ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೨೭
ಘೋಷಯಾತ್ರೆಯ ಕುರಿತು ಸಮಾಲೋಚನೆ
ಪಾಂಡವರಿರುವಲ್ಲಿಗೆ ಹೋಗಲು ತನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲವೆಂದು ದುರ್ಯೋಧನನು ಹೇಳಲು (೧-೧೬), ಕರ್ಣನು ಘೋಷಯಾತ್ರೆಯ ನೆಪದಲ್ಲಿ ಹೋಗಬಹುದೆಂದು ಸೂಚಿಸುವುದು (೧೭-೨೪).
03227001 ವೈಶಂಪಾಯನ ಉವಾಚ|
03227001a ಕರ್ಣಸ್ಯ ವಚನಂ ಶ್ರುತ್ವಾ ರಾಜಾ ದುರ್ಯೋಧನಸ್ತದಾ|
03227001c ಹೃಷ್ಟೋ ಭೂತ್ವಾ ಪುನರ್ದೀನ ಇದಂ ವಚನಮಬ್ರವೀತ್||
ವೈಶಂಪಾಯನನು ಹೇಳಿದನು: “ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಮೊದಲು ಸಂತೋಷಗೊಂಡು, ನಂತರ ದೀನನಾಗಿ ಈ ಮಾತನ್ನಾಡಿದನು.
03227002a ಬ್ರವೀಷಿ ಯದಿದಂ ಕರ್ಣ ಸರ್ವಂ ಮೇ ಮನಸಿ ಸ್ಥಿತಂ|
03227002c ನ ತ್ವಭ್ಯನುಜ್ಞಾಂ ಲಪ್ಸ್ಯಾಮಿ ಗಮನೇ ಯತ್ರ ಪಾಂಡವಾಃ||
“ಕರ್ಣ! ನೀನು ಹೇಳಿದುದೆಲ್ಲವೂ ನನ್ನ ಮನಸ್ಸಿಗೂ ಬಂದಿತ್ತು. ಆದರೆ ಪಾಂಡವರಿರುವಲ್ಲಿಗೆ ಹೋಗಲು ನನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲ.
03227003a ಪರಿದೇವತಿ ತಾನ್ವೀರಾನ್ಧೃತರಾಷ್ಟ್ರೋ ಮಹೀಪತಿಃ|
03227003c ಮನ್ಯತೇಽಭ್ಯಧಿಕಾಂಶ್ಚಾಪಿ ತಪೋಯೋಗೇನ ಪಾಂಡವಾನ್||
ಮಹೀಪತಿ ಧೃತರಾಷ್ಟ್ರನು ಆ ವೀರರ ಕುರಿತು ಪರಿತಪಿಸುತ್ತಾನೆ. ಈಗಂತೂ ಪಾಂಡವರ ತಪೋಯೋಗದಿಂದ ಅವರನ್ನು ಇನ್ನೂ ಹೆಚ್ಚಾಗಿ ಗೌರವಿಸುತ್ತಾನೆ.
03227004a ಅಥ ವಾಪ್ಯನುಬುಧ್ಯೇತ ನೃಪೋಽಸ್ಮಾಕಂ ಚಿಕೀರ್ಷಿತಂ|
03227004c ಏವಮಪ್ಯಾಯತಿಂ ರಕ್ಷನ್ನಾಭ್ಯನುಜ್ಞಾತುಮರ್ಹತಿ||
ಈಗ ನೃಪನು ನಮ್ಮ ಇಂಗಿತವನ್ನು ತಿಳಿದರೆ, ಭವಿಷ್ಯದಿಂದ ರಕ್ಷಿತನಾಗಲು ನಮ್ಮನ್ನು ಹೋಗಲು ಬಿಡುವುದಿಲ್ಲ.
