ವಿರಾಟ ಪರ್ವ: ಗೋಹರಣ ಪರ್ವ
೪೯
ಅರ್ಜುನ-ಕರ್ಣರ ಯುದ್ಧ
ಕುರುಸೇನೆಯ ಮಧ್ಯ ಪ್ರವೇಶಿಸಿ ಅರ್ಜುನನು ಧ್ವಂಸಗೊಳಿಸುತ್ತಾ, ಕರ್ಣನನ್ನು ಪಲಾಯನಗೈಯುವಂತೆ ಮಾಡಿದುದು (೧-೨೩).
04049001 ವೈಶಂಪಾಯನ ಉವಾಚ|
04049001a ಸ ಶತ್ರುಸೇನಾಂ ತರಸಾ ಪ್ರಣುದ್ಯ|
ಗಾಸ್ತಾ ವಿಜಿತ್ಯಾಥ ಧನುರ್ಧರಾಗ್ರ್ಯಃ|
04049001c ದುರ್ಯೋಧನಾಯಾಭಿಮುಖಂ ಪ್ರಯಾತೋ|
ಭೂಯೋಽರ್ಜುನಃ ಪ್ರಿಯಮಾಜೌ ಚಿಕೀರ್ಷನ್||
ವೈಶಂಪಾಯನನು ಹೇಳಿದನು: “ಧನುರ್ಧರರಲ್ಲಿ ಶ್ರೇಷ್ಠ ಆ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು.
04049002a ಗೋಷು ಪ್ರಯಾತಾಸು ಜವೇನ ಮತ್ಸ್ಯಾನ್|
ಕಿರೀಟಿನಂ ಕೃತಕಾರ್ಯಂ ಚ ಮತ್ವಾ|
04049002c ದುರ್ಯೋಧನಾಯಾಭಿಮುಖಂ ಪ್ರಯಾಂತಂ|
ಕುರುಪ್ರವೀರಾಃ ಸಹಸಾಭಿಪೇತುಃ||
ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು.
04049003a ತೇಷಾಮನೀಕಾನಿ ಬಹೂನಿ ಗಾಢಂ|
ವ್ಯೂಢಾನಿ ದೃಷ್ಟ್ವಾ ಬಹುಲಧ್ವಜಾನಿ|
04049003c ಮತ್ಸ್ಯಸ್ಯ ಪುತ್ರಂ ದ್ವಿಷತಾಂ ನಿಹಂತಾ|
ವೈರಾಟಿಮಾಮಂತ್ರ್ಯ ತತೋಽಭ್ಯುವಾಚ||
ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ ವಿರಾಟನ ಮಗನನ್ನು ಕುರಿತು ಹೀಗೆಂದನು:
04049004a ಏತೇನ ತೂರ್ಣಂ ಪ್ರತಿಪಾದಯೇಮಾಂ|
ಶ್ವೇತಾನ್ ಹಯಾನ್ಕಾಂಚನರಶ್ಮಿಯೋಕ್ತ್ರಾನ್|
04049004c ಜವೇನ ಸರ್ವೇಣ ಕುರು ಪ್ರಯತ್ನಂ|
ಆಸಾದಯೈತದ್ರಥಸಿಂಹವೃಂದಂ||
“ಚಿನ್ನದ ಕಡಿವಾಣಗಳನ್ನು ಬಿಗಿದ ಈ ಕುದುರೆಗಳನ್ನು ಇದೇ ಮಾರ್ಗದಲ್ಲಿ ವೇಗವಾಗಿ ಓಡಿಸು. ಸರ್ವ ವೇಗದಿಂದಲೂ ಪ್ರಯತ್ನಿಸು. ಆ ರಥಿಕಸಿಂಹ ಸಮೂಹವನ್ನು ಹಿಡಿ.
