Virata Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ: ವೈರಾಟ ಪರ್ವ 

ಅಜ್ಞಾತವಾಸಕ್ಕೆ ವಿರಾಟ ನಗರದ ಆಯ್ಕೆ

ಅಜ್ಞಾತವರ್ಷವನ್ನು ಎಲ್ಲಿ ಕಳೆಯಬಹುದೆಂದು ಕೇಳಲು ಅರ್ಜುನನು ಯುಧಿಷ್ಠಿರನಿಗೆ ವಿರಾಟನಗರಿಯನ್ನು ಸೂಚಿಸುವುದು (೧-೧೦). ತಾನು ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ವಿರಾಟನಲ್ಲಿರುತ್ತೇನೆಂದು ಯುಧಿಷ್ಠಿರನು ಹೇಳುವುದು (೧೧-೨೩)

04001001 ಜನಮೇಜಯ ಉವಾಚ|

04001001a ಕಥಂ ವಿರಾಟನಗರೇ ಮಮ ಪೂರ್ವಪಿತಾಮಹಾಃ|

04001001c ಅಜ್ಞಾತವಾಸಮುಷಿತಾ ದುರ್ಯೋಧನಭಯಾರ್ದಿತಾಃ||

ಜನಮೇಜಯನು ಹೇಳಿದನು: “ದುರ್ಯೋಧನನ ಭಯದಿಂದ ಭಾದಿತ ನನ್ನ ಪೂರ್ವಪಿತಾಮಹರು ವಿರಾಟನಗರದಲ್ಲಿ ಹೇಗೆ ಅಜ್ಞಾತವಾಸವನ್ನು ಕಳೆದರು?”

04001002 ವೈಶಂಪಾಯನ ಉವಾಚ|

04001002a ತಥಾ ತು ಸ ವರಾನ್ಲಬ್ಧ್ವಾ ಧರ್ಮಾದ್ಧರ್ಮಭೃತಾಂ ವರಃ|

04001002c ಗತ್ವಾಶ್ರಮಂ ಬ್ರಾಹ್ಮಣೇಭ್ಯ ಆಚಖ್ಯೌ ಸರ್ವಮೇವ ತತ್||

ವೈಶಂಪಾಯನನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಹೀಗೆ ಧರ್ಮನಿಂದ ವರಗಳನ್ನು ಪಡೆದು ಆಶ್ರಮಕ್ಕೆ ತೆರಳಿ ಬ್ರಾಹ್ಮಣರಿಗೆ ನಡೆದುದೆಲ್ಲವನ್ನೂ ವರದಿಮಾಡಿದನು.

04001003a ಕಥಯಿತ್ವಾ ತು ತತ್ಸರ್ವಂ ಬ್ರಾಹ್ಮಣೇಭ್ಯೋ ಯುಧಿಷ್ಠಿರಃ|

04001003c ಅರಣೀಸಹಿತಂ ತಸ್ಮೈ ಬ್ರಾಹ್ಮಣಾಯ ನ್ಯವೇದಯತ್||

ಅದೆಲ್ಲವನ್ನೂ ಬ್ರಾಹ್ಮಣರಿಗೆ ಹೇಳಿದ ಯುಧಿಷ್ಠಿರನು ಅರಣೀಸಹಿತ ಕಾಷ್ಠವನ್ನು ಬ್ರಾಹ್ಮಣನಿಗೆ ಒಪ್ಪಿಸಿದನು.

04001004a ತತೋ ಯುಧಿಷ್ಠಿರೋ ರಾಜಾ ಧರ್ಮಪುತ್ರೋ ಮಹಾಮನಾಃ|

04001004c ಸಂನಿವರ್ತ್ಯಾನುಜಾನ್ಸರ್ವಾನಿತಿ ಹೋವಾಚ ಭಾರತ||

ಭಾರತ! ನಂತರ ಮಹಾಮನ ಧರ್ಮಪುತ್ರ ರಾಜ ಯುಧಿಷ್ಠಿರನು ತನ್ನ ಅನುಜರೆಲ್ಲರನ್ನೂ ಕರೆದು ಹೇಳಿದನು:

