Shanti Parva: Chapter 31

ಶಾಂತಿ ಪರ್ವ: ರಾಜಧರ್ಮ ಪರ್ವ

೩೧

12031001 ವೈಶಂಪಾಯನ ಉವಾಚ

12031001a ತತೋ ರಾಜಾ ಪಾಂಡುಸುತೋ ನಾರದಂ ಪ್ರತ್ಯಭಾಷತ|

12031001c ಭಗವನ್ಶ್ರೋತುಮಿಚ್ಚಾಮಿ ಸುವರ್ಣಷ್ಠೀವಿಸಂಭವಮ್||

ವೈಶಂಪಾಯನನು ಹೇಳಿದನು: “ಆಗ ರಾಜಾ ಪಾಂಡುಸುತನು ನಾರದನಿಗೆ “ಭಗವನ್! ಸ್ವರ್ಣಷ್ಠೀವಿಯ ಹುಟ್ಟಿನ ಕುರಿತು ಕೇಳಲು ಬಯಸುತ್ತೇನೆ!” ಎಂದನು.

12031002a ಏವಮುಕ್ತಃ ಸ ಚ ಮುನಿರ್ಧರ್ಮರಾಜೇನ ನಾರದಃ|

12031002c ಆಚಚಕ್ಷೇ ಯಥಾ ವೃತ್ತಂ ಸುವರ್ಣಷ್ಠೀವಿನಂ ಪ್ರತಿ||

ಧರ್ಮರಾಜನು ಹೀಗೆ ಹೇಳಲು ಮುನಿ ನಾರದನು ಸ್ವರ್ಣಷ್ಠೀವಿಯ ಕುರಿತು ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು.

12031003a ಏವಮೇತನ್ಮಹಾರಾಜ ಯಥಾಯಂ ಕೇಶವೋಽಬ್ರವೀತ್|

12031003c ಕಾರ್ಯಸ್ಯಾಸ್ಯ ತು ಯಚ್ಚೇಷಂ ತತ್ತೇ ವಕ್ಷ್ಯಾಮಿ ಪೃಚ್ಚತಃ||

“ಮಹಾರಾಜ! ಕೇಶವನು ಹೇಳಿದಂತೆಯೇ ನಡೆಯಿತು. ಇದರಲ್ಲಿ ಉಳಿದಿರುವ ವಿಷಯಗಳನ್ನು ನೀನು ಕೇಳಿದೆಯೆಂದು ನಾನು ಹೇಳುತ್ತೇನೆ.

12031004a ಅಹಂ ಚ ಪರ್ವತಶ್ಚೈವ ಸ್ವಸ್ರೀಯೋ ಮೇ ಮಹಾಮುನಿಃ|

12031004c ವಸ್ತುಕಾಮಾವಭಿಗತೌ ಸೃಂಜಯಂ ಜಯತಾಂ ವರಮ್||

ನಾನು ಮತ್ತು ನನ್ನ ಸೋದರಿಯ ಮಗ ಮಹಾಮುನಿ ಪರ್ವತನೂ ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯನಲ್ಲಿ ಸ್ವಲ್ಪಕಾಲ ಉಳಿಯಲು ಹೋಗಿದ್ದೆವು.

12031005a ತತ್ರ ಸಂಪೂಜಿತೌ ತೇನ ವಿಧಿದೃಷ್ಟೇನ ಕರ್ಮಣಾ|

12031005c ಸರ್ವಕಾಮೈಃ ಸುವಿಹಿತೌ ನಿವಸಾವೋಽಸ್ಯ ವೇಶ್ಮನಿ||

ಅಲ್ಲಿ ಅವನಿಂದ ವಿಧಿಪೂರ್ವಕ ಕರ್ಮಗಳಿಂದ ಸಂಪೂಜಿತರಾಗಿ, ಸರ್ವಕಾಮನ ವಸ್ತುಗಳಿಂದ ಸುವಿಹಿತರಾಗಿ ಅವನ ಮನೆಯಲ್ಲಿ ಉಳಿದುಕೊಂಡಿದ್ದೆವು.

12031006a ವ್ಯತಿಕ್ರಾಂತಾಸು ವರ್ಷಾಸು ಸಮಯೇ ಗಮನಸ್ಯ ಚ|

12031006c ಪರ್ವತೋ ಮಾಮುವಾಚೇದಂ ಕಾಲೇ ವಚನಮರ್ಥವತ್||

ಅನೇಕ ವರ್ಷಗಳು ಕಳೆದು ನಾವು ಹೊರಡುವ ಸಮಯ ಬಂದಾಗ ಪರ್ವತನು ನನ್ನೊಡನೆ ಕಾಲಕ್ಕೆ ಉಚಿತವಾದ ಈ ಮಾತನ್ನು ಹೇಳಿದನು:

