Shanti Parva: Chapter 346

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೬

12346001 ಭೀಷ್ಮ ಉವಾಚ|

12346001a ಅಥ ತೇನ ನರಶ್ರೇಷ್ಠ ಬ್ರಾಹ್ಮಣೇನ ತಪಸ್ವಿನಾ|

12346001c ನಿರಾಹಾರೇಣ ವಸತಾ ದುಃಖಿತಾಸ್ತೇ ಭುಜಂಗಮಾಃ||

ಭೀಷ್ಮನು ಹೇಳಿದನು: “ನರಶ್ರೇಷ್ಠ! ಆಗ ಆ ತಪಸ್ವಿ ಬ್ರಾಹ್ಮಣನು ನಿರಾಹಾರನಾಗಿ ವಾಸಿಸುತ್ತಿರಲು ಭುಜಂಗಮರು ದುಃಖಿತರಾದರು.

12346002a ಸರ್ವೇ ಸಂಭೂಯ ಸಹಿತಾಸ್ತಸ್ಯ ನಾಗಸ್ಯ ಬಾಂಧವಾಃ|

12346002c ಭ್ರಾತರಸ್ತನಯಾ ಭಾರ್ಯಾ ಯಯುಸ್ತಂ ಬ್ರಾಹ್ಮಣಂ ಪ್ರತಿ||

ಆ ನಾಗನ ಬಾಂಧವರು, ಸಹೋದರರು, ಮಕ್ಕಳು, ಪತ್ನಿ ಎಲ್ಲರೂ ಒಟ್ಟಾಗಿ ಸೇರಿ ಆ ಬ್ರಾಹ್ಮಣನ ಬಳಿ ಹೋದರು.

12346003a ತೇಽಪಶ್ಯನ್ ಪುಲಿನೇ ತಂ ವೈ ವಿವಿಕ್ತೇ ನಿಯತವ್ರತಮ್|

12346003c ಸಮಾಸೀನಂ ನಿರಾಹಾರಂ ದ್ವಿಜಂ ಜಪ್ಯಪರಾಯಣಮ್||

12346004a ತೇ ಸರ್ವೇ ಸಮಭಿಕ್ರಮ್ಯ ವಿಪ್ರಮಭ್ಯರ್ಚ್ಯ ಚಾಸಕೃತ್|

12346004c ಊಚುರ್ವಾಕ್ಯಮಸಂದಿಗ್ಧಮಾತಿಥೇಯಸ್ಯ ಬಾಂಧವಾಃ||

ಆ ನಿರ್ಜನ ನದೀತೀರದಲ್ಲಿ ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ನಿರಾಹಾರನಾಗಿ ಜಪಪರಾಯಣನಾಗಿದ್ದ ಆ ನಿಯತವ್ರತನನ್ನು ನೋಡಿ ಆ ಬಾಂಧವರೆಲ್ಲರೂ ವಿಪ್ರನ ಬಳಿಸಾರಿ ಅರ್ಚಿಸಿ ಆತಿಥ್ಯದ ಈ ಸಂದಿಗ್ಧ ಮಾತುಗಳನ್ನಾಡಿದರು:

12346005a ಷಷ್ಠೋ ಹಿ ದಿವಸಸ್ತೇಽದ್ಯ ಪ್ರಾಪ್ತಸ್ಯೇಹ ತಪೋಧನ|

12346005c ನ ಚಾಭಿಲಷಸೇ ಕಿಂ ಚಿದಾಹಾರಂ ಧರ್ಮವತ್ಸಲ||

“ತಪೋಧನ! ನೀನು ಇಲ್ಲಿಗೆ ಬಂದು ಆರು ದಿವಸಗಳಾದವು. ಅದರೆ ಧರ್ಮವತ್ಸಲ! ನೀನು ಸ್ವಲ್ಪವೂ ಆಹಾರವನ್ನು ಸೇವಿಸಲು ಬಯಸುತ್ತಿಲ್ಲ.

