ಹರಿವಂಶ: ಹರಿವಂಶ ಪರ್ವ

೧೩

ತ್ರಿಶಂಕುಚರಿತಂ

19013001 ವೈಶಂಪಾಯನ ಉವಾಚ|

19013001a ಸತ್ಯವ್ರತಸ್ತು ಭಕ್ತ್ಯಾ ಚ ಕೃಪಯಾ ಚ ಪ್ರತಿಜ್ಞಯಾ |

19013001c ವಿಶ್ವಾಮಿತ್ರಕಲತ್ರಂ ತದ್ಬಭಾರ ವಿನಯೇ ಸ್ಥಿತಃ ||

ವೈಶಂಪಾಯನನು ಹೇಳಿದನು: “ಸತ್ಯವ್ರತನಾದರೋ ವಿಶ್ವಾಮಿತ್ರನ ಮೇಲಿನ ಭಕ್ತಿಯಿಂದ, ಅವನ ಕುಟುಂಬದ ಮೇಲಿನ ಕರುಣೆಯಿಂದ ಮತ್ತು ತಾನು ಮಾಡಿದ ಪ್ರತಿಜ್ಞೆಯ ಕಾರಣದಿಂದ ವಿನಯನಾಗಿದ್ದುಕೊಂಡು ವಿಶ್ವಾಮಿತ್ರನ ಪತ್ನಿ-ಪುತ್ರರನ್ನು ಪಾಲಿಸತೊಡಗಿದನು.

19013002a ಹತ್ವಾ ಮೃಗಾನ್ವರಾಹಾಂಶ್ಚ ಮಹಿಷಾಂಶ್ಚ ವನೇಚರಾನ್ |

19013002c ವಿಶ್ವಾಮಿತ್ರಾಶ್ರಮಾಭ್ಯಾಶೇ ಮಾಂಸಂ ವೃಕ್ಷೇ ಬಬಂಧ ಸಃ ||

ಅವನು ವನದಲ್ಲಿ ಚರಿಸುತ್ತಿದ್ದ ಮೃಗಗಳನ್ನೂ, ವರಾಹಗಳನ್ನೂ, ಮಹಿಷಗಳನ್ನೂ ಸಂಹರಿಸಿ ಅವುಗಳ ಮಾಂಸವನ್ನು ವಿಶ್ವಾಮಿತ್ರನ ಆಶ್ರಮದ ಬಳಿ ವೃಕ್ಷಗಳಿಗೆ ಕಟ್ಟುತ್ತಿದ್ದನು.

19013003a ಉಪಾಂಶುವ್ರತಮಾಸ್ಥಾಯ ದೀಕ್ಷಾಂ ದ್ವಾದಶವಾರ್ಷಿಕೀಮ್ |

19013003c ಪಿತುರ್ನಿಯೋಗಾದವಸತ್ತಸ್ಮಿನ್ವನಗತೇ ನೃಪೇ ||

ನೃಪ ತಂದೆಯು ವನಕ್ಕೆ ತೆರಳಿದ ನಂತರ ಹನ್ನೆರಡು ವರ್ಷಗಳ ಉಪಾಂಶುವ್ರತ[1] ದೀಕ್ಷೆಯನ್ನು ಅನುಸರಿಸಿದನು.

19013004a ಅಯೋಧ್ಯಾಂ ಚೈವ ರಾಷ್ಟ್ರಂ ಚ ತಥೈವಾಂತಃಪುರಂ ಮುನಿಃ|

19013004c ಯಾಜ್ಯೋಪಾಧ್ಯಾಯಸಂಬಂಧಾದ್ವಸಿಷ್ಠಃ ಪರ್ಯರಕ್ಷತ ||

ಇತ್ತ ಮುನಿ ವಸಿಷ್ಠನು ಅಯೋಧ್ಯೆಯನ್ನೂ, ರಾಷ್ಟ್ರವನ್ನೂ, ಅಂತಃಪುರವನ್ನೂ, ಯಾಜನ-ಉಪಾಧ್ಯಾಯ ಸಂಬಂಧಿ ಎಲ್ಲ ಕಾರ್ಯಗಳನ್ನು ರಕ್ಷಿಸುತ್ತಿದ್ದನು.

