Udyoga Parva: Chapter 34

ಉದ್ಯೋಗ ಪರ್ವ: ಪ್ರಜಾಗರ ಪರ್ವ

೩೪

ವಿದುರನು ಧೃತರಾಷ್ಟ್ರನಿಗೆ ತನ್ನ ನೀತಿವಾಕ್ಯಗಳನ್ನು ಮುಂದುವರಿಸಿದುದು (೧-೮೩).

05034001 ಧೃತರಾಷ್ಟ್ರ ಉವಾಚ|

05034001a ಜಾಗ್ರತೋ ದಹ್ಯಮಾನಸ್ಯ ಯತ್ಕಾರ್ಯಮನುಪಶ್ಯಸಿ|

05034001c ತದ್ಬ್ರೂಹಿ ತ್ವಂ ಹಿ ನಸ್ತಾತ ಧರ್ಮಾರ್ಥಕುಶಲಃ ಶುಚಿಃ||

ಧೃತರಾಷ್ಟ್ರನು ಹೇಳಿದನು: “ನಿದ್ದೆ ಬಾರದಿರುವನು ಮತ್ತು ಬೇಗೆಯುಳ್ಳವನು ಏನು ಮಾಡಬೇಕು? ಅದನ್ನು ಹೇಳು! ಅಯ್ಯಾ! ನೀನೇ ಧರ್ಮಾರ್ಥಕುಶಲನೂ ಶುಚಿಯೂ ಅಲ್ಲವೇ?

05034002a ತ್ವಂ ಮಾಂ ಯಥಾವದ್ವಿದುರ ಪ್ರಶಾದಿ

        ಪ್ರಜ್ಞಾಪೂರ್ವಂ ಸರ್ವಮಜಾತಶತ್ರೋಃ|

05034002c ಯನ್ಮನ್ಯಸೇ ಪಥ್ಯಮದೀನಸತ್ತ್ವ

        ಶ್ರೇಯಸ್ಕರಂ ಬ್ರೂಹಿ ತದ್ವೈ ಕುರೂಣಾಂ||

ವಿದುರ! ಅದೀನಸತ್ವ! ಆಜಾತಶತ್ರುವಿಗೆ ಎಲ್ಲರಿಗೂ ಸರಿಯಾಗಿರುವುದು ಏನು ಮತ್ತು ಕುರುಗಳಿಗೆ ಶ್ರೇಯಸ್ಕರವಾದುದು ಏನು ಎಂದು ನಿನಗನ್ನಿಸುತ್ತದೆಯೋ ಅದನ್ನು ಯಥಾವತ್ತಾಗಿ ಹೇಳು.

05034003a ಪಾಪಾಶಂಕೀ ಪಾಪಮೇವಾನುಪಶ್ಯನ್

        ಪೃಚ್ಚಾಮಿ ತ್ವಾಂ ವ್ಯಾಕುಲೇನಾತ್ಮನಾಹಂ|

05034003c ಕವೇ ತನ್ಮೇ ಬ್ರೂಹಿ ಸರ್ವಂ ಯಥಾವನ್

        ಮನೀಷಿತಂ ಸರ್ವಮಜಾತಶತ್ರೋಃ||

ಮುಂದೆ ಕೆಡುಕಾಗಬಹುದೆಂದು ಶಂಕಿಸಿ ನಾನು ಹಿಂದೆ ಮಾಡಿದ ಪಾಪಗಳನ್ನೇ ಕಾಣುತ್ತಿದ್ದೇನೆ. ಕವೇ! ವ್ಯಾಕುಲಾತ್ಮನಾಗಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಅಜಾತಶತ್ರುವಿನ ಯೋಚನೆಯಲ್ಲಿರಬಹುದಾದುದೆಲ್ಲವನ್ನೂ ನನಗೆ ಯಥಾವತ್ತಾಗಿ ಹೇಳು.”

05034004 ವಿದುರ ಉವಾಚ|

05034004a ಶುಭಂ ವಾ ಯದಿ ವಾ ಪಾಪಂ ದ್ವೇಷ್ಯಂ ವಾ ಯದಿ ವಾ ಪ್ರಿಯಂ|

05034004c ಅಪೃಷ್ಟಸ್ತಸ್ಯ ತದ್ಬ್ರೂಯಾದ್ಯಸ್ಯ ನೇಚ್ಚೇತ್ಪರಾಭವಂ||

ವಿದುರನು ಹೇಳಿದನು: “ಯಾರ ಸೋಲನ್ನು ಬಯಸುವುದಿಲ್ಲವೋ ಅವನಿಗೆ, ಕೇಳದೇ ಇದ್ದರೂ, ಅದು ಅವನಿಗೆ ಶುಭವೆಂದೆನಿಸಲಿ ಅಥವಾ ಪಾಪವೆಂದೆನಿಸಲಿ, ದ್ವೇಷ ಅಥವಾ ಪ್ರಿಯವಾದುದೆಂದೆನಿಸಲಿ, ಸತ್ಯವನ್ನೇ ನುಡಿಯಬೇಕು.

05034005a ತಸ್ಮಾದ್ವಕ್ಷ್ಯಾಮಿ ತೇ ರಾಜನ್ಭವಮಿಚ್ಚನ್ಕುರೂನ್ಪ್ರತಿ|

05034005c ವಚಃ ಶ್ರೇಯಸ್ಕರಂ ಧರ್ಮ್ಯಂ ಬ್ರುವತಸ್ತನ್ನಿಬೋಧ ಮೇ||

ರಾಜನ್! ಆದುದರಿಂದ ಕುರುಗಳಿಗೆ ಒಳ್ಳೆಯದನ್ನೇ ಬಯಸಿ ನಿನಗೆ ಶ್ರೇಯಸ್ಕರವಾದ, ಧರ್ಮಯುಕ್ತ ಮಾತುಗಳನ್ನು ಹೇಳುತ್ತಿದ್ದೇನೆ. ಅರ್ಥಮಾಡಿಕೋ!

05034006a ಮಿಥ್ಯೋಪೇತಾನಿ ಕರ್ಮಾಣಿ ಸಿಧ್ಯೇಯುರ್ಯಾನಿ ಭಾರತ|

05034006c ಅನುಪಾಯಪ್ರಯುಕ್ತಾನಿ ಮಾ ಸ್ಮ ತೇಷು ಮನಃ ಕೃಥಾಃ||

ಭಾರತ! ಮೋಸ ಮತ್ತು ಕೆಟ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾಗುವ ಕರ್ಮಗಳಲ್ಲಿ ನಿನ್ನ ಮನಸ್ಸನ್ನು ತೊಡಗಿಸಬೇಡ.

05034007a ತಥೈವ ಯೋಗವಿಹಿತಂ ನ ಸಿಧ್ಯೇತ್ಕರ್ಮ ಯನ್ನೃಪ|

05034007c ಉಪಾಯಯುಕ್ತಂ ಮೇಧಾವೀ ನ ತತ್ರ ಗ್ಲಪಯೇನ್ಮನಃ||

ನೃಪ! ಸರಿಯಾಗಿ ಕೈಗೊಂಡ ಉತ್ತಮ ಕಾರ್ಯವು ಸಿದ್ಧಿಯನ್ನು ಕೊಡದಿದ್ದರೂ ಮೇಧಾವಿಯು ತನ್ನ ಮನಸ್ಸನ್ನು ಆಯಾಸಗೊಳ್ಳಲು ಬಿಡುವುದಿಲ್ಲ.

05034008a ಅನುಬಂಧಾನವೇಕ್ಷೇತ ಸಾನುಬಂಧೇಷು ಕರ್ಮಸು|

05034008c ಸಂಪ್ರಧಾರ್ಯ ಚ ಕುರ್ವೀತ ನ ವೇಗೇನ ಸಮಾಚರೇತ್||

ಕರ್ಮಗಳೊಂದಿಗೆ ಪರಿಣಾಮಗಳು ಜೋಡಿಕೊಂಡಿರುವುದರಿಂದ ಪರಿಣಾಮಗಳ ಕುರಿತು ಯೋಚಿಸಿ ಕಾರ್ಯಗಳನ್ನು ಕೈಗೊಳ್ಳಬೇಕು; ಅವಸರದಲ್ಲಿ ಮಾಡಬಾರದು.

05034009a ಅನುಬಂಧಂ ಚ ಸಂಪ್ರೇಕ್ಷ್ಯ ವಿಪಾಕಾಂಶ್ಚೈವ ಕರ್ಮಣಾಂ|

05034009c ಉತ್ಥಾನಮಾತ್ಮನಶ್ಚೈವ ಧೀರಃ ಕುರ್ವೀತ ವಾ ನ ವಾ||

ಕರ್ಮಗಳಿಂದ ಮುಂದಾಗುವ ಪರಿಣಾಮಗಳನ್ನು ಮತ್ತು ಅವುಗಳನ್ನು ಸಹಿಸಿಕೊಳ್ಳಲು ತನ್ನಲ್ಲಿರುವ ಶಕ್ತಿಯನ್ನು ನೋಡಿಕೊಂಡು ಅದನ್ನು ಮಾಡಬೇಕೋ ಅಥವಾ ಇಲ್ಲವೋ ಎಂದು ನಿರ್ಧರಿಸಬೇಕು.

