವಿಫಲಗೊಳಿಸುತ್ತೇನೆ. ಶೀಘ್ರದಲ್ಲಿಯೇ ನೀನು ನಿನ್ನ ಗರ್ವದ ಫಲವನ್ನು ಅನುಭವಿಸುತ್ತೀಯೆ!”

19027008a ರಾಜರ್ಷಿಣಾ ತತಃ ಪೀತಾಂ ಗಂಗಾಂ ದೃಷ್ಟ್ವಾ ಮಹರ್ಷಯಃ |

19027008c ಉಪನಿನ್ಯುರ್ಮಹಾಭಾಗಾಂ ದುಹಿತತ್ವೇನ ಜಾಹ್ನವೀಮ್ ||

ಆಗ ರಾಜರ್ಷಿಯು ಗಂಗೆಯನ್ನು ಕುಡಿದುದನ್ನು ನೋಡಿ ಮಹರ್ಷಿಗಳು ಮಹಾಭಾಗೆ ಗಂಗೆಯನ್ನು ಜಹ್ನುವಿನ ಮಗಳಾಗಿ ಜಾಹ್ಮವೀ ಎಂಬ ಹೆಸರಿನಿಂದ ಕರೆದರು.

19027009a ಯುವನಾಶ್ವಸ್ಯ ಪುತ್ರೀಂ ತು ಕಾವೇರೀಂ ಜಹ್ನುರಾವಹತ್ |

19027009c ಯುವನಾಶ್ವಸ್ಯ ಶಾಪೇನ ಗಂಗಾಽರ್ಧೇನ ವಿನಿರ್ಮಮೇ ||

19027010a ಕಾವೇರೀಂ ಸರಿತಾಂ ಶ್ರೇಷ್ಠಾಂ ಜಹ್ನೋರ್ಭಾರ್ಯಾಮನಿಂದಿತಾಮ್|

ಜಹ್ನುವು ಯುವನಾಶ್ವನ ಪುತ್ರಿ ಕಾವೇರಿಯನ್ನು ವಿವಾಹವಾಗಿದ್ದನು. ಯುವನಾಶ್ವನ ಶಾಪದಿಂದ ಗಂಗೆಯೇ ತನ್ನ ಅರ್ಧದಿಂದ ಕಾವೇರಿಯನ್ನು ಪ್ರಕಟಪಡಿಸಿದ್ದಳು. ಆ ನದಿಗಳಲ್ಲಿ ಶ್ರೇಷ್ಠೆ ಅನಿಂದಿತೆ ಕಾವೇರಿಯು ಜಹ್ನುವಿನ ಭಾರ್ಯೆಯಾಗಿದ್ದಳು.

19027010c ಜಹ್ನಸ್ತು ದಯಿತಂ ಪುತ್ರಂ ಸುನಹಂ ನಾಮ ಧಾರ್ಮಿಕಮ್ |

19027010e ಕಾವೇರ್ಯಾಂ ಜನಯಾಮಾಸ ಅಜಕಸ್ತಸ್ಯ ಚಾತ್ಮಜಃ ||

ಜಹ್ನುವು ಕಾವೇರಿಯಲ್ಲಿ ಸುನಹ ಎಂಬ ಹೆಸರಿನ ಧಾರ್ಮಿಕ ಪುತ್ರನನ್ನು ಹುಟ್ಟಿಸಿದನು. ಸುನಹನ ಪುತ್ರನು ಅಜಕ.

19027011a ಅಜಕಸ್ಯ ತು ದಾಯಾದೋ ಬಲಾಕಾಶ್ವೋ ಮಹೀಪತಿಃ |

19027011c ಬಭೂವ ಮೃಗಯಾಶೀಲಃ ಕುಶಸ್ತಸ್ಯಾತ್ಮಜೋಽಭವತ್ ||

ಅಜಕನ ಮಗನು ಮಹೀಪತಿ ಬಲಾಕಾಶ್ವನು. ಅವನು ಬೇಟೆಯಲ್ಲಿ ಆಸಕ್ತನಾಗಿದ್ದನು. ಕುಶನು ಅವನ ಮಗನಾದನು.

19027012a ಕುಶಪುತ್ರಾ ಬಭೂವುರ್ಹಿ ಚತ್ವಾರೋ ದೇವವರ್ಚಸಃ |

19027012c ಕುಶಿಕಃ ಕುಶನಾಭಶ್ಚ ಕುಶಾಂಬೋ ಮೂರ್ತಿಮಾಂಸ್ತಥಾ ||

ಕುಶನಿಗೆ ದೇವವರ್ಚಸರಾದ ನಾಲ್ವರು ಪುತ್ರರಾದರು: ಕುಶಿಕ, ಕುಶನಾಭ, ಕುಶಾಂಬ, ಮತ್ತು ಮೂರ್ತಿಮಾನ್.

19027013a ಪಹ್ಲವೈಃ ಸಹ ಸಂವೃದ್ಧಿಂ ರಾಜಾ ವನಚರೈಸ್ತದಾ |

19027013c ಕುಶಿಕಸ್ತು ತಪಸ್ತೇಪೇ ಪುತ್ರಮಿಂದ್ರಸಮಪ್ರಭಮ್ |

19027013e ಲಭೇಯಮಿತಿ ತಂ ಶಕ್ರಸ್ತ್ರಾಸಾದಭ್ಯೇತ್ಯ ಜಜ್ಞಿವಾನ್ ||

ರಾಜಾ ಕುಶಿಕನು ವನಚರರಾದ ಪಹ್ಲವರೊಂದಿಗೆ ಬೆಳೆದನು. ಅವನು ಇಂದ್ರನ ಸಮಪ್ರಭನಾದ ಮಗನನ್ನು ಪಡೆಯಲು ತಪಸ್ಸನ್ನು ತಪಿಸಿದನು. ಇಂದ್ರನು ಅವನ ಭಯದಿಂದ ಇಲ್ಲಿ ಅವನ ಪುತ್ರನಾಗಿ ಹುಟ್ಟಿಕೊಂಡನು.

