ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೭೬
ಋತುಪರ್ಣನ ಸ್ವದೇಶ ಗಮನ
ನಲನು ಆಗಮಿಸಿದ ಸಂತಸವನ್ನು ನಗರವೇ ಆಚರಿಸುವುದು (೧-೭). ನಲ-ಋತುಪರ್ಣರು ಪರಸ್ಪರರಲ್ಲಿ ಕ್ಷಮೆ ಕೇಳಿ ಬೀಳ್ಕೊಂಡಿದುದು (೮-೧೭). ನಲನಿಂದ ಅಶ್ವವಿದ್ಯೆಯನ್ನು ಪಡೆದು, ಬೇರೊಬ್ಬ ಸಾರಥಿಯೊಂದಿಗೆ ಋತುಪರ್ಣನು ಮರಳಿದುದು (೧೮-೧೯).
03076001 ಬೃಹದಶ್ವ ಉವಾಚ|
03076001a ಅಥ ತಾಂ ವ್ಯುಷಿತೋ ರಾತ್ರಿಂ ನಲೋ ರಾಜಾ ಸ್ವಲಂಕೃತಃ|
03076001c ವೈದರ್ಭ್ಯಾ ಸಹಿತಃ ಕಾಲ್ಯಂ ದದರ್ಶ ವಸುಧಾಧಿಪಂ||
ಬೃಹದಶ್ವನು ಹೇಳಿದನು: “ಆ ರಾತ್ರಿಯನ್ನು ಕಳೆದ ನಂತರ ರಾಜ ನಲನು ಸ್ವಲಂಕೃತನಾಗಿ ವೈದರ್ಭಿಯ ಸಹಿತ ವಸುಧಾಧಿಪನನ್ನು ಕಂಡನು.
03076002a ತತೋಽಭಿವಾದಯಾಮಾಸ ಪ್ರಯತಃ ಶ್ವಶುರಂ ನಲಃ|
03076002c ತಸ್ಯಾನು ದಮಯಂತೀ ಚ ವವಂದೇ ಪಿತರಂ ಶುಭಾ||
ನಲನು ತನ್ನ ಮಾವನಿಗೆ ವಿನಯದಿಂದ ನಮಸ್ಕರಿಸಿದನು ಮತ್ತು ಅವನ ನಂತರದಲ್ಲಿ ಶುಭೆ ದಮಯಂತಿಯು ತಂದೆಗೆ ವಂದಿಸಿದಳು.
03076003a ತಂ ಭೀಮಃ ಪ್ರತಿಜಗ್ರಾಹ ಪುತ್ರವತ್ಪರಯಾ ಮುದಾ|
03076003c ಯಥಾರ್ಹಂ ಪೂಜಯಿತ್ವಾ ತು ಸಮಾಶ್ವಾಸಯತ ಪ್ರಭುಃ|
03076003e ನಲೇನ ಸಹಿತಾಂ ತತ್ರ ದಮಯಂತೀಂ ಪತಿವ್ರತಾಂ||
ಭೀಮನು ತನ್ನ ಮಗನೋ ಎನ್ನುವ ರೀತಿಯಲ್ಲಿ ಅವನನ್ನು ಸಂತೋಷದಿಂದ ಸ್ವಾಗತಿಸಿದನು ಮತ್ತು ತಕ್ಕುದಾದ ಗೌರವವನ್ನಿತ್ತನು. ನಲನ ಜೊತೆಗಿದ್ದ ಪತಿವ್ರತೆ ದಮಯಂತಿಯನ್ನು ಪ್ರಭುವು ಸಂತವಿಸಿದನು.
03076004a ತಾಮರ್ಹಣಾಂ ನಲೋ ರಾಜಾ ಪ್ರತಿಗೃಹ್ಯ ಯಥಾವಿಧಿ|
03076004c ಪರಿಚರ್ಯಾಂ ಸ್ವಕಾಂ ತಸ್ಮೈ ಯಥಾವತ್ಪ್ರತ್ಯವೇದಯತ್||
ಯಥಾವಿಧಿಯಲ್ಲಿ ಗೌರವವನ್ನು ಸ್ಪೀಕರಿಸಿ ರಾಜ ನಲನು ಅವನಿಗೆ ತನ್ನ ಗೌರವವನ್ನು ಅರ್ಪಿಸಿದನು.
