ಉದ್ಯೋಗ ಪರ್ವ: ಸನತ್ಸುಜಾತ ಪರ್ವ
೪೪
ಬ್ರಹ್ಮಚರ್ಯ ನಿರೂಪಣೆ
ಸನತ್ಸುಜಾತನು ಧೃತರಾಷ್ಟ್ರನಿಗೆ ಬ್ರಹ್ಮಚರ್ಯದ ಕುರಿತು ವಿವರಿಸುವುದು (೧-೨೪).
05044001 ಧೃತರಾಷ್ಟ್ರ ಉವಾಚ|
05044001a ಸನತ್ಸುಜಾತ ಯದಿಮಾಂ ಪರಾರ್ಥಾಂ
ಬ್ರಾಹ್ಮೀಂ ವಾಚಂ ಪ್ರವದಸಿ ವಿಶ್ವರೂಪಾಂ|
05044001c ಪರಾಂ ಹಿ ಕಾಮೇಷು ಸುದುರ್ಲಭಾಂ ಕಥಾಂ
ತದ್ಬ್ರೂಹಿ ಮೇ ವಾಕ್ಯಮೇತತ್ಕುಮಾರ||
ಧೃತರಾಷ್ಟ್ರನು ಹೇಳಿದನು: “ಸನತ್ಸುಜಾತ! ಕುಮಾರ! ನೀನು ಸರ್ವೋತ್ತಮವಾದ, ಬ್ರಹ್ಮಸಂಬಂಧಿಯಾದ, ಬಹುರೂಪದ ಮಾತನ್ನಾಡಿದ್ದೀಯೆ. ಕಾಮಗಳಲ್ಲಿ ಈ ವಿಷಯದ ಕುರಿತ ಮಾತುಕಥೆಯು ದುರ್ಲಭ. ಆದುದರಿಂದ ಇದನ್ನು ಇನ್ನೂ ವಿಸ್ತಾರವಾಗಿ ಹೇಳಬೇಕು.”
05044002 ಸನತ್ಸುಜಾತ ಉವಾಚ|
05044002a ನೈತದ್ಬ್ರಹ್ಮ ತ್ವರಮಾಣೇನ ಲಭ್ಯಂ
ಯನ್ಮಾಂ ಪೃಚ್ಚಸ್ಯಭಿಹೃಷ್ಯಸ್ಯತೀವ|
05044002c ಅವ್ಯಕ್ತವಿದ್ಯಾಮಭಿಧಾಸ್ಯೇ ಪುರಾಣೀಂ
ಬುದ್ಧ್ಯಾ ಚ ತೇಷಾಂ ಬ್ರಹ್ಮಚರ್ಯೇಣ ಸಿದ್ಧಾಂ||
ಸನತ್ಸುಜಾತನು ಹೇಳಿದನು: “ಸಂತೋಷದಿಂದ ನೀನು ನನ್ನನ್ನು ಕೇಳುತ್ತಿರುವ ಈ ಬ್ರಹ್ಮವಿದ್ಯೆಯು ಅವಸರ ಮಾಡಿದರೆ ದೊರೆಯುವುದಿಲ್ಲ. ಈ ಪುರಾಣ, ಅವ್ಯಕ್ತ ವಿದ್ಯೆಯನ್ನು ಬ್ರಹ್ಮಚರ್ಯದಿಂದ ಸಿದ್ಧಿಪಡಿಸಿಕೊಳ್ಳಬಹುದು.”
05044003 ಧೃತರಾಷ್ಟ್ರ ಉವಾಚ|
05044003a ಅವ್ಯಕ್ತವಿದ್ಯಾಮಿತಿ ಯತ್ಸನಾತನೀಂ
ಬ್ರವೀಷಿ ತ್ವಂ ಬ್ರಹ್ಮಚರ್ಯೇಣ ಸಿದ್ಧಾಂ|
05044003c ಅನಾರಭ್ಯಾ ವಸತೀಹಾರ್ಯ ಕಾಲೇ
ಕಥಂ ಬ್ರಾಹ್ಮಣ್ಯಮಮೃತತ್ವಂ ಲಭೇತ||
ಧೃತರಾಷ್ಟ್ರನು ಹೇಳಿದನು: “ಬ್ರಹ್ಮಚರ್ಯದಿಂದ ಸಿದ್ಧಿಯಾಗಬಲ್ಲ ಈ ಸನಾತನ ಅವ್ಯಕ್ತ ವಿದ್ಯೆಯ ಕುರಿತು ನೀನು ಹೇಳು. ಅನಾರಭ್ಯವಾದ ಆರ್ಯಕಾಲದಲ್ಲಿ ನೆಲಸಿರುವ ಬ್ರಾಹ್ಮಣ್ಯದ ಅಮೃತತ್ವವನ್ನು ಹೇಗೆ ಪಡೆಯಬಹುದು?”