19027014a ಪೂರ್ಣೇ ವರ್ಷಸಹಸ್ರೇ ವೈ ತಂ ತು ಶಕ್ರೋ ಹ್ಯಪಶ್ಯತ|  

19027014c ಅತ್ಯುಗ್ರತಪಸಂ ದೃಷ್ಟ್ವಾ ಸಹಸ್ರಾಕ್ಷಃ ಪುರಂದರಃ ||

19027015a ಸಮರ್ಥಃ ಪುತ್ರಜನನೇ ಸ್ವಮೇವಾಂಶಮವಾಸಯತ್ |

19027015c ಪುತ್ರತ್ವೇ ಕಲ್ಪಯಾಮಾಸ ಸ ದೇವೇಂದ್ರಃ ಸುರೋತ್ತಮಃ ||

ಒಂದು ಸಹಸ್ರವರ್ಷಗಳು ಪೂರ್ಣವಾಗಲು ಕುಶಿಕನ ಉಗ್ರ ತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು ಸಮರ್ಥ ಪುತ್ರನಾಗಲೆಂದು ಅವನಲ್ಲಿ ತನ್ನ ಅಂಶವನ್ನು ಸ್ಥಾಪಿಸಿದನು. ಹೀಗೆ ಸುರೋತ್ತಮ ದೇವೇಂದ್ರನು ಅವನ ಪುತ್ರತ್ವವನ್ನು ಕಲ್ಪಿಸಿಕೊಂಡನು.

19027016a ಸ ಗಾಧಿರಭವದ್ರಾಜಾ ಮಘವಾನ್ಕೌಶಿಕಃ ಸ್ವಯಮ್ |

19027016c ಪೌರುಕುತ್ಸ್ಯಭವದ್ಭಾರ್ಯಾ ಗಾಧಿಸ್ತಸ್ಯಾಮಜಾಯತ ||

ಹೀಗೆ ಮಘವಾನ್ ಇಂದ್ರನು ಸ್ವಯಂ ಕುಶಿಕನ ಮಗ ಗಾಧಿರಾಜನಾಗಿ ಹುಟ್ಟಿದನು. ಕುಶಿಕನ ಪತ್ನಿ ಪುರುಕುತ್ಸನ ಮಗಳಲ್ಲಿ ಗಾಧಿಯು ಹುಟ್ಟಿದನು.

19027017a ಗಾಧೇಃ ಕನ್ಯಾ ಮಹಾಭಾಗಾ ನಾಮ್ನಾ ಸತ್ಯವತೀ ಶುಭಾ |

19027017c ತಾಂ ಗಾಧಿರ್ಭೃಗುಪುತ್ರಾಯ ಋಚೀಕಾಯ ದದೌ ಪ್ರಭುಃ ||

ಗಾಧಿಗೆ ಸತ್ಯವತೀ ಎಂಬ ಹೆಸರಿನ ಮಹಾಭಾಗೆ ಶುಭ ಕನ್ಯೆಯಿದ್ದಳು. ಅವಳನ್ನು ಪ್ರಭು ಗಾಧಿಯು ಭೃಗುಪುತ್ರ ಋಚೀಕನಿಗೆ ಕೊಟ್ಟನು.

19027018a ತಸ್ಯಾಃ ಪ್ರೀತೋಽಭವದ್ಭರ್ತಾ ಭಾರ್ಗವೋ ಭೃಗುನಂದನಃ|

19027018c ಪುತ್ರಾರ್ಥಂ ಕಾರಯಾಮಾಸ ಚರುಂ ಗಾಧೇಸ್ತಥೈವ ಚ ||

ಅವಳ ಮೇಲೆ ಪ್ರೀತನಾದ ಅವಳ ಪತಿ ಭೃಗುನಂದನ ಭಾರ್ಗವನು ಅವಳಿಗೆ ಮತ್ತು ಗಾಧಿಗೆ ಪುತ್ರರಾಗಲೆಂದು ಚರುವನ್ನು ಸಿದ್ಧಪಡಿಸಿದನು.

19027019a ಉವಾಚಾಹೂಯ ತಾಂ ಭರ್ತಾ ಋಚೀಕೋ ಭಾರ್ಗವಸ್ತದಾ|

19027019c ಉಪಯೋಜ್ಯಶ್ಚರುರಯಂ ತ್ವಯಾ ಮಾತ್ರಾ ತ್ವಯಂ ತವ ||

ಪತಿ ಭಾರ್ಗವ ಋಚೀಕನು ಅವಳನ್ನು ಕರೆದು ಹೇಳಿದನು: “ಈ ಚರುವನ್ನು ನೀನು ಉಪಯೋಗಿಸು ಮತ್ತು ನಿನ್ನ ತಾಯಿಗೂ ಉಪಯೋಗಿಸಲು ಹೇಳು.

19027020a ತಸ್ಯಾಂ ಜನಿಷ್ಯತೇ ಪುತ್ರೋ ದೀಪ್ತಿಮಾನ್ಕ್ಷತ್ರಿಯರ್ಷಭಃ |

19027020c ಅಜೇಯಃ ಕ್ಷತ್ರಿಯೈರ್ಲೋಕೇ ಕ್ಷತ್ರಿಯರ್ಷಭಸೂದನಃ ||

ಅವಳಲ್ಲಿ ದೀಪ್ತಿಮಾನ್ ಕ್ಷತ್ರಿಯರ್ಷಭ ಪುತ್ರನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಲೋಕದ ಕ್ಷತ್ರಿಯರಿಗೆ ಅಜೇಯನಾಗುತ್ತಾನೆ.

