ಆದಿ ಪರ್ವ: ಅಂಶಾವತರಣ ಪರ್ವ
Contents
Toggle೫೮
ಪರಶುರಾಮನು ಕ್ಷತ್ರಿಯರನ್ನು ನಾಶಗೊಳಿಸಿದ ನಂತರ ಬ್ರಾಹ್ಮಣರು ಕ್ಷತ್ರಾಣಿಯರಲ್ಲಿ ಕ್ಷತ್ರಿಯರನ್ನು ಹುಟ್ಟಿಸಿದುದು (೧-೨೫). ಅಸುರರು ಕ್ಷತ್ರಿಯರಾಗಿ ಜನಿಸುವುದು (೨೬-೩೫). ಮೊರೆಹೊಕ್ಕ ಭೂಮಿಗೆ ನಾರಾಯಣನು ಆಶ್ವಾಸನೆ ನೀಡುವುದು (೩೬-೫೦).
01058001 ಜನಮೇಜಯ ಉವಾಚ|
01058001a ಯ ಏತೇ ಕೀರ್ತಿತಾ ಬ್ರಹ್ಮನ್ಯೇ ಚಾನ್ಯೇ ನಾನುಕೀರ್ತಿತಾಃ|
01058001c ಸಮ್ಯಕ್ತಾಂಶ್ರೋತುಮಿಚ್ಛಾಮಿ ರಾಜ್ಞಶ್ಚಾನ್ಯಾನ್ಸುವರ್ಚಸಃ||
ಜನಮೇಜಯನು ಹೇಳಿದನು: “ಬ್ರಾಹ್ಮಣ! ನೀನು ಕೆಲವರ ಕುರಿತು ಮಾತ್ರ ಹೇಳಿದ್ದೀಯೆ ಮತ್ತು ಇನ್ನು ಕೆಲವರ ಕುರಿತು ಹೇಳಿಲ್ಲ. ನಾನು ಆ ಎಲ್ಲ ಸುವರ್ಚಸ ರಾಜರ ಹೆಸರುಗಳನ್ನು ಕೇಳಲು ಬಯಸುತ್ತೇನೆ.
01058002a ಯದರ್ಥಮಿಹ ಸಂಭೂತಾ ದೇವಕಲ್ಪಾ ಮಹಾರಥಾಃ|
01058002c ಭುವಿ ತನ್ಮೇ ಮಹಾಭಾಗ ಸಮ್ಯಗಾಖ್ಯಾತುಮರ್ಹಸಿ||
ಮಹಾಭಾಗ! ಈ ಎಲ್ಲ ದೇವಕಲ್ಪ ಮಹಾರಥರು ಯಾವ ಕಾರಣಕ್ಕಾಗಿ ಭುವಿಯಲ್ಲಿ ಜನ್ಮತಳೆದರು ಎನ್ನುವುದನ್ನು ಸಂಪೂರ್ಣವಾಗಿ ಹೇಳು.”
01058003 ವೈಶಂಪಾಯನ ಉವಾಚ
01058003a ರಹಸ್ಯಂ ಖಲ್ವಿದಂ ರಾಜನ್ದೇವಾನಾಮಿತಿ ನಃ ಶ್ರುತಂ|
01058003c ತತ್ತು ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ||
ವೈಶಂಪಾಯನನು ಹೇಳಿದನು: “ರಾಜನ್! ಇದು ದೇವತೆಗಳಿಗೂ ತಿಳಿಯದಿರುವಂತ ರಹಸ್ಯ ಎಂದು ಕೇಳಿದ್ದೇನೆ. ಆದರೂ ಆ ಸ್ವಯಂಭುವಿಗೆ ನಮಸ್ಕರಿಸಿ ನಿನಗೆ ಹೇಳುತ್ತೇನೆ.
01058004a ತ್ರಿಃಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪುರಾ|
01058004c ಜಾಮದಗ್ನ್ಯಸ್ತಪಸ್ತೇಪೇ ಮಹೇಂದ್ರೇ ಪರ್ವತೋತ್ತಮೇ||
ಹಿಂದೆ ಜಾಮದಗ್ನಿಯು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಪರ್ವತೋತ್ತಮ ಮಹೇಂದ್ರದ ಮೇಲೆ ತಪಸ್ಸು ಮಾಡುತ್ತಿದ್ದನು.
01058005a ತದಾ ನಿಃಕ್ಷತ್ರಿಯೇ ಲೋಕೇ ಭಾರ್ಗವೇಣ ಕೃತೇ ಸತಿ|
01058005c ಬ್ರಾಹ್ಮಣಾನ್ಕ್ಷತ್ರಿಯಾ ರಾಜನ್ಗರ್ಭಾರ್ಥಿನ್ಯೋಽಭಿಚಕ್ರಮುಃ||
ರಾಜನ್! ಭಾರ್ಗವನಿಂದ ಲೋಕಗಳಲ್ಲಿ ಕ್ಷತ್ರಿಯರೇ ಇಲ್ಲದಂತಾದಾಗ ಕ್ಷಾತ್ರಿಣಿಯರು ಬ್ರಾಹ್ಮಣರಲ್ಲಿ ಗರ್ಭವನ್ನು ಬೇಡಿದರು.
01058006a ತಾಭಿಃ ಸಹ ಸಮಾಪೇತುರ್ಬ್ರಾಹ್ಮಣಾಃ ಸಂಶಿತವ್ರತಾಃ|
01058006c ಋತಾವೃತೌ ನರವ್ಯಾಘ್ರ ನ ಕಾಮಾನ್ನಾನೃತೌ ತಥಾ||
ನರವ್ಯಾಘ್ರ! ಆಗ ಸಂಶಿತವ್ರತ ಬ್ರಾಹ್ಮಣರು ಋತುಮತಿಯರಾಗಿದ್ದಾಗ ಮಾತ್ರ ಸಂಭೋಗ ಮಾಡಿದರು. ಕಾಮಕ್ಕಾಗಿ ಎಂದೂ ಕೂಡಲಿಲ್ಲ.
