Harivamsha: Chapter 42

ಹರಿವಂಶ: ಹರಿವಂಶ ಪರ್ವ

೪೨

ವಿಷ್ಣೋರೀಶ್ವರತ್ವಕಥನಮ್

ವಿಷ್ಣುವಿನ ಈಶ್ವರತ್ವದ ವರ್ಣನೆ ಮತ್ತು ಅದ್ಭುತ ತಾರಕಾಮಯ ಸಂಗ್ರಾಮದ ಕಥಾರಂಭ.

ವೈಶಂಪಾಯನ ಉವಾಚ|

ವಿಶ್ವತ್ವಂ ಶೃಣು ಮೇ ವಿಷ್ಣೋರ್ಹರಿತ್ವಂ ಚ ಕೃತೇ ಯುಗೇ |

ವೈಕುಂಠತ್ವಂ ಚ ದೇವೇಷು ಕೃಷ್ಣತ್ವಂ ಮಾನುಷೇಷು ಚ ||೧-೪೨-೧

ಈಶ್ವರತ್ವಂ ಚ ತಸ್ಯೇದಂ ಗಹನಾಂ ಕರ್ಮಣಾಂ ಗತಿಮ್ |

ಸಂಪ್ರತ್ಯತೀತಾಂ ಭಾವ್ಯಾಂ ಚ ಶೃಣು ರಾಜನ್ಯಥಾತಥಮ್ ||೧-೪೨-೨

ವೈಶಂಪಾಯನನು ಹೇಳಿದನು: “ರಾಜನ್! ಕೃತಯುಗದಲ್ಲಿ ವಿಷ್ಣುವಿನ ವಿಶ್ವತ್ವ ಮತು ಹರಿತ್ವದ ಕುರಿತು, ದೇವತೆಗಳಲ್ಲಿ ಅವನ ವೈಕುಂಠತ್ವ ಮತ್ತು ಮನುಷ್ಯರಲ್ಲಿ ಅವನ ಕೃಷ್ಣತ್ವ, ಅವನ ಈಶ್ವರತ್ವ ಮತ್ತು ಅವನ ಭೂತ-ಭವಿಷ್ಯ-ವರ್ತಮಾನ ಕರ್ಮಗಳ ಗಹನ ಗತಿಯ ಕುರಿತು ಯಥಾರ್ಥವಾಗಿ ಕೇಳು.

ಅವ್ಯಕ್ತೋ ವ್ಯಕ್ತಲಿಂಗಸ್ಥೋ ಯತ್ರೈವ ಭಗವಾನ್ಪ್ರಭುಃ |

ನಾರಾಯಣೋ ಹ್ಯನಂತಾತ್ಮಾ ಪ್ರಭವೋಽವ್ಯಯ ಏವ ಚ ||೧-೪೨-೩

ಭಗವಾನ್ ಪ್ರಭು ನಾರಾಯಣನು ಅವ್ಯಕ್ತನಾಗಿದ್ದರೂ ತನ್ನ ಮೂರ್ತಿಯನ್ನು ವ್ಯಕ್ತಗೊಳಿಸುತ್ತಾನೆ. ಏಕೆಂದರೆ ಅವನು ಅನಂತಾತ್ಮಾ ಮತ್ತು ಎಲ್ಲದರ ಉತ್ಪತ್ತಿಸ್ಥಾನ ಮತ್ತು ಅವ್ಯಯನು.

ಏಷ ನಾರಾಯಣೋ ಭೂತ್ವಾ ಹರಿರಾಸೀತ್ಕೃತೇ ಯುಗೇ |

ಬ್ರಹ್ಮಾ ಶಕ್ರಶ್ಚ ಸೋಮಶ್ಚ ಧರ್ಮಃ ಶುಕ್ರೋ ಬೃಹಸ್ಪತಿಃ ||೧-೪೨-೪

ಕೃತಯುಗದಲ್ಲಿ ಇವನು ನಾರಾಯಣನಾಗಿ ಇವನೇ ಹರಿ, ಬ್ರಹ್ಮ, ಶಕ್ರ, ಸೋಮ, ಧರ್ಮ, ಶುಕ್ರ ಮತ್ತು ಬೃಹಸ್ಪತಿಯರಾಗಿದ್ದನು.

