Udyoga Parva: Chapter 102

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೨

ನಾರದನು ಸುಮುಖನ ಅಜ್ಜ ಆರ್ಯಕನಿಗೆ ಮಾತಲಿಯ ಪರಿಚಯ ಮಾಡಿಕೊಟ್ಟು, ಗುಣಕೇಶಿಯನ್ನು ಸುಮುಖನ ಪತ್ನಿಯನ್ನಾಗಿ ಸ್ವೀಕರಿಸಬೇಕೆಂದು ಕೇಳಿದುದು (೧-೧೧). ಆಗ ಆರ್ಯಕನು ಇನ್ನೊಂದು ತಿಂಗಳಿನಲ್ಲಿ ಗರುಡನು ಸುಮುಖನನ್ನು ಭಕ್ಷಿಸುವವನಿದ್ದಾನೆಂದು ತಿಳಿಸಿದುದು (೧೨-೧೬). ಅನಂತರ ಮಾತಲಿ-ನಾರದರು ಸುಮುಖನನ್ನು ಕರೆದುಕೊಂಡು ಇಂದ್ರನಲ್ಲಿಗೆ ಬಂದು ವಿಷಯವೆಲ್ಲವನ್ನೂ ತಿಳಿಸಲು ಅಲ್ಲಿದ್ದ ವಿಷ್ಣುವು ಸುಮುಖನಿಗೆ ಅಮೃತವನ್ನು ಕೊಡೆಂದು ಸೂಚಿಸಿದುದು ಮತ್ತು ಇಂದ್ರನು ಅವನಿಗೆ ದೀರ್ಘ ಆಯುಸ್ಸನ್ನು ನೀಡಿದುದು (೧೭-೨೯).

05102001 ನಾರದ ಉವಾಚ|

05102001a ಸೂತೋಽಯಂ ಮಾತಲಿರ್ನಾಮ ಶಕ್ರಸ್ಯ ದಯಿತಃ ಸುಹೃತ್|

05102001c ಶುಚಿಃ ಶೀಲಗುಣೋಪೇತಸ್ತೇಜಸ್ವೀ ವೀರ್ಯವಾನ್ಬಲೀ||

ನಾರದನು ಹೇಳಿದನು: “ಇವನು ಮಾತಲಿಯೆಂಬ ಹೆಸರಿನ ಶಕ್ರನ ಸೂತ ಮತ್ತು ಅವನ ಪ್ರೀತಿಯ ಸ್ನೇಹಿತ. ಇವನು ಶುಚಿ, ಶೀಲಗುಣೋಪೇತ, ತೇಜಸ್ವೀ, ವೀರ್ಯವಂತ ಮತ್ತು ಬಲಶಾಲಿಯೂ ಕೂಡ.

05102002a ಶಕ್ರಸ್ಯಾಯಂ ಸಖಾ ಚೈವ ಮಂತ್ರೀ ಸಾರಥಿರೇವ ಚ|

05102002c ಅಲ್ಪಾಂತರಪ್ರಭಾವಶ್ಚ ವಾಸವೇನ ರಣೇ ರಣೇ||

ಇವನು ಶಕ್ರನ ಸಖ, ಮಂತ್ರಿ ಮತ್ತು ಸಾರಥಿಯೂ ಕೂಡ. ರಣ ರಣಗಳಲ್ಲಿಯೂ ಪ್ರಭಾವದಲ್ಲಿ ಇವನ ಮತ್ತು ವಾಸವನ ನಡುವೆ ಸ್ವಲ್ಪವೇ ವ್ಯತ್ಯಾಸವಿರುವುದು ಕಾಣಿಸುತ್ತದೆ.

05102003a ಅಯಂ ಹರಿಸಹಸ್ರೇಣ ಯುಕ್ತಂ ಜೈತ್ರಂ ರಥೋತ್ತಮಂ|

05102003c ದೇವಾಸುರೇಷು ಯುದ್ಧೇಷು ಮನಸೈವ ನಿಯಚ್ಚತಿ||

ದೇವಾಸುರರ ಯುದ್ಧಗಳಲ್ಲಿ ಇವನೇ ಸಹಸ್ರ ಕುದುರೆಗಳನ್ನು ಕಟ್ಟಿದ ಉತ್ತಮ ಚೈತ್ರ ರಥವನ್ನು ಮನಸ್ಸಿನಲ್ಲಿಯೇ ನಡೆಸಿದ್ದಾನೆ.