19027021a ತವಾಪಿ ಪುತ್ರಂ ಕಲ್ಯಾಣಿ ಧೃತಿಮಂತಂ ತಪೋನಿಧಿಮ್ |

19027021c ಶಮಾತ್ಮಕಂ ದ್ವಿಜಶ್ರೇಷ್ಠಂ ಚರುರೇಷ ವಿಧಾಸ್ಯತಿ ||

ಕಲ್ಯಾಣೀ! ನೀನಾದರೋ ದೃತಿಮಂತ ತಪೋನಿಧಿಯನ್ನು ಪುತ್ರನನ್ನಾಗಿ ಪಡೆಯುತ್ತೀಯೆ. ಈ ಚರುವು ನಿನಗೆ ಶಮಾತ್ಮಕ ದ್ವಿಜಶ್ರೇಷ್ಠನನ್ನು ನೀಡುತ್ತದೆ.”

19027022a ಏವಮುಕ್ತ್ವಾ ತು ತಾಂ ಭಾರ್ಯಾಮೃಚೀಕೋ ಭೃಗುನಂದನಃ|

19027022c ತಪಸ್ಯಾಭಿರತೋ ನಿತ್ಯಮರಣ್ಯಂ ಪ್ರವಿವೇಶ ಹ ||

ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಋಚೀಕನು ನಿತ್ಯವೂ ತಪಸ್ಸಿನಲ್ಲಿಯೇ ತೊಡಗಿಸಿಕೊಳ್ಳಲು ಅರಣ್ಯವನ್ನು ಪ್ರವೇಶಿಸಿದನು.

19027023a ಗಾಧಿಃ ಸದಾರಸ್ತು ತದಾ ಋಚೀಕಾವಾಸಮಭ್ಯಗಾತ್ |

19027023c ತೀರ್ಥಯಾತ್ರಾಪ್ರಸಂಗೇನ ಸುತಾಂ ದ್ರಷ್ಟುಂ ಜನೇಶ್ವರಃ ||

ಅದೇ ಸಮಯದಲ್ಲಿ ಜನೇಶ್ವರ ಗಾಧಿಯಾದರೋ ತನ್ನ ಪತ್ನಿಯೊಡನೆ ಮಗಳನ್ನು ನೋಡಲು ತೀರ್ಥಯಾತ್ರಾಪ್ರಸಂಗದಿಂದ ಋಚೀಕನ ಆಶ್ರಮಕ್ಕೆ ಆಗಮಿಸಿದನು.

19027024a ಚರುದ್ವಯಂ ಗೃಹೀತ್ವಾ ತದೃಷೇಃ ಸತ್ಯವತೀ ತದಾ |

19027024c ಚರುಮಾದಾಯ ಯತ್ನೇನ ಸಾ ತು ಮಾತ್ರೇ ನ್ಯವೇದಯತ್ ||

ಆಗ ಸತ್ಯವತಿಯು ಋಷಿಯು ಕೊಟ್ಟಿದ್ದ ಆ ಎರಡು ಚರುಗಳ ಪಾತ್ರೆಯನ್ನು ತಂದು ತಾಯಿಯ ಮುಂದೆ ಇರಿಸಿದಳು.

19027025a ಮಾತಾ ವ್ಯತ್ಯಸ್ಯ ದೈವೇನ ದುಹಿತ್ರೇ ಸ್ವಂ ಚರುಂ ದದೌ |

19027025c ತಸ್ಯಾಶ್ಚರುಮಥಾಜ್ಞಾನಾದಾತ್ಮಸಂಸ್ಥಂ ಚಕಾರ ಹ ||

ಮಾತೆಯು ದೈವವಶಾತ್ ತನ್ನ ಚರುವನ್ನು ಮಗಳಿಗೆ ಕೊಟ್ಟಳು ಮತ್ತು ಅವಳ ಚರುವನ್ನು ಅಜ್ಞಾನದಿಂದ ತಾನು ತಿಂದಳು.

19027026a ಅಥ ಸತ್ಯವತೀ ಗರ್ಭಂ ಕ್ಷತ್ರಿಯಾಂತಕರಂ ತದಾ

19027026c ಧಾರಯಾಮಾಸ ದೀಪ್ತೇನ ವಪುಷಾ ಘೋರದರ್ಶನಮ್ ||

ಆಗ ಸತ್ಯವತಿಯು ಕ್ಷತ್ರಿಯಾಂತಕ ಗರ್ಭವನ್ನು ಧರಿಸಿ, ಬೆಳಗುತ್ತಿದ್ದ ಮುಖವುಳ್ಳವಳಾಗಿ ಘೋರಳಾಗಿ ಕಾಣುತ್ತಿದ್ದಳು.

