ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೧೯
ಪಾಂಡವ-ಕೌರವರಲ್ಲಿ ಬಂದು ಸೇರಿದ ಸೇನೆಗಳು
ಸಾತ್ಯಕಿ, ಚೇದಿಯ ಧೃಷ್ಟಕೇತು, ಮಾಗಧ ಜಯತ್ಸೇನ ಇವರ ಒಂದೊಂದು ಅಕ್ಷೋಹಿಣೀ ಸೇನೆಗಳು, ಪಾಂಡ್ಯರು, ಪಾಂಚಾಲರು, ಮತ್ತು ಮತ್ಸ್ಯರು ಒಟ್ಟು ಏಳು ಅಕ್ಷೋಹಿಣೀ ಸೇನೆಗಳು ಪಾಂಡವರನ್ನು ಸೇರಿದುದು (೧-೧೩). ಭಗದತ್ತ, ಭೂರಿಶ್ರವ, ಶಲ್ಯ, ಕೃತವರ್ಮ, ಜಯದ್ರಥ, ಕಾಂಬೋಜದ ಸುದಕ್ಷಿಣ, ಅವಂತಿಯ ಇಬ್ಬರು ಮಹೀಪಾಲರು, ಕೇಕಯ ಸಹೋದರರು ಒಂದೊಂದು ಅಕ್ಷೋಹಿಣಿಗಳನ್ನೂ ತಂದು, ಒಟ್ಟಾರೆ ಹನ್ನೊಂದು ಅಕ್ಷೋಹಿಣೀ ಸೇನೆಯು ದುರ್ಯೋಧನನಲ್ಲಿಗೆ ಬಂದು ಸೇರಿದುದು (೧೪-೩೨).
05019001 ವೈಶಂಪಾಯನ ಉವಾಚ|
05019001a ಯುಯುಧಾನಸ್ತತೋ ವೀರಃ ಸಾತ್ವತಾನಾಂ ಮಹಾರಥಃ|
05019001c ಮಹತಾ ಚತುರಂಗೇಣ ಬಲೇನಾಗಾದ್ಯುಧಿಷ್ಠಿರಂ||
ವೈಶಂಪಾಯನನು ಹೇಳಿದನು: “ಆಗ ವೀರ ಸಾತ್ವತರ ಮಹಾರಥಿ ಯುಯುಧಾನನು ಮಹಾ ಚತುರಂಗ ಬಲದೊಂದಿಗೆ ಯುಧಿಷ್ಠಿರನಲ್ಲಿಗೆ ಬಂದನು.
05019002a ತಸ್ಯ ಯೋಧಾ ಮಹಾವೀರ್ಯಾ ನಾನಾದೇಶಸಮಾಗತಾಃ|
05019002c ನಾನಾಪ್ರಹರಣಾ ವೀರಾಃ ಶೋಭಯಾಂ ಚಕ್ರಿರೇ ಬಲಂ||
ನಾನಾದೇಶಗಳಿಂದ ಬಂದು ಸೇರಿದ್ದ ಅವನ ಆ ಮಹಾವೀರ, ನಾನಾಪ್ರಹರಣಗಳಲ್ಲಿ ವೀರ ಯೋಧರು ಸೇನೆಗೆ ಶೋಭೆಯನ್ನು ತಂದರು.
05019003a ಪರಶ್ವಧೈರ್ಭಿಂಡಿಪಾಲೈಃ ಶಕ್ತಿತೋಮರಮುದ್ಗರೈಃ|
05019003c ಶಕ್ತ್ಯೃಷ್ಟಿಪರಶುಪ್ರಾಸೈಃ ಕರವಾಲೈಶ್ಚ ನಿರ್ಮಲೈಃ||
05019004a ಖಡ್ಗಕಾರ್ಮುಕನಿರ್ಯೂಹೈಃ ಶರೈಶ್ಚ ವಿವಿಧೈರಪಿ|
05019004c ತೈಲಧೌತೈಃ ಪ್ರಕಾಶದ್ಭಿಸ್ತದಶೋಭತ ವೈ ಬಲಂ||
ಆ ಬಲವು ಪರಶು, ಭಿಂಡಿಪಾಲ, ಶಕ್ತಿ, ತೋಮರ, ಮುದ್ಗರ, ಶಕ್ತಿ, ಮುಷ್ಟಿ, ಪರಶು, ಪ್ರಾಸ, ನಿರ್ಮಲ ಕರವಾಲ, ಖಡ್ಗ, ಕಾರ್ಮುಕ, ವಿವಿಧ ಶರಗಳು, ತೈಲಧೌತಗಳು, ಮತ್ತು ಪ್ರಕಾಶಗಳಿಂದ ಶೋಭಿಸಿತು.