ಅದಿತೇರಪಿ ಪುತ್ರತ್ವಮೇತ್ಯ ಯಾದವನಂದನಃ |

ಏಷ ವಿಷ್ಣುರಿತಿ ಖ್ಯಾತ ಇಂದ್ರಾದವರಜೋಽಭವತ್ ||೧-೪೨-೫

ಈ ಯಾದವನಂದನನು ಅದಿತಿಯ ಪುತ್ರತ್ವವನ್ನೂ ಪಡೆದುಕೊಂಡು ವಿಷ್ಣುವೆಂದು ಖ್ಯಾತನಾಗಿ ಇಂದ್ರನ ತಮ್ಮನಾದನು.

ಪ್ರಸಾದಜಂ ಹ್ಯಸ್ಯ ವಿಭೋರದಿತ್ಯಾಃ ಪುತ್ರಜನ್ಮ ತತ್ |

ವಧಾರ್ಥಂ ಸುರಶತ್ರೂಣಾಂ ದೈತ್ಯದಾನವರಕ್ಷಸಾಮ್ ||೧-೪೨-೬

ಸುರರ ಶತ್ರುಗಳಾಗಿದ್ದ ದೈತ್ಯ-ದಾನವ-ರಾಕ್ಷಸರ ವಧೆಗಾಗಿ ವಿಭುವು ಅದಿತಿಯ ಪುತ್ರನಾಗಿ ಜನ್ಮವನ್ನು ಪಡೆದುದು ಅವನ ಪ್ರಸಾದರೂಪವಾಗಿತ್ತು.

ಪ್ರಧಾನಾತ್ಮಾ ಪುರಾ ಹ್ಯೇಷ ಬ್ರಹ್ಮಾಣಮಸೃಜತ್ಪ್ರಭುಃ |

ಸೋಽಸೃಜತ್ಪೂರ್ವಪುರುಷಃ ಪುರಾ ಕಲ್ಪೇ ಪ್ರಜಾಪತೀನ್ ||೧-೪೨-೭   

ಹಿಂದೆ ಈ ಪ್ರಭುವೇ ಪ್ರಧಾನಾತ್ಮನಾಗಿ ಬ್ರಹ್ಮನನ್ನು ಸೃಷ್ಟಿಸಿದನು. ಇವನೇ ಹಿಂದಿನ ಕಲ್ಪಗಳಲ್ಲಿ ಪ್ರಜಾಪತಿಗಳನ್ನು ಸೃಷ್ಟಿಸಿದ ಪೂರ್ವಪುರುಷನು[1].

ತೇ ತನ್ವಾನಾಸ್ತನೂಸ್ತತ್ರ  ಬ್ರಹ್ಮವಂಶಾನನುತ್ತಮಾನ್ |

ತೇಭ್ಯೋಽಭವನ್ಮಹಾತ್ಮಭ್ಯೋ ಬಹುಧಾ ಬ್ರಹ್ಮ ಶಾಶ್ವತಮ್ ||೧-೪೨-೮

ಆ ಪ್ರಜಾಪತಿಗಳ ತನುವಿನಿಂದ ಉತ್ತಮ ಬ್ರಹ್ಮವಂಶಗಳು ಉತ್ಪನ್ನವಾದವು. ಆ ಮಹಾತ್ಮರಿಂದಲೇ ಶಾಶ್ವತ ಬ್ರಹ್ಮವು ಅನೇಕವಾಯಿತು.

ಏತದಾಶ್ಚರ್ಯಭೂತಸ್ಯ ವಿಷ್ಣೋರ್ನಾಮಾನುಕೀರ್ತನಮ್ |

ಕೀರ್ತನೀಯಸ್ಯ ಲೋಕೇಷು ಕೀರ್ತ್ಯಮಾನಂ ನಿಬೋಧ ಮೇ ||೧-೪೨-೯

ಲೋಕದಲ್ಲಿ ಕೀರ್ತನೀಯನಾದ ಈ ಆಶ್ಚರ್ಯಭೂತ ವಿಷ್ಣುವಿನ ನಾಮಾನುಕೀರ್ತನೆಯನ್ನು ನಾನು ಮಾಡುವುದನ್ನು ಕೇಳು.

ವೃತ್ತೇ ವೃತ್ರವಧೇ ತಾತ ವರ್ತಮಾನೇ ಕೃತೇ ಯುಗೇ |

ಆಸೀತ್ತ್ರೈಲೋಕ್ಯವಿಖ್ಯಾತಃ ಸಂಗ್ರಾಮಸ್ತಾರಕಾಮಯಃ ||೧-೪೨-೧೦

ಅಯ್ಯಾ! ಕೃತಯುಗದಲ್ಲಿ ವೃತ್ರವಧೆಯು ನಡೆದನಂತರ ನಡೆದ ವೃತ್ತಾಂತವಿದು. ಆಗ ತ್ರೈಲೋಕ್ಯವಿಖ್ಯಾತವಾದ ತಾರಕಾಮಯ ಸಂಗ್ರಮವು ನಡೆಯಿತು.