01058007a ತೇಭ್ಯಸ್ತು ಲೇಭಿರೇ ಗರ್ಭಾನ್ ಕ್ಷತ್ರಿಯಾಸ್ತಾಃ ಸಹಸ್ರಶಃ|
01058007c ತತಃ ಸುಷುವಿರೇ ರಾಜನ್ ಕ್ಷತ್ರಿಯಾನ್ವೀರ್ಯಸಮ್ಮತಾನ್|
01058007e ಕುಮಾರಾಂಶ್ಚ ಕುಮಾರೀಶ್ಚ ಪುನಃ ಕ್ಷತ್ರಾಭಿವೃದ್ಧಯೇ||
ಈ ರೀತಿಯ ಸಂಬಂಧದಿಂದ ಕ್ಷಾತ್ರಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಗರ್ಭಧರಿಸಿದರು ಮತ್ತು ಕ್ಷತ್ರಿಯ ವೀರಸಮನ್ವಿತ ಕುಮಾರ ಕುಮಾರಿಯರಿಗೆ ಜನ್ಮವಿತ್ತು ಪುನಃ ಕ್ಷತ್ರಿಯರ ಅಭಿವೃದ್ದಿಯಾಯಿತು.
01058008a ಏವಂ ತದ್ಬ್ರಾಹ್ಮಣೈಃ ಕ್ಷತ್ರಂ ಕ್ಷತ್ರಿಯಾಸುತಪಸ್ವಿಭಿಃ|
01058008c ಜಾತಮೃಧ್ಯತ ಧರ್ಮೇಣ ಸುದೀರ್ಘೇಣಾಯುಷಾನ್ವಿತಂ|
01058008e ಚತ್ವಾರೋಽಪಿ ತದಾ ವರ್ಣಾ ಬಭೂವುರ್ಬ್ರಾಹ್ಮಣೋತ್ತರಾಃ||
ಈ ರೀತಿ ಸುತಪಸ್ವಿ ಬ್ರಾಹ್ಮಣರು ಮತ್ತು ಕ್ಷಾತ್ರಿಣಿಯರಿಂದ ಕ್ಷತ್ರಿಯಕುಲವು ವೃದ್ಧಿಯಾಯಿತು. ಹೊಸ ಪೀಳಿಗೆಯು ಧರ್ಮ, ಸುದೀರ್ಘಾಯಸ್ಸುಗಳನ್ನು ಹೊಂದಿದ್ದು ಬ್ರಾಹ್ಮಣರೇ ಮೊದಲಾದ ನಾಲ್ಕು ವರ್ಣಗಳ ಪುನಃಸ್ಥಾಪನೆಯಾಯಿತು.
01058009a ಅಭ್ಯಗಚ್ಛನ್ನೃತೌ ನಾರೀಂ ನ ಕಾಮಾನ್ನಾನೃತೌ ತಥಾ|
01058009c ತಥೈವಾನ್ಯಾನಿ ಭೂತಾನಿ ತಿರ್ಯಗ್ಯೋನಿಗತಾನ್ಯಪಿ|
01058009e ಋತೌ ದಾರಾಂಶ್ಚ ಗಚ್ಛಂತಿ ತದಾ ಸ್ಮ ಭರತರ್ಷಭ||
ನಾರಿಯರು ಋತುಮತಿಯರಾಗಿದ್ದಾಗ ಮಾತ್ರ ಹೋಗುತ್ತಿದ್ದರೇ ಹೊರತು ಋತುಮತಿಯಾಗಿರದಿದ್ದಾಗ ಅಥವಾ ಕಾಮಕ್ಕೋಸ್ಕರ ಹೋಗುತ್ತಿರಲಿಲ್ಲ.
01058010a ತತೋಽವರ್ಧಂತ ಧರ್ಮೇಣ ಸಹಸ್ರಶತಜೀವಿನಃ|
01058010c ತಾಃ ಪ್ರಜಾಃ ಪೃಥಿವೀಪಾಲ ಧರ್ಮವ್ರತಪರಾಯಣಾಃ|
01058010e ಆಧಿಭಿರ್ವ್ಯಾಧಿಭಿಶ್ಚೈವ ವಿಮುಕ್ತಾಃ ಸರ್ವಶೋ ನರಾಃ||
ಈ ರೀತಿ ಧರ್ಮಪ್ರಕಾರ ಸಹಸ್ರಶತ ಸಂಖ್ಯೆಗಳಲ್ಲಿ ಧರ್ಮವ್ರತಪರಾಯಣ ಪೃಥ್ವೀಪಾಲರು ಜನಿಸಿದರು ಮತ್ತು ವೃದ್ಧಿಸಿದರು. ಸರ್ವ ನರರೂ ದುಃಖ ಮತ್ತು ಅನಾರೋಗ್ಯದಿಂದ ವಿಮುಕ್ತರಾಗಿದ್ದರು.
