ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೨೪
ಯಜ್ಞದಲ್ಲಿ ಹವಿಸ್ಸಾಗಿ ಉಪಯೋಗಿಸಬೇಕಾದ ’ಅಜ”ದ ಶಬ್ಧಾರ್ಥವು “ಧಾನ್ಯಬೀಜ” ಎಂದೇ ಹೊರತು ಆಡಲ್ಲ ಎಂಬ ವಿಷಯವನ್ನು ತಿಳಿದಿದ್ದರೂ ಪಕ್ಷಪಾತವನ್ನು ತೋರಿದ ಕಾರಣ ಉಪರಿಚರವಸುವು ಸ್ವರ್ಗದಿಂದ ಭ್ರಷ್ಟನಾದುದು (1-16); ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು (17-39).
12324001 ಯುಧಿಷ್ಠಿರ ಉವಾಚ|
12324001a ಯದಾ ಭಕ್ತೋ ಭಗವತ ಆಸೀದ್ರಾಜಾ ಮಹಾವಸುಃ|
12324001c ಕಿಮರ್ಥಂ ಸ ಪರಿಭ್ರಷ್ಟೋ ವಿವೇಶ ವಿವರಂ ಭುವಃ||
ಯುಧಿಷ್ಠಿರನು ಹೇಳಿದನು: “ಮಹಾವಸುವು ಭಗವಂತ ಭಕ್ತನಾಗಿದ್ದರೂ ಕೂಡ ಯಾವ ಕಾರಣಕ್ಕಾಗಿ ಪರಿಭ್ರಷ್ಟನಾಗಿ ಭೂಮಿಯ ಬಿಲವನ್ನು ಸೇರಿದನು?”
12324002 ಭೀಷ್ಮ ಉವಾಚ|
12324002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12324002c ಋಷೀಣಾಂ ಚೈವ ಸಂವಾದಂ ತ್ರಿದಶಾನಾಂ ಚ ಭಾರತ||
ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಋಷಿಗಳ ಮತ್ತು ತ್ರಿದಶರ ಸಂವಾದವನ್ನು ಉದಾಹರಿಸುತ್ತಾರೆ.
12324003a ಅಜೇನ ಯಷ್ಟವ್ಯಮಿತಿ ದೇವಾಃ ಪ್ರಾಹುರ್ದ್ವಿಜೋತ್ತಮಾನ್|
12324003c ಸ ಚ ಚಾಗೋ ಹ್ಯಜೋ ಜ್ಞೇಯೋ ನಾನ್ಯಃ ಪಶುರಿತಿ ಸ್ಥಿತಿಃ||
ಆಡಿನಿಂದ ಯಜ್ಞಮಾಡಬೇಕು ಎಂದು ದೇವತೆಗಳು ದ್ವಿಜೋತ್ತಮರಿಗೆ ಹೇಳುತ್ತಿದ್ದರು. ಅಜ ಎಂದರೆ ಪಶು ಆಡು. ಬೇರೆ ಯಾವುದೂ ಅಲ್ಲ ಎಂದು ಅವರ ಮತವಾಗಿತ್ತು.
12324004 ಋಷಯ ಊಚುಃ|
12324004a ಬೀಜೈರ್ಯಜ್ಞೇಷು ಯಷ್ಟವ್ಯಮಿತಿ ವೈ ವೈದಿಕೀ ಶ್ರುತಿಃ|
12324004c ಅಜಸಂಜ್ಞಾನಿ ಬೀಜಾನಿ ಚಾಗಂ ನ ಘ್ನಂತುಮರ್ಹಥ||
ಋಷಿಗಳು ಹೇಳಿದರು: “ಬೀಜಗಳಿಂದ ಯಜ್ಞಗಳಲ್ಲಿ ಆಹುತಿಯನ್ನು ನೀಡಬೇಕೆಂದು ವೈದಿಕೀ ಶ್ರುತಿಯಿದೆ. ಅಜ ಎಂದರೆ ಬೀಜಗಳು. ಆದುದರಿಂದ ಆಡನ್ನು ಕೊಲ್ಲಬಾರದು.
12324005a ನೈಷ ಧರ್ಮಃ ಸತಾಂ ದೇವಾ ಯತ್ರ ವಧ್ಯೇತ ವೈ ಪಶುಃ|
12324005c ಇದಂ ಕೃತಯುಗಂ ಶ್ರೇಷ್ಠಂ ಕಥಂ ವಧ್ಯೇತ ವೈ ಪಶುಃ||
ದೇವತೆಗಳೇ! ಪಶುವನ್ನು ವಧಿಸುವುದು ಸತ್ಪುರುಷರ ಧರ್ಮವಲ್ಲ. ಶ್ರೇಷ್ಠವಾದ ಈ ಕೃತಯುಗದಲ್ಲಿ ಪಶುವನ್ನು ಹೇಗೆ ವಧಿಸಬೇಕು?””