05034010a ಯಃ ಪ್ರಮಾಣಂ ನ ಜಾನಾತಿ ಸ್ಥಾನೇ ವೃದ್ಧೌ ತಥಾ ಕ್ಷಯೇ|

05034010c ಕೋಶೇ ಜನಪದೇ ದಂಡೇ ನ ಸ ರಾಜ್ಯೇಽವತಿಷ್ಠತೇ||

ಯಾವ ರಾಜನಿಗೆ ಸ್ಥಾನ, ಲಾಭ, ನಷ್ಟ, ಹಣ, ಜನರು ಮತ್ತು ಶಿಕ್ಷೆಗಳ ಪ್ರಮಾಣಗಳು ತಿಳಿದಿಲ್ಲವೋ ಅವನು ಬಹುಕಾಲ ರಾಜನಾಗಿ ಉಳಿಯುವುದಿಲ್ಲ.

05034011a ಯಸ್ತ್ವೇತಾನಿ ಪ್ರಮಾಣಾನಿ ಯಥೋಕ್ತಾನ್ಯನುಪಶ್ಯತಿ|

05034011c ಯುಕ್ತೋ ಧರ್ಮಾರ್ಥಯೋರ್ಜ್ಞಾನೇ ಸ ರಾಜ್ಯಮಧಿಗಚ್ಚತಿ||

ಯಾರು ಈ ಹಿಂದೆ ಹೇಳಿದ ಪ್ರಮಾಣಗಳನ್ನು ಧರ್ಮಾರ್ಥಯುಕ್ತನಾಗಿ ತಿಳಿದುಕೊಂಡು ನಡೆಯುತ್ತಾನೋ ಅವನು ರಾಜತ್ವವನ್ನು ಪಡೆಯುತ್ತಾನೆ.

05034012a ನ ರಾಜ್ಯಂ ಪ್ರಾಪ್ತಮಿತ್ಯೇವ ವರ್ತಿತವ್ಯಮಸಾಂಪ್ರತಂ|

05034012c ಶ್ರಿಯಂ ಹ್ಯವಿನಯೋ ಹಂತಿ ಜರಾ ರೂಪಮಿವೋತ್ತಮಂ||

“ರಾಜ್ಯವನ್ನು ಪಡೆದಿದ್ದೇನೆ!” ಎಂದು ಒಳ್ಳೆಯದಾಗಿ ನಡೆದುಕೊಳ್ಳದೇ ಇದ್ದರೆ, ಆ ಅವಿನಯವು, ವೃದ್ಧಾಪ್ಯವು ಉತ್ತಮ ರೂಪವನ್ನು ಹೇಗೋ ಹಾಗೆ, ಸಂಪತ್ತನ್ನು ನಾಶಗೊಳಿಸುತ್ತದೆ.

05034013a ಭಕ್ಷ್ಯೋತ್ತಮಪ್ರತಿಚ್ಚನ್ನಂ ಮತ್ಸ್ಯೋ ಬಡಿಶಮಾಯಸಂ|

05034013c ರೂಪಾಭಿಪಾತೀ ಗ್ರಸತೇ ನಾನುಬಂಧಮವೇಕ್ಷತೇ||

ಒಂದು ಮೀನು, ತೋರುವಿಕೆಗೆ ಮಾತ್ರ ಹಾರಿ, ಉತ್ತಮ ಆಹಾರದಲ್ಲಿ ಮುಚ್ಚಿಟ್ಟಿರುವ ಉಕ್ಕಿನ ಮುಳ್ಳನ್ನು, ಅದರ ಪರಿಣಾಮವೇನಾಗಬಹುದು ಎಂದು ಯೋಚಿಸದೇ ನುಂಗುತ್ತದೆ.

05034014a ಯಚ್ಚಕ್ಯಂ ಗ್ರಸಿತುಂ ಗ್ರಸ್ಯಂ ಗ್ರಸ್ತಂ ಪರಿಣಮೇಚ್ಚ ಯತ್|

05034014c ಹಿತಂ ಚ ಪರಿಣಾಮೇ ಯತ್ತದದ್ಯಂ ಭೂತಿಮಿಚ್ಚತಾ||

ಒಳ್ಳೆಯದನ್ನು ಬಯಸುವವನು ಏನನ್ನು ತಿನ್ನಬಹುದೋ ಅದನ್ನು ಹುಡುಕುತ್ತಾನೆ, ತಿಂದ ಮೇಲೆ ಅದು ಹೇಗೆ ಜೀರ್ಣವಾಗುತ್ತದೆ ಎನ್ನುವುದರ ಕುರಿತು ಯೋಚಿಸುತ್ತಾನೆ, ಮತ್ತು ಜೀರ್ಣಗೊಂಡ ನಂತರ ಈ ಆಹಾರವು ಒಳ್ಳೆಯದನ್ನು ಉಂಟುಮಾಡಬಲ್ಲದೋ ಎಂದೂ ಯೋಚಿಸುತ್ತಾನೆ.

05034015a ವನಸ್ಪತೇರಪಕ್ವಾನಿ ಫಲಾನಿ ಪ್ರಚಿನೋತಿ ಯಃ|

05034015c ಸ ನಾಪ್ನೋತಿ ರಸಂ ತೇಭ್ಯೋ ಬೀಜಂ ಚಾಸ್ಯ ವಿನಶ್ಯತಿ||

ಮರದಿಂದ ಇನ್ನೂ ಹಣ್ಣಾಗಿರದ ಫಲವನ್ನು ಕಿತ್ತರೆ ಅದರ ರಸವೂ ಸಿಗುವುದಿಲ್ಲ ಮತ್ತು ಅದರಲ್ಲಿರುವ ಬೀಜವೂ ನಷ್ಟವಾಗುತ್ತದೆ.

05034016a ಯಸ್ತು ಪಕ್ವಮುಪಾದತ್ತೇ ಕಾಲೇ ಪರಿಣತಂ ಫಲಂ|

05034016c ಫಲಾದ್ರಸಂ ಸ ಲಭತೇ ಬೀಜಾಚ್ಚೈವ ಫಲಂ ಪುನಃ||

ಆದರೆ ಹಣ್ಣಾದ ಕಾಲದಲ್ಲಿ ಹಣ್ಣನ್ನು ಕಿತ್ತರೆ ಫಲದಿಂದ ರಸವು ದೊರೆಯುತ್ತದೆ ಮತ್ತು ಬೀಜದಿಂದ ಪುನಃ ಫಲವು ದೊರೆಯುತ್ತದೆ.

05034017a ಯಥಾ ಮಧು ಸಮಾದತ್ತೇ ರಕ್ಷನ್ಪುಷ್ಪಾಣಿ ಷಟ್ಪದಃ|

05034017c ತದ್ವದರ್ಥಾನ್ಮನುಷ್ಯೇಭ್ಯ ಆದದ್ಯಾದವಿಹಿಂಸಯಾ||

ಜೇನು ಹುಳುಗಳು ಹೇಗೆ ಹೂಗಳನ್ನು ರಕ್ಷಿಸಿ ಜೇನನ್ನು ಮಾತ್ರ ಶೇಕರಿಸುತ್ತವೆಯೋ ಹಾಗೆ ಮನುಷ್ಯನೂ ಕೂಡ ಇತರರನ್ನು ಹಿಂಸಿಸದೇ ಸಂಪತ್ತನ್ನು ಗಳಿಸಬೇಕು.

05034018a ಪುಷ್ಪಂ ಪುಷ್ಪಂ ವಿಚಿನ್ವೀತ ಮೂಲಚ್ಚೇದಂ ನ ಕಾರಯೇತ್|

05034018c ಮಾಲಾಕಾರ ಇವಾರಾಮೇ ನ ಯಥಾಂಗಾರಕಾರಕಃ||

ಮಾಲೆಗಳನ್ನು ಕಟ್ಟಿ ಮಾರುವವನಂತೆ ಹೂವುಗಳನ್ನು ಮಾತ್ರ ಕೀಳಬೇಕೇ ಹೊರತು, ಇದ್ದಲು ಮಾಡಿ ಮಾರುವವನಂತೆ ಬೇರಿನ ಸಹಿತ ಗಿಡವನ್ನು ಕೀಳಬಾರದು.

05034019a ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ|

05034019c ಇತಿ ಕರ್ಮಾಣಿ ಸಂಚಿಂತ್ಯ ಕುರ್ಯಾದ್ವಾ ಪುರುಷೋ ನ ವಾ||

ಇದನ್ನು ಮಾಡಿದರೆ ನನಗೇನಾಗುತ್ತದೇ? ಮಾಡದೇ ಇದ್ದರೆ ನನಗೆ ಏನಾಗುತ್ತದೆ? ಎಂದು ಪುರುಷನು ಪ್ರತಿಯೊಂದು ಕರ್ಮದ ಕುರಿತೂ ಆಲೋಚಿಸಿ ಅದನ್ನು ಮಾಡಬೇಕು ಅಥವಾ ಮಾಡಬಾರದು.