04001005a ದ್ವಾದಶೇಮಾನಿ ವರ್ಷಾಣಿ ರಾಷ್ಟ್ರಾದ್ವಿಪ್ರೋಷಿತಾ ವಯಂ|

04001005c ತ್ರಯೋದಶೋಽಯಂ ಸಂಪ್ರಾಪ್ತಃ ಕೃಚ್ಛ್ರಃ ಪರಮದುರ್ವಸಃ||

“ರಾಷ್ಟ್ರದಿಂದ ಹೊರಹಾಕಲ್ಪಟ್ಟು ಹನ್ನೆರಡು ವರ್ಷಗಳು ಕಳೆದವು. ಈಗ ಪರಮದುರ್ವಸ ಕಷ್ಟಕರ ಹದಿಮೂರನೆಯ ವರ್ಷವು ಬಂದಿದೆ.

04001006a ಸ ಸಾಧು ಕೌಂತೇಯ ಇತೋ ವಾಸಮರ್ಜುನ ರೋಚಯ|

04001006c ಯತ್ರೇಮಾ ವಸತೀಃ ಸರ್ವಾ ವಸೇಮಾವಿದಿತಾಃ ಪರೈಃ||

ಕೌಂತೇಯ ಅರ್ಜುನ! ಶತ್ರುಗಳಿಗೆ ತಿಳಿಯದಂತೆ ನಾವೆಲ್ಲರೂ ವಾಸಿಸಬಹುದಾದಂಥ ವಾಸಸ್ಥಳವೊಂದನ್ನು ಆರಿಸು.”

04001007 ಅರ್ಜುನ ಉವಾಚ|

04001007a ತಸ್ಯೈವ ವರದಾನೇನ ಧರ್ಮಸ್ಯ ಮನುಜಾಧಿಪ|

04001007c ಅಜ್ಞಾತಾ ವಿಚರಿಷ್ಯಾಮೋ ನರಾಣಾಂ ಭರತರ್ಷಭ||

ಅರ್ಜುನನು ಹೇಳಿದನು: “ಮನುಜಾಧಿಪ! ಭರತರ್ಷಭ! ಧರ್ಮನ ವರದಾನದಿಂದಲೇ ನಾವು ನರರಿಗೆ ತಿಳಿಯದಂತೆ ಸಂಚರಿಸಬಲ್ಲೆವು.

04001008a ಕಿಂ ತು ವಾಸಾಯ ರಾಷ್ಟ್ರಾಣಿ ಕೀರ್ತಯಿಷ್ಯಾಮಿ ಕಾನಿ ಚಿತ್|

04001008c ರಮಣೀಯಾನಿ ಗುಪ್ತಾನಿ ತೇಷಾಂ ಕಿಂ ಚಿತ್ಸ್ಮ ರೋಚಯ||

ಆದರೆ, ರಮಣಿಯವೂ ಗೌಪ್ಯವಾಗಿರಬಲ್ಲವೂ ಆದ ಕೆಲವು ರಾಷ್ಟ್ರಗಳನ್ನು ಹೇಳುತ್ತೇನೆ. ಅವುಗಳಲ್ಲಿ ನಿನಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.

04001009a ಸಂತಿ ರಮ್ಯಾ ಜನಪದಾ ಬಹ್ವನ್ನಾಃ ಪರಿತಃ ಕುರೂನ್|

04001009c ಪಾಂಚಾಲಾಶ್ಚೇದಿಮತ್ಸ್ಯಾಶ್ಚ ಶೂರಸೇನಾಃ ಪಟಚ್ಚರಾಃ||

04001009e ದಶಾರ್ಣಾ ನವರಾಷ್ಟ್ರಂ ಚ ಮಲ್ಲಾಃ ಶಾಲ್ವಾ ಯುಗಂಧರಾಃ||

ಕುರುದೇಶವನ್ನು ಸುತ್ತುವರೆದ ಒಂಭತ್ತು ಶ್ರೀಮಂತ, ರಮ್ಯ ರಾಷ್ಟ್ರ-ಜನಪದಗಳಿವೆ: ಪಾಂಚಾಲ, ಚೇದಿ, ಮತ್ಸ್ಯ, ಶೂರಸೇನ, ಪಟಚ್ಚರ, ದಶಾರ್ಹ, ಮಲ್ಲ, ಶಾಲ್ವ, ಮತ್ತು ಯುಗಂಧರ. [Map of India in the Age of Mahabharata]