05044004 ಸನತ್ಸುಜಾತ ಉವಾಚ|
05044004a ಯೇಽಸ್ಮಿಽಲ್ಲೋಕೇ ವಿಜಯಂತೀಹ ಕಾಮಾನ್
ಬ್ರಾಹ್ಮೀಂ ಸ್ಥಿತಿಮನುತಿತಿಕ್ಷಮಾಣಾಃ|
05044004c ತ ಆತ್ಮಾನಂ ನಿರ್ಹರಂತೀಹ ದೇಹಾನ್
ಮುಂಜಾದಿಷೀಕಾಮಿವ ಸತ್ತ್ವಸಂಸ್ಥಾಃ||
ಸನತ್ಸುಜಾತನು ಹೇಳಿದನು: “ಯಾರು ಈ ಲೋಕದಲ್ಲಿಯೇ ಇದ್ದುಕೊಂಡು ಕಾಮಗಳನ್ನೂ ಜಯಿಸಿ ಬಾಹ್ಮೀ ಸ್ಥಿತಿಯನ್ನು ಅಪೇಕ್ಷಿಸುತ್ತಾ ಇರುವರೋ ಅವರು ಮುಂಜದ ಹುಲ್ಲಿನಿಂದ ಅದರ ಒಳಗಿರುವ ಮೃದುವಾದ ಕಾಂಡವನ್ನು ಬೇರ್ಪಡಿಸುವಂತೆ, ಆತ್ಮವನ್ನು ದೇಹದಿಂದ ಪ್ರತ್ಯೇಕಿಸುತ್ತಿರುತ್ತಾರೆ.
05044005a ಶರೀರಮೇತೌ ಕುರುತಃ ಪಿತಾ ಮಾತಾ ಚ ಭಾರತ|
05044005c ಆಚಾರ್ಯಶಾಸ್ತಾ ಯಾ ಜಾತಿಃ ಸಾ ಸತ್ಯಾ ಸಾಜರಾಮರಾ||
ಭಾರತ! ತಂದೆ-ತಾಯಿಯರು ಈ ಶರೀರವನ್ನು ಮಾತ್ರ ಮಾಡುತ್ತಾರೆ. ಆದರೆ ಆಚಾರ್ಯನ ಉಪದೇಶದಿಂದ ಯಾವುದು ಹುಟ್ಟುತ್ತದೆಯೋ ಅದು ಸತ್ಯವೂ ಅಜರಾಮರವೂ (ಹುಟ್ಟು-ಸಾವಿಲ್ಲದೂ) ಆದುದು.
05044006a ಆಚಾರ್ಯಯೋನಿಮಿಹ ಯೇ ಪ್ರವಿಶ್ಯ
ಭೂತ್ವಾ ಗರ್ಭಂ ಬ್ರಹ್ಮಚರ್ಯಂ ಚರಂತಿ|
05044006c ಇಹೈವ ತೇ ಶಾಸ್ತ್ರಕಾರಾ ಭವಂತಿ
ಪ್ರಹಾಯ ದೇಹಂ ಪರಮಂ ಯಾಂತಿ ಯೋಗಂ||
ಯಾರು ಆಚಾರ್ಯಯೋನಿಯನ್ನು ಪ್ರವೇಶಿಸಿ ಗರ್ಭವಾಗಿ ಬ್ರಹ್ಮಚರ್ಯವನ್ನು ಆಚರಿಸಿಸುತ್ತಾರೋ ಅವರು ಇಲ್ಲಿಯೇ ಶಾಸ್ತ್ರಕಾರರಾಗುತ್ತಾರೆ. ದೇಹವನ್ನು ತೊರೆದು ಪರಮ ಯೋಗವನ್ನು ಹೊಂದುತ್ತಾರೆ.