ತತ್ರಾಸಂದಾನವಾ ಘೋರಾಃ ಸರ್ವೇ ಸಂಗ್ರಾಮದರ್ಪಿತಾಃ |

ಘ್ನಂತಿ ದೇವಗಣಾನ್ಸರ್ವಾನ್ಸಯಕ್ಷೋರಗರಾಕ್ಷಸಾನ್ ||೧-೪೨-೧೧

ಅಲ್ಲಿ ಘೋರದಾನವರು, ಎಲ್ಲರೂ ಸಂಗ್ರಾಮದರ್ಪಿತರೇ, ಯಕ್ಷೋರಗರಾಕ್ಷಸ[2]ರೊಡನೆ ದೇವಗಣಗಳೆಲ್ಲವನ್ನೂ ಸಂಹರಿಸಿದ್ದರು.

ತೇ ವಧ್ಯಮಾನಾ ವಿಮುಖಾಃ ಕ್ಷೀಣಪ್ರಹರಣಾ ರಣೇ |

ತ್ರಾತಾರಂ ಮನಸಾ ಜಗ್ಮುರ್ದೇವಂ ನಾರಾಯಣಂ ಹರಿಮ್ ||೧-೪೨-೧೨

ಹೀಗೆ ವಧಿಸಲ್ಪಡುತ್ತಿದ್ದ ಮತ್ತು ಆಯಸ್ಸನ್ನು ಕಳೆದುಕೊಂಡ ಅವರು ರಣದಿಂದ ವಿಮುಖರಾಗಿ ಮನಸಾ ದೇವ ನಾರಾಯಣ ಹರಿಯ ಶರಣುಹೊಕ್ಕರು.

ಏತಸ್ಮಿನ್ನಂತರೇ ಮೇಘಾ ನಿರ್ವಾಣಾಂಗಾರವರ್ಷಿಣಃ |

ಸಾರ್ಕಚಂದ್ರಗ್ರಹಗಣಂ ಛಾದಯಂತೋ ನಭಸ್ತಲಮ್ ||೧-೪೨-೧೩

ಈ ಮಧ್ಯದಲ್ಲಿ ಮೇಘಗಳು ಜ್ವಾಲಾರಹಿತ ಅಂಗಾರೆಗಳನ್ನು ಸುರಿಸತೊಡಗಿದವು. ಅವು ಸೂರ್ಯ-ಚಂದ್ರ ಮೊದಲಾದ ಗ್ರಹಗಣಸಹಿತ ನಭಸ್ತಲವನ್ನೇ ಮುಸುಕಿತ್ತು.

ಚಂಚದ್ವಿದ್ಯುದ್ಗಣಾವಿದ್ಧಾ ಘೋರಾ ನಿಹ್ರಾದಕಾರಿಣಃ |

ಅನ್ಯೋನ್ಯವೇಗಾಭಿಹತಾಃ ಪ್ರವವುಃ ಸಪ್ತ ಮಾಋತಾಃ ||೧-೪೨-೧೪

ಕುಪಿತ ವಿದ್ಯುತ್ ಜ್ವಾಲೆಗಳಂತೆ ಹರಡಿಕೊಂಡಿದ್ದ ಆ ಘೋರ ಮೋಡಗಳು ಜೋರಾಗಿ ಗರ್ಜಿಸುತ್ತಿದ್ದವು ಮತ್ತು ಸಪ್ತಮಾರುತಗಳಿಂದ ಬೀಸಲ್ಪಟ್ಟು ವೇಗದಿಂದ ಪರಸ್ಪರರನ್ನು ಘರ್ಷಿಸುತ್ತಿದ್ದವು.

ದೀಪ್ತತೋಯಾಶನೀಪಾತೈರ್ವಜ್ರವೇಗಾನಿಲಾಕುಲೈಃ |

ರರಾಸ ಘೋರೈರುತ್ಪಾತೈರ್ದಹ್ಯಮಾನಮಿವಾಂಬರಮ್ ||೧-೪೨-೧೫

ಉರಿಯುತ್ತಿರುವ ಸಿಡಿಲುಗಳು ಬೀಳುತ್ತಿರಲು ವಜ್ರವೇಗದ ಗಾಳಿಯು ಬೀಸುತ್ತಿರಲು ಅಂಬರವೇ ಹತ್ತಿ ಉರಿಯುತ್ತಿದೆಯೋ ಎನ್ನುವಂತೆ ಘೋರ ಉತ್ಪಾತಗಳು ಕಾಣಿಸಿಕೊಂಡವು.

