ಶಾಂತಿ ಪರ್ವ: ರಾಜಧರ್ಮ ಪರ್ವ
೨೮
12028001 ವೈಶಂಪಾಯನ ಉವಾಚ
12028001a ಜ್ಞಾತಿಶೋಕಾಭಿತಪ್ತಸ್ಯ ಪ್ರಾಣಾನಭ್ಯುತ್ಸಿಸೃಕ್ಷತಃ|
12028001c ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ವ್ಯಾಸಃ ಶೋಕಮಪಾನುದತ್||
ವೈಶಂಪಾಯನನು ಹೇಳಿದನು: “ಜ್ಞಾತಿಶೋಕದಿಂದ ತಪಿಸುತ್ತಾ ಪ್ರಾಣಗಳನ್ನೇ ತೊರೆಯಲು ಸಿದ್ಧನಾಗಿದ್ದ ಪಾಂಡುಪುತ್ರರ ಜ್ಯೇಷ್ಠ ಯುಧಿಷ್ಠಿರನ ಶೋಕವನ್ನು ನೀಗಿಸಲು ವ್ಯಾಸನು ಹೀಗೆ ಹೇಳಿದನು:
12028002 ವ್ಯಾಸ ಉವಾಚ
12028002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12028002c ಅಶ್ಮಗೀತಂ ನರವ್ಯಾಘ್ರ ತನ್ನಿಬೋಧ ಯುಧಿಷ್ಠಿರ||
ವ್ಯಾಸನು ಹೇಳಿದನು: “ನರವ್ಯಾಘ್ರ! ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಅಶ್ಮಗೀತವೆನ್ನುವ ಪುರಾತನ ಇತಿಹಾಸವೊಂದನ್ನು ಕೇಳು.
12028003a ಅಶ್ಮಾನಂ ಬ್ರಾಹ್ಮಣಂ ಪ್ರಾಜ್ಞಂ ವೈದೇಹೋ ಜನಕೋ ನೃಪಃ|
12028003c ಸಂಶಯಂ ಪರಿಪಪ್ರಚ್ಚ ದುಃಖಶೋಕಪರಿಪ್ಲುತಃ||
ದುಃಖ-ಶೋಕಗಳಲ್ಲಿ ಮುಳುಗಿಹೋಗಿದ್ದ ವಿದೇಹ ದೇಶದ ನೃಪ ಜನಕನು ಪ್ರಾಜ್ಞ ಬ್ರಾಹ್ಮಣ ಅಶ್ಮನನ್ನು ಪ್ರಶ್ನಿಸಿದನು:
12028004 ಜನಕ ಉವಾಚ
12028004a ಆಗಮೇ ಯದಿ ವಾಪಾಯೇ ಜ್ಞಾತೀನಾಂ ದ್ರವಿಣಸ್ಯ ಚ|
12028004c ನರೇಣ ಪ್ರತಿಪತ್ತವ್ಯಂ ಕಲ್ಯಾಣಂ ಕಥಮಿಚ್ಚತಾ||
ಜನಕನು ಹೇಳಿದನು: “ಕುಟುಂಬದ ಮತ್ತು ಸಂಪತ್ತಿನ ವೃದ್ಧಿ-ವಿನಾಶಗಳುಂಟಾದಾಗ ಕಲ್ಯಾಣವುಂಟಾಗಲು ಮನುಷ್ಯನು ಏನು ಮಾಡಬೇಕು?”
12028005 ಅಶ್ಮೋವಾಚ
12028005a ಉತ್ಪನ್ನಮಿಮಮಾತ್ಮಾನಂ ನರಸ್ಯಾನಂತರಂ ತತಃ|
12028005c ತಾನಿ ತಾನ್ಯಭಿವರ್ತಂತೇ ದುಃಖಾನಿ ಚ ಸುಖಾನಿ ಚ||
ಅಶ್ಮನು ಹೇಳಿದನು: “ಜನನದ ನಂತರ ಸತತವಾಗಿ ದುಃಖ-ಸುಖಗಳು ಮನುಷ್ಯನನ್ನು ಅನುಸರಿಸಿ ಬರುತ್ತಲೇ ಇರುತ್ತವೆ.
12028006a ತೇಷಾಮನ್ಯತರಾಪತ್ತೌ ಯದ್ಯದೇವೋಪಸೇವತೇ|
12028006c ತತ್ತದ್ಧಿ ಚೇತನಾಮಸ್ಯ ಹರತ್ಯಭ್ರಮಿವಾನಿಲಃ||
ಆ ಸುಖ-ದುಃಖಗಳಲ್ಲಿ ಯಾವುದು ಪ್ರಾಪ್ತವಾಗುವುದೋ ಅದೇ ಮನುಷ್ಯನ ಬುದ್ಧಿಯನ್ನು ಗಾಳಿಯು ಮೋಡವನ್ನು ಹಾರಿಸಿಕೊಂಡು ಹೋಗುವಂತೆ ಹಾರಿಸಿಕೊಂಡು ಹೋಗುತ್ತದೆ.
12028007a ಅಭಿಜಾತೋಽಸ್ಮಿ ಸಿದ್ಧೋಽಸ್ಮಿ ನಾಸ್ಮಿ ಕೇವಲಮಾನುಷಃ|
12028007c ಇತ್ಯೇವಂ ಹೇತುಭಿಸ್ತಸ್ಯ ತ್ರಿಭಿಶ್ಚಿತ್ತಂ ಪ್ರಸಿಚ್ಯತಿ||
ನಾನು ಒಳ್ಳೆಯಕುಲದಲ್ಲಿ ಹುಟ್ಟಿದ್ದೇನೆ, ನಾನು ಎಲ್ಲವನ್ನೂ ಸಾಧಿಸಿದ್ದೇನೆ ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಅಹಂಕಾರಗುಣಗಳು ಮನುಷ್ಯನ ಚಿತ್ತವನ್ನು ತೋಯಿಸಿಬಿಡುತ್ತವೆ.
12028008a ಸ ಪ್ರಸಿಕ್ತಮನಾ ಭೋಗಾನ್ವಿಸೃಜ್ಯ ಪಿತೃಸಂಚಿತಾನ್|
12028008c ಪರಿಕ್ಷೀಣಃ ಪರಸ್ವಾನಾಮಾದಾನಂ ಸಾಧು ಮನ್ಯತೇ||
ಭೋಗಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಂಡು ಪಿತೃಸಂಚಿತ ಸಂಪತ್ತು ಮುಗಿದುಹೋಗಲು ಪರರ ಸ್ವತ್ತನ್ನು ಕಿತ್ತುಕೊಳ್ಳುವುದೇ ಸರಿಯೆಂದು ಭಾವಿಸುತ್ತಾನೆ.