01058011a ಅಥೇಮಾಂ ಸಾಗರಾಪಾಂಗಾಂ ಗಾಂ ಗಜೇಂದ್ರಗತಾಖಿಲಾಂ|
01058011c ಅಧ್ಯತಿಷ್ಠತ್ಪುನಃ ಕ್ಷತ್ರಂ ಸಶೈಲವನಕಾನನಾಂ||
ಗಜೇಂದ್ರನ ನಡೆಯ ಸಾಗರಗಳನ್ನು ಗಡಿಯಾಗಿ ಹೊಂದಿದ ಪೃಥ್ವಿಯು ಮತ್ತೊಮ್ಮೆ ಗಿರಿವನಕಾನನಗಳ ಸಮೇತ ಎದ್ದುನಿಂತಂತೆ ಆಯಿತು.
01058012a ಪ್ರಶಾಸತಿ ಪುನಃ ಕ್ಷತ್ರೇ ಧರ್ಮೇಣೇಮಾಂ ವಸುಂಧರಾಂ|
01058012c ಬ್ರಾಹ್ಮಣಾದ್ಯಾಸ್ತದಾ ವರ್ಣಾ ಲೇಭಿರೇ ಮುದಮುತ್ತಮಾಂ||
ಪುನಃ ಕ್ಷತ್ರಿಯರಿಂದ ಧರ್ಮಪೂರ್ವಕವಾಗಿ ಆಳಲ್ಪಟ್ಟ ವಸುಂಧರೆಯಲ್ಲಿ ಬ್ರಾಹ್ಮಣರೇ ಮೊದಲಾದ ಅನ್ಯ ವರ್ಣದವರೂ ಉತ್ತಮ ಸಂತೋಷವನ್ನು ಹೊಂದಿದ್ದರು.
01058013a ಕಾಮಕ್ರೋಧೋದ್ಭವಾಂದೋಷಾನ್ನಿರಸ್ಯಚ ನರಾಧಿಪಾಃ|
01058013c ದಂಡಂ ದಂಡ್ಯೇಷು ಧರ್ಮೇಣ ಪ್ರಣಯಂತೋಽನ್ವಪಾಲಯನ್||
ನರಾಧಿಪರೆಲ್ಲರೂ ಕಾಮ-ಕ್ರೋಧಗಳಿಂದ ಉಂಟಾಗಬಹುದಾದ ದೋಷಗಳನ್ನೆಲ್ಲ ತೊರೆದು, ದಂಡಿಸಬೇಕಾದವರಿಗೆ ದಂಡಿಸುತ್ತಾ ಧರ್ಮದಿಂದ ಭೂಮಿಯನ್ನು ಪಾಲಿಸಿದರು.
01058014a ತಥಾ ಧರ್ಮಪರೇ ಕ್ಷತ್ರೇ ಸಹಸ್ರಾಕ್ಷಃ ಶತಕ್ರತುಃ|
01058014c ಸ್ವಾದು ದೇಶೇ ಚ ಕಾಲೇ ಚ ವವರ್ಷಾಪ್ಯಾಯಯನ್ಪ್ರಜಾಃ||
ಈ ರೀತಿ ಕ್ಷತ್ರಿಯರೆಲ್ಲರೂ ಧರ್ಮಪರರಾಗಿರುವಾಗ ಸಹಸ್ರಾಕ್ಷ ಶತಕ್ರತುವು ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸಿ ದೇಶದ ಪ್ರಜೆಗಳನ್ನೆಲ್ಲಾ ಸುಖದಿಂದ ಇರಿಸುತ್ತಿದ್ದನು.
01058015a ನ ಬಾಲ ಏವ ಮ್ರಿಯತೇ ತದಾ ಕಶ್ಚಿನ್ನರಾಧಿಪ|
01058015c ನ ಚ ಸ್ತ್ರಿಯಂ ಪ್ರಜಾನಾತಿ ಕಶ್ಚಿದಪ್ರಾಪ್ತಯೌವನಃ||
ನರಾಧಿಪ! ಯಾವ ಬಾಲಕನೂ ಮರಣಹೊಂದುತ್ತಿರಲಿಲ್ಲ, ಮತ್ತು ಯೌವನ ಪ್ರಾಪ್ತವಾಗದೇ ಯಾವ ಸ್ತ್ರೀಯೂ ಮಗುವಿನ ತಾಯಿಯಾಗುತ್ತಿರಲಿಲ್ಲ.
01058016a ಏವಮಾಯುಷ್ಮತೀಭಿಸ್ತು ಪ್ರಜಾಭಿರ್ಭರತರ್ಷಭ|
01058016c ಇಯಂ ಸಾಗರಪರ್ಯಂತಾ ಸಮಾಪೂರ್ಯತ ಮೇದಿನೀ||
ಭರತರ್ಷಭ! ಈ ರೀತಿ ಸಾಗರಪರ್ಯಂತವೂ ಈ ಮೇದಿನಿಯು ದೀರ್ಘಾಯುಷಿ ಪ್ರಜೆಗಳಿಂದ ತುಂಬಿತ್ತು.
01058017a ಈಜಿರೇ ಚ ಮಹಾಯಜ್ಞೈಃ ಕ್ಷತ್ರಿಯಾ ಬಹುದಕ್ಷಿಣೈಃ|
01058017c ಸಾಂಗೋಪನಿಷದಾನ್ವೇದಾನ್ವಿಪ್ರಾಶ್ಚಾಧೀಯತೇ ತದಾ||
ಕ್ಷತ್ರಿಯರು ಬಹುದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನಡೆಸಿದರು ಮತ್ತು ವಿಪ್ರರು ಉಪನಿಷತ್ ಮೊದಲಾದ ಅಂಗಗಳನ್ನೊಡಗೂಡಿದ ವೇದಗಳನ್ನು ಅಭ್ಯಾಸ ಮಾಡಿದರು.