05034020a ಅನಾರಭ್ಯಾ ಭವಂತ್ಯರ್ಥಾಃ ಕೇ ಚಿನ್ನಿತ್ಯಂ ತಥಾಗತಾಃ|

05034020c ಕೃತಃ ಪುರುಷಕಾರೋಽಪಿ ಭವೇದ್ಯೇಷು ನಿರರ್ಥಕಃ||

ಕೆಲವೊಂದು ವಿಷಯಗಳ ಕುರಿತು ಏನನ್ನೂ ಮಾಡಬಾರದು, ಮತ್ತು ಅವು ಯಾವಾಗಲೂ ಹಾಗೆಯೇ ಇರುತ್ತವೆ. ಏಕೆಂದರೆ ಅದರ ಕುರಿತು ಪುರುಷನು ಎಷ್ಟೇ ಮಾಡಿದರೂ ಅದು ನಿರರ್ಥಕವಾಗುತ್ತದೆ.

05034021a ಕಾಂಶ್ಚಿದರ್ಥಾನ್ನರಃ ಪ್ರಾಜ್ಞೋ ಲಘುಮೂಲಾನ್ಮಹಾಫಲಾನ್|

05034021c ಕ್ಷಿಪ್ರಮಾರಭತೇ ಕರ್ತುಂ ನ ವಿಘ್ನಯತಿ ತಾದೃಶಾನ್||

ಇನ್ನು ಕೆಲವು ಕರ್ಮಗಳು ಸ್ವಲ್ಪವೇ ಬೇರುಗಳಿದ್ದರೂ ಹೆಚ್ಚಿನ ಫಲವನ್ನು ನೀಡುವಂಥಹುದು. ಪ್ರಾಜ್ಞ ನರನು ಅಂಥವುಗಳನ್ನು ಕ್ಷಿಪ್ರವಾಗಿ ಕೈಗೊಳ್ಳುತ್ತಾನೆ ಮತ್ತು ಅಂಥವುಗಳಿಗೆ ವಿಘ್ನವನ್ನು ತರುವುದಿಲ್ಲ.

05034022a ಋಜು ಪಶ್ಯತಿ ಯಃ ಸರ್ವಂ ಚಕ್ಷುಷಾನುಪಿಬನ್ನಿವ|

05034022c ಆಸೀನಮಪಿ ತೂಷ್ಣೀಕಮನುರಜ್ಯಂತಿ ತಂ ಪ್ರಜಾಃ||

ಕಣ್ಣುಗಳಿಂದಲೇ ಕುಡಿಯುವಂತೆ ಯಾರು ಎಲ್ಲವನ್ನೂ ನೇರವಾಗಿ ಕಾಣುತ್ತಾರೋ ಅವರು ಸುಮ್ಮನೆ ಕುಳಿತುಕೊಂಡಿದ್ದರೂ ಪ್ರಜೆಗಳು ಸಂತೋಷಗೊಳ್ಳುತ್ತಾರೆ.

05034023a ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಂ|

05034023c ಪ್ರಸಾದಯತಿ ಲೋಕಂ ಯಃ ತಂ ಲೋಕೋಽನುಪ್ರಸೀದತಿ||

ಯಾರು ನಾಲ್ಕು ವಿಧಗಳಿಂದ - ದೃಷ್ಟಿ, ಯೋಚನೆ, ಮಾತು ಮತ್ತು ಕೆಲಸ - ಲೋಕವನ್ನು ಪ್ರೀತಿಸುತ್ತಾನೋ ಅವನನ್ನು ಲೋಕವೂ ಪ್ರೀತಿಸುತ್ತದೆ.

05034024a ಯಸ್ಮಾತ್ತ್ರಸ್ಯಂತಿ ಭೂತಾನಿ ಮೃಗವ್ಯಾಧಾನ್ಮೃಗಾ ಇವ|

05034024c ಸಾಗರಾಂತಾಮಪಿ ಮಹೀಂ ಲಬ್ಧ್ವಾ ಸ ಪರಿಹೀಯತೇ||

ಆದರೆ ಅವನಿಗೆ, ಬೇಟೆಗಾರನಿಗೆ ಜಿಂಕೆಗಳು ಹೇಗೋ ಹಾಗೆ, ಪ್ರಜೆಗಳು ಹೆದರಿದರೆ, ಅವನು ಸಾಗರದ ಅಂಚಿನವರೆಗಿನ ಭೂಮಿಯನ್ನು ಪಡೆದಿದ್ದರೂ ತಿರಸ್ಕರಿಸಲ್ಪಡುತ್ತಾನೆ.

05034025a ಪಿತೃಪೈತಾಮಹಂ ರಾಜ್ಯಂ ಪ್ರಾಪ್ತವಾನ್ಸ್ವೇನ ತೇಜಸಾ|

05034025c ವಾಯುರಭ್ರಮಿವಾಸಾದ್ಯ ಭ್ರಂಶಯತ್ಯನಯೇ ಸ್ಥಿತಃ||

ತನ್ನದೇ ತೇಜಸ್ಸಿನಿಂದ ಪಿತೃಪೈತಾಮಹರ ರಾಜ್ಯವನ್ನು ಪಡೆಯಬಹುದು. ಆದರೆ ಅವನು ಅನ್ಯಾಯದ ದಾರಿಯಲ್ಲಿ ನಡೆದರೆ ಭಿರುಗಾಳಿಯು ಮೋಡವನ್ನು ಚದುರಿಸುವಂತೆ ಅದನ್ನು ತುಂಡರಿಸಿಬಿಡಬಹುದು.

05034026a ಧರ್ಮಮಾಚರತೋ ರಾಜ್ಞಾಃ ಸದ್ಭಿಶ್ಚರಿತಮಾದಿತಃ|

05034026c ವಸುಧಾ ವಸುಸಂಪೂರ್ಣಾ ವರ್ಧತೇ ಭೂತಿವರ್ಧನೀ||

ಮೊದಲಿನಿಂದಲೂ ಸಾಧುಗಳು ಆಚರಿಸಿ ಕೊಂಡು ಬಂದಿರುವ ಧರ್ಮವನ್ನು ಆಚರಿಸುವ ರಾಜನ ಭೂಮಿಯು ಅಭಿವೃದ್ಧಿ ಹೊಂದುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

05034027a ಅಥ ಸಂತ್ಯಜತೋ ಧರ್ಮಮಧರ್ಮಂ ಚಾನುತಿಷ್ಠತಃ|

05034027c ಪ್ರತಿಸಂವೇಷ್ಟತೇ ಭೂಮಿರಗ್ನೌ ಚರ್ಮಾಹಿತಂ ಯಥಾ||

ಆದರೆ ಧರ್ಮವನ್ನು ತೊರೆದು ಅಧರ್ಮವವನ್ನು ಅನುಸರಿಸುವವನ ಆಸ್ತಿಯು ಬೆಂಕಿಗೆ ತಗುಲಿದ ಚರ್ಮದಂತೆ ಮುದುಡಿಕೊಳ್ಳುವುದು.

05034028a ಯ ಏವ ಯತ್ನಃ ಕ್ರಿಯತೇ ಪರರಾಷ್ಟ್ರಾವಮರ್ದನೇ|

05034028c ಸ ಏವ ಯತ್ನಃ ಕರ್ತವ್ಯಃ ಸ್ವರಾಷ್ಟ್ರಪರಿಪಾಲನೇ||

ಶತ್ರುಗಳ ರಾಷ್ಟ್ರವನ್ನು ಸದೆಬಡಿಯಲು ಎಷ್ಟು ಪ್ರಯತ್ನ ಮಾಡುತ್ತೇವೆಯೋ ಅಷ್ಟೇ ಪ್ರಯತ್ನವನ್ನು ತನ್ನ ರಾಷ್ಟ್ರದ ಪರಿಪಾಲನೆಯ ಕರ್ತವ್ಯದಲ್ಲಿಯೂ ಮಾಡಬೇಕು.

05034029a ಧರ್ಮೇಣ ರಾಜ್ಯಂ ವಿಂದೇತ ಧರ್ಮೇಣ ಪರಿಪಾಲಯೇತ್|

05034029c ಧರ್ಮಮೂಲಾಂ ಶ್ರಿಯಂ ಪ್ರಾಪ್ಯ ನ ಜಹಾತಿ ನ ಹೀಯತೇ||

ಧರ್ಮದಿಂದ ರಾಜ್ಯವನ್ನು ಸ್ಥಾಪಿಸಬೇಕು, ಧರ್ಮದಿಂದ ಅದನ್ನು ಪರಿಪಾಲಿಸಬೇಕು. ಧರ್ಮಮೂಲವಾದ ಶ್ರೀಯು ನಷ್ಟವಾಗುವುದಿಲ್ಲ. ಜಯಿಸಲ್ಪಡುವುದೂ ಇಲ್ಲ.