05044007a ಯ ಆವೃಣೋತ್ಯವಿತಥೇನ ಕರ್ಣಾ
ವೃತಂ ಕುರ್ವನ್ನಮೃತಂ ಸಂಪ್ರಯಚ್ಚನ್|
05044007c ತಂ ಮನ್ಯೇತ ಪಿತರಂ ಮಾತರಂ ಚ
ತಸ್ಮೈ ನ ದ್ರುಹ್ಯೇತ್ಕೃತಮಸ್ಯ ಜಾನನ್||
ಯಾರು ಸುಳ್ಳನ್ನು ಸತ್ಯದಿಂದ ಆವೃತಗೊಳಿಸುತ್ತಾನೋ, ಎಲ್ಲವಕ್ಕೂ ಅಮೃತತ್ವವನ್ನು ನೀಡುತ್ತಾನೋ ಅಂಥವನನ್ನು ತಂದೆ-ತಾಯಿಯೆಂದು ಮನ್ನಿಸಬೇಕು. ಅವನಿಗೆ ಮನಸ್ಸಿನಲ್ಲಿಯೂ ದ್ರೋಹವನ್ನೆಸಗಬಾರದು.
05044008a ಗುರುಂ ಶಿಷ್ಯೋ ನಿತ್ಯಮಭಿಮನ್ಯಮಾನಃ
ಸ್ವಾಧ್ಯಾಯಮಿಚ್ಚೇಚ್ಚುಚಿರಪ್ರಮತ್ತಃ|
05044008c ಮಾನಂ ನ ಕುರ್ಯಾನ್ನ ದಧೀತ ರೋಷಂ
ಏಷ ಪ್ರಥಮೋ ಬ್ರಹ್ಮಚರ್ಯಸ್ಯ ಪಾದಃ||
ಶಿಷ್ಯನು ಗುರುವಿಗೆ ನಿತ್ಯವೂ ಅಭಿವಂದಿಸಬೇಕು. ಶುಚಿಯಾಗಿದ್ದುಕೊಂಡು, ಅಪ್ರಮತ್ತನಾಗಿ, ಸ್ವಾಧ್ಯಾಯದಲ್ಲಿ ನಿರತನಾಗಿರಬೇಕು. ಅಭಿಮಾನ ಪಡಬಾರದು. ರೋಷಗೊಳ್ಳಬಾರದು. ಇವು ಬ್ರಹ್ಮಚರ್ಯದ ಮೊದಲನೆಯ ಪಾದದ ನಿಯಮಗಳು.
05044009a ಆಚಾರ್ಯಸ್ಯ ಪ್ರಿಯಂ ಕುರ್ಯಾತ್ಪ್ರಾಣೈರಪಿ ಧನೈರಪಿ|
05044009c ಕರ್ಮಣಾ ಮನಸಾ ವಾಚಾ ದ್ವಿತೀಯಃ ಪಾದ ಉಚ್ಯತೇ||
ಪ್ರಾಣದ ಮೂಲಕವಾದರೂ ಅಥವಾ ಧನದ ಮೂಲಕವಾದರೂ, ಕರ್ಮ, ಮನಸ್ಸು, ಮಾತುಗಳಲ್ಲಿ ಆಚಾರ್ಯನಿಗೆ ಪ್ರಿಯವಾದುದನ್ನು ಮಾಡಬೇಕು. ಇದನ್ನು ಎರಡನೆಯ ಪಾದವೆಂದು ಹೇಳುತ್ತಾರೆ.
05044010a ಸಮಾ ಗುರೌ ಯಥಾ ವೃತ್ತಿರ್ಗುರುಪತ್ನ್ಯಾಂ ತಥಾ ಭವೇತ್|
05044010c ಯಥೋಕ್ತಕಾರೀ ಪ್ರಿಯಕೃತ್ತೃತೀಯಃ ಪಾದ ಉಚ್ಯತೇ||
ಗುರುವಿನೊಂದಿಗೆ ಯಾವ ರೀತಿಯ ವರ್ತನೆಯಿರುತ್ತದೆಯೋ ಅದಕ್ಕೆ ಸಮನಾದುದು ಗುರುಪತ್ನಿಯಲ್ಲಿಯೂ ಇರಬೇಕು. ಪ್ರಿಯಕೃತ್ಯವನ್ನು ಮಾಡಬೇಕು ಎನ್ನುವುದನ್ನು ಮೂರನೆಯ ಪಾದವೆಂದು ಹೇಳುತ್ತಾರೆ.