12346006a ಅಸ್ಮಾನಭಿಗತಶ್ಚಾಸಿ ವಯಂ ಚ ತ್ವಾಮುಪಸ್ಥಿತಾಃ|

12346006c ಕಾರ್ಯಂ ಚಾತಿಥ್ಯಮಸ್ಮಾಭಿರ್ವಯಂ ಸರ್ವೇ ಕುಟುಂಬಿನಃ||

ನೀನು ನಮ್ಮಲ್ಲಿಗೆ ಆಗಮಿಸಿದ್ದೀಯೆ ಮತ್ತು ನಾವು ಇಲ್ಲಿ ನಿನ್ನ ಸೇವೆಗಾಗಿ ಉಪಸ್ಥಿತರಾಗಿದ್ದೇವೆ. ಕುಟುಂಬಿಗಳಾಗಿರುವ ನಮ್ಮೆಲ್ಲರಿಗೂ ನಿನಗೆ ಆತಿಥ್ಯವನ್ನು ನೀಡುವುದು ಕರ್ತವ್ಯವೇ ಆಗಿದೆ.

12346007a ಮೂಲಂ ಫಲಂ ವಾ ಪರ್ಣಂ ವಾ ಪಯೋ ವಾ ದ್ವಿಜಸತ್ತಮ|

12346007c ಆಹಾರಹೇತೋರನ್ನಂ ವಾ ಭೋಕ್ತುಮರ್ಹಸಿ ಬ್ರಾಹ್ಮಣ||

ದ್ವಿಜಸತ್ತಮ! ಬ್ರಾಹ್ಮಣ! ಮೂಲ-ಫಲ ಅಥವಾ ಎಲೆಗಳು ಅಥವಾ ನೀರು, ಅಥವಾ ಇತರ ಅನ್ನವನ್ನು ನೀನು ಆಹಾರವನ್ನಾಗಿ ಸೇವಿಸಬೇಕು.

12346008a ತ್ಯಕ್ತಾಹಾರೇಣ ಭವತಾ ವನೇ ನಿವಸತಾ ಸತಾ|

12346008c ಬಾಲವೃದ್ಧಮಿದಂ ಸರ್ವಂ ಪೀಡ್ಯತೇ ಧರ್ಮಸಂಕಟಾತ್||

ನೀನು ಆಹಾರವನ್ನು ತ್ಯಜಿಸಿ ಈ ವನದಲ್ಲಿ ವಾಸಿಸುತ್ತಿರುವುದು ಬಾಲವೃದ್ಧರಾದ ನಮ್ಮೆಲ್ಲರನ್ನೂ ಧರ್ಮಸಂಕಟದಿಂದ ಪೀಡಿಸುತ್ತಿದೆ.

12346009a ನ ಹಿ ನೋ ಭ್ರೂಣಹಾ ಕಶ್ಚಿದ್ರಾಜಾಪಥ್ಯೋಽನೃತೋಽಪಿ ವಾ|

12346009c ಪೂರ್ವಾಶೀ ವಾ ಕುಲೇ ಹ್ಯಸ್ಮಿನ್ ದೇವತಾತಿಥಿಬಂಧುಷು||

ಈ ನಮ್ಮ ಕುಲದಲ್ಲಿ ಭ್ರೂಣಹತ್ಯೆಯನ್ನು ಮಾಡಿದವನು ಅಥವ ರಾಜನ ನಿಯಮವನ್ನು ಉಲ್ಲಂಘಿಸಿದವನು ಅಥವಾ ಸುಳ್ಳಾಡಿದವನು ಅಥವಾ ದೇವತೆಗಳಿಗೆ ನಿವೇದನೆ ಮಾಡುವ ಮೊದಲು ಮತ್ತು ಅತಿಥಿ-ಬಂಧುಗಳು ಊಟಮಾಡುವ ಮೊದಲು ಭೋಜನ ಮಾಡುವವರು ಯಾರೂ ಇಲ್ಲ.”