04049005a ಗಜೋ ಗಜೇನೇವ ಮಯಾ ದುರಾತ್ಮಾ|
ಯೋ ಯೋದ್ಧುಮಾಕಾಮ್ಕ್ಷತಿ ಸೂತಪುತ್ರಃ|
04049005c ತಮೇವ ಮಾಂ ಪ್ರಾಪಯ ರಾಜಪುತ್ರ|
ದುರ್ಯೋಧನಾಪಾಶ್ರಯಜಾತದರ್ಪಂ||
ರಾಜಪುತ್ರ! ಆನೆಯು ಆನೆಯೊಡನೆ ಹೋರಾಡಬಯಸುವಂತೆ ನನ್ನೊಡನೆ ಹೋರಾಡಬಯಸುವ, ದುರ್ಯೋಧನನ ಆಶ್ರಯದಿಂದ ದರ್ಪಿಷ್ಠನಾಗಿರುವ, ಆ ದುರಾತ್ಮ ಕರ್ಣನಲ್ಲಿಗೇ ನನ್ನನ್ನು ಕರೆದೊಯ್ಯಿ.”
04049006a ಸ ತೈರ್ಹಯೈರ್ವಾತಜವೈರ್ಬೃಹದ್ಭಿಃ|
ಪುತ್ರೋ ವಿರಾಟಸ್ಯ ಸುವರ್ಣಕಕ್ಷ್ಯೈಃ|
04049006c ವಿಧ್ವಂಸಯಂಸ್ತದ್ರಥಿನಾಮನೀಕಂ|
ತತೋಽವಹತ್ಪಾಂಡವಮಾಜಿಮಧ್ಯೇ||
ವಿರಾಟಪುತ್ರನು ಗಾಳಿಯ ವೇಗವನ್ನುಳ್ಳ, ಚಿನ್ನದ ಜೀನುಗಳನ್ನು ಹೊದಿಸಿದ ದೊಡ್ಡ ಕುದುರೆಗಳಿಂದ ಆ ರಥಿಕರ ಸೇನೆಯನ್ನು ಧ್ವಂಸಮಾಡಿ ಆಮೇಲೆ ಅರ್ಜುನನನ್ನು ರಣರಂಗದ ಮಧ್ಯಕ್ಕೆ ಒಯ್ದನು.
04049007a ತಂ ಚಿತ್ರಸೇನೋ ವಿಶಿಖೈರ್ವಿಪಾಠೈಃ|
ಸಂಗ್ರಾಮಜಿಚ್ಚತ್ರುಸಹೋ ಜಯಶ್ಚ|
04049007c ಪ್ರತ್ಯುದ್ಯಯುರ್ಭಾರತಮಾಪತಂತಂ|
ಮಹಾರಥಾಃ ಕರ್ಣಮಭೀಪ್ಸಮಾನಾಃ||
ಚಿತ್ರಸೇನ, ಸಂಗ್ರಾಮಜಿತ್, ಶತ್ರುಸಹ, ಜಯ - ಈ ಮಹಾರಥರು ಕರ್ಣನಿಗೆ ನೆರವಾಗ ಬಯಸಿ ಮೇಲೆ ಬೀಳುತ್ತಿದ್ದ ಅರ್ಜುನನತ್ತ ವಿಶಿಖ ವಿಪಾಠಗಳೆಂಬ ಬಾಣಗಳನ್ನು ಹಿಡಿದು ಧಾವಿಸಿದರು.
04049008a ತತಃ ಸ ತೇಷಾಂ ಪುರುಷಪ್ರವೀರಃ|
ಶರಾಸನಾರ್ಚಿಃ ಶರವೇಗತಾಪಃ|
04049008c ವ್ರಾತಾನ್ರಥಾನಾಮದಹತ್ಸ ಮನ್ಯುರ್|
ವನಂ ಯಥಾಗ್ನಿಃ ಕುರುಪುಂಗವಾನಾಂ||
ಆ ಪುರುಷಶ್ರೇಷ್ಠನು ಕೋಪಗೊಂಡು ಬಿಲ್ಲೆಂಬ ಬೆಂಕಿಯಿಂದಲೂ ಶರವೇಗವೆಂಬ ತಾಪದಿಂದಲೂ ಕೂಡಿದವನಾಗಿ ಅಗ್ನಿಯು ವನವನ್ನು ಸುಡುವಂತೆ ಕುರುಶ್ರೇಷ್ಠರ ರಥಸಮೂಹವನ್ನು ಸುಟ್ಟುಹಾಕಿದನು.