03076005a ತತೋ ಬಭೂವ ನಗರೇ ಸುಮಹಾನ್ ಹರ್ಷನಿಸ್ವನಃ|
03076005c ಜನಸ್ಯ ಸಂಪ್ರಹೃಷ್ಟಸ್ಯ ನಲಂ ದೃಷ್ಟ್ವಾ ತಥಾಗತಂ||
ಈ ರೀತಿ ನಲನ ಆಗಮನವನ್ನು ನೋಡಿ ನಗರದಲ್ಲೆಲ್ಲಾ ಸಂಪ್ರಹೃಷ್ಟ ಜನರ ಮಹತ್ತರ ಹರ್ಷೋದ್ಗಾರವಾಯಿತು.
03076006a ಅಶೋಭಯಚ್ಚ ನಗರಂ ಪತಾಕಾಧ್ವಜಮಾಲಿನಂ|
03076006c ಸಿಕ್ತಸಮ್ಮೃಷ್ಟಪುಷ್ಪಾಢ್ಯಾ ರಾಜಮಾರ್ಗಾಃ ಕೃತಾಸ್ತದಾ||
ಪತಾಕ ಧ್ವಜ ಮಾಲೆಗಳಿಂದ ನಗರವು ಶೋಭೆಗೊಂಡಿತು. ರಾಜ ಮಾರ್ಗವು ಸಿಂಚಿಸಲ್ಪಟ್ಟಿತು ಮತ್ತು ಪುಷ್ಪಗಳಿಂದ ಹಾಸಿಸಲ್ಪಟ್ಟಿತು.
03076007a ದ್ವಾರಿ ದ್ವಾರಿ ಚ ಪೌರಾಣಾಂ ಪುಷ್ಪಭಂಗಃ ಪ್ರಕಲ್ಪಿತಃ|
03076007c ಅರ್ಚಿತಾನಿ ಚ ಸರ್ವಾಣಿ ದೇವತಾಯತನಾನಿ ಚ||
ಪೌರರ ದ್ವಾರ ದ್ವಾರಗಳಲ್ಲಿ ಪುಷ್ಪಗುಚ್ಚಗಳನ್ನು ಇಡಲಾಗಿತ್ತು ಮತ್ತು ಎಲ್ಲಾ ದೇವಾಲಯಗಳಲ್ಲಿ ಅರ್ಚನೆಗಳನ್ನು ಏರ್ಪಡಿಸಲಾಯಿತು.
03076008a ಋತುಪರ್ಣೋಽಪಿ ಶುಶ್ರಾವ ಬಾಹುಕಚ್ಚದ್ಮಿನಂ ನಲಂ|
03076008c ದಮಯಂತ್ಯಾ ಸಮಾಯುಕ್ತಂ ಜಹೃಷೇ ಚ ನರಾಧಿಪಃ||
ನರಾಧಿಪ ಋತುಪರ್ಣನೂ ಕೂಡ ಬಾಹುಕನು ವೇಷಬದಲಿಸಿ ನಲನಾಗಿದ್ದುದನ್ನು ಮತ್ತು ದಮಯಂತಿಯನ್ನು ಪುನಃ ಸೇರಿದುದನ್ನು ಕೇಳಿ ಬಹಳ ಹರ್ಷಿತನಾದನು.
03076009a ತಮಾನಾಯ್ಯ ನಲೋ ರಾಜಾ ಕ್ಷಮಯಾಮಾಸ ಪಾರ್ಥಿವಂ|
03076009c ಸ ಚ ತಂ ಕ್ಷಮಯಾಮಾಸ ಹೇತುಭಿರ್ಬುದ್ಧಿಸಮ್ಮತಃ||
ರಾಜ ನಲನು ಅವನನ್ನು ಕರೆಯಿಸಿ ಪಾರ್ಥಿವನ ಕ್ಷಮೆಯನ್ನು ಕೇಳಿದನು. ಅವನು ಕೂಡ ಬುದ್ಧಿಸಮ್ಮತ ಕಾರಣಗಳಿಗಾಗಿ ಕ್ಷಮಿಸಿದನು.