12028009a ತಮತಿಕ್ರಾಂತಮರ್ಯಾದಮಾದದಾನಮಸಾಂಪ್ರತಮ್|
12028009c ಪ್ರತಿಷೇಧಂತಿ ರಾಜಾನೋ ಲುಬ್ಧಾ ಮೃಗಮಿವೇಷುಭಿಃ||
ಮರ್ಯಾದೆಗಳನ್ನು ಮೀರಿ ಇತರರ ಸ್ವತ್ತನ್ನು ಅಪಹರಿಸುವ ಆ ಲುಬ್ಧರನ್ನು ರಾಜನು ಮೃಗಗಳನ್ನು ಬಾಣಗಳಿಂದ ಹೇಗೋ ಹಾಗೆ ಬೇಟೆಯಾಡಿ ವಿರೋಧಿಸುತ್ತಾನೆ.
12028010a ಯೇ ಚ ವಿಂಶತಿವರ್ಷಾ ವಾ ತ್ರಿಂಶದ್ವರ್ಷಾಶ್ಚ ಮಾನವಾಃ|
12028010c ಪರೇಣ ತೇ ವರ್ಷಶತಾನ್ನ ಭವಿಷ್ಯಂತಿ ಪಾರ್ಥಿವ||
ಪಾರ್ಥಿವ! ಇಪ್ಪತ್ತು ಅಥವಾ ಮೂವತ್ತು ವರ್ಷಗಳ ಇಂತಹ ಯುವಕರು ನೂರು ವರ್ಷಗಳ ಪರ್ಯಂತ ಜೀವಿಸುವುದಿಲ್ಲ.
12028011a ತೇಷಾಂ ಪರಮದುಃಖಾನಾಂ ಬುದ್ಧ್ಯಾ ಭೇಷಜಮಾದಿಶೇತ್|
12028011c ಸರ್ವಪ್ರಾಣಭೃತಾಂ ವೃತ್ತಂ ಪ್ರೇಕ್ಷಮಾಣಸ್ತತಸ್ತತಃ||
ಹೀಗೆ ಎಲ್ಲ ಪ್ರಾಣಿಗಳ ವ್ಯವಹಾರಗಳನ್ನೂ ಅಲ್ಲಲ್ಲಿ ನೋಡುತ್ತಾ ಅವರ ಪರಮದುಃಖಗಳಿಗೆ ಬುದ್ಧಿಯಿಂದ ಯೋಚಿಸಿ ಚಿಕಿತ್ಸೆಗಳನ್ನು ನಡೆಸಬೇಕು.
12028012a ಮಾನಸಾನಾಂ ಪುನರ್ಯೋನಿರ್ದುಃಖಾನಾಂ ಚಿತ್ತವಿಭ್ರಮಃ|
12028012c ಅನಿಷ್ಟೋಪನಿಪಾತೋ ವಾ ತೃತೀಯಂ ನೋಪಪದ್ಯತೇ||
ಮಾನಸಿಕ ದುಃಖಗಳಿಗೆ ಬುದ್ಧಿಭ್ರಮೆ ಮತ್ತು ಅನಿಷ್ಟಗಳೆಂಬ ಎರಡು ಕಾರಣಗಳಿವೆ. ಮೂರನೆಯ ಯಾವುದೇ ಕಾರಣವೂ ಇರುವುದಿಲ್ಲ.
12028013a ಏವಮೇತಾನಿ ದುಃಖಾನಿ ತಾನಿ ತಾನೀಹ ಮಾನವಮ್|
12028013c ವಿವಿಧಾನ್ಯುಪವರ್ತಂತೇ ತಥಾ ಸಾಂಸ್ಪರ್ಶಕಾನಿ ಚ||
ಇವೇ ಮೊದಲಾದ ದುಃಖಗಳು ಮಾನವನನ್ನು ಆವರಿಸುತ್ತಿರುತ್ತವೆ. ಹಾಗೆಯೇ ವಿಷಯಾಸಕ್ತಿಗಳಿಂದಲೂ ದುಃಖಗಳು ಪ್ರಾಪ್ತವಾಗುತ್ತವೆ.
12028014a ಜರಾಮೃತ್ಯೂ ಹ ಭೂತಾನಿ ಖಾದಿತಾರೌ ವೃಕಾವಿವ|
12028014c ಬಲಿನಾಂ ದುರ್ಬಲಾನಾಂ ಚ ಹ್ರಸ್ವಾನಾಂ ಮಹತಾಮಪಿ||
ಮುಪ್ಪು ಮತ್ತು ಸಾವು ಎನ್ನುವವು ಪ್ರಾಣಿಗಳನ್ನು ತಿನ್ನುವಂಥಹ ತೋಳಗಳಂತೆ. ಅವು ಬಲಶಾಲಿಗಳನ್ನೂ, ದುರ್ಬಲರನ್ನೂ, ಸಣ್ಣವರನ್ನೂ ಮತ್ತು ದೊಡ್ಡವರನ್ನೂ ತಿನ್ನುತ್ತವೆ.
12028015a ನ ಕಶ್ಚಿಜ್ಜಾತ್ವತಿಕ್ರಾಮೇಜ್ಜರಾಮೃತ್ಯೂ ಹ ಮಾನವಃ|
12028015c ಅಪಿ ಸಾಗರಪರ್ಯಂತಾಂ ವಿಜಿತ್ಯೇಮಾಂ ವಸುಂಧರಾಮ್||
ಸಾಗರ ಪರ್ಯಂತವಾದ ಈ ಭೂಮಿಯನ್ನು ಜಯಿಸಿದರೂ, ಜರಾಮೃತ್ಯುಗಳನ್ನು ಜಯಿಸಲು ಯಾವ ಮನುಷ್ಯನಿಗೂ ಸಾಧ್ಯವಿಲ್ಲ.
12028016a ಸುಖಂ ವಾ ಯದಿ ವಾ ದುಃಖಂ ಭೂತಾನಾಂ ಪರ್ಯುಪಸ್ಥಿತಮ್|
12028016c ಪ್ರಾಪ್ತವ್ಯಮವಶೈಃ ಸರ್ವಂ ಪರಿಹಾರೋ ನ ವಿದ್ಯತೇ||
ಕಾಲ-ಕರ್ಮ ಸಂಯೋಗದಿಂದ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವನ್ನೂ ಪ್ರಾಣಿಗಳು ಅವಶ್ಯವಾಗಿ ಅನುಭವಿಸಬೇಕೇ ಹೊರತು ಅವುಗಳಿಗೆ ಯಾವ ಪರಿಹಾರವೂ ಇಲ್ಲ.