12324006 ಭೀಷ್ಮ ಉವಾಚ|
12324006a ತೇಷಾಂ ಸಂವದತಾಮೇವಮೃಷೀಣಾಂ ವಿಬುಧೈಃ ಸಹ|
12324006c ಮಾರ್ಗಾಗತೋ ನೃಪಶ್ರೇಷ್ಠಸ್ತಂ ದೇಶಂ ಪ್ರಾಪ್ತವಾನ್ವಸುಃ|
12324006e ಅಂತರಿಕ್ಷಚರಃ ಶ್ರೀಮಾನ್ಸಮಗ್ರಬಲವಾಹನಃ||
ಭೀಷ್ಮನು ಹೇಳಿದನು: “ಆ ಋಷಿಗಳು ವಿಬುಧರೊಂದಿಗೆ ಈ ರೀತಿ ಮಾತನಾಡುತ್ತಿರಲು ಸಮಗ್ರಬಲವಾಹನಾಗಿ ಅಂತರಿಕ್ಷಚರನಾಗಿ ಮಾರ್ಗದಲ್ಲಿ ಹೋಗುತ್ತಿದ್ದ ನೃಪಶ್ರೇಷ್ಠ ವಸುವು ಆ ಪ್ರದೇಶವನ್ನು ತಲುಪಿದನು.
12324007a ತಂ ದೃಷ್ಟ್ವಾ ಸಹಸಾಯಾಂತಂ ವಸುಂ ತೇ ತ್ವಂತರಿಕ್ಷಗಮ್|
12324007c ಊಚುರ್ದ್ವಿಜಾತಯೋ ದೇವಾನೇಷ ಚೇತ್ಸ್ಯತಿ ಸಂಶಯಮ್||
ಒಮ್ಮೆಲೇ ಅಲ್ಲಿಗೆ ಬರುತ್ತಿದ್ದ ಅಂತರಿಕ್ಷಗ ವಸುವನ್ನು ನೋಡಿ ದ್ವಿಜಾತಯರು ದೇವತೆಗಳಿಗೆ “ಇವನು ಸಂಶಯವನ್ನು ಬಗೆಹರಿಸುತ್ತಾನೆ” ಎಂದು ಹೇಳಿದರು.
12324008a ಯಜ್ವಾ ದಾನಪತಿಃ ಶ್ರೇಷ್ಠಃ ಸರ್ವಭೂತಹಿತಪ್ರಿಯಃ|
12324008c ಕಥಂ ಸ್ವಿದನ್ಯಥಾ ಬ್ರೂಯಾದ್ವಾಕ್ಯಮೇಷ ಮಹಾನ್ವಸುಃ||
“ಸರ್ವಭೂತಹಿತಪ್ರಿಯನಾದ ಯಜ್ಞಗಳನ್ನು ಮಾಡಿರುವ ದಾನಪತಿ ಶ್ರೇಷ್ಠನಾದ ಈ ಮಹಾನ್ ವಸುವು ಈ ವಾಕ್ಯಕ್ಕೆ ಅನ್ಯಥಾ ಹೇಗೆ ತಾನೇ ಹೇಳಬಲ್ಲನು?”
12324009a ಏವಂ ತೇ ಸಂವಿದಂ ಕೃತ್ವಾ ವಿಬುಧಾ ಋಷಯಸ್ತಥಾ|
12324009c ಅಪೃಚ್ಚನ್ಸಹಸಾಭ್ಯೇತ್ಯ ವಸುಂ ರಾಜಾನಮಂತಿಕಾತ್||
ಹೀಗೆ ಒಪ್ಪಂದವನ್ನು ಮಾಡಿಕೊಂಡು ವಿಬುಧರು ಮತ್ತು ಋಷಿಗಳು ಕೂಡಲೇ ರಾಜ ವಸುವಿನ ಹತ್ತಿರಹೋಗಿ ಕೇಳಿದರು:
12324010a ಭೋ ರಾಜನ್ಕೇನ ಯಷ್ಟವ್ಯಮಜೇನಾಹೋ ಸ್ವಿದೌಷಧೈಃ|
12324010c ಏತನ್ನಃ ಸಂಶಯಂ ಚಿಂಧಿ ಪ್ರಮಾಣಂ ನೋ ಭವಾನ್ಮತಃ||
“ಭೋ ರಾಜನ್! ಆಡು ಅಥವಾ ಧಾನ್ಯ ಯಾವುದರಿಂದ ಯಜ್ಞವನ್ನು ಮಾಡಬೇಕು? ನಮ್ಮ ಈ ಸಂಶಯವನ್ನು ನಿವಾರಿಸು. ನೀನು ಇದಕ್ಕೆ ಪ್ರಮಾಣನೆಂದು ನಮ್ಮ ಮತವಾಗಿದೆ.”