03076010a ಸ ಸತ್ಕೃತೋ ಮಹೀಪಾಲೋ ನೈಷಧಂ ವಿಸ್ಮಯಾನ್ವಿತಃ|
03076010c ದಿಷ್ಟ್ಯಾ ಸಮೇತೋ ದಾರೈಃ ಸ್ವೈರ್ಭವಾನಿತ್ಯಭ್ಯನಂದತ||
ಸತ್ಕೃತ ಮಹೀಪಾಲನು ವಿಸ್ಮಯಾನ್ವಿತನಾಗಿ ನೈಷಧನು ತನ್ನ ಪತ್ನಿಯನ್ನು ಪುನಃ ಸೇರಿದ್ದುದಕ್ಕಾಗಿ ಅಭಿನಂದಿಸಿದನು.
03076011a ಕಚ್ಚಿತ್ತು ನಾಪರಾಧಂ ತೇ ಕೃತವಾನಸ್ಮಿ ನೈಷಧ|
03076011c ಅಜ್ಞಾತವಾಸಂ ವಸತೋ ಮದ್ಗೃಹೇ ನಿಷಧಾಧಿಪ||
“ನೈಷಧ! ನಿಷಧಾಧಿಪ! ಅಜ್ಞಾತವಾಸಿಯಾಗಿ ನನ್ನ ಮನೆಯಲ್ಲಿ ವಾಸಿಸುತ್ತಿರುವಾಗ ನಿನಗೆ ಎನಾದರೂ ಅಪರಾಧವನ್ನು ಮಾಡಿರಬಹುದು.
03076012a ಯದಿ ವಾ ಬುದ್ಧಿಪೂರ್ವಾಣಿ ಯದ್ಯಬುದ್ಧಾನಿ ಕಾನಿ ಚಿತ್|
03076012c ಮಯಾ ಕೃತಾನ್ಯಕಾರ್ಯಾಣಿ ತಾನಿ ಮೇ ಕ್ಷಂತುಮರ್ಹಸಿ||
ಒಮ್ಮೆ ನಾನು ತಿಳಿದೋ ಅಥವಾ ತಿಳಿಯದೆಯೋ ನಿನಗೆ ನನ್ನಿಂದ ಎನಾದರೂ ತಪ್ಪಾಗಿದ್ದರೆ ನನ್ನನ್ನು ನೀನು ಕ್ಷಮಿಸ ತಕ್ಕದ್ದು.”
03076013 ನಲ ಉವಾಚ|
03076013a ನ ಮೇಽಪರಾಧಂ ಕೃತವಾಂಸ್ತ್ವಂ ಸ್ವಲ್ಪಮಪಿ ಪಾರ್ಥಿವ|
03076013c ಕೃತೇಽಪಿ ಚ ನ ಮೇ ಕೋಪಃ ಕ್ಷಂತವ್ಯಂ ಹಿ ಮಯಾ ತವ||
ನಲನು ಹೇಳಿದನು: “ಪಾರ್ಥಿವ! ನಿನ್ನಿಂದ ನನ್ನ ಮೇಲೆ ಸ್ವಲ್ಪವೂ ಅಪರಾಧವಾಗಲಿಲ್ಲ. ಒಮ್ಮೆ ಆಗಿದ್ದರೂ ನನಗೆ ಅದರ ಕುರಿತು ಕೋಪವಿಲ್ಲ. ನಾನು ಅದನ್ನು ಕ್ಷಮಿಸಲೇ ಬೇಕು.
03076014a ಪೂರ್ವಂ ಹ್ಯಸಿ ಸಖಾ ಮೇಽಸಿ ಸಂಬಂಧೀ ಚ ನರಾಧಿಪ|
03076014c ಅತ ಊರ್ಧ್ವಂ ತು ಭೂಯಸ್ತ್ವಂ ಪ್ರೀತಿಮಾಹರ್ತುಮರ್ಹಸಿ||
ನರಾಧಿಪ! ಈ ಪೂರ್ವದಲ್ಲಿ ನೀನು ನನ್ನ ಸಖನೂ ಮತ್ತು ಸಂಬಂಧಿಯೂ ಆಗಿರುವೆ. ಇನ್ನು ಮುಂದೆಯೂ ಕೂಡ ನನ್ನ ಮೇಲೆ ನಿನ್ನ ಪ್ರೀತಿಯಿರತಕ್ಕದ್ದು.