05044011a ನಾಚಾರ್ಯಾಯೇಹೋಪಕೃತ್ವಾ ಪ್ರವಾದಂ
ಪ್ರಾಜ್ಞಾಃ ಕುರ್ವೀತ ನೈತದಹಂ ಕರೋಮಿ|
05044011c ಇತೀವ ಮನ್ಯೇತ ನ ಭಾಷಯೇತ
ಸ ವೈ ಚತುರ್ಥೋ ಬ್ರಹ್ಮಚರ್ಯಸ್ಯ ಪಾದಃ||
ಆಚಾರ್ಯನಿಗೆ ವರದಿಮಾಡುವಾಗ ಪ್ರಾಜ್ಞನು ನಾನು ಇದನ್ನು ಮಾಡಲಿಲ್ಲ ಎಂದು ಹೇಳಬಾರದು. ಹಾಗೆ ತಿಳಿದುಕೊಂಡರೂ ಹೇಳಬಾರದು. ಇದೇ ಬ್ರಹ್ಮಚರ್ಯದ ನಾಲ್ಕನೆಯ ಪಾದ.
05044012a ಏವಂ ವಸಂತಂ ಯದುಪಪ್ಲವೇದ್ಧನಂ
ಆಚಾರ್ಯಾಯ ತದನುಪ್ರಯಚ್ಚೇತ್|
05044012c ಸತಾಂ ವೃತ್ತಿಂ ಬಹುಗುಣಾಮೇವಮೇತಿ
ಗುರೋಃ ಪುತ್ರೇ ಭವತಿ ಚ ವೃತ್ತಿರೇಷಾ||
ಹೀಗೆ ವಾಸಿಸುವಾಗ ಏನನ್ನು ಗಳಿಸುತ್ತಾನೋ ಆ ಧನವನ್ನು ಆಚಾರ್ಯನಿಗೆ ಕೊಡಬೇಕು. ಇದರಿಂದ ಸಂತರ ಸಂಪತ್ತು ಇಮ್ಮಡಿಯಾಗಿ ಬೆಳೆಯುತ್ತದೆ. ಹೀಗೆಯೇ ಗುರುಪುತ್ರನಲ್ಲಿಯೂ ನಡೆದುಕೊಳ್ಳಬೇಕು.
05044013a ಏವಂ ವಸನ್ಸರ್ವತೋ ವರ್ಧತೀಹ
ಬಹೂನ್ಪುತ್ರಾಽಲ್ಲಭತೇ ಚ ಪ್ರತಿಷ್ಠಾಂ|
05044013c ವರ್ಷಂತಿ ಚಾಸ್ಮೈ ಪ್ರದಿಶೋ ದಿಶಶ್ಚ
ವಸಂತ್ಯಸ್ಮಿನ್ಬ್ರಹ್ಮಚರ್ಯೇ ಜನಾಶ್ಚ||
ಹೀಗೆ ವಾಸಿಸುವಾಗ ಅವನ ಎಲ್ಲವೂ ವೃದ್ಧಿಯಾಗುತ್ತದೆ: ಬಹಳ ಪುತ್ರರೂ ಪ್ರತಿಷ್ಠೆಯೂ ದೊರೆಯುತ್ತವೆ. ಎಲ್ಲ ದಿಕ್ಕುಗಳಿಂದಲೂ ಮಳೆಯು ಸುರಿಯುತ್ತದೆ. ಬಹಳ ಜನರು ಅವನಲ್ಲಿ ಬ್ರಹ್ಮಚರ್ಯದಲ್ಲಿ ವಾಸಿಸುತ್ತಾರೆ.
