Ashramavasika Parva: Chapter 37

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೩೭

ಯುದ್ಧದಲ್ಲಿ ಮೃತರಾದವರನ್ನು ತೋರಿಸಬೇಕೆಂದು ಗಾಂಧಾರಿಯು ವ್ಯಾಸನಲ್ಲಿ ಕೇಳಿಕೊಂಡಿದುದು (೧-೧೪). ಗಾಂಧರಿಯ ಮಾತುಗಳನ್ನು ಕೇಳಿ ಕರ್ಣನನ್ನು ನೆನೆಸಿಕೊಂಡು ದುಃಖಿತಳಾದ ಕುಂತಿಗೆ “ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!" ಎಂದು ವ್ಯಾಸನು ಕೇಳಿದುದು (೧೫-೧೮).

15037001 ವೈಶಂಪಾಯನ ಉವಾಚ|

15037001a ತಚ್ಛೃತ್ವಾ ವಿವಿಧಂ ತಸ್ಯ ರಾಜರ್ಷೇಃ ಪರಿದೇವಿತಮ್|

15037001c ಪುನರ್ನವೀಕೃತಃ ಶೋಕೋ ಗಾಂಧಾರ್ಯಾ ಜನಮೇಜಯ||

ವೈಶಂಪಾಯನನು ಹೇಳಿದನು: "ಜನಮೇಜಯ! ರಾಜರ್ಷಿಯ ವಿಧವಿಧವಾದ ಆ ಪರಿವೇದನೆಯನ್ನು ಕೇಳಿ ಗಾಂಧಾರಿಯ ಶೋಕವೂ ನವೀಕೃತವಾಯಿತು.

15037002a ಕುಂತ್ಯಾ ದ್ರುಪದಪುತ್ರ್ಯಾಶ್ಚ ಸುಭದ್ರಾಯಾಸ್ತಥೈವ ಚ|

15037002c ತಾಸಾಂ ಚ ವರನಾರೀಣಾಂ ವಧೂನಾಂ ಕೌರವಸ್ಯ ಹ||

ಹಾಗೆಯೇ ಕುಂತಿ, ದ್ರುಪದಪುತ್ರಿ, ಸುಭದ್ರೆ, ಮತ್ತು ಕೌರವನ ಸುಂದರ ಸೊಸೆಯಂದಿರ ದುಃಖವೂ ನವೀಕೃತವಾಯಿತು.

15037003a ಪುತ್ರಶೋಕಸಮಾವಿಷ್ಟಾ ಗಾಂಧಾರೀ ತ್ವಿದಮಬ್ರವೀತ್|

15037003c ಶ್ವಶುರಂ ಬದ್ಧನಯನಾ ದೇವೀ ಪ್ರಾಂಜಲಿರುತ್ಥಿತಾ||

ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ದೇವೀ ಗಾಂಧಾರಿಯು ಪುತ್ರಶೋಕದ ಆವೇಶದಿಂದ ಎದ್ದು ನಿಂತು ಕೈಮುಗಿದು ತನ್ನ ಮಾವ ವ್ಯಾಸನಿಗೆ ಹೇಳಿದಳು:

15037004a ಷೋಡಶೇಮಾನಿ ವರ್ಷಾಣಿ ಗತಾನಿ ಮುನಿಪುಂಗವ|

15037004c ಅಸ್ಯ ರಾಜ್ಞೋ ಹತಾನ್ಪುತ್ರಾನ್ಶೋಚತೋ ನ ಶಮೋ ವಿಭೋ||

"ವಿಭೋ! ಮುನಿಪುಂಗವ! ಈ ರಾಜನು ಪುತ್ರರನ್ನು ಕಳೆದುಕೊಂಡು ಶೋಕಿಸುತ್ತಾ ಹದಿನಾರು ವರ್ಷಗಳು ಕಳೆದುಹೋದವು. ಆದರೂ ಅವನಿಗೆ ಶಾಂತಿಯಿಲ್ಲದಾಗಿದೆ.

