ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ
೧೮೭
ಅಂಬೆಯ ತಪಸ್ಸು
ತನ್ನಿಂದ ಭೀಷ್ಮನನ್ನು ಸೋಲಿಸಲಿಕ್ಕಾಗಲಿಲ್ಲವೆಂದು ಪರಶುರಾಮನು ಅಂಬೆಗೆ ಹೇಳಲು “ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ” ಎಂದು ಹೇಳಿ ಅಂಬೆಯು ತೀವ್ರ ತಪಸ್ಸನ್ನಾಚರಿಸಿದ್ದುದು (೧-೪೦).
05187001 ರಾಮ ಉವಾಚ|
05187001a ಪ್ರತ್ಯಕ್ಷಮೇತಲ್ಲೋಕಾನಾಂ ಸರ್ವೇಷಾಮೇವ ಭಾಮಿನಿ|
05187001c ಯಥಾ ಮಯಾ ಪರಂ ಶಕ್ತ್ಯಾ ಕೃತಂ ವೈ ಪೌರುಷಂ ಮಹತ್||
ರಾಮನು ಹೇಳಿದನು: “ಭಾಮಿನೀ! ಈ ಲೋಕಗಳೆಲ್ಲವುಗಳ ಮುಂದೆ ನನ್ನಲ್ಲಿದ್ದ ಪರಮ ಶಕ್ತಿಯನ್ನುಪಯೋಗಿಸಿ ಮಹಾ ಪೌರುಷವನ್ನು ತೋರಿಸಿದ್ದೇನೆ.
05187002a ನ ಚೈವ ಯುಧಿ ಶಕ್ನೋಮಿ ಭೀಷ್ಮಂ ಶಸ್ತ್ರಭೃತಾಂ ವರಂ|
05187002c ವಿಶೇಷಯಿತುಮತ್ಯರ್ಥಮುತ್ತಮಾಸ್ತ್ರಾಣಿ ದರ್ಶಯನ್||
ನನ್ನ ಉತ್ತಮ ಅಸ್ತ್ರಗಳನ್ನು ತೋರಿಸಿಯೂ ನಾನು ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಭೀಷ್ಮನನ್ನು ಯುದ್ಧದಲ್ಲಿ ಮೀರಿಸಲು ಶಕ್ಯನಾಗಲಿಲ್ಲ.
05187003a ಏಷಾ ಮೇ ಪರಮಾ ಶಕ್ತಿರೇತನ್ಮೇ ಪರಮಂ ಬಲಂ|
05187003c ಯಥೇಷ್ಟಂ ಗಮ್ಯತಾಂ ಭದ್ರೇ ಕಿಮನ್ಯದ್ವಾ ಕರೋಮಿ ತೇ||
ಇದು ನನ್ನ ಶಕ್ತಿಯ ಮಿತಿ. ಇದು ನನ್ನ ಬಲದ ಮಿತಿ. ಭದ್ರೇ! ನಿನಗಿಷ್ಟವಾದಲ್ಲಿಗೆ ಹೋಗುವವಳಾಗು. ಅಥವಾ ನಿನಗೆ ಬೇರೆ ಏನಾದರೂ ಮಾಡಲೇ?
05187004a ಭೀಷ್ಮಮೇವ ಪ್ರಪದ್ಯಸ್ವ ನ ತೇಽನ್ಯಾ ವಿದ್ಯತೇ ಗತಿಃ|
05187004c ನಿರ್ಜಿತೋ ಹ್ಯಸ್ಮಿ ಭೀಷ್ಮೇಣ ಮಹಾಸ್ತ್ರಾಣಿ ಪ್ರಮುಂಚತಾ||
ಭೀಷ್ಮನನ್ನೇ ಶರಣು ಹೋಗು. ನಿನಗೆ ಬೇರೆ ಗತಿಯೇ ಇಲ್ಲವೆನಿಸುತ್ತದೆ. ಏಕೆಂದರೆ ಮಹಾಸ್ತ್ರಗಳನ್ನು ಪ್ರಯೋಗಿಸಿ ಭೀಷ್ಮನು ನನ್ನನ್ನು ಗೆದ್ದಿದ್ದಾನೆ.””