05019005a ತಸ್ಯ ಮೇಘಪ್ರಕಾಶಸ್ಯ ಶಸ್ತ್ರೈಸ್ತೈಃ ಶೋಭಿತಸ್ಯ ಚ|
05019005c ಬಭೂವ ರೂಪಂ ಸೈನ್ಯಸ್ಯ ಮೇಘಸ್ಯೇವ ಸವಿದ್ಯುತಃ||
ಶಸ್ತ್ರಸ್ತ್ರಗಳಿಂದ ಶೋಭಿಸುತ್ತಿದ್ದ ಮೇಘಭರಿತ ಆಕಾಶದ ಬಣ್ಣವನ್ನು ತಳೆದ ಅವನ ಸೇನೆಯು ಮಿಂಚಿನಿಂದ ಕೂಡಿದ ಮೇಘದಂತೆ ಕಂಡಿತು.
05019006a ಅಕ್ಷೌಹಿಣೀ ಹಿ ಸೇನಾ ಸಾ ತದಾ ಯೌಧಿಷ್ಠಿರಂ ಬಲಂ|
05019006c ಪ್ರವಿಶ್ಯಾಂತರ್ದಧೇ ರಾಜನ್ಸಾಗರಂ ಕುನದೀ ಯಥಾ||
ಅವನ ಸೇನೆಯು ಒಂದು ಅಕ್ಷೌಹಿಣಿಯದಾಗಿತ್ತು. ಯುಧಿಷ್ಠಿರನ ಬಲವು ಅದನ್ನು ಪ್ರವೇಶಿಸಿದಾಗ ಸಾಗರವನ್ನು ಸೇರುವ ಸಣ್ಣ ನದಿಯಂತೆ ಕಾಣದಾಯಿತು.
05019007a ತಥೈವಾಕ್ಷೌಹಿಣೀಂ ಗೃಹ್ಯ ಚೇದೀನಾಮೃಷಭೋ ಬಲೀ|
05019007c ಧೃಷ್ಟಕೇತುರುಪಾಗಚ್ಚತ್ಪಾಂಡವಾನಮಿತೌಜಸಃ||
ಹಾಗೆಯೇ ಚೇದಿಗಳ ರಾಜ ಬಲಶಾಲಿ ಧೃಷ್ಟಕೇತುವು ಅಕ್ಷೌಹಿಣೀ ಸೇನೆಯನ್ನು ತೆಗೆದುಕೊಂಡು ಅಮಿತೌಜಸ ಪಾಂಡವನಲ್ಲಿಗೆ ಆಗಮಿಸಿದನು.
05019008a ಮಾಗಧಶ್ಚ ಜಯತ್ಸೇನೋ ಜಾರಾಸಂಧಿರ್ಮಹಾಬಲಃ|
05019008c ಅಕ್ಷೌಹಿಣ್ಯೈವ ಸೈನ್ಯಸ್ಯ ಧರ್ಮರಾಜಮುಪಾಗಮತ್||
ಜರಾಸಂಧನ ಮಗ ಮಹಾಬಲ ಮಾಗಧ ಜಯತ್ಸೇನನು ಅಕ್ಷೌಹಿಣೀ ಸೇನೆಯೊಂದಿಗೆ ಧರ್ಮರಾಜನಲ್ಲಿಗೆ ಬಂದನು.
05019009a ತಥೈವ ಪಾಂಡ್ಯೋ ರಾಜೇಂದ್ರ ಸಾಗರಾನೂಪವಾಸಿಭಿಃ|
05019009c ವೃತೋ ಬಹುವಿಧೈರ್ಯೋಧೈರ್ಯುಧಿಷ್ಠಿರಮುಪಾಗಮತ್||
ಹಾಗೆಯೇ ಸಾಗರ ತೀರದಲ್ಲಿ ವಾಸಿಸುವ ರಾಜೇಂದ್ರ ಪಾಂಡ್ಯನು ಬಹುವಿಧದ ಯೋಧರಿಂದ ಆವೃತನಾಗಿ ಯುಧಿಷ್ಠಿರನ ಬಳಿ ಬಂದನು.