05034030a ಅಪ್ಯುನ್ಮತ್ತಾತ್ಪ್ರಲಪತೋ ಬಾಲಾಚ್ಚ ಪರಿಸರ್ಪತಃ|

05034030c ಸರ್ವತಃ ಸಾರಮಾದದ್ಯಾದಶ್ಮಭ್ಯ ಇವ ಕಾಂಚನಂ||

ಕಲ್ಲಿನಿಂದ ಕಾಂಚನವನ್ನು ಹೇಗೋ ಹಾಗೆ ಹುಚ್ಚನ ಪ್ರಲಾಪದಿಂದಾಗಲೀ ಹರಿದಾಡುವ ಮಗುವಿನಿಂದಾಗಲೀ ಸಾರವುಳ್ಳ ಏನಾದರೂ ದೊರೆಯುತ್ತದೆಯೇ?

05034031a ಸುವ್ಯಾಹೃತಾನಿ ಸುಧಿಯಾಂ ಸುಕೃತಾನಿ ತತಸ್ತತಃ|

05034031c ಸಂಚಿನ್ವನ್ಧೀರ ಆಸೀತ ಶಿಲಾಹಾರೀ ಶಿಲಂ ಯಥಾ||

ತಿಳಿದವನು, ಶಿಲಾಹಾರಿಯುವ ಶಿಲವನ್ನು ಹೇಗೋ ಹಾಗೆ, ಸಾಧುಗಳು ಆಗಾಗ ಮಾಡಿದ ಸುವ್ಯವಹಾರ-ಸುಕೃತಗಳನ್ನು ಒಟ್ಟು ಹಾಕಿಕೊಂಡು ಮೆಲಕು ಹಾಕುತ್ತಿರುತ್ತಾನೆ.

05034032a ಗಂಧೇನ ಗಾವಃ ಪಶ್ಯಂತಿ ವೇದೈಃ ಪಶ್ಯಂತಿ ಬ್ರಾಹ್ಮಣಾಃ|

05034032c ಚಾರೈಃ ಪಶ್ಯಂತಿ ರಾಜಾನಶ್ಚಕ್ಷುರ್ಭ್ಯಾಮಿತರೇ ಜನಾಃ||

ಗೋವುಗಳು ವಾಸನೆಯಿಂದ ನೋಡುತ್ತವೆ, ಬ್ರಾಹ್ಮಣರು ವೇದಗಳ ಮೂಲಕ ನೋಡುತ್ತಾರೆ, ರಾಜರು ಚಾರರ ಮೂಲಕ ನೋಡುತ್ತಾರೆ ಮತ್ತು ಇತರ ಜನರೆಲ್ಲರೂ ಕಣ್ಣುಗಳಿಂದ ನೋಡುತ್ತಾರೆ.

05034033a ಭೂಯಾಂಸಂ ಲಭತೇ ಕ್ಲೇಶಂ ಯಾ ಗೌರ್ಭವತಿ ದುರ್ದುಹಾ|

05034033c ಅಥ ಯಾ ಸುದುಹಾ ರಾಜನ್ನೈವ ತಾಂ ವಿನಯಂತ್ಯಪಿ||

ಹಾಲನ್ನು ಕೊಡದೇ ಇರುವ ಗೋವು ಕಷ್ಟವನ್ನು ಅನುಭವಿಸಬಹುದು. ಆದರೆ, ರಾಜನ್! ಉತ್ತಮ ಹಾಲುಕರೆಯುವವನನ್ನು ಯಾರೂ ಬಗ್ಗಿಸಲಾರರು.

05034034a ಯದತಪ್ತಂ ಪ್ರಣಮತಿ ನ ತತ್ಸಂತಾಪಯಂತ್ಯಪಿ|

05034034c ಯಚ್ಚ ಸ್ವಯಂ ನತಂ ದಾರು ನ ತತ್ಸಮ್ನಾಮಯಂತ್ಯಪಿ||

ಕಾಯಿಸದೆಯೇ ಬಗ್ಗಿಸಬಹುದಾದುದನ್ನು ಜನರು ಕಾಯಿಸುವುದಿಲ್ಲ. ಸ್ವಯಂ ಬಗ್ಗುವ ಗಿಡವನ್ನು ಬಗ್ಗಿಸಲು ಬಲವನ್ನು ಉಪಯೋಗಿಸುವುದಿಲ್ಲ.

05034035a ಏತಯೋಪಮಯಾ ಧೀರಃ ಸಮ್ನಮೇತ ಬಲೀಯಸೇ|

05034035c ಇಂದ್ರಾಯ ಸ ಪ್ರಣಮತೇ ನಮತೇ ಯೋ ಬಲೀಯಸೇ||

ಈ ಉಪಮೇಯದ ಪ್ರಕಾರ ಧೀರನು ತನಗಿಂತ ಹೆಚ್ಚಿನ ಬಲಶಾಲಿಗೆ ಮಣಿಯುತ್ತಾನೆ. ಬಲಶಾಲಿಗೆ ಮಣಿಯುವವರನ್ನು ಇಂದ್ರನೂ ನಮಸ್ಕರಿಸುತ್ತಾನೆ.

05034036a ಪರ್ಜನ್ಯನಾಥಾಃ ಪಶವೋ ರಾಜಾನೋ ಮಿತ್ರಬಾಂಧವಾಃ|

05034036c ಪತಯೋ ಬಾಂಧವಾಃ ಸ್ತ್ರೀಣಾಂ ಬ್ರಾಹ್ಮಣಾ ವೇದಬಾಂಧವಾಃ||

ಪಶುಗಳಿಗೆ ಮಳೆಯು ನಾಥ, ರಾಜನಿಗೆ ಮಿತ್ರರೇ ಬಾಂಧವರು, ಸ್ತ್ರೀಯರಿಗೆ ಪತಿಗಳೇ ಬಾಂಧವರು, ಮತ್ತು ಬ್ರಾಹ್ಮಣರಿಗೆ ವೇದಗಳೇ ಬಾಂಧವರು.

05034037a ಸತ್ಯೇನ ರಕ್ಷ್ಯತೇ ಧರ್ಮೋ ವಿದ್ಯಾ ಯೋಗೇನ ರಕ್ಷ್ಯತೇ|

05034037c ಮೃಜಯಾ ರಕ್ಷ್ಯತೇ ರೂಪಂ ಕುಲಂ ವೃತ್ತೇನ ರಕ್ಷ್ಯತೇ||

ಧರ್ಮವು ಸತ್ಯದಿಂದ ರಕ್ಷಿಸಲ್ಪಡುತ್ತದೆ, ವಿದ್ಯೆಯು ಯೋಗದಿಂದ ರಕ್ಷಿಸಲ್ಪಡುತ್ತದೆ, ತೊಳೆಯುವುದರಿಂದ ರೂಪವು ರಕ್ಷಿಸಲ್ಪಡುತ್ತದೆ ಮತ್ತು ಕುಲವು ನಡತೆಯಿಂದ ರಕ್ಷಿಸಲ್ಪಡುತ್ತದೆ.

05034038a ಮಾನೇನ ರಕ್ಷ್ಯತೇ ಧಾನ್ಯಮಶ್ವಾನ್ರಕ್ಷತ್ಯನುಕ್ರಮಃ|

05034038c ಅಭೀಕ್ಷ್ಣದರ್ಶನಾದ್ಗಾವಃ ಸ್ತ್ರಿಯೋ ರಕ್ಷ್ಯಾಃ ಕುಚೇಲತಃ||

ಧಾನ್ಯವು ಅಳತೆಯಿಂದ ರಕ್ಷಿಸಲ್ಪಡುತ್ತದೆ, ಅಶ್ವಗಳು ವ್ಯಾಯಾಮದಿಂದ ರಕ್ಷಿಸಲ್ಪಡುತ್ತವೆ, ಕಾಯುವುದರಿಂದ ಗೋವುಗಳು ರಕ್ಷಿಸಲ್ಪಡುತ್ತವೆ ಮತ್ತು ಸ್ತ್ರೀಯರು ಉಡುಪುಗಳಿಂದ ರಕ್ಷಿಸಲ್ಪಡುತ್ತಾರೆ.

05034039a ನ ಕುಲಂ ವೃತ್ತಹೀನಸ್ಯ ಪ್ರಮಾಣಮಿತಿ ಮೇ ಮತಿಃ|

05034039c ಅಂತ್ಯೇಷ್ವಪಿ ಹಿ ಜಾತಾನಾಂ ವೃತ್ತಮೇವ ವಿಶಿಷ್ಯತೇ||

ಉತ್ತಮ ನಡತೆಯಿಲ್ಲದವನಿಗೆ ಕುಲವು ಪ್ರಮಾಣವಲ್ಲವೆಂದು ನನ್ನ ಅಭಿಪ್ರಾಯ. ಏಕೆಂದರೆ ಹೀನ ಕುಲದಲ್ಲಿ ಜನಿಸಿದ್ದರೂ ಅವರ ನಡತೆಯು ವಿಶೇಷವಾಗಿರಬಹುದು.

05034040a ಯ ಈರ್ಷ್ಯುಃ ಪರವಿತ್ತೇಷು ರೂಪೇ ವೀರ್ಯೇ ಕುಲಾನ್ವಯೇ|

05034040c ಸುಖೇ ಸೌಭಾಗ್ಯಸತ್ಕಾರೇ ತಸ್ಯ ವ್ಯಾಧಿರನಂತಕಃ||

ಇನ್ನೊಬ್ಬರ ಸಂಪತ್ತು, ರೂಪ, ವೀರ್ಯ, ಉತ್ತಮ ಕುಲ, ಸುಖ, ಸೌಭಾಗ್ಯ ಮತ್ತು ಸತ್ಕಾರಗಳ ಬಗ್ಗೆ ಅಸೂಯೆ ಪಡುವವರ ವ್ಯಾಧಿಗೆ ಅಂತ್ಯವಿಲ್ಲ.

