ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೫೭
ನಲನು ದ್ಯೂತವಾಡುವುದನ್ನು ನಿಲ್ಲಿಸಬೇಕೆಂದು ದಮಯಂತಿಯು ಪ್ರಯತ್ನಿಸಿ ಸೋತು, ಸೂತ ವಾರ್ಷ್ಣೇಯನೊಂದಿಗೆ ತನ್ನ ಅವಳಿ ಮಕ್ಕಳನ್ನು ತಂದೆ ಭೀಮನ ಮನೆಗೆ ಕಳುಹಿಸಿದುದು (೧-೧೮). ವಾರ್ಷ್ಣೇಯನು ಮಕ್ಕಳನ್ನು ಕುಂಡಿನಪುರದಲ್ಲಿ ಇರಿಸಿ, ಅಯೋಧ್ಯೆಯ ಅರಸ ಋತುಪರ್ಣನಲ್ಲಿ ಸಾರಥಿಯಾಗಿ ಸೇರಿಕೊಂಡಿದುದು (೧೯-೨೩).
03057001 ಬೃಹದಶ್ವ ಉವಾಚ|
03057001a ದಮಯಂತೀ ತತೋ ದೃಷ್ಟ್ವಾ ಪುಣ್ಯಶ್ಲೋಕಂ ನರಾಧಿಪಂ|
03057001c ಉನ್ಮತ್ತವದನುನ್ಮತ್ತಾ ದೇವನೇ ಗತಚೇತಸಂ||
03057002a ಭಯಶೋಕಸಮಾವಿಷ್ಟಾ ರಾಜನ್ಭೀಮಸುತಾ ತತಃ|
03057002c ಚಿಂತಯಾಮಾಸ ತತ್ಕಾರ್ಯಂ ಸುಮಹತ್ಪಾರ್ಥಿವಂ ಪ್ರತಿ||
ಬೃಹದಶ್ವನು ಹೇಳಿದನು: “ನರಾಧಿಪ ಪುಣ್ಯಶ್ಲೋಕನು ಆಟದಲ್ಲಿ ಉನ್ಮತ್ತನಾಗಿ ಚೇತನವನ್ನೇ ಕಳೆದುಕೊಂಡಿರುವುದನ್ನು ಉನ್ಮತ್ತಳಲ್ಲದ ದಮಯಂತಿಯು ನೋಡಿದಳು. ರಾಜ! ನಂತರ ಭಯಶೋಕಸಮಾವಿಷ್ಟಳಾದ ಭೀಮಸುತೆಯು ಪಾರ್ಥಿವನ ಸಲುವಾಗಿ ಸುಮಹತ್ ಕಾರ್ಯದ ಬಗ್ಗೆ ಯೋಚಿಸಿದಳು.
03057003a ಸಾ ಶಂಕಮಾನಾ ತತ್ಪಾಪಂ ಚಿಕೀರ್ಷಂತೀ ಚ ತತ್ಪ್ರಿಯಂ|
03057003c ನಲಂ ಚ ಹೃತಸರ್ವಸ್ವಮುಪಲಭ್ಯೇದಮಬ್ರವೀತ್||
ಅವನ ಪಾಪವನ್ನು ಶಂಕಿಸುತ್ತಾ, ಅವನಿಗೆ ಪ್ರಿಯವಾದುದನ್ನು ಮಾಡುವ ಇಚ್ಛೆಯಿಂದ, ನಲನು ಸರ್ವವನ್ನೂ ಕಳೆದುಕೊಳ್ಳುತ್ತಿದ್ದಾನೆ ಎಂದು ಕೇಳಿ ಅವಳ ಸೇವಕಿಗೆ ಹೇಳಿದಳು:
03057004a ಬೃಹತ್ಸೇನೇ ವ್ರಜಾಮಾತ್ಯಾನಾನಾಯ್ಯ ನಲಶಾಸನಾತ್|
03057004c ಆಚಕ್ಷ್ವ ಯದ್ಧೃತಂ ದ್ರವ್ಯಮವಶಿಷ್ಟಂ ಚ ಯದ್ವಸು||
“ಬೃಹತ್ಸೇನೆ! ನಲನ ಶಾಸನದಂತೆ ಹೋಗಿ ಅಮಾತ್ಯರನ್ನೆಲ್ಲರನ್ನೂ ಕರೆದುಕೊಂಡು ಬಾ. ಯಾವ ವಸ್ತುಗಳನ್ನು ಈಗಾಗಲೇ ಕಳೆದುಕೊಂಡಿದ್ದೇವೆ ಮತ್ತು ಯಾವವು ಇನ್ನೂ ನಮ್ಮ ಹತ್ತಿರ ಇವೆ ಎನ್ನುವುದನ್ನೂ ಅವರಿಗೆ ಹೇಳು.”