15037005a ಪುತ್ರಶೋಕಸಮಾವಿಷ್ಟೋ ನಿಃಶ್ವಸನ್ ಹ್ಯೇಷ ಭೂಮಿಪಃ|

15037005c ನ ಶೇತೇ ವಸತೀಃ ಸರ್ವಾ ಧೃತರಾಷ್ಟ್ರೋ ಮಹಾಮುನೇ||

ಮಹಾಮುನೇ! ಪುತ್ರಶೋಕದಿಂದ ಸಮಾವಿಷ್ಟನಾಗಿ ಈ ಭೂಮಿಪ ಧೃತರಾಷ್ಟ್ರನು ಇಡೀ ರಾತ್ರಿ ನಿಟ್ಟುಸಿರು ಬಿಡುತ್ತಲೇ ಇರುತ್ತಾನೆ. ನಿದ್ರೆಯನ್ನೇ ಮಾಡುವುದಿಲ್ಲ.

15037006a ಲೋಕಾನನ್ಯಾನ್ಸಮರ್ಥೋಽಸಿ ಸ್ರಷ್ಟುಂ ಸರ್ವಾಂಸ್ತಪೋಬಲಾತ್|

15037006c ಕಿಮು ಲೋಕಾಂತರಗತಾನ್ರಾಜ್ಞೋ ದರ್ಶಯಿತುಂ ಸುತಾನ್||

ನಿನ್ನ ತಪೋಬಲದಿಂದ ಅನ್ಯ ಸರ್ವ ಲೋಕಗಳನ್ನೇ ಸೃಷ್ಟಿಸಲು ಸಮರ್ಥನಾಗಿರುವೆ. ಇನ್ನು ಬೇರೆಯೇ ಲೋಕಕ್ಕೆ ಹೋಗಿರುವ ಮಕ್ಕಳನ್ನು ರಾಜನಿಗೆ ತೋರಿಸುವುದು ಯಾವ ಮಹಾ ದೊಡ್ಡ ವಿಷಯ?

15037007a ಇಯಂ ಚ ದ್ರೌಪದೀ ಕೃಷ್ಣಾ ಹತಜ್ಞಾತಿಸುತಾ ಭೃಶಮ್|

15037007c ಶೋಚತ್ಯತೀವ ಸಾಧ್ವೀ ತೇ ಸ್ನುಷಾಣಾಂ ದಯಿತಾ ಸ್ನುಷಾ||

ಸೊಸೆಯಂದಿರಲ್ಲಿಯೇ ಅತ್ಯಂತ ಪ್ರಿಯಸೊಸೆಯಾಗಿರುವ ಸಾಧ್ವೀ ದ್ರೌಪದೀ ಕೃಷ್ಣೆಯೂ ಇಲ್ಲಿ ಮಕ್ಕಳು-ಬಾಂಧವರನ್ನು ಕಳೆದುಕೊಂಡು ಅತೀವವಾಗಿ ಶೋಕಿಸುತ್ತಿದ್ದಾಳೆ.

15037008a ತಥಾ ಕೃಷ್ಣಸ್ಯ ಭಗಿನೀ ಸುಭದ್ರಾ ಭದ್ರಭಾಷಿಣೀ|

15037008c ಸೌಭದ್ರವಧಸಂತಪ್ತಾ ಭೃಶಂ ಶೋಚತಿ ಭಾಮಿನೀ||

ಹಾಗೆಯೇ ಕೃಷ್ಣನ ತಂಗಿ, ಭದ್ರಭಾಷಿಣೀ ಭಾಮಿನೀ ಸುಭದ್ರೆಯೂ ಕೂಡ ಸೌಭದ್ರನ ವಧೆಯಿಂದ ಸಂತಪ್ತಳಾಗಿ ತುಂಬಾ ಶೋಕಿಸುತ್ತಿದ್ದಾಳೆ.

15037009a ಇಯಂ ಚ ಭೂರಿಶ್ರವಸೋ ಭಾರ್ಯಾ ಪರಮದುಃಖಿತಾ|

15037009c ಭರ್ತೃವ್ಯಸನಶೋಕಾರ್ತಾ ನ ಶೇತೇ ವಸತೀಃ ಪ್ರಭೋ||

ಪ್ರಭೋ! ಪರಮದುಃಖಿತಳಾಗಿರುವ ಭೂರಿಶ್ರವಸನ ಈ ಭಾರ್ಯೆಯೂ ಕೂಡ ಪತಿಯ ವ್ಯಸನಶೋಕಾರ್ತಳಾಗಿ ನಿದ್ದೆಮಾಡುತ್ತಿಲ್ಲ!