ಪೇತುರುಲ್ಕಾಸಹಸ್ರಾಣಿ ಮುಹುರಾಕಾಶಗಾನ್ಯಪಿ |

ನ್ಯುಬ್ಜಾನಿ ಚ ವಿಮಾನಾನಿ ಪ್ರಪತಂತ್ಯುತ್ಪತಂತಿ ಚ ||೧-೪೨-೧೬

ಸಹಸ್ರಾರು ಉಲ್ಕೆಗಳು ಬೀಳುತ್ತಿದ್ದವು ಮತ್ತು ಪುನಃ ಆಕಾಶಕ್ಕೆ ಹಾರುತ್ತಿದ್ದವು. ವಿಮಾನಗಳು ಕೂಡ ಕೆಳಕ್ಕೆ ಬೀಳುತ್ತಿದ್ದವು ಮತ್ತು ಪುನಃ ಮೇಲಕ್ಕೆ ಪುಟಿಯುತ್ತಿದ್ದವು.

ಚತುರ್ಯುಗಾಂತಪರ್ಯಾಯೇ ಲೋಕಾನಾಂ ಯದ್ಭಯಂ ಭವೇತ್ |

ತಾದೃಶಾನ್ಯೇವ ರೂಪಾಣಿ ತಸ್ಮಿನ್ನುತ್ಪಾತಲಕ್ಷಣೇ ||೧-೪೨-೧೭

ಚತುರ್ಯುಗಾಂತಗಳ ಕೊನೆಯಲ್ಲಿ ಲೋಕಗಳಿಗೆ ಯಾವ ಭಯವುಂಟಾಗುವುದೋ ಅದರಂತೆಯೇ ಕಾಣುವ ಉತ್ಪಾತಲಕ್ಷಣಗಳು ಕಂಡುಬಂದವು.

ತಮಸಾ ನಿಷ್ಪ್ರಭಂ ಸರ್ವಂ ನ ಪ್ರಾಜ್ಞಾಯತ ಕಿಂಚನ |

ತಿಮಿರೌಘಪರಿಕ್ಷಿಪ್ತಾ ನ ರೇಜುಶ್ಚ ದಿಶೋ ದಶ ||೧-೪೨-೧೮

ಕತ್ತೆಲಿಯಿಂದ ಎಲ್ಲವೂ ನಿಷ್ಪ್ರಭೆಗೊಂಡಿತು. ಯಾವುದೂ ತಿಳಿಯಂದಾಯಿತು. ಘನ ಕತ್ತಲೆಯಿಂದ ಮುಚ್ಚಿಕೊಂಡಿದ್ದ ಹದ್ದು ದಿಕ್ಕುಗಳೂ ಕಾಣುತ್ತಿರಲಿಲ್ಲ.

ನಿಶೇವ ರೂಪಿಣೀ ಕಾಲೀ ಕಾಲಮೇಘಾವಗುಂಠಿತಾ |

ದ್ಯೌರ್ನ ಭಾತ್ಯಭಿಭೂತಾರ್ಕಾ ಘೋರೇಣ ತಮಸಾ ವೃತಾ || ೧-೪೨-೧೯

ಕಾಲಮೇಘಗಳು ತುಂಬಿರುವ ರಾತ್ರಿಯು ಹೇಗೆ ಕಪ್ಪಾಗಿರುವುದೋ ಆಗೆ ಆಕಾಶವೇ ಕಾಣುತ್ತಿರಲಿಲ್ಲ. ಸೂರ್ಯನು ಘೋರ ಕತ್ತಲೆಯಿಂದ ಆವೃತನಾಗಿದ್ದನು.

ತಾನ್ಘನೌಘಾನ್ಸತಿಮಿರಾಂದೋರ್ಭ್ಯಾಮುತ್ಕ್ಷಿಪ್ಯ ಸ ಪ್ರಭುಃ |

ವಪುಃ ಸಂದರ್ಶಯಾಮಾಸ ದಿವ್ಯಂ ಕೃಷ್ಣವಪುರ್ಹರಿಃ ||೧-೪೨-೨೦

ಆಗ ಪ್ರಭು ಕೃಷ್ಣವಪು ಹರಿಯು ಆ ಘನೋಘನ ತಿಮಿರಾಂಧ ಮೋಡಗಳನ್ನು ತನ್ನ ಎರಡೂ ಬಾಹುಗಳಿಂದ ಮೇಲೆತ್ತಿ ತನ್ನ ರೂಪವನ್ನು ತೋರಿಸಿದನು.