03057005a ತತಸ್ತೇ ಮಂತ್ರಿಣಃ ಸರ್ವೇ ವಿಜ್ಞಾಯ ನಲಶಾಸನಂ|
03057005c ಅಪಿ ನೋ ಭಾಗಧೇಯಂ ಸ್ಯಾದಿತ್ಯುಕ್ತ್ವಾ ಪುನರಾವ್ರಜನ್||
ಸರ್ವ ಮಂತ್ರಿಗಳೂ ನಲಶಾಸನವನ್ನು ತಿಳಿದು ಭಾಗ್ಯವು ನಮಗೆ ಈಗ ಮರಳಿಬಂದಿದೆಯೋ ಎನ್ನುತ್ತಾ ಬಂದರು.
03057006a ತಾಸ್ತು ಸರ್ವಾಃ ಪ್ರಕೃತಯೋ ದ್ವಿತೀಯಂ ಸಮುಪಸ್ಥಿತಾಃ|
03057006c ನ್ಯವೇದಯದ್ಭೀಮಸುತಾ ನ ಚ ತತ್ಪ್ರತ್ಯನಂದತ||
ಭೀಮಸುತೆಯು ಅವನಿಗೆ ಪ್ರಜೆಗಳು ಎರಡನೇ ಬಾರಿ ಮತ್ತೆ ಬಂದು ಉಪಸ್ಥಿತರಾಗಿದ್ದಾರೆ ಎಂದು ನಿವೇದಿಸಿದಳು, ಆದರೆ ಇದು ಅವನಿಗೆ ಇಷ್ಟವಾಗಲಿಲ್ಲ.
03057007a ವಾಕ್ಯಮಪ್ರತಿನಂದಂತಂ ಭರ್ತಾರಮಭಿವೀಕ್ಷ್ಯ ಸಾ|
03057007c ದಮಯಂತೀ ಪುನರ್ವೇಶ್ಮ ವ್ರೀಡಿತಾ ಪ್ರವಿವೇಶ ಹ||
ತನ್ನ ಈ ವಾಕ್ಯಗಳು ಪತಿಗೆ ಸಂತಸವನ್ನು ತರಲಿಲ್ಲ ಎಂದು ನೋಡಿದ ದಮಯಂತಿಯು ಬಹು ದುಃಖದಿಂದ ಪುನಃ ತನ್ನ ಮನೆಗೆ ಮರಳಿದಳು.
03057008a ನಿಶಮ್ಯ ಸತತಂ ಚಾಕ್ಷಾನ್ಪುಣ್ಯಶ್ಲೋಕಪರಾಙ್ಮುಖಾನ್|
03057008c ನಲಂ ಚ ಹೃತಸರ್ವಸ್ವಂ ಧಾತ್ರೀಂ ಪುನರುವಾಚ ಹ||
ದಾಳಗಳು ಸತತವಾಗಿ ಪುಣ್ಯಶ್ಲೋಕನಿಗೆ ಪರಾಙ್ಮುಖವಾಗಿದ್ದವು ಮತ್ತು ನಲನು ಸರ್ವಸ್ವವನ್ನೂ ಕಳೆದುಕೊಂಡ ಎನ್ನುವುದನ್ನು ಕೇಳಿ ತನ್ನ ಸೇವಕಿಗೆ ಪುನಃ ಹೇಳಿದಳು.
03057009a ಬೃಹತ್ಸೇನೇ ಪುನರ್ಗಚ್ಚ ವಾರ್ಷ್ಣೇಯಂ ನಲಶಾಸನಾತ್|
03057009c ಸೂತಮಾನಯ ಕಲ್ಯಾಣಿ ಮಹತ್ಕಾರ್ಯಮುಪಸ್ಥಿತಂ||
“ಬೃಹತ್ಸೇನೆ! ನಲಶಾಸನದಂತೆ ಸೂತ ವಾರ್ಷ್ಣೇಯನನ್ನು ಕರೆದುಕೊಂಡು ಬಾ. ಕಲ್ಯಾಣಿ! ಮಹತ್ತರ ಕಾರ್ಯವೊಂದನ್ನು ಮಾಡುವುದಿದೆ.”