19027027a ತಾಮೃಚೀಕಸ್ತತೋ ದೃಷ್ಟ್ವಾ ಯೋಗೇನಾಭ್ಯನುಸೃತ್ಯ ಚ |

19027027c ತಾಮಬ್ರವೀದ್ದ್ವಿಜಶ್ರೇಷ್ಠಃ ಸ್ವಾಂ ಭಾರ್ಯಾಂ ವರವರ್ಣಿನೀಮ್ ||

ಅವಳನ್ನು ನೋಡಿ ಯೋಗದಿಂದಲೇ ಋಚೀಕನು ಎಲ್ಲವನ್ನೂ ತಿಳಿದುಕೊಂಡನು. ಆ ದ್ವಿಜಶ್ರೇಷ್ಠನು ತನ್ನ ವರವರ್ಣಿನೀ ಭಾರ್ಯೆಗೆ ಹೇಳಿದನು:

19027028a ಮಾತ್ರಾಸಿ ವಂಚಿತಾ ಭದ್ರೇ ಚರುವ್ಯತ್ಯಾಸಹೇತುನಾ |

19027028c ಜನಿಷ್ಯತಿ ಹಿ ಪುತ್ರಸ್ತೇ ಕ್ರೂರಕರ್ಮಾತಿದಾರುಣಃ ||

“ಭದ್ರೇ! ತಾಯಿಯಿಂದ ನೀನು ವಂಚಿತಳಾದೆ. ಚರುವಿನಲ್ಲಿ  ಅದಲುಬದಲು ಮಾಡಿದುದರಿಂದ ನೀನು ಅತಿದಾರುಣ ಕ್ರೂರಕರ್ಮಿ ಪುತ್ರನನ್ನು ಹುಟ್ಟಿಸುತ್ತೀಯೆ.

19027029a ಭ್ರಾತಾ ಜನಿಷ್ಯತೇ ಚಾಪಿ ಬ್ರಹ್ಮಭೂತಸ್ತಪೋಧನಃ |

19027029c ವಿಶ್ವಂ ಹಿ ಬ್ರಹ್ಮತಪಸಾ ಮಯಾ ತಸ್ಮಿನ್ಸಮರ್ಪಿತಮ್ ||

ನಿನಗೆ ಹುಟ್ಟುವ ತಮ್ಮನು ಬ್ರಹ್ಮಭೂತ ತಪೋಧನನಾಗುತ್ತಾನೆ. ಏಕೆಂದರೆ ನಾನು ಅದರಲ್ಲಿ ಬ್ರಹ್ಮತಪಸ್ಸಿನಿಂದ ವಿಶ್ವವನ್ನೇ ಅರ್ಪಿಸಿದ್ದೆ.”

19027030a ಏವಮುಕ್ತಾ ಮಹಾಭಾಗಾ ಭರ್ತ್ರಾ ಸತ್ಯವತೀ ತದಾ |

19027030c ಪ್ರಸಾದಯಾಮಾಸ ಪತಿಂ ಪುತ್ರೋ ಮೇ ನೇದೃಶೋ ಭವೇತ್|

19027030e ಬ್ರಾಹ್ಮಣಾಪಸದಸ್ತತ್ರ ಇತ್ಯುಕ್ತೋ ಮುನಿರಬ್ರವೀತ್ ||

ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು “ನನ್ನ ಪುತ್ರನು ಹಾಗೆ ಬ್ರಾಹ್ಮಣಾಧಮನು ಆಗದಿರಲಿ!” ಎಂದು ಅವನನ್ನು ಬೇಡಿಕೊಂಡಳು. ಆಗ ಮುನಿಯು ಹೇಳಿದನು:

19027031a ನೈಷ ಸಂಕಲ್ಪಿತಃ ಕಾಮೋ ಮಯಾ ಭದ್ರೇ ತಥಾಸ್ತ್ವಿತಿ |

19027031c ಉಗ್ರಕರ್ಮಾ ಭವೇತ್ಪುತ್ರಃ ಪಿತುರ್ಮಾತುಶ್ಚ ಕಾರಣಾತ್ |

19027031e ಪುನಃ ಸತ್ಯವತೀ ವಾಕ್ಯಮೇವಮುಕ್ತಾಬ್ರವೀದಿದಂ ||

ಮಾತಾಪಿತೃಗಳ ಕಾರಣದಿಂದಲೇ ಪುತ್ರನು ಉಗ್ರಕರ್ಮಿಯಾಗುತ್ತಾನೆ. ಭದ್ರೇ! ನಾನಾದರೋ ಅದನ್ನು ಬಯಸಿ ಸಂಕಲ್ಪಿಸಿರಲಿಲ್ಲ. ಆದರೆ ಅದು ಹಾಗೆಯೇ ಆಗುತ್ತದೆ.” ಇದನ್ನು ಕೇಳಿದ ಸತ್ಯವತಿಯು ಪುನಃ ಅವನಿಗೆ ಹೇಳಿದಳು:

19027032a ಇಚ್ಛಽನ್ಲೋಕಾನಪಿ ಮುನೇ ಸೃಜೇಥಾಃ ಕಿಂ ಪುನಃ ಸುತಮ್|

19027032c ಶಮಾತ್ಮಕಮೃಜುಂ ತ್ವಂ ಮೇ ಪುತ್ರಂ ದಾತುಮಿಹಾರ್ಹಸಿ ||

“ಮುನೇ! ಇಚ್ಛಿಸಿದರೆ ನೀನು ಲೋಕಗಳನ್ನೂ ಸೃಷ್ಟಿಸಬಲ್ಲೆ. ಇನ್ನು ಮಗನ ಕುರಿತೇನು? ನೀನು ನನಗೆ ಶಮಾತ್ಮಕ ಸರಳ ಪುತ್ರನನ್ನೇ ನೀಡಬೇಕು.

19027033a ಕಾಮಮೇವಂವಿಧಃ ಪೌತ್ರೋ ಮಮ ಸ್ಯಾತ್ತವ ಚ ಪ್ರಭೋ |

19027033c ಯದ್ಯನ್ಯಥಾ ನ ಶಕ್ಯಂ ವೈ ಕರ್ತುಮೇತದ್ದ್ವಿಜೋತ್ತಮ ||

ಪ್ರಭೋ! ದ್ವಿಜೋತ್ತಮ! ಒಂದುವೇಳೆ ಇದನ್ನು ಅನ್ಯಥಾ ಮಾಡಲು ಶಕ್ಯವಿಲ್ಲವೆಂದಾದರೆ ಈ ತರಹದವನು ನಮ್ಮ ಮೊಮ್ಮಗನಾಗಲಿ!”

