ಉದ್ಯೋಗ ಪರ್ವ: ಭಗವದ್ಯಾನ ಪರ್ವ
೭೯
ಕೃಷ್ಣನ ರಾಯಭಾರಕ್ಕೆ ಸಹದೇವ-ಸಾತ್ಯಕಿಯರ ಸಂದೇಶ
“ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು” ಎಂದು ಸಹದೇವನು ಕೃಷ್ಣನಿಗೆ ಹೇಳಲು (೧-೪), “ಈ ಶೂರ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ” ಎಂದು ಸಾತ್ಯಕಿಯು ಸಹದೇವನನ್ನು ಅನುಮೋದಿಸಿದುದು (೫-೯).
05079001 ಸಹದೇವ ಉವಾಚ|
05079001a ಯದೇತತ್ಕಥಿತಂ ರಾಜ್ಞಾ ಧರ್ಮ ಏಷ ಸನಾತನಃ|
05079001c ಯಥಾ ತು ಯುದ್ಧಮೇವ ಸ್ಯಾತ್ತಥಾ ಕಾರ್ಯಮರಿಂದಮ||
ಸಹದೇವನು ಹೇಳಿದನು: “ಅರಿಂದಮ! ರಾಜನು ಏನು ಹೇಳಿದನೋ ಅದು ಸನಾತನ ಧರ್ಮ. ಹಾಗಿದ್ದರೂ ಯುದ್ಧವೇ ನಡೆಯುವ ಹಾಗೆ ಮಾಡು!
05079002a ಯದಿ ಪ್ರಶಮಮಿಚ್ಚೇಯುಃ ಕುರವಃ ಪಾಂಡವೈಃ ಸಹ|
05079002c ತಥಾಪಿ ಯುದ್ಧಂ ದಾಶಾರ್ಹ ಯೋಜಯೇಥಾಃ ಸಹೈವ ತೈಃ||
ದಾಶಾರ್ಹ! ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು.
05079003a ಕಥಂ ನು ದೃಷ್ಟ್ವಾ ಪಾಂಚಾಲೀಂ ತಥಾ ಕ್ಲಿಷ್ಟಾಂ ಸಭಾಗತಾಂ|
05079003c ಅವಧೇನ ಪ್ರಶಾಮ್ಯೇತ ಮಮ ಮನ್ಯುಃ ಸುಯೋಧನೇ||
ಸುಯೋಧನನ ವಧೆಯಾಗದೇ ಪಾಂಚಾಲಿಯನ್ನು ಸಭೆಗೆ ಎಳೆತಂದು ಕಾಡಿಸಿದುದನ್ನು ನೋಡಿದ ನನ್ನ ಈ ಸಿಟ್ಟು ಹೇಗೆ ಶಾಂತಗೊಳ್ಳುತ್ತದೆ?
05079004a ಯದಿ ಭೀಮಾರ್ಜುನೌ ಕೃಷ್ಣ ಧರ್ಮರಾಜಶ್ಚ ಧಾರ್ಮಿಕಃ|
05079004c ಧರ್ಮಮುತ್ಸೃಜ್ಯ ತೇನಾಹಂ ಯೋದ್ಧುಮಿಚ್ಚಾಮಿ ಸಮ್ಯುಗೇ||
ಕೃಷ್ಣ! ಒಂದು ವೇಳೆ ಭೀಮಾರ್ಜುನರಿಬ್ಬರೂ ಮತ್ತು ಧರ್ಮರಾಜನೂ ಧಾರ್ಮಿಕರಾಗಿದ್ದರೆ, ನಾನು ಧರ್ಮವನ್ನು ತೊರೆದು ಯುದ್ಧದಲ್ಲಿ ಅವರೊಂದಿಗೆ ಹೋರಾಡಲು ಬಯಸುತ್ತೇನೆ.”
