Adi Parva: Chapter 189

ಆದಿ ಪರ್ವ: ವೈವಾಹಿಕ ಪರ್ವ

೧೮೯

ಹಿಂದೆ ದೇವಲೋಕದಲ್ಲಿ ನಡೆದ ಘಟನೆಗಳನ್ನೂ, ಪಾಂಡವರು ಐವರು ಇಂದ್ರರೆನ್ನುವುದನ್ನೂ ಹೇಳಿ ವ್ಯಾಸನು ದ್ರುಪದನಿಗೆ ಅವರನ್ನು ತೋರಿಸುವುದು (೧-೪೦). ದ್ರೌಪದಿಯ ಪೂರ್ವಜನ್ಮವೃತ್ತಾಂತವನ್ನು ಹೇಳುವುದು (೪೧-೪೯).

01189001 ವ್ಯಾಸ ಉವಾಚ|

01189001a ಪುರಾ ವೈ ನೈಮಿಷಾರಣ್ಯೇ ದೇವಾಃ ಸತ್ರಮುಪಾಸತೇ|

01189001c ತತ್ರ ವೈವಸ್ವತೋ ರಾಜಂಶಾಮಿತ್ರಮಕರೋತ್ತದಾ||

ವ್ಯಾಸನು ಹೇಳಿದನು: “ರಾಜನ್! ಬಹಳ ಹಿಂದೆ ದೇವತೆಗಳು ನೈಮಿಷಾರಣ್ಯದ ಸತ್ರವೊಂದರಲ್ಲಿ ಉಪಸ್ಥಿತರಿದ್ದರು. ವೈವಸ್ವತನು ಅದರಲ್ಲಿ ಋತ್ವಿಕನಾಗಿದ್ದನು.

01189002a ತತೋ ಯಮೋ ದೀಕ್ಷಿತಸ್ತತ್ರ ರಾಜನ್|

         ನಾಮಾರಯತ್ಕಿಂ ಚಿದಪಿ ಪ್ರಜಾಭ್ಯಃ|

01189002c ತತಃ ಪ್ರಜಾಸ್ತಾ ಬಹುಲಾ ಬಭೂವುಃ|

         ಕಾಲಾತಿಪಾತಾನ್ಮರಣಾತ್ಪ್ರಹೀಣಾಃ||

ರಾಜನ್! ದೀಕ್ಷೆಗೊಂಡಿದ್ದ ಆ ಸಮಯದಲ್ಲಿ ಯಮನು ಪ್ರಜೆಗಳ್ಯಾರನ್ನೂ ಕೊಲ್ಲಲಿಲ್ಲ. ಹಾಗಾಗಿ ಕಾಲದ ಹೊಡೆತ ಮತ್ತು ಮರಣದಿಂದ ತಪ್ಪಿಸಿಕೊಂಡ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಧಿಸಿದರು.

01189003a ತತಸ್ತು ಶಕ್ರೋ ವರುಣಃ ಕುಬೇರಃ|

         ಸಾಧ್ಯಾ ರುದ್ರಾ ವಸವಶ್ಚಾಶ್ವಿನೌ ಚ|

01189003c ಪ್ರಣೇತಾರಂ ಭುವನಸ್ಯ ಪ್ರಜಾಪತಿಂ|

         ಸಮಾಜಗ್ಮುಸ್ತತ್ರ ದೇವಾಸ್ತಥಾನ್ಯೇ||

ಆಗ ಶಕ್ರ, ವರುಣ, ಕುಬೇರ, ಸಾಧ್ಯರು, ರುದ್ರರು, ವಸುಗಳು, ಅಶ್ವಿನಿಯರು ಮತ್ತು ಅನ್ಯ ದೇವತೆಗಳು ಭುವನ ಪ್ರಜಾಪತಿಯ ಬಳಿ ಹೋಗಿ ಸೇರಿದರು.

01189004a ತತೋಽಬ್ರುವಽಲ್ಲೋಕಗುರುಂ ಸಮೇತಾ|

         ಭಯಂ ನಸ್ತೀವ್ರಂ ಮಾನುಷಾಣಾಂ ವಿವೃದ್ಧ್ಯಾ|

01189004c ತಸ್ಮಾದ್ಭಯಾದುದ್ವಿಜಂತಃ ಸುಖೇಪ್ಸವಃ|

         ಪ್ರಯಾಮ ಸರ್ವೇ ಶರಣಂ ಭವಂತಂ||

ಅಲ್ಲಿ ಸಮೇತರಾದ ಅವರು ಲೋಕಗುರುವಿಗೆ ಹೇಳಿದರು: “ಮನುಷ್ಯರು ವೃದ್ಧಿಯಾಗುತ್ತಿರುವುದರನ್ನು ನೋಡಿದರೆ ನಮಗೆ ತೀವ್ರ ಭಯವುಂಟಾಗಿದೆ. ಆ ಭಯದಿಂದ ನಡುಗುತ್ತಾ, ಸುಖವನ್ನರಸುತ್ತಾ ನಿನ್ನ ಶರಣರಾಗಿ ನಾವೆಲ್ಲರೂ ಬಂದಿದ್ದೇವೆ.”

01189005 ಬ್ರಹ್ಮೋವಾಚ|

01189005a ಕಿಂ ವೋ ಭಯಂ ಮಾನುಷೇಭ್ಯೋ ಯೂಯಂ ಸರ್ವೇ ಯದಾಮರಾಃ|

01189005c ಮಾ ವೋ ಮರ್ತ್ಯಸಕಾಶಾದ್ವೈ ಭಯಂ ಭವತು ಕರ್ಹಿ ಚಿತ್||

ಬ್ರಹ್ಮನು ಹೇಳಿದನು: “ಅಮರರಾಗಿರುವ ನೀವೆಲ್ಲರೂ ಮನುಷ್ಯರಿಂದ ಏಕೆ ಭಯಪಡಬೇಕು? ಮರ್ತ್ಯರಿಂದ ನಿಮಗೆ ಎಂದೂ ಭಯವಾಗದಿರಲಿ.”

01189006 ದೇವಾ ಊಚುಃ|

01189006a ಮರ್ತ್ಯಾ ಹ್ಯಮರ್ತ್ಯಾಃ ಸಂವೃತ್ತಾ ನ ವಿಶೇಷೋಽಸ್ತಿ ಕಶ್ಚನ|

01189006c ಅವಿಶೇಷಾದುದ್ವಿಜಂತೋ ವಿಶೇಷಾರ್ಥಮಿಹಾಗತಾಃ||

ದೇವತೆಗಳು ಹೇಳಿದರು: “ಮರ್ತ್ಯರು ಅಮರ್ತ್ಯರಾಗಿದ್ದುದರಿಂದ ನಮ್ಮೀರ್ವರಲ್ಲಿ ವ್ಯತ್ಯಾಸವೇ ಇಲ್ಲದಂತಾಗಿದೆ. ನಮ್ಮೀರ್ವರಲ್ಲಿ ವ್ಯತ್ಯಾಸವಿರಬೇಕೆಂದು ಕೇಳಿಕೊಂಡೇ ನಾವು ನಿನ್ನಲ್ಲಿಗೆ ಬಂದಿದ್ದೇವೆ.”