03227005a ನ ಹಿ ದ್ವೈತವನೇ ಕಿಂ ಚಿದ್ವಿದ್ಯತೇಽನ್ಯತ್ಪ್ರಯೋಜನಂ|
03227005c ಉತ್ಸಾದನಮೃತೇ ತೇಷಾಂ ವನಸ್ಥಾನಾಂ ಮಮ ದ್ವಿಷಾಂ||
ಏಕೆಂದರೆ ವನದಲ್ಲಿ ವಾಸಿಸುವ ಆ ನನ್ನ ದ್ವೇಷಿಗಳನ್ನು ಕಿತ್ತೊಗೆಯುವ ಕಾರಣವೊಂದನ್ನು ಬಿಟ್ಟರೆ ದ್ವೈತವನಕ್ಕೆ ಹೋಗಲು ಬೇರೆ ಯಾವುದೇ ಕಾರಣವಿಲ್ಲ!
03227006a ಜಾನಾಸಿ ಹಿ ಯಥಾ ಕ್ಷತ್ತಾ ದ್ಯೂತಕಾಲ ಉಪಸ್ಥಿತೇ|
03227006c ಅಬ್ರವೀದ್ಯಚ್ಚ ಮಾಂ ತ್ವಾಂ ಚ ಸೌಬಲಂ ಚ ವಚಸ್ತದಾ||
ದ್ಯೂತಕಾಲದಲ್ಲಿ ಉಪಸ್ಥಿತನಿದ್ದ ಆ ಕ್ಷತ್ತನು ನನಗೆ, ನಿನಗೆ ಮತ್ತು ಸೌಬಲನಿಗೆ ಹೇಳಿದ್ದುದು ಮತ್ತು ಅವನ ಇತರ ತಕರಾರುಗಳು ನಿನಗೆ ತಿಳಿದೇ ಇವೆ.
03227007a ತಾನಿ ಪೂರ್ವಾಣಿ ವಾಕ್ಯಾನಿ ಯಚ್ಚಾನ್ಯತ್ಪರಿದೇವಿತಂ|
03227007c ವಿಚಿಂತ್ಯ ನಾಧಿಗಚ್ಚಾಮಿ ಗಮನಾಯೇತರಾಯ ವಾ||
ಹಿಂದಿನ ಆ ಮಾತುಗಳನ್ನು ಮತ್ತು ನಂತರದ ಚಾಡಿಗಳನ್ನು ನೆನಪಿಸಿಕೊಂಡರೆ ಹೋಗಬೇಕೋ ಬೇಡವೋ ಎಂದು ನನಗೂ ನಿರ್ಧರಿಸಲಾಗುತ್ತಿಲ್ಲ.
03227008a ಮಮಾಪಿ ಹಿ ಮಹಾನ್ ಹರ್ಷೋ ಯದಹಂ ಭೀಮಫಲ್ಗುನೌ|
03227008c ಕ್ಲಿಷ್ಟಾವರಣ್ಯೇ ಪಶ್ಯೇಯಂ ಕೃಷ್ಣಯಾ ಸಹಿತಾವಿತಿ||
ಕೃಷ್ಣೆಯ ಸಹಿತ ಭೀಮ-ಫಲ್ಗುನರು ಅರಣ್ಯದಲ್ಲಿ ಕಷ್ಟದಲ್ಲಿರುವುದನ್ನು ನೋಡಲು ನನಗೂ ಮಹಾ ಹರ್ಷವಾಗುತ್ತದೆ.
03227009a ನ ತಥಾ ಪ್ರಾಪ್ನುಯಾಂ ಪ್ರೀತಿಮವಾಪ್ಯ ವಸುಧಾಮಪಿ|
03227009c ದೃಷ್ಟ್ವಾ ಯಥಾ ಪಾಂಡುಸುತಾನ್ವಲ್ಕಲಾಜಿನವಾಸಸಃ||
ವಲ್ಕಲ ಜಿನಗಳನ್ನುಟ್ಟ ಪಾಂಡವರನ್ನು ನೋಡುವಾಗ ದೊರಕುವ ಸಂತೋಷವು ವಸುಧೆಯನ್ನು ಪಡೆದಾಗಲೂ ಆಗಿರಲಿಕ್ಕಿಲ್ಲ.