12031007a ಆವಾಮಸ್ಯ ನರೇಂದ್ರಸ್ಯ ಗೃಹೇ ಪರಮಪೂಜಿತೌ|

12031007c ಉಷಿತೌ ಸಮಯೇ ಬ್ರಹ್ಮಂಶ್ಚಿಂತ್ಯತಾಮತ್ರ ಸಾಂಪ್ರತಮ್||

“ಬ್ರಹ್ಮನ್! ನಾವಿಬ್ಬರೂ ಪರಮಪೂಜಿತರಾಗಿ ಈ ನರೇಂದ್ರನ ಮನೆಯಲ್ಲಿ ವಾಸಮಾಡಿಕೊಂಡಿದ್ದೇವೆ. ಈಗ ಹೊರಡುವ ಸಮಯದಲ್ಲಿ ಅವನಿಗೆ ಉಪಕಾರವನ್ನೆಸಗುವ ಕುರಿತು ಚಿಂತಿಸಬೇಕು.”

12031008a ತತೋಽಹಮಬ್ರುವಂ ರಾಜನ್ಪರ್ವತಂ ಶುಭದರ್ಶನಮ್|

12031008c ಸರ್ವಮೇತತ್ತ್ವಯಿ ವಿಭೋ ಭಾಗಿನೇಯೋಪಪದ್ಯತೇ||

12031009a ವರೇಣ ಚಂದ್ಯತಾಂ ರಾಜಾ ಲಭತಾಂ ಯದ್ಯದಿಚ್ಚತಿ|

12031009c ಆವಯೋಸ್ತಪಸಾ ಸಿದ್ಧಿಂ ಪ್ರಾಪ್ನೋತು ಯದಿ ಮನ್ಯಸೇ||

ರಾಜನ್! ಆಗ ನಾನು ಶುಭದರ್ಶನ ಪರ್ವತನಿಗೆ ಇಂತೆಂದೆನು: “ಅಳಿಯನೇ! ವಿಭೋ! ನೀನೇ ಎಲ್ಲವನ್ನೂ ನಿರ್ಧರಿಸು. ರಾಜನು ಬಯಸಿದ ವರವನ್ನು ನೀಡಿ ಸಂತುಷ್ಟಿಗೊಳಿಸೋಣ! ನಿನಗೆ ಒಪ್ಪಿಗೆಯಿದ್ದರೆ ನಮ್ಮ ತಪಸ್ಸಿನ ಸಿದ್ಧಿಯಿಂದ ಅವನಿಗೆ ಇಷ್ಟವಾದುದನ್ನು ಮಾಡಿಕೊಡೋಣ!”

12031010a ತತ ಆಹೂಯ ರಾಜಾನಂ ಸೃಂಜಯಂ ಶುಭದರ್ಶನಮ್|

12031010c ಪರ್ವತೋಽನುಮತಂ ವಾಕ್ಯಮುವಾಚ ಮುನಿಪುಂಗವಃ||

ಹೀಗೆ ನನ್ನ ಅನುಮತಿಯನ್ನು ಪಡೆದ ಮುನಿಪುಂಗವ ಪರ್ವತನು ಶುಭದರ್ಶನ ಸೃಂಜಯನನ್ನು ಕರೆಯಿಸಿ ಈ ಮಾತನ್ನಾಡಿದನು:

12031011a ಪ್ರೀತೌ ಸ್ವೋ ನೃಪ ಸತ್ಕಾರೈಸ್ತವ ಹ್ಯಾರ್ಜವಸಂಭೃತೈಃ|

12031011c ಆವಾಭ್ಯಾಮಭ್ಯನುಜ್ಞಾತೋ ವರಂ ನೃವರ ಚಿಂತಯ||

“ನೃಪ! ಅತ್ಯಂತ ಸರಳತೆಯಿಂದಲೂ ಪ್ರೀತಿ-ವಿಶ್ವಾಸಗಳಿಂದಲೂ ನೀನು ಮಾಡಿದ ಸತ್ಕಾರದಿಂದ ನಾವಿಬ್ಬರೂ ಸಂತೋಷಗೊಂಡಿದ್ದೇವೆ. ನಿನಗೆ ವರವನ್ನು ನೀಡಲು ನಮ್ಮಿಬ್ಬರಲ್ಲೂ ಅನುಮತಿಯಿದೆ. ಯಾವ ವರಬೇಕೆಂದು ಯೋಚಿಸಿ ಹೇಳು!

12031012a ದೇವಾನಾಮವಿಹಿಂಸಾಯಾಂ ಯದ್ಭವೇನ್ಮಾನುಷಕ್ಷಮಮ್|

12031012c ತದ್ಗೃಹಾಣ ಮಹಾರಾಜ ಪೂಜಾರ್ಹೋ ನೌ ಮತೋ ಭವಾನ್||

ಮಹಾರಾಜ! ದೇವತೆಗಳಿಗೆ ಹಿಂಸೆಯಾಗದಂಥಹ ಮತ್ತು ಮನುಷ್ಯರು ನಾಶವಾಗದಂಥಹ ವರವನ್ನು ಪಡೆ! ನೀನು ಪೂಜಾರ್ಹನೆಂದು ನಮ್ಮಿಬ್ಬರ ಮತ!”