01189007 ಬ್ರಹ್ಮೋವಾಚ|

01189007a ವೈವಸ್ವತೋ ವ್ಯಾಪೃತಃ ಸತ್ರಹೇತೋಸ್|

         ತೇನ ತ್ವಿಮೇ ನ ಮ್ರಿಯಂತೇ ಮನುಷ್ಯಾಃ|

01189007c ತಸ್ಮಿನ್ನೇಕಾಗ್ರೇ ಕೃತಸರ್ವಕಾರ್ಯೇ|

         ತತ ಏಷಾಂ ಭವಿತೈವಾಂತಕಾಲಃ||

ಬ್ರಹ್ಮನು ಹೇಳಿದನು: “ವೈವಸ್ವತನು ಸತ್ರದಲ್ಲಿ ಮಗ್ನನಾಗಿದ್ದಾನೆ. ಆದುದರಿಂದಲೇ ಮನುಷ್ಯರು ಸಾಯುತ್ತಿಲ್ಲ. ಏಕಾಗ್ರಚಿತ್ತದಿಂದ ಆ ಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಆ ಅಂತಕಾಲನು ಅವರಿದ್ದಲ್ಲಿಗೆ ಹಿಂದಿರುಗುತ್ತಾನೆ.

01189008a ವೈವಸ್ವತಸ್ಯಾಪಿ ತನುರ್ವಿಭೂತಾ|

         ವೀರ್ಯೇಣ ಯುಷ್ಮಾಕಮುತ ಪ್ರಯುಕ್ತಾ|

01189008c ಸೈಷಾಮಂತೋ ಭವಿತಾ ಹ್ಯಂತಕಾಲೇ|

         ತನುರ್ಹಿ ವೀರ್ಯಂ ಭವಿತಾ ನರೇಷು||

ನಿಮ್ಮ ವೀರ್ಯಗಳಿಂದ ಪ್ರಚೋದನೆಗೊಂಡ ವೈವಸ್ವತನ ದೇಹವು ಪುಷ್ಟಿಯಾಗುತ್ತದೆ. ಆಗ ಅವನು ನರರಲ್ಲಿ ಹಿಂದಿರುಗಿ ಕಾಲವು ಅಂತ್ಯವಾಗುತ್ತದೆಯೋ ಎನ್ನುವಂತೆ ಬಹುಜನರ ನಾಶಮಾಡುತ್ತಾನೆ[1].””

01189009 ವ್ಯಾಸ ಉವಾಚ|

01189009a ತತಸ್ತು ತೇ ಪೂರ್ವಜದೇವವಾಕ್ಯಂ|

         ಶ್ರುತ್ವಾ ದೇವಾ ಯತ್ರ ದೇವಾ ಯಜಂತೇ|

01189009c ಸಮಾಸೀನಾಸ್ತೇ ಸಮೇತಾ ಮಹಾಬಲಾ|

         ಭಾಗೀರಥ್ಯಾಂ ದದೃಶುಃ ಪುಂಡರೀಕಂ||

ವ್ಯಾಸನು ಹೇಳಿದನು: “ಪೂರ್ವಜನ ದೇವವಾಕ್ಯವನ್ನು ಕೇಳಿದ ಮಹಾಬಲಿ ದೇವತೆಗಳು, ದೇವತೆಗಳು ಯಜ್ಞಮಾಡುತ್ತಿರುವ ಸ್ಥಳಕ್ಕೆ ಹೋಗಿ ಒಟ್ಟಿಗೇ ಕುಳಿತುಕೊಂಡರು. ಆಗ ಅವರು ಭಾಗೀರಥಿಯಲ್ಲಿ ತೇಲುತ್ತಿದ್ದ ಒಂದು ಪುಂಡರೀಕವನ್ನು ಕಂಡರು.

01189010a ದೃಷ್ಟ್ವಾ ಚ ತದ್ವಿಸ್ಮಿತಾಸ್ತೇ ಬಭೂವುಸ್|

         ತೇಷಾಮಿಂದ್ರಸ್ತತ್ರ ಶೂರೋ ಜಗಾಮ|

01189010c ಸೋಽಪಶ್ಯದ್ಯೋಷಾಮಥ ಪಾವಕಪ್ರಭಾಂ|

         ಯತ್ರ ಗಂಗಾ ಸತತಂ ಸಂಪ್ರಸೂತಾ||

ಅದನ್ನು ನೋಡಿದ ಅವರು ವಿಸ್ಮಿತರಾದರು. ಅವರಲ್ಲಿ ಶೂರ ಇಂದ್ರನು ಅಲ್ಲಿಗೆ ಹೋದನು. ಸತತ ಹರಿಯುವ ಗಂಗೆಯಲ್ಲಿ ಅವನು ಅಗ್ನಿಸಮಾನ ಓರ್ವ ಸ್ತ್ರೀಯನ್ನು ಕಂಡನು.

01189011a ಸಾ ತತ್ರ ಯೋಷಾ ರುದತೀ ಜಲಾರ್ಥಿನೀ|

         ಗಂಗಾಂ ದೇವೀಂ ವ್ಯವಗಾಹ್ಯಾವತಿಷ್ಠತ್|

01189011c ತಸ್ಯಾಶ್ರುಬಿಂದುಃ ಪತಿತೋ ಜಲೇ ವೈ|

         ತತ್ಪದ್ಮಮಾಸೀದಥ ತತ್ರ ಕಾಂಚನಂ||

ಜಲಾರ್ಥಿನಿಯಾದ ಅವಳು ದೇವಿ ಗಂಗೆಯಲ್ಲಿ ಇಳಿದು ನಿಂತು ಅಳುತ್ತಿದ್ದಾಗ ಅವಳ ಕಣ್ಣೀರು ನೀರಿನಲ್ಲಿ ಬಿದ್ದು ಕಾಂಚನದ ಕಮಲಗಳಾಗಿ ತೇಲುತ್ತಿದ್ದವು.