05187005 ಭೀಷ್ಮ ಉವಾಚ|
05187005a ಏವಮುಕ್ತ್ವಾ ತತೋ ರಾಮೋ ವಿನಿಃಶ್ವಸ್ಯ ಮಹಾಮನಾಃ|
05187005c ತೂಷ್ಣೀಮಾಸೀತ್ತದಾ ಕನ್ಯಾ ಪ್ರೋವಾಚ ಭೃಗುನಂದನಂ||
ಭೀಷ್ಮನು ಹೇಳಿದನು: “ಹೀಗೆ ಹೇಳಿ ಮಹಾಮನಸ್ವಿ ರಾಮನು ನಿಟ್ಟುಸಿರು ಬಿಡುತ್ತಾ ಸುಮ್ಮನಾದನು. ಆಗ ಕನ್ಯೆಯು ಭೃಗುನಂದನನಿಗೆ ಹೇಳಿದಳು:
05187006a ಭಗವನ್ನೇವಮೇವೈತದ್ಯಥಾಹ ಭಗವಾಂಸ್ತಥಾ|
05187006c ಅಜೇಯೋ ಯುಧಿ ಭೀಷ್ಮೋಽಯಮಪಿ ದೇವೈರುದಾರಧೀಃ||
“ಭಗವನ್! ಇನ್ನು ನೀನು ಹೇಳಿದಂತೆಯೇ! ಈ ಉದಾರಧೀ ಭೀಷ್ಮನು ಯುದ್ಧದಲ್ಲಿ ದೇವತೆಗಳಿಗೂ ಅಜೇಯನು.
05187007a ಯಥಾಶಕ್ತಿ ಯಥೋತ್ಸಾಹಂ ಮಮ ಕಾರ್ಯಂ ಕೃತಂ ತ್ವಯಾ|
05187007c ಅನಿಧಾಯ ರಣೇ ವೀರ್ಯಮಸ್ತ್ರಾಣಿ ವಿವಿಧಾನಿ ಚ||
ಯಥಾಶಕ್ತಿಯಾಗಿ ಯಥೋತ್ಸಾಹವಾಗಿ ನೀನು, ರಣದಲ್ಲಿ ನಿನ್ನ ವಿವಿಧ ವೀರ್ಯ ಅಸ್ತ್ರಗಳನ್ನು ಕೆಳಗಿಡದೆಯೇ ನನ್ನ ಕೆಲಸವನ್ನು ಮಾಡಿದ್ದೀಯೆ.
05187008a ನ ಚೈಷ ಶಕ್ಯತೇ ಯುದ್ಧೇ ವಿಶೇಷಯಿತುಮಂತತಃ|
05187008c ನ ಚಾಹಮೇನಂ ಯಾಸ್ಯಾಮಿ ಪುನರ್ಭೀಷ್ಮಂ ಕಥಂ ಚನ||
ಕೊನೆಯಲ್ಲಿಯೂ ಯುದ್ಧದಲ್ಲಿ ಅವನನ್ನು ಮೀರಿಸಲು ಸಾಧ್ಯವಾಗಲಿಲ್ಲ. ಆದರೆ ನಾನು ಪುನಃ ಎಂದೂ ಭೀಷ್ಮನಲ್ಲಿಗೆ ಹೋಗುವುದಿಲ್ಲ.
05187009a ಗಮಿಷ್ಯಾಮಿ ತು ತತ್ರಾಹಂ ಯತ್ರ ಭೀಷ್ಮಂ ತಪೋಧನ|
05187009c ಸಮರೇ ಪಾತಯಿಷ್ಯಾಮಿ ಸ್ವಯಮೇವ ಭೃಗೂದ್ವಹ||
ತಪೋಧನ! ಭೃಗೂದ್ವಹ! ಎಲ್ಲಿ ಸ್ವಯಂ ನಾನೇ ಭೀಷ್ಮನನ್ನು ಸಮರದಲ್ಲಿ ಬೀಳಿಸಬಲ್ಲೆನೋ ಅಲ್ಲಿಗೆ ಹೋಗುತ್ತೇನೆ.”