12031013 ಸೃಂಜಯ ಉವಾಚ

12031013a ಪ್ರೀತೌ ಭವಂತೌ ಯದಿ ಮೇ ಕೃತಮೇತಾವತಾ ಮಮ|

12031013c ಏಷ ಏವ ಪರೋ ಲಾಭೋ ನಿರ್ವೃತ್ತೋ ಮೇ ಮಹಾಫಲಃ||

ಸೃಂಜಯನು ಹೇಳಿದನು: “ನೀವು ಸುಪ್ರೀತರಾಗಿದ್ದೀರಿ ಎನ್ನುವುದರಿಂದಲೇ ನಾನು ಕೃತಕೃತ್ಯನಾಗಿದ್ದೇನೆ. ಇದೇ ನನಗೆ ದೊರಕಿರುವ ಪರಮ ಮಹಾ ಫಲವಾಗಿದೆ!””

12031014 ನಾರದ ಉವಾಚ

12031014a ತಮೇವಂವಾದಿನಂ ಭೂಯಃ ಪರ್ವತಃ ಪ್ರತ್ಯಭಾಷತ|

12031014c ವೃಣೀಷ್ವ ರಾಜನ್ಸಂಕಲ್ಪೋ ಯಸ್ತೇ ಹೃದಿ ಚಿರಂ ಸ್ಥಿತಃ||

ನಾರದನು ಹೇಳಿದನು: “ಇದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ ಅವನಿಗೆ ಪರ್ವತನು ಪುನಃ ಹೇಳಿದನು: “ರಾಜನ್! ನಿನ್ನ ಹೃದಯದಲ್ಲಿ ಬಹುಕಾಲದಿಂದ ಸಂಕಲ್ಪವೇನಿದೆಯೋ ಅದನ್ನೇ ಕೇಳಿಕೋ!”

12031015 ಸೃಂಜಯ ಉವಾಚ

12031015a ಅಭೀಪ್ಸಾಮಿ ಸುತಂ ವೀರಂ ವೀರ್ಯವಂತಂ ದೃಢವ್ರತಮ್|

12031015c ಆಯುಷ್ಮಂತಂ ಮಹಾಭಾಗಂ ದೇವರಾಜಸಮದ್ಯುತಿಮ್||

ಸೃಂಜಯನು ಹೇಳಿದನು: “ವೀರನೂ, ವೀರ್ಯವಂತನೂ, ದೃಢವ್ರತನೂ, ಆಯುಷ್ಮಂತನೂ, ದೇವರಾಜನ ಸಮದ್ಯುತಿಯೂ ಆದ ಮಹಾಭಾಗ ಪುತ್ರನನ್ನು ಬಯಸುತ್ತೇನೆ!”

12031016 ಪರ್ವತ ಉವಾಚ

12031016a ಭವಿಷ್ಯತ್ಯೇಷ ತೇ ಕಾಮೋ ನ ತ್ವಾಯುಷ್ಮಾನ್ಭವಿಷ್ಯತಿ|

12031016c ದೇವರಾಜಾಭಿಭೂತ್ಯರ್ಥಂ ಸಂಕಲ್ಪೋ ಹ್ಯೇಷ ತೇ ಹೃದಿ||

ಪರ್ವತನು ಹೇಳಿದನು: “ನಿನ್ನ ಈ ಕಾಮನೆಯು ಈಡೇರುತ್ತದೆ. ಆದರೆ ಅವನು ಆಯುಷ್ಮಾನನಾಗುವುದಿಲ್ಲ. ಏಕೆಂದರೆ ನಿನ್ನ ಹೃದಯದಲ್ಲಿ ದೇವರಾಜನನ್ನು ಪರಾಭವಗೊಳಿಸುವ ಸಂಕಲ್ಪವಿದೆ!

12031017a ಸುವರ್ಣಷ್ಠೀವನಾಚ್ಚೈವ ಸ್ವರ್ಣಷ್ಠೀವೀ ಭವಿಷ್ಯತಿ|

12031017c ರಕ್ಷ್ಯಶ್ಚ ದೇವರಾಜಾತ್ಸ ದೇವರಾಜಸಮದ್ಯುತಿಃ||

ಸುವರ್ಣಷ್ಠೀವನಾಗಿರುವುದರಿಂದ ಅವನು ಸ್ವರ್ಣಷ್ಠೀವಿ ಎಂದೆನಿಸಿಕೊಳ್ಳುತ್ತಾನೆ. ದೇವರಾಜ ಸಮದ್ಯುತಿಯಾದ ಅವನನ್ನು ದೇವರಾಜನಿಂದ ರಕ್ಷಿಸಿಕೊಳ್ಳಬೇಕು!””