19013005a ಸತ್ಯವ್ರತಸ್ತು ಬಾಲ್ಯಾಚ್ಚ ಭಾವಿನೋಽರ್ಥಸ್ಯ ವಾ ಬಲಾತ್ |

19013005c ವಸಿಷ್ಠೇಽಭ್ಯಧಿಕಂ ಮನ್ಯುಂ ಧಾರಯಾಮಾಸ ವೈ ತದಾ ||

ಸತ್ಯವ್ರತನಾದರೋ ತನ್ನ ಬಾಲ್ಯತನದಿಂದ ಅಥವಾ ಮುಂದಾಗುವುದರ ಬಲದಿಂದ ವಸಿಷ್ಠನ ಮೇಲೆ ಅಧಿಕ ಕ್ರೋಧವನ್ನಿರಿಸಿಕೊಂಡಿದ್ದನು.

19013006a ಪಿತ್ರಾ ಹಿ ತಂ ತದಾ ರಾಷ್ಟ್ರಾತ್ತ್ಯಜ್ಯಮಾನಂ ಸ್ವಮಾತ್ಮಜಮ್ |

19013006c ನ ವಾರಯಾಮಾಸ ಮುನಿರ್ವಸಿಷ್ಠಃ ಕಾರಣೇನ ಹ ||

ತನ್ನ ತಂದೆಯು ತನ್ನದೇ ಪುತ್ರನನ್ನು ರಾಷ್ಟ್ರದಿಂದ ಹೊರಗಟ್ಟುವಾಗ ಮುನಿ ವಸಿಷ್ಠನು ಅವನನ್ನು ತಡೆಯಲಿಲ್ಲವೆನ್ನುವುದೇ ಇದಕ್ಕೆ ಕಾರಣವಾಗಿತ್ತು.

19013007a ಪಾಣಿಗ್ರಹಣಮಂತ್ರಾಣಾಂ ನಿಷ್ಠಾ ಸ್ಯಾತ್ಸಪ್ತಮೇ ಪದೇ |

19013007c ನ ಚ ಸತ್ಯವ್ರತಸ್ತಸ್ಯ  ತಮುಪಾಂಶುಮಬುದ್ಧ್ಯತ ||

ಪಾಣಿಗ್ರಹಣ ಮಂತ್ರಗಳ ನಿಷ್ಠೆಯು ಸಪ್ತಪದಿಯಲ್ಲಿ ಇರುತ್ತವೆ. ಸತ್ಯವ್ರತನು ಅದನ್ನು ತಿಳಿದುಕೊಂಡಿರಲಿಲ್ಲ.

19013008a ಜಾನಂಧರ್ಮಂ ವಸಿಷ್ಠಸ್ತು ನ ಮಾಂ ತ್ರಾತೀತಿ ಭಾರತ |

19013008c ಸತ್ಯವ್ರತಸ್ತದಾ ರೋಷಂ ವಸಿಷ್ಠೇ ಮನಸಾಕರೋತ್ ||

ಭಾರತ! “ಧರ್ಮವನ್ನು ತಿಳಿದುಕೊಂಡಿದ್ದರೂ ವಸಿಷ್ಠನು ನನ್ನನ್ನು ರಕ್ಷಿಸುತ್ತಿಲ್ಲ!” ಎಂದು ಸತ್ಯವ್ರತನು ವಸಿಷ್ಠನ ಮೇಲೆ ರೋಷ ಮನಸ್ಸನ್ನಿಟ್ಟುಕೊಂಡಿದ್ದನು.