01189012a ತದದ್ಭುತಂ ಪ್ರೇಕ್ಷ್ಯ ವಜ್ರೀ ತದಾನೀಂ|

         ಅಪೃಚ್ಛತ್ತಾಂ ಯೋಷಿತಮಂತಿಕಾದ್ವೈ|

01189012c ಕಾ ತ್ವಂ ಕಥಂ ರೋದಿಷಿ ಕಸ್ಯ ಹೇತೋರ್|

         ವಾಕ್ಯಂ ತಥ್ಯಂ ಕಾಮಯೇಹ ಬ್ರವೀಹಿ||

ಆ ಅದ್ಭುತವನ್ನು ನೋಡಿದ ವಜ್ರಿಯು ಅವಳ ಬಳಿಬಂದು ಅವಳನ್ನು ಪ್ರಶ್ನಿಸಿದನು: “ನೀನು ಯಾರು ಮತ್ತು ಯಾವ ಕಾರಣಕ್ಕಾಗಿ ನೀನು ಅಳುತ್ತಿರುವೆ? ನಿನಗೆ ಇಷ್ಟವಾದರೆ ಸತ್ಯವೇನೆಂದು ಹೇಳು.”

01189013 ಸ್ತ್ರೀ ಉವಾಚ|

01189013a ತ್ವಂ ವೇತ್ಸ್ಯಸೇ ಮಾಮಿಹ ಯಾಸ್ಮಿ ಶಕ್ರ|

         ಯದರ್ಥಂ ಚಾಹಂ ರೋದಿಮಿ ಮಂದಭಾಗ್ಯಾ|

01189013c ಆಗಚ್ಛ ರಾಜನ್ಪುರತೋಽಹಂ ಗಮಿಷ್ಯೇ|

         ದ್ರಷ್ಟಾಸಿ ತದ್ರೋದಿಮಿ ಯತ್ಕೃತೇಽಹಂ||

ಸ್ತ್ರೀಯು ಹೇಳಿದಳು: “ಶಕ್ರ! ನಾನು ಯಾರು ಮತ್ತು ಯಾವ ಕಾರಣಕ್ಕಾಗಿ ಮಂದಭಾಗ್ಯೆ ನಾನು ರೋದಿಸುತ್ತಿದ್ದೇನೆ ಎಂದು ನಿನಗೆ ತಿಳಿದಿರಲೇ ಬೇಕು. ರಾಜನ್! ನಾನು ಮುಂದೆ ಹೋಗುತ್ತೇನೆ. ನೀನು ನನ್ನನ್ನು ಹಿಂಬಾಲಿಸಿ ಬಾ. ನಾನು ಏಕೆ ಅಳುತ್ತಿದ್ದೇನೆ ಎನ್ನುವುದನ್ನು ನೀನೇ ನೋಡುವೆಯಂತೆ.””

01189014 ವ್ಯಾಸ ಉವಾಚ|

01189014a ತಾಂ ಗಚ್ಛಂತೀಮನ್ವಗಚ್ಛತ್ತದಾನೀಂ|

         ಸೋಽಪಶ್ಯದಾರಾತ್ತರುಣಂ ದರ್ಶನೀಯಂ|

01189014c ಸಿಂಹಾಸನಸ್ಥಂ ಯುವತೀಸಹಾಯಂ|

         ಕ್ರೀಡಂತಮಕ್ಷೈರ್ಗಿರಿರಾಜಮೂರ್ಧ್ನಿ||

ವ್ಯಾಸನು ಹೇಳಿದನು: “ಅವಳು ಮುಂದೆ ಹೋಗುತ್ತಿರಲು ಅವನು ಅವಳನ್ನು ಹಿಂಬಾಲಿಸಿದನು. ಅಲ್ಲಿಯೇ ಹತ್ತಿರದ ಪರ್ವತ ಶಿಖರದಲ್ಲಿ ಸಿಂಹಾಸನದಲ್ಲಿ ಕುಳಿತು ಯುವತಿಯರ ಜೊತೆ ಪಗಡೆಯಾಡುತ್ತಿದ್ದ ಓರ್ವ ಸುಂದರ ತರುಣನನ್ನು ಅವನು ನೋಡಿದನು.

01189015a ತಮಬ್ರವೀದ್ದೇವರಾಜೋ ಮಮೇದಂ|

         ತ್ವಂ ವಿದ್ಧಿ ವಿಶ್ವಂ ಭುವನಂ ವಶೇ ಸ್ಥಿತಂ|

01189015c ಈಶೋಽಹಮಸ್ಮೀತಿ ಸಮನ್ಯುರಬ್ರವೀದ್|

         ದೃಷ್ಟ್ವಾ ತಮಕ್ಷೈಃ ಸುಭೃಶಂ ಪ್ರಮತ್ತಂ||

ಅವನು ಪಗಡೆಯಾಟದಲ್ಲಿ ಮಗ್ನನಾಗಿದ್ದುದನ್ನು ಕಂಡು ಸಿಟ್ಟಿಗೆದ್ದು ಹೇಳಿದನು: “ನಾನು ದೇವರಾಜನೆಂದು ತಿಳಿ. ವಿಶ್ವ ಭುವನವೆಲ್ಲ ನನ್ನ ವಶದಲ್ಲಿದೆ. ನಾನೇ ಒಡೆಯ.”

01189016a ಕ್ರುದ್ಧಂ ತು ಶಕ್ರಂ ಪ್ರಸಮೀಕ್ಷ್ಯ ದೇವೋ|

         ಜಹಾಸ ಶಕ್ರಂ ಚ ಶನೈರುದೈಕ್ಷತ|

01189016c ಸಂಸ್ತಂಭಿತೋಽಭೂದಥ ದೇವರಾಜಸ್|

         ತೇನೇಕ್ಷಿತಃ ಸ್ಥಾಣುರಿವಾವತಸ್ಥೇ||

ಆ ದೇವನು ಕ್ರುದ್ಧ ಶಕ್ರನನ್ನು ನೋಡಿ ನಿಧಾನವಾಗಿ ಮುಗುಳ್ನಕ್ಕು ದಿಟ್ಟಿಸಿ ನೋಡಿದನು. ಅವನ ನೋಟದಡಿಯಲ್ಲಿ ದೇವರಾಜನು ಸಂಸ್ತಂಭಿತನಾಗಿ ಸ್ಥಾಣುವಿನಂತೆ ಅಲ್ಲಿಯೇ ನಿಂತು ಬಿಟ್ಟನು.

01189017a ಯದಾ ತು ಪರ್ಯಾಪ್ತಮಿಹಾಸ್ಯ ಕ್ರೀಡಯಾ|

         ತದಾ ದೇವೀಂ ರುದತೀಂ ತಾಮುವಾಚ|

01189017c ಆನೀಯತಾಮೇಷ ಯತೋಽಹಮಾರಾನ್|

         ಮೈನಂ ದರ್ಪಃ ಪುನರಪ್ಯಾವಿಶೇತ||

ಕ್ರೀಡೆಯಲ್ಲಿ ಉತ್ಸಾಹವನ್ನು ಕಳೆದುಕೊಂಡ ಅವನು ರೋದಿಸುತ್ತಿರುವ ದೇವಿಯಲ್ಲಿ ಹೇಳಿದನು: “ಅವನನ್ನು ನನ್ನ ಹತ್ತಿರ ಕರೆದುಕೊಂಡು ಬಾ. ಅವನು ತನ್ನ ದರ್ಪದಿಂದ ಇನ್ನೂ ಹೆಚ್ಚು ಆವೇಶಗೊಳ್ಳದ ಹಾಗೆ ನೋಡಿಕೊಳ್ಳುತ್ತೇನೆ.”