05019010a ತಸ್ಯ ಸೈನ್ಯಮತೀವಾಸೀತ್ತಸ್ಮಿನ್ಬಲಸಮಾಗಮೇ|
05019010c ಪ್ರೇಕ್ಷಣೀಯತರಂ ರಾಜನ್ಸುವೇಷಂ ಬಲವತ್ತದಾ||
ರಾಜನ್! ಸೇನೆಗಳು ಸೇರಿ ಅವನ ಸೇನೆಯು ಸುಂದರವೂ, ಬಲಶಾಲಿಯೂ, ಪ್ರೇಕ್ಷಣೀಯವೂ ಆಗಿತ್ತು.
05019011a ದ್ರುಪದಸ್ಯಾಪ್ಯಭೂತ್ಸೇನಾ ನಾನಾದೇಶಸಮಾಗತೈಃ|
05019011c ಶೋಭಿತಾ ಪುರುಷೈಃ ಶೂರೈಃ ಪುತ್ರೈಶ್ಚಾಸ್ಯ ಮಹಾರಥೈಃ||
ನಾನಾ ದೇಶಗಳಿಂದ ಬಂದು ಸೇರಿದ್ದ ದ್ರುಪದನ ಸೇನೆಯು ಶೂರ ಪುರುಷರಿಂದ ಮತ್ತು ಮಹಾರಥಿ ಪುತ್ರರಿಂದ ಶೋಭಿಸುತ್ತಿತ್ತು.
05019012a ತಥೈವ ರಾಜಾ ಮತ್ಸ್ಯಾನಾಂ ವಿರಾಟೋ ವಾಹಿನೀಪತಿಃ|
05019012c ಪಾರ್ವತೀಯೈರ್ಮಹೀಪಾಲೈಃ ಸಹಿತಃ ಪಾಂಡವಾನಿಯಾತ್||
ಹಾಗೆಯೇ ವಾಹಿನೀಪತಿ ಮತ್ಸ್ಯರ ರಾಜ ವಿರಾಟನು ಪರ್ವತವಾಸೀ ಮಹೀಪಾಲರೊಂದಿಗೆ ಪಾಂಡವರಲ್ಲಿಗೆ ಬಂದನು.
05019013a ಇತಶ್ಚೇತಶ್ಚ ಪಾಂಡೂನಾಂ ಸಮಾಜಗ್ಮುರ್ಮಹಾತ್ಮನಾಂ|
05019013c ಅಕ್ಷೌಹಿಣ್ಯಸ್ತು ಸಪ್ತೈವ ವಿವಿಧಧ್ವಜಸಂಕುಲಾಃ|
05019013e ಯುಯುತ್ಸಮಾನಾಃ ಕುರುಭಿಃ ಪಾಂಡವಾನ್ಸಮಹರ್ಷಯನ್||
ಮಹಾತ್ಮ ಪಾಂಡವರಲ್ಲಿಗೆ ಇವರು ಮತ್ತು ಇತರ ವಿವಿಧ ಧ್ವಜ ಸಂಕುಲಗಳ ಏಳು ಅಕ್ಷೌಹಿಣೀಗಳು ಬಂದು ಸೇರಿದವು. ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾದ ಅವರು ಪಾಂಡವರನ್ನು ಸಂತೋಷಗೊಳಿಸಿದರು.
05019014a ತಥೈವ ಧಾರ್ತರಾಷ್ಟ್ರಸ್ಯ ಹರ್ಷಂ ಸಮಭಿವರ್ಧಯನ್|
05019014c ಭಗದತ್ತೋ ಮಹೀಪಾಲಃ ಸೇನಾಮಕ್ಷೌಹಿಣೀಂ ದದೌ||
ಹಾಗೆಯೇ ಮಹೀಪಾಲ ಭಗದತ್ತನು ಒಂದು ಅಕ್ಷೌಹಿಣೀ ಸೇನೆಯನ್ನಿತ್ತು ಧಾರ್ತರಾಷ್ಟ್ರನ ಹರ್ಷವನ್ನು ಹೆಚ್ಚಿಸಿದನು.