19013009a ಗುಣಬುದ್ಧ್ಯಾ ತು ಭಗವಾನ್ವಸಿಷ್ಠಃ ಕೃತವಾಂಸ್ತಥಾ |

19013009c ನ ಚ ಸತ್ಯವ್ರತಸ್ತಸ್ಯ ತಮುಪಾಂಶುಮಬುಧ್ಯತ ||

ಭಗವಾನ್ ವಸಿಷ್ಠನು ತನ್ನ ಗುಣಬುದ್ಧಿಯಿಂದಲೇ ಹಾಗೆ ಮಾಡಿದ್ದನು. ಆದರೆ ಸತ್ಯವ್ರತನು ಅವನ ಗುಟ್ಟನ್ನು ತಿಳಿದುಕೊಂಡಿರಲಿಲ್ಲ.

19013010a ತಸ್ಮಿನ್ನಪರಿತೋಷೋ ಯಃ ಪಿತುರಾಸೀನ್ಮಹಾತ್ಮನಃ |

19013010c ತೇನ ದ್ವಾದಶ ವರ್ಷಾಣಿ ನಾವರ್ಷತ್ಪಾಕಶಾಸನಃ ||

ಅವನ ಮೇಲೆ ತಂದೆಗಿದ್ದ ಅಸಂತೋಷದ ಕಾರಣದಿಂದ ಮಹಾತ್ಮ ಪಾಕಶಾಸನನು ಅವನ ರಾಜ್ಯದಲ್ಲಿ ಹನ್ನೆರಡು ವರ್ಷಗಳು ಮಳೆಯನ್ನೇ ಸುರಿಸಲಿಲ್ಲ.

19013011a ತೇನ ತ್ವಿದಾನೀಂ ವಹತಾ ದೀಕ್ಷಾಂ ತಾಂ ದುರ್ವಹಾಂ ಭುವಿ|

19013011c ಕುಲಸ್ಯ ನಿಷ್ಕೃತಿಸ್ತಾತ ಕೃತಾ ಸಾ  ವೈ ಭವೇದಿತಿ ||

19013012a ನ ತಂ ವಸಿಷ್ಠೋ ಭಗವಾನ್ಪಿತ್ರಾ ತ್ಯಕ್ತಂ ನ್ಯವಾರಯತ್ |

19013012c ಅಭಿಷೇಕ್ಷ್ಯಾಮ್ಯಹಂ ಪುತ್ರಮಸ್ಯೇತ್ಯೇವಂ ಮತಿರ್ಮುನೇಃ ||

ತಾತ! “ಒಂದು ವೇಳೆ ಇವನು ಭುವಿಯಲ್ಲಿಯೇ ಕಷ್ಟಕರವಾಗಿರುವ ಈ ದೀಕ್ಷೆಯನ್ನು ಪೂರ್ಣಗೊಳಿಸಿದರೆ ಇವನ ಕುಲದ ಪಾಪವನ್ನು ಹೋಗಲಾಡಿಸಿದಂತಾಗುತ್ತದೆ” ಎಂದು ಭಗವಾನ್ ವಸಿಷ್ಠನು ಅವನ ತಂದೆಯನ್ನು ತಡೆದಿರಲಿಲ್ಲ. “ಇವನ ಪುತ್ರನನ್ನು ರಾಜನನ್ನಾಗಿ ಅಭಿಷೇಕಿಸುತ್ತೇನೆ!” ಎಂದು ಮುನಿಯ ವಿಚಾರವಾಗಿತ್ತು.

19013013a ಸ ತು ದ್ವಾದಶ ವರ್ಷಾಣಿ  ದೀಕ್ಷಾಂ ತಾಮುದ್ವಹದ್ಬಲೀ |

19013013c ಉಪಾಂಶುವ್ರತಮಾಸ್ಥಾಯ ಮಹತ್ಸತ್ಯವ್ರತೋ ನೃಪ ||

ನೃಪ! ಬಲಶಾಲಿ ಸತ್ಯವ್ರತನಾದರೋ ಹನ್ನೆರಡು ವರ್ಷಗಳ ಆ ಉಪಾಂಶುವ್ರತದ ದೀಕ್ಷೆಯನ್ನು ಪಡೆದುಕೊಂಡು ಅದನ್ನು ಯಶಸ್ವಿಯಾಗಿ ಪೂರೈಸಿದನು.