15037010a ಯಸ್ಯಾಸ್ತು ಶ್ವಶುರೋ ಧೀಮಾನ್ಬಾಹ್ಲೀಕಃ ಸ ಕುರೂದ್ವಹಃ|

15037010c ನಿಹತಃ ಸೋಮದತ್ತಶ್ಚ ಪಿತ್ರಾ ಸಹ ಮಹಾರಣೇ||

ಮಾವ ಧೀಮಾನ್ ಕುರೂದ್ವಹ ಬಾಹ್ಲೀಕನೂ ಮತ್ತು ತಂದೆಯೊಂದಿಗೆ ಸೋಮದತ್ತನೂ ಮಹಾರಣದಲ್ಲಿ ಹತರಾದರು.

15037011a ಶ್ರೀಮಚ್ಚಾಸ್ಯ ಮಹಾಬುದ್ಧೇಃ ಸಂಗ್ರಾಮೇಷ್ವಪಲಾಯಿನಃ|

15037011c ಪುತ್ರಸ್ಯ ತೇ ಪುತ್ರಶತಂ ನಿಹತಂ ಯದ್ರಣಾಜಿರೇ||

ರಣಾಂಗಣದಲ್ಲಿ ನಿನ್ನ ಪುತ್ರನ ನೂರು ಮಕ್ಕಳು - ಶ್ರೀಮಂತರೂ, ಮಹಾಬುದ್ಧಿಯುಳ್ಳವರೂ, ಸಂಗ್ರಾಮದಲ್ಲಿ ಪಲಾಯನಮಾಡದಿಲ್ಲದಿದ್ದವರೂ ಆಗಿದ್ದವರು - ಹತರಾದರು.

15037012a ತಸ್ಯ ಭಾರ್ಯಾಶತಮಿದಂ ಪುತ್ರಶೋಕಸಮಾಹತಮ್|

15037012c ಪುನಃ ಪುನರ್ವರ್ಧಯಾನಂ ಶೋಕಂ ರಾಜ್ಞೋ ಮಮೈವ ಚ|

15037012e ತೇನಾರಂಭೇಣ ಮಹತಾ ಮಾಮುಪಾಸ್ತೇ ಮಹಾಮುನೇ||

ಶೋಕದಿಂದ ಪೀಡಿತರಾದ, ಆ ನೂರು ಭಾರ್ಯೆಯರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ಮತ್ತು ರಾಜನ ದುಃಖವನ್ನು ಪುನಃ ಪುನಃ ಹೆಚ್ಚಿಸುತ್ತಿದ್ದಾರೆ. ಮಹಾಮುನೇ! ಮಹಾ ಉದ್ವೇಗದಿಂದ ಕೂಡಿದ ಅವರು ನನ್ನ ಸುತ್ತಲೂ ಕುಳಿತುಕೊಂಡಿದ್ದಾರೆ.

15037013a ಯೇ ಚ ಶೂರಾ ಮಹಾತ್ಮಾನಃ ಶ್ವಶುರಾ ಮೇ ಮಹಾರಥಾಃ|

15037013c ಸೋಮದತ್ತಪ್ರಭೃತಯಃ ಕಾ ನು ತೇಷಾಂ ಗತಿಃ ಪ್ರಭೋ||

ಪ್ರಭೋ! ಶೂರರೂ ಮಹಾತ್ಮರೂ ಆಗಿದ್ದ ಸೋಮದತ್ತನೇ ಮೊದಲಾದ ನನ್ನ ಮಾವಂದಿರು ಯಾವ ಗತಿಯನ್ನು ಪಡೆದುಕೊಂಡಿದ್ದಾರೆ?

15037014a ತವ ಪ್ರಸಾದಾದ್ಭಗವನ್ವಿಶೋಕೋಽಯಂ ಮಹೀಪತಿಃ|

15037014c ಕುರ್ಯಾತ್ಕಾಲಮಹಂ ಚೈವ ಕುಂತೀ ಚೇಯಂ ವಧೂಸ್ತವ||

ಭಗವನ್! ನಿನ್ನ ಅನುಗ್ರಹದಿಂದ ಈ ಮಹೀಪತಿಯೂ, ನಾನೂ ಮತ್ತು ನಿನ್ನ ಸೊಸೆಯಾದ ಈ ಕುಂತಿಯೂ ವಿಶೋಕರಾಗುವಂತೆ ಮಾಡು!"