01189018a ತತಃ ಶಕ್ರಃ ಸ್ಪೃಷ್ಟಮಾತ್ರಸ್ತಯಾ ತು|

         ಸ್ರಸ್ತೈರಂಗೈಃ ಪತಿತೋಽಭೂದ್ಧರಣ್ಯಾಂ|

01189018c ತಮಬ್ರವೀದ್ಭಗವಾನುಗ್ರತೇಜಾ|

         ಮೈವಂ ಪುನಃ ಶಕ್ರ ಕೃಥಾಃ ಕಥಂ ಚಿತ್||

ಅವಳ ಸ್ಪರ್ಷಮಾತ್ರದಿಂದಲೇ ಶಕ್ರನು ತನ್ನ ಅಂಗಾಂಗಗಳು ಶಕ್ತಿಯನ್ನೇ ಕಳೆದುಕೊಂಡಂತಾಗಿ ಧರಣಿಯಮೇಲೆ ಕುಸಿದು ಬಿದ್ದನು. ಉಗ್ರತೇಜಸ್ವಿ ಆ ಭಗವಾನನು ಅವನಿಗೆ ಹೇಳಿದನು: “ಶಕ್ರ! ಇನ್ನು ಎಂದೂ ಪುನಃ ಹೀಗೆ ಮಾಡಬೇಡ!

01189019a ವಿವರ್ತಯೈನಂ ಚ ಮಹಾದ್ರಿರಾಜಂ|

         ಬಲಂ ಚ ವೀರ್ಯಂ ಚ ತವಾಪ್ರಮೇಯಂ|

01189019c ವಿವೃತ್ಯ ಚೈವಾವಿಶ ಮಧ್ಯಮಸ್ಯ|

         ಯತ್ರಾಸತೇ ತ್ವದ್ವಿಧಾಃ ಸೂರ್ಯಭಾಸಃ||

ಬಲ ಮತ್ತು ವೀರ್ಯದಲ್ಲಿ ಅಪ್ರಮೇಯ ನೀನು ಈ ಮಹಾದ್ರಿರಾಜನನ್ನು ತಳ್ಳಿ ಉರುಳಿಸು. ಉರುಳಿಸಿದ ನಂತರ ಅದರ ಮಧ್ಯವನ್ನು ಪ್ರವೇಶಿಸು. ಅಲ್ಲಿ ನಿನ್ನಂತೆ ಸೂರ್ಯಭಾಸ ಇತರರನ್ನು ಕಾಣುತ್ತೀಯೆ.”

01189020a ಸ ತದ್ವಿವೃತ್ಯ ಶಿಖರಂ ಮಹಾಗಿರೇಸ್|

         ತುಲ್ಯದ್ಯುತೀಂಶ್ಚತುರೋಽನ್ಯಾನ್ದದರ್ಶ|

01189020c ಸ ತಾನಭಿಪ್ರೇಕ್ಷ್ಯ ಬಭೂವ ದುಃಖಿತಃ|

         ಕಚ್ಚಿನ್ನಾಹಂ ಭವಿತಾ ವೈ ಯಥೇಮೇ||

ಮಹಾಗಿರಿಯ ಶಿಖರವನ್ನು ಉರುಳಿಸಿ, ಅಲ್ಲಿ ತನ್ನ ಕಾಂತಿಯನ್ನು ಹೋಲುವ ಇತರರನ್ನು ನೋಡಿದನು. ಅದನ್ನು ನೋಡಿ ಅವನು “ನಾನೂ ಇವರ ಹಾಗೆ ಆಗಿಬಿಡುತ್ತೇನೆಯೇ?” ಎಂದು ದುಃಖಿತನಾದನು.

01189021a ತತೋ ದೇವೋ ಗಿರಿಶೋ ವಜ್ರಪಾಣಿಂ|

         ವಿವೃತ್ಯ ನೇತ್ರೇ ಕುಪಿತೋಽಭ್ಯುವಾಚ|

01189021c ದರೀಮೇತಾಂ ಪ್ರವಿಶ ತ್ವಂ ಶತಕ್ರತೋ|

         ಯನ್ಮಾಂ ಬಾಲ್ಯಾದವಮಂಸ್ಥಾಃ ಪುರಸ್ತಾತ್||

ಆಗ ಕುಪಿತ ದೇವ ಗಿರೀಶನು ಕಣ್ಣುಗಳನ್ನು ತಿರುಗಿಸುತ್ತಾ ವಜ್ರಪಾಣಿಗೆ ಹೇಳಿದನು: “ಶತಕ್ರತೋ! ನಿನ್ನ ಹುಡುಗಾಟಿಕೆಯಲ್ಲಿ ನನ್ನನ್ನು ಅವಮಾನಿಸಿದ್ದುದರಿಂದ ನೀನೂ ಈ ಬಿಲವನ್ನು ಪ್ರವೇಶಿಸು!”

01189022a ಉಕ್ತಸ್ತ್ವೇವಂ ವಿಭುನಾ ದೇವರಾಜಃ|

         ಪ್ರವೇಪಮಾನೋ ಭೃಶಮೇವಾಭಿಷಂಗಾತ್|

01189022c ಸ್ರಸ್ತೈರಂಗೈರನಿಲೇನೇವ ನುನ್ನಂ|

         ಅಶ್ವತ್ಥಪತ್ರಂ ಗಿರಿರಾಜಮೂರ್ಧ್ನಿ||

ವಿಭುವು ಈ ರೀತಿ ಹೇಳಿದ ನಂತರ ದೇವರಾಜನು ಆ ಶಾಪದಿಂದ ನಡುಗಿದನು. ಅವನ ಅಂಗಾಂಗಗಳು ಪರ್ವತ ಶಿಖರದ ಮೇಲಿದ್ದ ಅಶ್ವತ್ಥ ವೃಕ್ಷದ ಎಲೆಗಳು ಭಿರುಗಾಳಿಗೆ ಸಿಲುಕಿದರೆ ಹೇಗೋ ಹಾಗೆ ತತ್ತರಿಸಿದವು. 

