ಸೌಪ್ತಿಕಪರ್ವ: ಐಷೀಕ ಪರ್ವ
೧೪
ಕೃಷ್ಣನ ಸೂಚನೆಯಂತೆ ಅರ್ಜುನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು (೧-೧೦). ನಾರದ ಮತ್ತು ವ್ಯಾಸರು ಅಶ್ವತ್ಥಾಮ ಮತ್ತು ಅರ್ಜುನರು ಪ್ರಯೋಗಿಸಿದ ಅಸ್ತ್ರಗಳ ಮಧ್ಯೆ ಕಾಣಿಸಿಕೊಂಡಿದುದು (೧೧-೧೬).
10014001 ವೈಶಂಪಾಯನ ಉವಾಚ|
10014001a ಇಂಗಿತೇನೈವ ದಾಶಾರ್ಹಸ್ತಮಭಿಪ್ರಾಯಮಾದಿತಃ|
10014001c ದ್ರೌಣೇರ್ಬುದ್ಧ್ವಾ ಮಹಾಬಾಹುರರ್ಜುನಂ ಪ್ರತ್ಯಭಾಷತ||
ವೈಶಂಪಾಯನನು ಹೇಳಿದನು: “ಇಂಗಿತದಿಂದಲೇ ದ್ರೌಣಿಯ ಅಭಿಪ್ರಾಯವನ್ನು ತಿಳಿದುಕೊಂಡ ಮಹಾಬಾಹು ದಾಶಾರ್ಹನು ಅರ್ಜುನನಿಗೆ ಹೇಳಿದನು:
10014002a ಅರ್ಜುನಾರ್ಜುನ ಯದ್ದಿವ್ಯಮಸ್ತ್ರಂ ತೇ ಹೃದಿ ವರ್ತತೇ|
10014002c ದ್ರೋಣೋಪದಿಷ್ಟಂ ತಸ್ಯಾಯಂ ಕಾಲಃ ಸಂಪ್ರತಿ ಪಾಂಡವ||
“ಅರ್ಜುನ! ಅರ್ಜುನ! ಪಾಂಡವ! ದ್ರೋಣನಿಂದ ಉಪದೇಶಿಸಲ್ಪಟ್ಟ ನಿನ್ನ ಹೃದಯದಲ್ಲಿ ನೆಲೆಸಿರುವ ದಿವ್ಯಾಸ್ತ್ರದ ಸಮಯವು ಬಂದೊದಗಿದೆ!
10014003a ಭ್ರಾತೄಣಾಮಾತ್ಮನಶ್ಚೈವ ಪರಿತ್ರಾಣಾಯ ಭಾರತ|
10014003c ವಿಸೃಜೈತತ್ತ್ವಮಪ್ಯಜಾವಸ್ತ್ರಮಸ್ತ್ರನಿವಾರಣಂ||
ಭಾರತ! ಸಹೋದರರನ್ನು ಮತ್ತು ನಿನ್ನನ್ನು ರಕ್ಷಿಸಿಕೊಳ್ಳಲು ಮತ್ತು ಈ ಅಸ್ತ್ರವನ್ನು ನಿವಾರಿಸಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸು!”
10014004a ಕೇಶವೇನೈವಮುಕ್ತಸ್ತು ಪಾಂಡವಃ ಪರವೀರಹಾ|
10014004c ಅವಾತರದ್ರಥಾತ್ತೂರ್ಣಂ ಪ್ರಗೃಹ್ಯ ಸಶರಂ ಧನುಃ||
ಕೇಶವನು ಹೀಗೆ ಹೇಳಲು ತಕ್ಷಣವೇ ಪರವೀರಹ ಪಾಂಡವನು ಶರದೊಂದಿಗೆ ಧನುಸ್ಸನ್ನು ಹಿಡಿದು ರಥದಿಂದಿಳಿದನು.
10014005a ಪೂರ್ವಮಾಚಾರ್ಯಪುತ್ರಾಯ ತತೋಽನಂತರಮಾತ್ಮನೇ|
10014005c ಭ್ರಾತೃಭ್ಯಶ್ಚೈವ ಸರ್ವೇಭ್ಯಃ ಸ್ವಸ್ತೀತ್ಯುಕ್ತ್ವಾ ಪರಂತಪಃ||
10014006a ದೇವತಾಭ್ಯೋ ನಮಸ್ಕೃತ್ಯ ಗುರುಭ್ಯಶ್ಚೈವ ಸರ್ವಶಃ|
10014006c ಉತ್ಸಸರ್ಜ ಶಿವಂ ಧ್ಯಾಯನ್ನಸ್ತ್ರಮಸ್ತ್ರೇಣ ಶಾಮ್ಯತಾಂ||
ಮೊದಲು ಆಚಾರ್ಯಪುತ್ರನಿಗೆ ತದನಂತರ ತನಗೆ, ಸಹೋದರರಿಬ್ಬರಿಗೆ ಮತ್ತು ಸರ್ವರಿಗೂ ಸ್ವಸ್ತಿ ಎಂದು ಹೇಳಿ ಪರಂತಪನು ದೇವತೆಗಳಿಗೂ ಗುರುಗಳೆಲ್ಲರಿಗೂ ನಮಸ್ಕರಿಸಿ ಶಿವನನ್ನು ಧ್ಯಾನಿಸಿ ಅಸ್ತ್ರವನ್ನು ಶಾಮ್ಯಗೊಳಿಸುವ ಅಸ್ತ್ರವನ್ನು ಪ್ರಯೋಗಿಸಿದನು.