05034041a ಅಕಾರ್ಯಕರಣಾದ್ಭೀತಃ ಕಾರ್ಯಾಣಾಂ ಚ ವಿವರ್ಜನಾತ್|

05034041c ಅಕಾಲೇ ಮಂತ್ರಭೇದಾಚ್ಚ ಯೇನ ಮಾದ್ಯೇನ್ನ ತತ್ಪಿಬೇತ್||

ಮಾಡಬಾರದ್ದನ್ನು ಮಾಡಿಯೇನು ಎಂದು ಭಯವಿರುವಾಗ, ಅಕಾಲದಲ್ಲಿ ಗೊಂದಲಕ್ಕೀಡಾದಾಗ, ಮತ್ತೇರಿಸುವ ಏನನ್ನೂ ಕುಡಿಯಬೇಡ.

05034042a ವಿದ್ಯಾಮದೋ ಧನಮದಸ್ತೃತೀಯೋಽಭಿಜನೋ ಮದಃ|

05034042c ಏತೇ ಮದಾವಲಿಪ್ತಾನಾಮೇತ ಏವ ಸತಾಂ ದಮಾಃ|

ವಿದ್ಯಾಮದ, ಧನಮದ ಮತ್ತು ಮೂರನೆಯದಾಗಿ ಜನಬೆಂಬಲದ ಮದ. ಇವು ಪುರುಷನನ್ನು ಮುಳುಗಿಸುವ ಮದಗಳು. ಇವುಗಳನ್ನೇ ಸಜ್ಜನರು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ.

05034043a ಅಸಂತೋಽಭ್ಯರ್ಥಿತಾಃ ಸದ್ಭಿಃ ಕಿಂ ಚಿತ್ಕಾರ್ಯಂ ಕದಾ ಚನ|

05034043c ಮನ್ಯಂತೇ ಸಂತಮಾತ್ಮಾನಮಸಂತಮಪಿ ವಿಶ್ರುತಂ||

ಸಂತರು ಅಸಂತರಲ್ಲಿ ಏನಾದರೂ ಒಂದು ಕೆಲಸವನ್ನು ಕೇಳಿದರೂ ಕೂಡ, ಅವರು ಅಸಂತರೆಂದು ವಿಶ್ರುತರಾಗಿದ್ದರೂ ತಮ್ಮನ್ನು ತಾವೇ ಸಂತರೆಂದು ತಿಳಿದುಕೊಂಡುಬಿಡುತ್ತಾರೆ.

05034044a ಗತಿರಾತ್ಮವತಾಂ ಸಂತಃ ಸಂತ ಏವ ಸತಾಂ ಗತಿಃ|

05034044c ಅಸತಾಂ ಚ ಗತಿಃ ಸಂತೋ ನ ತ್ವಸಂತಃ ಸತಾಂ ಗತಿಃ||

ಸಂತರು ಆತ್ಮವಂತರ ಗತಿ, ಸಂತರು ಸತ್ಯವಂತರ ಗತಿ. ಅಸತರನ್ನು ಸಂತರು ನಡೆಸಬಲ್ಲರು ಆದರೆ ಅಸಂತರು ಸಂತರನ್ನು ಎಂದೂ ನಡೆಸುವುದಿಲ್ಲ.

05034045a ಜಿತಾ ಸಭಾ ವಸ್ತ್ರವತಾ ಸಮಾಶಾ ಗೋಮತಾ ಜಿತಾ|

05034045c ಅಧ್ವಾ ಜಿತೋ ಯಾನವತಾ ಸರ್ವಂ ಶೀಲವತಾ ಜಿತಂ||

ಉತ್ತಮ ಉಡುಪನ್ನು ಧರಿಸಿದವನು ಸಭೆಯನ್ನು ಗೆಲ್ಲಬಹುದು. ಹಲವಾರು ಗೋವುಗಳನ್ನು ಹೊಂದಿದ ಶ್ರೀಮಂತನು ಬಡವರನ್ನು ಗೆಲ್ಲಬಹುದು. ವಾಹನವಿರುವವನು ದಾರಿಯನ್ನು ಗೆಲ್ಲಬಹುದು. ಆದರೆ ಶೀಲವಂತನು ಎಲ್ಲವನ್ನೂ ಗೆಲ್ಲುತ್ತಾನೆ.

05034046a ಶೀಲಂ ಪ್ರಧಾನಂ ಪುರುಷೇ ತದ್ಯಸ್ಯೇಹ ಪ್ರಣಶ್ಯತಿ|

05034046c ನ ತಸ್ಯ ಜೀವಿತೇನಾರ್ಥೋ ನ ಧನೇನ ನ ಬಂಧುಭಿಃ||

ಪುರುಷನಿಗೆ ಶೀಲವೇ ಪ್ರಧಾನ. ಅದನ್ನು ಕಳೆದುಕೊಂಡರೆ ಅವನಿಗೆ ಜೀವನದಿಂದಲೂ, ಸಂಪತ್ತಿನಿಂದಲೂ, ಬಂಧುಗಳಿಂದಲೂ ಪ್ರಯೋಜನವಾಗುವುದಿಲ್ಲ.

05034047a ಆಢ್ಯಾನಾಂ ಮಾಂಸಪರಮಂ ಮಧ್ಯಾನಾಂ ಗೋರಸೋತ್ತರಂ|

05034047c ಲವಣೋತ್ತರಂ ದರಿದ್ರಾಣಾಂ ಭೋಜನಂ ಭರತರ್ಷಭ||

ಭರತರ್ಷಭ! ಅತಿ ಶ್ರೀಮಂತನಿಗೆ ಮಾಂಸವು ಪರಮ ಭೋಜನ, ಮಧ್ಯಮರಿಗೆ ಹಸುವಿನ ಹಾಲು ಮತ್ತು ದರಿದ್ರರಿಗೆ ಉಪ್ಪೇ ಪರಮ ಭೋಜನ.

05034048a ಸಂಪನ್ನತರಮೇವಾನ್ನಂ ದರಿದ್ರಾ ಭುಂಜತೇ ಸದಾ|

05034048c ಕ್ಷುತ್ಸ್ವಾದುತಾಂ ಜನಯತಿ ಸಾ ಚಾಢ್ಯೇಷು ಸುದುರ್ಲಭಾ||

ಆದರೂ ದರಿದ್ರರು ಚೆನ್ನಾಗಿ ಊಟಮಾಡುತ್ತಾರೆ; ಹಸಿವೆಯು ಅವರ ಊಟವನ್ನು ರುಚಿಯಾಗಿಸುತ್ತದೆ. ಅದು ಧನಿಕರಿಗೆ ತುಂಬಾ ದುರ್ಲಭ.

05034049a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ|

05034049c ದರಿದ್ರಾಣಾಂ ತು ರಾಜೇಂದ್ರ ಅಪಿ ಕಾಷ್ಠಂ ಹಿ ಜೀರ್ಯತೇ||

ರಾಜೇಂದ್ರ! ಲೋಕದಲ್ಲಿ ಶ್ರೀಮಂತರಿಗೆ ಚೆನ್ನಾಗಿ ಹಸಿವೆಯಾಗುವುದಿಲ್ಲ ಎಂದು ಕಂಡುಬರುತ್ತದೆ. ಆದರೆ ದರಿದ್ರರು ಕಟ್ಟಿಗೆಯನ್ನೂ ಕೂಡ ಜೀರ್ಣಿಸಿಕೊಳ್ಳಬಲ್ಲರು.

05034050a ಅವೃತ್ತಿರ್ಭಯಮಂತ್ಯಾನಾಂ ಮಧ್ಯಾನಾಂ ಮರಣಾದ್ಭಯಂ|

05034050c ಉತ್ತಮಾನಾಂ ತು ಮರ್ತ್ಯಾನಾಮವಮಾನಾತ್ಪರಂ ಭಯಂ||

ಕೆಳಗಿನವರಿಗೆ ಕೆಲಸ ದೊರೆಯದೇ ಇರುವುದರ ಭಯ ಮತ್ತು ಮಧ್ಯಮರಿಗೆ ಮರಣದ ಭಯ. ಉತ್ತಮ ಜನರಿಗೆ ಅವಮಾನವೇ ಪರಮ ಭಯ.

05034051a ಐಶ್ವರ್ಯಮದಪಾಪಿಷ್ಠಾ ಮದಾಃ ಪಾನಮದಾದಯಃ|

05034051c ಐಶ್ವರ್ಯಮದಮತ್ತೋ ಹಿ ನಾಪತಿತ್ವಾ ವಿಬುಧ್ಯತೇ||

ಮದ್ಯಪಾನದಿಂದುಟಾಗುವ ಮತ್ತಿಗಿಂತ ಐಶ್ವರ್ಯಮದವು ಪಾಪಿಷ್ಠವಾದುದು. ಐಶ್ವರ್ಯ ಮದದಿಂದ ಮತ್ತನಾದವನಿಗೆ ಬಿದ್ದರೂ ಬುದ್ಧಿ ಬರುವುದಿಲ್ಲ.