12028017a ಪೂರ್ವೇ ವಯಸಿ ಮಧ್ಯೇ ವಾಪ್ಯುತ್ತಮೇ ವಾ ನರಾಧಿಪ|
12028017c ಅವರ್ಜನೀಯಾಸ್ತೇಽರ್ಥಾ ವೈ ಕಾಂಕ್ಷಿತಾಶ್ಚ ತತೋಽನ್ಯಥಾ||
ನರಾಧಿಪ! ಮನುಷ್ಯನಿಗೆ ಪೂರ್ವ ವಯಸ್ಸಿನಲ್ಲಿ, ಅಥವಾ ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿಯಾಗಲೀ ಈ ಸುಖ-ದುಃಖಗಳನ್ನು ತ್ಯಜಿಸಲು ಸಾಧ್ಯವಿಲ್ಲ. ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
12028018a ಸುಪ್ರಿಯೈರ್ವಿಪ್ರಯೋಗಶ್ಚ ಸಂಪ್ರಯೋಗಸ್ತಥಾಪ್ರಿಯೈಃ|
12028018c ಅರ್ಥಾನರ್ಥೌ ಸುಖಂ ದುಃಖಂ ವಿಧಾನಮನುವರ್ತತೇ||
ಅತ್ಯಂತ ಪ್ರಿಯರಾದವರಿಂದ ವಿಯೋಗ, ಅಪ್ರಿಯರೊಡನೆ ಸಹವಾಸ, ಧನಪ್ರಾಪ್ತಿ, ಧನನಷ್ಟ, ಮತ್ತು ಸುಖ-ದುಃಖಗಳು ಅವರವರ ಪ್ರಾರಬ್ಧವನ್ನು ಅನುಸರಿಸಿ ಬರುತ್ತಲೇ ಇರುತ್ತವೆ.
12028019a ಪ್ರಾದುರ್ಭಾವಶ್ಚ ಭೂತಾನಾಂ ದೇಹನ್ಯಾಸಸ್ತಥೈವ ಚ|
12028019c ಪ್ರಾಪ್ತಿವ್ಯಾಯಾಮಯೋಗಶ್ಚ ಸರ್ವಮೇತತ್ಪ್ರತಿಷ್ಠಿತಮ್||
ಪ್ರಾಣಿಗಳ ಹುಟ್ಟು-ಸಾವುಗಳೂ ಲಾಭಾಲಾಭಗಳೂ ಎಲ್ಲವೂ ಅವರವರು ಪಡೆದುಕೊಂಡು ಬಂದಿರುವ ಪ್ರಾರಬ್ಧಕರ್ಮಫಲಗಳಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ.
12028020a ಗಂಧವರ್ಣರಸಸ್ಪರ್ಶಾ ನಿವರ್ತಂತೇ ಸ್ವಭಾವತಃ|
12028020c ತಥೈವ ಸುಖದುಃಖಾನಿ ವಿಧಾನಮನುವರ್ತತೇ||
ಗಂಧ-ವರ್ಣ-ರಸ-ಸ್ಪರ್ಶಗಳು ಸ್ವಾಭಾವಿಕವಾಗಿ ಬಂದು-ಹೋಗುತ್ತಲೇ ಇರುತ್ತವೆ. ಹಾಗೆಯೇ ಸುಖದುಃಖಗಳು ಕರ್ಮಫಲಾನುಸಾರವಾಗಿ ದೈವ ನಿಯಮವನ್ನನುಸರಿಸಿ ಬಂದು-ಹೋಗುತ್ತಿರುತ್ತವೆ.
12028021a ಆಸನಂ ಶಯನಂ ಯಾನಮುತ್ಥಾನಂ ಪಾನಭೋಜನಮ್|
12028021c ನಿಯತಂ ಸರ್ವಭೂತಾನಾಂ ಕಾಲೇನೈವ ಭವಂತ್ಯುತ||
ಸರ್ವಪ್ರಾಣಿಗಳಿಗೂ ಕುಳಿತುಕೊಳ್ಳುವ, ಮಲಗುವ, ತಿರುಗಾಡುವ, ಏಳುವ, ಮತ್ತು ಪಾನ-ಭೋಜನಗಳ ಕಾಲವು ನಿಯತವಾಗಿರುತ್ತದೆ.
12028022a ವೈದ್ಯಾಶ್ಚಾಪ್ಯಾತುರಾಃ ಸಂತಿ ಬಲವಂತಃ ಸುದುರ್ಬಲಾಃ|
12028022c ಸ್ತ್ರೀಮಂತಶ್ಚ ತಥಾ ಷಂಢಾ ವಿಚಿತ್ರಃ ಕಾಲಪರ್ಯಯಃ||
ವೈದ್ಯರೂ ರೋಗಿಗಳಾಗುತ್ತಾರೆ. ಬಲಿಷ್ಠರೂ ದುರ್ಬಲರಾಗುತ್ತಾರೆ. ಸ್ತ್ರೀಸಂಗಗಳನ್ನು ಹೊಂದಿದವರೂ ಷಂಢರಾಗುತ್ತಾರೆ. ಕಾಲದ ವೈಪರೀತ್ಯವು ಹೀಗೆ ವಿಚಿತ್ರವಾದುದು.
12028023a ಕುಲೇ ಜನ್ಮ ತಥಾ ವೀರ್ಯಮಾರೋಗ್ಯಂ ಧೈರ್ಯಮೇವ ಚ|
12028023c ಸೌಭಾಗ್ಯಮುಪಭೋಗಶ್ಚ ಭವಿತವ್ಯೇನ ಲಭ್ಯತೇ||
ಉತ್ತಮ ಕುಲದಲ್ಲಿ ಜನ್ಮ, ವೀರ್ಯ, ಆರೋಗ್ಯ, ಧೈರ್ಯ, ಸೌಭಾಗ್ಯ ಮತ್ತು ಉಪಭೋಗಗಳು ಅದೃಷ್ಟದಿಂದಲೇ ಲಭ್ಯವಾಗುತ್ತವೆ.
12028024a ಸಂತಿ ಪುತ್ರಾಃ ಸುಬಹವೋ ದರಿದ್ರಾಣಾಮನಿಚ್ಚತಾಮ್|
12028024c ಬಹೂನಾಮಿಚ್ಚತಾಂ ನಾಸ್ತಿ ಸಮೃದ್ಧಾನಾಂ ವಿಚೇಷ್ಟತಾಮ್||
ಮಕ್ಕಳೇ ಬೇಡವೆನ್ನುವ ದರಿದ್ರನಿಗೆ ಅನೇಕ ಮಕ್ಕಳಾಗುತ್ತಾರೆ. ಮಕ್ಕಳಾಗಬೇಕೆಂದು ಹಂಬಲಿಸುವ ಶ್ರೀಮಂತನಿಗೆ ಮಕ್ಕಳೇ ಆಗುವುದಿಲ್ಲ. ವಿಧಿಯು ವಿಚಿತ್ರವಾದುದು.
