ಹರಿವಂಶ: ಹರಿವಂಶ ಪರ್ವ
ಪಂಚವಿಂಶೋಽಧ್ಯಾಯಃ
ಸೋಮೋತ್ಪತ್ತಿವರ್ಣನಮ್
19025001 ವೈಶಂಪಾಯನ ಉವಾಚ|
19025001a ಪಿತಾ ಸೋಮಸ್ಯ ವೈ ರಾಜಂಜಜ್ಞೇಽತ್ರಿರ್ಭಗವಾನೃಷಿಃ |
19025001c ಬ್ರಹ್ಮಣೋ ಮಾನಸಾತ್ಪೂರ್ವಂ ಪ್ರಜಾಸರ್ಗಂ ವಿಧಿತ್ಸತಃ ||
ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಬ್ರಹ್ಮನು ಪ್ರಜಾಸೃಷ್ಟಿಯನ್ನು ನಡೆಸುತ್ತಿದ್ದಾಗ ಅವನ ಮನಸ್ಸಿನಿಂದ ಸೋಮನ ಪಿತ ಭಗವಾನ್ ಋಷಿ ಅತ್ರಿಯ ಜನ್ಮವಾಯಿತು.
19025002a ತತ್ರಾತ್ರಿಃ ಸರ್ವಭೂತಾನಾಂ ತಸ್ಥೌ ಸ್ವತನಯೈರ್ಯುತಃ |
19025002c ಕರ್ಮಣಾ ಮನಸಾ ವಾಚಾ ಶುಭಾನ್ಯೇವ ಚಚಾರ ಸಃ ||
ಆಗ ಅತ್ರಿಯು ತನ್ನ ಮಗನೊಂದಿಗೆ, ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವಭೂತಗಳಿಗೂ ಶುಭವನ್ನಾಗುವುದನ್ನೇ ಆಚರಿಸುತ್ತಿದ್ದರು.
19025003a ಅಹಿಂಸ್ರಃ ಸರ್ವಭೂತೇಷು ಧರ್ಮಾತ್ಮಾ ಸಂಶಿತವ್ರತಃ |
19025003c ಕಾಷ್ಠಕುಡ್ಯಶಿಲಾಭೂತ ಊರ್ಧ್ವಬಾಹುರ್ಮಹಾದ್ಯುತಿಃ ||
19025004a ಅನುತ್ತರಂ ನಾಮ ತಪೋ ಯೇನ ತಪ್ತಂ ಮಹತ್ಪುರಾ |
19025004c ತ್ರೀಣಿ ವರ್ಷಸಹಸ್ರಾಣಿ ದಿವ್ಯಾನೀತಿ ಹಿ ನಃ ಶ್ರುತಮ್ ||
ಆ ಧರ್ಮಾತ್ಮಾ ಸಂಶಿತವ್ರತ ಮಹಾದ್ಯುತಿ ಅತ್ರಿಯು ಸರ್ವಭೂತಗಳಲ್ಲಿಯೂ ಅಹಿಂಸಾಭಾವದಿಂದ ಬಾಹುಗಳನ್ನು ಮೇಲಕ್ಕೆತ್ತಿ ಕಟ್ಟಿಗೆ, ಗೋಡೆ ಅಥವಾ ಶಿಲೆಯಂತೆ ಮೂರು ಸಹಸ್ರ ದಿವ ವರ್ಷಗಳು ಅನುತ್ತರ ಎಂಬ ಹೆಸರಿನ ಮಹಾ ತಪಸ್ಸನ್ನು ತಪಿಸಿದನು ಎಂದು ಕೇಳಿದ್ದೇವೆ.
19025005a ತತ್ರೋರ್ಧ್ವರೇತಸಸ್ತಸ್ಯ ಸ್ಥಿತಸ್ಯಾನಿಮಿಷಸ್ಯ ಹ |
19025005c ಸೋಮತ್ವಂ ತನುರಾಪೇದೇ ಮಹಾಸತ್ತ್ವಸ್ಯ ಭಾರತ ||
ಭಾರತ! ಆ ಮಹಾಸತ್ತ್ವನು ರೆಪ್ಪೆಬಡಿಯದೇ ಊರ್ಧ್ವರೇತಸನಾಗಿ ನಿಂತಿರಲು ಅವನ ದೇಹವು ಸೋಮತ್ವವನ್ನು ಪಡೆದುಕೊಂಡಿತು.
19025006a ಊರ್ಧ್ವಮಾಚಕ್ರಮೇ ತಸ್ಯ ಸೋಮತ್ವಂ ಭಾವಿತಾತ್ಮನಃ |
19025006c ನೇತ್ರಾಭ್ಯಾಂ ವಾರಿ ಸುಸ್ರಾವ ದಶಧಾ ದ್ಯೋತಯದ್ದಿಶಃ ||
ಆ ಭಾವಿತಾತ್ಮನ ಸೋಮತ್ವವು ಅವನ ಎರಡೂ ಕಣ್ಣುಗಳಿಂದ ನೀರಾಗಿ ಸುರಿದು ಹತ್ತು ದಿಕ್ಕುಗಳನ್ನೂ ಪ್ರಕಾಶಗೊಳಿಸುತ್ತಾ ಆಕಾಶವನ್ನೇರತೊಡಗಿತು.