ಬಲಾಹಕಾಂಜನನಿಭಂ ಬಲಾಹಕತನೂರುಹಮ್ |

ತೇಜಸಾ ವಪುಷಾ ಚೈವ ಕೃಷ್ಣಂ ಕೃಷ್ಣಮಿವಾಚಲಮ್ ||೧-೪೨-೨೧

ಆಗ ಕೃಷ್ಣನು ಕಪ್ಪುಮೋಡಗಳಂತಿದ್ದನು. ಅವನ ತಲೆಗೂದಲು ಮೋಡಗಳಂತಿದ್ದವು. ತೇಜಸ್ಸು ಮತ್ತು ರೂಪದಲ್ಲಿ ಅವನು ಕಪ್ಪು ಪರ್ವತದಂತಿದ್ದನು.

ದೀಪ್ತಪೀತಾಂಬರಧರಂ ತಪ್ತಕಾಂಚನಭೂಷಣಮ್ |

ಧೂಮಾಂಧಕಾರವಪುಷಾ ಯುಗಾಂತಾಗ್ನಿಮಿವೋತ್ಥಿತಮ್ ||೧-೪೨-೨೨

ಬೆಳಗುತ್ತಿದ್ದ ಪೀತಾಂಬರವನ್ನು ಉಟ್ಟಿದ್ದನು. ಕಾಯಿಸಿದ ಕಾಂಚನ ಭೂಷಣಗಳನ್ನು ಧರಿಸಿದ್ದನು. ಹೊಗೆಯ ಅಂಧಕಾರದಂತೆ ಅವನ ಮುಖವು ಯುಗಾಂತದ ಅಗ್ನಿಯನ್ನು ಹೊರಹೊಮ್ಮುತ್ತಿದೆಯೋ ಎಂದು ಕಾಣುತ್ತಿತ್ತು.

ಚತುರ್ದ್ವಿಗುಣಪೀನಾಂಸಂ ಬಲಾಕಾಪಂಕ್ತಿಭೂಷಣಮ್ |

ಚಾಮೀಕರಕರಾಕಾರೈರಾಯುಧೈರುಪಶೋಭಿತಮ್ ||೧-೪೨-೨೩

ಅವನು ಚತುರ್ಭುಜಿಯಾಗಿದ್ದನು. ಬಲಾಕಪಕ್ಷಿಗಳ ಸಾಲಿನಿಂದ ಭೂಷಿತನಾಗಿದ್ದನು. ಚಾಮೀಕರಕರಾಕಾರ ಆಯುಧಗಳಿಂದ ಉಪಶೋಭಿತನಾಗಿದ್ದನು.

ಚಂದ್ರಾರ್ಕಕಿರಣೋದ್ದ್ಯೋತಂ ಗಿರಿಕೂಟಂ ಶಿಲೋಚ್ಚಯಮ್ |

ನಂದಕಾನಂದಿತಕರಂ ಶರಾಶೀವಿಷಧಾರಿಣಮ್ ||೧-೪೨-೨೪

ಸೂರ್ಯಚಂದ್ರರ ಕಿರಣಗನ್ನು ಸೂಸುವ ಗಿರಿಕೂಟ ಶಿಲೋಚ್ಚಯನಂತಿದ್ದನು. ನಂದಕವೆಂಬ ಖಡ್ಗವನ್ನು ಹಿಡಿದಿದ್ದನು. ಸರ್ಪಾಕಾರದ ಬಾಣಾವನ್ನು ಹಿಡಿದಿದ್ದನು.

ಶಕ್ತಿಚಿತ್ರಂ ಹಲೋದಗ್ರಂ ಶಂಖಚಕ್ರಗದಾಧರಮ್ |

ವಿಷ್ಣುಶೈಲಂ ಕ್ಷಮಾಮೂಲಂ ಶ್ರೀವೃಕ್ಷಂ ಶಾಙ್ರಧನ್ವಿನಮ್ ||೧-೪೨-೨೫

ಚಿತ್ರಿತ ಶಕ್ತಿಯನ್ನೂ, ಹಲಾಯುಧವನ್ನು, ಶಂಖ-ಚಕ್ರ-ಗದಾಯುಧಗಳನ್ನೂ ಧರಿಸಿದ್ದನು. ಆ ವಿಷ್ಣುಶೈಲ ಕ್ಷಮಾಮೂಲ ಶ್ರೀವೃಕ್ಷನು ಶಾಂಙ್ರಧನುಸ್ಸನ್ನು ಹಿಡಿದಿದ್ದನು.