12028025a ವ್ಯಾಧಿರಗ್ನಿರ್ಜಲಂ ಶಸ್ತ್ರಂ ಬುಭುಕ್ಷಾ ಶ್ವಾಪದಂ ವಿಷಮ್|
12028025c ರಜ್ಜ್ವಾ ಚ ಮರಣಂ ಜಂತೋರುಚ್ಚಾಚ್ಚ ಪತನಂ ತಥಾ||
ವ್ಯಾಧಿ, ಅಗ್ನಿ, ನೀರು, ಶಸ್ತ್ರ, ಹಸಿವು, ಅಪಘಾತ, ವಿಷಜ್ವರ, ಬೀಳುವುದು ಇವೇ ಪ್ರಾಣಿಗಳ ಮರಣಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.
12028026a ನಿರ್ಯಾಣಂ ಯಸ್ಯ ಯದ್ದಿಷ್ಟಂ ತೇನ ಗಚ್ಚತಿ ಹೇತುನಾ|
12028026c ದೃಶ್ಯತೇ ನಾಭ್ಯತಿಕ್ರಾಮನ್ನತಿಕ್ರಾಂತೋ ನ ವಾ ಪುನಃ||
ಯಾರ ಅದೃಷ್ಟದಲ್ಲಿ ಯಾವ ಕಾರಣದಿಂದ ಮರಣಹೊಂದಬೇಕೆಂದಿರುತ್ತದೆಯೋ ಅದೇ ರೀತಿಯಲ್ಲಿ ಮರಣ ಹೊಂದುತ್ತಾರೆ. ಕೆಲವೊಮ್ಮೆ ಧರ್ಮಗಳನ್ನು ಉಲ್ಲಂಘಿಸದೇ ಇರತಕ್ಕವನೂ ಆಪತ್ತಿನಿಂದ ಪಾರಾಗದೇ ಇರುವುದನ್ನು ಕಾಣುತ್ತೇವೆ.
12028027a ದೃಶ್ಯತೇ ಹಿ ಯುವೈವೇಹ ವಿನಶ್ಯನ್ವಸುಮಾನ್ನರಃ|
12028027c ದರಿದ್ರಶ್ಚ ಪರಿಕ್ಲಿಷ್ಟಃ ಶತವರ್ಷೋ ಜನಾಧಿಪ||
ಜನಾಧಿಪ! ಐಶ್ವರ್ಯವಂತನಾದವನು ಯುವಕನಾಗಿರುವಾಗಲೇ ಸತ್ತುಹೋಗುವುದನ್ನು ಮತ್ತು ದರಿದ್ರನಾಗಿ ಕಷ್ಟದಲ್ಲಿರುವವನು ನೂರುವರ್ಷಗಳು ಬದುಕಿರುವುದನ್ನು ನೋಡುತ್ತೇವೆ.
12028028a ಅಕಿಂಚನಾಶ್ಚ ದೃಶ್ಯಂತೇ ಪುರುಷಾಶ್ಚಿರಜೀವಿನಃ|
12028028c ಸಮೃದ್ಧೇ ಚ ಕುಲೇ ಜಾತಾ ವಿನಶ್ಯಂತಿ ಪತಂಗವತ್||
ಯಾರಲ್ಲಿ ಏನೂ ಇರುವುದಿಲ್ಲವೋ ಅಂಥಹ ದರಿದ್ರ ಜನರು ಬಹುಕಾಲ ಬಾಳುತ್ತಾರೆ. ಶ್ರೀಮಂತ ಕುಲದಲ್ಲಿ ಹುಟ್ಟಿದವರು ಪತಂಗಗಳಂತೆ ನಾಶಹೊಂದುತ್ತಾರೆ.
12028029a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ|
12028029c ಕಾಷ್ಠಾನ್ಯಪಿ ಹಿ ಜೀರ್ಯಂತೇ ದರಿದ್ರಾಣಾಂ ನರಾಧಿಪ||
ನರಾಧಿಪ! ಲೋಕದಲ್ಲಿ ಶ್ರೀಮಂತರಿಗೆ ಬಹುಷಃ ಭೋಗಿಸುವ ಶಕ್ತಿಯೇ ಇರುವುದಿಲ್ಲ. ಆದರೆ ದರಿದ್ರನಿಗೆ ಕಟ್ಟಿಗೆಯನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿರುತ್ತದೆ.
12028030a ಅಹಮೇತತ್ಕರೋಮೀತಿ ಮನ್ಯತೇ ಕಾಲಚೋದಿತಃ|
12028030c ಯದ್ಯದಿಷ್ಟಮಸಂತೋಷಾದ್ದುರಾತ್ಮಾ ಪಾಪಮಾಚರನ್||
ಕಾಲಚೋದಿತ ಮನುಷ್ಯನು ನಾನೇ ಇದನ್ನು ಮಾಡುತ್ತೇನೆ ಎಂದು ಭಾವಿಸಿಕೊಳ್ಳುತ್ತಾನೆ. ತನಗಿಲ್ಲವೆಂಬ ಅಸಂತೋಷದಿಂದ ದುರಾತ್ಮನು ಪಾಪಕರ್ಮಗಳನ್ನೆಸಗುತ್ತಾನೆ.
12028031a ಸ್ತ್ರಿಯೋಽಕ್ಷಾ ಮೃಗಯಾ ಪಾನಂ ಪ್ರಸಂಗಾನ್ನಿಂದಿತಾ ಬುಧೈಃ|
12028031c ದೃಶ್ಯಂತೇ ಚಾಪಿ ಬಹವಃ ಸಂಪ್ರಸಕ್ತಾ ಬಹುಶ್ರುತಾಃ||
ಸ್ತ್ರೀಸಂಗ, ದ್ಯೂತ, ಬೇಟೆ, ಸುರಾಪಾನ ಇವುಗಳು ಕೆಟ್ಟ ಹವ್ಯಾಸಗಳೆಂದು ತಿಳಿದವರು ನಿಂದಿಸುತ್ತಾರೆ. ಆದರೆ ತಿಳಿದವರೇ ಹೆಚ್ಚಾಗಿ ಇವುಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ!