04001010a ಏತೇಷಾಂ ಕತಮೋ ರಾಜನ್ನಿವಾಸಸ್ತವ ರೋಚತೇ|

04001010c ವತ್ಸ್ಯಾಮೋ ಯತ್ರ ರಾಜೇಂದ್ರ ಸಂವತ್ಸರಮಿಮಂ ವಯಂ||

ರಾಜನ್! ರಾಜೇಂದ್ರ! ಇವುಗಳಲ್ಲಿ ನಿನಗೆ ಯಾವುದು ಇಷ್ಟವಾಗುತ್ತದೆಯೋ ಅಲ್ಲಿಯೇ ನಾವು ಈ ಸಂವತ್ಸರವನ್ನು ಕಳೆಯೋಣ.”

04001011 ಯುಧಿಷ್ಠಿರ ಉವಾಚ|

04001011a ಏವಮೇತನ್ಮಹಾಬಾಹೋ ಯಥಾ ಸ ಭಗವಾನ್ಪ್ರಭುಃ|

04001011c ಅಬ್ರವೀತ್ಸರ್ವಭೂತೇಶಸ್ತತ್ತಥಾ ನ ತದನ್ಯಥಾ||

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಇದು ಸರಿ. ಆ ಸರ್ವಭೂತೇಶ ಭಗವಾನ್ ಪ್ರಭುವು ಹೇಳಿದುದಕ್ಕಿಂತ ಬೇರೆಯದಾಗಿ ಆಗುವುದಿಲ್ಲ.

04001012a ಅವಶ್ಯಂ ತ್ವೇವ ವಾಸಾರ್ಥಂ ರಮಣೀಯಂ ಶಿವಂ ಸುಖಂ|

04001012c ಸಮ್ಮಂತ್ರ್ಯ ಸಹಿತೈಃ ಸರ್ವೈರ್ದ್ರಷ್ಟವ್ಯಮಕುತೋಭಯಂ||

ನಾವೆಲ್ಲರೂ ಒಟ್ಟಾಗಿ ಆಲೋಚಿಸಿ ವಾಸಕ್ಕಾಗಿ ರಮಣೀಯವೂ, ಮಂಗಲಕರವೂ, ಸುಖಕರವೂ, ಎಲ್ಲ ಕಡೆಗಳಿಂದ ನಿರ್ಭಯವೂ ಆಗಿರುವ ಸ್ಥಳವನ್ನು ಆರಿಸುವುದು ಅವಶ್ಯಕ.

04001013a ಮತ್ಸ್ಯೋ ವಿರಾಟೋ ಬಲವಾನಭಿರಕ್ಷೇತ್ಸ ಪಾಂಡವಾನ್|

04001013c ಧರ್ಮಶೀಲೋ ವದಾನ್ಯಶ್ಚ ವೃದ್ಧಶ್ಚ ಸುಮಹಾಧನಃ||

ಧರ್ಮಶೀಲನೂ, ಬಲವಂತನೂ, ಉದಾರನೂ, ಮಹಾಧನವಂತನೂ ಆದ ವೃದ್ಧ ಮತ್ಸ್ಯ ವಿರಾಟನು ಪಾಂಡವರನ್ನು ರಕ್ಷಿಸಬಲ್ಲನು.

04001014a ವಿರಾಟನಗರೇ ತಾತ ಸಂವತ್ಸರಮಿಮಂ ವಯಂ|

04001014c ಕುರ್ವಂತಸ್ತಸ್ಯ ಕರ್ಮಾಣಿ ವಿಹರಿಷ್ಯಾಮ ಭಾರತ||

ಮಗು ಭಾರತ! ಅವನ ಕೆಲಸಗಳನ್ನು ಮಾಡುತ್ತಾ ನಾವು ವಿರಾಟನಗರದಲ್ಲಿ ಈ ಸಂವತ್ಸರವನ್ನು ಕಳೆಯೋಣ.