05044014a ಏತೇನ ಬ್ರಹ್ಮಚರ್ಯೇಣ ದೇವಾ ದೇವತ್ವಮಾಪ್ನುವನ್|
05044014c ಋಷಯಶ್ಚ ಮಹಾಭಾಗಾ ಬ್ರಹ್ಮಲೋಕಂ ಮನೀಷಿಣಃ||
05044015a ಗಂಧರ್ವಾಣಾಮನೇನೈವ ರೂಪಮಪ್ಸರಸಾಮಭೂತ್|
05044015c ಏತೇನ ಬ್ರಹ್ಮಚರ್ಯೇಣ ಸೂರ್ಯೋ ಅಹ್ನಾಯ ಜಾಯತೇ||
ಈ ರೀತಿಯ ಬ್ರಹ್ಮಚರ್ಯದಿಂದ ದೇವತೆಗಳು ದೇವತ್ವವನ್ನು, ಮಹಾಭಾಗ ಮನೀಷೀ ಋಷಿಗಳು ಬ್ರಹ್ಮಲೋಕವನ್ನು, ಗಂಧರ್ವ-ಅಪ್ಸರೆಯರು ತಮ್ಮ ರೂಪವನ್ನು ಪಡೆದರು. ಇದೇ ಬ್ರಹ್ಮಚರ್ಯದಿಂದ ಸೂರ್ಯನು ದಿನದಲ್ಲಿ ಹುಟ್ಟುತ್ತಾನೆ.
05044016a ಯ ಆಶಯೇತ್ಪಾಟಯೇಚ್ಚಾಪಿ ರಾಜನ್
ಸರ್ವಂ ಶರೀರಂ ತಪಸಾ ತಪ್ಯಮಾನಃ|
05044016c ಏತೇನಾಸೌ ಬಾಲ್ಯಮತ್ಯೇತಿ ವಿದ್ವಾನ್
ಮೃತ್ಯುಂ ತಥಾ ರೋಧಯತ್ಯಂತಕಾಲೇ||
ರಾಜನ್! ಯಾರು ತಪಸ್ಸನ್ನು ತಪಿಸಿ ಶರೀರವೆಲ್ಲವನ್ನೂ ಮಲಗಿಸಿ ಹೊಡೆಯುತ್ತಾನೋ ಅವನು ಬಾಲ್ಯವನ್ನು ಮೀರಿ ವಿದ್ವಾಂಸನಾಗುತ್ತಾನೆ ಮತ್ತು ಕೊನೆಯಲ್ಲಿ ಮೃತ್ಯುವನ್ನೂ ಜಯಿಸುತ್ತಾನೆ.
05044017a ಅಂತವಂತಃ ಕ್ಷತ್ರಿಯ ತೇ ಜಯಂತಿ
ಲೋಕಾಂ ಜನಾಃ ಕರ್ಮಣಾ ನಿರ್ಮಿತೇನ|
05044017c ಬ್ರಹ್ಮೈವ ವಿದ್ವಾಂಸ್ತೇನ ಅಭ್ಯೇತಿ ಸರ್ವಂ
ನಾನ್ಯಃ ಪಂಥಾ ಅಯನಾಯ ವಿದ್ಯತೇ||
ಕ್ಷತ್ರಿಯ! ಜನರು ಕರ್ಮದಿಂದ ಗೆಲ್ಲುವ ಲೋಕಗಳು ನಿರ್ಮಾಣದಲ್ಲಿ ಕೊನೆಯುಳ್ಳವುಗಳು. ಬ್ರಹ್ಮವನ್ನು ತಿಳಿದುಕೊಳ್ಳುವುದರಿಂದ ವಿದ್ವಾಂಸನು ಬ್ರಹ್ಮವೆಲ್ಲವನ್ನೂ ಪಡೆಯುತ್ತಾನೆ. ಅದಕ್ಕೆ ಬೇರೆ ಯಾವ ಮಾರ್ಗವೂ ತಿಳಿದಿಲ್ಲ.”