01058018a ನ ಚ ವಿಕ್ರೀಣತೇ ಬ್ರಹ್ಮ ಬ್ರಾಹ್ಮಣಾಃ ಸ್ಮ ತದಾ ನೃಪ|
01058018c ನ ಚ ಶೂದ್ರಸಮಾಭ್ಯಾಶೇ ವೇದಾನುಚ್ಛಾರಯಂತ್ಯುತ||
ನೃಪ! ಆಗ ಯಾವ ಬ್ರಾಹ್ಮಣನೂ ಬ್ರಹ್ಮವಿದ್ಯೆಯನ್ನು ಮಾರಾಟಮಾಡುತ್ತಿರಲಿಲ್ಲ ಮತ್ತು ಶೂದ್ರರ ಎದುರಿನಲ್ಲಿ ವೇದೋಚ್ಛಾರ ಮಾಡುತ್ತಿರಲಿಲ್ಲ.
01058019a ಕಾರಯಂತಃ ಕೃಷಿಂ ಗೋಭಿಸ್ತಥಾ ವೈಶ್ಯಾಃ ಕ್ಷಿತಾವಿಹ|
01058019c ನ ಗಾಮಯುಂಜಂತ ಧುರಿ ಕೃಶಾಂಗಾಶ್ಚಾಪ್ಯಜೀವಯನ್||
ವೈಶ್ಯರು ಈ ಕ್ಷಿತಿಯಲ್ಲಿ ಗೋವುಗಳ ಮೂಲಕ ಕೃಷಿ ಮಾಡಿದರು. ಆದರೆ ಬಡಕಲು ಗೋವುಗಳನ್ನು ಕಟ್ಟುತ್ತಿರಲಿಲ್ಲ ಮತ್ತು ಕೃಶಗೋವುಗಳಿಗೆ ಸಾಕಷ್ಟು ಆಹಾರವನ್ನು ಕೊಡುತ್ತಿದ್ದರು.
01058020a ಫೇನಪಾಂಶ್ಚ ತಥಾ ವತ್ಸಾನ್ನ ದುಹಂತಿ ಸ್ಮ ಮಾನವಾಃ|
01058020c ನ ಕೂಟಮಾನೈರ್ವಣಿಜಃ ಪಣ್ಯಂ ವಿಕ್ರೀಣತೇ ತದಾ||
ಕರುಗಳು ತಾಯಿಯ ಹಾಲನ್ನು ಮಾತ್ರ ಕುಡಿದು ಜೀವಿಸುವವರೆಗೆ ನರರು ಹಾಲನ್ನು ಕರೆಯುತ್ತಿರಲಿಲ್ಲ. ಯಾವ ವರ್ತಕನೂ ಸುಳ್ಳು ತಕ್ಕಡಿಯನ್ನು ಬಳಸಿ ಮಾರುತ್ತಿರಲಿಲ್ಲ.
01058021a ಕರ್ಮಾಣಿ ಚ ನರವ್ಯಾಘ್ರ ಧರ್ಮೋಪೇತಾನಿ ಮಾನವಾಃ|
01058021c ಧರ್ಮಮೇವಾನುಪಶ್ಯಂತಶ್ಚಕ್ರುರ್ಧರ್ಮಪರಾಯಣಾಃ||
ನರವ್ಯಾಘ್ರ! ಮಾನವರು ಧರ್ಮದಮೇಲೇ ದೃಷ್ಠಿಯನ್ನಿಟ್ಟುಕೊಂಡು ಧರ್ಮಪರಾಯಣರಾಗಿ ಧರ್ಮೋಪೇತ ಕರ್ಮಗಳಲ್ಲಿ ನಿರತರಾಗಿದ್ದರು.
01058022a ಸ್ವಕರ್ಮನಿರತಾಶ್ಚಾಸನ್ಸರ್ವೇ ವರ್ಣಾ ನರಾಧಿಪ|
01058022c ಏವಂ ತದಾ ನರವ್ಯಾಘ್ರ ಧರ್ಮೋ ನ ಹ್ರಸತೇ ಕ್ವ ಚಿತ್||
ನರಾಧಿಪ! ಸರ್ವ ವರ್ಣದವರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದರು. ನರವ್ಯಾಘ್ರ! ಈ ರೀತಿ ಧರ್ಮವು ಎಂದೂ ಕುಂದಲಿಲ್ಲ.
01058023a ಕಾಲೇ ಗಾವಃ ಪ್ರಸೂಯಂತೇ ನಾರ್ಯಶ್ಚ ಭರತರ್ಷಭ|
01058023c ಫಲಂತ್ಯೃತುಷು ವೃಕ್ಷಾಶ್ಚ ಪುಷ್ಪಾಣಿ ಚ ಫಲಾನಿ ಚ||
ಭರತರ್ಷಭ! ಗೋವು ಮತ್ತು ನಾರಿಯರು ಸಕಾಲದಲ್ಲಿ ಜನ್ಮನೀಡುತ್ತಿದ್ದರು. ಮತ್ತು ವೃಕ್ಷಗಳು ಋತುವಿಗೆ ತಕ್ಕಂತೆ ಪುಷ್ಪ-ಫಲಗಳನ್ನು ನೀಡುತ್ತಿದ್ದವು.
01058024a ಏವಂ ಕೃತಯುಗೇ ಸಮ್ಯಗ್ವರ್ತಮಾನೇ ತದಾ ನೃಪ|
01058024c ಆಪೂರ್ಯತ ಮಹೀ ಕೃತ್ಸ್ನಾ ಪ್ರಾಣಿಭಿರ್ಬಹುಭಿರ್ಭೃಶಂ||
ನೃಪ! ಈ ರೀತಿ ಕೃತಯುಗವು ನಡೆಯುತ್ತಿರುವಾಗ ಈ ಭೂಮಿಯು ಬಹಳಷ್ಟು ಶ್ರೇಷ್ಠ ಪ್ರಾಣಿಗಳಿಂದ ತುಂಬಿಕೊಂಡಿತ್ತು.