05187010a ಏವಮುಕ್ತ್ವಾ ಯಯೌ ಕನ್ಯಾ ರೋಷವ್ಯಾಕುಲಲೋಚನಾ|
05187010c ತಪಸೇ ಧೃತಸಂಕಲ್ಪಾ ಮಮ ಚಿಂತಯತೀ ವಧಂ||
ಹೀಗೆ ಹೇಳಿ ಆ ರೋಷವ್ಯಾಕುಲಲೋಚನೆ ಕನ್ಯೆಯು ನನ್ನ ವಧೆಯನ್ನೇ ಚಿಂತಿಸುತ್ತಾ ತಪಸ್ಸಿನ ಧೃತ ಸಂಕಲ್ಪವನ್ನು ಮಾಡಿ ಹೊರಟು ಹೋದಳು.
05187011a ತತೋ ಮಹೇಂದ್ರಂ ಸಹ ತೈರ್ಮುನಿಭಿರ್ಭೃಗುಸತ್ತಮಃ|
05187011c ಯಥಾಗತಂ ಯಯೌ ರಾಮೋ ಮಾಮುಪಾಮಂತ್ರ್ಯ ಭಾರತ||
ಭಾರತ! ಆಗ ಆ ಮುನಿ ಭೃಗುಸತ್ತಮ ರಾಮನು ನನ್ನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಆ ಮಹೇಂದ್ರ ಪರ್ವತಕ್ಕೆ ಮುನಿಗಳ ಸಹಿತ ಹೊರಟು ಹೋದನು.
05187012a ತತೋಽಹಂ ರಥಮಾರುಹ್ಯ ಸ್ತೂಯಮಾನೋ ದ್ವಿಜಾತಿಭಿಃ|
05187012c ಪ್ರವಿಶ್ಯ ನಗರಂ ಮಾತ್ರೇ ಸತ್ಯವತ್ಯೈ ನ್ಯವೇದಯಂ|
05187012e ಯಥಾವೃತ್ತಂ ಮಹಾರಾಜ ಸಾ ಚ ಮಾಂ ಪ್ರತ್ಯನಂದತ||
ಆಗ ನಾನು ರಥವನ್ನೇರಿ, ದ್ವಿಜಾತಿಯವರು ಸ್ತುತಿಸುತ್ತಿರಲು ನಗರವನ್ನು ಪ್ರವೇಶಿಸಿ ತಾಯಿ ಸತ್ಯವತಿಗೆ ನಡೆದುದೆಲ್ಲವನ್ನೂ ನಿವೇದಿಸಿದೆನು. ಮಹಾರಾಜ! ಅವಳೂ ಕೂಡ ನನ್ನನ್ನು ಅಭಿನಂದಿಸಿದಳು.
05187013a ಪುರುಷಾಂಶ್ಚಾದಿಶಂ ಪ್ರಾಜ್ಞಾನ್ಕನ್ಯಾವೃತ್ತಾಂತಕರ್ಮಣಿ|
05187013c ದಿವಸೇ ದಿವಸೇ ಹ್ಯಸ್ಯಾ ಗತಜಲ್ಪಿತಚೇಷ್ಟಿತಂ|
05187013e ಪ್ರತ್ಯಾಹರಂಶ್ಚ ಮೇ ಯುಕ್ತಾಃ ಸ್ಥಿತಾಃ ಪ್ರಿಯಹಿತೇ ಮಮ||
ಆ ಕನ್ಯೆಯ ಕೆಲಸಗಳ ವೃತ್ತಾಂತವನ್ನು ತಿಳಿಯಲೋಸುಗ ನಾನು ಪ್ರಾಜ್ಞ ಪುರುಷರನ್ನು ನಿಯೋಜಿಸಿದೆನು. ಅವರು ನನ್ನ ಪ್ರಿಯಹಿತಗಳಲ್ಲಿ ನಿರತರಾಗಿ ದಿವಸ ದಿವಸವೂ ಅವಳ ಓಡಾಟಗಳನ್ನು, ಮಾತುಗಳನ್ನು ಮತ್ತು ನಡತೆಗಳನ್ನು ನನಗೆ ವರದಿ ಮಾಡಿದರು.
05187014a ಯದೈವ ಹಿ ವನಂ ಪ್ರಾಯಾತ್ಕನ್ಯಾ ಸಾ ತಪಸೇ ಧೃತಾ|
05187014c ತದೈವ ವ್ಯಥಿತೋ ದೀನೋ ಗತಚೇತಾ ಇವಾಭವಂ||
ಅವಳು ತಪಸ್ಸಿಗೆ ಹಠಮಾಡಿ ವನಕ್ಕೆ ಹೋದಾಗಿನಿಂದಲೇ ನಾನು ವ್ಯಥಿತನೂ, ದೀನನೂ, ಬುದ್ಧಿಕಳೆದುಕೊಂಡಂಥವನೂ ಆದೆನು.