19013014a ಅವಿದ್ಯಮಾನೇ ಮಾಂಸೇ ತು ವಸಿಷ್ಠಸ್ಯ ಮಹಾತ್ಮನಃ |

19013014c ಸರ್ವಕಾಮದುಘಾಂ ದೋಗ್ಧ್ರೀಂ  ದದರ್ಶ ಸ ನೃಪಾತ್ಮಜಃ ||

ಒಮ್ಮೆ ಮಾಂಸವು ದೊರೆಯದೇ ಇದ್ದಾಗ ಆ ನೃಪಾತ್ಮಜನು ಮಹಾತ್ಮ ವಸಿಷ್ಠನ ಸರ್ವಕಾಮಗಳನ್ನೂ ಹಾಲಾಗಿ ಸುರಿಸುವ ಕಾಮದೇನುವನ್ನು ನೋಡಿದನು.

19013015a ತಾಂ ವೈ ಕ್ರೋಧಾಚ್ಚ ಮೋಹಾಚ್ಚ ಶ್ರಮಾಚ್ಚೈವ ಕ್ಷುಧಾರ್ದಿತಃ |

19013015c ದಶಧರ್ಮಾಂಗತೋ ರಾಜಾ ಜಘಾನ ಜನಮೇಜಯ ||

ಜನಮೇಜಯ! ಕ್ರೋಧ-ಮೋಹ-ಶ್ರಮ-ಕ್ಷುಧೆಗಳೇ ಮೊದಲಾದ ದಶಧರ್ಮಗಳನ್ನು[2] ಹೊಂದಿದ್ದ ಅವನು ಕಾಮಧೇನುವನ್ನು ಸಂಹರಿಸಿದನು.

19013016a ತಚ್ಚ ಮಾಂಸಂ ಸ್ವಯಂ ಚೈವ ವಿಶ್ವಾಮಿತ್ರಸ್ಯ ಚಾತ್ಮಜಾನ್ |

19013016c ಭೋಜಯಾಮಾಸ ತಚ್ಛ್ರುತ್ವಾ ವಸಿಷ್ಠೋಽಪ್ಯಸ್ಯ ಚುಕ್ರುಧೇ |

19013016e ಕ್ರುದ್ಧಸ್ತು ಭ್ಗವಾನ್ವಾಕ್ಯಮಿದಮಾಹ ನೃಪಾತ್ಮಜಮ್ ||

ಅದರ ಮಾಂಸವನ್ನು ತಾನೂ ಮತ್ತು ವಿಶ್ವಾಮಿತ್ರನ ಮಕ್ಕಳೂ ಊಟಮಾಡಿದರು. ಅದನ್ನು ಕೇಳಿ ವಸಿಷ್ಠನ ಕೋಪವು ತುಂಬಿಬಂದಿತು. ಕೃದ್ಧನಾದ ಆ ಭಗವಾನನು ನೃಪಾತ್ಮಜ ಸತ್ಯವ್ರತನಿಗೆ ಇದನ್ನು ಹೇಳಿದನು.

19013017 ವಸಿಷ್ಠ ಉವಾಚ|

19013017a ಪಾತಯೇಯಮಹಂ ಕ್ರೂರ ತವ ಶಂಕುಮಸಂಶಯಮ್ |

19013017c ಯದಿ ತೇ ದ್ವಾವಿಮೌ ಶಂಕೂ ನ ಸ್ಯಾತಾಂ ವೈಕೃತೌ ಪುನಃ ||

ವಸಿಷ್ಠನು ಹೇಳಿದನು: “ಕ್ರೂರ! ಒಂದುವೇಳೆ ನೀನು ಪುನಃ ಈ ಎರಡು ಕೋಡುಗಳನ್ನು ನೀಡುವ ಪಾಪಗಳನ್ನು ಮಾಡದೇ ಇದ್ದಿದ್ದರೆ ನಿಸ್ಸಂಶಯವಾಗಿಯೂ ನಿನ್ನ ಆ ಒಂದು ಕೋಡನ್ನು ಬೀಳಿಸುತ್ತಿದ್ದೆ.