03227010a ಕಿಂ ನು ಸ್ಯಾದಧಿಕಂ ತಸ್ಮಾದ್ಯದಹಂ ದ್ರುಪದಾತ್ಮಜಾಂ|
03227010c ದ್ರೌಪದೀಂ ಕರ್ಣ ಪಶ್ಯೇಯಂ ಕಾಷಾಯವಸನಾಂ ವನೇ||
ಕರ್ಣ! ವನದಲ್ಲಿ ಕಾಷಾಯವಸ್ತ್ರಗಳನ್ನುಟ್ಟಿರುವ ದ್ರುಪದಾತ್ಮಜೆ ದ್ರೌಪದಿಯನ್ನು ನಾನು ನೋಡುತ್ತೇನಾದರೆ, ಅದಕ್ಕಿಂತಲೂ ಹೆಚ್ಚಿನ ಸಂತೋಷವು ನನಗೆ ಇನ್ನ್ಯಾವುದಿದೆ?
03227011a ಯದಿ ಮಾಂ ಧರ್ಮರಾಜಶ್ಚ ಭೀಮಸೇನಶ್ಚ ಪಾಂಡವಃ|
03227011c ಯುಕ್ತಂ ಪರಮಯಾ ಲಕ್ಷ್ಮ್ಯಾ ಪಶ್ಯೇತಾಂ ಜೀವಿತಂ ಭವೇತ್||
ಪಾಂಡವ ಧರ್ಮರಾಜ ಮತ್ತು ಭೀಮಸೇನರು ಪರಮ ಸಂಪದ್ಭರಿತನಾದ ನನ್ನನ್ನು ನೋಡಿದರೆಂದರೆ ಅದೇ ಬದುಕೆನೆಸಿಕೊಳ್ಳುತ್ತದೆ!
03227012a ಉಪಾಯಂ ನ ತು ಪಶ್ಯಾಮಿ ಯೇನ ಗಚ್ಚೇಮ ತದ್ವನಂ|
03227012c ಯಥಾ ಚಾಭ್ಯನುಜಾನೀಯಾದ್ಗಚ್ಚಂತಂ ಮಾಂ ಮಹೀಪತಿಃ||
ಆದರೆ ನಾನು ವನಕ್ಕೆ ಹೋಗುವ ಯಾವ ಉಪಾಯವನ್ನೂ ಕಾಣುತ್ತಿಲ್ಲ. ಮಹೀಪತಿಯು ಹೋಗಲು ಹೇಗೆ ಅನುಮತಿಯನ್ನು ನೀಡುತ್ತಾನೆ ಎನ್ನುವುದೂ ತಿಳಿಯುತ್ತಿಲ್ಲ.
03227013a ಸ ಸೌಬಲೇನ ಸಹಿತಸ್ತಥಾ ದುಃಶಾಸನೇನ ಚ|
03227013c ಉಪಾಯಂ ಪಶ್ಯ ನಿಪುಣಂ ಯೇನ ಗಚ್ಚೇಮ ತದ್ವನಂ||
ಸೌಬಲ ಮತ್ತು ದುಃಶಾಸನನೊಂದಿಗೆ ನಾವು ಹೇಗೆ ಆ ವನಕ್ಕೆ ಹೋಗಬಹುದೆಂಬ ಉಪಾಯವನ್ನು ನಿಪುಣತೆಯಿಂದ ನೀನು ಕಂಡು ಹೇಳಬೇಕು.
03227014a ಅಹಮಪ್ಯದ್ಯ ನಿಶ್ಚಿತ್ಯ ಗಮನಾಯೇತರಾಯ ವಾ|
03227014c ಕಾಲ್ಯಮೇವ ಗಮಿಷ್ಯಾಮಿ ಸಮೀಪಂ ಪಾರ್ಥಿವಸ್ಯ ಹ||
ನಾನೂ ಕೂಡ ಹೋಗಬೇಕೋ ಬೇಡವೋ ಎಂದು ನಿಶ್ಚಯಿಸಿ, ನಾಳೆ ಬೆಳಿಗ್ಗೆ ಹೋಗುತ್ತೇನೆ.