05102004a ಅನೇನ ವಿಜಿತಾನಶ್ವೈರ್ದೋರ್ಭ್ಯಾಂ ಜಯತಿ ವಾಸವಃ|

05102004c ಅನೇನ ಪ್ರಹೃತೇ ಪೂರ್ವಂ ಬಲಭಿತ್ಪ್ರಹರತ್ಯುತ||

ಇವನು ಅಶ್ವಗಳ ಮೇಲೆ ವಿಜಯವನ್ನು ಸಾಧಿಸಿದುದರಿಂದ ವಾಸವನು ಅರಿಗಳನ್ನು ಜಯಿಸಿದನು. ಮೊದಲೇ ಇವನು ಹೊಡೆದವರ ಮೇಲೆ ಬಲಭಿತನು ಹೊಡೆದನು.

05102005a ಅಸ್ಯ ಕನ್ಯಾ ವರಾರೋಹಾ ರೂಪೇಣಾಸದೃಶೀ ಭುವಿ|

05102005c ಸತ್ತ್ವಶೀಲಗುಣೋಪೇತಾ ಗುಣಕೇಶೀತಿ ವಿಶ್ರುತಾ||

ಇವನ ಕನ್ಯೆ, ವರಾರೋಹೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಾಳೆ. ಸತ್ವಶೀಲಗುಣೋಪೇತಳಾದ ಅವಳು ಗುಣಕೇಶೀ ಎಂದು ವಿಶ್ರುತಳಾಗಿದ್ದಾಳೆ.

05102006a ತಸ್ಯಾಸ್ಯ ಯತ್ನಾಚ್ಚರತಸ್ತ್ರೈಲೋಕ್ಯಮಮರದ್ಯುತೇ|

05102006c ಸುಮುಖೋ ಭವತಃ ಪೌತ್ರೋ ರೋಚತೇ ದುಹಿತುಃ ಪತಿಃ||

ಈ ಅಮರದ್ಯುತಿಯು ಅವಳಿಗೆ ವರನನ್ನು ಹುಡುಕಿಕೊಂಡು ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದಾನೆ. ನಿನ್ನ ಮೊಮ್ಮಗ ಸುಮುಖನು ತನ್ನ ಮಗಳಿಗೆ ಪತಿಯಾಗಬೇಕೆಂದು ಬಯಸಿದ್ದಾನೆ.

05102007a ಯದಿ ತೇ ರೋಚತೇ ಸೌಮ್ಯ ಭುಜಗೋತ್ತಮ ಮಾಚಿರಂ|

05102007c ಕ್ರಿಯತಾಮಾರ್ಯಕ ಕ್ಷಿಪ್ರಂ ಬುದ್ಧಿಃ ಕನ್ಯಾಪ್ರತಿಗ್ರಹೇ||

ಆರ್ಯಕ! ಭುಜಗೋತ್ತಮ! ಸೌಮ್ಯ! ಒಂದುವೇಳೆ ನಿನಗೂ ಇದು ಇಷ್ಟವಾದರೆ, ಬೇಗನೇ ಕನ್ಯೆಯನ್ನು ಸ್ವೀಕರಿಸುವ ಮನಸ್ಸು ಮಾಡಬೇಕು.

05102008a ಯಥಾ ವಿಷ್ಣುಕುಲೇ ಲಕ್ಷ್ಮೀರ್ಯಥಾ ಸ್ವಾಹಾ ವಿಭಾವಸೋಃ|

05102008c ಕುಲೇ ತವ ತಥೈವಾಸ್ತು ಗುಣಕೇಶೀ ಸುಮಧ್ಯಮಾ||

ವಿಷ್ಣುವಿನ ಕುಲದಲ್ಲಿ ಲಕ್ಷ್ಮಿಯು ಹೇಗೋ, ವಿಭಾವಸುವಿನಲ್ಲಿ ಸ್ವಾಹಾಳು ಹೇಗೋ ಹಾಗೆ ಸುಮಧ್ಯಮೆ ಗುಣಕೇಶಿಯು ನಿನ್ನ ಕುಲದಲ್ಲಿ ಇರುವಂತಾಗಲಿ.