05187015a ನ ಹಿ ಮಾಂ ಕ್ಷತ್ರಿಯಃ ಕಶ್ಚಿದ್ವೀರ್ಯೇಣ ವಿಜಯೇದ್ಯುಧಿ|
05187015c ಋತೇ ಬ್ರಹ್ಮವಿದಸ್ತಾತ ತಪಸಾ ಸಂಶಿತವ್ರತಾತ್||
ಮಗೂ! ಏಕೆಂದರೆ ಬ್ರಹ್ಮವಿದನಾದ ಸಂಶಿತವ್ರತ ತಾಪಸನನ್ನು ಬಿಟ್ಟು ಬೇರೆ ಯಾವ ಕ್ಷತ್ರಿಯನೂ ವೀರ್ಯದಿಂದ ನನ್ನನ್ನು ಯುದ್ಧದಲ್ಲಿ ಜಯಿಸಲಾರನು!
05187016a ಅಪಿ ಚೈತನ್ಮಯಾ ರಾಜನ್ನಾರದೇಽಪಿ ನಿವೇದಿತಂ|
05187016c ವ್ಯಾಸೇ ಚೈವ ಭಯಾತ್ಕಾರ್ಯಂ ತೌ ಚೋಭೌ ಮಾಮವೋಚತಾಂ||
ರಾಜನ್! ಭಯದಿಂದ ನಾನು ಇದನ್ನು ನಾರದ ಮತ್ತು ವ್ಯಾಸನಿಗೂ ಕೂಡ ಹೇಳುವ ಕಾರ್ಯವನ್ನು ಮಾಡಿದೆ. ಅವರು ನನಗೆ ಹೇಳಿದರು:
05187017a ನ ವಿಷಾದಸ್ತ್ವಯಾ ಕಾರ್ಯೋ ಭೀಷ್ಮ ಕಾಶಿಸುತಾಂ ಪ್ರತಿ|
05187017c ದೈವಂ ಪುರುಷಕಾರೇಣ ಕೋ ನಿವರ್ತಿತುಮುತ್ಸಹೇತ್||
“ಭೀಷ್ಮ! ಕಾಶಿಸುತೆಯ ಕುರಿತು ವಿಷಾದಪಡಬೇಡ. ದೈವವನ್ನು ಪುರುಷ ಕಾರಣಗಳಿಂದ ಯಾರುತಾನೇ ತಡೆಯಲು ಪ್ರಯತ್ನಿಸಬೇಕು?”
05187018a ಸಾ ತು ಕನ್ಯಾ ಮಹಾರಾಜ ಪ್ರವಿಶ್ಯಾಶ್ರಮಮಂಡಲಂ|
05187018c ಯಮುನಾತೀರಮಾಶ್ರಿತ್ಯ ತಪಸ್ತೇಪೇಽತಿಮಾನುಷಂ||
ಮಹಾರಾಜ! ಆ ಕನ್ಯೆಯಾದರೋ ಯಮುನಾತೀರದ ಆಶ್ರಮಮಂಡಲವನ್ನು ಪ್ರವೇಶಿಸಿ ಅತಿಮಾನುಷ ತಪಸ್ಸನ್ನು ತಪಿಸಿದಳು.
05187019a ನಿರಾಹಾರಾ ಕೃಶಾ ರೂಕ್ಷಾ ಜಟಿಲಾ ಮಲಪಂಕಿನೀ|
05187019c ಷಣ್ಮಾಸಾನ್ವಾಯುಭಕ್ಷಾ ಚ ಸ್ಥಾಣುಭೂತಾ ತಪೋಧನಾ||
ಆ ತಪೋಧನೆಯು ನಿರಾಹಾರಳಾಗಿ, ಕೃಶಳಾಗಿ, ರೂಕ್ಷಳಾಗಿ, ಜಟಿಲಳಾಗಿ, ಹೊಲಸುತುಂಬಿಕೊಂಡು ಆರು ತಿಂಗಳು ಗಾಳಿಯನ್ನೇ ಸೇವಿಸುತ್ತಾ ಅಲುಗಾಡದೇ ನಿಂತಿದ್ದಳು.