12028032a ಇತಿ ಕಾಲೇನ ಸರ್ವಾರ್ಥಾನೀಪ್ಸಿತಾನೀಪ್ಸಿತಾನಿ ಚ|
12028032c ಸ್ಪೃಶಂತಿ ಸರ್ವಭೂತಾನಿ ನಿಮಿತ್ತಂ ನೋಪಲಭ್ಯತೇ||
ಹೀಗೆ ಕಾಲದ ಪ್ರಭಾವದಿಂದಲೇ ಜೀವಿಗಳು – ಇಷ್ಟವಾದವುಗಳು ಮತ್ತು ಇಷ್ಟವಲ್ಲದವುಗಳು – ಎಲ್ಲವನ್ನೂ ಅವರವರ ಅದೃಷ್ಟದ ಪ್ರಕಾರ ಪಡೆಯುತ್ತವೆ.
12028033a ವಾಯುಮಾಕಾಶಮಗ್ನಿಂ ಚ ಚಂದ್ರಾದಿತ್ಯಾವಹಃಕ್ಷಪೇ|
12028033c ಜ್ಯೋತೀಂಷಿ ಸರಿತಃ ಶೈಲಾನ್ಕಃ ಕರೋತಿ ಬಿಭರ್ತಿ ವಾ||
ವಾಯು, ಆಕಾಶ, ಅಗ್ನಿ, ಚಂದ್ರಾದಿತ್ಯರು, ಹಗಲು-ರಾತ್ರಿಗಳು, ನಕ್ಷತ್ರಗಳು ಮತ್ತು ನದೀ-ಪರ್ವತಗಳನ್ನು ಕಾಲವಲ್ಲದೇ ಇನ್ನ್ಯಾರು ಸೃಷ್ಟಿಸುತ್ತಾರೆ? ಬೇರೆ ಯಾರು ಇವುಗಳನ್ನು ಹೊರುತ್ತಾರೆ?
12028034a ಶೀತಮುಷ್ಣಂ ತಥಾ ವರ್ಷಂ ಕಾಲೇನ ಪರಿವರ್ತತೇ|
12028034c ಏವಮೇವ ಮನುಷ್ಯಾಣಾಂ ಸುಖದುಃಖೇ ನರರ್ಷಭ||
ನರರ್ಷಭ! ಛಳಿ-ಬೇಸಗೆ-ಮಳೆಗಾಲಗಳು ಕಾಲದ ಪ್ರಭಾವದಿಂದಲೇ ಬದಲಾಗುತ್ತಿರುತ್ತವೆ. ಹಾಗೆಯೇ ಮನುಷ್ಯರ ಸುಖ-ದುಃಖಗಳೂ ಬದಲಾಗುತ್ತಿರುತ್ತವೆ.
12028035a ನೌಷಧಾನಿ ನ ಶಾಸ್ತ್ರಾಣಿ ನ ಹೋಮಾ ನ ಪುನರ್ಜಪಾಃ|
12028035c ತ್ರಾಯಂತೇ ಮೃತ್ಯುನೋಪೇತಂ ಜರಯಾ ವಾಪಿ ಮಾನವಮ್||
ಔಷಧಗಳಾಗಲೀ, ಶಾಸ್ತ್ರಗಳಾಗಲೀ, ಹೋಮಗಳಾಗಲೀ ಅಥವಾ ಪುನಃ ಜಪಗಳಾಗಲೀ ಮಾನವನನ್ನು ಮೃತ್ಯುವಿನಿಂದಾಗಲೀ ಮುಪ್ಪಿನಿಂದಾಗಲೀ ರಕ್ಷಿಸುವುದಿಲ್ಲ.
12028036a ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ|
12028036c ಸಮೇತ್ಯ ಚ ವ್ಯತೀಯಾತಾಂ ತದ್ವದ್ಭೂತಸಮಾಗಮಃ||
ಮಹಾಸಾಗರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ತೇಲಿಕೊಂಡು ಬಂದು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಪುನಃ ದೂರ ತೇಲಿಕೊಂಡು ಹೋಗುವುದೋ ಹಾಗೆಯೇ ಜೀವಿಗಳ ಸಮಾಗಮವೂ ಕೂಡ ಕ್ಷಣಿಕವಾಗಿರುತ್ತದೆ.
12028037a ಯೇ ಚಾಪಿ ಪುರುಷೈಃ ಸ್ತ್ರೀಭಿರ್ಗೀತವಾದ್ಯೈರುಪಸ್ಥಿತಾಃ|
12028037c ಯೇ ಚಾನಾಥಾಃ ಪರಾನ್ನಾದಾಃ ಕಾಲಸ್ತೇಷು ಸಮಕ್ರಿಯಃ||
ಸ್ತ್ರೀಯರೊಡನೆ ಗೀತ-ವಾದ್ಯಗಳಿಂದ ಆನಂದಿತರಾಗಿರುವ ಪುರುಷರು ಮತ್ತು ಅನಾಥರಾಗಿ ಪರಾನ್ನವನ್ನೇ ತಿಂದು ಜೀವಿಸುವ ಪುರುಷರು ಇವರೊಬ್ಬಡನೆಯೂ ಕಾಲವು ಒಂದೇ ಸಮನಾಗಿ ವರ್ತಿಸುತ್ತದೆ[1].
12028038a ಮಾತೃಪಿತೃಸಹಸ್ರಾಣಿ ಪುತ್ರದಾರಶತಾನಿ ಚ|
12028038c ಸಂಸಾರೇಷ್ವನುಭೂತಾನಿ ಕಸ್ಯ ತೇ ಕಸ್ಯ ವಾ ವಯಮ್||
ಈ ಸಂಸಾರದಲ್ಲಿ ನಾವು ಅನೇಕಾನೇಕ ಸಹಸ್ರ ತಾಯಿ-ತಂದೆಯರನ್ನೂ, ಪತ್ನಿ-ಮಕ್ಕಳನ್ನೂ ಪಡೆದಿರುತ್ತೇವೆ. ಆದರೆ ಇಂದು ಅವರು ಯಾರಿಗೆ ಸಂಬಂಧಪಟ್ಟವರು? ಅಥವಾ ನಾವು ಯಾರಿಗೆ ಸಂಬಂಧಿಸಿದವರು?
12028039a ನೈವಾಸ್ಯ ಕಶ್ಚಿದ್ಭವಿತಾ ನಾಯಂ ಭವತಿ ಕಸ್ಯ ಚಿತ್|
12028039c ಪಥಿ ಸಂಗತಮೇವೇದಂ ದಾರಬಂಧುಸುಹೃದ್ಗಣೈಃ||
ನಾವು ಯಾರದ್ದೂ ಆಗಿರುವುದಿಲ್ಲ. ಯಾರೂ ನಮ್ಮವರಾಗಿರುವುದಿಲ್ಲ. ಈ ಪತ್ನಿ-ಬಂಧು-ಸ್ನೇಹಿತ ಗಣಗಳು ದಾರಿಯಲ್ಲಿ ಸಿಗುವ ದಾರಿಹೋಕರು ಅಷ್ಟೆ!
