ಶ್ರೀಬ್ರಹ್ಮಮಹಾಪುರಾಣ
ಯಸ್ಮಾತ್ಸರ್ವಮಿದಂ ಪ್ರಪಂಚರಚಿತಂ ಮಾಯಾಜಗಜ್ಜಾಯತೇ । ಯಸ್ಮಿಂಸ್ತಿಷ್ಠತಿ ಯಾತಿ ಚಾಂತಸಮಯೇ ಕಲ್ಪಾನುಕಲ್ಪೇ ಪುನಃ । ಯಂ ಧ್ಯಾತ್ವಾ ಮುನಯಃ ಪ್ರಪಂಚರಹಿತಂ ವಿಂದಂತಿ ಮೋಕ್ಷಂ ಧ್ರುವಂ। ತಂ ವಂದೇ ಪುರುಷೋತ್ತಮಾಖ್ಯಮಮಲಂ ನಿತ್ಯಂ ವಿಭುಂ ನಿಶ್ಚಲಮ್ ।।
[ಬ್ರಹ್ಮಮಹಾಪುರಾಣಂ (ಸಂಸ್ಕೃತಮೂಲ, ಕನ್ನಡ ಅರ್ಥಾನುವಾದ ವಿವರಣೆಗಳೊಂದಿಗೆ, 6 ಭಾಗಗಳಲ್ಲಿ), ಅನುವಾದಕ ಹಾಸನದ ಪಂಡಿತ ವೆಂಕಟರಾವ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 30, ಮೈಸೂರು, ಶ್ರೀಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್, 1946]
ಬ್ರಾಹ್ಮಂ ತ್ರಿದಶಸಾಹಸ್ರಂ ಪುರಾಣಂ ಪರಿಕೀರ್ತ್ಯತೇ । ಎಂಬ ಮತ್ಸ್ಯ-ಪುರಾಣದ 53ನೇ ಅಧ್ಯಾಯದ 13ನೇ ಶ್ಲೋಕದಂತೆ ಬ್ರಹ್ಮಪುರಾಣದಲ್ಲಿ 30,000 ಶ್ಲೋಕಗಳಿವೆಯೆಂದು ತಿಳಿಯುತ್ತದೆ. ನಾರದೀಯ ಪುರಾಣದ ಪ್ರಕಾರ ಬ್ರಹ್ಮಪುರಾಣದಲ್ಲಿ 10,000 ಶ್ಲೋಕಗಳಿವೆ.[1] ಆದರೆ ಈಗ ಇರುವ ಈ ಪುರಾಣದಲ್ಲಿ ಒಟ್ಟು 246 ಅಧ್ಯಾಯಗಳಿವೆ ಮತ್ತು 13,773 ಶ್ಲೋಕಗಳಿವೆ. ಅಷ್ಟಾದಶಮಹಾಪುರಾಣಗಳಲ್ಲಿ ಬ್ರಹ್ಮಪುರಾಣವೇ ಮೊದಲನೆಯದು. ಇದರಲ್ಲಿ ಸೃಷ್ಟಿಕಥನವೂ, ತೀರ್ಥಕ್ಷೇತ್ರಮಾಹಾತ್ಮೆಗಳೂ, ಸಂದರ್ಭಾನುಸಾರ ಉಪಾಖ್ಯಾನಗಳು ಮತ್ತು ಇನ್ನೂ ನಾನಾ ವಿಷಯಗಳೂ ಉಕ್ತವಾಗಿವೆ. ಈ ಪುರಾಣದಲ್ಲಿ ಬರುವ ಮುಖ್ಯ ವಿಷಯಗಳು ಈ ಕೆಳಗಿನಂತಿವೆ:
ಸೃಷ್ಟಿಕಥನ, ದೇವಾಸುರರ ಉತ್ಪತ್ತಿ, ಪೃಥು ಚರಿತ್ರೆ, ಮನ್ವಂತರಗಳು, ಆದಿತ್ಯೋತ್ಪತ್ತಿ ಮತ್ತು ಸೂರ್ಯವಂಶವರ್ಣನೆ, ಸೋಮೋತ್ಪತ್ತಿ ಮತ್ತು ಸೋಮವಂಶ ವರ್ಣನೆ, ಭುವನಕೋಶದ್ವೀಪವರ್ಣನೆ, ಸೂರ್ಯ ಅಷ್ಟೋತ್ತರಶತನಾಮಗಳು, ಉಮಾ-ಮಹೇಶ್ವರ ವಿವಾಹ, ದಕ್ಷಯಜ್ಞವಿಧ್ವಂಸ, ತೀರ್ಥಮಾಹಾತ್ಮ್ಯವರ್ಣನೆ, ಮಾರ್ಕಂಡೇಯನ ಪ್ರಲಯದರ್ಶನ, ಗಂಗೋತ್ಪತ್ತಿ, ಗಂಗಾಮಹಾತ್ಮೆ, ಕಂಡುಮಹರ್ಷಿಯ ಕಥೆ, ಕೃಷ್ಣಬಾಲಚರಿತ್ರೆ, ರುಕ್ಮಿವಧ, ನರಕವಧ, ಪಾರಿಜಾತಹರಣ, ಬಾಣಯುದ್ಧ, ಪೌಂಡ್ರಕವಧ, ಸಂಸಾರಚಕ್ರನಿರೂಪಣೆ, ಶ್ರಾದ್ಧವಿಧಿಕಲ್ಪ, ವರ್ಣಾಶ್ರಮಧರ್ಮವರ್ಣನೆ, ಭವಿಷ್ಯಕಥನ, ಲಯಗಳು, ಸಾಂಖ್ಯಯೋಗನಿರೂಪಣೆ, ವಸಿಷ್ಠ-ಕರಾಲಜನಕ ಸಂವಾದ.