05102009a ಪೌತ್ರಸ್ಯಾರ್ಥೇ ಭವಾಂಸ್ತಸ್ಮಾದ್ಗುಣಕೇಶೀಂ ಪ್ರತೀಚ್ಚತು|

05102009c ಸದೃಶೀಂ ಪ್ರತಿರೂಪಸ್ಯ ವಾಸವಸ್ಯ ಶಚೀಮಿವ||

ಆದುದರಿಂದ ನೀನು ಮೊಮ್ಮಗನಿಗಾಗಿ ವಾಸವನಿಗೆ ಶಚಿಯಂತೆ ಸದೃಶಳೂ, ಪ್ರತಿರೂಪಳೂ ಆಗಿರುವ ಗುಣಕೇಶಿಯನ್ನು ಸ್ವೀಕರಿಸಬೇಕು.

05102010a ಪಿತೃಹೀನಮಪಿ ಹ್ಯೇನಂ ಗುಣತೋ ವರಯಾಮಹೇ|

05102010c ಬಹುಮಾನಾಚ್ಚ ಭವತಸ್ತಥೈವೈರಾವತಸ್ಯ ಚ|

05102010e ಸುಮುಖಸ್ಯ ಗುಣೈಶ್ಚೈವ ಶೀಲಶೌಚದಮಾದಿಭಿಃ||

ನಿನ್ನ ಮತ್ತು ಐರಾವತನ ಬಹಳ ಮಾನವನ್ನು ಅರಿತು, ತಂದೆಯನ್ನು ಕಳೆದುಕೊಂಡಿದ್ದರೂ, ಸುಮುಖನ ಗುಣ, ಶೀಲ, ಶೌಚಗಳನ್ನು ತಿಳಿದು ಗುಣವಂತನಾದ ಇವನನ್ನು ವರನನ್ನಾಗಿ ಆರಿಸಿಕೊಂಡಿದ್ದೇವೆ.

05102011a ಅಭಿಗಮ್ಯ ಸ್ವಯಂ ಕನ್ಯಾಮಯಂ ದಾತುಂ ಸಮುದ್ಯತಃ|

05102011c ಮಾತಲೇಸ್ತಸ್ಯ ಸಮ್ಮಾನಂ ಕರ್ತುಮರ್ಹೋ ಭವಾನಪಿ||

ಇವನು ಸ್ವಯಂ ಬಂದು ಕನ್ಯೆಯನ್ನು ಕೊಡಲು ಸಿದ್ಧನಿದ್ದಾನೆ. ನೀನೂ ಕೂಡ ಈ ಮಾತಲಿಯ ಸಮ್ಮಾನವನ್ನು ಮಾಡಬೇಕು.””

05102012 ಕಣ್ವ ಉವಾಚ|

05102012a ಸ ತು ದೀನಃ ಪ್ರಹೃಷ್ಟಶ್ಚ ಪ್ರಾಹ ನಾರದಮಾರ್ಯಕಃ|

05102012c ವ್ರಿಯಮಾಣೇ ತಥಾ ಪೌತ್ರೇ ಪುತ್ರೇ ಚ ನಿಧನಂ ಗತೇ||

ಕಣ್ವನು ಹೇಳಿದನು: “ನಾರದನು ಹೀಗೆ ಹೇಳಲು ಆರ್ಯಕನು ಮಗನ ಮರಣವನ್ನು ನೆನೆದು ದುಃಖಿತನೂ ಮತ್ತು ಮೊಮ್ಮಗನನ್ನು ಕೇಳುತ್ತಿದ್ದಾರೆಂದು ಹರ್ಷಿತನೂ ಆಗಿ ಹೇಳಿದನು.

05102013a ನ ಮೇ ನೈತದ್ಬಹುಮತಂ ದೇವರ್ಷೇ ವಚನಂ ತವ|

05102013c ಸಖಾ ಶಕ್ರಸ್ಯ ಸಂಯುಕ್ತಃ ಕಸ್ಯಾಯಂ ನೇಪ್ಸಿತೋ ಭವೇತ್||

“ದೇವರ್ಷೇ! ನಿನ್ನ ಮಾತಿಗೆ ಬಹುಮತವಿಲ್ಲದೇ ಇಲ್ಲ. ಯಾರು ತಾನೇ ಶಕ್ರನ ಈ ಸಖನೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುವುದಿಲ್ಲ?