01058025a ತತಃ ಸಮುದಿತೇ ಲೋಕೇ ಮಾನುಷೇ ಭರತರ್ಷಭ|
01058025c ಅಸುರಾ ಜಜ್ಞಿರೇ ಕ್ಷೇತ್ರೇ ರಾಜ್ಞಾಂ ಮನುಜಪುಂಗವ||
ಭರತರ್ಷಭ! ಮನುಜಪುಂಗವ! ಮನುಷ್ಯಲೋಕವು ಸಮೃದ್ದವಾಗಿರುವಾಗ ಅಸುರರು ರಾಜ ಕ್ಷತ್ರಿಯರಲ್ಲಿ ಜನಿಸತೊಡಗಿದರು.
01058026a ಆದಿತ್ಯೈರ್ಹಿ ತದಾ ದೈತ್ಯಾ ಬಹುಶೋ ನಿರ್ಜಿತಾ ಯುಧಿ|
01058026c ಐಶ್ವರ್ಯಾದ್ ಭ್ರಂಶಿತಾಶ್ಚಾಪಿ ಸಂಬಭೂವುಃ ಕ್ಷಿತಾವಿಹ||
ಆದಿತ್ಯರಿಂದ ಬಹಳಷ್ಟು ಬಾರಿ ಯುದ್ಧದಲ್ಲಿ ಸೋತು ಐಶ್ವರ್ಯ ವಂಚಿತ ದೈತ್ಯರು ಕ್ಷಿತಿಯಲ್ಲಿ ಅವತರಿಸಿದರು.
01058027a ಇಹ ದೇವತ್ವಮಿಚ್ಛಂತೋ ಮಾನುಷೇಷು ಮನಸ್ವಿನಃ|
1058027c ಜಜ್ಞಿರೇ ಭುವಿ ಭೂತೇಷು ತೇಷು ತೇಷ್ವಸುರಾ ವಿಭೋ||
01058028a ಗೋಷ್ವಶ್ವೇಷು ಚ ರಾಜೇಂದ್ರ ಖರೋಷ್ಟ್ರಮಹಿಷೇಷು ಚ|
01058028c ಕ್ರವ್ಯಾದೇಷು ಚ ಭೂತೇಷು ಗಜೇಷು ಚ ಮೃಗೇಷು ಚ||
ವಿಭೋ! ರಾಜೇಂದ್ರ! ಮನಸ್ವಿ ಮನುಷ್ಯರಲ್ಲಿ ದೇವತ್ವವನ್ನು ಬಯಸಿ ಆ ಅಸುರರು ಭೂಮಿಯ ಹಲವಷ್ಟು ಜೀವಿಗಳಲ್ಲಿ - ಗೋವುಗಳಲ್ಲಿ, ಕುದುರೆಗಳಲ್ಲಿ, ಕತ್ತೆಗಳಲ್ಲಿ, ಒಂಟೆಗಳಲ್ಲಿ, ಎಮ್ಮೆಗಳಲ್ಲಿ, ಆನೆಗಳಲ್ಲಿ, ಜಿಂಕೆಗಳಲ್ಲಿ ಮತ್ತು ಅನ್ಯ ಜೀವಿಗಳಲ್ಲಿ ಜನಿಸತೊಡಗಿದರು.
01058029a ಜಾತೈರಿಹ ಮಹೀಪಾಲ ಜಾಯಮಾನೈಶ್ಚ ತೈರ್ಮಹೀ|
01058029c ನ ಶಶಾಕಾತ್ಮನಾತ್ಮಾನಮಿಯಂ ಧಾರಯಿತುಂ ಧರಾ||
ಮಹೀಪಾಲ! ಇದಾಗಲೇ ಹುಟ್ಟಿದ್ದ ಮತ್ತು ಇನ್ನೂ ಹುಟ್ಟುತ್ತಿದ್ದವರೆಲ್ಲರನ್ನೂ ಹೊತ್ತು ತನ್ನನ್ನು ತಾನು ಪೋಷಿಸಿಕೊಳ್ಳಲು ಮಹೀಧರೆಯು ಅಸಮರ್ಥಳಾದಳು.
01058030a ಅಥ ಜಾತಾ ಮಹೀಪಾಲಾಃ ಕೇ ಚಿದ್ಬಲಸಮನ್ವಿತಾಃ|
01058030c ದಿತೇಃ ಪುತ್ರಾ ದನೋಶ್ಚೈವ ತಸ್ಮಾಲ್ಲೋಕಾದಿಹ ಚ್ಯುತಾಃ||
ಅವರ ಲೋಕದಿಂದ ಚ್ಯುತರಾದ ಹಲವು ದಿತಿಯ ಪುತ್ರರು ಇಲ್ಲಿ ಬಲಸಮನ್ವಿತ ಮಹೀಪಾಲರಾಗಿ ಜನಿಸಿದರು.
01058031a ವೀರ್ಯವಂತೋಽವಲಿಪ್ತಾಸ್ತೇ ನಾನಾರೂಪಧರಾ ಮಹೀಂ|
01058031c ಇಮಾಂ ಸಾಗರಪರ್ಯಂತಾಂ ಪರೀಯುರರಿಮರ್ದನಾಃ||
ಆ ವೀರ್ಯವಂತರು ನಾನಾರೂಪಗಳನ್ನು ಧರಿಸಿ ಮಹಿಯಲ್ಲೆಲ್ಲಾ ತುಂಬಿಕೊಂಡರು. ಆ ಅರಿಮರ್ದನರು ಸಾಗರ ಪರ್ಯಂತ ಭೂಮಿಯಲ್ಲಿ ತುಂಬಿಕೊಂಡರು.