12031018 ನಾರದ ಉವಾಚ

12031018a ತಚ್ಚ್ರುತ್ವಾ ಸೃಂಜಯೋ ವಾಕ್ಯಂ ಪರ್ವತಸ್ಯ ಮಹಾತ್ಮನಃ|

12031018c ಪ್ರಸಾದಯಾಮಾಸ ತದಾ ನೈತದೇವಂ ಭವೇದಿತಿ||

ನಾರದನು ಹೇಳಿದನು: “ಮಹಾತ್ಮ ಪರ್ವತನ ಆ ಮಾತನ್ನು ಕೇಳಿದ ಸೃಂಜಯನು “ಹೀಗಾಗಬಾರದು!” ಎಂದು ಪ್ರಸನ್ನಗೊಳಿಸಲು ಪ್ರಾರ್ಥಿಸಿದನು.

12031019a ಆಯುಷ್ಮಾನ್ಮೇ ಭವೇತ್ಪುತ್ರೋ ಭವತಸ್ತಪಸಾ ಮುನೇ|

12031019c ನ ಚ ತಂ ಪರ್ವತಃ ಕಿಂ ಚಿದುವಾಚೇಂದ್ರವ್ಯಪೇಕ್ಷಯಾ||

“ಮುನೇ! ನಿಮ್ಮ ತಪಸ್ಸಿನಿಂದ ನನ್ನ ಮಗನು ಆಯುಷ್ಮಂತನಾಗಬೇಕು!” ಆದರೂ ಇಂದ್ರನ ಮೇಲಿನ ಗೌರವದಿಂದ ಪರ್ವತನು ಏನನ್ನೂ ಹೇಳಲಿಲ್ಲ.

12031020a ತಮಹಂ ನೃಪತಿಂ ದೀನಮಬ್ರುವಂ ಪುನರೇವ ತು|

12031020c ಸ್ಮರ್ತವ್ಯೋಽಹಂ ಮಹಾರಾಜ ದರ್ಶಯಿಷ್ಯಾಮಿ ತೇ ಸ್ಮೃತಃ||

ದೀನನಾಗಿದ್ದ ಆ ನೃಪತಿಗೆ ನಾನು ಪುನಃ ಹೇಳಿದೆನು: “ಮಹಾರಾಜ! ನನ್ನನ್ನು ಸ್ಮರಿಸಿಕೋ! ಸ್ಮರಿಸಿದಾಗಲೆಲ್ಲಾ ನಾನು ನಿನಗೆ ಕಾಣಿಸಿಕೊಳ್ಳುತ್ತೇನೆ!

12031021a ಅಹಂ ತೇ ದಯಿತಂ ಪುತ್ರಂ ಪ್ರೇತರಾಜವಶಂ ಗತಮ್|

12031021c ಪುನರ್ದಾಸ್ಯಾಮಿ ತದ್ರೂಪಂ ಮಾ ಶುಚಃ ಪೃಥಿವೀಪತೇ||

ಪೃಥಿವೀಪತೇ! ಪ್ರೇತರಾಜನ ವಶನಾಗುವ ನಿನ್ನ ಪ್ರಿಯಪುತ್ರನನ್ನು ಅದೇ ರೂಪದಲ್ಲಿ ಪುನಃ ನಿನಗೆ ದೊರಕಿಸಿಕೊಡುತ್ತೇನೆ. ಶೋಕಿಸದಿರು!”

12031022a ಏವಮುಕ್ತ್ವಾ ತು ನೃಪತಿಂ ಪ್ರಯಾತೌ ಸ್ವೋ ಯಥೇಪ್ಸಿತಮ್|

12031022c ಸೃಂಜಯಶ್ಚ ಯಥಾಕಾಮಂ ಪ್ರವಿವೇಶ ಸ್ವಮಂದಿರಮ್||

ನೃಪತಿಗೆ ಹೀಗೆ ಹೇಳಿ ನಾವಿಬ್ಬರೂ ಬೇಕಾದಲ್ಲಿಗೆ ಹೊರಟುಹೋದೆವು. ಸೃಂಜಯನೂ ಕೂಡ ಇಚ್ಛಾನುಸಾರವಾಗಿ ತನ್ನ ಅರಮನೆಯನ್ನು ಪ್ರವೇಶಿಸಿದನು.

12031023a ಸೃಂಜಯಸ್ಯಾಥ ರಾಜರ್ಷೇಃ ಕಸ್ಮಿಂಶ್ಚಿತ್ಕಾಲಪರ್ಯಯೇ|

12031023c ಜಜ್ಞೇ ಪುತ್ರೋ ಮಹಾವೀರ್ಯಸ್ತೇಜಸಾ ಪ್ರಜ್ವಲನ್ನಿವ||

ಕೆಲವು ಸಮಯವು ಕಳೆಯಲು ಆ ರಾಜರ್ಷಿ ಸೃಂಜಯನಿಗೆ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವಂಥಹ ಮಹಾವೀರ್ಯ ಪುತ್ರನು ಜನಿಸಿದನು.