05079005 ಸಾತ್ಯಕಿರುವಾಚ|
05079005a ಸತ್ಯಮಾಹ ಮಹಾಬಾಹೋ ಸಹದೇವೋ ಮಹಾಮತಿಃ|
05079005c ದುರ್ಯೋಧನವಧೇ ಶಾಂತಿಸ್ತಸ್ಯ ಕೋಪಸ್ಯ ಮೇ ಭವೇತ್||
ಸಾತ್ಯಕಿಯು ಹೇಳಿದನು: “ಮಹಾಬಾಹೋ! ಮಹಾಮತಿ ಸಹದೇವನು ಸತ್ಯವನ್ನೇ ನುಡಿದಿದ್ದಾನೆ. ದುರ್ಯೋದನನ ವಧೆಯಿಂದ ಮಾತ್ರ ಅವನ ಮೇಲೆ ನನಗಿರುವ ಕೋಪವು ಶಾಂತವಾಗುವುದು.
05079006a ಜಾನಾಸಿ ಹಿ ಯಥಾ ದೃಷ್ಟ್ವಾ ಚೀರಾಜಿನಧರಾನ್ವನೇ|
05079006c ತವಾಪಿ ಮನ್ಯುರುದ್ಭೂತೋ ದುಃಖಿತಾನ್ಪ್ರೇಕ್ಷ್ಯ ಪಾಂಡವಾನ್||
ವನದಲ್ಲಿ ಚೀರಜಿನಗಳನ್ನು ಧರಿಸಿ ದುಃಖಿತರಾಗಿದ್ದ ಪಾಂಡವರನ್ನು ನೋಡಿ ನಿನಗೂ ಕೂಡ ಕೋಪವುಂಟಾಗಿತ್ತು ಎಂದು ನಿನಗೆ ತಿಳಿದಿದೆ.
05079007a ತಸ್ಮಾನ್ಮಾದ್ರೀಸುತಃ ಶೂರೋ ಯದಾಹ ಪುರುಷರ್ಷಭಃ|
05079007c ವಚನಂ ಸರ್ವಯೋಧಾನಾಂ ತನ್ಮತಂ ಪುರುಷೋತ್ತಮ||
ಪುರುಷೋತ್ತಮ! ಆದುದರಿಂದ ಈ ಶೂರ ಪುರುಷರ್ಷಭ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ!””
05079008 ವೈಶಂಪಾಯನ ಉವಾಚ|
05079008a ಏವಂ ವದತಿ ವಾಕ್ಯಂ ತು ಯುಯುಧಾನೇ ಮಹಾಮತೌ|
05079008c ಸುಭೀಮಃ ಸಿಂಹನಾದೋಽಭೂದ್ಯೋಧಾನಾಂ ತತ್ರ ಸರ್ವಶಃ||
ವೈಶಂಪಾಯನನು ಹೇಳಿದನು: “ಮಹಾಮತಿ ಯುಯುಧಾನನು ಹೀಗೆ ಮಾತನ್ನಾಡಲು ಅಲ್ಲಿ ಎಲ್ಲ ಯೋಧರಿಂದ ಭಯಂಕರ ಸಿಂಹನಾದವು ಮೊಳಗಿತು.
05079009a ಸರ್ವೇ ಹಿ ಸರ್ವತೋ ವೀರಾಸ್ತದ್ವಚಃ ಪ್ರತ್ಯಪೂಜಯನ್|
05079009c ಸಾಧು ಸಾಧ್ವಿತಿ ಶೈನೇಯಂ ಹರ್ಷಯಂತೋ ಯುಯುತ್ಸವಃ||
ಎಲ್ಲಾ ಕಡೆಯಿಂದ ಎಲ್ಲರೂ ಆ ವೀರನ ಮಾತನ್ನು ಗೌರವಿಸಿ “ಸಾಧು! ಸಾಧು!” ಎಂದು ಕೂಗುತ್ತಾ ಶೈನಿಯನ್ನು ಹರ್ಷಗೊಳಿಸಿದರು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಸಹದೇವಸಾತ್ಯಕಿವಾಕ್ಯೇ ಏಕೋನಶೀತಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಸಹದೇವಸಾತ್ಯಕಿವಾಕ್ಯ ಎನ್ನುವ ಎಪ್ಪತ್ತೊಂಭತ್ತನೆಯ ಅಧ್ಯಾಯವು.