01058032a ಬ್ರಾಹ್ಮಣಾನ್ ಕ್ಷತ್ರಿಯಾನ್ವೈಶ್ಯಾಂಶೂದ್ರಾಂಶ್ಚೈವಾಪ್ಯಪೀಡಯನ್|
01058032c ಅನ್ಯಾನಿ ಚೈವ ಭೂತಾನಿ ಪೀಡಯಾಮಾಸುರೋಜಸಾ||
ಅವರು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರನ್ನು ಪೀಡಿಸ ತೊಡಗಿದರು ಮತ್ತು ತಮ್ಮ ಅಸುರೀ ಶಕ್ತಿಯಿಂದ ಇನ್ನೂ ಅನ್ಯ ಜೀವಿಗಳನ್ನು ಪೀಡಿಸತೊಡಗಿದರು.
01058033a ತ್ರಾಸಯಂತೋ ವಿನಿಘ್ನಂತಸ್ತಾಂಸ್ತಾನ್ಭೂತಗಣಾಂಶ್ಚ ತೇ||
01058033c ವಿಚೇರುಃ ಸರ್ವತೋ ರಾಜನ್ಮಹೀಂ ಶತಸಹಸ್ರಶಃ||
ರಾಜನ್! ಭೂತಗಣಗಳಿಗೆ ಕಷ್ಟಗಳನ್ನೀಡುತ್ತಾ, ಅವರನ್ನು ಕೊಲ್ಲುತ್ತಾ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಮಹಿಯ ಎಲ್ಲೆಲ್ಲೂ ಸಂಚರಿಸುತ್ತಿದ್ದರು.
01058034a ಆಶ್ರಮಸ್ಥಾನ್ಮಹರ್ಷೀಂಶ್ಚ ಧರ್ಷಯಂತಸ್ತತಸ್ತತಃ|
01058034c ಅಬ್ರಹ್ಮಣ್ಯಾ ವೀರ್ಯಮದಾ ಮತ್ತಾ ಮದಬಲೇನ ಚ||
ವೀರ್ಯಮದ ಮತ್ತು ಮದಬಲದಿಂದ ಮತ್ತರಾದ ಆ ಅಬ್ರಾಹ್ಮಣರು ಆಶ್ರಮವಾಸಿ ಮಹರ್ಷಿಗಳನ್ನೂ ಕೂಡ ಕಾಡತೊಡಗಿದರು.
01058035a ಏವಂ ವೀರ್ಯಬಲೋತ್ಸಿಕ್ತೈರ್ಭೂರಿಯಂ ತೈರ್ಮಹಾಸುರೈಃ|
01058035c ಪೀಡ್ಯಮಾನಾ ಮಹೀಪಾಲ ಬ್ರಹ್ಮಾಣಮುಪಚಕ್ರಮೇ|||
ಮಹೀಪಾಲ! ಈ ರೀತಿ ವೀರ್ಯಬಲಗಳನ್ನು ಹೊಂದಿದ ಮಹಾಸುರರಿಂದ ತುಳಿಯಲ್ಪಟ್ಟ ಭೂಮಿಯು ಬ್ರಹ್ಮನ ಬಳಿ ಹೊರಟಳು.
01058036a ನ ಹೀಮಾಂ ಪವನೋ ರಾಜನ್ನ ನಾಗಾ ನ ನಗಾ ಮಹೀಂ|
01058036c ತದಾ ಧಾರಯಿತುಂ ಶೇಕುರಾಕ್ರಾಂತಾಂ ದಾನವೈರ್ಬಲಾತ್||
ರಾಜನ್! ದಾನವರ ಬಲದಿಂದಾಗಿ ಮಹಿಯನ್ನು ಹೊರುತ್ತಿದ್ದ ನಾಗ ಮತ್ತು ಗಜಗಳು ಅವಳನ್ನು ಹೊರಲು ಅಸಮರ್ಥರಾಗಿ ರೋದಿಸುತ್ತಿದ್ದರು.
01058037a ತತೋ ಮಹೀ ಮಹೀಪಾಲ ಭಾರಾರ್ತಾ ಭಯಪೀಡಿತಾ|
01058037c ಜಗಾಮ ಶರಣಂ ದೇವಂ ಸರ್ವಭೂತಪಿತಾಮಹಂ||
ಮಹೀಪಾಲ! ಆಗ ಮಹಿಯು ಭಾರದಿಂದ ಭಯಪೀಡಿತಳಾಗಿ ಸರ್ವಭೂತಪಿತಾಮಹ ದೇವನನ್ನು ಶರಣು ಹೊಕ್ಕಳು.
01058038a ಸಾ ಸಂವೃತಂ ಮಹಾಭಾಗೈರ್ದೇವದ್ವಿಜಮಹರ್ಷಿಭಿಃ|
01058038c ದದರ್ಶ ದೇವಂ ಬ್ರಹ್ಮಾಣಂ ಲೋಕಕರ್ತಾರಮವ್ಯಯಂ||
01058039a ಗಂಧರ್ವೈರಪ್ಸರೋಭಿಶ್ಚ ಬಂದಿಕರ್ಮಸು ನಿಷ್ಠಿತೈಃ|
01058039c ವಂದ್ಯಮಾನಂ ಮುದೋಪೇತೈರ್ವವಂದೇ ಚೈನಮೇತ್ಯ ಸಾ||
ದೇವದ್ವಿಜಮಹರ್ಷಿಗಳಿಂದ ಆವೃತ, ಗಂಧರ್ವ ಮತ್ತು ಅಪ್ಸರೆಯರಿಂದ ನಮಸ್ಕರಿಸಿಕೊಳ್ಳುತ್ತಿರುವ, ಲೋಕಕರ್ತಾರನೂ, ಅವ್ಯಯನೂ ಆದ ಮಹಾಭಾಗ ಬ್ರಹ್ಮದೇವನನ್ನು ಅವಳು ಕಂಡಳು.