19027034a ತತಃ ಪ್ರಸಾದಮಕರೋತ್ಸ ತಸ್ಯಾಸ್ತಪಸೋ ಬಲಾತ್ |

19027034c ಭದ್ರೇ ನಾಸ್ತಿ ವಿಶೇಷೋ ಮೇ ಪೌತ್ರೇ ಚ ವರವರ್ಣಿನಿ|

19027034e ತ್ವಯಾ ಯಥೋಕ್ತಂ ವಚನಂ ತಥಾ ಭದ್ರಂ ಭವಿಷ್ಯತಿ ||

ಆಗ ಅವನು ತನ್ನ ತಪೋಬಲದಿಂದ ಅವಳ ಮೇಲೆ ಕೃಪೆದೋರಿ ಹೇಳಿದನು: “ಭದ್ರೇ! ವರವರ್ಣಿನಿ! ನನಗೆ ಪುತ್ರ ಮತ್ತು ಪೌತ್ರರಲ್ಲಿ ವಿಶೇಷ ವ್ಯತ್ಯಾಸವೇನೂ ಕಾಣುವುದಿಲ್ಲ. ಆದರೂ ನೀನು ಏನು ಹೇಳಿದೆಯೋ ಹಾಗೆಯೇ ಆಗುತ್ತದೆ.”

19027035a ತತಃ ಸತ್ಯವತೀ ಪುತ್ರಂ ಜನಯಾಮಾಸ ಭಾರ್ಗವಮ್ |

19027035c ತಪಸ್ಯಾಭಿರತಂ ದಾಂತಂ ಜಮದಗ್ನಿಂ ಶಮಾತ್ಮಕಮ್ ||

ಅನಂತರ ಸತ್ಯವತಿಯು ಜಿತೇಂದ್ರಿಯನೂ, ಮನೋನಿಗ್ರಹನೂ, ತಪಸ್ಸಿನಲ್ಲಿಯೇ ನಿರತನಾಗಿರುವವನೂ ಆದ ಭಾರ್ಗವ ಜಮದಗ್ನಿಗೆ ಜನ್ಮವಿತ್ತಳು.

19027036a ಭೃಗೋಶ್ಚರುವಿಪರ್ಯಾಸೇ ರೌದ್ರವೈಷ್ಣವಯೋಃ ಪುರಾ |

19027036c ಯಜನಾದ್ವೈಷ್ಣವೇಽಥಾಂಶೇ ಜಮದಗ್ನಿರಜಾಯತ ||

ಹಿಂದೆ ಭೃಗುಗಳ ಚರುವಿನಲ್ಲಿ ರುದ್ರ ಮತ್ತು ವಿಷ್ಣುಗಳ ಅಂಶವು ವ್ಯತ್ಯಾಸವಾಗಿದುದರಿಂದ ಆ ವೈಷ್ಣವ ಅಂಶದಿಂದ ಜಮದಗ್ನಿಯು ಹುಟ್ಟಿದನು.

19027037a ಸಾ ಹಿ ಸತ್ಯವತೀ ಪುಣ್ಯಾ ಸತ್ಯಧರ್ಮಪರಾಯಣಾ |

19027037c ಕೌಶಿಕೀತಿ ಸಮಾಖ್ಯಾತಾ ಪ್ರವೃತ್ತೇಯಂ ಮಹಾನದೀ ||

ಸತ್ಯಧರ್ಮಪರಾಯಣೆ ಪುಣ್ಯೆ ಸತ್ಯವತಿಯು ಕೌಶಿಕೀ ಎಂಬ ಹೆಸರಿನಿಂದ ಪ್ರಖ್ಯಾತ ಮಹಾನದಿಯಾದಳು.

19027038a ಇಕ್ಷ್ವಾಕುವಂಶಪ್ರಭವೋ ರೇಣುರ್ನಾಮ ನರಾಧಿಪಃ |

19027038c ತಸ್ಯ ಕನ್ಯಾ ಮಹಾಭಾಗಾ ಕಾಮಲೀ ನಾಮ ರೇಣುಕಾ ||

ಇಕ್ಷ್ವಾಕು ವಂಶದಲ್ಲಿ ರೇಣು ಎಂಬ ನರಾಧಿಪನು ಇದ್ದನು. ಅವನ ಕನ್ಯೆ ಮಹಾಭಾಗೆ ರೇಣುಕಾ ಅಥವಾ ಕಾಮಲೀ ಎಂಬ ಹೆಸರಿನವಳು.

19027039a ರೇಣುಕಾಯಾಂ ತು ಕಾಮಲ್ಯಾಂ ತಪೋವಿದ್ಯಾಸಮನ್ವಿತಃ |

19027039c ಆರ್ಚಿಕೋ ಜನಯಾಮಾಸ ಜಾಮದಗ್ನ್ಯಂ ಸುದಾರುಣಮ್ ||

19027040a ಸರ್ವವಿದ್ಯಾನುಗಂ ಶ್ರೇಷ್ಠಂ ಧನುರ್ವೇದಸ್ಯ ಪಾರಗಮ್ |

19027040c ರಾಮಂ ಕ್ಷತ್ರಿಯಹಂತಾರಂ ಪ್ರದೀಪ್ತಮಿವ ಪಾವಕಮ್ ||

ಋಚೀಕನ ಮಗ ತಪೋವಿದ್ಯಾಸಮನ್ವಿತ ಜಮದಗ್ನಿಯು ರೇಣುಕಾ ಅಥವಾ ಕಾಮಲಿಯಲ್ಲಿ ಸುದಾರುಣ, ಸರ್ವವಿದ್ಯಾನುಗ ಶ್ರೇಷ್ಠ ಧನುರ್ವೇದ ಪಾರಗ ಕ್ಷತ್ರಿಯ ಹಂತಾರ ಮತ್ತು ಪಾವಕನಂತೆ ಪ್ರದೀಪ್ತತೇಜಸ್ವೀ ಜಾಮದಗ್ನಿ ರಾಮನನ್ನು ಹುಟ್ಟಿಸಿದನು.