12324011a ಸ ತಾನ್ಕೃತಾಂಜಲಿರ್ಭೂತ್ವಾ ಪರಿಪಪ್ರಚ್ಚ ವೈ ವಸುಃ|
12324011c ಕಸ್ಯ ವಃ ಕೋ ಮತಃ ಪಕ್ಷೋ ಬ್ರೂತ ಸತ್ಯಂ ಸಮಾಗತಾಃ||
ಆಗ ಅಂಜಲೀಬದ್ಧನಾಗಿ ವಸುವು ಅವರನ್ನು ಪ್ರಶ್ನಿಸಿದನು: “ನಿಮ್ಮಲ್ಲಿ ಯಾರಿಗೆ ಯಾರ ಮತವು ಅಪೇಕ್ಷಿತವಾಗಿದೆ ಎನ್ನುವುದನ್ನು ಸತ್ಯವಾಗಿ ಹೇಳಿರಿ.”
12324012 ಋಷಯ ಊಚುಃ|
12324012a ಧಾನ್ಯೈರ್ಯಷ್ಟವ್ಯಮಿತ್ಯೇಷ ಪಕ್ಷೋಽಸ್ಮಾಕಂ ನರಾಧಿಪ|
12324012c ದೇವಾನಾಂ ತು ಪಶುಃ ಪಕ್ಷೋ ಮತೋ ರಾಜನ್ವದಸ್ವ ನಃ||
ಋಷಿಗಳು ಹೇಳಿದರು: “ನರಾಧಿಪ! ಧಾನದಿಂದ ಯಜ್ಞಮಾಡಬೇಕೆಂದು ನಮ್ಮ ಪಕ್ಷ. ದೇವತೆಗಳದ್ದಾದರೋ ಪಶು ಎನ್ನುವ ಪಕ್ಷ. ರಾಜನ್! ನಿನ್ನ ಮತವೇನೆಂದು ನಮಗೆ ಹೇಳು.””
12324013 ಭೀಷ್ಮ ಉವಾಚ|
12324013a ದೇವಾನಾಂ ತು ಮತಂ ಜ್ಞಾತ್ವಾ ವಸುನಾ ಪಕ್ಷಸಂಶ್ರಯಾತ್|
12324013c ಚಾಗೇನಾಜೇನ ಯಷ್ಟವ್ಯಮೇವಮುಕ್ತಂ ವಚಸ್ತದಾ||
ಭೀಷ್ಮನು ಹೇಳಿದನು: “ದೇವತೆಗಳ ಮತವನ್ನು ತಿಳಿದು ಅವರ ಪಕ್ಷವನ್ನು ಸೇರಲು ಬಯಸಿ ವಸುವು ಅಜ ಅರ್ಥಾತ್ ಆಡಿನಿಂದಲೇ ಯಜ್ಞಮಾಡಬೇಕು ಎಂದು ಹೇಳಿಬಿಟ್ಟನು.