03076015a ಸರ್ವಕಾಮೈಃ ಸುವಿಹಿತಃ ಸುಖಮಸ್ಮ್ಯುಷಿತಸ್ತ್ವಯಿ|
03076015c ನ ತಥಾ ಸ್ವಗೃಹೇ ರಾಜನ್ಯಥಾ ತವ ಗೃಹೇ ಸದಾ||
ರಾಜನ್! ನನ್ನ ಮನೆಯಲ್ಲಿಗಿಂತಲೂ ನಿನ್ನ ಮನೆಯಲ್ಲಿ ನನ್ನ ಎಲ್ಲ ಆಸೆಗಳೂ ವಿಹಿತವಾಗಿ ಸುಖವಾಗಿದ್ದೆ.
03076016a ಇದಂ ಚೈವ ಹಯಜ್ಞಾನಂ ತ್ವದೀಯಂ ಮಯಿ ತಿಷ್ಠತಿ|
03076016c ತದುಪಾಕರ್ತುಮಿಚ್ಚಾಮಿ ಮನ್ಯಸೇ ಯದಿ ಪಾರ್ಥಿವ||
ಪಾರ್ಥಿವ! ನಿನ್ನ ಅನುಮತಿಯಿದ್ದರೆ ನನ್ನಲ್ಲಿರುವ ಈ ಅಶ್ವಜ್ಞಾನವನ್ನು ನಿನಗೆ ಕೊಡಲು ಇಚ್ಚಿಸುತ್ತೇನೆ.””
03076017 ಬೃಹದಶ್ವ ಉವಾಚ|
03076017a ಏವಮುಕ್ತ್ವಾ ದದೌ ವಿದ್ಯಾಂ ಋತುಪರ್ಣಾಯ ನೈಷಧಃ|
03076017c ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ||
ಬೃಹದಶ್ವನು ಹೇಳಿದನು: “ಹೀಗೆ ಹೇಳಿ ನೈಷಧನು ಋತುಪರ್ಣನಿಗೆ ವಿದ್ಯೆಯನ್ನಿತ್ತನು; ಮತ್ತು ಅವನು ಅದನ್ನು ವಿಧಿಕರ್ಮಪೂರಕವಾಗಿ ಸ್ವೀಕರಿಸಿದನು.
03076018a ತತೋ ಗೃಹ್ಯಾಶ್ವಹೃದಯಂ ತದಾ ಭಾಂಗಸ್ವರಿರ್ನೃಪಃ|
03076018c ಸೂತಮನ್ಯಮುಪಾದಾಯ ಯಯೌ ಸ್ವಪುರಮೇವ ಹಿ||
ಅಶ್ವಹೃದಯವನ್ನು ಪಡೆದ ನಂತರ ನೃಪ ಭಾಂಗಸ್ವರಿಯು ಬೇರೆ ಸೂತನೊಬ್ಬನನ್ನು ನಿಯೋಜಿಸಿ ತನ್ನ ನಗರಿಗೆ ತೆರಳಿದನು.
03076019a ಋತುಪರ್ಣೇ ಪ್ರತಿಗತೇ ನಲೋ ರಾಜಾ ವಿಶಾಂ ಪತೇ|
03076019c ನಗರೇ ಕುಂಡಿನೇ ಕಾಲಂ ನಾತಿದೀರ್ಘಮಿವಾವಸತ್||
ವಿಶಾಂಪತೇ! ಋತುಪರ್ಣನು ತೆರಳಿದ ನಂತರ ರಾಜ ನಲನು ಕುಂಡಿನೀ ನಗರದಲ್ಲಿ ದೀರ್ಘಕಾಲದವರೆಗೆ ವಾಸಿಸಲಿಲ್ಲ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣಸ್ವದೇಶಗಮನೇ ಷಟ್ಸಪ್ತತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣಸ್ವದೇಶಗಮನ ಎನ್ನುವ ಎಪ್ಪತ್ತಾರನೆಯ ಅಧ್ಯಾಯವು.