19027041a ಔರ್ವಸ್ಯೈವಮೃಚೀಕಸ್ಯ ಸತ್ಯವತ್ಯಾಂ ಮಹಾಯಶಾಃ |

19027041c ಜಮದಗ್ನಿಸ್ತಪೋವೀರ್ಯಾಜ್ಜಜ್ಞೇ ಬ್ರಹ್ಮವಿದಾಂ ವರಃ ||

19027042a ಮಧ್ಯಮಶ್ಚ ಶುನಃಶೇಪಃ ಶುನಃಪುಚ್ಛಃ ಕನಿಷ್ಠಕಃ |

ಹೀಗೆ ಔರ್ವನೆಂದೂ ಪ್ರಸಿದ್ಧನಾಗಿದ್ದ ಮಹಾಯಶಸ್ವೀ ಋಚೀಕನಿಗೆ ಅವನ ತಪೋವೀರ್ಯದಿಂದ ಸತ್ಯವತಿಯಲ್ಲಿ ಬ್ರಹ್ಮವಿದರಲ್ಲಿ ಶ್ರೇಷ್ಠ ಜಮದಗ್ನಿಯು ಜನಿಸಿದನು. ಋಚೀಕನ ಮಧ್ಯಮ ಮಗನು ಶುನಃಶೇಪ ಮತ್ತು ಕಿರಿಯವನು ಶುನಃಪುಚ್ಛ.

19027042c ವಿಶ್ವಾಮಿತ್ರಂ ತು ದಾಯಾದಂ ಗಾಧಿಃ ಕುಶಿಕನಂದನಃ ||

19027043a ಜನಯಾಮಾಸ ಪುತ್ರಂ ತು ತಪೋವಿದ್ಯಾಶಮಾತ್ಮಕಮ್ |

19027043c ಪ್ರಾಪ್ಯ ಬ್ರಹ್ಮರ್ಷಿಸಮತಾಂ ಯೋಽಯಂ ಸಪ್ತರ್ಷಿತಾಂ ಗತಃ||

ಕುಶಿಕನಂದನ ಗಾಧಿಯು ತಪೋವಿದ್ಯಾಶಮಾತ್ಮಕ ವಿಶ್ವಾಮಿತ್ರನನ್ನು ಪುತ್ರನನ್ನಾಗಿ ಪಡೆದನು. ಅವನು ಬ್ರಹ್ಮರ್ಷಿಸಮತ್ವವನ್ನು ಪಡೆದು ಸಪ್ತರ್ಷಿಗಳಲ್ಲಿ ಒಬ್ಬನಾದನು.

19027044a ವಿಶ್ವಾಮಿತ್ರಸ್ತು ಧರ್ಮಾತ್ಮಾ ನಾಮ್ನಾ ವಿಶ್ವರಥಃ ಸ್ಮೃತಃ |

19027044c ಜಜ್ಞೇ ಭೃಗುಪ್ರಸಾದೇನ ಕೌಶಿಕಾದ್ವಂಶವರ್ಧನಃ ||

ಧರ್ಮಾತ್ಮಾ ವಿಶ್ವಾಮಿತ್ರನು ವಿಶ್ವರಥ ಎಂಬ ಹೆಸರಿನಿಂದಲೂ ಪ್ರಖ್ಯಾತನಾಗಿದ್ದಾನೆ. ಆ ಕೌಶಿಕರ ವಂಶವರ್ಧನನು ಭಾರ್ಗವ ಋಚೀಕನ ಪ್ರಸಾದದಿಂದ ಜನಿಸಿದನು.

19027045a ವಿಶ್ವಾಮಿತ್ರಸ್ಯ ಚ ಸುತಾ ದೇವರಾತಾದಯಃ ಸ್ಮೃತಾಃ |

19027045c ಪ್ರಖ್ಯಾತಾಸ್ತ್ರಿಷು ಲೋಕೇಷು ತೇಷಾಂ ನಾಮಾನಿ ಮೇ ಶೃಣು||

ವಿಶ್ವಾಮಿತ್ರನಿಗೆ ದೇವರಾತನೇ ಮೊದಲಾದ ಅನೇಕ ಪುತ್ರರಿದ್ದರೆಂದು ಹೇಳುತ್ತಾರೆ. ಮೂರು ಲೋಕಗಳಲ್ಲಿಯೂ ಪ್ರಖ್ಯಾತರಾಗಿದ್ದ ಅವರ ಹೆಸರುಗಳನ್ನು ಕೇಳು.