10014007a ತತಸ್ತದಸ್ತ್ರಂ ಸಹಸಾ ಸೃಷ್ಟಂ ಗಾಂಡೀವಧನ್ವನಾ|
10014007c ಪ್ರಜಜ್ವಾಲ ಮಹಾರ್ಚಿಷ್ಮದ್ಯುಗಾಂತಾನಲಸಂನಿಭಂ||
ಗಾಂಡೀವಧನ್ವಿಯು ಸೃಷ್ಟಿಸಿದ ಆ ಅಸ್ತ್ರವು ಕೂಡಲೇ ಯುಗಾಂತದ ಅಗ್ನಿಯೋಪಾದಿಯಲ್ಲಿ ಮಹಾಜ್ವಾಲೆಗಳಿಂದ ಪ್ರಜ್ವಲಿಸಿತು.
10014008a ತಥೈವ ದ್ರೋಣಪುತ್ರಸ್ಯ ತದಸ್ತ್ರಂ ತಿಗ್ಮತೇಜಸಃ|
10014008c ಪ್ರಜಜ್ವಾಲ ಮಹಾಜ್ವಾಲಂ ತೇಜೋಮಂಡಲಸಂವೃತಂ||
ಹಾಗೆಯೇ ತಿಗ್ಮತೇಜಸ್ಸಿದ್ದ ದ್ರೋಣಪುತ್ರನ ಅಸ್ತ್ರವೂ ತೇಜೋಮಂಡಲದೊಡನೆ ಮಹಾಜ್ವಾಲೆಯೊಂದಿಗೆ ಪ್ರಜ್ವಲಿಸಿತು.
10014009a ನಿರ್ಘಾತಾ ಬಹವಶ್ಚಾಸನ್ಪೇತುರುಲ್ಕಾಃ ಸಹಸ್ರಶಃ|
10014009c ಮಹದ್ಭಯಂ ಚ ಭೂತಾನಾಂ ಸರ್ವೇಷಾಂ ಸಮಜಾಯತ||
ಅನೇಕ ನಿರ್ಘಾತಗಳಾದವು. ಸಹಸ್ರಾರು ಉಲ್ಕೆಗಳು ಬಿದ್ದವು. ಸರ್ವಭೂತಗಳಲ್ಲಿ ಮಹಾಭಯವು ಹುಟ್ಟಿಕೊಂಡಿತು.
10014010a ಸಶಬ್ದಮಭವದ್ವ್ಯೋಮ ಜ್ವಾಲಾಮಾಲಾಕುಲಂ ಭೃಶಂ|
10014010c ಚಚಾಲ ಚ ಮಹೀ ಕೃತ್ಸ್ನಾ ಸಪರ್ವತವನದ್ರುಮಾ||
ಭಯಂಕರ ಶಬ್ಧಗಳಿಂದ ತುಂಬಿಹೋಗಿದ್ದ ಆಕಾಶವು ಜ್ವಾಲೆಗಳ ಪಂಕ್ತಿಗಳಿಂದ ಆವೃತವಾಯಿತು. ಪರ್ವತ-ವನ-ವೃಕ್ಷಗಳೊಂದಿಗೆ ಇಡೀ ಭೂಮಿಯು ನಡುಗಿತು.
10014011a ತೇ ಅಸ್ತ್ರೇ ತೇಜಸಾ ಲೋಕಾಂಸ್ತಾಪಯಂತೀ ವ್ಯವಸ್ಥಿತೇ|
10014011c ಮಹರ್ಷೀ ಸಹಿತೌ ತತ್ರ ದರ್ಶಯಾಮಾಸತುಸ್ತದಾ||
ಆ ಅಸ್ತ್ರಗಳ ತೇಜಸ್ಸಿನಿಂದ ಲೋಕಗಳು ಸುಡುತ್ತಿರಲು ಇಬ್ಬರು ಮಹರ್ಷಿಗಳು ಒಟ್ಟಿಗೇ ಅಲ್ಲಿ ಕಾಣಿಸಿಕೊಂಡರು.