03227015a ಮಯಿ ತತ್ರೋಪವಿಷ್ಟೇ ತು ಭೀಷ್ಮೇ ಚ ಕುರುಸತ್ತಮೇ|
03227015c ಉಪಾಯೋ ಯೋ ಭವೇದ್ದೃಷ್ಟಸ್ತಂ ಬ್ರೂಯಾಃ ಸಹಸೌಬಲಃ||
ಅಲ್ಲಿ ನಾನು ಕುರುಸತ್ತಮ ಭೀಷ್ಮನ ಬಳಿ ಕುಳಿತುಕೊಂಡಿರುವಾಗ ಸೌಬಲನೊಂದಿಗೆ ನೀನು ಕಂಡುಕೊಂಡ ಉಪಾಯವೇನಿದೆಯೋ ಅದನ್ನು ಹೇಳಬೇಕು.
03227016a ತತೋ ಭೀಷ್ಮಸ್ಯ ರಾಜ್ಞಶ್ಚ ನಿಶಮ್ಯ ಗಮನಂ ಪ್ರತಿ|
03227016c ವ್ಯವಸಾಯಂ ಕರಿಷ್ಯೇಽಹಮನುನೀಯ ಪಿತಾಮಹಂ||
ಆಗ ಭೀಷ್ಮ ಮತ್ತು ರಾಜನು ನನ್ನ ಹೋಗುವಿಕೆಯ ಕುರಿತು ಏನನ್ನು ಹೇಳುತ್ತಾರೋ ಅದನ್ನು ಕೇಳಿ, ನನ್ನ ನಿರ್ಧಾರವನ್ನು ಮಾಡಿ ಪಿತಾಮಹನಲ್ಲಿ ವಿನಯದಿಂದ ಕೇಳಿಕೊಳ್ಳುತ್ತೇನೆ.”
03227017a ತಥೇತ್ಯುಕ್ತ್ವಾ ತು ತೇ ಸರ್ವೇ ಜಗ್ಮುರಾವಸಥಾನ್ಪ್ರತಿ|
03227017c ವ್ಯುಷಿತಾಯಾಂ ರಜನ್ಯಾಂ ತು ಕರ್ಣೋ ರಾಜಾನಮಭ್ಯಯಾತ್||
ಹಾಗೆಯೇ ಆಗಲೆಂದು ಅವರೆಲ್ಲರೂ ತಮ್ಮ ವಸತಿಗಳಿಗೆ ತೆರಳಿದರು. ರಾತ್ರಿಯು ಕಳೆಯಲು ಕರ್ಣನು ರಾಜನಲ್ಲಿಗೆ ಹೋದನು.
03227018a ತತೋ ದುರ್ಯೋಧನಂ ಕರ್ಣಃ ಪ್ರಹಸನ್ನಿದಮಬ್ರವೀತ್|
03227018c ಉಪಾಯಃ ಪರಿದೃಷ್ಟೋಽಯಂ ತಂ ನಿಬೋಧ ಜನೇಶ್ವರ||
ಆಗ ಕರ್ಣನು ನಗುತ್ತಾ ದುರ್ಯೋಧನನಿಗೆ ಹೇಳಿದನು: “ಜನೇಶ್ವರ! ಉಪಾಯವನ್ನು ಕಂಡುಕೊಂಡಿದ್ದೇನೆ. ಅದನ್ನು ಕೇಳು.
03227019a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ|
03227019c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ||
ನರಾಧಿಪ! ದ್ವೈತವನದಲ್ಲಿರುವ ಗೋಶಾಲೆಗಳೆಲ್ಲವೂ ನಿನ್ನನ್ನು ಕಾಯುತ್ತಿವೆ. ನಾವು ಅಲ್ಲಿಗೆ ನಿಸ್ಸಂಶಯವಾಗಿಯೂ ಘೋಷಯಾತ್ರೆಯ ನೆಪದಲ್ಲಿ ಹೋಗಬಹುದು.