19027046a ದೇವಶ್ರವಾಃ ಕತಿಶ್ಚೈವ ಯಸ್ಮಾತ್ಕಾತ್ಯಾಯನಾಃ ಸ್ಮೃತಾಃ |

19027046c ಶಾಲಾವತ್ಯಾಂ ಹಿರಣ್ಯಾಕ್ಷೋ ರೇಣೋರ್ಜಜ್ಞೇಽಥ ರೇಣುಮಾನ್ ||

19027047a ಸಾಂಕೃತಿರ್ಗಾಲವಶ್ಚೈವ ಮುದ್ಗಲಶ್ಚೇತಿ ವಿಶ್ರುತಾಃ |

19027047c ಮಧುಚ್ಛಂದೋ ಜಯಶ್ಚೈವ ದೇವಲಶ್ಚ ತಥಾಷ್ಟಕಃ ||

19027048a ಕಚ್ಛಪೋ ಹಾರಿತಶ್ಚೈವ ವಿಶ್ವಾಮಿತ್ರಸ್ಯ ವೈ ಸುತಾಃ |

19027048c ತೇಷಾಂ ಖ್ಯಾತಾನಿ ಗೋತ್ರಾಣಿ ಕೌಶಿಕಾನಾಂ ಮಹಾತ್ಮನಾಮ್ ||

ದೇವಶ್ರವಾ, ಕಾತ್ಯಾಯನ ಗೋತ್ರಪ್ರವರ್ತಕ ಕತಿ, ಮತ್ತು ಹಿರಣ್ಯಾಕ್ಷ – ಈ ಮೂವರೂ ಶಾಲಾವತಿಯ ಗರ್ಭದಲ್ಲಿ ಜನಿಸಿದರು. ರೇಣುವಿನಲ್ಲಿ ರೇಣುಮಾನ್, ಸಾಂಕೃತಿ, ಗಾಲವ, ಮುದ್ಗಲ, ಮದುಚ್ಛಂದ, ಜಯ, ಮತ್ತು ದೇವಲರು ಜನಿಸಿದರು. ಅಷ್ಟಕ[1], ಕಚ್ಛಪ ಮತ್ತು ಹಾರಿತ ಇವರೂ ಕೂಡ ವಿಶ್ವಾಮಿತ್ರನ ಪುತ್ರರು. ಈ ಕೌಶಿಕವಂಶೀ ಮಹಾತ್ಮರ ಗೋತ್ರಗಳು ಇಂತಿವೆ:

19027049a ಪಾಣಿನೋ ಬಭ್ರವಶ್ಚೈವ ಧ್ಯಾನಜಪ್ಯಾಸ್ತಥೈವ ಚ |

19027049c ಪಾರ್ಥಿವಾ ದೇವರಾತಾಶ್ಚ ಶಾಲಂಕಾಯನಬಾಷ್ಕಲಾಃ ||

19027050a ಲೋಹಿತಾ ಯಮದೂತಾಶ್ಚ ತಥಾ ಕಾರೀಷವಃ ಸ್ಮೃತಾಃ |

19027050c ಸೌಶ್ರುತಾಃ ಕೌಶಿಕಾ ರಾಜಂಸ್ತಥಾನ್ಯೇ ಸೈಂಧವಾಯನಾಃ ||

19027051a ದೇವಲಾ ರೇಣವಶ್ಚೈವ ಯಾಜ್ಞ್ಯವಲ್ಕ್ಯಾಘಮರ್ಷಣಾಃ |

19027051c ಔದುಂಬರಾ ಹ್ಯಭಿಷ್ಣಾತಾಸ್ತಾರಕಾಯನಚುಂಚುಲಾಃ ||

19027052a ಶಾಲಾವತ್ಯಾ ಹಿರಣ್ಯಾಕ್ಷಾಃ ಸಾಂಕೃತ್ಯಾ ಗಾಲವಾಸ್ತಥಾ |

19027052c ಬಾದರಾಯಣಿನಶ್ಚಾನ್ಯೇ ವಿಶ್ವಾಮಿತ್ರಸ್ಯ ಧೀಮತಃ ||

ರಾಜನ್! ಪಾಣಿನ, ಬಭ್ರು, ಧ್ಯಾನಜಪ್ಯ, ಪಾರ್ಥಿವ, ದೇವರಾತ, ಶಾಲಂಕಾಯನ, ಬಾಷ್ಕಲ, ಲೋಹಿತಾ, ಯಮದೂತ, ಕಾರೀಷು, ಸೌಶ್ರುತ, ಕೌಶಿಕ, ಸೈಂಧವಾಯನ, ದೇವಲ, ರೇಣು, ಯಾಜ್ಞವಲ್ಕ್ಯ, ಅಘಮರ್ಷಣ, ಔದುಂಬರ, ಅವಿಷ್ಣಾತಾ, ತಾರಕಾಯನ, ಚುಂಚುಲ, ಶಾಲಾವತ್ಯ, ಹಿರಣ್ಯಾಕ್ಷಾ, ಸಾಂಕೃತ್ಯ, ಗಾಲವ ಮತ್ತು ಬಾದರಾಯಣಿ – ಇವರು ಮತ್ತು ಅನ್ಯರು ವಿಶ್ವಾಮಿತ್ರನ ಧೀಮಂತ ಪುತ್ರರು.

19027053a ಋಷ್ಯಂತರವಿವಾಹ್ಯಾಶ್ಚ ಕೌಶಿಕಾ ಬಹವಃ ಸ್ಮೃತಾಃ |

19027053c ಪೌರವಸ್ಯ ಮಹಾರಾಜ ಬ್ರಹ್ಮರ್ಷಿಃ ಕೌಶಿಕಸ್ಯ ಚ |

19027053e ಸಂಬಂಧೋಽಪ್ಯಸ್ಯ ವಂಶೇಽಸ್ಮಿನ್ಬ್ರಹ್ಮಕ್ಷತ್ರಸ್ಯ ವಿಶ್ರುತಃ ||

ಇತರ ಋಷಿಕುಲಗಳೊಂದಿಗೆ ವಿವಾಹಯೋಗ್ಯರಾದ ಕೌಶಿಕರು ಬಹಳ ಎಂದು ಹೇಳುತ್ತಾರೆ. ಮಹಾರಾಜ! ಹೀಗೆ ಪುರೂರವನ ಮತ್ತು ಬ್ರಹ್ಮರ್ಷಿ ಕೌಶಿಕನ ವಂಶದಲ್ಲಿ ಬ್ರಹ್ಮ-ಕ್ಷತ್ರರ ವಿಶ್ರುತ ಸಂಬಂಧವಿತ್ತು.