03057010a ಬೃಹತ್ಸೇನಾ ತು ತಚ್ಶ್ರುತ್ವಾ ದಮಯಂತ್ಯಾಃ ಪ್ರಭಾಷಿತಂ|
03057010c ವಾರ್ಷ್ಣೇಯಮಾನಯಾಮಾಸ ಪುರುಷೈರಾಪ್ತಕಾರಿಭಿಃ||
ದಮಯಂತಿಯ ಈ ಮಾತುಗಳನ್ನು ಕೇಳಿದ ಬೃಹತ್ಸೇನೆಯು ಆಪ್ತಕಾರಿ ಪುರುಷರ ಮೂಲಕ ವಾರ್ಷ್ಣೇಯನನ್ನು ಕರೆಸಿದಳು.
03057011a ವಾರ್ಷ್ಣೇಯಂ ತು ತತೋ ಭೈಮೀ ಸಾಂತ್ವಯಂ ಶ್ಲಕ್ಷ್ಣಯಾ ಗಿರಾ|
03057011c ಉವಾಚ ದೇಶಕಾಲಜ್ಞಾ ಪ್ರಾಪ್ತಕಾಲಮನಿಂದಿತಾ||
ದೇಶಕಾಲಜ್ಞೆ ಭೈಮಿಯು ಕಾಲವು ಪ್ರಾಪ್ತವಾಗಿದೆ ಎಂದು ತಿಳಿದು ಮೃದುವಾದ ಮಾತುಗಳಲ್ಲಿ, ಸಾಂತ್ವನಿಸುತ್ತಾ ವಾರ್ಷ್ಣೇಯನಿಗೆ ಹೇಳಿದಳು:
03057012a ಜಾನೀಷೇ ತ್ವಂ ಯಥಾ ರಾಜಾ ಸಮ್ಯಗ್ವೃತ್ತಃ ಸದಾ ತ್ವಯಿ|
03057012c ತಸ್ಯ ತ್ವಂ ವಿಷಮಸ್ಥಸ್ಯ ಸಾಹಾಯ್ಯಂ ಕರ್ತುಮರ್ಹಸಿ||
03057013a ಯಥಾ ಯಥಾ ಹಿ ನೃಪತಿಃ ಪುಷ್ಕರೇಣೇಹ ಜೀಯತೇ|
03057013c ತಥಾ ತಥಾಸ್ಯ ದ್ಯೂತೇ ವೈ ರಾಗೋ ಭೂಯೋಽಭಿವರ್ಧತೇ||
“ರಾಜನು ನಿನ್ನ ಕುರಿತು ಹೇಗೆ ಸದಾ ಒಳ್ಳೆಯದಾಗಿ ನಡೆದುಕೊಳ್ಳುತ್ತಿದ್ದನು ಎಂದು ನೀನು ತಿಳಿದಿದ್ದೀಯೆ. ಈ ವಿಷಮ ಸಮಯದಲ್ಲಿ ಅವನಿಗೆ ನೀನು ಸಹಾಯಮಾಡಬೇಕಾಗಿದೆ. ಪುಷ್ಕರನಿಂದ ನೃಪತಿಯು ಜಯಸಲ್ಪಡುತ್ತಾ ಬಂದ ಹಾಗೆ ದ್ಯೂತದಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಬರುತ್ತಿದೆ.
03057014a ಯಥಾ ಚ ಪುಷ್ಕರಸ್ಯಾಕ್ಷಾ ವರ್ತಂತೇ ವಶವರ್ತಿನಃ|
03057014c ತಥಾ ವಿಪರ್ಯಯಶ್ಚಾಪಿ ನಲಸ್ಯಾಕ್ಷೇಷು ದೃಶ್ಯತೇ||
ದಾಳಗಳು ಪುಷ್ಕರನ ವಶದಲ್ಲಿರುವಂತೆ ವರ್ತಿಸುತ್ತಿವೆ. ಹಾಗೆಯೇ ದಾಳಗಳು ನಲನಿಗೆ ವಿನಾಶವನ್ನೇ ತರುತ್ತಿರುವುದು ಕಾಣುತ್ತಿದೆ.