12324014a ಕುಪಿತಾಸ್ತೇ ತತಃ ಸರ್ವೇ ಮುನಯಃ ಸೂರ್ಯವರ್ಚಸಃ|
12324014c ಊಚುರ್ವಸುಂ ವಿಮಾನಸ್ಥಂ ದೇವಪಕ್ಷಾರ್ಥವಾದಿನಮ್||
ಆಗ ಕುಪಿತರಾದ ಆ ಎಲ್ಲ ಸೂರ್ಯವರ್ಚಸ್ವೀ ಮುನಿಗಳು ದೇವಪಕ್ಷವನ್ನು ಅನುಮೋದಿಸಿ ಮಾತನಾಡಿದ ವಿಮಾನಸ್ಥನಿಗೆ ಹೇಳಿದರು:
12324015a ಸುರಪಕ್ಷೋ ಗೃಹೀತಸ್ತೇ ಯಸ್ಮಾತ್ತಸ್ಮಾದ್ದಿವಃ ಪತ|
12324015c ಅದ್ಯ ಪ್ರಭೃತಿ ತೇ ರಾಜನ್ನಾಕಾಶೇ ವಿಹತಾ ಗತಿಃ|
12324015e ಅಸ್ಮಚ್ಚಾಪಾಭಿಘಾತೇನ ಮಹೀಂ ಭಿತ್ತ್ವಾ ಪ್ರವೇಕ್ಷ್ಯಸಿ||
“ಸುರಪಕ್ಷವನ್ನು ಎತ್ತಿಹಿಡಿದುದರಿಂದ ನೀನು ದಿವದಿಂದ ಬೀಳು. ರಾಜನ್! ಆಕಾಶಮಾರ್ಗದಲ್ಲಿ ಹಾರಾಡುತ್ತಿರುವ ನೀನು ಇಂದಿನಿಂದ ನಮ್ಮ ಶಾಪದ ಆಘಾತದಿಂದ ಭೂಮಿಯನ್ನು ಸೀಳಿ ಪ್ರವೇಶಿಸುವೆ.”
12324016a ತತಸ್ತಸ್ಮಿನ್ಮುಹೂರ್ತೇಽಥ ರಾಜೋಪರಿಚರಸ್ತದಾ|
12324016c ಅಧೋ ವೈ ಸಂಬಭೂವಾಶು ಭೂಮೇರ್ವಿವರಗೋ ನೃಪಃ|
12324016e ಸ್ಮೃತಿಸ್ತ್ವೇನಂ ನ ಪ್ರಜಹೌ ತದಾ ನಾರಾಯಣಾಜ್ಞಯಾ||
ಆ ಮುಹೂರ್ತದಲ್ಲಿಯೇ ರಾಜ ಉಪರಿಚರನು ಅಧೋಮುಖನಾಗಿ ಬಿದ್ದು ಭೂಮಿಯ ಬಿಲವನ್ನು ಪ್ರವೇಶಿಸಿ ಪಾತಾಳಲೋಕಕ್ಕೆ ಹೋದನು. ಆದರೆ ನಾರಾಯಣನ ಅನುಗ್ರಹದಿಂದ ಅವನು ತನ್ನ ಸ್ಮೃತಿಯನ್ನು ಕಳೆದುಕೊಳ್ಳಲಿಲ್ಲ.
12324017a ದೇವಾಸ್ತು ಸಹಿತಾಃ ಸರ್ವೇ ವಸೋಃ ಶಾಪವಿಮೋಕ್ಷಣಮ್|
12324017c ಚಿಂತಯಾಮಾಸುರವ್ಯಗ್ರಾಃ ಸುಕೃತಂ ಹಿ ನೃಪಸ್ಯ ತತ್||
ಅವ್ಯಗ್ರರಾದ ದೇವತೆಗಳೆಲ್ಲರೂ ವಸುವಿನ ಶಾಪವಿಮೋಚನೆಯ ಕುರಿತು ಯೋಚಿಸಿ ನೃಪನಿಗೆ ಸುಕೃತವನ್ನೆಸಗಲು ನಿಶ್ಚಯಿಸಿದರು.
12324018a ಅನೇನಾಸ್ಮತ್ಕೃತೇ ರಾಜ್ಞಾ ಶಾಪಃ ಪ್ರಾಪ್ತೋ ಮಹಾತ್ಮನಾ|
12324018c ಅಸ್ಯ ಪ್ರತಿಪ್ರಿಯಂ ಕಾರ್ಯಂ ಸಹಿತೈರ್ನೋ ದಿವೌಕಸಃ||
“ನಮ್ಮ ಸಲುವಾಗಿ ಮಹಾತ್ಮ ರಾಜನು ಶಾಪವನ್ನು ಪಡೆದುಕೊಂಡನು. ದಿವೌಕಸರಾದ ನಾವು ಒಟ್ಟಾಗಿ ಅವನ ಪ್ರತಿ ಪ್ರಿಯಕಾರ್ಯವನ್ನು ಮಾಡಬೇಕು.”