05187020a ಯಮುನಾತೀರಮಾಸಾದ್ಯ ಸಂವತ್ಸರಮಥಾಪರಂ|
05187020c ಉದವಾಸಂ ನಿರಾಹಾರಾ ಪಾರಯಾಮಾಸ ಭಾಮಿನೀ||
ಇನ್ನೊಂದು ವರ್ಷ ಆ ಭಾಮಿನಿಯು ಯಮುನಾತೀರವನ್ನು ಸೇರಿ ನಿರಾಹಾರಳಾಗಿ ನೀರಿನಲ್ಲಿಯೇ ವಾಸಿಸಿ ಕಳೆದಳು.
05187021a ಶೀರ್ಣಪರ್ಣೇನ ಚೈಕೇನ ಪಾರಯಾಮಾಸ ಚಾಪರಂ|
05187021c ಸಂವತ್ಸರಂ ತೀವ್ರಕೋಪಾ ಪಾದಾಂಗುಷ್ಠಾಗ್ರಧಿಷ್ಠಿತಾ||
ಅನಂತರ ತೀವ್ರಕೋಪದಿಂದ ಪಾದದ ಅಂಗುಷ್ಠದ ಮೇಲೆ ನಿಂತುಕೊಂಡು ಕೇವಲ ಒಂದು ಒಣ ಎಲೆಯನ್ನು ತಿಂದುಕೊಂಡು ಒಂದು ವರ್ಷವನ್ನು ಕಳೆದಳು.
05187022a ಏವಂ ದ್ವಾದಶ ವರ್ಷಾಣಿ ತಾಪಯಾಮಾಸ ರೋದಸೀ|
05187022c ನಿವರ್ತ್ಯಮಾನಾಪಿ ತು ಸಾ ಜ್ಞಾತಿಭಿರ್ನೈವ ಶಕ್ಯತೇ||
ಹೀಗೆ ಆ ರೋದಸಿಯು ಹನ್ನೆರಡು ವರ್ಷಗಳು ತಪಿಸಿದಳು. ಅವಳ ಬಾಂಧವರೂ ಕೂಡ ಅವಳನ್ನು ತಡೆಯಲು ಶಕ್ಯರಾಗಲಿಲ್ಲ.
05187023a ತತೋಽಗಮದ್ವತ್ಸಭೂಮಿಂ ಸಿದ್ಧಚಾರಣಸೇವಿತಾಂ|
05187023c ಆಶ್ರಮಂ ಪುಣ್ಯಶೀಲಾನಾಂ ತಾಪಸಾನಾಂ ಮಹಾತ್ಮನಾಂ||
ಆಗ ಅವಳು ಸಿದ್ಧಚಾರಣಸೇವಿತ ಮಹಾತ್ಮ ತಾಪಸ ಪುಣ್ಯಶೀಲರ ಆಶ್ರಮ ಭೂಮಿಗೆ ಹೋದಳು.
05187024a ತತ್ರ ಪುಣ್ಯೇಷು ದೇಶೇಷು ಸಾಪ್ಲುತಾಂಗೀ ದಿವಾನಿಶಂ|
05187024c ವ್ಯಚರತ್ಕಾಶಿಕನ್ಯಾ ಸಾ ಯಥಾಕಾಮವಿಚಾರಿಣೀ||
ಅಲ್ಲಿ ಪುಣ್ಯದೇಶಗಳಲ್ಲಿ ಸ್ನಾನಮಾಡುತ್ತಾ ಹಗಲು ರಾತ್ರಿ ಕಾಶಿಕನ್ಯೆಯು ತನಗಿಷ್ಟವಾದ ಹಾಗೆ ತಿರುಗಾಡಿದಳು.