03227020a ಉಚಿತಂ ಹಿ ಸದಾ ಗಂತುಂ ಘೋಷಯಾತ್ರಾಂ ವಿಶಾಂ ಪತೇ|
03227020c ಏವಂ ಚ ತ್ವಾಂ ಪಿತಾ ರಾಜನ್ಸಮನುಜ್ಞಾತುಮರ್ಹತಿ||
ರಾಜನ್! ವಿಶಾಂಪತೇ! ಘೋಷಯಾತ್ರೆಗೆ ಹೋಗುವುದು ಸದಾ ಉಚಿತ; ಆದುದರಿಂದ ತಂದೆಯು ನಿನಗೆ ಹೋಗಲು ಅನುಮತಿಯನ್ನು ನೀಡಲೇಬೇಕು.”
03227021a ತಥಾ ಕಥಯಮಾನೌ ತೌ ಘೋಷಯಾತ್ರಾವಿನಿಶ್ಚಯಂ|
03227021c ಗಾಂಧಾರರಾಜಃ ಶಕುನಿಃ ಪ್ರತ್ಯುವಾಚ ಹಸನ್ನಿವ||
ಹೀಗೆ ಘೋಷಯಾತ್ರೆಯ ಕುರಿತು ನಿರ್ಧರಿಸಿ ಮಾತನಾಡಿಕೊಳ್ಳುತ್ತಿರಲು ಗಾಂಧಾರರಾಜ ಶಕುನಿಯು ನಗುತ್ತಿರುವಂತೆ ಹೀಗೆ ಹೇಳಿದನು:
03227022a ಉಪಾಯೋಽಯಂ ಮಯಾ ದೃಷ್ಟೋ ಗಮನಾಯ ನಿರಾಮಯಃ|
03227022c ಅನುಜ್ಞಾಸ್ಯತಿ ನೋ ರಾಜಾ ಚೋದಯಿಷ್ಯತಿ ಚಾಪ್ಯುತ||
“ಹೋಗಲು ಈ ಉಪಾಯವು ನಿರಾಮಯವೆಂದು ನನಗೆ ತೋರುತ್ತದೆ. ರಾಜನು ಅನುಮತಿಯನ್ನು ನೀಡುವನಲ್ಲದೇ ಹೋಗಿ ಎಂದು ಒತ್ತಾಯವನ್ನೂ ಮಾಡಬಹುದು.
03227023a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ|
03227023c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ||
ನರಾಧಿಪ! ದ್ವೈತವನದಲ್ಲಿ ಎಲ್ಲ ಗೋಶಾಲೆಗಳೂ ನಿನ್ನ ನಿರೀಕ್ಷೆಯಲ್ಲಿದ್ದಾರೆ. ಮತ್ತು ನಿಸ್ಸಂಶಯವಾಗಿಯೂ ನಾವು ಘೋಷಯಾತ್ರದ ನೆಪದಲ್ಲಿ ಹೋಗಬಹುದು.”
03227024a ತತಃ ಪ್ರಹಸಿತಾಃ ಸರ್ವೇ ತೇಽನ್ಯೋನ್ಯಸ್ಯ ತಲಾನ್ದದುಃ|
03227024c ತದೇವ ಚ ವಿನಿಶ್ಚಿತ್ಯ ದದೃಶುಃ ಕುರುಸತ್ತಮಂ||
ಆಗ ಸಂತೋಷದಿಂದ ನಗುತ್ತಾ ಆ ಮೂವರೂ ತಾಲಿಗಳನ್ನು ಕೊಟ್ಟರು. ಅದನ್ನು ನಿಶ್ಚಯಿಸಿ ಕುರುಸತ್ತಮನನ್ನು ಕಾಣಲು ಹೋದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಘೋಷಯಾತ್ರಾಮಂತ್ರಣೇ ಸಪ್ತವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಘೋಷಯಾತ್ರಾಮಂತ್ರಣದಲ್ಲಿ ಇನ್ನೂರಾಇಪ್ಪತ್ತೇಳನೆಯ ಅಧ್ಯಾಯವು.