19025007a ತಂ ಗರ್ಭಂ ವಿಧಿನಾ ಹೃಷ್ಟಾ ದಶ ದೇವ್ಯೋ ದಧುಸ್ತದಾ |
19025007c ಸಮೇತ್ಯ ಧಾರಯಾಮಾಸುರ್ನ ಚ ತಾಃ ಸಮಶಕ್ನುವನ್ ||
ಆ ಗರ್ಭವನ್ನು ವಿಧಿವತ್ತಾಗಿ ದಶದಿಕ್ಕಿನ ದೇವಿಯರು ಹೃಷ್ಟರಾಗಿ ಒಂದಾಗಿ ಧಾರಣೆಮಾಡಿಕೊಂಡರು. ಆದರೆ ಅವರಿಗೆ ಅದನ್ನು ಧಾರಣೆಮಾಡಿಕೊಳ್ಳಲು ಶಕ್ಯವಾಗಲಿಲ್ಲ.
19025008a ಸ ತಾಭ್ಯಃ ಸಹಸೈವಾಥ ದಿಗ್ಭ್ಯೋ ಗರ್ಭಃ ಪ್ರಭಾನ್ವಿತಃ |
19025008c ಪಪಾತ ಭಾಸಯನ್ಲೋಕಾಂಶೀತಾಂಶುಃ ಸರ್ವಭಾವನಃ ||
ಕೂಡಲೇ ಆ ದಿಶಾದೇವಿಯರ ಪ್ರಭಾನ್ವಿತ ಗರ್ಭದಿಂದ ಸರ್ವಭಾವನ ಶೀತಾಂಶುವು ಲೋಕಗಳನ್ನು ಬೆಳಗುತ್ತಾ ಕೆಳಕ್ಕುರುಳಿದನು.
19025009a ಯದಾ ನ ಧಾರಣೇ ಶಕ್ತಾಸ್ತಸ್ಯ ಗರ್ಭಸ್ಯ ತಾ ದಿಶಃ |
19025009c ತತಸ್ತಾಭಿಃ ಸಹೈವಾಶು ನಿಪಪಾತ ವಸುಂಧರಾಮ್ ||
ಅವನ ಗರ್ಭವನ್ನು ಧರಿಸಲು ಅಶಕ್ಯರಾದ ಆ ದಿಶಗಳು ಅವನೊಂದಿಗೆ ಕೂಡಲೇ ಮಸುಂಧರೆಯ ಮೇಲೆ ಬಿದ್ದರು.
19025010a ಪತಿತಂ ಸೋಮಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ |
19025010c ರಥಮಾರೋಪಯಾಮಾಸ ಲೋಕಾನಾಂ ಹಿತಕಾಮ್ಯಯಾ ||
ಬೀಳುತ್ತಿದ್ದ ಸೋಮನನ್ನು ನೋಡಿದ ಲೋಕಪಿತಾಮಹ ಬ್ರಹ್ಮನು ಲೋಕಗಳ ಹಿತವನ್ನು ಬಯಸಿ ಅವನನ್ನು ಒಂದು ರಥದಲ್ಲಿ ಏರಿಸಿದನು.
19025011a ಸ ಹಿ ವೇದಮಯಸ್ತಾತ ಧರ್ಮಾತ್ಮಾ ಸತ್ಯಸಂಗ್ರಹಃ |
19025011c ಯುಕ್ತೋ ವಾಜಿಸಹಸ್ರೇಣ ಸಿತೇನೇತಿ ಹಿ ನಃ ಶ್ರುತಮ್ ||
ಅಯ್ಯಾ! ಆ ರಥವು ವೇದಮಯವೂ, ಧರ್ಮಾತ್ಮವೂ ಮತ್ತು ಸತ್ಯಸಂಗ್ರಹವೂ ಆಗಿದ್ದಿತು. ಅದಕ್ಕೆ ಸಾವಿರ ಶ್ವೇತವರ್ಣದ ಕುದುರೆಗಳನ್ನು ಕಟ್ಟಲಾಗಿತ್ತು ಎಂದು ನಾವು ಕೇಳಿದ್ದೇವೆ.
19025012a ತಸ್ಮಿನ್ನಿಪತಿತೇ ದೇವಾಃ ಪುತ್ರೇಽತ್ರೇಃ ಪರಮಾತ್ಮನಿ |
19025012c ತುಷ್ಟುವುರ್ಬ್ರಹ್ಮಣಃ ಪುತ್ರಾ ಮಾನಸಾಃ ಸಪ್ತ ಯೇ ಶ್ರುತಾಃ ||
ಅತ್ರಿಯ ಪುತ್ರ ಪರಮಾತ್ಮನು ಹಾಗೆ ಬೀಳುತ್ತಿರುವಾಗ ದೇವತೆಗಳು ಮತ್ತು ಬ್ರಹ್ಮನ ಏಳು ವೇದಪಾರಂಗತ ಮಾನಸಪುತ್ರರು ಸ್ತುತಿಸತೊಡಗಿದರು.
19025013a ತಥೈವಾಂಗಿರಸಸ್ತತ್ರ ಭೃಗುರೇವಾತ್ಮಜೈಃ ಸಹ |
19025013c ಋಗ್ಭಿರ್ಯಜುರ್ಭಿರ್ಬಹುಲೈರಥರ್ವಾಂಗಿರಸೈರಪಿ ||
ಹಾಗೆಯೇ ಆಂಗಿರಸ ಮತ್ತು ಭೃಗು ಇವರು ತಮ್ಮ ಮಕ್ಕಳೊಂದಿಗೆ ಋಗ್ವೇದ-ಯಜುರ್ವೇದ-ಅಥರ್ವ ವೇದಗಳಿಂದ ಬಹಳವಾಗಿ ಸೋಮನ ಸ್ತುತಿಗೈದರು.