19013018a ಪಿತುಶ್ಚಾಪರಿತೋಷೇಣ ಗುರೋರ್ದೋಗ್ಧ್ರೀವಧೇನ ಚ |

19013018c ಅಪ್ರೋಕ್ಷಿತೋಪಯೋಗಾಚ್ಚ ತ್ರಿವಿಧಸ್ತೇ ವ್ಯತಿಕ್ರಮಃ ||

ತಂದೆಗೆ ಅಸಂತೋಷವನ್ನುಂಟುಮಾಡಿದ್ದುದರಿಂದ, ಗುರುವಿನ ಗೋವನ್ನು ವಧಿಸಿದುದರಿಂದ ಮತ್ತು ಪ್ರೋಕ್ಷಣೆಮಾಡದ ಆಹಾರವನ್ನು ಭುಂಜಿಸಿದುದರಿಂದ ನೀನು ಮೂರು ವಿಧದ ಪಾಪಗಳನ್ನು ಮಾಡಿದ್ದೀಯೆ!””

19013019  ವೈಶಂಪಾಯನ ಉವಾಚ|

19013019a ಏವಂ ತ್ರೀಣ್ಯಸ್ಯ ಶಂಕೂನಿ ತಾನಿ ದೃಷ್ಟ್ವಾ ಮಹಾತಪಾಃ |

19013019c ತ್ರಿಶಂಕುರಿತಿ ಹೋವಾಚ ತ್ರಿಶಂಕುರಿತಿ ಸ  ಸ್ಮೃತಃ ||

ವೈಶಂಪಾಯನನು ಹೇಳಿದನು: “ಹೀಗೆ ಅವನ ಮೂರು ಕೋಡುಗಳನ್ನು ನೋಡಿ ಮಹಾತಪಸ್ವೀ ವಸಿಷ್ಠನು ಅವನನ್ನು ತ್ರಿಶಂಕು ಎಂದು ಕರೆದನು. ಅಂದಿನಿಂದ ಅವನು ತ್ರಿಶಂಕು ಎಂದೇ ಆದನು.

19013020a ವಿಶ್ವಾಮಿತ್ರಸ್ತು ದಾರಾಣಾಮಾಗತೋ ಭರಣೇ ಕೃತೇ |

19013020c ಸ ತು ತಸ್ಮೈ ವರಂ ಪ್ರಾದಾನ್ಮುನಿಃ ಪ್ರೀತಸ್ತ್ರಿಶಂಕವೇ ||

ವಿಶ್ವಾಮಿತ್ರನಾದರೋ ಹಿಂದಿರುಗಿಬಂದು ತನ್ನ ಪತ್ನಿ-ಮಕ್ಕಳನ್ನು ಭರಣ-ಪೋಷಣ ಮಾಡಿದ ತ್ರಿಶಂಕುವಿನ ಮೇಲೆ ಪ್ರೀತನಾಗಿ ಅವನಿಗೆ ವರವನ್ನಿತ್ತನು.

19013021a ಛಂದ್ಯಮಾನೋ ವರೇಣಾಥ ವರಂ ವವ್ರೇ ನೃಪಾತ್ಮಜಃ |

19013021c ಸಶರೀರೋ ವ್ರಜೇ ಸ್ವರ್ಗಮಿತ್ಯೇವಂ ಯಾಚಿತೋ ಮುನಿಃ ||

ವರವನ್ನು ಕೇಳು ಎಂದು ಹೇಳಲು ನೃಪಾತ್ಮಜನು ಮುನಿಯಲ್ಲಿ “ಸಶರೀರಿಯಾಗಿ ನಾನು ಸ್ವರ್ಗಕ್ಕೆ ಹೋಗುವಂತಾಗಲಿ!” ಎಂಬ ವರವನ್ನು ಕೇಳಿಕೊಂಡನು.