ಹರ್ಯಶ್ವರಥಸಂಯುಕ್ತೇ ಸುಪರ್ಣಧ್ವಜಶೋಭಿತೇ |

ಚಂದ್ರಾರ್ಕಚಕ್ರರುಚಿರೇ ಮಂದರಾಕ್ಷವೃತಾಂತರೇ ||೧-೪೨-೨೬

ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದ, ಗರುಡನು ಧ್ವಜದಲ್ಲಿ ಶೋಭಿಸುತ್ತಿದ್ದ, ಸೂರ್ಯ-ಚಂದ್ರರೇ ಚಕ್ರಗಳಾಗಿದ್ದ, ಸುಂದರ ರಥದಲ್ಲಿ ಕುಳಿತಿದ್ದನು. ಮಂದರಾಚಲವೇ ಅದರ ಮೂಕಿಯಾಗಿತ್ತು.

ಅನಂತರಶ್ಮಿಸಂಯುಕ್ತೇ ದದೃಶೇ ಮೇರುಕೂಬರೇ |

ತಾರಕಾಚಿತ್ರಕುಸುಮೇ ಗ್ರಹನಕ್ಷತ್ರಬಂಧುರೇ ||೧-೪೨-೨೭

ಅನಂತನೇ ಆ ರಥದ ಕಡಿವಾಣಗಳಾಗಿದ್ದನು. ಮೇರುಪರ್ವತವು ಅದರ ನೊಗವಾಗಿತ್ತು. ತಾರೆಗಳೇ ಅದರ ಮೇಲೆ ಕುಸುಮಗಳಾಗಿ ಚಿತ್ರಿತಗೊಂಡಿದ್ದವು. ಗ್ರಹನಕ್ಷತ್ರಗಳು ಹಗ್ಗವಾಗಿ ಆ ಕುಸುಮಗಳನ್ನು ಪೋಣಿಸಿದ್ದವು.

ಭಯೇಷ್ವಭಯದಂ ವ್ಯೋಮ್ನಿ ದೇವಾ ದೈತ್ಯಪರಾಜಿತಾಃ |

ದದೃಶುಸ್ತೇ ಸ್ಥಿತಂ ದೇವಂ ದಿವ್ಯಲೋಕಮಯೇ ರಥೇ ||೧-೪೨-೨೮

ದೈತ್ಯರಿಂದ ಪರಾಜಿತರಾದ ದೇವತೆಗಳು ಆಕಾಶದಲ್ಲಿ ದಿವ್ಯಲೋಕಮಯ ರಥದಲ್ಲಿ ನಿಂತಿದ್ದ ಭಯದಲ್ಲಿ ಅಭಯವನ್ನು ನೀಡುವ ದೇವನನ್ನು ನೋಡಿದರು.

ತೇ ಕೃತಾಂಜಲಯಃ ಸರ್ವೇ ದೇವಾಃ ಶಕ್ರಪುರೋಗಮಾಃ |

ಜಯಶಬ್ದಂ ಪುರಸ್ಕೃತ್ಯ ಶರಣ್ಯಂ ಶರಣಂ ಗತಾಃ ||೧-೪೨೨-೨೯

ಆ ಸರ್ವ ದೇವತೆಗಳೂ, ಶಕ್ರನನ್ನು ಮುಂದಿರಿಸಿಕೊಂಡು, ಜಯಕಾರ ಮಾಡುತ್ತಾ ಶರಣ್ಯನ ಶರಣುಹೊಕ್ಕರು.

ಸ ತೇಷಾಂ ತಾ ಗಿರಃ ಶ್ರುತ್ವಾ ವಿಷ್ಣುರ್ದಯಿತದೇವತಃ |

ಮನಶ್ಚಕ್ರೇ ವಿನಾಶಾಯ ದಾನವಾನಾಂ ಮಹಾಮೃಧೇ ||೧-೪೨-೩೦

ಅವರ ಆ ಮಾತನ್ನು ಕೇಳಿ ಪ್ರೀತಿಯ ದೇವತೆ ವಿಷ್ಣುವು ಮಹಾರಣದಲ್ಲಿ ದಾನವರನ್ನು ವಿನಾಶಗೊಳಿಸುವ ಮನಸ್ಸು ಮಾಡಿದನು.