04049009a ತಸ್ಮಿಂಸ್ತು ಯುದ್ಧೇ ತುಮುಲೇ ಪ್ರವೃತ್ತೇ|
ಪಾರ್ಥಂ ವಿಕರ್ಣೋಽತಿರಥಂ ರಥೇನ|
04049009c ವಿಪಾಠವರ್ಷೇಣ ಕುರುಪ್ರವೀರೋ|
ಭೀಮೇನ ಭೀಮಾನುಜಮಾಸಸಾದ||
ಅನಂತರ ತುಮುಲ ಯುದ್ಧವು ಮೊದಲಾಗಲು ಕುರುವೀರ ವಿಕರ್ಣನು ರಥದ ಮೇಲೆ ಕುಳಿತು ಭಯಂಕರ ಕವಲುಬಾಣಗಳ ಮಳೆಗರೆಯುತ್ತ ಅತಿರಥ ಅರ್ಜುನನನ್ನು ಸಮೀಪಿಸಿದನು.
04049010a ತತೋ ವಿಕರ್ಣಸ್ಯ ಧನುರ್ವಿಕೃಷ್ಯ|
ಜಾಂಬೂನದಾಗ್ರ್ಯೋಪಚಿತಂ ದೃಢಜ್ಯಂ|
04049010c ಅಪಾತಯದ್ಧ್ವಜಮಸ್ಯ ಪ್ರಮಥ್ಯ|
ಚಿನ್ನಧ್ವಜಃ ಸೋಽಪ್ಯಪಯಾಜ್ಜವೇನ||
ಆಗ ಅರ್ಜುನನು ದೃಢ ಹೆದೆಯಿಂದಲೂ ಚಿನ್ನದ ತುದಿಗಳಿಂದಲೂ ಕೂಡಿದ ವಿಕರ್ಣನ ಬಿಲ್ಲನ್ನು ಸೆಳೆದುಕೊಂಡು ಅವನ ಬಾವುಟವನ್ನು ಚಿಂದಿಮಾಡಿ ಬೀಳಿಸಿದನು. ಬಾವುಟವು ಚಿಂದಿಯಾಗಲು ಆ ವಿಕರ್ಣನು ವೇಗವಾಗಿ ಪಲಾಯನಮಾಡಿದನು.
04049011a ತಂ ಶಾತ್ರವಾಣಾಂ ಗಣಬಾಧಿತಾರಂ|
ಕರ್ಮಾಣಿ ಕುರ್ವಾಣಮಮಾನುಷಾಣಿ|
04049011c ಶತ್ರುಂತಪಃ ಕೋಪಮಮೃಷ್ಯಮಾಣಃ|
ಸಮರ್ಪಯತ್ಕೂರ್ಮನಖೇನ ಪಾರ್ಥಂ||
ಆಮೇಲೆ ಶತ್ರುಂತಪನು ಕೋಪವನ್ನು ತಡೆಯಲಾರದೆ ಶತ್ರುಗಣಬಾಧಕ ಅತಿಮಾನುಷ ಕಾರ್ಯಗಳನ್ನು ಮಾಡಿದ ಆ ಪಾರ್ಥನ ಮೇಲೆ ಕೂರ್ಮನಖ ಬಾಣಗಳನ್ನು ಪ್ರಯೋಗಿಸತೊಡಗಿದನು.
04049012a ಸ ತೇನ ರಾಜ್ಞಾತಿರಥೇನ ವಿದ್ಧೋ|
ವಿಗಾಹಮಾನೋ ಧ್ವಜಿನೀಂ ಕುರೂಣಾಂ|
04049012c ಶತ್ರುಂತಪಂ ಪಂಚಭಿರಾಶು ವಿದ್ಧ್ವಾ|
ತತೋಽಸ್ಯ ಸೂತಂ ದಶಭಿರ್ಜಘಾನ||
ಆ ಅತಿರಥ ರಾಜನಿಂದ ಹೊಡೆಯಲ್ಪಟ್ಟು, ಕುರುಸೈನ್ಯದಲ್ಲಿ ಮುಳುಗಿಹೋದ ಅರ್ಜುನನು ಶತ್ರುಂತಪನನ್ನು ಬೇಗ ಐದು ಬಾಣಗಳಿಂದ ಭೇದಿಸಿ ಅನಂತರ ಅವನ ಸಾರಥಿಯನ್ನು ಹತ್ತು ಬಾಣಗಳಿಂದ ಕೊಂದನು.