05187025a ನಂದಾಶ್ರಮೇ ಮಹಾರಾಜ ತತೋಲೂಕಾಶ್ರಮೇ ಶುಭೇ|
05187025c ಚ್ಯವನಸ್ಯಾಶ್ರಮೇ ಚೈವ ಬ್ರಹ್ಮಣಃ ಸ್ಥಾನ ಏವ ಚ||
05187026a ಪ್ರಯಾಗೇ ದೇವಯಜನೇ ದೇವಾರಣ್ಯೇಷು ಚೈವ ಹ|
05187026c ಭೋಗವತ್ಯಾಂ ತಥಾ ರಾಜನ್ಕೌಶಿಕಸ್ಯಾಶ್ರಮೇ ತಥಾ||
05187027a ಮಾಂಡವ್ಯಸ್ಯಾಶ್ರಮೇ ರಾಜನ್ದಿಲೀಪಸ್ಯಾಶ್ರಮೇ ತಥಾ|
05187027c ರಾಮಹ್ರದೇ ಚ ಕೌರವ್ಯ ಪೈಲಗಾರ್ಗ್ಯಸ್ಯ ಚಾಶ್ರಮೇ||
05187028a ಏತೇಷು ತೀರ್ಥೇಷು ತದಾ ಕಾಶಿಕನ್ಯಾ ವಿಶಾಂ ಪತೇ|
05187028c ಆಪ್ಲಾವಯತ ಗಾತ್ರಾಣಿ ತೀವ್ರಮಾಸ್ಥಾಯ ವೈ ತಪಃ||
ಮಹಾರಾಜ! ರಾಜನ್! ವಿಶಾಂಪತೇ! ಕೌರವ್ಯ! ನಂದಾಶ್ರಮ, ನಂತರ ಶುಭ ಉಲೂಕಾಶ್ರಮ, ಚ್ಯವನಾಶ್ರಮ, ಬ್ರಹ್ಮಸ್ಥಾನ, ದೇವರು ಯಾಜಿಸಿದ, ದೇವರ ಅರಣ್ಯ ಪ್ರಯಾಗ, ಭೋಗವತಿ, ಕೌಶಿಕಾಶ್ರಮ, ಮಾಂಡವ್ಯಾಶ್ರಮ, ದಿಲೀಪನ ಆಶ್ರಮ, ರಾಮಸರೋವರ, ಪೈಲಗಾರ್ಗನ ಆಶ್ರಮ - ಈ ತೀರ್ಥಗಳಲ್ಲಿ ಕಾಶಿಕನ್ಯೆಯು ದೇಹವನ್ನು ತೊಳೆದು ತೀವ್ರ ತಪಸ್ಸಿನಲ್ಲಿದ್ದಳು.
05187029a ತಾಮಬ್ರವೀತ್ಕೌರವೇಯ ಮಮ ಮಾತಾ ಜಲೋತ್ಥಿತಾ|
05187029c ಕಿಮರ್ಥಂ ಕ್ಲಿಶ್ಯಸೇ ಭದ್ರೇ ತಥ್ಯಮೇತದ್ಬ್ರವೀಹಿ ಮೇ||
ಕೌರವೇಯ! ಆಗ ನನ್ನ ಮಾತೆಯು ಜಲದಿಂದ ಮೇಲೆದ್ದು ಅವಳಿಗೆ ಹೇಳಿದಳು: “ಭದ್ರೇ! ಏಕೆ ಈ ಕಷ್ಟಪಡುತ್ತಿರುವೆ? ಕಾರಣವನ್ನು ನನಗೆ ಹೇಳು.”
05187030a ಸೈನಾಮಥಾಬ್ರವೀದ್ರಾಜನ್ಕೃತಾಂಜಲಿರನಿಂದಿತಾ|
05187030c ಭೀಷ್ಮೋ ರಾಮೇಣ ಸಮರೇ ನ ಜಿತಶ್ಚಾರುಲೋಚನೇ||
ರಾಜನ್! ಅವಳಿಗೆ ಆ ಅನಿಂದಿತೆಯು ಕೈಮುಗಿದು ಹೇಳಿದಳು: “ಚಾರುಲೋಚನೇ! ಭೀಷ್ಮನು ಸಮರದಲ್ಲಿ ರಾಮನನ್ನು ಗೆದ್ದನು.
05187031a ಕೋಽನ್ಯಸ್ತಮುತ್ಸಹೇಜ್ಜೇತುಮುದ್ಯತೇಷುಂ ಮಹೀಪತಿಂ|
05187031c ಸಾಹಂ ಭೀಷ್ಮವಿನಾಶಾಯ ತಪಸ್ತಪ್ಸ್ಯೇ ಸುದಾರುಣಂ||
ಯುದ್ಧ ಮಾಡಲು ಬರುವ ಆ ಮಹೀಪತಿಯೊಡನೆ ಬೇರೆ ಯಾರುತಾನೇ ಹೋರಾಡಲು ಬಯಸುವರು? ನಾನು ಭೀಷ್ಮನ ವಿನಾಶಕ್ಕೆ ಈ ಸುದಾರುಣ ತಪಸ್ಸನ್ನು ತಪಿಸುತ್ತಿದ್ದೇನೆ.
