ಉದ್ಯೋಗ ಪರ್ವ: ಭಗವದ್ಯಾನ ಪರ್ವ
೧೨೦
ಯಯಾತಿಯು ಗುರುತಿಸಲ್ಪಟ್ಟಕೂಡಲೇ ವಿಗತಜ್ವರನಾಗಿ ತನ್ನ ಮೊಮ್ಮಕ್ಕಳ ಪುಣ್ಯದಿಂದ ಸ್ವರ್ಗವನ್ನು ಪುನಃ ಸೇರಿದುದು (೧-೧೮).
05120001 ನಾರದ ಉವಾಚ|
05120001a ಪ್ರತ್ಯಭಿಜ್ಞಾತಮಾತ್ರೋಽಥ ಸದ್ಭಿಸ್ತೈರ್ನರಪುಂಗವಃ|
05120001c ಯಯಾತಿರ್ದಿವ್ಯಸಂಸ್ಥಾನೋ ಬಭೂವ ವಿಗತಜ್ವರಃ||
ನಾರದನು ಹೇಳಿದನು: “ನರಪುಂಗವ ಯಯಾತಿಯು ಆ ದಿವ್ಯಸಂಸ್ಥಾನದಲ್ಲಿ ಗುರುತಿಸಲ್ಪಟ್ಟ ಕೂಡಲೇ ಅವನು ವಿಗತಜ್ವರನಾದನು.
05120002a ದಿವ್ಯಮಾಲ್ಯಾಂಬರಧರೋ ದಿವ್ಯಾಭರಣಭೂಷಿತಃ|
05120002c ದಿವ್ಯಗಂಧಗುಣೋಪೇತೋ ನ ಪೃಥ್ವೀಮಸ್ಪೃಶತ್ಪದಾ||
ದಿವ್ಯಮಾಲಾಂಬರಧರನಾಗಿ ದಿವ್ಯಾಭರಣಭೂಷಿತನಾಗಿ ದಿವ್ಯಗಂಧಗುಣೋಪೇತನಾಗಿ ಅವನ ಕಾಲುಗಳು ಭೂಮಿಯನ್ನು ಮುಟ್ಟಲಿಲ್ಲ.
05120003a ತತೋ ವಸುಮನಾಃ ಪೂರ್ವಮುಚ್ಚೈರುಚ್ಚಾರಯನ್ವಚಃ|
05120003c ಖ್ಯಾತೋ ದಾನಪತಿರ್ಲೋಕೇ ವ್ಯಾಜಹಾರ ನೃಪಂ ತದಾ||
ಆಗ ಮೊಟ್ಟಮೊದಲು ಲೋಕದಲ್ಲಿ ದಾನಪತಿಯೆಂದು ಖ್ಯಾತನಾದ ವಸುಮನನು ಉಚ್ಚವಾಗಿ ಉಚ್ಚರಿಸಿ ನೃಪನಿಗೆ ಹೇಳಿದನು:
05120004a ಪ್ರಾಪ್ತವಾನಸ್ಮಿ ಯಲ್ಲೋಕೇ ಸರ್ವವರ್ಣೇಷ್ವಗರ್ಹಯಾ|
05120004c ತದಪ್ಯಥ ಚ ದಾಸ್ಯಾಮಿ ತೇನ ಸಂಯುಜ್ಯತಾಂ ಭವಾನ್||
“ಸರ್ವವರ್ಣದವರೊಡನೆ ಅಗರ್ಹದಿಂದ ನಡೆದುಕೊಂಡಿದುದರಿಂದ ಈ ಲೋಕದಲ್ಲಿ ಏನನ್ನು ಸಂಪಾದಿಸಿದ್ದೇನೋ ಅದನ್ನು ನಿನಗೆ ಕೊಟ್ಟು ಸಂಯೋಜಿಸುತ್ತಿದ್ದೇನೆ.