05102014a ಕಾರಣಸ್ಯ ತು ದೌರ್ಬಲ್ಯಾಚ್ಚಿಂತಯಾಮಿ ಮಹಾಮುನೇ|

05102014c ಅಸ್ಯ ದೇಹಕರಸ್ತಾತ ಮಮ ಪುತ್ರೋ ಮಹಾದ್ಯುತೇ|

05102014e ಭಕ್ಷಿತೋ ವೈನತೇಯೇನ ದುಃಖಾರ್ತಾಸ್ತೇನ ವೈ ವಯಂ||

ಮಹಾಮುನೇ! ಆದರೆ ನಮ್ಮ ದೌರ್ಬಲ್ಯದ ಕಾರಣದ ಕುರಿತು ಚಿಂತಿಸುತ್ತಿದ್ದೇನೆ. ಅಯ್ಯಾ! ಇವನ ತಂದೆ, ನನ್ನ ಮಗ ಮಹಾದ್ಯುತಿಯನ್ನು ವೈನತೇಯನು ಭಕ್ಷಿಸಿದನು. ಅದರಿಂದಲೇ ನಾವು ದುಃಖಾರ್ತರಾಗಿದ್ದೇವೆ.

05102015a ಪುನರೇವ ಚ ತೇನೋಕ್ತಂ ವೈನತೇಯೇನ ಗಚ್ಚತಾ|

05102015c ಮಾಸೇನಾನ್ಯೇನ ಸುಮುಖಂ ಭಕ್ಷಯಿಷ್ಯ ಇತಿ ಪ್ರಭೋ||

ಪ್ರಭೋ! ಹೋಗುವಾಗ ವೈನತೇಯನು ಪುನಃ ಹೇಳಿದ್ದಾನೆ - ಇನ್ನೊಂದು ತಿಂಗಳಲ್ಲಿ ಸುಮುಖನನ್ನು ಭಕ್ಷಿಸುತ್ತೇನೆ - ಎಂದು.

05102016a ಧ್ರುವಂ ತಥಾ ತದ್ಭವಿತಾ ಜಾನೀಮಸ್ತಸ್ಯ ನಿಶ್ಚಯಂ|

05102016c ತೇನ ಹರ್ಷಃ ಪ್ರನಷ್ಟೋ ಮೇ ಸುಪರ್ಣವಚನೇನ ವೈ||

ಅದರಂತೆಯೇ ನಿಶ್ಚಯವಾಗಿಯೂ ಆಗುತ್ತದೆ ಎಂದು ನಮಗೆ ತಿಳಿದಿದೆ. ಸುಪರ್ಣನ ಈ ಮಾತಿನಿಂದ ನಮ್ಮ ಸಂತೋಷವೆಲ್ಲವೂ ನಷ್ಟವಾಗಿದೆ.”

05102017a ಮಾತಲಿಸ್ತ್ವಬ್ರವೀದೇನಂ ಬುದ್ಧಿರತ್ರ ಕೃತಾ ಮಯಾ|

05102017c ಜಾಮಾತೃಭಾವೇನ ವೃತಃ ಸುಮುಖಸ್ತವ ಪುತ್ರಜಃ||

ಆಗ ಮಾತಲಿಯು ಇದನ್ನು ಹೇಳಿದನು: “ನಾನೊಂದು ಯೋಚನೆಯನ್ನು ಮಾಡಿದ್ದೇನೆ. ನಿನ್ನ ಮೊಮ್ಮಗ ಸುಮುಖನನ್ನು ನನ್ನ ಅಳಿಯನೆಂದು ಆರಿಸಿಕೊಂಡಿದ್ದೇನೆ.

05102018a ಸೋಽಯಂ ಮಯಾ ಚ ಸಹಿತೋ ನಾರದೇನ ಚ ಪನ್ನಗಃ|

05102018c ತ್ರಿಲೋಕೇಶಂ ಸುರಪತಿಂ ಗತ್ವಾ ಪಶ್ಯತು ವಾಸವಂ||

ಈ ಪನ್ನಗನು ನನ್ನ ಮತ್ತು ನಾರದನೊಡನೆ ಬರಲಿ. ಹೋಗಿ ತ್ರಿಲೋಕೇಶ ಸುರಪತಿ ವಾಸವನನ್ನು ಕಾಣೋಣ.