05187032a ಚರಾಮಿ ಪೃಥಿವೀಂ ದೇವಿ ಯಥಾ ಹನ್ಯಾಮಹಂ ನೃಪಂ|
05187032c ಏತದ್ವ್ರತಫಲಂ ದೇಹೇ ಪರಸ್ಮಿನ್ಸ್ಯಾದ್ಯಥಾ ಹಿ ಮೇ||
ದೇವೀ! ಆ ನೃಪನನ್ನು ಕೊಲ್ಲಬಹುದೆಂದು ನಾನು ಭೂಮಿಯಲ್ಲಿ ಅಲೆದಾಡುತ್ತಿದ್ದೇನೆ. ಈ ದೇಹದಲ್ಲಿ ಅಥವಾ ಇನ್ನೊಂದರಲ್ಲಿ. ಇದೇ ನನ್ನ ವ್ರತದಿಂದ ಬಯಸುವ ಫಲ.”
05187033a ತತೋಽಬ್ರವೀತ್ಸಾಗರಗಾ ಜಿಹ್ಮಂ ಚರಸಿ ಭಾಮಿನಿ|
05187033c ನೈಷ ಕಾಮೋಽನವದ್ಯಾಂಗಿ ಶಕ್ಯಃ ಪ್ರಾಪ್ತುಂ ತ್ವಯಾಬಲೇ||
ಆಗ ಸಾಗರಗೆಯು ಅವಳಿಗೆ ಹೇಳಿದಳು: “ಭಾಮಿನೀ! ನೀನು ಸುತ್ತಿ ಬಳಸಿ ಹೋಗುತ್ತಿದ್ದೀಯೆ. ಅನವದ್ಯಾಂಗೀ! ಅಬಲೇ! ನಿನ್ನ ಈ ಆಸೆಯನ್ನು ಪೂರೈಸಲು ನೀನು ಶಕ್ಯಳಾಗುವುದಿಲ್ಲ.
05187034a ಯದಿ ಭೀಷ್ಮವಿನಾಶಾಯ ಕಾಶ್ಯೇ ಚರಸಿ ವೈ ವ್ರತಂ|
05187034c ವ್ರತಸ್ಥಾ ಚ ಶರೀರಂ ತ್ವಂ ಯದಿ ನಾಮ ವಿಮೋಕ್ಷ್ಯಸಿ|
05187034e ನದೀ ಭವಿಷ್ಯಸಿ ಶುಭೇ ಕುಟಿಲಾ ವಾರ್ಷಿಕೋದಕಾ||
ಕಾಶ್ಯೇ! ಶುಭೇ! ಭೀಷ್ಮನ ವಿನಾಶಕ್ಕಾಗಿ ನೀನು ವ್ರತವನ್ನು ಆಚರಿಸುತ್ತಿದ್ದೀಯೆ. ಒಂದುವೇಳೆ ವ್ರತಸ್ಥಳಾಗಿದ್ದುಕೊಂಡೇ ನೀನು ಶರೀರವನ್ನು ತೊರೆದರೆ ಮಳೆನೀರಿನಿಂದ ತುಂಬಿಕೊಳ್ಳುವ ಕುಟಿಲ ನದಿಯಾಗುತ್ತೀಯೆ.
05187035a ದುಸ್ತೀರ್ಥಾ ಚಾನಭಿಜ್ಞೇಯಾ ವಾರ್ಷಿಕೀ ನಾಷ್ಟಮಾಸಿಕೀ|
05187035c ಭೀಮಗ್ರಾಹವತೀ ಘೋರಾ ಸರ್ವಭೂತಭಯಂಕರೀ||
ಅಸಾದ್ಯ ತೀರ್ಥವಾಗುತ್ತೀಯೆ. ಮಳೆನೀರಿನಿಂದ ತುಂಬಿ ಭಯಂಕರ ಪ್ರವಾಹವಾಗಿ ಎಂಟು ತಿಂಗಳು ಎಲ್ಲರಿಗೂ ಘೋರವೂ ಭಯಂಕರಿಯೂ ಆಗುತ್ತೀಯೆ.”