05044018 ಧೃತರಾಷ್ಟ್ರ ಉವಾಚ|
05044018a ಆಭಾತಿ ಶುಕ್ಲಮಿವ ಲೋಹಿತಮಿವ
ಅಥೋ ಕೃಷ್ಣಮಥಾಂಜನಂ ಕಾದ್ರವಂ ವಾ|
05044018c ತದ್ಬ್ರಾಹ್ಮಣಃ ಪಶ್ಯತಿ ಯೋಽತ್ರ ವಿದ್ವಾನ್
ಕಥಂರೂಪಂ ತದಮೃತಮಕ್ಷರಂ ಪದಂ||
ಧೃತರಾಷ್ಟ್ರನು ಹೇಳಿದನು: “ಈ ವಿದ್ವಾಂಸ ಬ್ರಾಹ್ಮಣನು ಕಾಣುವ ಆ ಅಮೃತ, ಅಕ್ಷರವು ಎಲ್ಲಿರುತ್ತದೆ ಮತ್ತು ಯಾವರೂಪದ್ದು? ಬೆಳ್ಳಗಿರುವುದೋ? ಕೆಂಪಾಗಿರುವುದೋ? ಅಥವಾ ಅಂಜನದಂತೆ ಕಪ್ಪಾಗಿರುವುದೋ? ಅಥವಾ ಬೂದುಬಣ್ಣದ್ದಾಗಿರುವುದೋ?”
05044019 ಸನತ್ಸುಜಾತ ಉವಾಚ|
05044019a ನಾಭಾತಿ ಶುಕ್ಲಮಿವ ಲೋಹಿತಮಿವ
ಅಥೋ ಕೃಷ್ಣಮಾಯಸಮರ್ಕವರ್ಣಂ|
05044019c ನ ಪೃಥಿವ್ಯಾಂ ತಿಷ್ಠತಿ ನಾಂತರಿಕ್ಷೇ
ನೈತತ್ಸಮುದ್ರೇ ಸಲಿಲಂ ಬಿಭರ್ತಿ||
ಸನತ್ಸುಜಾತನು ಹೇಳಿದನು: “ಅದು ಬಿಳಿಯಾಗಿಯೂ, ಕೆಂಪಾಗಿಯೂ, ಕಪ್ಪಾಗಿಯೂ, ಬೂದುಬಣ್ಣದ್ದಾಗಿಯೂ, ಸೂರ್ಯನ ಬೆಳಕಿನಂತೆಯೂ ಹೊಳೆಯುವುದಿಲ್ಲ. ಅದು ಭೂಮಿಯ ಮೇಲಿಲ್ಲ, ಅಂತರಿಕ್ಷದಲ್ಲಿಲ್ಲ. ಸಮುದ್ರದ ನೀರೂ ಕೂಡ ಅದನ್ನು ಹೊತ್ತಿರುವುದಿಲ್ಲ.
05044020a ನ ತಾರಕಾಸು ನ ಚ ವಿದ್ಯುದಾಶ್ರಿತಂ
ನ ಚಾಭ್ರೇಷು ದೃಶ್ಯತೇ ರೂಪಮಸ್ಯ|
05044020c ನ ಚಾಪಿ ವಾಯೌ ನ ಚ ದೇವತಾಸು
ನ ತಚ್ಚಂದ್ರೇ ದೃಶ್ಯತೇ ನೋತ ಸೂರ್ಯೇ||
ಅದು ನಕ್ಷತ್ರಗಳಲ್ಲಿಲ್ಲ; ವಿದ್ಯುತ್ತಿನಲ್ಲಿರುವುದಿಲ್ಲ, ಮತ್ತು ಅದರ ರೂಪವು ಮೋಡಗಳಲ್ಲಿ ಕಾಣಿಸುವುದಿಲ್ಲ. ಅದು ಗಾಳಿಯಲ್ಲಿಲ್ಲ, ದೇವತೆಗಳಲ್ಲಿಯೂ ಇಲ್ಲ. ಅದು ಸೂರ್ಯನಲ್ಲಿಯೂ, ಚಂದ್ರನಲ್ಲಿಯೂ ಕಾಣಿಸುವುದಿಲ್ಲ.
05044021a ನೈವರ್ಕ್ಷು ತನ್ನ ಯಜುಃಷು ನಾಪ್ಯಥರ್ವಸು
ನ ಚೈವ ದೃಶ್ಯತ್ಯಮಲೇಷು ಸಾಮಸು|
05044021c ರಥಂತರೇ ಬಾರ್ಹತೇ ಚಾಪಿ ರಾಜನ್
ಮಹಾವ್ರತೇ ನೈವ ದೃಶ್ಯೇದ್ಧ್ರುವಂ ತತ್||
ರಾಜನ್! ಅದು ಋಕ್ಕಿನಲ್ಲಿ ದೊರೆಯುವುದಿಲ್ಲ, ಯಜುರ್ವೇದದಲ್ಲಿಲ್ಲ, ಅಥರ್ವದಲ್ಲಿಯೂ ಇಲ್ಲ ಮತ್ತು ಅಮಲ ಸಾಮದಲ್ಲಿಯೂ, ರಥಂತರ-ಬಾರ್ಹತಗಳಲ್ಲಿಯೂ ಕಾಣುವುದಿಲ್ಲ. ಮತ್ತು ಮಹಾವ್ರತದಲ್ಲಿಯೂ ಅದು ಕಾಣುವುದಿಲ್ಲವೆನ್ನುವುದು ಸತ್ಯ.