12028040a ಕ್ವಾಸಂ ಕ್ವಾಸ್ಮಿ ಗಮಿಷ್ಯಾಮಿ ಕೋ ನ್ವಹಂ ಕಿಮಿಹಾಸ್ಥಿತಃ|
12028040c ಕಸ್ಮಾತ್ಕಮನುಶೋಚೇಯಮಿತ್ಯೇವಂ ಸ್ಥಾಪಯೇನ್ಮನಃ||
12028040e ಅನಿತ್ಯೇ ಪ್ರಿಯಸಂವಾಸೇ ಸಂಸಾರೇ ಚಕ್ರವದ್ಗತೌ||
“ನಾನು ಯಾರು? ಎಲ್ಲಿಗೆ ಹೋಗುತ್ತಿದ್ದೇನೆ? ನಾನು ಯಾರವನು? ಇಲ್ಲಿಗೇಕೆ ಬಂದಿದ್ದೇನೆ? ಯಾರಿಗೋಸ್ಕರ ಚಿಂತಿಸುತ್ತಿದ್ದೇನೆ?” ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿರಬೇಕು. ಚಕ್ರದಂತೆ ತಿರುಗುತ್ತಿರುವ ಈ ಸಂಸಾರದಲ್ಲಿ ಪ್ರಿಯವಾದುದನ್ನು ಪಡೆಯುವ ಅಥವಾ ಪ್ರಿಯರೊಡನೆ ಸೇರುವ ಕ್ರಿಯೆಗಳು ಅನಿತ್ಯವಾದವು. ಶಾಶ್ವತವಾದವುಗಳಲ್ಲ.
12028041a ನ ದೃಷ್ಟಪೂರ್ವಂ ಪ್ರತ್ಯಕ್ಷಂ ಪರಲೋಕಂ ವಿದುರ್ಬುಧಾಃ|
12028041c ಆಗಮಾಂಸ್ತ್ವನತಿಕ್ರಮ್ಯ ಶ್ರದ್ಧಾತವ್ಯಂ ಬುಭೂಷತಾ||
ಪರಲೋಕವು ಪ್ರತ್ಯಕ್ಷದಲ್ಲಿಲ್ಲ. ಪರಲೋಕವನ್ನು ನೋಡಿದವರು ಯಾರೂ ಇಲ್ಲ ಎನ್ನುವುದನ್ನು ತಿಳಿದವರು ಹೇಳುತ್ತಾರೆ. ಆದರೆ ಆಗಮಗಳನ್ನು ಉಲ್ಲಂಘಿಸದೇ ಅವುಗಳಲ್ಲಿ ಶ್ರದ್ಧೆಯನ್ನಿಡಬೇಕು.
12028042a ಕುರ್ವೀತ ಪಿತೃದೈವತ್ಯಂ ಧರ್ಮಾಣಿ ಚ ಸಮಾಚರೇತ್|
12028042c ಯಜೇಚ್ಚ ವಿದ್ವಾನ್ವಿಧಿವತ್ತ್ರಿವರ್ಗಂ ಚಾಪ್ಯನುವ್ರಜೇತ್||
ವಿದ್ವಾನನು ಪಿತೃ-ದೇವಕಾರ್ಯಗಳನ್ನು ಮತ್ತು ಯಜ್ಞಗಳನ್ನು – ಈ ಮೂರು ವಿಧದ ಕರ್ಮಗಳನ್ನು ವಿಧಿವತ್ತಾಗಿ ನಡೆಸುತ್ತಿರಬೇಕು.
12028043a ಸಂನಿಮಜ್ಜಜ್ಜಗದಿದಂ ಗಂಭೀರೇ ಕಾಲಸಾಗರೇ|
12028043c ಜರಾಮೃತ್ಯುಮಹಾಗ್ರಾಹೇ ನ ಕಶ್ಚಿದವಬುಧ್ಯತೇ||
ಮುಪ್ಪು-ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರ ಸಮುದ್ರದಂತಿರುವ ಈ ಕಾಲದಲ್ಲಿ ಜಗತ್ತೆಲ್ಲವೂ ಮುಳುಗಿಹೋಗಿದೆ. ಆದರೆ ಯಾರೂ ಇದನ್ನು ತಿಳಿದುಕೊಳ್ಳುವುದಿಲ್ಲ!
12028044a ಆಯುರ್ವೇದಮಧೀಯಾನಾಃ ಕೇವಲಂ ಸಪರಿಗ್ರಹಮ್|
12028044c ದೃಶ್ಯಂತೇ ಬಹವೋ ವೈದ್ಯಾ ವ್ಯಾಧಿಭಿಃ ಸಮಭಿಪ್ಲುತಾಃ||
ಆಯುರ್ವೇದವನ್ನು ಅಧ್ಯಯನ ಮಾಡಿರುವ ಅನೇಕ ವೈದ್ಯರು ಪರಿವಾರ ಸಮೇತರಾಗಿ ನಾನಾ ವ್ಯಾಧಿಗಳಿಗೆ ತುತ್ತಾಗಿರುವುದನ್ನು ಕಾಣುತ್ತೇವೆ.
12028045a ತೇ ಪಿಬಂತಃ ಕಷಾಯಾಂಶ್ಚ ಸರ್ಪೀಂಷಿ ವಿವಿಧಾನಿ ಚ|
12028045c ನ ಮೃತ್ಯುಮತಿವರ್ತಂತೇ ವೇಲಾಮಿವ ಮಹೋದಧಿಃ||
ಅವರು ವಿವಿಧ ಕಷಾಯಗಳನ್ನೂ ಲೇಹಗಳನ್ನೂ ಸೇವಿಸುತ್ತಲೇ ಇರುತ್ತಾರೆ. ಆದರೂ ಸಮುದ್ರವು ಎಷ್ಟೇ ಪ್ರಯತ್ನಿಸಿದರೂ ತೀರವನ್ನು ಉಲ್ಲಂಘಿಸದಂತೆ ಅವರು ಮೃತ್ಯುವನ್ನು ಮೀರಲಾರರು.