01058040a ಅಥ ವಿಜ್ಞಾಪಯಾಮಾಸ ಭೂಮಿಸ್ತಂ ಶರಣಾರ್ಥಿನೀ|
01058040c ಸನ್ನಿಧೌ ಲೋಕಪಾಲಾನಾಂ ಸರ್ವೇಷಾಮೇವ ಭಾರತ||
ಭಾರತ! ಶರಣಾರ್ಥಿನಿಯಾದ ಭೂಮಿಯು ಲೋಕಪಾಲಕರೆಲ್ಲರ ಸನ್ನಿಧಿಯಲ್ಲಿ ಅವನಲ್ಲಿ ವಿಜ್ಞಾಪಿಸಿಕೊಂಡಳು.
01058041a ತತ್ಪ್ರಧಾನಾತ್ಮನಸ್ತಸ್ಯ ಭೂಮೇಃ ಕೃತ್ಯಂ ಸ್ವಯಂಭುವಃ|
01058041c ಪೂರ್ವಮೇವಾಭವದ್ರಾಜನ್ವಿದಿತಂ ಪರಮೇಷ್ಟಿನಃ||
ರಾಜನ್! ಭೂಮಿಯು ಯಾವ ಕಾರಣಕ್ಕಾಗಿ ಅಲ್ಲಿಗೆ ಬಂದಿದ್ದಾಳೆ ಎನ್ನುವುದು ಪರಮೇಷ್ಟಿ ಸ್ವಯಂಭುವಿಗೆ ಮೊದಲೇ ತಿಳಿದಿತ್ತು.
01058042a ಸ್ರಷ್ಟಾ ಹಿ ಜಗತಃ ಕಸ್ಮಾನ್ನ ಸಂಬುಧ್ಯೇತ ಭಾರತ|
01058042c ಸುರಾಸುರಾಣಾಂ ಲೋಕಾನಾಮಶೇಷೇಣ ಮನೋಗತಂ||
ಭಾರತ! ಜಗತ್ತಿನ ಸೃಷ್ಟಿಯನ್ನೇ ಮಾಡುತ್ತಿರುವ ಅವನಿಗೆ ಸುರಾಸುರರ ಮತ್ತು ಉಳಿದ ಲೋಕಗಳ ಮನೋಗತವು ಹೇಗೆ ತಾನೆ ತಿಳಿದಿರುವುದಿಲ್ಲ?
01058043a ತಮುವಾಚ ಮಹಾರಾಜ ಭೂಮಿಂ ಭೂಮಿಪತಿರ್ವಿಭುಃ|
01058043c ಪ್ರಭವಃ ಸರ್ವಭೂತಾನಾಮೀಶಃ ಶಂಭುಃ ಪ್ರಜಾಪತಿಃ||
ಮಹಾರಾಜ! ಭೂಮಿಪತಿಗಳ ವಿಭು, ಸರ್ವಭೂತಗಳ ಈಶ, ಶಂಭು, ಪ್ರಜಾಪತಿಯು ಭೂಮಿಗೆ ಹೇಳಿದನು:
01058044a ಯದರ್ಥಮಸಿ ಸಂಪ್ರಾಪ್ತಾ ಮತ್ಸಕಾಶಂ ವಸುಂಧರೇ|
01058044c ತದರ್ಥಂ ಸನ್ನಿಯೋಕ್ಷ್ಯಾಮಿ ಸರ್ವಾನೇವ ದಿವೌಕಸಃ||
“ವಸುಂಧರೆ! ನನ್ನ ಸನ್ನಿಧಿಯಲ್ಲಿ ಯಾವ ಕಾರಣಕ್ಕಾಗಿ ಬಂದಿರುವೆಯೋ ಅ ಕೆಲಸಕ್ಕೆ ಸರ್ವ ದಿವೌಕಸರನ್ನೂ ನಿಯೋಜಿಸುತ್ತೇನೆ.”
01058045a ಇತ್ಯುಕ್ತ್ವಾ ಸ ಮಹೀಂ ದೇವೋ ಬ್ರಹ್ಮಾ ರಾಜನ್ವಿಸೃಜ್ಯ ಚ|
01058045c ಆದಿದೇಶ ತದಾ ಸರ್ವಾನ್ವಿಬುಧಾನ್ಭೂತಕೃತ್ಸ್ವಯಂ||
01058046a ಅಸ್ಯಾ ಭೂಮೇರ್ನಿರಸಿತುಂ ಭಾರಂ ಭಾಗೈಃ ಪೃಥಕ್ ಪೃಥಕ್|
01058046c ಅಸ್ಯಾಮೇವ ಪ್ರಸೂಯಧ್ವಂ ವಿರೋಧಾಯೇತಿ ಚಾಬ್ರವೀತ್||
ರಾಜನ್! ಈ ರೀತಿ ಹೇಳಿ ದೇವನು ಮಹಿಯನ್ನು ಕಳುಹಿಸಿಕೊಟ್ಟ ನಂತರ ಸರ್ವ ದೇವತೆಗಳಿಗೆ ಈ ರೀತಿ ಆದೇಶವನ್ನಿತ್ತನು: “ಭೂಮಿಯ ಭಾರವನ್ನು ಕಡಿಮೆಮಾಡಲೋಸುಗ ನೀವೆಲ್ಲರು ನಿಮ್ಮ ನಿಮ್ಮ ಅಂಶಗಳನ್ನು ಅಲ್ಲಿ ಅವರಿಗೆ ವಿರೋಧಿಗಳಾಗಿ ಹುಟ್ಟಿಸಿ.”