12031024a ವವೃಧೇ ಸ ಯಥಾಕಾಲಂ ಸರಸೀವ ಮಹೋತ್ಪಲಮ್|

12031024c ಬಭೂವ ಕಾಂಚನಷ್ಠೀವೀ ಯಥಾರ್ಥಂ ನಾಮ ತಸ್ಯ ತತ್||

ಸರೋವರದಲ್ಲಿ ನೈದಿಲೆಯು ಹೇಗೋ ಹಾಗೆ ಸಮಯಹೋದಂತೆ ಅವನು ಬೆಳೆಯತೊಡಗಿದನು. ಅವನ ಹೆಸರಿನ ಯಥಾರ್ಥದಂತೆ ಅವನು ಸುವರ್ಣವನ್ನೇ ಉಗುಳುತ್ತಿದ್ದನು.

12031025a ತದದ್ಭುತತಮಂ ಲೋಕೇ ಪಪ್ರಥೇ ಕುರುಸತ್ತಮ|

12031025c ಬುಬುಧೇ ತಚ್ಚ ದೇವೇಂದ್ರೋ ವರದಾನಂ ಮಹಾತ್ಮನೋಃ||

ಕುರುಸತ್ತಮ! ಆ ಅದ್ಭುತವು ಲೋಕದಲ್ಲಿಯೇ ಪ್ರಚಾರವಾಯಿತು. ಮಹಾತ್ಮರ ವರದಾನದಿಂದ ಅವನು ಹುಟ್ಟಿರುವನೆಂದು ದೇವೇಂದ್ರನೂ ತಿಳಿದುಕೊಂಡನು.

12031026a ತತಸ್ತ್ವಭಿಭವಾದ್ಭೀತೋ ಬೃಹಸ್ಪತಿಮತೇ ಸ್ಥಿತಃ|

12031026c ಕುಮಾರಸ್ಯಾಂತರಪ್ರೇಕ್ಷೀ ಬಭೂವ ಬಲವೃತ್ರಹಾ||

ಬೃಹಸ್ಪತಿಯ ಸಲಹೆಯಂತೆ ನಡೆದುಕೊಳ್ಳುತ್ತಿದ್ದ ಆ ಬಲವೃತ್ರಹನು ಕುಮಾರ ಸ್ವರ್ಣಷ್ಠೀವಿಯ ಭಯದಿಂದ ಅವನನ್ನು ವಧಿಸಲು ಅವಕಾಶವನ್ನು ಹುಡುಕುತ್ತಿದ್ದನು.

12031027a ಚೋದಯಾಮಾಸ ವಜ್ರಂ ಸ ದಿವ್ಯಾಸ್ತ್ರಂ ಮೂರ್ತಿಸಂಸ್ಥಿತಮ್|

12031027c ವ್ಯಾಘ್ರೋ ಭೂತ್ವಾ ಜಹೀಮಂ ತ್ವಂ ರಾಜಪುತ್ರಮಿತಿ ಪ್ರಭೋ||

ಪ್ರಭು ಇಂದ್ರನು ಮೂರ್ತಿಮತ್ತಾಗಿ ನಿಂತಿದ್ದ ದಿವ್ಯಾಸ್ತ್ರ ವಜ್ರಕ್ಕೆ “ವ್ಯಾಘ್ರನಾಗಿ ಆ ರಾಜಪುತ್ರನನ್ನು ಸಂಹರಿಸು!” ಎಂದು ಪ್ರಚೋದಿಸಿದನು.

12031028a ವಿವೃದ್ಧಃ ಕಿಲ ವೀರ್ಯೇಣ ಮಾಮೇಷೋಽಭಿಭವಿಷ್ಯತಿ|

12031028c ಸೃಂಜಯಸ್ಯ ಸುತೋ ವಜ್ರ ಯಥೈನಂ ಪರ್ವತೋ ದದೌ||

“ವಜ್ರ! ವೀರ್ಯದಿಂದ ಪ್ರವೃದ್ಧನಾಗುತ್ತಿರುವ ಸೃಂಜಯನ ಈ ಮಗನು ನನ್ನನ್ನೇ ಪರಾಜಯಗೊಳಿಸುತ್ತಾನೆ. ಹಾಗೆಯೇ ಪರ್ವತನು ವರವನ್ನಿತ್ತಿದ್ದನು!”

12031029a ಏವಮುಕ್ತಸ್ತು ಶಕ್ರೇಣ ವಜ್ರಃ ಪರಪುರಂಜಯಃ|

12031029c ಕುಮಾರಸ್ಯಾಂತರಪ್ರೇಕ್ಷೀ ನಿತ್ಯಮೇವಾನ್ವಪದ್ಯತ||

ಶಕ್ರನು ಹೀಗೆ ಹೇಳಲು ಪರಪುರಂಜಯ ವಜ್ರವು ಕುಮಾರನನ್ನು ಸಂಹರಿಸುವ ಸಲುವಾಗಿ ಸಮಯವನ್ನೇ ಕಾಯುತ್ತಾ ನಿತ್ಯವೂ ಅವನನ್ನು ಅನುಸರಿಸಿಯೇ ಇರುತ್ತಿತ್ತು.