05034052a ಇಂದ್ರಿಯೈರಿಂದ್ರಿಯಾರ್ಥೇಷು ವರ್ತಮಾನೈರನಿಗ್ರಹೈಃ|

05034052c ತೈರಯಂ ತಾಪ್ಯತೇ ಲೋಕೋ ನಕ್ಷತ್ರಾಣಿ ಗ್ರಹೈರಿವ||

ತಮ್ಮ ಆಸೆಗಳನ್ನು ಪೂರೈಸಲು ಕಡಿವಾಣವಿಲ್ಲದೇ ನಡೆದುಕೊಳ್ಳುವವರನ್ನು, ನಕ್ಷತ್ರಗಳನ್ನು ಗ್ರಹಗಳು ಹೇಗೋ ಹಾಗೆ, ಇಂದ್ರಿಯಗಳು ಕಾಡುತ್ತವೆ.

05034053a ಯೋ ಜಿತಃ ಪಂಚವರ್ಗೇಣ ಸಹಜೇನಾತ್ಮಕರ್ಶಿನಾ|

05034053c ಆಪದಸ್ತಸ್ಯ ವರ್ಧಂತೇ ಶುಕ್ಲಪಕ್ಷ ಇವೋಡುರಾಟ್||

ಯಾರ ಸಹಜವಾಗಿರುವ ಐದು ಇಂದ್ರಿಯಗಳು ಆತ್ಮವನ್ನು ಗೆದ್ದು ಎಳೆದುಕೊಂಡು ಹೋಗುತ್ತವೆಯೋ ಅವನ ಆಪತ್ತುಗಳು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತವೆ.

05034054a ಅವಿಜಿತ್ಯ ಯ ಆತ್ಮಾನಮಮಾತ್ಯಾನ್ವಿಜಿಗೀಷತೇ|

05034054c ಅಮಿತ್ರಾನ್ವಾಜಿತಾಮಾತ್ಯಃ ಸೋಽವಶಃ ಪರಿಹೀಯತೇ||

ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ ತನ್ನ ಅಮಾತ್ಯರನ್ನು ನಿಯಂತ್ರಿಸುವವನು ಮತ್ತು ಅಮಾತ್ಯರನ್ನು ವಶಪಡಿಸಿಕೊಳ್ಳದೇ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸುವವನು ಸೋಲುತ್ತಾನೆ.

05034055a ಆತ್ಮಾನಮೇವ ಪ್ರಥಮಂ ದೇಶರೂಪೇಣ ಯೋ ಜಯೇತ್|

05034055c ತತೋಽಮಾತ್ಯಾನಮಿತ್ರಾಂಶ್ಚ ನ ಮೋಘಂ ವಿಜಿಗೀಷತೇ||

ದೇಶರೂಪದ ತನ್ನನ್ನೇ ಯಾರು ಮೊದಲು ಗೆಲ್ಲುತ್ತಾನೋ ಅವನಿಗೆ ಅಮಾತ್ಯರನ್ನೂ ಶತ್ರುಗಳನ್ನೂ ಗೆಲ್ಲುವುದು ಕಷ್ಟವಾಗುವುದಿಲ್ಲ.

05034056a ವಶ್ಯೇಂದ್ರಿಯಂ ಜಿತಾಮಾತ್ಯಂ ಧೃತದಂಡಂ ವಿಕಾರಿಷು|

05034056c ಪರೀಕ್ಷ್ಯಕಾರಿಣಂ ಧೀರಮತ್ಯಂತಂ ಶ್ರೀರ್ನಿಷೇವತೇ||

ಇಂದ್ರಿಯಗಳನ್ನು ಗೆದ್ದಿರುವ, ಅಮಾತ್ಯರನ್ನು ಗೆದ್ದಿರುವ, ಅಪರಾಧಿಗಳನ್ನು ಶಿಕ್ಷಿಸುವ, ಚೆನ್ನಾಗಿ ಪರೀಕ್ಷಿಸಿ ಕಾರ್ಯಮಾಡುವ ಧೀರನನ್ನು ಸಂಪತ್ತು ಬಹಳವಾಗಿ ವರಿಸುತ್ತದೆ.

05034057a ರಥಃ ಶರೀರಂ ಪುರುಷಸ್ಯ ರಾಜನ್

        ನಾತ್ಮಾ ನಿಯಂತೇಂದ್ರಿಯಾಣ್ಯಸ್ಯ ಚಾಶ್ವಾಃ|

05034057c ತೈರಪ್ರಮತ್ತಃ ಕುಶಲಃ ಸದಶ್ವೈರ್

        ದಾಂತೈಃ ಸುಖಂ ಯಾತಿ ರಥೀವ ಧೀರಃ||

ರಾಜನ್! ಪುರುಷನ ಶರೀರವು ಒಂದು ರಥವಿದ್ದಂತೆ. ಆತ್ಮವು ಸಾರಥಿ, ಇಂದ್ರಿಯಗಳು ಕುದುರೆಗಳು. ಅಶ್ವಗಳನ್ನು ಚೆನ್ನಾಗಿ ನಿಯಂತ್ರಿಸುವ ಅಪ್ರಮತ್ತ, ಕುಶಲ, ಧೀರ ರಥಿಕನು ಸುಖವನ್ನು ಹೊಂದುತ್ತಾನೆ.

05034058a ಏತಾನ್ಯನಿಗೃಹೀತಾನಿ ವ್ಯಾಪಾದಯಿತುಮಪ್ಯಲಂ|

05034058c ಅವಿಧೇಯಾ ಇವಾದಾಂತಾ ಹಯಾಃ ಪಥಿ ಕುಸಾರಥಿಂ||

ಅವಿಧೇಯ, ನಿಯಂತ್ರಣದಲ್ಲಿಲ್ಲದ ಕುದುರೆಗಳು ಪ್ರಯಾಣಿಸುತ್ತಿರುವ ಸಾರಥಿಗೆ ಹೇಗೋ ಹಾಗೆ ನಿಯಂತ್ರಣದಲ್ಲಿಲ್ಲದ ಇಂದ್ರಿಯಗಳು ಆಪತ್ತುಗಳನ್ನು ತಂದೊಡ್ಡುತ್ತವೆ.

05034059a ಅನರ್ಥಮರ್ಥತಃ ಪಶ್ಯನ್ನರ್ಥಂ ಚೈವಾಪ್ಯನರ್ಥತಃ|

05034059c ಇಂದ್ರಿಯೈಃ ಪ್ರಸೃತೋ ಬಾಲಃ ಸುದುಃಖಂ ಮನ್ಯತೇ ಸುಖಂ||

ಇಂದ್ರಿಯಗಳಿಂದ ನಡೆಸಲ್ಪಟ್ಟ ಬಾಲಕನು ಲಾಭವಿಲ್ಲದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ಲಾಭವಿಲ್ಲದುದೆಂದೂ ತಿಳಿದು ಅತೀ ದುಃಖವನ್ನು ತರುವಂಥಹುದನ್ನು ಸುಖವೆಂದು ಪರಿಗಣಿಸುತ್ತಾನೆ.

05034060a ಧರ್ಮಾರ್ಥೌ ಯಃ ಪರಿತ್ಯಜ್ಯ ಸ್ಯಾದಿಂದ್ರಿಯವಶಾನುಗಃ|

05034060c ಶ್ರೀಪ್ರಾಣಧನದಾರೇಭ್ಯ ಕ್ಷಿಪ್ರಂ ಸ ಪರಿಹೀಯತೇ||

ಧರ್ಮಾರ್ಥಗಳನ್ನು ಪರಿತ್ಯಜಿಸಿ ಇಂದ್ರಿಯಗಳ ವಶನಾಗುವವನನ್ನು ಅದೃಷ್ಟ, ಸಂಪತ್ತು, ಪ್ರಾಣ, ಮತ್ತು ಪತ್ನಿ ಬೇಗನೇ ತೊರೆಯುತ್ತವೆ.

05034061a ಅರ್ಥಾನಾಮೀಶ್ವರೋ ಯಃ ಸ್ಯಾದಿಂದ್ರಿಯಾಣಾಮನೀಶ್ವರಃ|

05034061c ಇಂದ್ರಿಯಾಣಾಮನೈಶ್ವರ್ಯಾದೈಶ್ವರ್ಯಾದ್ಭ್ರಶ್ಯತೇ ಹಿ ಸಃ||

ಸಂಪತ್ತಿನ ಒಡೆಯನಾಗಿದ್ದರೂ ಇಂದ್ರಿಯಗಳ ಮೇಲೆ ಒಡೆತನವಿಲ್ಲದಿದ್ದರೆ ಒಡೆಯನಿಲ್ಲದ ಇಂದ್ರಿಯಗಳು ಅವನ ಐಶ್ವರ್ಯವನ್ನು ಅವನಿಂದ ದೂರಮಾಡುವವು.