05120005a ಯತ್ಫಲಂ ದಾನಶೀಲಸ್ಯ ಕ್ಷಮಾಶೀಲಸ್ಯ ಯತ್ಫಲಂ|
05120005c ಯಚ್ಚ ಮೇ ಫಲಮಾಧಾನೇ ತೇನ ಸಂಯುಜ್ಯತಾಂ ಭವಾನ್||
ದಾನಶೀಲನಾದುದರಿಂದ ಮತ್ತು ಕ್ಷಮಾಶೀಲನಾದುದರಿಂದ ಏನು ಫಲಗಳನ್ನು ಪಡೆದಿದ್ದೇನೋ ಅವುಗಳನ್ನು ನಿನಗೆ ಕೊಟ್ಟು ಸಂಯೋಜಿಸುತಿದ್ದೇನೆ.”
05120006a ತತಃ ಪ್ರತರ್ದನೋಽಪ್ಯಾಹ ವಾಕ್ಯಂ ಕ್ಷತ್ರಿಯಪುಂಗವಃ|
05120006c ಯಥಾ ಧರ್ಮರತಿರ್ನಿತ್ಯಂ ನಿತ್ಯಂ ಯುದ್ಧಪರಾಯಣಃ||
05120007a ಪ್ರಾಪ್ತವಾನಸ್ಮಿ ಯಲ್ಲೋಕೇ ಕ್ಷತ್ರಧರ್ಮೋದ್ಭವಂ ಯಶಃ|
05120007c ವೀರಶಬ್ದಫಲಂ ಚೈವ ತೇನ ಸಂಯುಜ್ಯತಾಂ ಭವಾನ್||
ಆಗ ಕ್ಷತ್ರಿಯ ಪುಂಗವ ಪ್ರತರ್ದನನು ಹೇಳಿದನು: “ನಿತ್ಯವೂ ಧರ್ಮರತನಾಗಿರುವುದರಿಂದ, ನಿತ್ಯವೂ ಯುದ್ಧಪರಾಯಣನಾಗಿರುವುದರಿಂದ ಈ ಲೋಕದಲ್ಲಿ ಕ್ಷತ್ರಧರ್ಮದಿಂದ ಪಡೆದ ಯಶಸ್ಸು ಮತ್ತು ವೀರಶಬ್ಧಗಳ ಫಲವನ್ನು ಕೊಟ್ಟು ನಿನ್ನನ್ನು ಸಂಯೋಜಿಸುತ್ತಿದ್ದೇನೆ.”
05120008a ಶಿಬಿರೌಶೀನರೋ ಧೀಮಾನುವಾಚ ಮಧುರಾಂ ಗಿರಂ|
05120008c ಯಥಾ ಬಾಲೇಷು ನಾರೀಷು ವೈಹಾರ್ಯೇಷು ತಥೈವ ಚ||
05120009a ಸಂಗರೇಷು ನಿಪಾತೇಷು ತಥಾಪದ್ವ್ಯಸನೇಷು ಚ|
05120009c ಅನೃತಂ ನೋಕ್ತಪೂರ್ವಂ ಮೇ ತೇನ ಸತ್ಯೇನ ಖಂ ವ್ರಜ||
ಧೀಮಂತ ಶಿಬಿ ಔಶೀನರನು ಮಧುರ ಸ್ವರದಲ್ಲಿ ಹೇಳಿದನು: “ಈ ಹಿಂದೆ ಬಾಲಕರಲ್ಲಿಯಾಗಲೀ, ನಾರಿಯರಲ್ಲಿಯಾಗಲೀ, ವ್ಯವಹಾರದಲ್ಲಿಯಾಗಲೀ, ಯುದ್ಧಗಳಲ್ಲಿಯಾಗಲೀ, ಉತ್ಪಾತಗಳಲ್ಲಿಯಾಗಲೀ, ತುರ್ತುಪರಿಸ್ಥಿತಿಗಳಲ್ಲಿಯಾಗಲೀ ಸುಳ್ಳನ್ನು ಹೇಳದೇ ಇದ್ದ ನನ್ನ ಆ ಸತ್ಯದಿಂದ ನೀನು ಆಕಾಶವನ್ನೇರು!