19027054a ವಿಶ್ವಾಮಿತ್ರಾತ್ಮಜಾನಾಂ ತು ಶುನಃಶೇಪೋಽಗ್ರಜಃ ಸ್ಮೃತಃ |

19027054c ಭಾರ್ಗವಃ ಕೌಶಿಕತ್ವಂ ಹಿ ಪ್ರಾಪ್ತಃ ಸ ಮುನಿಸತ್ತಮಃ ||

ವಿಶ್ವಾಮಿತ್ರನ ಮಕ್ಕಳಲ್ಲಿ ಶುನಃಶೇಪನು ಅಗ್ರಜನೆಂದು ಹೇಳುತ್ತಾರೆ. ಆ ಮುನಿಸತ್ತಮ ಶುನಃಶೇಪನು ಭಾರ್ಗವನಾಗಿದ್ದರೂ ಕೌಶಿಕತ್ವವನ್ನು ಪಡೆದುಕೊಂಡನು[2].

19027055a ವಿಶ್ವಾಮಿತ್ರಸ್ಯ ಪುತ್ರಸ್ತು ಶುನಃಶೇಪೋಽಭವತ್ಕಿಲ |

19027055c ಹರಿದಶ್ವಸ್ಯ ಯಜ್ಞೇ ತು ಪಶುತ್ವೇ ವಿನಿಯೋಜಿತಃ ||

ಹರಿದಶ್ವನ[3] ಯಜ್ಞದಲ್ಲಿ ಪಶುತ್ವದಿಂದ ವಿನಿಯೋಜಿತನಾಗಿದ್ದ ಶುನಃಶೇಪನು ವಿಶ್ವಾಮಿತ್ರನ ಪುತ್ರನಾಗಲಿಲ್ಲವೇ?

19027056a ದೇವೈರ್ದತ್ತಃ ಶುನಃಶೇಪೋ ವಿಶ್ವಾಮಿತ್ರಾಯ ವೈ ಪುನಃ |

19027056c ದೇವೈರ್ದತ್ತಃ ಸ ವೈ ಯಸ್ಮಾದ್ದೇವರಾತಸ್ತತೋಽಭವತ್ ||

ದೇವತೆಗಳು ಶುನಃಶೇಪನನ್ನು ಪುನಃ ವಿಶ್ವಾಮಿತ್ರನಿಗೆ ಕೊಟ್ಟರು. ದೇವತೆಗಳು ಕೊಟ್ಟಿದ್ದುದರಿಂದ ಅವನು ದೇವರಾತ[4]ನಾದನು.

19027057a ದೇವರಾತಾದಯಃ ಸಪ್ತ ವಿಶ್ವಾಮಿತ್ರಸ್ಯ ವೈ ಸುತಾಃ |

19027057c ದೃಷದ್ವತೀಸುತಶ್ಚಾಪಿ ವಿಶ್ವಾಮಿತ್ರಾತ್ತಥಾಷ್ಟಕಃ ||

ದೇವರಾತನೇ ಮೊದಲಾದವರು ವಿಶ್ವಾಮಿತ್ರನ ಏಳು ಪುತ್ರರು. ದೃಷದ್ವತಿ[5]ಯ ಮಗನು ವಿಶ್ವಾಮಿತ್ರನ ಎಂಟನೆಯ ಪುತ್ರ ಅಷ್ಟಕನು.

19027056a ಅಷ್ಟಕಸ್ಯ ಸುತೋ ಲೌಹಿಃ ಪ್ರೋಕ್ತೋ ಜಹ್ನುಗಣೋ ಮಯಾ |

19027056c ಅಥ ಊರ್ಧ್ವಂ ಪ್ರವಕ್ಷ್ಯಾಮಿ ವಂಶಮಾಯೋರ್ಮಹಾತ್ಮನಃ||

ಅಷ್ಟಕನ ಸುತನು ಲೌಹಿ ಎಂದು ಹೇಳುತ್ತಾರೆ. ನಾನು ನಿನಗೆ  ಜಹ್ನುಕುಲದ ವರ್ಣನೆಯನ್ನು ಮಾಡಿದೆ. ಇನ್ನು ಮುಂದೆ ಮಹಾತ್ಮ ಆಯುವಿನ ವಂಶದ ಕುರಿತು ಹೇಳುತ್ತೇನೆ.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಅಮಾವಸುವಂಶಕೀರ್ತನಂ ನಾಮ ಸಪ್ತವಿಂಶೋಽಧ್ಯಾಯಃ|

File:Lily flower on white background.jpg - Wikimedia Commons

[1] ದೃಷದ್ವತೀ ಅಥವಾ ಮಾಧವಿಯ ಪುತ್ರ.

[2] ಶುನಃಶೇಪನು ಜಮದಗ್ನಿಯ ಮಗನಾಗಿದ್ದರೂ ವಿಶ್ವಾಮಿತ್ರನ ಪುತ್ರತ್ವವನ್ನು ಪಡೆದುಕೊಂಡನು.

[3] ಹರಿಶ್ಚಂದ್ರ.

[4] ದೈವೈಃ ರಾತಃ – ದೇವರಾತಃ!

[5] ಯಯಾತಿಯ ಮಗಳು ಮಾಧವಿಯ ಇನ್ನೊಂದು ಹೆಸರು.

Comments are closed.