ಆಕಾಶೇ ತು ಸ್ಥಿತೋ ವಿಷ್ಣುಃ ಸೋತ್ತಮೇ ಪುರುಷೋತ್ತಮಃ |

ಉವಾಚ ದೇವತಾಃ ಸರ್ವಾಃ ಸಪ್ರತಿಜ್ಞಮಿದಂ ವಚಃ ||೧-೪೨-೩೧

ಉತ್ತಮ ಆಕಾಶದಲ್ಲಿ ನಿಂತಿತ್ತ ಪುರುಷೋತ್ತಮ ವಿಷ್ಣುವು ದೇವತೆಗಳೆಲ್ಲರಿಗೂ ಈ ಪ್ರತಿಜ್ಞಾಪೂರ್ವಕ ಮಾತನ್ನಾಡಿದನು:

ಶಾಂತಿಂ ಭಜತ ಭದ್ರಂ ವೋ ಮಾ ಭೈಷ್ಟಾ ಮರುತಾಂ ಗಾಣಾಃ |

ಜಿತಾ ಮೇ ದಾನವಾಃ ಸರ್ವೇ ತ್ರೈಲೋಕ್ಯಾಂ ಪ್ರತಿಗೃಹ್ಯತಾಮ್ ||೧-೪೨-೩೨

“ಮರುದ್ಗಣಗಳೇ! ನಿಮಗೆ ಮಂಗಳವಾಗಲಿ! ಈಗ ನೀವು ಶಾಂತರಾಗಿರಿ! ಭಯಪಡದಿರಿ! ಈ ದಾನವರೆಲ್ಲರನ್ನೂ ಗೆದ್ದು ತ್ರೈಲೋಕ್ಯವನ್ನು ಪಡೆದುಕೊಳ್ಳಿ.”

ತೇ ತಸ್ಯ ಸತ್ಯಸಂಧಸ್ಯ ವಿಷ್ಣೋರ್ವಾಕ್ಯೇನ ತೋಷಿತಾಃ |

ದೇವಾಃ ಪ್ರೀತಿಂ ಪರಾಂ ಜಗ್ಮುಃ ಪ್ರಾಪ್ಯೇವಾಮೃತಮುತ್ಥಿತಮ್ ||೧-೪೨-೩೩

ಸತ್ಯಸಂಧ ವಿಷ್ಣುವಿನ ಆ ಮಾತನ್ನು ಕೇಳಿ ತೃಪ್ತರಾದ ದೇವತೆಗಳು ಕ್ಷೀರಸಾಗರದಿಂದ ಉತ್ಪನ್ನವಾದ ಅಮೃತವು ದೊರಕಿದಷ್ಟೇ ಪರಮ ಪ್ರೀತರಾದರು.

ತತಸ್ತಮಃ ಸಂಹ್ರಿಯತೇ ವಿನೇಶುಶ್ಚ ಬಲಾಹಕಾಃ |

ಪ್ರವವುಶ್ಚ ಶಿವಾ ವಾತಾಃ ಪ್ರಸನ್ನಾಶ್ಚ ದಿಶೋ ದಶ ||೧-೪೨-೩೪

ಆಗ ಕತ್ತಲೆಯು ದೂರವಾಯಿತು. ಮೋಡಗಳು ಚದುರಿಹೋದವು. ಮಂಗಳಕರ ಗಾಳಿಯು ಬೀಸತೊಡಗಿತು ಮತ್ತು ಹತ್ತು ದಿಕ್ಕುಗಳೂ ತಿಳಿಯಾದವು.

ಸುಪ್ರಭಾಣಿ ಚ ಜ್ಯೋತೀಂಷಿ ಚಂದ್ರಂ ಚಕ್ರುಃ ಪ್ರದಕ್ಷಿಣಮ್ |

ದೀಪ್ತಿಮಂತಿ ಚ ತೇಜಾಂಸಿ ಚಕ್ರುರರ್ಕಂ ಪ್ರದಕ್ಷಿಣಮ್ || ೧-೪೨-೩೫

ಸುಪ್ರಭೆಯ ನಕ್ಷತ್ರಗಳು ಚಂದ್ರನನ್ನು ಪ್ರದಕ್ಷಿಣೆಮಾಡತೊಡಗಿದವು. ಪ್ರಕಾಶಮಾನ ಗ್ರಹಗಳು ಸೂರ್ಯನನ್ನು ಪ್ರದಕ್ಷಿಣೆಮಾಡತೊಡಗಿದವು.