12346010 ಬ್ರಾಹ್ಮಣ ಉವಾಚ|

12346010a ಉಪದೇಶೇನ ಯುಷ್ಮಾಕಮಾಹಾರೋಽಯಂ ಮಯಾ ವೃತಃ|

12346010c ದ್ವಿರೂನಂ ದಶರಾತ್ರಂ ವೈ ನಾಗಸ್ಯಾಗಮನಂ ಪ್ರತಿ||

ಬ್ರಾಹ್ಮಣನು ಹೇಳಿದನು: “ನಿಮ್ಮ ಈ ಉಪದೇಶದಿಂದ ನಾನು ಆಹಾರವನ್ನು ಸೇವಿಸಿದಂತೆಯೇ ಆಯಿತು. ನಾಗನ ಆಗಮನಕ್ಕೆ ಇನ್ನು ಎಂಟು ರಾತ್ರಿಗಳು ಮಾತ್ರವೇ ಉಳಿದಿವೆ.

12346011a ಯದ್ಯಷ್ಟರಾತ್ರೇ ನಿರ್ಯಾತೇ ನಾಗಮಿಷ್ಯತಿ ಪನ್ನಗಃ|

12346011c ತದಾಹಾರಂ ಕರಿಷ್ಯಾಮಿ ತನ್ನಿಮಿತ್ತಮಿದಂ ವ್ರತಮ್||

ಒಂದುವೇಳೆ ಎಂಟನೇ ರಾತ್ರಿಯೂ ಪನ್ನಗ ನಾಗನು ಹಿಂದಿರುಗದೇ ಇದ್ದರೆ ಆಗ ನಾನು ಆಹಾರವನ್ನು ಸೇವಿಸುತ್ತೇನೆ. ಅವನಿಗಾಗಿಯೇ ನನ್ನ ಈ ವ್ರತವು.

12346012a ಕರ್ತವ್ಯೋ ನ ಚ ಸಂತಾಪೋ ಗಮ್ಯತಾಂ ಚ ಯಥಾಗತಮ್|

12346012c ತನ್ನಿಮಿತ್ತಂ ವ್ರತಂ ಮಹ್ಯಂ ನೈತದ್ ಭೇತ್ತುಮಿಹಾರ್ಹಥ||

ಸಂತಾಪ ಪಡಬೇಡಿ. ಎಲ್ಲಿಂದ ಬಂದಿರೋ ಅಲ್ಲಿಗೆ ಹೋಗಬೇಕು. ಅವನ ನಿಮಿತ್ತವಾಗಿಯೇ ನಡೆಸುತ್ತಿರುವ ಈ ವ್ರತವನ್ನು ನೀವು ಭಂಗಗೊಳಿಸಬಾರದು.””

12346013 ಭೀಷ್ಮ ಉವಾಚ|

12346013a ತೇನ ತೇ ಸಮನುಜ್ಞಾತಾ ಬ್ರಾಹ್ಮಣೇನ ಭುಜಂಗಮಾಃ|

12346013c ಸ್ವಮೇವ ಭವನಂ ಜಗ್ಮುರಕೃತಾರ್ಥಾ ನರರ್ಷಭ||

ಭೀಷ್ಮನು ಹೇಳಿದನು: “ನರರ್ಷಭ! ಹೀಗೆ ಆ ಬ್ರಾಹ್ಮಣನಿಂದ ಅನುಜ್ಞಾತರಾಗಿ ಭುಜಂಗಮರು ಅಸಫಲರಾಗಿಯೇ ತಮ್ಮ ಮನೆಗಳಿಗೆ ತೆರಳಿದರು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಷಟ್ಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತಾರನೇ ಅಧ್ಯಾಯವು.

The Beautiful Green Bird With White Belly Isolated On White Background  Stock Photo, Picture And Royalty Free Image. Image 46083330.

Comments are closed.