15037015a ಇತ್ಯುಕ್ತವತ್ಯಾಂ ಗಾಂಧಾರ್ಯಾಂ ಕುಂತೀ ವ್ರತಕೃಶಾನನಾ|

15037015c ಪ್ರಚ್ಚನ್ನಜಾತಂ ಪುತ್ರಂ ತಂ ಸಸ್ಮಾರಾದಿತ್ಯಸಂಭವಮ್||

ಗಾಂಧಾರಿಯೂ ಈ ರೀತಿ ಮಾತನಾಡುತ್ತಿದ್ದಾಗ ವ್ರತಗಳಿಂದ ಕೃಶಳಾಗಿದ್ದ ಕುಂತಿಯು ಆದಿತ್ಯನಿಂದ ಹುಟ್ಟಿದ್ದ ತನ್ನ ಆ ಮಗನನ್ನು ಸ್ಮರಿಸಿಕೊಂಡು ಮುಖವನ್ನು ಮುಚ್ಚಿಕೊಂಡಳು.

15037016a ತಾಮೃಷಿರ್ವರದೋ ವ್ಯಾಸೋ ದೂರಶ್ರವಣದರ್ಶನಃ|

15037016c ಅಪಶ್ಯದ್ದುಃಖಿತಾಂ ದೇವೀಂ ಮಾತರಂ ಸವ್ಯಸಾಚಿನಃ||

ದೂರದಲ್ಲಿರುವುದನ್ನು ಕೇಳಲೂ ಮತ್ತು ನೋಡಲೂ ಸಮರ್ಥನಾಗಿದ್ದ ಆ ವರದ ಋಷಿ ವ್ಯಾಸನು ಸವ್ಯಸಾಚಿಯ ತಾಯಿ ಆ ದೇವಿಯು ದುಃಖಿತಳಾಗಿದ್ದುದ್ದನು ಗಮನಿಸಿದನು.

15037017a ತಾಮುವಾಚ ತತೋ ವ್ಯಾಸೋ ಯತ್ತೇ ಕಾರ್ಯಂ ವಿವಕ್ಷಿತಮ್|

15037017c ತದ್ಬ್ರೂಹಿ ತ್ವಂ ಮಹಾಪ್ರಾಜ್ಞೇ ಯತ್ತೇ ಮನಸಿ ವರ್ತತೇ||

ಆಗ ವ್ಯಾಸನು ಅವಳಿಗೆ ಹೀಗೆ ಹೇಳಿದನು: "ಮಹಾಪ್ರಾಜ್ಞೆ! ನೀನು ನನ್ನಿಂದ ಯಾವ ಕಾರ್ಯವನ್ನು ಬಯಸುತ್ತೀಯೆ ಅದನ್ನು ಹೇಳು. ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!"

15037018a ತತಃ ಕುಂತೀ ಶ್ವಶುರಯೋಃ ಪ್ರಣಮ್ಯ ಶಿರಸಾ ತದಾ|

15037018c ಉವಾಚ ವಾಕ್ಯಂ ಸವ್ರೀಡಂ ವಿವೃಣ್ವಾನಾ ಪುರಾತನಮ್||

ಆಗ ಕುಂತಿಯು ತನ್ನ ಮಾವನಿಗೆ ಶಿರಬಾಗಿ ನಮಸ್ಕರಿಸಿ, ನಾಚಿಕೆಯಿಂದ ಮುಖಕುಂದಿದವಳಾಗಿ, ಹಿಂದೆ ನಡೆದುಹೋಗಿದ್ದುದರ ಕುರಿತು ಈ ಮಾತುಗಳನ್ನಾಡಿದಳು.

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ವ್ಯಾಸಕುಂತೀಸಂವಾದೇ ಸಪ್ತತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ವ್ಯಾಸಕುಂತೀಸಂವಾದ ಎನ್ನುವ ಮೂವತ್ತೇಳನೇ ಅಧ್ಯಾಯವು.

Related image

Comments are closed.