ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ
೧೮೨
ಪರಶುರಾಮ-ಭೀಷ್ಮರ ಮೂರನೆಯ ದಿನದ ಯುದ್ಧ (೧-೧೬).
05182001 ಭೀಷ್ಮ ಉವಾಚ|
05182001a ಸಮಾಗತಸ್ಯ ರಾಮೇಣ ಪುನರೇವಾತಿದಾರುಣಂ|
05182001c ಅನ್ಯೇದ್ಯುಸ್ತುಮುಲಂ ಯುದ್ಧಂ ತದಾ ಭರತಸತ್ತಮ||
ಭೀಷ್ಮನು ಹೇಳಿದನು: “ಭರತಸತ್ತಮ! ಅವನನ್ನು ಪುನಃ ಎದುರಿಸಿದಾಗ ನನ್ನ ಮತ್ತು ರಾಮನ ನಡುವೆ ಇನ್ನೊಂದು ಅತಿದಾರುಣ ತುಮುಲಯುದ್ಧವು ನಡೆಯಿತು.
05182002a ತತೋ ದಿವ್ಯಾಸ್ತ್ರವಿಚ್ಚೂರೋ ದಿವ್ಯಾನ್ಯಸ್ತ್ರಾಣ್ಯನೇಕಶಃ|
05182002c ಅಯೋಜಯತ ಧರ್ಮಾತ್ಮಾ ದಿವಸೇ ದಿವಸೇ ವಿಭುಃ||
ಆಗ ದಿವಸ ದಿವಸವೂ ಆ ದಿವ್ಯಾಸ್ತ್ರವಿದು ಧರ್ಮಾತ್ಮ ವಿಭು ಶೂರನು ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು.
05182003a ತಾನ್ಯಹಂ ತತ್ಪ್ರತೀಘಾತೈರಸ್ತ್ರೈರಸ್ತ್ರಾಣಿ ಭಾರತ|
05182003c ವ್ಯಧಮಂ ತುಮುಲೇ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್||
ಭಾರತ! ನಾನು ತ್ಯಜಿಸಲು ದುಷ್ಕರವಾದ ಪ್ರಾಣವನ್ನೂ ತ್ಯಜಿಸಿ ಆ ತುಮುಲಯುದ್ಧದಲ್ಲಿ ಅವುಗಳನ್ನು ಪ್ರತಿಘಾತಿಸುವ ಅಸ್ತ್ರಗಳಿಂದ ನಿಷ್ಫಲಗೊಳಿಸಿದೆನು.
05182004a ಅಸ್ತ್ರೈರಸ್ತ್ರೇಷು ಬಹುಧಾ ಹತೇಷ್ವಥ ಚ ಭಾರ್ಗವಃ|
05182004c ಅಕ್ರುಧ್ಯತ ಮಹಾತೇಜಾಸ್ತ್ಯಕ್ತಪ್ರಾಣಃ ಸ ಸಂಯುಗೇ||
ಸಂಯುಗದಲ್ಲಿ ಬಹಳಷ್ಟು ಅಸ್ತ್ರಗಳನ್ನು ಅಸ್ತ್ರಗಳಿಂದ ಹತಗೊಳಿಸಲು ಆ ಮಹಾತೇಜಸ್ವಿ ಭಾರ್ಗವನು ಪ್ರಾಣವನ್ನೂ ತ್ಯಜಿಸಿ ಕ್ರೋಧಿತನಾದನು.
05182005a ತತಃ ಶಕ್ತಿಂ ಪ್ರಾಹಿಣೋದ್ಘೋರರೂಪಾಂ
ಅಸ್ತ್ರೈ ರುದ್ಧೋ ಜಾಮದಗ್ನ್ಯೋ ಮಹಾತ್ಮಾ|
05182005c ಕಾಲೋತ್ಸೃಷ್ಟಾಂ ಪ್ರಜ್ವಲಿತಾಮಿವೋಲ್ಕಾಂ
ಸಂದೀಪ್ತಾಗ್ರಾಂ ತೇಜಸಾವೃತ್ಯ ಲೋಕಾನ್||
ಆಗ ಮಹಾತ್ಮ ಜಾಮದಗ್ನಿಯು ಕೋಪದಿಂದ ಘೋರರೂಪದ ಕಾಲನೇ ಬಿಸುಟ ಅಸ್ತ್ರದಂತಿರುವ, ಉಲ್ಕೆಯಂತೆ ಉರಿಯುತ್ತಿರುವ, ಬಾಯಿ ತೆರೆದಿರುವ, ತೇಜಸ್ಸಿನಿಂದ ಲೋಕಗಳನ್ನು ಆವರಿಸಿದ ಶಕ್ತಿಯನ್ನು ನನ್ನ ಮೇಲೆ ಎಸೆದನು.