04001015a ಯಾನಿ ಯಾನಿ ಚ ಕರ್ಮಾಣಿ ತಸ್ಯ ಶಕ್ಷ್ಯಾಮಹೇ ವಯಂ|

04001015c ಕರ್ತುಂ ಯೋ ಯತ್ಸ ತತ್ಕರ್ಮ ಬ್ರವೀತು ಕುರುನಂದನಾಃ||

ಕುರುನಂದನರೇ! ನಾವು ಯಾವ ಯಾವ ಕೆಲಸಗಳನ್ನು ಮಾಡಬಲ್ಲೆವು ಮತ್ತು ಏನೇನು ಕೆಲಸಗಳನ್ನು ಮಾಡಬೇಕು ಎನ್ನುವುದನ್ನು ಹೇಳಿ.”

04001016 ಅರ್ಜುನ ಉವಾಚ|

04001016a ನರದೇವ ಕಥಂ ಕರ್ಮ ರಾಷ್ಟ್ರೇ ತಸ್ಯ ಕರಿಷ್ಯಸಿ|

04001016c ವಿರಾಟನೃಪತೇಃ ಸಾಧೋ ರಂಸ್ಯಸೇ ಕೇನ ಕರ್ಮಣಾ||

ಅರ್ಜುನನು ಹೇಳಿದನು: “ನರದೇವ! ಸಾಧುವೇ! ವಿರಾಟನೃಪತಿಯ ರಾಷ್ಟ್ರದಲ್ಲಿ ನೀನು ಯಾವ ಕೆಲಸವನ್ನು ಮಾಡುತ್ತೀಯೆ? ಯಾವ ಕೆಲಸದಲ್ಲಿ ನಿನಗೆ ಆಸಕ್ತಿಯಿದೆ?

04001017a ಮೃದುರ್ವದಾನ್ಯೋ ಹ್ರೀಮಾಂಶ್ಚ ಧಾರ್ಮಿಕಃ ಸತ್ಯವಿಕ್ರಮಃ|

04001017c ರಾಜನ್‌ ಸ್ತ್ವಮಾಪದಾ ಕ್ಲಿಷ್ಟಃ ಕಿಂ ಕರಿಷ್ಯಸಿ ಪಾಂಡವ||

ಕಷ್ಟದ ಸ್ಥಿತಿಯಲ್ಲಿರುವ ಮೃದು, ಉದಾರ, ಲಜ್ಜಾನ್ವಿತ, ಧಾರ್ಮಿಕ, ಸತ್ಯವಿಕ್ರಮ ಪಾಂಡವ ರಾಜ! ನೀನು ಏನು ಮಾಡುವೆ?

04001018a ನ ದುಃಖಮುಚಿತಂ ಕಿಂ ಚಿದ್ರಾಜನ್ವೇದ ಯಥಾ ಜನಃ|

04001018c ಸ ಇಮಾಮಾಪದಂ ಪ್ರಾಪ್ಯ ಕಥಂ ಘೋರಾಂ ತರಿಷ್ಯಸಿ||

ರಾಜನ್! ಇತರ ಜನರಂತೆ ನೀನು ಇಂಥಹ ಕಷ್ಟವನ್ನು ಸ್ವಲ್ಪವೂ ಅರಿತವನಲ್ಲ. ಒದಗಿರುವ ಈ ಘೋರ ಆಪತ್ತನ್ನು ಹೇಗೆ ದಾಟುವೆ?”

04001019 ಯುಧಿಷ್ಠಿರ ಉವಾಚ|

04001019a ಶೃಣುಧ್ವಂ ಯತ್ಕರಿಷ್ಯಾಮಿ ಕರ್ಮ ವೈ ಕುರುನಂದನಾಃ|

04001019c ವಿರಾಟಮನುಸಂಪ್ರಾಪ್ಯ ರಾಜಾನಂ ಪುರುಷರ್ಷಭಂ||

ಯುಧಿಷ್ಠಿರನು ಹೇಳಿದನು: “ಕುರುನಂದನರೇ! ಪುರುಷರ್ಷಭ ರಾಜ ವಿರಾಟನ ಬಳಿ ಸೇರಿ ಏನು ಕೆಲಸವನ್ನು ಮಾಡುತ್ತೇನೆ ಎನ್ನುವುದನ್ನು ಕೇಳಿ.