05019015a ತಸ್ಯ ಚೀನೈಃ ಕಿರಾತೈಶ್ಚ ಕಾಂಚನೈರಿವ ಸಂವೃತಂ|
05019015c ಬಭೌ ಬಲಮನಾಧೃಷ್ಯಂ ಕರ್ಣಿಕಾರವನಂ ಯಥಾ||
ಬಂಗಾರದಂತೆ ಹೊಳೆಯುತ್ತಿದ್ದ ಚೀನ-ಕಿರಾತರಿಂದ ಕೂಡಿದ್ದ ಅವನ ಸೇನೆಯು ಕರ್ಣಿಕಾರವನದಂತೆ ತೋರಿತು.
05019016a ತಥಾ ಭೂರಿಶ್ರವಾಃ ಶೂರಃ ಶಲ್ಯಶ್ಚ ಕುರುನಂದನ|
05019016c ದುರ್ಯೋಧನಮುಪಾಯಾತಾವಕ್ಷೌಹಿಣ್ಯಾ ಪೃಥಕ್ ಪೃಥಕ್||
ಕುರುನಂದನ! ಹಾಗೆಯೇ ಭೂರಿಶ್ರವ ಮತ್ತು ಶೂರ ಶಲ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಅಕ್ಷೌಹಿಣಿಯನ್ನು ದುರ್ಯೋಧನನಿಗೆ ನೀಡಿದರು.
05019017a ಕೃತವರ್ಮಾ ಚ ಹಾರ್ದಿಕ್ಯೋ ಭೋಜಾಂಧಕಬಲೈಃ ಸಹ|
05019017c ಅಕ್ಷೌಹಿಣ್ಯೈವ ಸೇನಾಯಾ ದುರ್ಯೋಧನಮುಪಾಗಮತ್||
ಹಾರ್ದಿಕ್ಯ ಕೃತವರ್ಮನು ಭೋಜ-ಅಂಧಕರ ಸೇನೆಯೊಂದಿಗೆ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ದುರ್ಯೋಧನನಲ್ಲಿಗೆ ಬಂದನು.
05019018a ತಸ್ಯ ತೈಃ ಪುರುಷವ್ಯಾಘ್ರೈರ್ವನಮಾಲಾಧರೈರ್ಬಲಂ|
05019018c ಅಶೋಭತ ಯಥಾ ಮತ್ತೈರ್ವನಂ ಪ್ರಕ್ರೀಡಿತೈರ್ಗಜೈಃ||
ವನಮಾಲೆಗಳನ್ನು ಧರಿಸಿದ್ದ ಪುರುಷವ್ಯಾಘ್ರರಿಂದ ತುಂಬಿದ ಅವನ ಆ ಸೇನೆಯು ಮತ್ತ ಗಜಗಳು ಆಡುತ್ತಿರುವ ವನದಂತೆ ಶೋಭಿಸಿತು.
05019019a ಜಯದ್ರಥಮುಖಾಶ್ಚಾನ್ಯೇ ಸಿಂಧುಸೌವೀರವಾಸಿನಃ|
05019019c ಆಜಗ್ಮುಃ ಪೃಥಿವೀಪಾಲಾಃ ಕಂಪಯಂತ ಇವಾಚಲಾನ್||
ಜಯದ್ರಥನ ಮುಂದಾಳುತ್ವದಲ್ಲಿ ಇತರ ಸಿಂಧು ಸೌವೀರ ವಾಸಿ ಪೃಥ್ವೀಪಾಲರು ಪರ್ವತಗಳನ್ನು ನಡುಗಿಸುವಂತೆ ಆಗಮಿಸಿದರು.
05019020a ತೇಷಾಮಕ್ಷೌಹಿಣೀ ಸೇನಾ ಬಹುಲಾ ವಿಬಭೌ ತದಾ|
05019020c ವಿಧೂಯಮಾನಾ ವಾತೇನ ಬಹುರೂಪಾ ಇವಾಂಬುದಾಃ||
ಅವರ ಅಕ್ಷೌಹಿಣೀ ಸೇನೆಯು ಗಾಳಿಯಿಂದ ತೂರಿಸಿಕೊಂಡು ಬಂದ ಬಹುರೂಪದ ಮೋಡಗಳಂತೆ ತೋರಿತು.