03057015a ಸುಹೃತ್ಸ್ವಜನವಾಕ್ಯಾನಿ ಯಥಾವನ್ನ ಶೃಣೋತಿ ಚ|
03057015c ನೂನಂ ಮನ್ಯೇ ನ ಶೇಷೋಽಸ್ತಿ ನೈಷಧಸ್ಯ ಮಹಾತ್ಮನಃ||
ಸುಹೃದಯರ ಮತ್ತು ಸ್ವಜನರ ವಾಕ್ಯಗಳನ್ನು ಕೇಳಬೇಕಿದ್ದರೂ ಕೇಳುತ್ತಿಲ್ಲ. ಮಹಾತ್ಮ ನೈಷಧನ ಹತ್ತಿರ ಏನೂ ಉಳಿದಿಲ್ಲ ಎಂದು ನನಗನ್ನಿಸುತ್ತಿದೆ.
03057016a ಯತ್ರ ಮೇ ವಚನಂ ರಾಜಾ ನಾಭಿನಂದತಿ ಮೋಹಿತಃ|
03057016c ಶರಣಂ ತ್ವಾಂ ಪ್ರಪನ್ನಾಸ್ಮಿ ಸಾರಥೇ ಕುರು ಮದ್ವಚಃ|
03057016e ನ ಹಿ ಮೇ ಶುಧ್ಯತೇ ಭಾವಃ ಕದಾ ಚಿದ್ವಿನಶೇದಿತಿ||
ಸಾರಥಿ! ಮೋಹಿತ ರಾಜನು ನನ್ನ ಮಾತನ್ನು ಅಭಿನಂದಿಸದೇ ಇದ್ದುದರಿಂದ ನಾನು ನಿನ್ನ ಶರಣು ಬಂದಿದ್ದೇನೆ. ನನ್ನ ಮಾತಿನಂತೆ ಮಾಡು. ಯಾವಾಗಲಾದರೂ ವಿನಾಶವೊದಗುತ್ತದೆ ಎಂದು ನನ್ನ ಮನಸ್ಸಿಗೆ ಶಾಂತಿಯೇ ಇಲ್ಲದಾಗಿದೆ.
03057017a ನಲಸ್ಯ ದಯಿತಾನಶ್ವಾನ್ಯೋಜಯಿತ್ವಾ ಮಹಾಜವಾನ್|
03057017c ಇದಮಾರೋಪ್ಯ ಮಿಥುನಂ ಕುಂಡಿನಂ ಯಾತುಮರ್ಹಸಿ||
ನಲನ ಪ್ರೀತಿಯ ಮಹಾವೇಗವುಳ್ಳ ಅಶ್ವಗಳನ್ನು ರಥಕ್ಕೆ ಕಟ್ಟಿ, ಅದರಲ್ಲಿ ನನ್ನ ಅವಳಿ ಮಕ್ಕಳನ್ನು ಕುಂಡಿನಪುರಕ್ಕೆ ಕರೆದುಕೊಂಡು ಹೋಗು.
03057018a ಮಮ ಜ್ಞಾತಿಷು ನಿಕ್ಷಿಪ್ಯ ದಾರಕೌ ಸ್ಯಂದನಂ ತಥಾ|
03057018c ಅಶ್ವಾಂಶ್ಚೈತಾನ್ಯಥಾಕಾಮಂ ವಸ ವಾನ್ಯತ್ರ ಗಚ್ಚ ವಾ||
ನನ್ನ ಬಂಧುಗಳಲ್ಲಿ ಮಕ್ಕಳನ್ನು, ಕುದುರೆಗಳನ್ನು ಮತ್ತು ರಥವನ್ನು ಇರಿಸಿ, ನೀನು ಅಲ್ಲಿ ಉಳಿಯಬಹುದು ಅಥವಾ ಬೇಕಾದ ಬೇರೆ ಕಡೆ ಹೋಗಬಹುದು.”