19025014a ತಸ್ಯ ಸಂಸ್ತೂಯಮಾನಸ್ಯ ತೇಜಃ ಸೋಮಸ್ಯ ಭಾಸ್ವತಃ |
19025014c ಆಪ್ಯಾಯಮಾನಂ ಲೋಕಾಂಸ್ತ್ರೀನ್ಭಾಸಯಾಮಾಸ ಸರ್ವಶಃ ||
ಅವರು ಹಾಗೆ ಸ್ತುತಿಸುತ್ತಿರಲು ಬೆಳಗುತ್ತಿದ್ದ ಸೋಮನ ತೇಜಸ್ಸು ಮೂರುಲೋಕಗಳನ್ನೂ ಸಂತೋಷಗೊಳಿಸುತ್ತಾ ಎಲ್ಲಕಡೆ ಬೆಳಗತೊಡಗಿತು.
19025015a ಸ ತೇನ ರಥಮುಖ್ಯೇನ ಸಾಗರಾಂತಾಂ ವಸುಂಧರಾಮ್ |
19025015c ತ್ರಿಃಸಪ್ತಕೃತ್ವೋಽತಿಯಶಾಶ್ಚಕಾರಾಭಿಪ್ರದಕ್ಷಿಣಮ್ ||
ಆ ಅತಿಯಶಸ್ವಿಯು ಆ ರಥಮುಖ್ಯದಲ್ಲಿ ಸೋಮನನ್ನು ಇಪ್ಪತ್ತೊಂದು ಬಾರಿ ಸಾಗರಾಂತಿಕೆ ವಸುಂಧರೆಯ ಪ್ರದಕ್ಷಿಣೆಯನ್ನು ಮಾಡಿಸಿದನು.
19025016a ತಸ್ಯ ಯಚ್ಚ್ಯಾವಿತಂ ತೇಜಃ ಪೃಥಿವೀಮನ್ವಪದ್ಯತ |
19025016c ಓಷಧ್ಯಸ್ತಾಃ ಸಮುದ್ಭೂತಾಸ್ತೇಜಸಾ ಪ್ರಜ್ವಲಂತ್ಯುತ ||
ಸೋಮನ ರಥದಿಂದ ಕೆಳಗೆ ಬಿದ್ದ ತೇಜಸ್ಸಿನ ಬಿಂದುಗಳು ಭೂಮಿಯನ್ನು ಸೇರಿ ಪ್ರಕಾಶಪೂರ್ಣ ಓಷಧಿಗಳು ಹುಟ್ಟಿಕೊಂಡವು.
19025017a ತಾಭಿರ್ಧಾರ್ಯಾಸ್ತ್ರಯೋ ಲೋಕಾಃ ಪ್ರಜಾಶ್ಚೈವ ಚತುರ್ವಿಧಾಃ |
19025017c ಪೋಷ್ಟಾ ಹಿ ಭಗವಾನ್ಸೋಮೋ ಜಗತೋ ಜಗತೀಪತೇ ||
ಜಗತೀಪತೇ! ಅವುಗಳಿಂದ ಭೂಲೋಕ-ಭುವರ್ಲೋಕ ಮತ್ತು ಸ್ವರ್ಗಲೋಕಗಳೆಂಬ ಮೂರು ಲೋಕಗಳೂ, ಜರಾಯುಜ-ಅಂಡಜ-ಸ್ವೇದಜ ಮತ್ತು ಉದ್ವಿಜ ಈ ನಾಲ್ಕು ವಿಧದ ಜೀವಿಗಳ ಪೋಷಣೆಯೂ ನಡೆಯುತ್ತದೆ. ಭಗವಾನ್ ಸೋಮನಿಂದಲೇ ಜಗತ್ತಿನ ಪೋಷಣೆಯ ನಡೆಯುತ್ತದೆ.
19025018a ಸ ಲಬ್ಧತೇಜಾ ಭಗವಾನ್ಸಂಸ್ತವೈಸ್ತೈಶ್ಚ ಕರ್ಮಭಿಃ |
19025018c ತಪಸ್ತೇಪೇ ಮಹಾಭಾಗ ಪದ್ಮಾನಾಂ ದಶತೀರ್ದಶ ||
ಅಂಥಹ ಸ್ತವ ಕರ್ಮಗಳಿಂದ ತೇಜಸ್ಸನ್ನು ಪಡೆದ ಭಗವಾನ್ ಸೋಮನು ಒಂದು ಸಾವಿರ ಪದ್ಮ ವರ್ಷಗಳ ಪರ್ಯಂತ ತಪಸ್ಸನ್ನು ತಪಿಸಿದನು.
19025019a ಹಿರಣ್ಯವರ್ಣಾಂ ಯಾ ದೇವ್ಯೋ ಧಾರಯಂತ್ಯಾತ್ಮನಾ ಜಗತ್|
19025019c ನಿಧಿಸ್ತಾಸಾಮಭೂದ್ದೇವಃ ಪ್ರಖ್ಯಾತಃ ಸ್ವೇನ ಕರ್ಮಣಾ ||
ತನ್ನದೇ ಕರ್ಮಗಳಿಂದ ಪ್ರಖ್ಯಾತ ಸೋಮನು ಜಗತ್ತನ್ನು ತಮ್ಮ ಆತ್ಮಗಳಿಂದ ಧರಿಸಿರುವ ಹಿರಣ್ಯವರ್ಣದ ದೇವಿಯರ ನಿಧಿಯಾದನು.