04049013a ತತಃ ಸ ವಿದ್ಧೋ ಭರತರ್ಷಭೇಣ|
ಬಾಣೇನ ಗಾತ್ರಾವರಣಾತಿಗೇನ|
04049013c ಗತಾಸುರಾಜೌ ನಿಪಪಾತ ಭೂಮೌ|
ನಗೋ ನಗಾಗ್ರಾದಿವ ವಾತರುಗ್ಣಃ||
ಆಗ ಭರತಶ್ರೇಷ್ಠ ಅರ್ಜುನನು ಕವಚವನ್ನು ಭೇದಿಸಬಲ್ಲ ಬಾಣದಿಂದ ಆ ವಿಕರ್ಣನನ್ನು ಹೊಡೆಯಲು ಬಿರುಗಾಳಿಯಿಂದ ಮುರಿದು ಬೆಟ್ಟದ ತುದಿಯಿಂದ ಉರುಳುವ ಮರದಂತೆ ಅವನು ರಣರಂಗದಲ್ಲಿ ನೆಲದ ಮೇಲೆ ಸತ್ತುಬಿದ್ದನು.
04049014a ರಥರ್ಷಭಾಸ್ತೇ ತು ರಥರ್ಷಭೇಣ|
ವೀರಾ ರಣೇ ವೀರತರೇಣ ಭಗ್ನಾಃ|
04049014c ಚಕಂಪಿರೇ ವಾತವಶೇನ ಕಾಲೇ|
ಪ್ರಕಂಪಿತಾನೀವ ಮಹಾವನಾನಿ||
ಆ ರಥಿಕಶ್ರೇಷ್ಠ ವೀರರು ಆ ರಥಿಕಶ್ರೇಷ್ಠ ವೀರತರನಿಂದ ಯುದ್ಧದಲ್ಲಿ ಭಗ್ನರಾಗಿ ಪ್ರಳಯ ಕಾಲದ ಬಿರುಗಾಳಿಗೆ ಸಿಕ್ಕಿ ಕಂಪಿಸುವ ಮಹಾ ವನಗಳಂತೆ ಕಂಪಿಸಿದರು.
04049015a ಹತಾಸ್ತು ಪಾರ್ಥೇನ ನರಪ್ರವೀರಾ|
ಭೂಮೌ ಯುವಾನಃ ಸುಷುಪುಃ ಸುವೇಷಾಃ|
04049015c ವಸುಪ್ರದಾ ವಾಸವತುಲ್ಯವೀರ್ಯಾಃ|
ಪರಾಜಿತಾ ವಾಸವಜೇನ ಸಂಖ್ಯೇ|
04049015e ಸುವರ್ಣಕಾರ್ಷ್ಣಾಯಸವರ್ಮನದ್ಧಾ|
ನಾಗಾ ಯಥಾ ಹೈಮವತಾಃ ಪ್ರವೃದ್ಧಾಃ||
ಐಶ್ವರ್ಯವನ್ನು ಕೊಡತಕ್ಕವರೂ, ದೇವೇಂದ್ರಸಮಾನ ವೀರ್ಯವುಳ್ಳವರೂ, ಸುವರ್ಣಖಚಿತ ಉಕ್ಕಿನ ಕವಚಗಳನ್ನು ತೊಟ್ಟವರೂ, ಒಳ್ಳೆಯ ವಸ್ತ್ರಧರಿಸಿದವರೂ, ವೀರಶ್ರೇಷ್ಠರೂ ಆದ ಆ ತರುಣರು ದೇವೇಂದ್ರಪುತ್ರ ಪಾರ್ಥನಿಂದ ಯುದ್ಧದಲ್ಲಿ ಪರಾಜಿತರೂ ಹತರೂ ಆಗಿ ಹಿಮಾಲಯದ ದೊಡ್ಡ ಆನೆಗಳಂತೆ ನೆಲದ ಮೇಲೊರಗಿದರು.