12028046a ರಸಾಯನವಿದಶ್ಚೈವ ಸುಪ್ರಯುಕ್ತರಸಾಯನಾಃ|
12028046c ದೃಶ್ಯಂತೇ ಜರಯಾ ಭಗ್ನಾ ನಗಾ ನಾಗೈರಿವೋತ್ತಮೈಃ||
ರಸಾಯನ ಶಾಸ್ತ್ರವನ್ನು ತಿಳಿದವರೂ ಕೂಡ ಉಪಯುಕ್ತ ರಸಾಯನಪದಾರ್ಥಗಳನ್ನು ಸೇವಿಸಿದರೂ ಬಲಿಷ್ಠ ಆನೆಯಿಂದ ಮುರಿಯಲ್ಪಟ್ಟ ವೃಕ್ಷದಂತೆ ಮುಪ್ಪಿನಿಂದ ಮುರಿಯಲ್ಪಟ್ಟು ಬೀಳುತ್ತಾರೆ.
12028047a ತಥೈವ ತಪಸೋಪೇತಾಃ ಸ್ವಾಧ್ಯಾಯಾಭ್ಯಸನೇ ರತಾಃ|
12028047c ದಾತಾರೋ ಯಜ್ಞಶೀಲಾಶ್ಚ ನ ತರಂತಿ ಜರಾಂತಕೌ||
ಹಾಗೆಯೇ ತಪಸ್ಸಿನಿಂದ ಕೂಡಿ ಸ್ವಾಧ್ಯಾಯ-ಅಭ್ಯಾಸಗಳಲ್ಲಿ ನಿರತರಾದವರೂ, ದಾನಗಳನ್ನಿತ್ತವರೂ ಮತ್ತು ಯಜ್ಞಶೀಲರೂ ಕೂಡ ಮುಪ್ಪು-ಮರಣಗಳನ್ನು ಮೀರುವುದಿಲ್ಲ.
12028048a ನ ಹ್ಯಹಾನಿ ನಿವರ್ತಂತೇ ನ ಮಾಸಾ ನ ಪುನಃ ಸಮಾಃ|
12028048c ಜಾತಾನಾಂ ಸರ್ವಭೂತಾನಾಂ ನ ಪಕ್ಷಾ ನ ಪುನಃ ಕ್ಷಪಾಃ||
ಹುಟ್ಟಿದ ಎಲ್ಲ ಪ್ರಾಣಿಗಳಿಗೂ ಕಳೆದುಹೋದ ದಿನಗಳಾಗಲೀ, ರಾತ್ರಿಗಳಾಗಲೀ, ಮಾಸಗಳಾಗಲೀ, ಪಕ್ಷಗಳಾಗಲೀ, ವರ್ಷಗಳಾಗಲೀ ಪುನಃ ಮರಳಿ ಬರುವುದಿಲ್ಲ.
12028049a ಸೋಽಯಂ ವಿಪುಲಮಧ್ವಾನಂ ಕಾಲೇನ ಧ್ರುವಮಧ್ರುವಃ|
12028049c ನರೋಽವಶಃ ಸಮಭ್ಯೇತಿ ಸರ್ವಭೂತನಿಷೇವಿತಮ್||
ಅಸ್ಥಿರನಾದ ಅಸ್ವತಂತ್ರನಾದ ಮನುಷ್ಯನು ಕಾಲವು ಸನ್ನಿಹಿತವಾದೊಡನೆಯೇ ಸರ್ವಪ್ರಾಣಿಗಳೂ ಹೋಗುವ ಶಾಶ್ವತವಾದ ವಿಶಾಲ ಮೃತ್ಯುಪಥದಲ್ಲಿ ಹೋಗುತ್ತಾನೆ.
12028050a ದೇಹೋ ವಾ ಜೀವತೋಽಭ್ಯೇತಿ ಜೀವೋ ವಾಭ್ಯೇತಿ ದೇಹತಃ|
12028050c ಪಥಿ ಸಂಗತಮೇವೇದಂ ದಾರೈರನ್ಯೈಶ್ಚ ಬಂಧುಭಿಃ||
ದೇಹವೇ ಜೀವವೆಂದು ತಿಳಿದುಕೊಂಡಿರುವವರು ಅಥವಾ ಜೀವವೇ ದೇಹವೆಂದು ತಿಳಿದುಕೊಂಡಿರುವವರು ಇಬ್ಬರೂ ಕೂಡ ದಾರಿಯಲ್ಲಿ ಪತ್ನಿಯೇ ಮೊದಲಾದ ಬಂಧುಗಳೊಡನೆ ಸೇರಿಕೊಂಡು ಸ್ವಲ್ಪಕಾಲವೇ ಇರುತ್ತಾರೆ.
12028051a ನಾಯಮತ್ಯಂತಸಂವಾಸೋ ಲಭ್ಯತೇ ಜಾತು ಕೇನ ಚಿತ್|
12028051c ಅಪಿ ಸ್ವೇನ ಶರೀರೇಣ ಕಿಮುತಾನ್ಯೇನ ಕೇನ ಚಿತ್||
ಯಾರಿಗೂ ಅನಂತವಾದ (ಕೊನೆಯಾಗದ) ಸಂಬಂಧಗಳು ಯಾವಾಗಲೂ ದೊರಕುವುದಿಲ್ಲ. ತನ್ನ ಶರೀರದೊಡನಿರುವ ಸಂಬಂಧವೇ ಅಲ್ಪಕಾಲದ್ದಾಗಿರುವಾಗ ಬೇರೆಯವರೊಡನಿರುವ ಸಂಬಂಧಗಳ ಕುರಿತು ಹೇಳುವುದೇನಿದೆ?
12028052a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ|
12028052c ನ ತ್ವಂ ಪಶ್ಯಸಿ ತಾನದ್ಯ ನ ತ್ವಾಂ ಪಶ್ಯಂತಿ ತೇಽಪಿ ಚ||
ರಾಜನ್! ಈಗ ನಿನ್ನ ತಂದೆಯೆಲ್ಲಿದ್ದಾನೆ? ನಿನ್ನ ಪಿತಾಮಹನೆಲ್ಲಿದ್ದಾನೆ? ಅವರನ್ನು ಇಂದು ನೀನೂ ಕಾಣುತ್ತಿಲ್ಲ. ಅವರಿಗೂ ಕೂಡ ನೀನು ಕಾಣುತ್ತಿಲ್ಲ!