19013022a ಅನಾವೃಷ್ಟಿಭಯೇ ತಸ್ಮಿನ್ಗತೇ ದ್ವಾದಶವಾರ್ಷಿಕೇ |

19013022c ರಾಜ್ಯೇಽಭಿಷಿಚ್ಯ ಪಿತ್ರ್ಯೇ ತು ಯಾಜಯಾಮಾಸ ತಂ ಮುನಿಃ ||

ಆಗ ಮುನಿ ವಿಶ್ವಾಮಿತ್ರನು ತನ್ನ ತಪೋಬಲದಿಂದ ಆ ಹನ್ನೆರಡು ವರ್ಷಗಳ ಅನಾವೃಷ್ಟಿಯ ಭಯವನ್ನು ಹೋಗಲಾಡಿಸಿ ಸತ್ಯವ್ರತನ ತಂದೆಯ ರಾಜ್ಯದಲ್ಲಿ ಅವನನ್ನು ಅಭಿಷೇಕಿಸಿ ಅವನ ಯಜ್ಞಗಳನ್ನು ಮಾಡಿಸತೊಡಗಿದನು.

19013023a ಮಿಷತಾಂ ದೇವತಾನಾಂ ಚ ವಸಿಷ್ಠಸ್ಯ ಚ ಕೌಶಿಕಃ |

19013023c ಸಶರೀರಂ ತದಾ ತಂ ತು ದಿವಮಾರೋಪಯತ್ಪ್ರಭುಃ ||

ದೇವತೆಗಳೂ, ವಸಿಷ್ಠನೂ ಮತ್ತು ಕೌಶಿಕ ವಿಶ್ವಾಮಿತ್ರನೂ ನೋಡುತ್ತಿದ್ದಂತೆಯೇ ಆ ಪ್ರಭು ತ್ರಿಶಂಕುವು ಸಶರೀರನಾಗಿ ದಿವವನ್ನು ಏರಿದನು.

19013024a ತಸ್ಯ ಸತ್ಯರಥಾ ನಾಮ ಭಾರ್ಯಾ ಕೈಕೇಯವಂಶಜಾ |

19013024c ಕುಮಾರಂ ಜನಯಾಮಾಸ ಹರಿಶ್ಚಂದ್ರಮಕಲ್ಮಷಮ್ ||

ಅವನ ಭಾರ್ಯೆ ಕೈಕೇಯವಂಶದಲ್ಲಿ ಹುಟ್ಟಿದ ಸತ್ಯರಥಾ ಎನ್ನುವವಳು ಅಕಲ್ಮಷನಾದ ಕುಮಾರ ಹರಿಶ್ಚಂದ್ರನಿಗೆ ಜನ್ಮವಿತ್ತಳು.

19013025a ಸ ವೈ ರಾಜಾ ಹರಿಶ್ಚಂದ್ರಸ್ತ್ರೈಶಂಕವ ಇತಿ ಸ್ಮೃತಃ |

19013025c ಆಹರ್ತಾ ರಾಜಸೂಯಸ್ಯ ಸ ಸಮ್ರಾಡಿತಿ  ವಿಶ್ರುತಃ ||

ರಾಜ ಹರಿಶ್ಚಂದ್ರನು ತ್ರೈಶಂಕವ ಎಂದೂ ಕರೆಯಲ್ಪಡುತ್ತಾನೆ. ಅವನು ರಾಜಸೂಯ ಯಜ್ಞವನ್ನು ಮಾಡಿದ್ದನು. ಆದುದರಿಂದ ಅವನು ಸಾಮ್ರಾಟನೆಂದು ಪ್ರಸಿದ್ಧನಾದನು.

19013026a ಹರಿಶ್ಚಂದ್ರಸ್ಯ ಪುತ್ರೋಽಭೂದ್ರೋಹಿತೋ ನಾಮ ವೀರ್ಯವಾನ್|

19013026c ಯೇನೇದಂ ರೋಹಿತಪುರಂ ಕಾರಿತಂ ರಾಜ್ಯಸಿದ್ಧಯೇ ||

ಹರಿಶ್ಚಂದ್ರನ ಮಗನು ರೋಹಿತನೆಂಬ ಹೆಸರಿನವನಾಗಿದ್ದನು. ಅವನು ತನ್ನ ರಾಜ್ಯಸಿದ್ಧಿಗಾಗಿ ರೋಹಿತಪುರಿಯನ್ನು ನಿರ್ಮಿಸಿದ್ದನು.