05120010a ಯಥಾ ಪ್ರಾಣಾಂಶ್ಚ ರಾಜ್ಯಂ ಚ ರಾಜನ್ಕರ್ಮ ಸುಖಾನಿ ಚ|
05120010c ತ್ಯಜೇಯಂ ನ ಪುನಃ ಸತ್ಯಂ ತೇನ ಸತ್ಯೇನ ಖಂ ವ್ರಜ||
ರಾಜನ್! ನಾನು ಪ್ರಾಣವನ್ನು, ರಾಜ್ಯವನ್ನು, ಕರ್ಮ-ಸುಖಗಳನ್ನು ತ್ಯಜಿಸಿಯೇನು. ಆದರೆ ಸತ್ಯವನ್ನು ಬಿಡಲಾರೆ ಎನ್ನುವ ಸತ್ಯದಿಂದ ನೀನು ಆಕಾಶವನ್ನೇರು.
05120011a ಯಥಾ ಸತ್ಯೇನ ಮೇ ಧರ್ಮೋ ಯಥಾ ಸತ್ಯೇನ ಪಾವಕಃ|
05120011c ಪ್ರೀತಃ ಶಕ್ರಶ್ಚ ಸತ್ಯೇನ ತೇನ ಸತ್ಯೇನ ಖಂ ವ್ರಜ||
ನಾನು ಸತ್ಯದಿಂದ ಧರ್ಮನನ್ನು, ಸತ್ಯದಿಂದ ಪಾವಕನನ್ನು, ಸತ್ಯದಿಂದ ಶಕ್ರನನ್ನು ಪ್ರೀತಿಸಿದ್ದರೆ ಆ ಸತ್ಯದಿಂದ ನೀನು ಆಕಾಶವನ್ನೇರು!”
05120012a ಅಷ್ಟಕಸ್ತ್ವಥ ರಾಜರ್ಷಿಃ ಕೌಶಿಕೋ ಮಾಧವೀಸುತಃ|
05120012c ಅನೇಕಶತಯಜ್ವಾನಂ ವಚನಂ ಪ್ರಾಹ ಧರ್ಮವಿತ್||
ಆಗ ರಾಜರ್ಷಿ, ಕೌಶಿಕ, ಮಾಧವೀಸುತ, ಅನೇಕ ನೂರಾರು ಯಜ್ಞಗಳನ್ನು ನಡೆಸಿದ್ದ ಧರ್ಮವಿದು ಅಷ್ಟಕನು ಈ ಮಾತನ್ನು ಹೇಳಿದನು:
05120013a ಶತಶಃ ಪುಂಡರೀಕಾ ಮೇ ಗೋಸವಾಶ್ಚ ಚಿತಾಃ ಪ್ರಭೋ|
05120013c ಕ್ರತವೋ ವಾಜಪೇಯಾಶ್ಚ ತೇಷಾಂ ಫಲಮವಾಪ್ನುಹಿ||
“ಪ್ರಭೋ! ನಾನು ನೂರಾರು ಪಂಡರೀಕ, ಗೋಸವ ಮತ್ತು ವಾಜಪೇಯ ಯಜ್ಞಗಳನ್ನು ಮಾಡಿದ್ದೇನೆ. ಅವುಗಳ ಫಲವನ್ನು ಹೊಂದು.
05120014a ನ ಮೇ ರತ್ನಾನಿ ನ ಧನಂ ನ ತಥಾನ್ಯೇ ಪರಿಚ್ಚದಾಃ|
05120014c ಕ್ರತುಷ್ವನುಪಯುಕ್ತಾನಿ ತೇನ ಸತ್ಯೇನ ಖಂ ವ್ರಜ||
ಕ್ರತುಗಳಲ್ಲಿ ಬಳಸದೇ ಇದ್ದ ರತ್ನಗಳಾಗಲೀ, ಧನವಾಗಲೀ, ಪರಿಚ್ಚದವಾಗಲೀ ನನ್ನಲ್ಲಿ ಇಲ್ಲ ಎನ್ನುವ ಈ ಸತ್ಯದಿಂದ ಆಕಾಶವನ್ನೇರು!”