01189023a ಸ ಪ್ರಾಂಜಲಿರ್ವಿನತೇನಾನನೇನ|

         ಪ್ರವೇಪಮಾನಃ ಸಹಸೈವಮುಕ್ತಃ|

01189023c ಉವಾಚ ಚೇದಂ ಬಹುರೂಪಮುಗ್ರಂ|

         ದ್ರಷ್ಟಾ ಶೇಷಸ್ಯ ಭಗವಂಸ್ತ್ವಂ ಭವಾದ್ಯ||

ಆಗ ಅವನು ಕೈಜೋಡಿಸಿ, ಮುಖವನ್ನು ಕೆಳಮಾಡಿ, ಒಮ್ಮಿಂದೊಮ್ಮಿಗೇ ಬಂದ ಮಾತುಗಳನ್ನು ಕೇಳಿ ಕಂಪಿಸುತ್ತಾ ಆ ಬಹುರೂಪಿ ಉಗ್ರನಿಗೆ ಹೇಳಿದನು: “ಭಗವನ್! ಇಂದು ಇದರಿಂದ ಬಿಡುಗಡೆಯನ್ನು ತೋರಿಸು!”

01189024a ತಮಬ್ರವೀದುಗ್ರಧನ್ವಾ ಪ್ರಹಸ್ಯ|

         ನೈವಂಶೀಲಾಃ ಶೇಷಮಿಹಾಪ್ನುವಂತಿ|

01189024c ಏತೇ‌ಅಪ್ಯೇವಂ ಭವಿತಾರಃ ಪುರಸ್ತಾತ್|

         ತಸ್ಮಾದೇತಾಂ ದರಿಮಾವಿಶ್ಯ ಶೇಧ್ವಂ||

ಆಗ ಆ ಉಗ್ರಧನ್ವಿಯು ನಗುತ್ತಾ ಹೇಳಿದನು: “ಹೀಗೆ ನಡೆದುಕೊಳ್ಳುವವರಿಗೆ ಇಲ್ಲಿಂದ ಬಿಡುಗಡೆಯೇ ಇಲ್ಲ. ಮುಂದೆ ಇವರೂ ಕೂಡ ನಿನ್ನಂತೆ ಆಗುತ್ತಾರೆ. ಆದುದರಿಂದ ಈ ಗುಹೆಯನ್ನು ಪ್ರವೇಶಿಸಿ ಅಲ್ಲಿಯೇ ಇರು.

01189025a ಶೇಷೋಽಪ್ಯೇವಂ ಭವಿತಾ ವೋ ನ ಸಂಶಯೋ|

         ಯೋನಿಂ ಸರ್ವೇ ಮಾನುಷೀಮಾವಿಶಧ್ವಂ|

01189025c ತತ್ರ ಯೂಯಂ ಕರ್ಮ ಕೃತ್ವಾವಿಷಃಯಂ|

         ಬಹೂನನ್ಯಾನ್ನಿಧನಂ ಪ್ರಾಪಯಿತ್ವಾ||

01189026a ಆಗಂತಾರಃ ಪುನರೇವೇಂದ್ರಲೋಕಂ|

         ಸ್ವಕರ್ಮಣಾ ಪೂರ್ವಜಿತಂ ಮಹಾರ್ಹಂ|

01189026c ಸರ್ವಂ ಮಯಾ ಭಾಷಿತಮೇತದೇವಂ|

         ಕರ್ತವ್ಯಮನ್ಯದ್ವಿವಿಧಾರ್ಥವಚ್ಚ||

ನಿಮಗೆಲ್ಲ ಇದರಿಂದ ಬಿಡುಗಡೆ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಮನುಷ್ಯ ಯೋನಿಯನ್ನು ಪ್ರವೇಶಿಸಿ, ಅಲ್ಲಿ ಬಹಳಷ್ಟು ಕಷ್ಟಕರ್ಮಗಳನ್ನು ಅನುಭವಿಸಿ, ಬೇರೆ ಹಲವಾರು ಜನರನ್ನು ಸಂಹರಿಸಿ, ಪುನಃ ಇಂದ್ರಲೋಕವನ್ನು ತೆರಳುತ್ತೀರಿ. ನಿಮ್ಮದೇ ಕರ್ಮಗಳಿಂದ ಈ ಮಹಾಲೋಕವನ್ನು ಪಡೆದಿದ್ದೀರಿ. ನಾನು ಹೇಳಿದ ಇವೆಲ್ಲವನ್ನೂ ಮಾಡಬೇಕಾಗುತ್ತದೆ. ಇದಲ್ಲದೇ ಬೇರೇನೂ ಆಗುವುದಿಲ್ಲ!”

01189027 ಪೂರ್ವೇಂದ್ರಾ ಊಚುಃ|

01189027a ಗಮಿಷ್ಯಾಮೋ ಮಾನುಷಂ ದೇವಲೋಕಾದ್|

         ದುರಾಧರೋ ವಿಹಿತೋ ಯತ್ರ ಮೋಕ್ಷಃ|

01189027c ದೇವಾಸ್ತ್ವಸ್ಮಾನಾದಧೀರಂಜನನ್ಯಾಂ|

         ಧರ್ಮೋ ವಾಯುರ್ಮಘವಾನಶ್ವಿನೌ ಚ||

ಪೂರ್ವೇಂದ್ರರು ಹೇಳಿದರು: “ದೇವಲೋಕದಿಂದ ಮೋಕ್ಷವು ದುರಾಧರವೆಂದು ವಿಹಿತವಾಗಿರುವ ಮಾನುಷ ಲೋಕಕ್ಕೆ ನಾವು ಹೋಗುತ್ತೇವೆ. ಆದರೆ ಧರ್ಮ, ವಾಯು, ಮಘವತ್ ಮತ್ತು ಅಶ್ವಿನೀ ದೇವತೆಗಳು ನಮ್ಮನ್ನು ನಮ್ಮ ತಾಯಿಯಿಂದ ಪಡೆಯಬೇಕು.””

01189028 ವ್ಯಾಸ ಉವಾಚ|

01189028a ಏತಚ್ಛೃತ್ವಾ ವಜ್ರಪಾಣಿರ್ವಚಸ್ತು|

         ದೇವಶ್ರೇಷ್ಠಂ ಪುನರೇವೇದಮಾಹ|

01189028c ವೀರ್ಯೇಣಾಹಂ ಪುರುಷಂ ಕಾರ್ಯಹೇತೋರ್|

         ದದ್ಯಾಮೇಷಾಂ ಪಂಚಮಂ ಮತ್ಪ್ರಸೂತಂ||

ವ್ಯಾಸನು ಹೇಳಿದನು: “ಈ ಮಾತುಗಳನ್ನು ಕೇಳಿದ ವಜ್ರಪಾಣಿಯು ದೇವಶ್ರೇಷ್ಠನಲ್ಲಿ ಪುನಃ ಹೇಳಿದನು: “ಈ ಕಾರ್ಯಗಳನ್ನು ನೆರವೇರಿಸುವ ಅವರಲ್ಲಿಯ ಐದನೆಯ ಪುರುಷನನ್ನು ನನ್ನ ವೀರ್ಯದಿಂದ ಮಗನನ್ನಾಗಿ ಪಡೆಯುತ್ತೇನೆ.”