19013027a ಕೃತ್ವಾ ರಾಜ್ಯಂ ಸ ರಾಜರ್ಷಿಃ ಪಾಲಯಿತ್ವಾ ತ್ವಥ ಪ್ರಜಾಃ |

19013027c ಸಂಸಾರಾಸಾರತಾಂ ಜ್ಞಾತ್ವಾ ದ್ವಿಜೇಭ್ಯಸ್ತತ್ಪುರಂ ದದೌ ||

ಆ ರಾಜರ್ಷಿಯು ರಾಜ್ಯವನ್ನೂ ಪ್ರಜೆಗಳನ್ನೂ ಪರಿಪಾಲಿಸಿದ ನಂತರ, ಸಂಸಾರದ ಅಸಾರತೆಯನು ತಿಳಿದು ದ್ವಿಜರಿಗೆ ಆ ಪುರವನ್ನು ದಾನವನ್ನಾಗಿತ್ತನು.

19013028a ಹರಿತೋ ರೋಹಿತಸ್ಯಾಥ ಚಂಚುರ್ಹಾರೀತ ಉಚ್ಯತೇ |

19013028c ವಿಜಯಶ್ಚ ಸುದೇವಶ್ಚ ಚಂಚುಪುತ್ರೌ ಬಭೂವತುಃ ||

ಹರಿತನು ರೋಹಿತನ ಪುತ್ರ. ಮತ್ತು ಚಂಚುವು ಹರಿತನ ಪುತ್ರ – ಹಾರೀತ ಎಂದು ಹೇಳಲ್ಪಟ್ಟಿದ್ದಾನೆ. ವಿಜಯ ಮತ್ತು ಸುದೇವ ಇಬ್ಬರೂ ಚಂಚುವಿನ ಪುತ್ರರಾದರು.

19013029a ಜೇತಾ ಕ್ಷತ್ರಸ್ಯ ಸರ್ವಸ್ಯ ವಿಜಯಸ್ತೇನ ಸಂಸ್ಮೃತಃ |

19013029c ರುರುಕಸ್ತನಯಸ್ತಸ್ಯ ರಾಜಧರ್ಮಾರ್ಥಕೋವಿದಃ ||

ಸರ್ವ ಕ್ಷತ್ರಿಯರನ್ನೂ ಗೆದ್ದುದರಿಂದ ಅವನನ್ನು ವಿಜಯ ಎಂದು ಕರೆಯುತ್ತಿದ್ದರು. ಅವನಿಗೆ ರಾಜಧರ್ಮಾರ್ಥಕೋವಿದನಾದ ರುರುಕ ಎಂಬ ಮಗನಿದ್ದನು.