05187036a ಏವಮುಕ್ತ್ವಾ ತತೋ ರಾಜನ್ಕಾಶಿಕನ್ಯಾಂ ನ್ಯವರ್ತತ|
05187036c ಮಾತಾ ಮಮ ಮಹಾಭಾಗಾ ಸ್ಮಯಮಾನೇವ ಭಾಮಿನೀ||
ರಾಜನ್! ಹೀಗೆ ಕಾಶಿಕನ್ಯೆಗೆ ಹೇಳಿ ನನ್ನ ಮಾತೆ ಮಹಾಭಾಗೆ ಭಾಮಿನಿಯು ಮುಗುಳ್ನಗುತ್ತಾ ಹಿಂದಿರುಗಿದಳು.
05187037a ಕದಾ ಚಿದಷ್ಟಮೇ ಮಾಸಿ ಕದಾ ಚಿದ್ದಶಮೇ ತಥಾ|
05187037c ನ ಪ್ರಾಶ್ನೀತೋದಕಮಪಿ ಪುನಃ ಸಾ ವರವರ್ಣಿನೀ||
ಆ ವರವರ್ಣಿನಿಯು ಕೆಲವೊಮ್ಮೆ ಎಂಟು ತಿಂಗಳು ಮತ್ತು ಕೆಲವೊಮ್ಮ ಹತ್ತು ತಿಂಗಳು ಏನನ್ನೂ ತಿನ್ನದೇ ನೀರನ್ನೂ ಕುಡಿಯದೇ ಪುನಃ ತಪಸ್ಸನ್ನಾಚರಿಸಿದಳು.
05187038a ಸಾ ವತ್ಸಭೂಮಿಂ ಕೌರವ್ಯ ತೀರ್ಥಲೋಭಾತ್ತತಸ್ತತಃ|
05187038c ಪತಿತಾ ಪರಿಧಾವಂತೀ ಪುನಃ ಕಾಶಿಪತೇಃ ಸುತಾ||
ಕೌರವ್ಯ! ಆ ಕಾಶಿಪತಿಯ ಸುತೆಯು ಅಲ್ಲಿ ಇಲ್ಲಿ ತಿರುಗಾಡುತ್ತ ತೀರ್ಥದ ಆಸೆಯಿಂದ ಪುನಃ ವತ್ಸಭೂಮಿಗೆ ಆಗಮಿಸಿದಳು.
05187039a ಸಾ ನದೀ ವತ್ಸಭೂಮ್ಯಾಂ ತು ಪ್ರಥಿತಾಂಬೇತಿ ಭಾರತ|
05187039c ವಾರ್ಷಿಕೀ ಗ್ರಾಹಬಹುಲಾ ದುಸ್ತೀರ್ಥಾ ಕುಟಿಲಾ ತಥಾ||
ಭಾರತ! ಅವಳು ವತ್ಸಭೂಮಿಯಲ್ಲಿ ಮಳೆನೀರಿನಿಂದ ತುಂಬಿ ಹರಿಯುವ ಬಹಳ ಮೊಸಳೆಗಳಿರುವ, ಕಷ್ಟದ ತೀರ್ಥ, ಕುಟಿಲ ನದಿಯಾದಳೆಂದು ಹೇಳುತ್ತಾರೆ.
05187040a ಸಾ ಕನ್ಯಾ ತಪಸಾ ತೇನ ಭಾಗಾರ್ಧೇನ ವ್ಯಜಾಯತ|
05187040c ನದೀ ಚ ರಾಜನ್ವತ್ಸೇಷು ಕನ್ಯಾ ಚೈವಾಭವತ್ತದಾ||
ರಾಜನ್! ತಪಸ್ಸಿನ ಪ್ರಭಾವದಿಂದ ಆ ಕನ್ಯೆಯ ಅರ್ಧಭಾಗವು ನದಿಯಾಗಿ ಹರಿಯಿತು ಮತ್ತು ಇನ್ನೊಂದು ಅರ್ಧಭಾಗವು ಕನ್ಯೆಯಾಗಿಯೇ ಉಳಿಯಿತು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾತಪಸ್ಯಾಯಾಂ ಸಪ್ತಾಶೀತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾತಪಸ್ಯೆಯಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.