04049016a ತಥಾ ಸ ಶತ್ರೂನ್ಸಮರೇ ವಿನಿಘ್ನನ್|
ಗಾಂಡೀವಧನ್ವಾ ಪುರುಷಪ್ರವೀರಃ|
04049016c ಚಚಾರ ಸಂಖ್ಯೇ ಪ್ರದಿಶೋ ದಿಶಶ್ಚ|
ದಹನ್ನಿವಾಗ್ನಿರ್ವನಮಾತಪಾಂತೇ||
ಹಾಗೆ ಆ ಗಾಂಡೀವಧನುರ್ಧಾರಿ ವೀರಶ್ರೇಷ್ಠ ಅರ್ಜುನನು ಯುದ್ಧದಲ್ಲಿ ಶತ್ರುಗಳನ್ನು ಕೊಲ್ಲುತ್ತ ಬೇಸಗೆಯ ಕಡೆಯಲ್ಲಿ ವನವನ್ನು ಸುಡುವ ಬೆಂಕಿಯಂತೆ ರಣರಂಗದಲ್ಲಿ ದಿಕ್ಕು ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದನು.
04049017a ಪ್ರಕೀರ್ಣಪರ್ಣಾನಿ ಯಥಾ ವಸಂತೇ|
ವಿಶಾತಯಿತ್ವಾತ್ಯನಿಲೋ ನುದನ್ಖೇ|
04049017c ತಥಾ ಸಪತ್ನಾನ್ವಿಕಿರನ್ಕಿರೀಟೀ|
ಚಚಾರ ಸಂಖ್ಯೇಽತಿರಥೋ ರಥೇನ||
ವಸಂತದಲ್ಲಿ ಬಿರುಗಾಳಿಯು ಉದುರಿದ ಎಲೆಗಳನ್ನು ಆಗಸಕ್ಕೆ ಹಾರಿಸಿ ಚದುರಿಸುವಂತೆ ಆ ಅತಿರಥ ಅರ್ಜುನನು ರಥದಲ್ಲಿ ಕುಳಿತು ಶತ್ರುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದನು.
04049018a ಶೋಣಾಶ್ವವಾಹಸ್ಯ ಹಯಾನ್ನಿಹತ್ಯ|
ವೈಕರ್ತನಭ್ರಾತುರದೀನಸತ್ತ್ವಃ|
04049018c ಏಕೇನ ಸಂಗ್ರಾಮಜಿತಃ ಶರೇಣ|
ಶಿರೋ ಜಹಾರಾಥ ಕಿರೀಟಮಾಲೀ||
ಆ ಮಹಾಸತ್ವ ಕಿರೀಟಧಾರಿ ಅರ್ಜುನನು ಕರ್ಣನ ಸೋದರ ಸಂಗ್ರಾಮಜಿತ್ತಿನ ಕೆಂಪು ರಥಕ್ಕೆ ಕಟ್ಟಿದ ಕುದುರೆಗಳನ್ನು ಕೊಂದು, ಅನಂತರ ಅವನ ತಲೆಯನ್ನು ಒಂದೇ ಬಾಣದಿಂದ ಹಾರಿಸಿದನು.
04049019a ತಸ್ಮಿನ್ ಹತೇ ಭ್ರಾತರಿ ಸೂತಪುತ್ರೋ|
ವೈಕರ್ತನೋ ವೀರ್ಯಮಥಾದದಾನಃ|
04049019c ಪ್ರಗೃಹ್ಯ ದಂತಾವಿವ ನಾಗರಾಜೋ|
ಮಹರ್ಷಭಂ ವ್ಯಾಘ್ರ ಇವಾಭ್ಯಧಾವತ್||
ತನ್ನ ಆ ಸೋದರನು ಹತನಾಗಲು ಸೂರ್ಯಪುತ್ರ ಕರ್ಣನು ತನ್ನ ಬಲವನ್ನು ಒಗ್ಗೂಡಿಸಿಕೊಂಡು ದಂತಗಳನ್ನು ಮುಂಚಾಚಿ ನುಗ್ಗುವ ಗಜರಾಜನಂತೆ, ದೊಡ್ಡ ಗೂಳಿಯತ್ತ ಧಾವಿಸುವ ಹುಲಿಯಂತೆ ಅರ್ಜುನನತ್ತ ಧಾವಿಸಿದನು.