ನ ವಿಗ್ರಹಂ ಗ್ರಹಾಶ್ಚಕ್ರುಃ ಪ್ರಸನ್ನಾಶ್ಚಾಪಿ ಸಿಂಧವಃ |

ನೀರಜಸ್ಕಾ ಬಭುರ್ಮಾರ್ಗಾ ನಾಕಮಾರ್ಗಾದಯಸ್ತ್ರಯಃ ||೧-೪೨-೩೬

ಗ್ರಹಗಳು ಒಂದಕ್ಕೊಂಡು ಹೊಡೆಯುವುದನ್ನು ನಿಲ್ಲಿಸಿದವು. ನದಿಗಳು ಪ್ರಸನ್ನವಾದವು. ದೇವಯಾನ, ಪಿತೃಯಾನ ಮತ್ತು ಮೋಕ್ಷಮಾರ್ಗಗಳೆಂಬ ಮೂರು ಮಾರ್ಗಗಳೂ ಧೂಳಿನಿಂದ ರಹಿತವಾಗಿ ನಿರ್ಮಲವಾದವು.

ಯಥಾರ್ಥಾಮೂಹುಃ ಸರಿತೋ ನಾಪಿ ಚುಕ್ಷುಭಿರೇಽರ್ಣವಾಃ |

ಆಸಂಶುಭಾನೀಂದ್ರಿಯಾಣಿ ನರಾಣಾಮಂತರಾತ್ಮಸು ||೧-೪೨-೩೭

ನದಿಗಳು ಸರಿಯಾಗಿ ಹರಿಯತೊಡಗಿದವು. ಸಮುದ್ರಗಳು ಕ್ಷೋಭೆಗೊಳ್ಳುವುದು ನಿಂತಿತು. ಮನುಷ್ಯರ ಅಂತರಾತ್ಮದಲ್ಲಿ ಇಂದ್ರಿಗಳು ಶುಭ ಕರ್ಮಗಳಲ್ಲಿ ತೊಡಗಲು ಬಯಸಿದವು.

ಮಹರ್ಷಯೋ ವೀತಶೋಕಾ ವೇದಾನುಚ್ಚೈರಧೀಯತ |

ಯಜ್ಞೇಷು ಚ ಹವಿಃ ಸ್ವಾದು ಶಿವಮಶ್ನಾತಿ ಪಾವಕಃ ||೧-೪೨-೩೮

ಮಹರ್ಷಿಗಳು ಶೋಕರಹಿತರಾಗಿ ವೇದಗಳನ್ನು ಉಚ್ಚರಿಸತೊಡಗಿದರು. ಪಾವಕನು ಯಜ್ಞಗಳಲ್ಲಿನ ಪವಿತ್ರ ಮತ್ತು ಸ್ವಾದು ಹವಿಸ್ಸನ್ನು ಭಕ್ಷಿಸತೊಡಗಿದನು.

ಪ್ರವೃತ್ತಧರ್ಮಾಃ ಸಂವೃತ್ತಾ ಲೋಕಾ ಮುದಿತಮಾನಸಾಃ |

ಪ್ರೀತ್ಯಾ ಪರಮಯಾ ಯುಕ್ತಾ ದೇವದೇವಸ್ಯ ಭೂಪತೇ |

ವಿಷ್ಣೋಃ ಸತ್ಯಪ್ರತಿಜ್ಞಸ್ಯ ಶ್ರುತ್ವಾರಿನಿಧನೇ ಗಿರಮ್ ||೧-೪೨-೩೯

ಭೂಪತೇ! ಸತ್ಯಪ್ರತಿಜ್ಞ ದೇವದೇವ ವಿಷ್ಣುವಿನ ಈ ಶತ್ರುನಾಶನ ಪ್ರತಿಜ್ಞೆಯನ್ನು ಕೇಳಿ ಲೋಕಗಳು ಮುದಿತಮಾನಸಗೊಂಡು ಪರಮ ಪ್ರೀತಿಯಿಂದ ಪ್ರವೃತ್ತಧರ್ಮದಲ್ಲಿ ತೊಡಗಿತು.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಶ್ಚರ್ಯತಾರಕಾಮಯೇ ದ್ವಿಚತ್ವಾರಿಂಶೋಽಧ್ಯಾಯಃ

Shells clipart | Clipart Panda - Free Clipart Images

[1] ಪುರುಷಸೂಕ್ತದಲ್ಲಿ ಹೇಳಿದ ಸಹಸ್ರಶೀರ್ಷಾ ಪುರುಷಃ!

[2] ಆಗ (ಕೃತಯುಗದಲ್ಲಿ) ರಾಕ್ಷಸರನ್ನೂ ದೇವಗಣಗಳೆಂದು ಎಣಿಸಲಾಗಿತ್ತು.

Comments are closed.