01189029a ತೇಷಾಂ ಕಾಮಂ ಭಗವಾನುಗ್ರಧನ್ವಾ|

         ಪ್ರಾದಾದಿಷ್ಟಂ ಸನ್ನಿಸರ್ಗಾದ್ಯಥೋಕ್ತಂ|

01189029c ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾಂತಾಂ|

         ಶ್ರಿಯಂ ಭಾರ್ಯಾಂ ವ್ಯದಧಾನ್ಮಾನುಷೇಷು||

ಉಗ್ರಧನ್ವಿ ಭಗವಂತನು ಅವರ ಇಷ್ಟವನ್ನು ಅವರು ಕೇಳಿದಹಾಗೆಯೇ ಅನುಗ್ರಹಿಸಿದನು. ಲೋಕಕಾಂತೆ ಶ್ರೀಯೇ ಮನುಷ್ಯಲೋಕದಲ್ಲಿ ಅವರ ಭಾರ್ಯೆಯಾಗಲೆಂದು ಅಪ್ಪಣೆ ಮಾಡಿದನು.

01189030a ತೈರೇವ ಸಾರ್ಧಂ ತು ತತಃ ಸ ದೇವೋ|

         ಜಗಾಮ ನಾರಾಯಣಮಪ್ರಮೇಯಂ|

01189030c ಸ ಚಾಪಿ ತದ್ವ್ಯದಧಾತ್ಸರ್ವಮೇವ|

         ತತಃ ಸರ್ವೇ ಸಂಬಭೂವುರ್ಧರಣ್ಯಾಂ||

ಅವರ ಜೊತೆಗೇ ಆ ದೇವನು ಅಪ್ರಮೇಯ ನಾರಾಯಣನಲ್ಲಿ ಸೇರಿಕೊಂಡನು. ಅವನೂ ಕೂಡ ಎಲ್ಲವೂ ಹಾಗೆಯೇ ಆಗಲೆಂದು ಅನುಮೋದಿಸಿದನು. ನಂತರ ಎಲ್ಲರೂ ಧರಣಿಯಲ್ಲಿ ಜನಿಸಿದರು.

01189031a ಸ ಚಾಪಿ ಕೇಶೌ ಹರಿರುದ್ಬಬರ್ಹ|

         ಶುಕ್ಲಮೇಕಮಪರಂ ಚಾಪಿ ಕೃಷ್ಣಂ|

01189031c ತೌ ಚಾಪಿ ಕೇಶೌ ವಿಶತಾಂ ಯದೂನಾಂ|

         ಕುಲೇ ಸ್ತ್ರಿಯೌ ರೋಹಿಣೀಂ ದೇವಕೀಂ ಚ|

01189031e ತಯೋರೇಕೋ ಬಲದೇವೋ ಬಭೂವ|

         ಕೃಷ್ಣೋ ದ್ವಿತೀಯಃ ಕೇಶವಃ ಸಂಬಭೂವ||

ಆಗ ಹರಿಯು ತನ್ನ ಶಿರದಿಂದ ಎರಡು ಕೂದಲುಗಳನ್ನು ಕಿತ್ತನು. ಅದರಲ್ಲಿ ಒಂದು ಬಿಳಿಯಾಗಿತ್ತು. ಇನ್ನೊಂದು ಕಪ್ಪಾಗಿತ್ತು. ಈ ಕೂದಲುಗಳು ಯದು ಕುಲದ ಸ್ತ್ರೀಯರಾದ ರೋಹಿಣಿ ಮತ್ತು ದೇವಕಿಯರನ್ನು ಪ್ರವೇಶಿಸಿದವು. ಅವುಗಳಲ್ಲಿ ಒಂದು ಬಲದೇವನಾಯಿತು. ಎರಡನೇ ಕಪ್ಪು ಬಣ್ಣದ್ದು ಕೇಶವನಾಗಿ ಜನಿಸಿತು.

01189032a ಯೇ ತೇ ಪೂರ್ವಂ ಶಕ್ರರೂಪಾ ನಿರುದ್ಧಾಸ್|

         ತಸ್ಯಾಂ ದರ್ಯಾಂ ಪರ್ವತಸ್ಯೋತ್ತರಸ್ಯ|

01189032c ಇಹೈವ ತೇ ಪಾಂಡವಾ ವೀರ್ಯವಂತಃ|

         ಶಕ್ರಸ್ಯಾಂಶಃ ಪಾಂಡವಃ ಸವ್ಯಸಾಚೀ||

ಆ ಪರ್ವತ ಕಣಿವೆಯ ಗುಹೆಯಲ್ಲಿ ಬಂಧಿಗಳಾಗಿದ್ದ ಪೂರ್ವ ಶಕ್ರರೇ ಇಲ್ಲಿ ವೀರ್ಯವಂತ ಪಾಂಡವರಾಗಿ ಜನಿಸಿದ್ದಾರೆ. ಪಾಂಡವ ಸವ್ಯಸಾಚಿಯು ಶಕ್ರನ ಅಂಶದವನು.

01189033a ಏವಮೇತೇ ಪಾಂಡವಾಃ ಸಂಬಭೂವುರ್|

         ಯೇ ತೇ ರಾಜನ್ಪೂರ್ವಮಿಂದ್ರಾ ಬಭೂವುಃ|

01189033c ಲಕ್ಷ್ಮೀಶ್ಚೈಷಾಂ ಪೂರ್ವಮೇವೋಪದಿಷ್ಟಾ|

         ಭಾರ್ಯಾ ಯೈಷಾ ದ್ರೌಪದೀ ದಿವ್ಯರೂಪಾ||

ರಾಜನ್! ಪೂರ್ವದಲ್ಲಿ ಇಂದ್ರರಾಗಿದ್ದವರೇ ಪಾಂಡವರಾಗಿ ಹುಟ್ಟಿದ್ದಾರೆ. ಪೂರ್ವದಲ್ಲಿಯೇ ಇವರ ಪತ್ನಿಯಾಗಲೆಂದು ನಿರ್ಧರಿಸಲ್ಪಟ್ಟ ಲಕ್ಷ್ಮಿಯು ದಿವ್ಯರೂಪಿ ದ್ರೌಪದಿಯಾಗಿ ಜನಿಸಿದ್ದಾಳೆ.