05182006a ತತೋಽಹಂ ತಾಮಿಷುಭಿರ್ದೀಪ್ಯಮಾನೈಃ
ಸಮಾಯಾಂತೀಮಂತಕಾಲಾರ್ಕದೀಪ್ತಾಂ|
05182006c ಚಿತ್ತ್ವಾ ತ್ರಿಧಾ ಪಾತಯಾಮಾಸ ಭೂಮೌ
ತತೋ ವವೌ ಪವನಃ ಪುಣ್ಯಗಂಧಿಃ||
ಆಗ ನಾನು ಉರಿಯುತ್ತಾ ಅಂತಕಾಲದಂತೆ, ಸೂರ್ಯನಂತೆ ಬೆಳಗುತ್ತಾ ಹತ್ತಿರ ಬರುತ್ತಿದ್ದ ಅದನ್ನು ಮೂರುತುಂಡುಗಳನ್ನಾಗಿಸಿ ಭೂಮಿಯ ಮೇಲೆ ಬೀಳಿಸಿದೆನು. ಆಗ ಪುಣ್ಯಗಂಧೀ ಗಾಳಿಯು ಬೀಸಿತು.
05182007a ತಸ್ಯಾಂ ಚಿನ್ನಾಯಾಂ ಕ್ರೋಧದೀಪ್ತೋಽಥ ರಾಮಃ
ಶಕ್ತೀರ್ಘೋರಾಃ ಪ್ರಾಹಿಣೋದ್ದ್ವಾದಶಾನ್ಯಾಃ|
05182007c ತಾಸಾಂ ರೂಪಂ ಭಾರತ ನೋತ ಶಕ್ಯಂ
ತೇಜಸ್ವಿತ್ವಾಲ್ಲಾಘವಾಚ್ಚೈವ ವಕ್ತುಂ||
ಅದು ತುಂಡಾಗಲು ಕ್ರೋಧದೀಪ್ತನಾದ ರಾಮನು ಇನ್ನೂ ಹನ್ನೆರಡು ಘೋರ ಶಕ್ತಿಗಳನ್ನು ಎಸೆದನು. ಭಾರತ! ಅವುಗಳ ರೂಪವನ್ನು ವರ್ಣಿಸಲು, ಅವುಗಳ ತೇಜಸ್ಸು ಮತ್ತು ಲಾಘವಗಳ ಕುರಿತು ಹೇಳಲೂ ಅಸಾಧ್ಯವಾಗಿತ್ತು.
05182008a ಕಿಂ ತ್ವೇವಾಹಂ ವಿಹ್ವಲಃ ಸಂಪ್ರದೃಶ್ಯ
ದಿಗ್ಭ್ಯಃ ಸರ್ವಾಸ್ತಾ ಮಹೋಲ್ಕಾ ಇವಾಗ್ನೇಃ|
05182008c ನಾನಾರೂಪಾಸ್ತೇಜಸೋಗ್ರೇಣ ದೀಪ್ತಾ
ಯಥಾದಿತ್ಯಾ ದ್ವಾದಶ ಲೋಕಸಂಕ್ಷಯೇ||
ಎಲ್ಲ ಕಡೆಗಳಿಂದಲೂ ಮಹಾ ಉಲ್ಕೆಗಳಂತಿರುವ, ಅಗ್ನಿಗಳಂತಿರುವ, ಲೋಕಸಂಕ್ಷಯದಲ್ಲಿ ದ್ವಾದಶಾದಿತ್ಯರು ಹೇಗೋ ಹಾಗೆ ನಾನಾರೂಪಗಳಲ್ಲಿ ಉಗ್ರ ತೇಜಸ್ಸಿನಿಂದ ಉರಿಯುತ್ತಿರುವ ಅವುಗಳನ್ನು ನೋಡಿ ನಾನು ವಿಹ್ವಲನಾದೆನು.