03057019a ದಮಯಂತ್ಯಾಸ್ತು ತದ್ವಾಕ್ಯಂ ವಾರ್ಷ್ಣೇಯೋ ನಲಸಾರಥಿಃ|
03057019c ನ್ಯವೇದಯದಶೇಷೇಣ ನಲಾಮಾತ್ಯೇಷು ಮುಖ್ಯಶಃ||
ದಮಯಂತಿಯ ಈ ವಾಖ್ಯಗಳೆಲ್ಲವನ್ನೂ ನಲಸಾರಥಿ ವಾರ್ಷ್ಣೇಯನು ನಲನ ಮುಖ್ಯ ಅಮಾತ್ಯರುಗಳಲ್ಲಿ ನಿವೇದಿಸಿದನು.
03057020a ತೈಃ ಸಮೇತ್ಯ ವಿನಿಶ್ಚಿತ್ಯ ಸೋಽನುಜ್ಞಾತೋ ಮಹೀಪತೇ|
03057020c ಯಯೌ ಮಿಥುನಮಾರೋಪ್ಯ ವಿದರ್ಭಾಂಸ್ತೇನ ವಾಹಿನಾ||
ಮಹೀಪತೇ! ಅವರೆಲ್ಲರೂ ಸೇರಿ ನಿಶ್ಚಯಿಸಿ ಅವನಿಗೆ ಅನುಮತಿಯನ್ನು ಕೊಟ್ಟನಂತರ ಅವನು ಮಿಥುನರನ್ನು ವಾಹನದಲ್ಲಿ ಕುಳ್ಳಿರಿಸಿ ವಿದರ್ಭಕ್ಕೆ ಕರೆದೊಯ್ದನು.
03057021a ಹಯಾಂಸ್ತತ್ರ ವಿನಿಕ್ಷಿಪ್ಯ ಸೂತೋ ರಥವರಂ ಚ ತಂ|
03057021c ಇಂದ್ರಸೇನಾಂ ಚ ತಾಂ ಕನ್ಯಾಮಿಂದ್ರಸೇನಂ ಚ ಬಾಲಕಂ||
ಸೂತನು ಅಲ್ಲಿ ಕನ್ಯೆ ಇಂದ್ರಸೇನೆಯನ್ನು ಮತ್ತು ಬಾಲಕ ಇಂದ್ರಸೇನನನ್ನು ಹಾಗೂ ಕುದುರೆ-ರಥಗಳನ್ನಿರಿಸಿದನು.
03057022a ಆಮಂತ್ರ್ಯ ಭೀಮಂ ರಾಜಾನಮಾರ್ತಃ ಶೋಚನ್ನಲಂ ನೃಪಂ|
03057022c ಅಟಮಾನಸ್ತತೋಽಯೋಧ್ಯಾಂ ಜಗಾಮ ನಗರೀಂ ತದಾ||
ಆರ್ತನಾಗಿ ಶೋಕದಿಂದ ನೃಪ ನಲನ ಕುರಿತು ಭೀಮನಿಗೆ ತಿಳಿಸಿದನು ಮತ್ತು ಹಾಗೆಯೇ ತಿರುಗಾಡುತ್ತಾ ಅಯೋಧ್ಯಾ ನಗರಿಗೆ ಬಂದನು.
03057023a ಋತುಪರ್ಣಂ ಸ ರಾಜಾನಮುಪತಸ್ಥೇ ಸುದುಃಖಿತಃ|
03057023c ಭೃತಿಂ ಚೋಪಯಯೌ ತಸ್ಯ ಸಾರಥ್ಯೇನ ಮಹೀಪತೇ||
ಮಹೀಪತೇ! ದುಃಖಿತನಾಗಿ ಅಲ್ಲಿ ರಾಜ ಋತುಪರ್ಣನನ್ನು ಭೆಟ್ಟಿಮಾಡಿ ಅವನ ಸಾರಥಿಯಾಗಿ ಸೇರಿಕೊಂಡನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕುಂಡಿನಂಪ್ರತಿ ಕುಮಾರಯೋ ಪ್ರಸ್ಥಾಪನೇ ಸಪ್ತಪಂಚಾಶತ್ತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕುಂಡಿನದ ಕಡೆ ಕುಮಾರರ ಪ್ರಯಾಣ ಎನ್ನುವ ಐವತ್ತೇಳನೆಯ ಅಧ್ಯಾಯವು.