05034062a ಆತ್ಮನಾತ್ಮಾನಮನ್ವಿಚ್ಚೇನ್ಮನೋಬುದ್ಧೀಂದ್ರಿಯೈರ್ಯತೈಃ|

05034062c ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ||

ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳನ್ನು ಒಂದುಗೂಡಿಸಿ ತನ್ನ ಆತ್ಮವನ್ನು ತಾನೇ ಹುಡುಕಿಕೊಳ್ಳಬೇಕು. ಆತ್ಮವೇ ತನ್ನ ಬಂಧು ಮತ್ತು ಆತ್ಮವೇ ತನ್ನ ಶತ್ರುವೂ ಕೂಡ.

05034063a ಕ್ಷುದ್ರಾಕ್ಷೇಣೇವ ಜಾಲೇನ ಝಷಾವಪಿಹಿತಾವುಭೌ|

05034063c ಕಾಮಶ್ಚ ರಾಜನ್ಕ್ರೋಧಶ್ಚ ತೌ ಪ್ರಜ್ಞಾನಂ ವಿಲುಂಪತಃ||

ರಾಜನ್! ದುರ್ಬಲ ಜಾಲದಲ್ಲಿ ಹಿಡಿದಿಟ್ಟಿರುವ ಎರಡು ಬಲಶಾಲಿ ಮೀನುಗಳಂತೆ ಕಾಮ-ಕ್ರೋಧಗಳೆರಡೂ ಪ್ರಜ್ಞಾನವನ್ನು ಹರಿದು ಚಿಂದಿ ಮಾಡುತ್ತವೆ.

05034064a ಸಮವೇಕ್ಷ್ಯೇಹ ಧರ್ಮಾರ್ಥೌ ಸಂಭಾರಾನ್ಯೋಽಧಿಗಚ್ಚತಿ|

05034064c ಸ ವೈ ಸಂಭೃತಸಂಭಾರಃ ಸತತಂ ಸುಖಮೇಧತೇ||

ಧರ್ಮಾರ್ಥಗಳೆರಡನ್ನೂ ನೋಡಿಕೊಂಡು ಅವಶ್ಯವಿರುವವುಗಳನ್ನು ಯಾರು ಒಟ್ಟುಗೂಡಿಸಿಕೊಳ್ಳುತ್ತಾರೋ ಅವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಸತತವೂ ಸುಖವಾಗಿರುತ್ತಾರೆ.

05034065a ಯಃ ಪಂಚಾಭ್ಯಂತರಾಂ ಶತ್ರೂನವಿಜಿತ್ಯ ಮತಿಕ್ಷಯಾನ್|

05034065c ಜಿಗೀಷತಿ ರಿಪೂನನ್ಯಾನ್ರಿಪವೋಽಭಿಭವಂತಿ ತಂ||

ಒಳಗಿರುವ ಈ ಐದು ಶತ್ರುಗಳನ್ನು ಜಯಿಸದೇ ಯಾರು ಹೊರಗಿನ ಶತ್ರುಗಳನ್ನು ಜಯಿಸಲು ಹೊರಡುತ್ತಾನೋ ಅವನನ್ನು ರಿಪುಗಳೇ ಗೆಲ್ಲುತ್ತಾರೆ.

05034066a ದೃಶ್ಯಂತೇ ಹಿ ದುರಾತ್ಮಾನೋ ವಧ್ಯಮಾನಾಃ ಸ್ವಕರ್ಮಭಿಃ|

05034066c ಇಂದ್ರಿಯಾಣಾಮನೀಶತ್ವಾದ್ರಾಜಾನೋ ರಾಜ್ಯವಿಭ್ರಮೈಃ||

ರಾಜ್ಯದ ಹುಚ್ಚಿನಿಂದಾಗಿ ತಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವ ದುರಾತ್ಮ ರಾಜರುಗಳು ತಮ್ಮದೇ ಕರ್ಮಗಳಿಂದ ಮರಣಹೊಂದಿದುದನ್ನು ನೋಡಿದ್ದೇವಲ್ಲ!

05034067a ಅಸಂತ್ಯಾಗಾತ್ಪಾಪಕೃತಾಮಪಾಪಾಂಸ್

        ತುಲ್ಯೋ ದಂಡಃ ಸ್ಪೃಶತೇ ಮಿಶ್ರಭಾವಾತ್|

05034067c ಶುಷ್ಕೇಣಾರ್ದ್ರಂ ದಹ್ಯತೇ ಮಿಶ್ರಭಾವಾತ್

        ತಸ್ಮಾತ್ಪಾಪೈಃ ಸಹ ಸಂಧಿಂ ನ ಕುರ್ಯಾತ್||

ಒಣಹುಲ್ಲಿನ ಜೊತೆಗೆ ಅದರೊಡನೆ ಸೇರಿಕೊಂಡಿದ್ದ ಹಸಿ ಹುಲ್ಲುಕೂಡ ಸುಟ್ಟುಹೋಗುವಂತೆ ಪಾಪಕರ್ಮ ಮಾಡುವವರೊಡನಿರುವ ನಿಷ್ಪಾಪಿಗಳೂ ಕೂಡ ಶಿಕ್ಷೆಯನ್ನು ಅನುಭವಿಸುತ್ತಾರೆ. ಆದುದರಿಂದ ಪಾಪಿಷ್ಟರೊಂದಿಗೆ ಸೇರಿಕೊಳ್ಳಬಾರದು.

05034068a ನಿಜಾನುತ್ಪತತಃ ಶತ್ರೂನ್ಪಂಚ ಪಂಚಪ್ರಯೋಜನಾನ್|

05034068c ಯೋ ಮೋಹಾನ್ನ ನಿಗೃಹ್ಣಾತಿ ತಮಾಪದ್ಗ್ರಸತೇ ನರಂ||

ಯಾವ ನರನು ಮೋಹದಿಂದ ತನ್ನ ಐದು ಪ್ರಯೋಜನಗಳಿಗೆ ಆಸೆಬುರುಕರಾಗಿರುವ ಐವರು ಶತ್ರುಗಳನ್ನು ನಿಗ್ರಹಿಸಿಟ್ಟುಕೊಳ್ಳುವುದೋ ಅವನನ್ನು ಆಪತ್ತು ಹಿಡಿದುಕೊಳ್ಳುತ್ತದೆ.

05034069a ಅನಸೂಯಾರ್ಜವಂ ಶೌಚಂ ಸಂತೋಷಃ ಪ್ರಿಯವಾದಿತಾ|

05034069c ದಮಃ ಸತ್ಯಮನಾಯಾಸೋ ನ ಭವಂತಿ ದುರಾತ್ಮನಾಂ||

ಅಸೂಯೆಪಡದಿರುವುದು, ಸರಳತೆ, ಶುಚಿತ್ವ, ಸಂತೋಷ, ಪ್ರಿಯವಾಗಿ ಮಾತನಾಡುವುದು, ಆತ್ಮನಿಗ್ರಹ, ಸತ್ಯ, ಅನಾಯಾಸ ಇವು ಎಂದೂ ದುರಾತ್ಮನದ್ದಾಗುವವಲ್ಲ.

05034070a ಆತ್ಮಜ್ಞಾನಮನಾಯಾಸಸ್ತಿತಿಕ್ಷಾ ಧರ್ಮನಿತ್ಯತಾ|

05034070c ವಾಕ್ಚೈವ ಗುಪ್ತಾ ದಾನಂ ಚ ನೈತಾನ್ಯಂತ್ಯೇಷು ಭಾರತ||

ಭಾರತ! ಆತ್ಮಜ್ಞಾನ, ಅನಾಯಾಸವಾಗಿ ನಿರಂತರವಾಗಿ ಧರ್ಮದಲ್ಲಿ ನೆಲೆಸಿರುವುದು, ಮಾತು ಮತ್ತು ದಾನಗಳನ್ನು ಗುಪ್ತವಾಗಿಟ್ಟುಕೊಳ್ಳುವುದು ಇವು ಕೀಳು ಜನರಲ್ಲಿ ಇರುವುದಿಲ್ಲ.

05034071a ಆಕ್ರೋಶಪರಿವಾದಾಭ್ಯಾಂ ವಿಹಿಂಸಂತ್ಯಬುಧಾ ಬುಧಾನ್|

05034071c ವಕ್ತಾ ಪಾಪಮುಪಾದತ್ತೇ ಕ್ಷಮಮಾಣೋ ವಿಮುಚ್ಯತೇ||

05034072a ಹಿಂಸಾ ಬಲಮಸಾಧೂನಾಂ ರಾಜ್ಞಾಂ ದಂಡವಿಧಿರ್ಬಲಂ|

05034072c ಶುಶ್ರೂಷಾ ತು ಬಲಂ ಸ್ತ್ರೀಣಾಂ ಕ್ಷಮಾ ಗುಣವತಾಂ ಬಲಂ||

ಹಿಂಸೆಯಲ್ಲಿ ಅಸಾಧುಗಳ ಬಲವೂ, ರಾಜರಲ್ಲಿ ದಂಡವನ್ನು ವಿಧಿಸಬಲ್ಲ ಶಕ್ತಿಯೂ, ಸ್ತ್ರೀಯರಲ್ಲಿ ಶುಶ್ರೂಷದ ಬಲವೂ ಗುಣವಂತರಲ್ಲಿ ಕ್ಷಮೆಯ ಬಲವೂ ಇವೆ.