05182009a ತತೋ ಜಾಲಂ ಬಾಣಮಯಂ ವಿವೃತ್ಯ
ಸಂದೃಶ್ಯ ಭಿತ್ತ್ವಾ ಶರಜಾಲೇನ ರಾಜನ್|
05182009c ದ್ವಾದಶೇಷೂನ್ಪ್ರಾಹಿಣವಂ ರಣೇಽಹಂ
ತತಃ ಶಕ್ತೀರ್ವ್ಯಧಮಂ ಘೋರರೂಪಾಃ||
ರಾಜನ್! ಬಂದೆರಗುತ್ತಿದ್ದ ಆ ಬಾಣಗಳ ಜಾಲವನ್ನು ನೋಡಿ ನನ್ನದೇ ಶರಜಾಲದಿಂದ ಹೊಡೆದು ಆ ಹನ್ನೆರಡೂ ಘೋರರೂಪೀ ಶಕ್ತಿಗಳನ್ನು ರಣದಲ್ಲಿ ನಾನು ತುಂಡರಿಸಿದೆನು.
05182010a ತತೋಽಪರಾ ಜಾಮದಗ್ನ್ಯೋ ಮಹಾತ್ಮಾ
ಶಕ್ತೀರ್ಘೋರಾಃ ಪ್ರಾಕ್ಷಿಪದ್ಧೇಮದಂಡಾಃ|
05182010c ವಿಚಿತ್ರಿತಾಃ ಕಾಂಚನಪಟ್ಟನದ್ಧಾ
ಯಥಾ ಮಹೋಲ್ಕಾ ಜ್ವಲಿತಾಸ್ತಥಾ ತಾಃ||
ಆಗ ಮಹಾತ್ಮ ಜಾಮದಗ್ನಿಯು ಇನ್ನೊಂದು ಹೇಮದಂಡದ ಘೋರ ಶಕ್ತಿಗಳನ್ನು ಎಸೆದನು. ಬಂಗಾರದಿಂದ ಮಾಡಲ್ಪಟ್ಟಿದ್ದ ಅವು ವಿಚಿತ್ರವಾಗಿದ್ದು ಮಹಾ ಉಲ್ಕೆಗಳಂತೆ ಜ್ವಲಿಸುತ್ತಿದ್ದವು.
05182011a ತಾಶ್ಚಾಪ್ಯುಗ್ರಾಶ್ಚರ್ಮಣಾ ವಾರಯಿತ್ವಾ
ಖಡ್ಗೇನಾಜೌ ಪಾತಿತಾ ಮೇ ನರೇಂದ್ರ|
05182011c ಬಾಣೈರ್ದಿವ್ಯೈರ್ಜಾಮದಗ್ನ್ಯಸ್ಯ ಸಂಖ್ಯೇ
ದಿವ್ಯಾಂಶ್ಚಾಶ್ವಾನಭ್ಯವರ್ಷಂ ಸಸೂತಾನ್||
ನರೇಂದ್ರ! ಅವುಗಳನ್ನೂ ಕೂಡ ತೋಮರಗಳಿಂದ ತಡೆದು ಖಡ್ಗದಿಂದ ನಾನು ಕೆಳಗೆ ಬೀಳಿಸಿ, ದಿವ್ಯ ಬಾಣಗಳಿಂದ ಜಾಮದಗ್ನಿಯ ದಿವ್ಯ ರಥವನ್ನೂ ಕುದುರೆಗಳನ್ನೂ ಸಾರಥಿಯೊಂದಿಗೆ ಮುಚ್ಚಿದೆನು.
05182012a ನಿರ್ಮುಕ್ತಾನಾಂ ಪನ್ನಗಾನಾಂ ಸರೂಪಾ
ದೃಷ್ಟ್ವಾ ಶಕ್ತೀರ್ಹೇಮಚಿತ್ರಾ ನಿಕೃತ್ತಾಃ|
05182012c ಪ್ರಾದುಶ್ಚಕ್ರೇ ದಿವ್ಯಮಸ್ತ್ರಂ ಮಹಾತ್ಮಾ
ಕ್ರೋಧಾವಿಷ್ಟೋ ಹೈಹಯೇಶಪ್ರಮಾಥೀ||
ನಾನು ಪ್ರಯೋಗಿಸಿದ ಹಾವುಗಳಂತಿದ್ದ ಹೇಮಚಿತ್ರ ಶಕ್ತಿಗಳನ್ನು ನೋಡಿ ಕ್ರೋಧಾವಿಷ್ಟನಾದ ಆ ಮಹಾತ್ಮ ಹೈಹಯೇಶಪ್ರಮಾಥಿಯು ಪುನಃ ದಿವ್ಯಾಸ್ತ್ರಗಳನ್ನು ಬಳಸಿದನು.