05044022a ಅಪಾರಣೀಯಂ ತಮಸಃ ಪರಸ್ತಾತ್
ತದಂತಕೋಽಪ್ಯೇತಿ ವಿನಾಶಕಾಲೇ|
05044022c ಅಣೀಯರೂಪಂ ಕ್ಷುರಧಾರಯಾ ತನ್
ಮಹಚ್ಚ ರೂಪಂ ತ್ವಪಿ ಪರ್ವತೇಭ್ಯಃ||
ಕತ್ತಲೆಗಿಂತಲೂ ಆಚೆ ಅದಕ್ಕೆ ಹೋಗಲಿಕ್ಕಿಲ್ಲ. ವಿನಾಶಕಾಲದಲ್ಲಿ ಅಂತಕನೂ ಅದರಲ್ಲಿ ಸಾಯುತ್ತಾನೆ. ಅದು ಕತ್ತಿಯ ಅಲುಗಿಗಿಂತ ತೀಕ್ಷ್ಣವಾದುದು ಆದರೆ ಪರ್ವತದಂತೆ ಅತಿ ದೊಡ್ಡ ರೂಪವುಳ್ಳದ್ದು.
05044023a ಸಾ ಪ್ರತಿಷ್ಠಾ ತದಮೃತಂ ಲೋಕಾಸ್ತದ್ಬ್ರಹ್ಮ ತದ್ಯಶಃ|
05044023c ಭೂತಾನಿ ಜಜ್ಞೈರೇ ತಸ್ಮಾತ್ಪ್ರಲಯಂ ಯಾಂತಿ ತತ್ರ ಚ||
ಆ ಅಮೃತವಾದುದು ಲೋಕ ಮತ್ತು ಬ್ರಹ್ಮನ ಅಧಾರ. ಅದರಿಂದ ಇರುವವು ಹುಟ್ಟುತ್ತವೆ ಮತ್ತು ಅದರಲ್ಲಿಯೇ ಪ್ರಲಯವಾಗಿ ಹೋಗುತ್ತವೆ.
05044024a ಅನಾಮಯಂ ತನ್ಮಹದುದ್ಯತಂ ಯಶೋ
ವಾಚೋ ವಿಕಾರಾನ್ಕವಯೋ ವದಂತಿ|
05044024c ತಸ್ಮಿಂ ಜಗತ್ಸರ್ವಮಿದಂ ಪ್ರತಿಷ್ಠಿತಂ
ಯೇ ತದ್ವಿದುರಮೃತಾಸ್ತೇ ಭವಂತಿ||
ಅನಾಮಯ, ಉಲ್ಭಣಗೊಳ್ಳುವ ಆ ಮಹಾ ಯಶಸ್ಸು ಮಾತಿನ ವಿಕಾರವೆಂದು ಕವಿಗಳು ಹೇಳುತ್ತಾರೆ. ಅದರಿಂದಲೇ ಈ ಜಗತ್ತೆಲ್ಲವೂ ನಿಂತಿದೆ. ಅದನ್ನು ತಿಳಿದುಕೊಂಡವರು ಮೃತ್ಯುವನ್ನು ಜಯಿಸಿದವರಾಗುತ್ತಾರೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸನತ್ಸುಜಾತ ಪರ್ವಣಿ ಸನತ್ಸುಜಾತವಾಕ್ಯೇ ಚತುಶ್ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸನತ್ಸುಜಾತ ಪರ್ವದಲ್ಲಿ ಸನತ್ಸುಜಾತವಾಕ್ಯದಲ್ಲಿ ನಲ್ವತ್ನಾಲ್ಕನೆಯ ಅಧ್ಯಾಯವು.