19013030a ರುರುಕಸ್ಯ ವೃಕಃ ಪುತ್ರೋ ವೃಕಾದ್ಬಾಹುಸ್ತು ಜಜ್ಞಿವಾನ್ |

19013030c ಶಕೈಯವನಕಾಂಬೋಜೈಃ ಪಾರದೈಃ ಪಹ್ಲವೈಃ ಸಹ ||

19013031a ಹೈಹಯಾಸ್ತಾಲಜಂಘಾಶ್ಚ ನಿರಸ್ಯಂತಿ ಸ್ಮ ತಂ ನೃಪಮ್ |

19013031c ನಾತ್ಯರ್ಥಂ ಧಾರ್ಮಿಕಸ್ತಾತ ಸ ಹಿ ಧರ್ಮಯುಗೇಽಭವತ್ ||

ರುರುಕನ ಮಗನು ವೃಕ ಮತ್ತು ವೃಕನಿಗೆ ಬಾಹುವು ಜನಿಸಿದನು. ತಾತ! ಆ ಧರ್ಮಯುಗದಲ್ಲಿ ಧಾರ್ಮಿಕನಾಗಿರದೇ ಇದ್ದುದರಿಂದ ಆ ನೃಪ ಬಾಹುವನ್ನು ಶಕ-ಯವನ-ಕಾಂಬೋಜ-ಪಾರದ-ಪಹ್ಲವ-ಹೈಹಯ-ತಾಲಜಂಘರು ಸೇರಿ ರಾಜ್ಯಭ್ರಷ್ಟನನ್ನಾಗಿ ಮಾಡಿದರು.

19013032a ಸಗರಸ್ತು ಸುತೋ ಬಾಹೋರ್ಜಜ್ಞೇ ಸಹ ಗರೇಣ ಚ |

19013032c ಔರ್ವಸ್ಯಾಶ್ರಮಮಾಗಮ್ಯ ಭಾರ್ಗವೇಣಾಭಿರಕ್ಷಿತಃ ||

ಬಾಹುವಿಗೆ ಗರ ಅರ್ಥಾತ್ ವಿಷದೊಂದಿಗೆ ಹುಟ್ಟಿದ ಮಗನು ಸಗರನೆಂದಾದನು. ಅವನ ತಾಯಿಯು ಔರ್ವನ ಆಶ್ರಮಕ್ಕೆ ಬರಲು ಅಲ್ಲಿ ಭಾರ್ಗವ ಔರ್ವನಿಂದ ಅವನು ರಕ್ಷಿತನಾದನು.

19013033a ಆಗ್ನೇಯಮಸ್ತ್ರಂ ಲಬ್ಧ್ವಾ ಚ ಭಾರ್ಗವಾತ್ಸಗರೋ ನೃಪಃ |

19013033c ಜಿಗಾಯ ಪೃಥಿವೀಂ ಹತ್ವಾ ತಾಲಜಂಘಾನ್ಸಹೈಹಯಾನ್ ||

19013034a ಶಕಾನಾಂ ಪಹ್ಲವಾನಾಂ ಚ ಧರ್ಮಂ ನಿರಸದಚ್ಯುತಃ |

19013034c ಕ್ಷತ್ರಿಯಾಣಾಂ ಕುರುಶ್ರೇಷ್ಠ ಪಾರದಾನಾಂ ಸ ಧರ್ಮವಿತ್ ||

ನೃಪ ಸಗರನು ಭಾರ್ಗವ ಔರ್ವನಿಂದ ಆಗ್ನೇಯಾಸ್ತ್ರವನ್ನು ಪಡೆದುಕೊಂಡು ತಾಲಜಂಘ-ಹೈಹಯರನ್ನು ಸಂಹರಿಸಿ ಪೃಥ್ವಿಯನ್ನು ಗೆದ್ದನು. ಕುರುಶ್ರೇಷ್ಠ! ಧರ್ಮವಿದು ಅಚ್ಯುತ ಸಗರನು ಶಕರು, ಪಹ್ಲವರು ಮತ್ತು ಪಾರದರನ್ನು ಧರ್ಮಭ್ರಷ್ಟರನ್ನಾಗಿ ಮಾಡಿದ್ದನು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ತ್ರಿಶಂಕುಚರಿತಂ ನಾಮ ತ್ರಯೋದಶೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ತ್ರಿಶಂಕುಚರಿತ ಎನ್ನುವ ಹದಿಮೂರನೆಯ ಅಧ್ಯಾಯವು.

Related image

[1] ಮೌನ ವ್ರತ

[2] ಮತ್ತಃ ಪ್ರಮತ್ತ ಉನ್ಮತ್ತಃ ಶ್ರಾಂತಃ ಕೃದ್ಧೋ ಬುಭುಕ್ಷಿತಃ| ತ್ವರಮಾಣಶ್ಚ ಭೀರುಶ್ಚ ಲುಬ್ಧಃ ಕಾಮೀ ಚ ತೇ ದಶ||

Comments are closed.