10014012a ನಾರದಃ ಸ ಚ ಧರ್ಮಾತ್ಮಾ ಭರತಾನಾಂ ಪಿತಾಮಹಃ|
10014012c ಉಭೌ ಶಮಯಿತುಂ ವೀರೌ ಭಾರದ್ವಾಜಧನಂಜಯೌ||
ನಾರದ ಮತ್ತು ಭರತರ ಪಿತಾಮಹ ಧರ್ಮಾತ್ಮಾ ವ್ಯಾಸ ಈ ಇಬ್ಬರೂ ಭಾರದ್ವಾಜ ಮತ್ತು ಧನಂಜಯರನ್ನು ಶಾಂತಗೊಳಿಸಲು ಕಾಣಿಸಿಕೊಂಡರು.
10014013a ತೌ ಮುನೀ ಸರ್ವಧರ್ಮಜ್ಞೌ ಸರ್ವಭೂತಹಿತೈಷಿಣೌ|
10014013c ದೀಪ್ತಯೋರಸ್ತ್ರಯೋರ್ಮಧ್ಯೇ ಸ್ಥಿತೌ ಪರಮತೇಜಸೌ||
ಸರ್ವಭೂತಹಿತೈಷಿಣಿಯರಾದ ಸರ್ವಧರ್ಮಜ್ಞರಾದ ಅವರಿಬ್ಬರು ಮುನಿಗಳೂ ಪರಮತೇಜಸ್ಸಿನಿಂದ ಉರಿಯುತ್ತಿದ್ದ ಆ ಎರಡು ಅಸ್ತ್ರಗಳ ಮಧ್ಯೆ ನಿಂತುಕೊಂಡರು.
10014014a ತದಂತರಮನಾಧೃಷ್ಯಾವುಪಗಮ್ಯ ಯಶಸ್ವಿನೌ|
10014014c ಆಸ್ತಾಮೃಷಿವರೌ ತತ್ರ ಜ್ವಲಿತಾವಿವ ಪಾವಕೌ||
ಆ ಇಬ್ಬರು ಯಶಸ್ವೀ ಋಷಿವರರೂ ಆ ಎರಡು ಮಹಾಸ್ತ್ರಗಳ ನಡುವೆ ಪ್ರಜ್ವಲಿಸುತ್ತಿರುವ ಅಗ್ನಿಗಳಂತೆ ಕಂಡರು.
10014015a ಪ್ರಾಣಭೃದ್ಭಿರನಾಧೃಷ್ಯೌ ದೇವದಾನವಸಂಮತೌ|
10014015c ಅಸ್ತ್ರತೇಜಃ ಶಮಯಿತುಂ ಲೋಕಾನಾಂ ಹಿತಕಾಮ್ಯಯಾ||
ಯಾವುದೇ ಪ್ರಾಣಿಗಳಿಂದಲು ಕೆಣಕಲು ಅಸಾಧ್ಯರಾಗಿದ್ದ, ದೇವದಾನವರಿಂದ ಗೌರವಿಸಲ್ಪಟ್ಟಿದ್ದ ಅವರಿಬ್ಬರೂ ಲೋಕಗಳ ಹಿತವನ್ನು ಬಯಸಿ ಆ ಅಸ್ತ್ರಗಳ ತೇಜಸ್ಸನ್ನು ತಣಿಸಲು ಬಂದಿದ್ದರು.
10014016 ಋಷೀ ಊಚತುಃ|
10014016a ನಾನಾಶಸ್ತ್ರವಿದಃ ಪೂರ್ವೇ ಯೇಽಪ್ಯತೀತಾ ಮಹಾರಥಾಃ|
10014016c ನೈತದಸ್ತ್ರಂ ಮನುಷ್ಯೇಷು ತೈಃ ಪ್ರಯುಕ್ತಂ ಕಥಂ ಚನ||
ಋಷಿಗಳು ಹೇಳಿದರು: “ಈ ಹಿಂದೆ ಆಗಿಹೋಗಿದ್ದ ನಾನಾಶಸ್ತ್ರಗಳನ್ನು ತಿಳಿದುಕೊಂಡಿದ್ದ ಮಹಾರಥರು ಈ ಅಸ್ತ್ರವನ್ನು ಮನುಷ್ಯರ ಮೇಲೆ ಎಂದೂ ಪ್ರಯೋಗಿಸಿರಲಿಲ್ಲ!””
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಅರ್ಜುನಾಸ್ತ್ರತ್ಯಾಗೇ ಚತುರ್ದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಅರ್ಜುನಾಸ್ತ್ರತ್ಯಾಗ ಎನ್ನುವ ಹದಿನಾಲ್ಕನೇ ಅಧ್ಯಾಯವು.