19025020a ತತಸ್ತಸ್ಮೈ ದದೌ ರಾಜ್ಯಂ ಬ್ರಹ್ಮಾ ಬ್ರಹ್ಮವಿದಾಂ ವರಃ |
19025020c ಬೀಜೌಷಧೀನಾಂ ವಿಪ್ರಾಣಾಮಪಾಂ ಚ ಜನಮೇಜಯ ||
ಜನಮೇಜಯ! ಅನಂತರ ಬ್ರಹ್ಮವಿದರಲ್ಲಿ ಶ್ರೇಷ್ಠ ಬ್ರಹ್ಮನು ಸೋಮನಿಗೆ ಬೀಜ, ಔಷಧಿ, ವಿಪ್ರರು ಮತ್ತು ಜಲದ ರಾಜ್ಯಾಧಿಕಾರವನ್ನು ವಹಿಸಿದನು.
19025021a ಸೋಽಭಿಷಿಕ್ತೋ ಮಹಾರಾಜ ರಾಜರಾಜ್ಯೇನ ರಾಜರಾಟ್ |
19025021c ಲೋಕಾಂಸ್ತ್ರೀನ್ಭಾಸಯಾಮಾಸ ಸ್ವಭಾಸಾ ಭಾಸ್ವತಾಂ ವರಃ ||
ಮಹಾರಾಜ! ಹೊಳೆಯುವವರಲ್ಲಿ ಶ್ರೇಷ್ಠನಾದ ಸೋಮನು ರಾಜರಾಜ್ಯದ ರಾಜನಾಗಿ ಅಭಿಷಿಕ್ತನಾಗಲು ತನ್ನದೇ ಕಾಂತಿಯಿಂದ ಮೂರು ಲೋಕಗಳನ್ನೂ ಬೆಳಗತೊಡಗಿದನು.
19025022a ಸಪ್ತವಿಂಶತಿಮಿಂದೋಸ್ತು ದಾಕ್ಷಾಯಣ್ಯೋ ಮಹಾವ್ರತಾಃ |
19025022c ದದೌ ಪ್ರಾಚೇತಸೋ ದಕ್ಷೋ ನಕ್ಷತ್ರಾಣೀತಿ ಯಾ ವಿದುಃ ||
ಪ್ರಾಚೇತಸ ದಕ್ಷನು ಮಹಾವ್ರತೆಯರಾದ ಇಪ್ಪತ್ತೇಳು ದಾಕ್ಷಾಯಿಣಿಯರನ್ನು ಇಂದುವಿಗೆ ಕೊಟ್ಟನು. ಅವರು ನಕ್ಷತ್ರಗಳೆಂದೂ ತಿಳಿಯಲ್ಪಟ್ಟಿದ್ದಾರೆ.
19025023a ಸ ತತ್ಪ್ರಾಪ್ಯ ಮಹದ್ರಾಜ್ಯಂ ಸೋಮಃ ಸೋಮವತಾಂ ವರಃ |
19025023c ಸಮಾಜಹ್ರೇ ರಾಜಸೂಯಂ ಸಹಸ್ರಶತದಕ್ಷಿಣಮ್ ||
ಸೋಮವಂತರಲ್ಲಿ ಶ್ರೇಷ್ಠ ಸೋಮನು ಆ ಮಹಾರಾಜ್ಯವನ್ನು ಪಡೆದುಕೊಂಡು ಲಕ್ಷ ದಕ್ಷಿಣೆಗಳಿದ್ದ ರಾಜಸೂಯವನ್ನು ನೆರವೇರಿಸಿದನು.
19025024a ಹೋತಾಽಸ್ಯ ಭಗವಾನತ್ರಿರಧ್ವರ್ಯುರ್ಭಗವಾನ್ಭೃಗುಃ |
19025024c ಹಿರಣ್ಯಗರ್ಭಶ್ಚೋದ್ಗಾತಾ ಬ್ರಹ್ಮಾ ಬ್ರಹ್ಮತ್ವಮೇಯಿವಾನ್ ||
ಆ ಯಜ್ಞದಲ್ಲಿ ಭಗವಾನ್ ಅತ್ರಿಯು ಹೋತನಾಗಿದ್ದನು. ಭಗವಾನ್ ಭೃಗುವು ಅಧ್ವರ್ಯುವಾಗಿದ್ದನು. ಹಿರಣ್ಯಗರ್ಭನು ಉದ್ಗಾತನಾಗಿದ್ದನು. ವಸಿಷ್ಠನು ಬ್ರಹ್ಮತ್ವವನ್ನು ವಹಿಸಿದ್ದನು.
19025025a ಸದಸ್ಯಸ್ತತ್ರ ಭಗವಾನ್ಹರಿರ್ನಾರಾಯಣಃ ಸ್ವಯಮ್ |
19025025c ಸನತ್ಕುಮಾರಪ್ರಮುಖೈರಾದ್ಯೈರ್ಬ್ರಹ್ಮರ್ಷಿಭಿರ್ವೃತಃ ||
ಅಲ್ಲಿ ಸನತ್ಕುಮಾರರೇ ಮೊದಲಾದ ಆದಿ ಬ್ರಹ್ಮರ್ಷಿಗಳು ಸ್ವಯಂ ಭಗವಾನ್ ಹರಿ ನಾರಾಯಣನನ್ನು ಸದಸ್ಯನನ್ನಾಗಿ ಮಾಡಿದ್ದರು.
19025026a ದಕ್ಷಿಣಾಮದದಾತ್ಸೋಮಸ್ತ್ರೀನ್ಲೋಕಾನಿತಿ ನಃ ಶ್ರುತಮ್ |
19025026c ತೇಭ್ಯೋ ಬ್ರಹ್ಮರ್ಷಿಮುಖ್ಯೇಭ್ಯಃ ಸದಸ್ಯೇಭ್ಯಶ್ಚ ಭಾರತ ||
ಭಾರತ! ಆ ಬ್ರಹ್ಮರ್ಷಿಮುಖ್ಯ ಸದಸ್ಯರಲ್ಲಿ ಕೆಲವರಿಗೆ ಸೋಮನು ಮೂರುಲೋಕಗಳನ್ನೂ ದಕ್ಷಿಣೆಯನ್ನಾಗಿ ಕೊಟ್ಟಿದ್ದನೆಂದು ನಾವು ಕೇಳಿದ್ದೇವೆ.