ನಾರದೀಯಪುರಾಣದ ಪ್ರಕಾರ ಬ್ರಹ್ಮಪುರಾಣದಲ್ಲಿ ಬರುವ ವಿಷಯಗಳು ಹೀಗಿವೆ: ದೇವಾನಾಂ ಚ ಸುರಾಣಾಂ ಚ ಯತ್ರೋತ್ಪತ್ತಿಃ ಪ್ರಕೀರ್ತಿತಾ । ಪ್ರಜಾಪತೀನಾಂ ಚ ತಥಾ ದಕ್ಷಾದೀನಾಂ ಮುನೀಶ್ವರ ।। 32 ।। ತತೋ ಲೋಕೇಶ್ವರಸ್ಯಾತ್ರ ಸೂರ್ಯಸ್ಯ ಪರಮಾತ್ಮನಃ । ವಂಶಾನುಕೀರ್ತನಂ ಪುಣ್ಯಂ ಮಹಾಪಾತಕನಾಶನಮ್ ।। 33 ।। ಯತ್ರಾವತಾರಃ ಕಥಿತಃ ಪರಮಾನಂದರೂಪಿಣಃ । ಶ್ರೀಮತೋ ರಾಮಚಂದ್ರಸ್ಯ ಚತುರ್ವ್ಯೂಹಾವತಾರಿಣಃ ।। 34 ।। ತತಶ್ಚ ಸೋಮವಂಶಸ್ಯಂ ಕೀರ್ತನಂ ಯತ್ರ ವರ್ಣಿತಮ್ । ಕೃಷ್ಣಸ್ಯ ಜಗದೀಶಸ್ಯ ಚರಿತಂ ಕಲ್ಮಷಾಪಹಮ್ ।। 35 ।। ದ್ವೀಪಾನಾಂ ಚೈವ ಸರ್ವೇಷಾಂ ವರ್ಷಾಣಾಂ ಚಾಪ್ಯಶೇಷತಃ । ವರ್ಣನಂ ಯತ್ರ ಪಾತಾಲಸ್ವರ್ಗಾಣಾಂ ಚ ಪ್ರದೃಶ್ಯತೇ ।। 36 ।। ನರಕಾಣಾಂ ಸಮಾಖ್ಯಾನಂ ಸೂರ್ಯಸ್ತುತಿಕಥಾನಕಮ್ । ಪಾರ್ವತ್ಯಾಶ್ಚ ತಥಾ ಜನ್ಮ ವಿವಾಹಶ್ಚ ನಿಗದ್ಯತೇ ।। 37 ।। ದಕ್ಷಾಖ್ಯಾನಂ ತತಃ ಪ್ರೋಕ್ತಮೇಕಾಮ್ರಕ್ಷೇತ್ರವರ್ಣ-ನಮ್ । ಪೂರ್ವಭಾಗೋಽಯಮುದಿತಃ ಪುರಾಣಸ್ಯಾಸ್ಯ ನಾರದ ।। 38 ।। ಅಸ್ಯೋತ್ತರೇ ವಿಭಾಗೇ ತು ಪುರುಷೋತ್ತಮವರ್ಣನಮ್ । ವಿಸ್ತರೇಣ ಸಮಾಖ್ಯಾತಂ ತೀರ್ಥಯಾತ್ರಾವಿಧಾನತಃ ।। 39 ।। ಅತ್ರೈವ ಕೃಷ್ಣಚರಿತಂ ವಿಸ್ತರಾತ್ಸಮುದೀರಿತಮ್ । ವರ್ಣನಂ ಯಮಲೋಕಸ್ಯ ಪಿತೃಶ್ರಾದ್ಧವಿಧಿ-ಸ್ತಥಾ ।। 40 ।। ವರ್ಣಾಶ್ರಮಾಣಾಂ ಧರ್ಮಾಶ್ಚ ಕೀರ್ತಿತಾ ಯತ್ರ ವಿಸ್ತರಾತ್ । ವಿಷ್ಣುಧರ್ಮಯುಗಾಖ್ಯಾನಂ ಪ್ರಲಯಸ್ಯ ಚ ವರ್ಣನಮ್ ।। 