05034073a ವಾಕ್ಸಮ್ಯಮೋ ಹಿ ನೃಪತೇ ಸುದುಷ್ಕರತಮೋ ಮತಃ|

05034073c ಅರ್ಥವಚ್ಚ ವಿಚಿತ್ರಂ ಚ ನ ಶಕ್ಯಂ ಬಹು ಭಾಷಿತುಂ|

ನೃಪತೇ! ವಾಕ್ ಸಂಯಮವು ಎಲ್ಲಕಿಂತ ಸುದುಷ್ಕರವಾದದ್ದು ಎಂಬ ಮತವಿದೆ. ತುಂಬಾ ಮಾತನಾಡುವವನಿಗೆ ಅರ್ಥವತ್ತಾಗಿ ಸ್ವಾರಸ್ಯವಾಗಿ ಹೇಳಲು ಸಾಧ್ಯವಾಗುವುದಿಲ್ಲ.

05034074a ಅಭ್ಯಾವಹತಿ ಕಲ್ಯಾಣಂ ವಿವಿಧಾ ವಾಕ್ಸುಭಾಷಿತಾ|

05034074c ಸೈವ ದುರ್ಭಾಷಿತಾ ರಾಜನ್ನನರ್ಥಾಯೋಪಪದ್ಯತೇ||

ಒಳ್ಳೆಯ ಮಾತು ವಿವಿಧ ಉತ್ತಮ ಫಲಗಳನ್ನು ನೀಡುತ್ತದೆ. ಆದರೆ ರಾಜನ್! ಕೆಟ್ಟ ಮಾತು ಅನರ್ಥಗಳನ್ನುಂಟುಮಾಡುತ್ತದೆ.

05034075a ಸಂರೋಹತಿ ಶರೈರ್ವಿದ್ಧಂ ವನಂ ಪರಶುನಾ ಹತಂ|

05034075c ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಂ||

ಬಾಣಗಳಿಂದ ಅಥವಾ ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಚಿಗುರುತ್ತದೆ. ಆದರೆ ಕೆಟ್ಟ ಮಾತುಗಳಿಂದ ನೊಂದ, ಮುದುಡಿದ ಹೃದಯವು ಮತ್ತೆ ಚಿಗುರುವುದಿಲ್ಲ.

05034076a ಕರ್ಣಿನಾಲೀಕನಾರಾಚಾ ನಿರ್ಹರಂತಿ ಶರೀರತಃ|

05034076c ವಾಕ್ಶಲ್ಯಸ್ತು ನ ನಿರ್ಹರ್ತುಂ ಶಕ್ಯೋ ಹೃದಿಶಯೋ ಹಿ ಸಃ||

ಶರೀರವನ್ನು ಹೊಕ್ಕ ಬಾಣ ಈಟಿ ಮೊದಲಾದ ಆಯುಧಗಳನ್ನು ಕೀಳಬಹುದು. ಆದರೆ ಹೃದಯವನ್ನು ಹೊಕ್ಕ ಮಾತಿನ ಬಾಣವನ್ನು ಕೀಳಲಿಕ್ಕಾಗುವುದಿಲ್ಲ.

05034077a ವಾಕ್ಸಾಯಕಾ ವದನಾನ್ನಿಷ್ಪತಂತಿ

        ಯೈರಾಹತಃ ಶೋಚತಿ ರಾತ್ರ್ಯಹಾನಿ|

05034077c ಪರಸ್ಯ ನಾಮರ್ಮಸು ತೇ ಪತಂತಿ

        ತಾನ್ಪಂಡಿತೋ ನಾವಸೃಜೇತ್ಪರೇಷು||

ಮಾತಿನ ಈಟಿಯು ಬಾಯಿಯಿಂದ ಹೊರಬೀಳುತ್ತದೆ. ಇದರಿಂದ ಪೆಟ್ಟುತಿಂದವನು ರಾತ್ರಿ-ದಿನಗಳಲ್ಲಿ ಚಿಂತಿಸುತ್ತಾನೆ. ಪಂಡಿತರು ಇಂತಹ ಈಟಿಯನ್ನು ಅವರ ಮರ್ಮಗಳನ್ನು ಭೇದಿಸಬಾರದೆಂದು ಇತರರ ಮೇಲೆ ಎಂದೂ ಪ್ರಯೋಗಿಸುವುದಿಲ್ಲ.

05034078a ಯಸ್ಮೈ ದೇವಾಃ ಪ್ರಯಚ್ಚಂತಿ ಪುರುಷಾಯ ಪರಾಭವಂ|

05034078c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ||

ಯಾವ ಪುರುಷನ ಪರಾಭವವನ್ನು ದೇವತೆಗಳು ಇಚ್ಛಿಸುತ್ತಾರೋ ಅವನ ಬುದ್ಧಿಯನ್ನು ಅಪಹರಿಸುತ್ತಾರೆ. ಇದರಿಂದ ಅವನು ಬರುತ್ತಿರುವ ಆಪತ್ತನ್ನು ಕಾಣುವುದಿಲ್ಲ.

05034079a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ|

05034079c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ||

ಬುದ್ಧಿಯು ಕಲುಷಿತವಾದಾಗ ಭೂತಗಳ ವಿನಾಶವು ಹತ್ತಿರವಾಗುತ್ತದೆ. ಅನ್ಯಾಯವು ನ್ಯಾಯವಾಗಿ ತೋರಿ ಹೃದಯವನ್ನು ಸುತ್ತಿಕೊಳ್ಳುತ್ತದೆ.

05034080a ಸೇಯಂ ಬುದ್ಧಿಃ ಪರೀತಾ ತೇ ಪುತ್ರಾಣಾಂ ತವ ಭಾರತ|

05034080c ಪಾಂಡವಾನಾಂ ವಿರೋಧೇನ ನ ಚೈನಾಮವಬುಧ್ಯಸೇ||

ಭಾರತ! ಪಾಂಡವರ ವಿರೋಧದಿಂದ ನಿನ್ನ ಪುತ್ರರ ಬುದ್ಧಿಯು ಮಸುಕಾಗಿದೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ.

05034081a ರಾಜಾ ಲಕ್ಷಣಸಂಪನ್ನಸ್ತ್ರೈಲೋಕ್ಯಸ್ಯಾಪಿ ಯೋ ಭವೇತ್|

05034081c ಶಿಷ್ಯಸ್ತೇ ಶಾಸಿತಾ ಸೋಽಸ್ತು ಧೃತರಾಷ್ಟ್ರ ಯುಧಿಷ್ಠಿರಃ||

05034082a ಅತೀವ ಸರ್ವಾನ್ಪುತ್ರಾಂಸ್ತೇ ಭಾಗಧೇಯಪುರಸ್ಕೃತಃ|

ಧೃತರಾಷ್ಟ್ರ! ಮೂರೂ ಲೋಕಗಳ ರಾಜನೂ ಆಗಬಲ್ಲ ಲಕ್ಷಣ ಸಂಪನ್ನನಾದ ಯುಧಿಷ್ಠಿರನು ನಿನ್ನ ಶಿಷ್ಯ. ಅವನಿಗೆ ಆಳಲು ಬಿಡು. ನಿನ್ನ ಪುತ್ರರೆಲ್ಲರಲ್ಲಿ ಅವನು ತುಂಬಾ ಗೌರವಾನ್ವಿತ ಭಾಗಧೇಯನು.

05034082c ತೇಜಸಾ ಪ್ರಜ್ಞಾಯಾ ಚೈವ ಯುಕ್ತೋ ಧರ್ಮಾರ್ಥತತ್ತ್ವವಿತ್||

05034083a ಆನೃಶಂಸ್ಯಾದನುಕ್ರೋಶಾದ್ಯೋಽಸೌ ಧರ್ಮಭೃತಾಂ ವರಃ|

05034083c ಗೌರವಾತ್ತವ ರಾಜೇಂದ್ರ ಬಹೂನ್ ಕ್ಲೇಶಾಂಸ್ತಿತಿಕ್ಷತಿ||

ತೇಜಸ್ಸು ಮತ್ತು ಪ್ರಜ್ಞೆಯಿಂದ ಕೂಡಿದ, ಧರ್ಮಾರ್ಥಗಳ ತತ್ತ್ವವನ್ನು ತಿಳಿದ, ಅನೃಶಂಸನೂ ಅಕ್ರೋಶಾದ್ಯನೂ ಆದ ಈ ಧರ್ಮಭೃತರಲ್ಲಿ ಶ್ರೇಷ್ಠನು ನಿನ್ನ ಗೌರವಕ್ಕಾಗಿ ಬಹಳಷ್ಟು ಕ್ಲೇಶಗಳನ್ನು ಸಹಿಸಿದ್ದಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಚತುಸ್ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ನಾಲ್ಕನೆಯ ಅಧ್ಯಾಯವು.

Image result for indian motifs diyas

Comments are closed.