05102019a ಶೇಷೇಣೈವಾಸ್ಯ ಕಾರ್ಯೇಣ ಪ್ರಜ್ಞಾಸ್ಯಾಮ್ಯಹಮಾಯುಷಃ|

05102019c ಸುಪರ್ಣಸ್ಯ ವಿಘಾತೇ ಚ ಪ್ರಯತಿಷ್ಯಾಮಿ ಸತ್ತಮ||

ಸತ್ತಮ! ಸುಪರ್ಣನ ಕಾರ್ಯದಲ್ಲಿ ವಿಘ್ನವನ್ನು ತರಲು ಪ್ರಯತ್ನಿಸುತ್ತೇನೆ. ಇವನಿಗೆ ಸಾಕಷ್ಟು ಆಯುಷ್ಯವು ಉಳಿಯುವಂತೆಯೂ ಮಾಡೋಣ.

05102020a ಸುಮುಖಶ್ಚ ಮಯಾ ಸಾರ್ಧಂ ದೇವೇಶಮಭಿಗಚ್ಚತು|

05102020c ಕಾರ್ಯಸಂಸಾಧನಾರ್ಥಾಯ ಸ್ವಸ್ತಿ ತೇಽಸ್ತು ಭುಜಂಗಮ||

ಕಾರ್ಯ ಸಿದ್ಧಿಗಾಗಿ ನನ್ನೊಡನೆ ಸುಮುಖನೂ ಕೂಡ ದೇವೇಶನಲ್ಲಿಗೆ ಬರಬೇಕು. ಭುಜಂಗಮ! ನಿನಗೆ ಮಂಗಳವಾಗಲಿ!”

05102021a ತತಸ್ತೇ ಸುಮುಖಂ ಗೃಹ್ಯ ಸರ್ವ ಏವ ಮಹೌಜಸಃ|

05102021c ದದೃಶುಃ ಶಕ್ರಮಾಸೀನಂ ದೇವರಾಜಂ ಮಹಾದ್ಯುತಿಂ||

ಆಗ ಆ ಮಹೌಜಸ ಸುಮುಖನನ್ನು ಕರೆದುಕೊಂಡು ಎಲ್ಲರೂ ಆಸೀನನಾಗಿದ್ದ ದೇವರಾಜ, ಮಹಾದ್ಯುತಿ ಶಕ್ರನನ್ನು ಕಂಡರು.

05102022a ಸಂಗತ್ಯಾ ತತ್ರ ಭಗವಾನ್ವಿಷ್ಣುರಾಸೀಚ್ಚತುರ್ಭುಜಃ|

05102022c ತತಸ್ತತ್ಸರ್ವಮಾಚಖ್ಯೌ ನಾರದೋ ಮಾತಲಿಂ ಪ್ರತಿ||

ಅಲ್ಲಿ ಅವನೊಡನೆ ಚತುರ್ಭುಜ ಭಗವಾನ್ ವಿಷ್ಣುವೂ ಇದ್ದನು. ಅವರಿಗೆ ಮಾತಲಿ ನಾರದರಿಬ್ಬರೂ ಎಲ್ಲವನ್ನೂ ಹೇಳಿದರು.

05102023a ತತಃ ಪುರಂದರಂ ವಿಷ್ಣುರುವಾಚ ಭುವನೇಶ್ವರಂ|

05102023c ಅಮೃತಂ ದೀಯತಾಮಸ್ಮೈ ಕ್ರಿಯತಾಮಮರೈಃ ಸಮಃ||

ಆಗ ವಿಷ್ಣುವು ಭುವನೇಶ್ವರ ಪುರಂದರನಿಗೆ ಹೇಳಿದನು: “ಇವನಿಗೆ ಅಮೃತವನ್ನಿತ್ತು ಅಮರರ ಸಮನನ್ನಾಗಿ ಮಾಡು.

05102024a ಮಾತಲಿರ್ನಾರದಶ್ಚೈವ ಸುಮುಖಶ್ಚೈವ ವಾಸವ|

05102024c ಲಭಂತಾಂ ಭವತಃ ಕಾಮಾತ್ಕಾಮಮೇತಂ ಯಥೇಪ್ಸಿತಂ||

ವಾಸವ! ಇದರಿಂದ ಮಾತಲಿ, ನಾರದ, ಸುಮುಖರಿಗೆ ಬೇಕಾದುದನ್ನು ನಿನ್ನ ಕೃಪೆಯಿಂದ ಪಡೆಯುವಂತಾಗುತ್ತದೆ.