41 ।। ಯೋಗಾನಾಂ ಚ ಸಮಾಖ್ಯಾನಂ ಸಾಂಖ್ಯಾನಾಂ ಚಾಪಿ ವರ್ಣನಮ್ । ಬ್ರಹ್ಮವಾದಸಮುದ್ದೇಶಃ ಪುರಾಣಸ್ಯ ಪ್ರಶಂಸನಮ್ ।। 42 ।। ಏತದ್ಬ್ರಹ್ಮಪುರಾಣಂ ತು ಭಾಗದ್ವಯಸಮನ್ವಿತಮ್ । ವರ್ಣಿತಂ ಸರ್ವಪಾಪಘ್ನಂ ಸರ್ವಸೌಖ್ಯಪ್ರದಾಯಕಮ್ ।। 43 ।। ಸೂತಶೌನಕಸಂವಾದಂ ಭುಕ್ತಿಮುಕ್ತಿಪ್ರದಾಯಕಮ್ । ಅರ್ಥಾತ್: ದೇವತೆಗಳು, ಅಸುರರು ಮತ್ತು ದಕ್ಷಾದಿ ಪ್ರಜಾಪತಿಗಳ ಉತ್ಪತ್ತಿ, ಸೂರ್ಯವಂಶಾನುಕೀರ್ತನೆ, ಆ ವಂಶದಲ್ಲಿಯೇ ಶ್ರೀರಾಮಚಂದ್ರನ ಅವತಾರವರ್ಣನೆ, ಚಂದ್ರವಂಶಕಥನ, ಅದರಲ್ಲಿ ಕೃಷ್ಣನ ಅವತಾರದ ವಿವರಣೆ, ದ್ವೀಪ-ಸಮುದ್ರ-ಖಂಡ-ಪಾತಾಲ-ಸ್ವರ್ಗ-ನರಕಗಳ ವರ್ಣನೆ, ಸೂರ್ಯಸ್ತುತಿ, ಪಾರ್ವತ್ಯವತಾರ ಮತ್ತು ವಿವಾಹ, ದಕ್ಷಪ್ರಜಾಪತಿಯ ಕಥೆ, ಏಕಾಮ್ರಕ್ಷೇತ್ರವರ್ಣನೆ – ಇವು ಪೂರ್ವಭಾಗದಲ್ಲಿ ಹೇಳಿರುವ ವಿಷಯಗಳು. ಉತ್ತರಭಾಗದಲ್ಲಿ ತೀರ್ಥಾಯಾತ್ರಾ-ವಿಧಾನ, ಪುರುಷೋತ್ತಮವರ್ಣನೆ, ವಿಸ್ತಾರದಲ್ಲಿ ಕೃಷ್ಣಚರಿತ್ರೆ, ಯಮ-ಲೋಕ ವರ್ಣನೆ, ಪಿತೃಶ್ರಾದ್ಧವಿಧಾನ, ವರ್ಣಾಶ್ರಮಧರ್ಮ, ನಿವೃತ್ತ-ಧರ್ಮ, ಯುಗವರ್ಣನೆ, ಪ್ರಲಯವರ್ಣನೆ, ಸಾಂಖ್ಯಯೋಗನಿರೂಪಣೆ, ಬ್ರಹ್ಮವಿಚಾರ, ಮತ್ತು ಪುರಾಣಪ್ರಶಂಸೆಗಳು ಹೇಳಲ್ಪಟ್ಟಿವೆ.
[1] ಬ್ರಾಹ್ಮಂ ಪುರಾಣಂ ತತ್ರಾದೌ ಸರ್ವಲೋಕಹಿತಾಯ ವೈ । ವ್ಯಾಸೇನ ವೇದವಿದುಷಾ ಸಮಾಖ್ಯಾತಂ ಮಹಾತ್ಮನಾ ।। 30 ।। ತದ್ವೈ ಸರ್ವಪುರಾಣಾಗ್ರ್ಯಂ ಧರ್ಮಕಾಮಾರ್ಥಮೋಕ್ಷದಮ್ ।। ನಾನಾಖ್ಯಾನೇತಿಹಾಸಾಢ್ಯಂ ದಶಸಾಹಸ್ರಮುಚ್ಯತೇ ।। 31 ।। (ನಾರದೀಯಪುರಾಣ, ಪೂರ್ವಭಾಗ, 92ನೇ ಅಧ್ಯಾಯ)