05019021a ಸುದಕ್ಷಿಣಶ್ಚ ಕಾಂಬೋಜೋ ಯವನೈಶ್ಚ ಶಕೈಸ್ತಥಾ|
05019021c ಉಪಾಜಗಾಮ ಕೌರವ್ಯಮಕ್ಷೌಹಿಣ್ಯಾ ವಿಶಾಂ ಪತೇ||
ವಿಶಾಂಪತೇ! ಕಾಂಬೋಜ ಸುದಕ್ಷಿಣ, ಯವನ ಮತ್ತು ಶಕರು ಅಕ್ಷೌಹಿಣಿಯೊಂದಿಗೆ ಕೌರವನಲ್ಲಿಗೆ ಬಂದರು.
05019022a ತಸ್ಯ ಸೇನಾಸಮಾವಾಹ್ಯ ಶಲಭಾನಾಮಿವಾಬಭೌ|
05019022c ಸ ಚ ಸಂಪ್ರಾಪ್ಯ ಕೌರವ್ಯಂ ತತ್ರೈವಾಂತರ್ದಧೇ ತದಾ||
ಶಲಭಗಳ ಗುಂಪಿನಂತಿದ್ದ ಅವನ ಸೇನೆಯು ಕೌರವನ ಸೇನೆಯನ್ನು ಸೇರಿ ಅಲ್ಲಿಯೇ ಅಂತರ್ಧಾನವಾಯಿತು.
05019023a ತಥಾ ಮಾಹಿಷ್ಮತೀವಾಸೀ ನೀಲೋ ನೀಲಾಯುಧೈಃ ಸಹ|
05019023c ಮಹೀಪಾಲೋ ಮಹಾವೀರ್ಯೈರ್ದಕ್ಷಿಣಾಪಥವಾಸಿಭಿಃ||
05019024a ಆವಂತ್ಯೌ ಚ ಮಹೀಪಾಲೌ ಮಹಾಬಲಸುಸಂವೃತೌ|
05019024c ಪೃಥಗಕ್ಷೌಹಿಣೀಭ್ಯಾಂ ತಾವಭಿಯಾತೌ ಸುಯೋಧನಂ||
ಹಾಗೆಯೇ ಮಾಹಿಷ್ಮತೀ ವಾಸಿಗಳಾದ ನೀಲರು ನೀಲಾಯುಧಗಳೊಂದಿಗೆ, ದಕ್ಷಿಣಾಪಥವಾಸಿಗಳಾದ ಮಹಾವೀರ ಮಹೀಪಾಲರು, ಮಹಾಬಲ ಸಂವೃತರಾದ ಅವಂತಿಯ ಮಹೀಪಾಲರಿಬ್ಬರು ಪ್ರತ್ಯೇಕ ಅಕ್ಷೌಹಿಣೀಗಳೊಂದಿಗೆ ಸುಯೋಧನನಲ್ಲಿಗೆ ಆಗಮಿಸಿದರು.
05019025a ಕೇಕಯಾಶ್ಚ ನರವ್ಯಾಘ್ರಾಃ ಸೋದರ್ಯಾಃ ಪಂಚ ಪಾರ್ಥಿವಾಃ|
05019025c ಸಂಹರ್ಷಯಂತಃ ಕೌರವ್ಯಮಕ್ಷೌಹಿಣ್ಯಾ ಸಮಾದ್ರವನ್||
ನರವ್ಯಾಘ್ರ ಪಾರ್ಥಿವ ಕೇಕಯ ಸಹೋದರರೈವರು ಅಕ್ಷೌಹಿಣಿಗಳಿಂದ ಕೌರವ್ಯನನ್ನು ಸಂತೋಷಗೊಳಿಸಿದರು.
05019026a ಇತಶ್ಚೇತಶ್ಚ ಸರ್ವೇಷಾಂ ಭೂಮಿಪಾನಾಂ ಮಹಾತ್ಮನಾಂ|
05019026c ತಿಸ್ರೋಽನ್ಯಾಃ ಸಮವರ್ತಂತ ವಾಹಿನ್ಯೋ ಭರತರ್ಷಭ||
ಭರತರ್ಷಭ! ಇವರು ಮತ್ತು ಇತರ ಮಹಾತ್ಮ ಭೂಮಿಪರೆಲ್ಲರ ಮೂರು ಭಾಗಗಳ ವಾಹಿನಿಯೂ ಬಂದು ಸೇರಿತು.