05182013a ತತಃ ಶ್ರೇಣ್ಯಃ ಶಲಭಾನಾಮಿವೋಗ್ರಾಃ
ಸಮಾಪೇತುರ್ವಿಶಿಖಾನಾಂ ಪ್ರದೀಪ್ತಾಃ|
05182013c ಸಮಾಚಿನೋಚ್ಚಾಪಿ ಭೃಶಂ ಶರೀರಂ
ಹಯಾನ್ಸೂತಂ ಸರಥಂ ಚೈವ ಮಹ್ಯಂ||
ಆಗ ಮಿಡತೆಗಳ ಗುಂಪಿನಂತಿರುವ, ತುದಿಗಳಲ್ಲಿ ರೆಕ್ಕೆಗಳನ್ನುಳ್ಳ, ಉರಿಯುತ್ತಿರುವ ಬಾಣಗಳ ರಾಶಿಯು ನನ್ನ ಶರೀರವನ್ನು, ಕುದುರೆಗಳನ್ನು, ರಥದೊಂದಿಗೆ ಸೂತನನ್ನು ತುಂಬಾ ಆಳವಾಗಿ ಚುಚ್ಚಿದವು.
05182014a ರಥಃ ಶರೈರ್ಮೇ ನಿಚಿತಃ ಸರ್ವತೋಽಭೂತ್
ತಥಾ ಹಯಾಃ ಸಾರಥಿಶ್ಚೈವ ರಾಜನ್|
05182014c ಯುಗಂ ರಥೇಷಾ ಚ ತಥೈವ ಚಕ್ರೇ
ತಥೈವಾಕ್ಷಃ ಶರಕೃತ್ತೋಽಥ ಭಗ್ನಃ||
ಅದರ ಹೊಡೆತದಿಂದಾಗಿ ನನ್ನ ರಥ, ಕುದುರೆಗಳು ಮತ್ತು ಸಾರಥಿಯೂ, ರಥದ ಎರಡು ಚಕ್ರಗಳೊಂದಿಗೆ ಎಲ್ಲ ರೀತಿಯಲ್ಲಿ ಮುರಿದು ಬಿದ್ದವು.
05182015a ತತಸ್ತಸ್ಮಿನ್ಬಾಣವರ್ಷೇ ವ್ಯತೀತೇ
ಶರೌಘೇಣ ಪ್ರತ್ಯವರ್ಷಂ ಗುರುಂ ತಂ|
05182015c ಸ ವಿಕ್ಷತೋ ಮಾರ್ಗಣೈರ್ಬ್ರಹ್ಮರಾಶಿರ್
ದೇಹಾದಜಸ್ರಂ ಮುಮುಚೇ ಭೂರಿ ರಕ್ತಂ||
ಆ ಬಾಣವರ್ಷವು ಮುಗಿಯಲು ನಾನೂ ಕೂಡ ಶರಗಳ ಮಳೆಯನ್ನು ಗುರುವಿನ ಮೇಲೆ ಸುರಿಸಿದೆನು. ಆ ಬಾಣಗಳಿಂದ ಗಾಯಗೊಂಡ ಆ ಬ್ರಹ್ಮರಾಶಿಯು ತುಂಬಾ ಕಡೆಗಳಿಂದ ಒಂದೇ ಸಮನೆ ರಕ್ತವನ್ನು ಸುರಿಸಿದನು.
05182016a ಯಥಾ ರಾಮೋ ಬಾಣಜಾಲಾಭಿತಪ್ತಸ್
ತಥೈವಾಹಂ ಸುಭೃಶಂ ಗಾಢವಿದ್ಧಃ|
05182016c ತತೋ ಯುದ್ಧಂ ವ್ಯರಮಚ್ಚಾಪರಾಹ್ಣೇ
ಭಾನಾವಸ್ತಂ ಪ್ರಾರ್ಥಯಾನೇ ಮಹೀಧ್ರಂ||
ರಾಮನು ಹೇಗೆ ಬಾಣಜಾಲಗಳಿಂದ ನೋಯುತ್ತಿದ್ದನೋ ಹಾಗೆ ನಾನೂ ಕೂಡ ತುಂಬಾ ಗಾಢವಾದ ನೋವಿನಲ್ಲಿದ್ದೆನು. ಕೊನೆಯಲ್ಲಿ ಮಧ್ಯಾಹ್ನದ ನಂತರ ಸೂರ್ಯನು ಅಸ್ತವಾಗಲು ನಮ್ಮ ಯುದ್ಧವೂ ನಿಂತಿತು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ದ್ವಿಶೀತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.