12031030a ಸೃಂಜಯೋಽಪಿ ಸುತಂ ಪ್ರಾಪ್ಯ ದೇವರಾಜಸಮದ್ಯುತಿಮ್|

12031030c ಹೃಷ್ಟಃ ಸಾಂತಃಪುರೋ ರಾಜಾ ವನನಿತ್ಯೋಽಭವತ್ತದಾ||

ಸೃಂಜಯನೂ ಕೂಡ ಕಾಂತಿಯಲ್ಲಿ ದೇವರಾಜನ ಸಮನಾಗಿದ್ದ ಪುತ್ರನನ್ನು ಪಡೆದು ಪರಮ ಹೃಷ್ಟನಾಗಿ ಪತ್ನಿಯೊಡನೆ ಯಾವಾಗಲೂ ವನದಲ್ಲಿಯೇ ಇರುತ್ತಿದ್ದನು.

12031031a ತತೋ ಭಾಗೀರಥೀತೀರೇ ಕದಾ ಚಿದ್ವನನಿರ್ಝರೇ|

12031031c ಧಾತ್ರೀದ್ವಿತೀಯೋ ಬಾಲಃ ಸ ಕ್ರೀಡಾರ್ಥಂ ಪರ್ಯಧಾವತ||

ಹೀಗಿರಲು ಒಮ್ಮೆ ಭಾಗಿರಥೀತೀರದ ನಿರ್ಜನ ಪ್ರದೇಶದಲ್ಲಿ ದಾಯಿಯೊಬ್ಬಳೊಡನಿದ್ದ ಬಾಲಕನು ಅತ್ತಿತ್ತ ಓಡುತ್ತಾ ಆಟವಾಡುತ್ತಿದ್ದನು.

12031032a ಪಂಚವರ್ಷಕದೇಶೀಯೋ ಬಾಲೋ ನಾಗೇಂದ್ರವಿಕ್ರಮಃ|

12031032c ಸಹಸೋತ್ಪತಿತಂ ವ್ಯಾಘ್ರಮಾಸಸಾದ ಮಹಾಬಲಃ||

ಐದುವರ್ಷದ ಬಾಲಕನಾಗಿದ್ದರೂ ಆನೆಯಂತೆ ವಿಕ್ರಮಿಯಾಗಿದ್ದ ಆ ಮಹಾಬಲಶಾಲಿಯ ಮೇಲೆ ಒಮ್ಮೆಲೇ ಹುಲಿಯೊಂದು ಎರಗಿ ಬಿದ್ದಿತು.

12031033a ತೇನ ಚೈವ ವಿನಿಷ್ಪಿಷ್ಟೋ ವೇಪಮಾನೋ ನೃಪಾತ್ಮಜಃ|

12031033c ವ್ಯಸುಃ ಪಪಾತ ಮೇದಿನ್ಯಾಂ ತತೋ ಧಾತ್ರೀ ವಿಚುಕ್ರುಶೇ||

ತನ್ನನ್ನು ನೋಡಿ ನಡುಗುತ್ತಿದ್ದ ಆ ರಾಜಕುಮಾರನನ್ನು ಹುಲಿಯು ಅಗೆಯಲು ಪ್ರಾಣಶೂನ್ಯನಾದ ಬಾಲಕನು ನೆಲದ ಮೇಲೆ ಬಿದ್ದನು. ದಾಯಿಯು ಗಟ್ಟಿಯಾಗಿ ಚೀರಿಕೊಂಡಳು.

12031034a ಹತ್ವಾ ತು ರಾಜಪುತ್ರಂ ಸ ತತ್ರೈವಾಂತರಧೀಯತ|

12031034c ಶಾರ್ದೂಲೋ ದೇವರಾಜಸ್ಯ ಮಾಯಯಾಂತರ್ಹಿತಸ್ತದಾ||

ದೇವರಾಜನ ಮಾಯೆಯಿಂದ ಬಂದಿದ್ದ ಆ ಹುಲಿಯು ರಾಜಪುತ್ರನನ್ನು ಸಂಹರಿಸಿ ಅಲ್ಲಿಯೇ ಅಂತರ್ಧಾನವಾಯಿತು.

12031035a ಧಾತ್ರ್ಯಾಸ್ತು ನಿನದಂ ಶ್ರುತ್ವಾ ರುದತ್ಯಾಃ ಪರಮಾರ್ತವತ್|

12031035c ಅಭ್ಯಧಾವತ ತಂ ದೇಶಂ ಸ್ವಯಮೇವ ಮಹೀಪತಿಃ||

ಪರಮ ಆರ್ತಳಾಗಿ ರೋದಿಸುತ್ತಿರುವ ದಾಯಿಯ ನಿನಾದವನ್ನು ಕೇಳಿ ಸ್ವಯಂ ಮಹೀಪತಿಯೇ ಆ ಸ್ಥಳಕ್ಕೆ ಧಾವಿಸಿ ಬಂದನು.