19025027a ತಂ ಸಿನಿಶ್ಚ ಕುಹೂಶ್ಚೈವ ದ್ಯುತಿಃ ಪುಷ್ಟಿಃ ಪ್ರಭಾ ವಸುಃ
19025027c ಕೀರ್ತಿರ್ಧೃತಿಶ್ಚ ಲಕ್ಶ್ಮೀಶ್ಚ ನವ ದೇವ್ಯಃ ಸಿಷೇವಿರೇ ||
ಆಗ ಸಿನಿವಾಲೀ, ಕುಹೂ, ದ್ಯುತಿ, ಪುಷ್ಟಿ, ಪ್ರಭಾ, ವಸು, ಕೀರ್ತಿ, ಧೃತಿ ಮತ್ತು ಲಕ್ಷ್ಮಿ ಈ ನವ ದೇವಿಯರು ಸೋಮನ ಸೇವೆಗೈಯುತ್ತಿದ್ದರು.
19025028a ಪ್ರಾಪ್ಯಾವಭೃಥಮವ್ಯಗ್ರಃ ಸರ್ವದೇವರ್ಷಿಪೂಜಿತಃ |
19025028c ವಿರರಾಜಾಧಿರಾಜೇಂದ್ರೋ ದಶಧಾ ಭಾಸಯಂದಿಶಃ ||
ಈ ರೀತಿ ಸರ್ವದೇವರ್ಷಿಪೂಜಿತನಾದ ಆ ಅವ್ಯಗ್ರ ಅಧಿರಾಜೇಂದ್ರನು ಅವಭೃತವನ್ನು ಪಡೆದು ಹತ್ತೂ ದಿಕ್ಕುಗಳನ್ನೂ ಬೆಳಗತೊಡಗಿದನು.
19025029a ತಸ್ಯ ತತ್ಪ್ರಾಪ್ಯ ದುಷ್ಪ್ರಾಪ್ಯಮೈಶ್ವರ್ಯಂ ಮುನಿಸತ್ಕೃತಮ್ |
19025029c ವಿಬಭ್ರಾಮ ಮತಿಸ್ತಾತ ವಿನಯಾದನಯಾಽಽಹತಾ ||
ಅಯ್ಯಾ! ಮುನಿಸತ್ಕೃತವಾದ ಅಂತಹ ದುಷ್ಪ್ರಾಪ್ಯ ಐಶ್ವರ್ಯವನ್ನು ಪಡೆದು ಸೋಮನ ಮತಿಯು ವಿನಯದಿಂದ ಭ್ರಷ್ಟಗೊಂಡಿತು ಮತ್ತು ಅನೀತಿಯು ಅವನನ್ನು ಆವರಿತು.
19025030a ಬೃಹಸ್ಪತೇಃ ಸ ವೈ ಭಾರ್ಯಾಂ ತಾರಾಂ ನಾಮ ಯಶಸ್ವಿನೀಮ್ |
19025030c ಜಹಾರ ತರಸಾ ಸರ್ವಾನವಮತ್ಯಾಂಗಿರಃಸುತಾನ್ ||
ಅನಂತರ ಅವನು ಅಂಗಿರಸನ ಮಕ್ಕಳೆಲ್ಲರನ್ನೂ ತಿರಸ್ಕರಿಸಿ ಅವಸರದಲ್ಲಿ ಬೃಹಸ್ಪತಿಯ ಭಾರ್ಯೆ ತಾರಾ ಎಂಬ ಹೆಸರಿನ ಯಶಸ್ವಿನಿಯನ್ನು ಬಲಪೂರ್ವಕವಾಗಿ ಅಪಹರಿಸಿದನು.
19025031a ಸ ಯಾಚ್ಯಮಾನೋ ದೇವೈಶ್ಚ ಯಥಾ ದೇವರ್ಷಿಭಿಃ ಸಹ |
19025031c ನೈವ ವ್ಯಸರ್ಜಯತ್ತಾರಾಂ ತಸ್ಮಾ ಆಂಗಿರಸೇ ತದಾ |
19025031e ಸ ಸಂರಬ್ಧಸ್ತತಸ್ತಸ್ಮಿಂದೇವಾಚಾರ್ಯೋ ಬೃಹಸ್ಪತಿಃ ||
ದೇವತೆಗಳು ಮತ್ತು ದೇವರ್ಷಿಗಳು ಕೂಡಿ ಬೇಡಿಕೊಂಡರೂ ಅವನು ತಾರೆಯನ್ನು ಆಂಗಿರಸನಿಗೆ ಬಿಟ್ಟುಕೊಡಲಿಲ್ಲ. ಆಗ ದೇವತೆಗಳ ಆಚಾರ್ಯ ಬೃಹಸ್ಪತಿಯಾದರೋ ಸೋಮನ ಮೇಲೆ ಅತ್ಯಂತ ಕುಪಿತನಾದನು.