05120015a ಯಥಾ ಯಥಾ ಹಿ ಜಲ್ಪಂತಿ ದೌಹಿತ್ರಾಸ್ತಂ ನರಾಧಿಪಂ|
05120015c ತಥಾ ತಥಾ ವಸುಮತೀಂ ತ್ಯಕ್ತ್ವಾ ರಾಜಾ ದಿವಂ ಯಯೌ||
ಹೇಗೆ ಮಗಳ ಮಕ್ಕಳು ಹೀಗೆ ಆ ನರಾಧಿಪನಿಗೆ ಮಾತನಾಡುತ್ತಿದ್ದರೋ ಹಾಗೆ ರಾಜನು ವಸುಮತಿಯನ್ನು ಬಿಟ್ಟು ದಿವಕ್ಕೆ ತೆರಳಿದನು.
05120016a ಏವಂ ಸರ್ವೇ ಸಮಸ್ತಾಸ್ತೇ ರಾಜಾನಃ ಸುಕೃತೈಸ್ತದಾ|
05120016c ಯಯಾತಿಂ ಸ್ವರ್ಗತೋ ಭ್ರಷ್ಟಂ ತಾರಯಾಮಾಸುರಂಜಸಾ||
ಈ ರೀತಿ ಸ್ವರ್ಗದಿಂದ ಭ್ರಷ್ಟನಾದ ಯಯಾತಿಯನ್ನು ಆ ಎಲ್ಲ ರಾಜರು ತಮ್ಮ ಸುಕೃತ ತೇಜಸ್ಸುಗಳಿಂದ ಉದ್ಧರಿಸಿದರು.
05120017a ದೌಹಿತ್ರಾಃ ಸ್ವೇನ ಧರ್ಮೇಣ ಯಜ್ಞಾದಾನಕೃತೇನ ವೈ|
05120017c ಚತುರ್ಷು ರಾಜವಂಶೇಷು ಸಂಭೂತಾಃ ಕುಲವರ್ಧನಾಃ|
05120017e ಮಾತಾಮಹಂ ಮಹಾಪ್ರಾಜ್ಞಾಂ ದಿವಮಾರೋಪಯಂತಿ ತೇ||
ನಾಲ್ಕು ರಾಜವಂಶಗಳಲ್ಲಿ ಹುಟ್ಟಿದ ಕುಲವರ್ಧನ ಆ ಮಗಳ ಮಕ್ಕಳು ತಮ್ಮದೇ ಧರ್ಮದಿಂದ, ಯಜ್ಞ ದಾನಗಳನ್ನು ಮಾಡಿದುದರ ಮೂಲಕ ಮಹಾಪ್ರಾಜ್ಞ ಮಾತಾಮಹನನ್ನು ದಿವಕ್ಕೆ ಏರಿಸಿದರು.
05120018 ರಾಜಾನ ಊಚುಃ|
05120018a ರಾಜಧರ್ಮಗುಣೋಪೇತಾಃ ಸರ್ವಧರ್ಮಗುಣಾನ್ವಿತಾಃ|
05120018c ದೌಹಿತ್ರಾಸ್ತೇ ವಯಂ ರಾಜನ್ದಿವಮಾರೋಹ ಪಾರ್ಥಿವಃ||
ರಾಜರು ಹೇಳಿದರು: “ರಾಜನ್! ಪಾರ್ಥಿವ! ರಾಜಧರ್ಮಗುಣೋಪೇತರಾದ, ಸರ್ವಧರ್ಮ ಗುಣಾನ್ವಿತರಾದ ನಿನ್ನ ಮಗಳ ಮಕ್ಕಳಾದ ನಮ್ಮಿಂದ ದಿವವವನ್ನೇರು!””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಸ್ವರ್ಗಾರೋಹಣೇ ವಿಂಶತ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಸ್ವರ್ಗಾರೋಹಣೆಯಲ್ಲಿ ನೂರಾಇಪ್ಪತ್ತನೆಯ ಅಧ್ಯಾಯವು.