05102025a ಪುರಂದರೋಽಥ ಸಂಚಿಂತ್ಯ ವೈನತೇಯಪರಾಕ್ರಮಂ|

05102025c ವಿಷ್ಣುಮೇವಾಬ್ರವೀದೇನಂ ಭವಾನೇವ ದದಾತ್ವಿತಿ||

ವೈನತೇಯನ ಪರಾಕ್ರಮದ ಕುರಿತು ಯೋಚಿಸಿ ಪುರಂದರನು ವಿಷ್ಣುವಿಗೆ “ಅದನ್ನು ನೀನೇ ಕೊಡು!” ಎಂದನು.

05102026 ವಿಷ್ಣುರುವಾಚ|

05102026a ಈಶಸ್ತ್ವಮಸಿ ಲೋಕಾನಾಂ ಚರಾಣಾಮಚರಾಶ್ಚ ಯೇ|

05102026c ತ್ವಯಾ ದತ್ತಮದತ್ತಂ ಕಃ ಕರ್ತುಮುತ್ಸಹತೇ ವಿಭೋ||

ವಿಷ್ಣುವು ಹೇಳಿದನು: “ವಿಭೋ! ಚರಾಚರ ಲೋಕಗಳ ಈಶನು ನೀನು! ನೀನು ಕೊಡುವುದನ್ನು ಕೊಡಬಾರದಂತೆ ಮಾಡಲು ಯಾರು ತಾನೇ ಮುಂದೆಬಂದಾರು?””

05102027 ಕಣ್ವ ಉವಾಚ|

05102027a ಪ್ರಾದಾಚ್ಚಕ್ರಸ್ತತಸ್ತಸ್ಮೈ ಪನ್ನಗಾಯಾಯುರುತ್ತಮಂ|

05102027c ನ ತ್ವೇನಮಮೃತಪ್ರಾಶಂ ಚಕಾರ ಬಲವೃತ್ರಹಾ||

ಕಣ್ವನು ಹೇಳಿದನು: “ಬಲವೃತ್ರಹನು ಆ ಪನ್ನಗನಿಗೆ ಉತ್ತಮ ಆಯುಸ್ಸನ್ನು ಅನುಗ್ರಹಿಸಿದನು. ಅವನಿಗೆ ಅಮೃತಪ್ರಾಶನವನ್ನು ಮಾಡಿಸಲಿಲ್ಲ.

05102028a ಲಬ್ಧ್ವಾ ವರಂ ತು ಸುಮುಖಃ ಸುಮುಖಃ ಸಂಬಭೂವ ಹ|

05102028c ಕೃತದಾರೋ ಯಥಾಕಾಮಂ ಜಗಾಮ ಚ ಗೃಹಾನ್ಪ್ರತಿ||

ಸುಮುಖನಾದರೋ ಆ ವರವನ್ನು ಪಡೆದು ಸುಮುಖನಾದನು. ಮದುವೆಮಾಡಿಕೊಂಡು, ಸಂತೋಷದಿಂದ ಮನೆಗೆ ತೆರಳಿದನು.

05102029a ನಾರದಸ್ತ್ವಾರ್ಯಕಶ್ಚೈವ ಕೃತಕಾರ್ಯೌ ಮುದಾ ಯುತೌ|

05102029c ಪ್ರತಿಜಗ್ಮತುರಭ್ಯರ್ಚ್ಯ ದೇವರಾಜಂ ಮಹಾದ್ಯುತಿಂ||

ನಾರದ-ಆರ್ಯಕರೂ ಕೂಡ ಕಾರ್ಯಗಳನ್ನು ಪೂರೈಸಿ ಸಂತೋಷಗೊಂಡು ಮಹಾದ್ಯುತಿ ದೇವರಾಜನನ್ನು ಅರ್ಚಿಸಿ ಹಿಂದಿರುಗಿದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ದ್ವ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಎರಡನೆಯ ಅಧ್ಯಾಯವು.

Related image

Comments are closed.