12028053a ನ ಹ್ಯೇವ ಪುರುಷೋ ದ್ರಷ್ಟಾ ಸ್ವರ್ಗಸ್ಯ ನರಕಸ್ಯ ವಾ|
12028053c ಆಗಮಸ್ತು ಸತಾಂ ಚಕ್ಷುರ್ನೃಪತೇ ತಮಿಹಾಚರ||
ನೃಪತೇ! ಯಾವ ಪುರುಷನೂ ಇಲ್ಲಿಂದ ಸ್ವರ್ಗ ಅಥವಾ ನರಕವನ್ನು ಕಂಡಿಲ್ಲ. ಆದರೆ ಆಗಮಗಳೇ ಸತ್ಪುರುಷರಿಗೆ ಕಣ್ಣುಗಳಾಗಿವೆ. ಆದುದರಂತೆ ಅವುಗಳು ಹೇಳುವಂತೆ ನಡೆದುಕೋ!
12028054a ಚರಿತಬ್ರಹ್ಮಚರ್ಯೋ ಹಿ ಪ್ರಜಾಯೇತ ಯಜೇತ ಚ|
12028054c ಪಿತೃದೇವಮಹರ್ಷೀಣಾಮಾನೃಣ್ಯಾಯಾನಸೂಯಕಃ||
ಬ್ರಹ್ಮಚರ್ಯವನ್ನು ನಡೆಸಿ, ಮಕ್ಕಳನ್ನು ಪಡೆದು ಯಜ್ಞಗಳನ್ನು ಮಾಡಬೇಕು. ಈ ರೀತಿ ಪಿತೃ-ದೇವ-ಮಹರ್ಷಿಗಳ ಋಣಗಳನ್ನು ದೋಷವೆಣಿಸದೇ ತೀರಿಸಬೇಕು.
12028055a ಸ ಯಜ್ಞಶೀಲಃ ಪ್ರಜನೇ ನಿವಿಷ್ಟಃ| ಪ್ರಾಗ್ಬ್ರಹ್ಮಚಾರೀ ಪ್ರವಿಭಕ್ತಪಕ್ಷಃ|
12028055c ಆರಾಧಯನ್ಸ್ವರ್ಗಮಿಮಂ ಚ ಲೋಕಂ| ಪರಂ ಚ ಮುಕ್ತ್ವಾ ಹೃದಯವ್ಯಲೀಕಮ್||
ಮೊದಲು ಬ್ರಹ್ಮಚಾರಿಯಾಗಿದ್ದುಕೊಂಡು, ನಂತರ ಸಂತಾನಗಳನ್ನು ಪಡೆದು, ದ್ವಂದ್ವಗಳನ್ನು ಮೀರಿ ಅವಿಭಕ್ತನಾಗಿದ್ದುಕೊಂಡು ಈ ಲೋಕವೇ ಸ್ವರ್ಗವೆಂದು ಆರಾಧಿಸಿ ಹೃದಯದಲ್ಲಿರುವ ಮುಳ್ಳನ್ನು ಕಿತ್ತೊಗೆಯಬೇಕು.
12028056a ಸಮ್ಯಗ್ಹಿ ಧರ್ಮಂ ಚರತೋ ನೃಪಸ್ಯ| ದ್ರವ್ಯಾಣಿ ಚಾಪ್ಯಾಹರತೋ ಯಥಾವತ್|
12028056c ಪ್ರವೃತ್ತಚಕ್ರಸ್ಯ ಯಶೋಽಭಿವರ್ಧತೇ| ಸರ್ವೇಷು ಲೋಕೇಷು ಚರಾಚರೇಷು||
ಉತ್ತಮ ಧರ್ಮದಲ್ಲಿಯೇ ನಡೆದುಕೊಂಡು, ಯಥಾವತ್ತಾಗಿ ದ್ರವ್ಯಗಳನ್ನು ಸಂಗ್ರಹಿಸುತ್ತಾ ನಡೆದುಕೊಳ್ಳುವ ನೃಪನ ಯಶಸ್ಸು ಎಲ್ಲ ಲೋಕಗಳಲ್ಲಿಯೂ ವಿಸ್ತರಿಸುತ್ತದೆ.”
12028057 ವ್ಯಾಸ ಉವಾಚ
12028057a ಇತ್ಯೇವಮಾಜ್ಞಾಯ ವಿದೇಹರಾಜೋ| ವಾಕ್ಯಂ ಸಮಗ್ರಂ ಪರಿಪೂರ್ಣಹೇತುಃ|
12028057c ಅಶ್ಮಾನಮಾಮಂತ್ರ್ಯ ವಿಶುದ್ಧಬುದ್ಧಿರ್| ಯಯೌ ಗೃಹಂ ಸ್ವಂ ಪ್ರತಿ ಶಾಂತಶೋಕಃ||
ವ್ಯಾಸನು ಹೇಳಿದನು: “ಹೀಗೆ ಅಶ್ಮನಿಂದ ಈ ಸಮಗ್ರವಾದ, ಉದಾಹರಣೆಗಳಿಂದ ಪರಿಪೂರ್ಣವಾಗಿದ್ದ ಮಾತುಗಳನ್ನು ಕೇಳಿ ಜನಕನು ವಿಶುದ್ಧ ಮನಸ್ಸುಳ್ಳವನಾಗಿ, ಶೋಕವನ್ನು ತೊರೆದು ಶಾಂತನಾಗಿ ತನ್ನ ಅರಮನೆಗೆ ತೆರಳಿದನು.
12028058a ತಥಾ ತ್ವಮಪ್ಯಚ್ಯುತ ಮುಂಚ ಶೋಕಮ್| ಉತ್ತಿಷ್ಠ ಶಕ್ರೋಪಮ ಹರ್ಷಮೇಹಿ|
12028058c ಕ್ಷಾತ್ರೇಣ ಧರ್ಮೇಣ ಮಹೀ ಜಿತಾ ತೇ| ತಾಂ ಭುಂಕ್ಷ್ವ ಕುಂತೀಸುತ ಮಾ ವಿಷಾದೀಃ||
ಅಚ್ಯುತ! ಇಂದ್ರನ ಸಮಾನನೇ! ಕುಂತೀಸುತ! ಹಾಗೆಯೇ ನೀನೂ ಕೂಡ ಶೋಕವನ್ನು ತೊರೆ! ಎದ್ದೇಳು! ಹರ್ಷವನ್ನು ತಾಳು! ಕ್ಷಾತ್ರಧರ್ಮದಿಂದ ಮಹಿಯನ್ನು ಗೆದ್ದ ನೀನು ಅದನ್ನು ಭೋಗಿಸು! ವಿಷಾದಿಸಬೇಡ!””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಅಷ್ಟಾವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.
[1] ಕಾಲದ ಪರಿಣಾಮವು - ಶ್ರೀಮಂತರಿರಲಿ ಅಥವಾ ದರಿದ್ರರಿರಲಿ ಒಂದೇ ತೆರನಾಗಿರುತ್ತದೆ.