04049020a ಸ ಪಾಂಡವಂ ದ್ವಾದಶಭಿಃ ಪೃಷತ್ಕೈರ್|
ವೈಕರ್ತನಃ ಶೀಘ್ರಮುಪಾಜಘಾನ|
04049020c ವಿವ್ಯಾಧ ಗಾತ್ರೇಷು ಹಯಾಂಶ್ಚ ಸರ್ವಾನ್|
ವಿರಾಟಪುತ್ರಂ ಚ ಶರೈರ್ನಿಜಘ್ನೇ||
ಕರ್ಣನು ಅರ್ಜುನನನ್ನು ಹನ್ನೆರಡು ಬಾಣಗಳಿಂದ ಶೀಘ್ರವಾಗಿ ಹೊಡೆದನು. ಎಲ್ಲ ಕುದುರೆಗಳ ಶರೀರಗಳಿಗೂ ಬಾಣಗಳಿಂದ ಹೊಡೆದನು. ಉತ್ತರನನ್ನೂ ಬಾಣಗಳಿಂದ ಘಾತಿಸಿದನು.
04049021a ಸ ಹಸ್ತಿನೇವಾಭಿಹತೋ ಗಜೇಂದ್ರಃ|
ಪ್ರಗೃಹ್ಯ ಭಲ್ಲಾನ್ನಿಶಿತಾನ್ನಿಷಂಗಾತ್|
04049021c ಆಕರ್ಣಪೂರ್ಣಂ ಚ ಧನುರ್ವಿಕೃಷ್ಯ|
ವಿವ್ಯಾಧ ಬಾಣೈರಥ ಸೂತಪುತ್ರಂ||
ಅರ್ಜುನನು ಸಾಮಾನ್ಯ ಆನೆಯಿಂದ ಪೆಟ್ಟುತಿಂದ ಗಜೇಂದ್ರನಂತೆ ಬತ್ತಳಿಕೆಯಿಂದ ಹರಿತ ಭಲ್ಲವೆಂಬ ಬಾಣಗಳನ್ನು ತೆಗೆದು ಕಿವಿಯವರೆಗೂ ಬಿಲ್ಲನ್ನೆಳೆದು ಕರ್ಣನನ್ನು ಆ ಬಾಣಗಳಿಂದ ಹೊಡೆದನು.
04049022a ಅಥಾಸ್ಯ ಬಾಹೂರುಶಿರೋಲಲಾಟಂ|
ಗ್ರೀವಾಂ ರಥಾಂಗಾನಿ ಪರಾವಮರ್ದೀ|
04049022c ಸ್ಥಿತಸ್ಯ ಬಾಣೈರ್ಯುಧಿ ನಿರ್ಬಿಭೇದ|
ಗಾಂಡೀವಮುಕ್ತೈರಶನಿಪ್ರಕಾಶೈಃ||
ಅನಂತರ ಆ ಶತ್ರುನಾಶಕನು ಯುದ್ಧದಲ್ಲಿ ಸಿಡಿಲಿನ ಕಾಂತಿಯ ಬಾಣಗಳನ್ನು ಗಾಂಡೀವದಿಂದ ಬಿಟ್ಟು ರಣದಲ್ಲಿದ್ದ ಕರ್ಣನ ತೋಳು, ತೊಡೆ, ತಲೆ, ಹಣೆ, ಕೊರಳುಗಳನ್ನೂ, ರಥದ ಚಕ್ರಗಳನ್ನೂ ಭೇದಿಸಿದನು.
04049023a ಸ ಪಾರ್ಥಮುಕ್ತೈರ್ವಿಶಿಖೈಃ ಪ್ರಣುನ್ನೋ|
ಗಜೋ ಗಜೇನೇವ ಜಿತಸ್ತರಸ್ವೀ|
04049023c ವಿಹಾಯ ಸಂಗ್ರಾಮಶಿರಃ ಪ್ರಯಾತೋ|
ವೈಕರ್ತನಃ ಪಾಂಡವಬಾಣತಪ್ತಃ||
ಪಾರ್ಥನು ಬಿಟ್ಟ ಬಾಣಗಳಿಂದ ಅಲ್ಲಾಡಿಹೋದ, ಪಾಂಡವ ಬಾಣತಪ್ತ ಕರ್ಣನು ಆನೆಗೆ ಸೋತುಹೋದ ಆನೆಯಂತೆ ಯುದ್ಧದ ಮಂಚೂಣಿಯನ್ನು ತೊರೆದು ಬೇಗ ಹೊರಟುಹೋದನು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕರ್ಣಾಪಯಾನೇ ಏಕೋನಪಂಚಾಶತ್ತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕರ್ಣಾಪಯಾನದಲ್ಲಿ ನಲ್ವತ್ತೊಂಭತ್ತನೆಯ ಅಧ್ಯಾಯವು.