12324019a ಇತಿ ಬುದ್ಧ್ಯಾ ವ್ಯವಸ್ಯಾಶು ಗತ್ವಾ ನಿಶ್ಚಯಮೀಶ್ವರಾಃ|
12324019c ಊಚುಸ್ತಂ ಹೃಷ್ಟಮನಸೋ ರಾಜೋಪರಿಚರಂ ತದಾ||
ಹೀಗೆ ಯೋಚಿಸಿ ಪಾತಾಳಕ್ಕೆ ಹೋಗಿ ಆ ಈಶ್ವರರು ಹೃಷ್ಟಮನಸ್ಕರಾಗಿ ರಾಜಾ ಉಪರಿಚರನಿಗೆ ಹೇಳಿದರು:
12324020a ಬ್ರಹ್ಮಣ್ಯದೇವಂ ತ್ವಂ ಭಕ್ತಃ ಸುರಾಸುರಗುರುಂ ಹರಿಮ್|
12324020c ಕಾಮಂ ಸ ತವ ತುಷ್ಟಾತ್ಮಾ ಕುರ್ಯಾಚ್ಚಾಪವಿಮೋಕ್ಷಣಮ್||
“ನೀನು ಬ್ರಹ್ಮಣ್ಯದೇವ ಸುರಾಸುರಗುರು ಹರಿಯ ಭಕ್ತನಾಗಿರುವೆ. ತುಷ್ಟಾತ್ಮನಾದ ಅವನು ನಿನ್ನ ಶಾಪವಿಮೋಚನೆಯನ್ನು ಮಾಡಲು ಬಯಸಬಹುದು.
12324021a ಮಾನನಾ ತು ದ್ವಿಜಾತೀನಾಂ ಕರ್ತವ್ಯಾ ವೈ ಮಹಾತ್ಮನಾಮ್|
12324021c ಅವಶ್ಯಂ ತಪಸಾ ತೇಷಾಂ ಫಲಿತವ್ಯಂ ನೃಪೋತ್ತಮ||
12324022a ಯತಸ್ತ್ವಂ ಸಹಸಾ ಭ್ರಷ್ಟ ಆಕಾಶಾನ್ಮೇದಿನೀತಲಮ್|
ನೃಪೋತ್ತಮ! ಮಹಾತ್ಮ ದ್ವಿಜಾತಿಯವರನ್ನು ಗೌರವಿಸಬೇಕು. ಅವರ ತಪಸ್ಸು ಅವಶ್ಯವಾಗಿ ಫಲಿಸುತ್ತದೆ. ಆದುದರಿಂದಲೇ ನೀನು ಕೂಡಲೇ ಆಕಾಶದಿಂದ ಭ್ರಷ್ಟನಾಗಿ ಮೇದಿನೀತಲವನ್ನು ಪ್ರವೇಶಿಸಿದೆ.
12324022c ಏಕಂ ತ್ವನುಗ್ರಹಂ ತುಭ್ಯಂ ದದ್ಮೋ ವೈ ನೃಪಸತ್ತಮ||
12324023a ಯಾವತ್ತ್ವಂ ಶಾಪದೋಷೇಣ ಕಾಲಮಾಸಿಷ್ಯಸೇಽನಘ|
12324023c ಭೂಮೇರ್ವಿವರಗೋ ಭೂತ್ವಾ ತಾವಂತಂ ಕಾಲಮಾಪ್ಸ್ಯಸಿ|
12324023e ಯಜ್ಞೇಷು ಸುಹುತಾಂ ವಿಪ್ರೈರ್ವಸೋರ್ಧಾರಾಂ ಮಹಾತ್ಮಭಿಃ||
ನೃಪಸತ್ತಮ! ಅನಘ! ನಾವು ನಿನಗೆ ಒಂದು ಅನುಗ್ರಹವನ್ನು ನೀಡುತ್ತೇವೆ. ಎಷ್ಟುಕಾಲದವರೆಗೆ ಶಾಪದೋಷದಿಂದ ನೀನು ಭೂಮಿಯ ಬಿಲವನ್ನು ಪ್ರವೇಶಿಸಿ ವಾಸಿಸುತ್ತೀಯೋ ಅಷ್ಟು ಕಾಲದ ವರೆಗೆ ಯಜ್ಞಗಳಲ್ಲಿ ಮಹಾತ್ಮ ವಿಪ್ರರು ನೀಡುವ ವಸೋರ್ಧಾರಾ ಎನ್ನುವ ಉತ್ತಮ ಆಹುತಿಯನ್ನು ನೀನು ಪಡೆದುಕೊಳ್ಳುತ್ತೀಯೆ.