19025032a ಉಶನಾ ತಸ್ಯ ಜಗ್ರಾಹ ಪಾರ್ಷ್ಣಿಮಾಂಗಿರಸಸ್ತದಾ |
19025032c ಸ ಹಿ ಶಿಷ್ಯೋ ಮಹಾತೇಜಾಃ ಪಿತುಃ ಪೂರ್ವೋ ಬೃಹಸ್ಪತೇಃ||
ಆಗ ಉಶನ ಶುಕ್ರನು ಚಂದ್ರನ ಪಕ್ಷವನ್ನೂ ರುದ್ರನು ಆಂಗಿರಸ ಬೃಹಸ್ಪತಿಯ ಪಕ್ಷವನ್ನೂ ಸೇರಿಕೊಂಡರು. ಮಹಾತೇಜಸ್ವೀ ರುದ್ರನು ಹಿಂದೆ ಬೃಹಸ್ಪತಿಯ ತಂದೆಯ ಶಿಷ್ಯನಾಗಿದ್ದನು.
19025033a ತೇನ ಸ್ನೇಹೇನ ಭಗವಾನ್ರುದ್ರಸ್ತಸ್ಯ ಬೃಹಸ್ಪತೇಃ |
19025033c ಪಾರ್ಷ್ಣಿಗ್ರಾಹೋಽಭವದ್ದೇವಃ ಪ್ರಗೃಹ್ಯಾಜಗವಂ ಧನುಃ ||
ಅದೇ ಸ್ನೇಹದಿಂದ ಭಗವನ್ ರುದ್ರ ದೇವನು ಅಜಗವ ಧನುಸ್ಸನ್ನು ಹಿಡಿದು ಬೃಹಸ್ಪತಿಯ ಪಕ್ಷವನ್ನು ಸೇರಿಕೊಂಡನು.
19025034a ತೇನ ಬ್ರಹ್ಮಶಿರೋ ನಾಮ ಪರಮಾಸ್ತ್ರಂ ಮಹಾತ್ಮನಾ |
19025034c ಉದ್ದಿಶ್ಯ ದೈತ್ಯಾನುತ್ಸೃಷ್ಟಂ ಯೇನೈಷಾಂ ನಾಶಿತಂ ಯಶಃ ||
ಮಹಾತ್ಮ ರುದ್ರನು ದೈತ್ಯರನ್ನು ಉದ್ದೇಶಿಸಿ ಬ್ರಹ್ಮಶಿರವೆಂಬ ಹೆಸರಿನ ಪರಮಾಸ್ತ್ರವನ್ನು ಪ್ರಯೋಗಿಸಿ ಅವರ ಯಶಸ್ಸನ್ನು ನಾಶಗೊಳಿಸಿದನು.
19025035a ತತ್ರ ತದ್ಯುದ್ಧಮಭವತ್ಪ್ರಖ್ಯಾತಂ ತಾರಕಾಮಯಮ್ |
19025035c ದೇವಾನಾಂ ದಾನವಾನಾಂ ಚ ಲೋಕಕ್ಷಯಕರಂ ಮಹತ್ ||
ಅಲ್ಲಿ ದೇವತೆಗಳ ಮತ್ತು ದಾನವರ ಲೋಕಕ್ಷಯಕಾರಕ ಮಹಾ ಯುದ್ಧವು ನಡೆಯಿತು. ಆ ಯುದ್ಧವು ತಾರಕಾಮಯ ಯುದ್ಧವೆಂದು ಪ್ರಖ್ಯಾತವಾಯಿತು.
19025036a ತತ್ರ ಶಿಷ್ಟಾಸ್ತು ಯೇ ದೇವಾಸ್ತುಷಿತಾಶ್ಚೈವ ಭಾರತ |
19025036c ಬ್ರಹ್ಮಾಣಂ ಶರಣಂ ಜಗ್ಮುರಾದಿದೇವಂ ಸನಾತನಮ್ ||
ಭಾರತ! ಅಲ್ಲಿ ಅಳಿದುಳಿದ ದೇವ ಮತ್ತು ತುಷಿತ ಗಣಗಳು ಆದಿದೇವ ಸನಾತನ ಬ್ರಹ್ಮನ ಶರಣು ಹೊಕ್ಕರು.
19025037a ತತೋ ನಿವಾರ್ಯೋಶನಸಂ ರುದ್ರಂ ಜ್ಯೇಷ್ಠಂ ಚ ಶಂಕರಮ್ |
19025037c ದದಾವಂಗಿರಸೇ ತಾರಾಂ ಸ್ವಯಮೇವ ಪಿತಾಮಹಃ ||
ಅಗ ಪಿತಾಮಹನು ಉಶಸನ ಮತ್ತು ರುದ್ರ ಜ್ಯೇಷ್ಠ ಶಂಕರರನ್ನು ಯುದ್ಧಮಾಡುವುದರಿಂದ ನಿಲ್ಲಿಸಿ ಸ್ವಯಂ ತಾನೇ ತಾರೆಯನ್ನು ಆಂಗಿರಸ ಬೃಹಸ್ಪತಿಗಿತ್ತನು.
19025038a ತಾಮಂತಃಪ್ರಸವಾಂ ದೃಷ್ಟ್ವಾ ತಾರಾಂ ಪ್ರಾಹ ಬೃಹಸ್ಪತಿಃ|
19025038c ಮದೀಯಾಯಾಂ ನ ತೇ ಯೋನೌ ಗರ್ಭೋ ಧಾರ್ಯಃ ಕಥಂಚನ ||
ಅವಳು ಗರ್ಭಿಣಿಯಾಗಿದ್ದುದನ್ನು ನೋಡಿ ಬೃಹಸ್ಪತಿಯು ತಾರೆಗೆ ಹೇಳಿದನು: “ನನ್ನದಾದ ಯೋನಿಯಲ್ಲಿ ಪರರ ಗರ್ಭವನ್ನು ನೀನು ಎಂದೂ ಧರಿಸಬಾರದು.”