04001020a ಸಭಾಸ್ತಾರೋ ಭವಿಷ್ಯಾಮಿ ತಸ್ಯ ರಾಜ್ಞೋ ಮಹಾತ್ಮನಃ|

04001020c ಕಂಕೋ ನಾಮ ದ್ವಿಜೋ ಭೂತ್ವಾ ಮತಾಕ್ಷಃ ಪ್ರಿಯದೇವಿತಾ||

ಪಗಡೆಯಾಟದಲ್ಲಿ ನಿಪುಣನೂ ವಿನೋದಪ್ರಿಯನೂ ಆದ ಕಂಕ ಎಂಬ ಹೆಸರಿನ ದ್ವಿಜನಾಗಿ ಆ ಮಹಾತ್ಮ ರಾಜನ ಸಭಾಸದನಾಗಿರುತ್ತೇನೆ.

04001021a ವೈಡೂರ್ಯಾನ್ಕಾಂಚನಾನ್ದಾಂತಾನ್ಫಲೈರ್ಜ್ಯೋತೀರಸೈಃ ಸಹ|

04001021c ಕೃಷ್ಣಾಕ್ಷಾಽಲ್ಲೋಹಿತಾಕ್ಷಾಂಶ್ಚ ನಿರ್ವರ್ತ್ಸ್ಯಾಮಿ ಮನೋರಮಾನ್||

ವೈಡೂರ್ಯ, ಕಾಂಚನ ಮತ್ತು ದಂತಗಳಿಂದ ಮಾಡಿದ ಹೊಳೆಯುವ ಕಪ್ಪು, ಕೆಂಪು, ಹಳದಿ, ಮತ್ತು ಹಸಿರು ಬಣ್ಣದ ಪಗಡೆ ಕಾಯಿಗಳನ್ನು ನಡೆಸುತ್ತೇನೆ.

04001022a ಆಸಂ ಯುಧಿಷ್ಠಿರಸ್ಯಾಹಂ ಪುರಾ ಪ್ರಾಣಸಮಃ ಸಖಾ|

04001022c ಇತಿ ವಕ್ಷ್ಯಾಮಿ ರಾಜಾನಂ ಯದಿ ಮಾಮನುಯೋಕ್ಷ್ಯತೇ||

ರಾಜನು ಕೇಳಿದರೆ, ಹಿಂದೆ ನಾನು ಯುಧಿಷ್ಠಿರನ ಪ್ರಾಣಸಖನಂತಿದ್ದೆ ಎಂದು ಹೇಳುತ್ತೇನೆ.

04001023a ಇತ್ಯೇತದ್ವೋ ಮಯಾಖ್ಯಾತಂ ವಿಹರಿಷ್ಯಾಮ್ಯಹಂ ಯಥಾ|

04001023c ವೃಕೋದರ ವಿರಾಟೇ ತ್ವಂ ರಂಸ್ಯಸೇ ಕೇನ ಕರ್ಮಣಾ||

ನಾನು ಹೇಗೆ ವಾಸಿಸುವೆನು ಎಂದು ಹೇಳಿದೆ. ವೃಕೋದರ! ವಿರಾಟನಲ್ಲಿ ನೀನು ಯಾವ ಕೆಲಸ ಮಾಡಲು ಇಚ್ಛಿಸುವೆ?”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಯುಧಿಷ್ಠಿರಾದಿಮಂತ್ರಣೇ ಪ್ರಥಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಯುಧಿಷ್ಠಿರ ಮೊದಲಾದವರ ಸಮಾಲೋಚನೆಯಲ್ಲಿ ಮೊದಲನೆಯ ಅಧ್ಯಾಯವು.

 

File:Flower on white Background.jpg - Wikimedia Commons

Comments are closed.