12324024a ಪ್ರಾಪ್ಸ್ಯಸೇಽಸ್ಮದನುಧ್ಯಾನಾನ್ಮಾ ಚ ತ್ವಾಂ ಗ್ಲಾನಿರಾಸ್ಪೃಶೇತ್|
12324024c ನ ಕ್ಷುತ್ಪಿಪಾಸೇ ರಾಜೇಂದ್ರ ಭೂಮೇಶ್ಚಿದ್ರೇ ಭವಿಷ್ಯತಃ||
ರಾಜೇಂದ್ರ! ನಮ್ಮ ಅನುಧ್ಯಾನವನ್ನು ಮಾಡುವುದರಿಂದ ನೀನು ಅದನ್ನು ಪಡೆದುಕೊಂಡಾಗ ಆಯಾಸವು ನಿನ್ನನ್ನು ಮುಟ್ಟುವುದಿಲ್ಲ. ಭೂಮಿಯ ಬಿಲದಲ್ಲಿ ನಿನಗೆ ಹಸಿವು-ಬಾಯಾರಿಕೆಗಳೂ ಆಗುವುದಿಲ್ಲ.
12324025a ವಸೋರ್ಧಾರಾನುಪೀತತ್ವಾತ್ತೇಜಸಾಪ್ಯಾಯಿತೇನ ಚ|
12324025c ಸ ದೇವೋಽಸ್ಮದ್ವರಾತ್ಪ್ರೀತೋ ಬ್ರಹ್ಮಲೋಕಂ ಹಿ ನೇಷ್ಯತಿ||
ನಮ್ಮ ವರದಿಂದ ವಸೋರ್ಧಾರವನ್ನು ಕುಡಿದು ತೇಜಸ್ಸಿನಿಂದ ಉಬ್ಬಿದ ನಿನ್ನನ್ನು ಪ್ರೀತನಾದ ದೇವನು ಬ್ರಹ್ಮಲೋಕಕ್ಕೆ ಕೊಂಡೊಯ್ಯುತ್ತಾನೆ.”
12324026a ಏವಂ ದತ್ತ್ವಾ ವರಂ ರಾಜ್ಞೇ ಸರ್ವೇ ತತ್ರ ದಿವೌಕಸಃ|
12324026c ಗತಾಃ ಸ್ವಭವನಂ ದೇವಾ ಋಷಯಶ್ಚ ತಪೋಧನಾಃ||
ರಾಜನಿಗೆ ಈ ರೀತಿಯ ವರವನ್ನಿತ್ತು ಸರ್ವ ದಿವೌಕಸ ದೇವತೆಗಳೂ ತಪೋಧನ ಋಷಿಗಳು ಸ್ವಭವನಗಳಿಗೆ ತೆರಳಿದರು.
12324027a ಚಕ್ರೇ ಚ ಸತತಂ ಪೂಜಾಂ ವಿಷ್ವಕ್ಸೇನಾಯ ಭಾರತ|
12324027c ಜಪ್ಯಂ ಜಗೌ ಚ ಸತತಂ ನಾರಾಯಣಮುಖೋದ್ಗತಮ್||
ಭಾರತ! ಉಪರಿಚರನು ಸತತವೂ ವಿಷ್ವಕ್ಸೇನನ ಪೂಜೆಯನ್ನು ಮಾಡಿದನು. ಮತ್ತು ಸತತವೂ ನಾರಾಯಣಮುಖೋದ್ಗತವಾದ ಜಪವನ್ನು ಜಪಿಸಿದನು.
12324028a ತತ್ರಾಪಿ ಪಂಚಭಿರ್ಯಜ್ಞೈಃ ಪಂಚಕಾಲಾನರಿಂದಮ|
12324028c ಅಯಜದ್ಧರಿಂ ಸುರಪತಿಂ ಭೂಮೇರ್ವಿವರಗೋಽಪಿ ಸನ್||
ಅರಿಂದಮ! ಭೂಮಿಯ ಬಿಲದಲ್ಲಿದ್ದುಕೊಂಡೂ ಅವನು ಪಂಚಯಜ್ಞಗಳಿಂದ ಮತ್ತು ಪಂಚಕಾಲಗಳಿಂದ ಸುರಪತಿ ಹರಿಯನ್ನು ಯಜಿಸಿದನು.
12324029a ತತೋಽಸ್ಯ ತುಷ್ಟೋ ಭಗವಾನ್ಭಕ್ತ್ಯಾ ನಾರಾಯಣೋ ಹರಿಃ|
12324029c ಅನನ್ಯಭಕ್ತಸ್ಯ ಸತಸ್ತತ್ಪರಸ್ಯ ಜಿತಾತ್ಮನಃ||
ಅನಂತರ ಆ ಅನನ್ಯಭಕ್ತನ, ಸತತವೂ ತನ್ನನ್ನೇ ಧ್ಯಾನಿಸುತ್ತಿದ್ದ ಆ ಜಿತಾತ್ಮನ ಭಕ್ತಿಯಿಂದ ಭಗವಾನ್ ಹರಿ ನಾರಾಯಣನು ತುಷ್ಟನಾದನು.