19025039a ಅಯೋನಾವುತ್ಸೃಜತ್ತಂ ಸಾ ಕುಮಾರಂ ದಸ್ಯುಹಂತಮಮ್ |
19025039c ಇಷೀಕಾಸ್ತಂಬಮಾಸಾದ್ಯ ಜ್ವಲಂತಮಿವ ಪಾವಕಮ್ ||
ಆಗ ತಾರೆಯು ಇಷೀಕ ಹುಲ್ಲಿನ ಪ್ರದೇಶಕ್ಕೆ ಹೋಗಿ ಅಲ್ಲಿ ಪಾವಕನಂತೆ ಪ್ರಜ್ವಲಿಸುತ್ತಿದ್ದ ದಸ್ಯುಹಂತಕ ಕುಮಾರನನ್ನು ಹೆತ್ತಳು.
19025040a ಜಾತಮಾತ್ರಃ ಸ ಭಗವಾಂದೇವಾನಾಮಕ್ಷಿಪದ್ವಪುಃ |
19025040c ತತಃ ಸಂಶಯಮಾಪನ್ನಾ ಇಮಾಮಕಥಯನ್ಸುರಾಃ ||
ಹುಟ್ಟುತ್ತಲೇ ಆ ಭಗವಾನನು ತನ್ನ ಶರೀರಕಾಂತಿಯಿಂದ ದೇವತೆಗಳ ಕಾಂತಿಯನ್ನು ಕುಗ್ಗುವಂತೆ ಮಾಡಿದನು. ಆಗ ಸಂಶಯಪಟ್ಟ ಸುರರು ಇದನ್ನು ಹೇಳತೊಡಗಿದರು:
19025041a ಸತ್ಯಂ ಬ್ರುಹಿ ಸುತಃ ಕಸ್ಯ ಸೋಮಸ್ಯಾಥ ಬೃಹಸ್ಪತೇಃ |
19025041c ಪೃಚ್ಛ್ಯಮಾನಾ ಯದಾ ದೇವೈರ್ನಾಹ ಸಾ ಸಾಧ್ವಸಾಧು ವಾ||
“ಸತ್ಯವನ್ನೇ ಹೇಳು. ಇವನು ಯಾರ ಸುತ? ಸೋಮನದ್ದೋ ಅಥವಾ ಬೃಹಸ್ಪತಿಯದ್ದೋ?” ಈ ರೀತಿ ದೇವತೆಗಳು ಕೇಳುತ್ತಿದ್ದರೂ ತಾರೆಯು ಸಾಧುವಾದ ಅಸಾಧುವಾದ ಏನನ್ನೂ ಹೇಳಲೇ ಇಲ್ಲ.
19025042a ತದಾ ತಾಂ ಶಪ್ತುಮಾರಬ್ಧಃ ಕುಮಾರೋ ದಸ್ಯುಹಂತಮಃ |
19025042c ತಂ ನಿವಾರ್ಯ ತತೋ ಬ್ರಹ್ಮಾ ತಾರಾಂ ಪಪ್ರಚ್ಛ ಸಂಶಯಮ್ ||
ಆಗ ದಸ್ಯುಹಂತಕ ಕುಮಾರನು ಅವಳಿಗೆ ಶಾಪವನ್ನು ಕೊಡಲು ಹೊರಟಾಗ ಬ್ರಹ್ಮನು ಅವನನ್ನು ತಡೆದು ತಾರೆಯಲ್ಲಿ ಸಂಶಯವನ್ನು ಕೇಳಿದನು:
19025043a ತದತ್ರ ತಥ್ಯಂ ತದ್ಬ್ರೂಹಿ ತಾರೇ ಕಸ್ಯ ಸುತಸ್ತ್ವಯಮ್ |
19025043c ಸಾ ಪ್ರಾಂಜಲಿರುವಾಚೇದಂ ಬ್ರಹ್ಮಾಣಂ ವರದಂ ಪ್ರಭುಮ್||
“ತಾರೇ! ಇವನು ಯಾರ ಪುತ್ರನು! ನಿಜವಾಗಿ ಹೇಳು!” ಆಗ ಅವಳು ಕೈಮುಗಿದು ವರದ ಪ್ರಭು ಬ್ರಹ್ಮನಿಗೆ ಹೇಳಿದಳು:
19025044a ಸೋಮಸ್ಯೇತಿ ಮಹಾತ್ಮಾನಂ ಕುಮಾರಂ ದಸ್ಯುಹಂತಮಮ್ |
19025044c ತತಸ್ತಂ ಮೂರ್ಧ್ನ್ಯುಪಾಘ್ರಾಯ ಸೋಮೋ ಧಾತಾ ಪ್ರಜಾಪತಿಃ ||
“ಇವನು ಸೋಮನ ಮಗ.” ಆಗ ಪ್ರಜಾಪತಿ ಧಾತಾ ಸೋಮನು ದಸ್ಯುಹಂತಕ ಮಹಾತ್ಮ ಕುಮಾರನ ನೆತ್ತಿಯನ್ನು ಆಘ್ರಾಣಿಸಿದನು.
19025045a ಬುಧ ಇತ್ಯಕರೋನ್ನಾಮ ತಸ್ಯ ಪುತ್ರಸ್ಯ ಧೀಮತಃ |
19025045c ಪ್ರತಿಕೂಲಂ ಚ ಗಗನೇ ಸಮಭ್ಯುತ್ಥಿಷ್ಠತೇ ಬುಧಃ ||
ಆ ಧೀಮಂತ ಪುತ್ರನಿಗೆ ಬುಧ ಎಂದು ನಾಮಕರಣವನ್ನು ಮಾಡಿದನು. ಬುಧನು ಗಗನದಲ್ಲಿ ಪ್ರತಿಕೂಲವನ್ನು ಸೂಚಿಸುತ್ತಾ ಉದಯವಾಗತೊಡಗಿದನು.