12031036a ಸ ದದರ್ಶ ಗತಾಸುಂ ತಂ ಶಯಾನಂ ಪೀತಶೋಣಿತಮ್|

12031036c ಕುಮಾರಂ ವಿಗತಾನಂದಂ ನಿಶಾಕರಮಿವ ಚ್ಯುತಮ್||

ಅಸುನೀಗಿ ಮಲಗಿದ್ದ, ರಕ್ತವನ್ನು ಕಳೆದುಕೊಂಡಿದ್ದ, ಆಕಾಶದಿಂದ ಕೆಳಬಿದ್ದ ಚಂದ್ರನಂತೆ ಆನಂದವನ್ನು ಕಳೆದುಕೊಂಡಿದ್ದ ಮಗನನ್ನು ರಾಜನು ನೋಡಿದನು.

12031037a ಸ ತಮುತ್ಸಂಗಮಾರೋಪ್ಯ ಪರಿಪೀಡಿತವಕ್ಷಸಮ್|

12031037c ಪುತ್ರಂ ರುಧಿರಸಂಸಿಕ್ತಂ ಪರ್ಯದೇವಯದಾತುರಃ||

ಪರಿಪೀಡಿತ ಹೃದಯನಾಗಿ ಅವನು ರಕ್ತದಿಂದ ತೋಯ್ದುಹೋಗಿದ್ದ ಪುತ್ರನನ್ನು ತನ್ನ ತೊಡೆಯಮೇಲಿರಿಸಿಕೊಂಡು ಆತುರನಾಗಿ ಪರಿತಪಿಸಿದನು.

12031038a ತತಸ್ತಾ ಮಾತರಸ್ತಸ್ಯ ರುದಂತ್ಯಃ ಶೋಕಕರ್ಶಿತಾಃ|

12031038c ಅಭ್ಯಧಾವಂತ ತಂ ದೇಶಂ ಯತ್ರ ರಾಜಾ ಸ ಸೃಂಜಯಃ||

ಅವನ ತಾಯಂದಿರೂ ಕೂಡ ಶೋಕಕರ್ಶಿತರಾಗಿ ರೋದಿಸುತ್ತಾ ರಾಜಾ ಸೃಂಜಯನಿದ್ದ ಪ್ರದೇಶಕ್ಕೆ ಓಡಿ ಬಂದರು.

12031039a ತತಃ ಸ ರಾಜಾ ಸಸ್ಮಾರ ಮಾಮಂತರ್ಗತಮಾನಸಃ|

12031039c ತಚ್ಚಾಹಂ ಚಿಂತಿತಂ ಜ್ಞಾತ್ವಾ ಗತವಾಂಸ್ತಸ್ಯ ದರ್ಶನಮ್||

ಆಗ ಆ ರಾಜನು ತನ್ನ ಮನಸ್ಸಿನಲ್ಲಿಯೇ ನನ್ನನ್ನು ಸ್ಮರಿಸಿದನು. ಅವನು ನನ್ನನ್ನೇ ಧ್ಯಾನಿಸುತ್ತಿದ್ದಾನೆಂದು ತಿಳಿದು ನಾನು ಅಲ್ಲಿಗೆ ಹೋಗಿ ದರ್ಶನ ನೀಡಿದೆನು.

12031040a ಸ ಮಯೈತಾನಿ ವಾಕ್ಯಾನಿ ಶ್ರಾವಿತಃ ಶೋಕಲಾಲಸಃ|

12031040c ಯಾನಿ ತೇ ಯದುವೀರೇಣ ಕಥಿತಾನಿ ಮಹೀಪತೇ||

ಮಹೀಪತೇ! ಯದುವೀರನು ಈ ಮೊದಲು ನಿನಗೆ ಏನು ಹೇಳಿದ್ದನೋ ಅದನ್ನು ನಾನು ಶೋಕಲಾಲಸನಾದ ಅವನಿಗೆ ಹೇಳಿದೆನು.

12031041a ಸಂಜೀವಿತಶ್ಚಾಪಿ ಮಯಾ ವಾಸವಾನುಮತೇ ತದಾ|

12031041c ಭವಿತವ್ಯಂ ತಥಾ ತಚ್ಚ ನ ತಚ್ಚಕ್ಯಮತೋಽನ್ಯಥಾ||

ವಾಸವನ ಅನುಮತಿಯನ್ನು ಪಡೆದು ನಾನು ಆ ಮಗುವನ್ನು ಪುನಃ ಬದುಕಿಸಿದೆ ಕೂಡ. ಅದು ಹಾಗೆಯೇ ಆಗಬೇಕಾಗಿದ್ದಿತು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

12031042a ಅತ ಊರ್ಧ್ವಂ ಕುಮಾರಃ ಸ ಸ್ವರ್ಣಷ್ಠೀವೀ ಮಹಾಯಶಾಃ|

12031042c ಚಿತ್ತಂ ಪ್ರಸಾದಯಾಮಾಸ ಪಿತುರ್ಮಾತುಶ್ಚ ವೀರ್ಯವಾನ್||

ಬಳಿಕ ಮಹಾಯಶೋವಂತನೂ ವೀರ್ಯವಂತನೂ ಆದ ಕುಮಾರ ಸ್ವರ್ಣಷ್ಠೀವಿಯು ತನ್ನ ತಂದೆ-ತಾಯಿಗಳ ಚಿತ್ತವನ್ನು ಪ್ರಸನ್ನಗೊಳಿಸಿದನು.