12324030a ವರದೋ ಭಗವಾನ್ವಿಷ್ಣುಃ ಸಮೀಪಸ್ಥಂ ದ್ವಿಜೋತ್ತಮಮ್|
12324030c ಗರುತ್ಮಂತಂ ಮಹಾವೇಗಮಾಬಭಾಷೇ ಸ್ಮಯನ್ನಿವ||
ಆಗ ವರದ ಭಗವಾನ್ ವಿಷ್ಣುವು ಸಮೀಪದಲ್ಲಿದ್ದ ಮಹಾವೇಗಶಾಲೀ ದ್ವಿಜೋತ್ತಮ ಗರುತ್ಮಂತನಿಗೆ ನಸುನಗುತ್ತಾ ಹೇಳಿದನು:
12324031a ದ್ವಿಜೋತ್ತಮ ಮಹಾಭಾಗ ಗಮ್ಯತಾಂ ವಚನಾನ್ಮಮ|
12324031c ಸಮ್ರಾಡ್ರಾಜಾ ವಸುರ್ನಾಮ ಧರ್ಮಾತ್ಮಾ ಮಾಂ ಸಮಾಶ್ರಿತಃ||
“ದ್ವಿಜೋತ್ತಮ! ಮಹಾಭಾಗ! ನನ್ನ ವಚನದಂತೆ ನೀನು ನನ್ನನ್ನೇ ಆಶ್ರಯಿಸಿರುವ ಧರ್ಮಾತ್ಮಾ ವಸುವೆಂಬ ಸಾಮ್ರಾಟ್ ರಾಜನ ಬಳಿ ಹೋಗಬೇಕು.
12324032a ಬ್ರಾಹ್ಮಣಾನಾಂ ಪ್ರಕೋಪೇನ ಪ್ರವಿಷ್ಟೋ ವಸುಧಾತಲಮ್|
12324032c ಮಾನಿತಾಸ್ತೇ ತು ವಿಪ್ರೇಂದ್ರಾಸ್ತ್ವಂ ತು ಗಚ್ಚ ದ್ವಿಜೋತ್ತಮ||
ಬ್ರಾಹ್ಮಣರ ಪ್ರಕೋಪದಿಂದ ಅವನು ವಸುಧಾತಲವನ್ನು ಪ್ರವೇಶಿಸಿದ್ದಾನೆ. ಅವನು ಆ ವಿಪ್ರೇಂದ್ರರನ್ನು ಗೌರವಿಸಿಯಾಯಿತು. ದ್ವಿಜೋತ್ತಮ! ನೀನು ಅವನ ಬಳಿ ಹೋಗು.
12324033a ಭೂಮೇರ್ವಿವರಸಂಗುಪ್ತಂ ಗರುಡೇಹ ಮಮಾಜ್ಞಯಾ|
12324033c ಅಧಶ್ಚರಂ ನೃಪಶ್ರೇಷ್ಠಂ ಖೇಚರಂ ಕುರು ಮಾಚಿರಮ್||
ಗರುಡ! ನನ್ನ ಈ ಆಜ್ಞೆಯಂತೆ ಭೂಮಿಯ ಬಿಲದಲ್ಲಿ ಗುಪ್ತನಾಗಿ ಕೆಳಗೇ ಸಂಚರಿಸುತ್ತಿರುವ ಆ ನೃಪಶ್ರೇಷ್ಠನನ್ನು ಕೂಡಲೇ ಖೇಚರನನ್ನಾಗಿ ಮಾಡು!”
12324034a ಗರುತ್ಮಾನಥ ವಿಕ್ಷಿಪ್ಯ ಪಕ್ಷೌ ಮಾರುತವೇಗವಾನ್|
12324034c ವಿವೇಶ ವಿವರಂ ಭೂಮೇರ್ಯತ್ರಾಸ್ತೇ ವಾಗ್ಯತೋ ವಸುಃ||
ಕೂಡಲೇ ಮಾರುತವೇಗವಾನ್ ಗರುತ್ಮಾನನು ತನ್ನ ರೆಕ್ಕೆಗಳನ್ನು ಹರಡಿ ವಸುವು ಇದ್ದ ಭೂಮಿಯ ಬಿಲವನ್ನು ಪ್ರವೇಶಿಸಿದನು.