05019027a ಏವಮೇಕಾದಶಾವೃತ್ತಾಃ ಸೇನಾ ದುರ್ಯೋಧನಸ್ಯ ತಾಃ|
05019027c ಯುಯುತ್ಸಮಾನಾಃ ಕೌಂತೇಯಾನ್ನಾನಾಧ್ವಜಸಮಾಕುಲಾಃ||
ಹೀಗೆ ದುರ್ಯೋಧನನಲ್ಲಿ ಹನ್ನೊಂದು ಅಕ್ಷೌಹಿಣೀ ಸೇನೆಯು ಬಂದು ಸೇರಿತು. ನಾನಾಧ್ವಜ ಸಮಾಕುಲರಾದ ಅವರು ಕೌಂತೇಯರೊಡನೆ ಯುದ್ಧಮಾಡಲು ಉತ್ಸುಕರಾಗಿದ್ದರು.
05019028a ನ ಹಾಸ್ತಿನಪುರೇ ರಾಜನ್ನವಕಾಶೋಽಭವತ್ತದಾ|
05019028c ರಾಜ್ಞಾಂ ಸಬಲಮುಖ್ಯಾನಾಂ ಪ್ರಾಧಾನ್ಯೇನಾಪಿ ಭಾರತ||
ಭಾರತ! ರಾಜನ್! ಹಸ್ತಿನಾಪುರದಲ್ಲಿ ರಾಜನ ಸಬಲಮುಖ್ಯರಿಗೆ ಮತ್ತು ಪ್ರಧಾನರಿಗೆ ಕೂಡ ಸ್ಥಳವಿಲ್ಲದಂತಾಯಿತು.
05019029a ತತಃ ಪಂಚನದಂ ಚೈವ ಕೃತ್ಸ್ನಂ ಚ ಕುರುಜಾಂಗಲಂ|
05019029c ತಥಾ ರೋಹಿತಕಾರಣ್ಯಂ ಮರುಭೂಮಿಶ್ಚ ಕೇವಲಾ||
05019030a ಅಹಿಚ್ಚತ್ರಂ ಕಾಲಕೂಟಂ ಗಂಗಾಕೂಲಂ ಚ ಭಾರತ|
05019030c ವಾರಣಾ ವಾಟಧಾನಂ ಚ ಯಾಮುನಶ್ಚೈವ ಪರ್ವತಃ||
05019031a ಏಷ ದೇಶಃ ಸುವಿಸ್ತೀರ್ಣಃ ಪ್ರಭೂತಧನಧಾನ್ಯವಾನ್|
05019031c ಬಭೂವ ಕೌರವೇಯಾಣಾಂ ಬಲೇನ ಸುಸಮಾಕುಲಃ||
ಭಾರತ! ಆಗ ಐದುನದಿಗಳ ಮತ್ತು ಕುರುಜಾಂಗಲವೆಲ್ಲವೂ, ಹಾಗೆಯೇ ಸಮಭೂಮಿಯ ರೋಹಿತಾರಣ್ಯವೂ, ಅಹಿಚ್ಛತ್ರ, ಕಾಲಕೂಟ, ಗಂಗಾಕೂಲ, ವಾರಣ, ವಾಟಧಾನ, ಯಮುನಾ ಪರ್ವತವೂ, ಧನಧಾನ್ಯಗಳಿಂದ ಸಮೃದ್ಧವಾದ ಈ ಎಲ್ಲ ಸುವಿಸ್ತೀರ್ಣ ಪ್ರದೇಶಗಳೂ ಕೌರವ ಸೇನೆಯ ಸಮಾಕುಲದಿಂದ ತುಂಬಿಹೋದವು.
05019032a ತತ್ರ ಸೈನ್ಯಂ ತಥಾಯುಕ್ತಂ ದದರ್ಶ ಸ ಪುರೋಹಿತಃ|
05019032c ಯಃ ಸ ಪಾಂಚಾಲರಾಜೇನ ಪ್ರೇಷಿತಃ ಕೌರವಾನ್ಪ್ರತಿ||
ಯಥಾಯುಕ್ತವಾಗಿ ಕೌರವರ ಕಡೆ ಪಾಂಚಾಲರಾಜನಿಂದ ಕಳುಹಿಸಲ್ಪಟ್ಟಿದ್ದ ಪುರೋಹಿತನು ಆ ಸೇನೆಯನ್ನು ನೋಡಿದನು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಸೈನ್ಯದರ್ಶನೇ ಏಕೋನವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಸೈನ್ಯದರ್ಶನದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.