19025046a ಉತ್ಪಾದಯಾಮಾಸ ತತಃ ಪುತ್ರಂ ವೈ ರಾಜಪುತ್ರಿಕಾ |
19025046c ತಸ್ಯಾಪತ್ಯಂ ಮಹಾರಾಜೋ ಬಭೂವೈಲಃ ಪುರೂರವಾಃ ||
ಅನಂತರ ಬುಧನು ವೈರಾಜ ಮನುವಿನ ಪುತ್ರಿ ಇಲೆಯಲ್ಲಿ ಪುತ್ರನೋರ್ವನನ್ನು ಹುಟ್ಟಿಸಿದನು. ಅವರ ಆ ಪುತ್ರನು ಮಹಾರಾಜ ಪುರೂರವನಾಗಿದ್ದನು.
19025047a ಊರ್ವಶ್ಯಾಂ ಜಜ್ಞಿರೇ ಯಸ್ಯ ಪುತ್ರಾಃ ಸಪ್ತ ಮಹಾತ್ಮನಃ |
19025046c ಪ್ರಸಹ್ಯ ಧರ್ಷಿತಸ್ತತ್ರ ಸೋಮೋ ವೈ ರಾಜಯಕ್ಷ್ಮಣಾ ||
ಮಹಾತ್ಮ ಪುರೂರವನಿಗೆ ಊರ್ವಶಿಯಲ್ಲಿ ಏಳು ಪುತ್ರರು ಹುಟ್ಟಿದರು. ಇತ್ತ ಹಠದಿಂದಾಗಿ ಸೋಮನು ರಾಜಯಕ್ಷ್ಮದಿಂದ ಪೀಡಿತನಾದನು.
19025048a ತತೋ ಯಕ್ಷ್ಮಾಭಿಭೂತಸ್ತು ಸೋಮಃ ಪ್ರಕ್ಷೀಣಮಂಡಲಃ |
19025048c ಜಗಾಮ ಶರಣಾರ್ಥಾಯ ಪಿತರಂ ಸೋಽತ್ರಿಮೇವ ತು ||
ಯಕ್ಷ್ಮದ ಕಾರಣದಿಂದ ತನ್ನ ಮಂಡಲವನ್ನು ಕಳೆದುಕೊಳ್ಳುತ್ತಿದ್ದ ಸೋಮನು ಶರಣನಾಗಿ ತಂದೆ ಅತ್ರಿಯಲ್ಲಿಗೇ ಹೋದನು.
19025049a ತಸ್ಯ ತತ್ತಾಪಶಮನಂ ಚಕಾರಾತ್ರಿರ್ಮಹಾತಪಾಃ |
19025049c ಸ ರಾಜಯಕ್ಷ್ಮಣಾ ಮುಕ್ತಃ ಶ್ರಿಯಾ ಜಜ್ವಾಲ ಸರ್ವತಃ ||
ಮಹಾತಪಸ್ವಿ ಅತ್ರಿಯು ಅವನ ಆ ತಾಪವನ್ನು ತಣಿಸಿದನು. ಸೋಮನು ರಾಜಯಕ್ಷ್ಮದಿಂದ ಮುಕ್ತನಾಗಿ ಎಲ್ಲ ಕಡೆಯು ಶ್ರೀಯಿಂದ ಪ್ರಜ್ವಲಿಸಿದನು.
19025050a ಏವಂ ಸೋಮಸ್ಯ ವೈ ಜನ್ಮ ಕೀರ್ತಿತಂ ಕೀರ್ತಿವರ್ಧನಮ್ |
19025050c ವಂಶಮಸ್ಯ ಮಹಾರಾಜ ಕೀರ್ತ್ಯಮಾನಂ ಚ ಮೇ ಶೃಣು ||
ಮಹಾರಾಜ! ಇಗೋ ನಾನು ಕೀರ್ತಿಯನ್ನು ವರ್ಧಿಸುವ ಸೋಮನ ಜನ್ಮದ ಕುರಿತು ಹೇಳಿದ್ದೇನೆ. ಅವನ ವಂಶವನ್ನೂ ವರ್ಣಿಸುತ್ತೇನೆ. ಕೇಳು.
19025051a ಧನ್ಯಮಾರೋಗ್ಯಮಾಯುಷ್ಯಂ ಪುಣ್ಯಂ ಸಂಕಲ್ಪಸಾಧನಮ್ |
19025051c ಸೋಮಸ್ಯ ಜನ್ಮ ಶ್ರುತ್ವೈವ ಪಾಪೇಭ್ಯೋ ವಿಪ್ರಮುಚ್ಯತೇ ||
ಸೋಮನ ಜನ್ಮದ ಕುರಿತು ಕೇಳುವುದರಿಂದಲೇ ಮನುಷ್ಯನು ಆರೋಗ್ಯ-ಆಯುಷ್ಯ-ಪುಣ್ಯ ಮತ್ತು ಸಂಕಲ್ಪಸಾಧನೆಗಳಿಂದ ಧನ್ಯನಾಗಿ ಪಾಪಗಳಿಂದಲೂ ವಿಮೋಚನನಾಗುತ್ತಾನೆ.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಸೋಮೋತ್ಪತ್ತಿಕಥನೇ ಪಂಚವಿಂಶೋಽಧ್ಯಾಯಃ