01058047a ತಥೈವ ಚ ಸಮಾನೀಯ ಗಂಧರ್ವಾಪ್ಸರಸಾಂ ಗಣಾನ್|
01058047c ಉವಾಚ ಭಗವಾನ್ಸರ್ವಾನಿದಂ ವಚನಮುತ್ತಮಂ|
01058047e ಸ್ವೈರಂಶೈಃ ಸಂಪ್ರಸೂಯಧ್ವಂ ಯಥೇಷ್ಟಂ ಮಾನುಷೇಷ್ವಿತಿ||
ಹಾಗೆಯೇ ಗಂಧರ್ವ ಮತ್ತು ಅಪ್ಸರೆಯರ ಎಲ್ಲ ಗಣಗಳನ್ನೂ ಕರೆದು ಭಗವಂತನು “ನಿಮ್ಮ ನಿಮ್ಮ ಅಂಶಗಳಲ್ಲಿ ಮನುಷ್ಯರಲ್ಲಿ ಯಥೇಚ್ಚವಾಗಿ ಜನ್ಮತಾಳಿ” ಎಂದು ಉತ್ತಮ ಮಾತುಗಳನ್ನಾಡಿದನು.
01058048a ಅಥ ಶಕ್ರಾದಯಃ ಸರ್ವೇ ಶ್ರುತ್ವಾ ಸುರಗುರೋರ್ವಚಃ|
01058048c ತಥ್ಯಮರ್ಥ್ಯಂ ಚ ಪಥ್ಯಂ ಚ ತಸ್ಯ ತೇ ಜಗೃಹುಸ್ತದಾ||
ಶಕ್ರಾದಿ ಸರ್ವರೂ ಸುರಗುರುವಿನ ಈ ತತ್ವಯುತ, ಅರ್ಥಯುತ ಒಳ್ಳೆಯ ಮಾತುಗಳನ್ನು ಕೇಳಿ ಅದನ್ನು ಸ್ವೀಕರಿಸಿದರು.
01058049a ಅಥ ತೇ ಸರ್ವಶೋಽಂಶೈಃ ಸ್ವೈರ್ಗಂತುಂ ಭೂಮಿಂ ಕೃತಕ್ಷಣಾಃ|
01058049c ನಾರಾಯಣಮಮಿತ್ರಘ್ನಂ ವೈಕುಂಠಮುಪಚಕ್ರಮುಃ||
01058050a ಯಃ ಸ ಚಕ್ರಗದಾಪಾಣಿಃ ಪೀತವಾಸಾಸಿತಪ್ರಭಃ|
01058050c ಪದ್ಮನಾಭಃ ಸುರಾರಿಘ್ನಃ ಪೃಥುಚಾರ್ವಂಚಿತೇಕ್ಷಣಃ||
ಅದರಂತೆ ತಮ್ಮ ತಮ್ಮ ಅಂಶಗಳಲ್ಲಿ ಭೂಮಿಗೆ ಹೋಗಿ ಜನಿಸುವ ನಿಶ್ಚಯಮಾಡಿದ ಸರ್ವರೂ ವೈಕುಂಠದಲ್ಲಿರುವ ಅಮಿತ್ರಘ್ನ ನಾರಾಯಣನಲ್ಲಿಗೆ ಹೋದರು. ಅಲ್ಲಿ ಅವರು ಚಕ್ರಗದಾಪಾಣಿ, ಪೀತವಸ್ತ್ರದಲ್ಲಿ ಅಸಿತಪ್ರಭನಾಗಿ ಶೋಭಿಸುತ್ತಿರುವ ಸುರಾರಿಘ್ನ, ತನ್ನ ವಿಶಾಲ ಎದೆಯನ್ನೇ ನೋಡುತ್ತಿದ್ದ, ಪದ್ಮನಾಭನನ್ನು ಕಂಡರು.
[1]01058051a ತಂ ಭುವಃ ಶೋಧನಾಯೇಂದ್ರ ಉವಾಚ ಪುರುಷೋತ್ತಮಂ|
01058051c ಅಂಶೇನಾವತರಸ್ವೇತಿ ತಥೇತ್ಯಾಹ ಚ ತಂ ಹರಿಃ||
ಪುರುಷೋತ್ತಮನಿಗೆ ಇಂದ್ರನು “ಭೂಮಿಯಲ್ಲಿ ಅವತರಿಸು” ಎನ್ನಲಾಗಿ ಹರಿಯು “ಹಾಗೆಯೇ ಆಗಲಿ” ಎಂದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಅಂಶಾವತರಣಪರ್ವಣಿ ಅಷ್ಟಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಅಂಶಾವತರಣ ಪರ್ವದಲ್ಲಿ ಐವತ್ತೆಂಟನೆಯ ಅಧ್ಯಾಯವು.
[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಪ್ರಜಾಪತಿಪತಿರ್ದೇವಃ ಸುರನಾಥೋ ಮಹಾಬಲಃ| ಶ್ರೀವತ್ಸಾಂಕೋ ಹೃಷೀಕೇಶಃ ಸರ್ವದೈವತಪೂಜಿತಃ||