01189034a ಕಥಂ ಹಿ ಸ್ತ್ರೀ ಕರ್ಮಣೋಽಂತೇ ಮಹೀತಲಾತ್|

         ಸಮುತ್ತಿಷ್ಠೇದನ್ಯತೋ ದೈವಯೋಗಾತ್|

01189034c ಯಸ್ಯಾ ರೂಪಂ ಸೋಮಸೂರ್ಯಪ್ರಕಾಶಂ|

         ಗಂಧಶ್ಚಾಗ್ರ್ಯಃ ಕ್ರೋಶಮಾತ್ರಾತ್ಪ್ರವಾತಿ||

ದೈವಯೋಗದ ಹೊರತು ಬೇರೆ ಹೇಗೆ ಕರ್ಮಾಂತರದಲ್ಲಿ ಮಹೀತಲದಿಂದ ಸೋಮಸೂರ್ಯಪ್ರಕಾಶದ ರೂಪ ಮತ್ತು ಕೋಶಮಾತ್ರದವರೆಗೆ ಪಸರಿಸುವ ಸುಗಂಧವನ್ನು ಹೊಂದಿದ ಸ್ತ್ರೀಯು ಉದ್ಭವಿಸಬಲ್ಲಳು?

01189035a ಇದಂ ಚಾನ್ಯತ್ಪ್ರೀತಿಪೂರ್ವಂ ನರೇಂದ್ರ|

         ದದಾಮಿ ತೇ ವರಮತ್ಯದ್ಭುತಂ ಚ|

01189035c ದಿವ್ಯಂ ಚಕ್ಷುಃ ಪಶ್ಯ ಕುಂತೀಸುತಾಂಸ್ತ್ವಂ|

         ಪುಣ್ಯೈರ್ದಿವ್ಯೈಃ ಪೂರ್ವದೇಹೈರುಪೇತಾನ್||

ನರೇಂದ್ರ! ಪ್ರೀತಿಪೂರ್ವಕವಾಗಿ ನಿನಗೆ ಅದ್ಭುತ ವರವನ್ನು ನೀಡುತ್ತೇನೆ. ದಿವ್ಯ ಚಕ್ಷುಗಳಿಂದ ಕುಂತೀಪುತ್ರರನ್ನು ಅವರ ಪುಣ್ಯ ದಿವ್ಯ ಪೂರ್ವ ದೇಹರೂಪಗಳಲ್ಲಿ ನೋಡು!””

01189036 ವೈಶಂಪಾಯನ ಉವಾಚ|

01189036a ತತೋ ವ್ಯಾಸಃ ಪರಮೋದಾರಕರ್ಮಾ|

         ಶುಚಿರ್ವಿಪ್ರಸ್ತಪಸಾ ತಸ್ಯ ರಾಜ್ಞಃ|

01189036c ಚಕ್ಷುರ್ದಿವ್ಯಂ ಪ್ರದದೌ ತಾನ್ಸ ಸರ್ವಾನ್|

         ರಾಜಾಪಶ್ಯತ್ಪೂರ್ವದೇಹೈರ್ಯಥಾವತ್||

ವೈಶಂಪಾಯನನು ಹೇಳಿದನು: “ಪರಮ ಉದಾರಕರ್ಮಿ ಶುಚಿ ವಿಪ್ರ ವ್ಯಾಸನು ತನ್ನ ತಪಸ್ಸಿನಿಂದ ರಾಜನಿಗೆ ದಿವ್ಯ ದೃಷ್ಟಿಯನ್ನು ನೀಡಿದನು. ರಾಜನು ಅವರೆಲ್ಲರನ್ನೂ ಅವರ ಪೂರ್ವದೇಹದಲ್ಲಿ ಹೇಗಿದ್ದರೋ ಹಾಗೆ ನೋಡಿದನು.

01189037a ತತೋ ದಿವ್ಯಾನ್ ಹೇಮಕಿರೀಟಮಾಲಿನಃ|

         ಶಕ್ರಪ್ರಖ್ಯಾನ್ಪಾವಕಾದಿತ್ಯವರ್ಣಾನ್|

01189037c ಬದ್ಧಾಪೀಡಾಂಶ್ಚಾರುರೂಪಾಂಶ್ಚ ಯೂನೋ|

         ವ್ಯೂಢೋರಸ್ಕಾಂಸ್ತಾಲಮಾತ್ರಾಂದದರ್ಶ||

ದಿವ್ಯ ಹೇಮಕಿರೀಟಮಾಲೆಗಳನ್ನು ಧರಿಸಿ, ಪಾವಕಾದಿತ್ಯ ವರ್ಣಿಗಳಾದ, ಆಭರಣಗಳನ್ನು ಧರಿಸಿದ್ದ, ವಿಶಾಲ ಎದೆಗಳ, ಎತ್ತರವಾಗಿ, ಇಂದ್ರರಂತಿದ್ದ ಪ್ರತಿಯೊಬ್ಬ ಯುವಕನನ್ನೂ ನೋಡಿದನು. 

01189038a ದಿವ್ಯೈರ್ವಸ್ತ್ರೈರರಜೋಭಿಃ ಸುವರ್ಣೈರ್|

         ಮಾಲ್ಯೈಶ್ಚಾಗ್ರ್ಯೈಃ ಶೋಭಮಾನಾನತೀವ|

01189038c ಸಾಕ್ಷಾತ್ತ್ರ್ಯಕ್ಷಾನ್ವಸವೋ ವಾಥ ದಿವ್ಯಾನ್|

         ಆದಿತ್ಯಾನ್ವಾ ಸರ್ವಗುಣೋಪಪನ್ನಾನ್|

01189038e ತಾನ್ಪೂರ್ವೇಂದ್ರಾನೇವಮೀ‌ಈಕ್ಷ್ಯಾಭಿರೂಪಾನ್|

         ಪ್ರೀತೋ ರಾಜಾ ದ್ರುಪದೋ ವಿಸ್ಮಿತಶ್ಚ||

ಮಲಿನವಾಗದ ದಿವ್ಯ ಸುವರ್ಣ ವಸ್ತ್ರಗಳನ್ನು ಧರಿಸಿದ್ದ, ಆರಿಸಿದ್ದ ಮಾಲೆಗಳಿಂದ ಅತೀವ ಶೋಭಾಯಮಾನರಾದ, ಸಾಕ್ಷಾತ್ ಮುಕ್ಕಣ್ಣನೋ ಅಥವಾ ದಿವ್ಯ ವಸವರೋ ಎಂದು ತೋರುತ್ತಿದ್ದ, ಆದಿತ್ಯರಂತೆ ಸರ್ವಗುಣೋಪಪನ್ನರಾದ, ಅಭಿರೂಪಿ ಆ ಪೂರ್ವೇಂದ್ರರನ್ನು ನೋಡಿದ ರಾಜ ದ್ರುಪದನು ವಿಸ್ಮಿತನೂ ಸಂಪ್ರೀತನೂ ಆದನು.  