12031043a ಕಾರಯಾಮಾಸ ರಾಜ್ಯಂ ಸ ಪಿತರಿ ಸ್ವರ್ಗತೇ ವಿಭುಃ|

12031043c ವರ್ಷಾಣಾಮೇಕಶತವತ್ಸಹಸ್ರಂ ಭೀಮವಿಕ್ರಮಃ||

ತನ್ನ ತಂದೆಯು ಸ್ವರ್ಗಗತನಾದ ನಂತರ ಆ ಭೀಮವಿಕ್ರಮಿ ವಿಭುವು ಹನ್ನೊಂದು ಸಾವಿರ ವರ್ಷಗಳ ಪರ್ಯಂತ ರಾಜ್ಯಭಾರವನ್ನು ಮಾಡಿದನು.

12031044a ತತ ಇಷ್ಟ್ವಾ ಮಹಾಯಜ್ಞೈರ್ಬಹುಭಿರ್ಭೂರಿದಕ್ಷಿಣೈಃ|

12031044c ತರ್ಪಯಾಮಾಸ ದೇವಾಂಶ್ಚ ಪಿತೃಂಶ್ಚೈವ ಮಹಾದ್ಯುತಿಃ||

ಆ ಮಹಾದ್ಯುತಿಯು ಆಗ ಅನೇಕ ಭೂರಿದಕ್ಷಿಣೆಗಳಿಂದ ಕೂಡಿದ ಮಹಾಯಜ್ಞಗಳಿಂದ ದೇವತೆಗಳನ್ನೂ ಪಿತೃಗಳನ್ನೂ ತೃಪ್ತಿಪಡಿಸಿದನು.

12031045a ಉತ್ಪಾದ್ಯ ಚ ಬಹೂನ್ಪುತ್ರಾನ್ಕುಲಸಂತಾನಕಾರಿಣಃ|

12031045c ಕಾಲೇನ ಮಹತಾ ರಾಜನ್ಕಾಲಧರ್ಮಮುಪೇಯಿವಾನ್||

ರಾಜನ್! ಕುಲದ ಸಂತಾನವನ್ನು ಮುಂದುವರಿಸಿಕೊಂಡು ಹೋಗುವ ಅನೇಕ ಪುತ್ರರನ್ನು ಹುಟ್ಟಿಸಿ ದೀರ್ಘ ಸಮಯದ ನಂತರ ಅವನು ಕಾಲಧರ್ಮಕ್ಕೊಳಗಾದನು.

12031046a ಸ ತ್ವಂ ರಾಜೇಂದ್ರ ಸಂಜಾತಂ ಶೋಕಮೇತನ್ನಿವರ್ತಯ|

12031046c ಯಥಾ ತ್ವಾಂ ಕೇಶವಃ ಪ್ರಾಹ ವ್ಯಾಸಶ್ಚ ಸುಮಹಾತಪಾಃ||

ರಾಜೇಂದ್ರ! ಕೇಶವ ಮತ್ತು ಮಹಾತಪಸ್ವಿ ವ್ಯಾಸರು ಹೇಳಿದಂತೆ ನೀನೂ ಕೂಡ ನಿನ್ನಲ್ಲಿ ಉಂಟಾಗಿರುವ ಈ ಶೋಕದಿಂದ ಹೊರಟು ಬಾ!

12031047a ಪಿತೃಪೈತಾಮಹಂ ರಾಜ್ಯಮಾಸ್ಥಾಯ ದುರಮುದ್ವಹ|

12031047c ಇಷ್ಟ್ವಾ ಪುಣ್ಯೈರ್ಮಹಾಯಜ್ಞೈರಿಷ್ಟಾಽಲ್ಲೋಕಾನವಾಪ್ಸ್ಯಸಿ||

ಪಿತೃಪಿತಾಮಹರ ಈ ರಾಜ್ಯದಲ್ಲಿ ಅಭಿಷಿಕ್ತನಾಗಿ ರಾಜ್ಯಭಾರನಡೆಸು. ಪುಣ್ಯಕರವಾದ ಮಹಾ ಯಜ್ಞ-ಇಷ್ಟಿಗಳಿಂದ ನಿನಗಿಷ್ಟವಾದ ಲೋಕಗಳನ್ನು ಪಡೆಯುತ್ತೀಯೆ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸ್ವರ್ಣಸ್ಠೀವಿಸಂಭವೋಪಾಖ್ಯಾನೇ ಏಕತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸ್ವರ್ಣಸ್ಠೀವಿಸಂಭವೋಪಾಖ್ಯಾನ ಎನ್ನುವ ಮೂವತ್ತೊಂದನೇ ಅಧ್ಯಾಯವು.

Comments are closed.