12324035a ತತ ಏನಂ ಸಮುತ್ಕ್ಷಿಪ್ಯ ಸಹಸಾ ವಿನತಾಸುತಃ|
12324035c ಉತ್ಪಪಾತ ನಭಸ್ತೂರ್ಣಂ ತತ್ರ ಚೈನಮಮುಂಚತ||
ವಿನತಾಸುತನು ಅಲ್ಲಿದ್ದ ರಾಜನನ್ನು ಮೇಲೆತ್ತಿಕೊಂಡು ಒಡನೆಯೇ ಆಕಾಶದ ಕಡೆ ಹಾರಿ ರಾಜನನ್ನು ಆಕಾಶದಲ್ಲಿಯೇ ಬಿಟ್ಟನು.
12324036a ತಸ್ಮಿನ್ಮುಹೂರ್ತೇ ಸಂಜಜ್ಞೇ ರಾಜೋಪರಿಚರಃ ಪುನಃ|
12324036c ಸಶರೀರೋ ಗತಶ್ಚೈವ ಬ್ರಹ್ಮಲೋಕಂ ನೃಪೋತ್ತಮಃ||
ಅದೇ ಮುಹೂರ್ತದಲ್ಲಿ ರಾಜನು ಪುನಃ ಉಪರಿಚರನೆಂದಾದನು. ಆ ನೃಪೋತ್ತಮನು ಸಶರೀರಿಯಾಗಿಯೇ ಬ್ರಹ್ಮಲೋಕಕ್ಕೆ ಹೋದನು ಕೂಡ.
12324037a ಏವಂ ತೇನಾಪಿ ಕೌಂತೇಯ ವಾಗ್ದೋಷಾದ್ದೇವತಾಜ್ಞಯಾ|
12324037c ಪ್ರಾಪ್ತಾ ಗತಿರಯಜ್ವಾರ್ಹಾ ದ್ವಿಜಶಾಪಾನ್ಮಹಾತ್ಮನಾ||
ಕೌಂತೇಯ! ಈ ರೀತಿ ದೇವತೆಗಳಿಗಾಗಿ ಮಾಡಿದ ವಾಗ್ದೋಷದಿಂದ ದ್ವಿಜರ ಶಾಪಕ್ಕೊಳಗಾಗಿ ಆ ಮಹಾತ್ಮನು ಅಧೋಗತಿಯನ್ನು ಹೊಂದಿದನು.
12324038a ಕೇವಲಂ ಪುರುಷಸ್ತೇನ ಸೇವಿತೋ ಹರಿರೀಶ್ವರಃ|
12324038c ತತಃ ಶೀಘ್ರಂ ಜಹೌ ಶಾಪಂ ಬ್ರಹ್ಮಲೋಕಮವಾಪ ಚ||
ಕೇವಲ ಹರಿ ಈಶ್ವರ ಪುರುಷನನ್ನೇ ಅವನು ಪೂಜಿಸುತ್ತಿದ್ದುದರಿಂದ ಶೀಘ್ರವಾಗಿ ಅವನು ಶಾಪವನ್ನು ಕಳೆದುಕೊಂಡು ಬ್ರಹ್ಮಲೋಕವನ್ನು ಪಡೆದುಕೊಂಡನು.
12324039a ಏತತ್ತೇ ಸರ್ವಮಾಖ್ಯಾತಂ ತೇ ಭೂತಾ ಮಾನವಾ ಯಥಾ|
12324039c ನಾರದೋಽಪಿ ಯಥಾ ಶ್ವೇತಂ ದ್ವೀಪಂ ಸ ಗತವಾನೃಷಿಃ|
12324039e ತತ್ತೇ ಸರ್ವಂ ಪ್ರವಕ್ಷ್ಯಾಮಿ ಶೃಣುಷ್ವೈಕಮನಾ ನೃಪ||
ನೃಪ! ಶ್ವೇತ ದ್ವೀಪದ ಮಾನವರು ಹೇಗೆ ಎನ್ನುವುದೆಲ್ಲವನ್ನೂ ನಿನಗೆ ಹೇಳಿಯಾಯಿತು. ಋಷಿ ನಾರದನೂ ಕೂಡ ಹೇಗೆ ಶ್ವೇತದ್ವೀಪವನ್ನು ಹೇಗೆ ತಲುಪಿದನು ಎನ್ನುವುದರ ಕುರಿತು ಎಲ್ಲವನ್ನೂ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಚತುರ್ವಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ನಾಲ್ಕನೇ ಅಧ್ಯಾಯವು.