01189039a ದಿವ್ಯಾಂ ಮಾಯಾಂ ತಾಮವಾಪ್ಯಾಪ್ರಮೇಯಾಂ|

         ತಾಂ ಚೈವಾಗ್ರ್ಯಾಂ ಶ್ರಿಯಮಿವ ರೂಪಿಣೀಂ ಚ|

01189039c ಯೋಗ್ಯಾಂ ತೇಷಾಂ ರೂಪತೇಜೋಯಶೋಭಿಃ|

         ಪತ್ನೀಮೃದ್ಧಾಂ ದೃಷ್ಟವಾನ್ಪಾರ್ಥಿವೇಂದ್ರಃ||

ಪಾರ್ಥಿವೇಂದ್ರನು ಅಪ್ಯಾಪ್ರಮೇಯ ದಿವ್ಯ ಮಾಯೆಯಿಂದ ಅವರ ರೂಪತೇಜಸ್ಸು ಮತ್ತು ಯಶಸ್ಸನ್ನು ಹೋಲುವ ಆ ರೂಪಿಣಿ ಶ್ರೀಯನ್ನೂ ನೋಡಿದನು.

01189040a ಸ ತದ್ದೃಷ್ಟ್ವಾ ಮಹದಾಶ್ಚರ್ಯರೂಪಂ|

         ಜಗ್ರಾಹ ಪಾದೌ ಸತ್ಯವತ್ಯಾಃ ಸುತಸ್ಯ|

01189040c ನೈತಚ್ಚಿತ್ರಂ ಪರಮರ್ಷೇ ತ್ವಯೀತಿ|

         ಪ್ರಸನ್ನಚೇತಾಃ ಸ ಉವಾಚ ಚೈನಂ||

ಆ ಮಹಾದಾಶ್ಚರ್ಯ ರೂಪವನ್ನು ನೋಡಿ ಪ್ರಸನ್ನನಾದ ಅವನು ಸತ್ಯವತೀಸುತನ ಪಾದಗಳನ್ನು ಹಿಡಿದು “ಪರಮರ್ಷಿ! ನಿನಗೆ ಇದು ಅದ್ಭುತವೇನಲ್ಲ!” ಎಂದನು.

01189041 ವ್ಯಾಸ ಉವಾಚ|

01189041a ಆಸೀತ್ತಪೋವನೇ ಕಾ ಚಿದೃಷೇಃ ಕನ್ಯಾ ಮಹಾತ್ಮನಃ|

01189041c ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ||

ವ್ಯಾಸನು ಹೇಳಿದನು: “ಒಮ್ಮೆ ಯಾವುದೋ ತಪೋವನದಲ್ಲಿ ಮಹಾತ್ಮನೋರ್ವನ ಮಗಳಿದ್ದಳು. ಸತೀ ರೂಪವತಿಯಾಗಿದ್ದರೂ ಆ ಕನ್ಯೆಗೆ ಪತಿಯು ದೊರೆಯಲಿಲ್ಲ.

01189042a ತೋಷಯಾಮಾಸ ತಪಸಾ ಸಾ ಕಿಲೋಗ್ರೇಣ ಶಂಕರಂ|

01189042c ತಾಮುವಾಚೇಶ್ವರಃ ಪ್ರೀತೋ ವೃಣು ಕಾಮಮಿತಿ ಸ್ವಯಂ||

ಬೇರೆಯವರು ಹೇಳುವಂತೆ ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು. ಪ್ರೀತ ಈಶ್ವರನು ತಾನಾಗಿಯೇ “ನಿನಗಿಷ್ಟ ವರವನ್ನು ಕೇಳು!” ಎಂದನು.

01189043a ಸೈವಮುಕ್ತಾಬ್ರವೀತ್ಕನ್ಯಾ ದೇವಂ ವರದಮೀಶ್ವರಂ|

01189043c ಪತಿಂ ಸರ್ವಗುಣೋಪೇತಮಿಚ್ಛಾಮೀತಿ ಪುನಃ ಪುನಃ||

ವರದ ಈಶ್ವರ ದೇವನಲ್ಲಿ ಆ ಕನ್ಯೆಯು “ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!” ಎಂದು ಪುನಃ ಪುನಃ ಕೇಳಿಕೊಂಡಳು.

01189044a ದದೌ ತಸ್ಯೈ ಸ ದೇವೇಶಸ್ತಂ ವರಂ ಪ್ರೀತಿಮಾಂಸ್ತದಾ|

01189044c ಪಂಚ ತೇ ಪತಯಃ ಶ್ರೇಷ್ಠಾ ಭವಿಷ್ಯಂತೀತಿ ಶಂಕರಃ||

ಪ್ರೀತಿಮಾನ್ ದೇವ ಶಂಕರನು ಅವಳಿಗೆ “ನಿನಗೆ ಐವರು ಶ್ರೇಷ್ಠ ಪತಿಗಳಾಗುತ್ತಾರೆ!” ಎಂದು ವರವನ್ನಿತ್ತನು.

01189045a ಸಾ ಪ್ರಸಾದಯತೀ ದೇವಮಿದಂ ಭೂಯೋಽಭ್ಯಭಾಷತ|

01189045c ಏಕಂ ಪತಿಂ ಗುಣೋಪೇತಂ ತ್ವತ್ತೋಽರ್ಹಾಮೀತಿ ವೈ ತದಾ|

01189045e ತಾಂ ದೇವದೇವಃ ಪ್ರೀತಾತ್ಮಾ ಪುನಃ ಪ್ರಾಹ ಶುಭಂ ವಚಃ||

ಪುನಃ ಪೂಜಿಸುತ್ತಾ ಅವಳು ದೇವನಿಗೆ ಹೇಳಿದಳು: “ನಿನ್ನಿಂದ ನಾನು ಒಬ್ಬನೇ ಗುಣೋಪೇತ ಪತಿಯನ್ನು ಕೇಳುತ್ತಿದ್ದೇನೆ.” ಆಗ ಆ ಪ್ರೀತಾತ್ಮ ದೇವದೇವನು ಪುನಃ ಈ ಶುಭವಚನಗಳನ್ನಾಡಿದನು:

01189046a ಪಂಚಕೃತ್ವಸ್ತ್ವಯಾ ಉಕ್ತಃ ಪತಿಂ ದೇಹೀತ್ಯಹಂ ಪುನಃ|

01189046c ತತ್ತಥಾ ಭವಿತಾ ಭದ್ರೇ ತವ ತದ್ಭದ್ರಮಸ್ತು ತೇ|

01189046e ದೇಹಮನ್ಯಂ ಗತಾಯಾಸ್ತೇ ಯಥೋಕ್ತಂ ತದ್ಭವಿಷ್ಯತಿ||

“ನೀನು ನನ್ನಲ್ಲಿ ಪತಿಯನ್ನು ಕೊಡು ಎಂದು ಐದು ಬಾರಿ ಪುನಃ ಪುನಃ ಕೇಳಿಕೊಂಡೆ. ಭದ್ರೇ! ಅದು ಹಾಗೆಯೇ ಆಗುತ್ತದೆ. ನಿನಗೆ ಮಂಗಳವಾಗಲಿ. ಅನ್ಯ ದೇಹವನ್ನು ಸೇರಿದಾಗ ನೀನು ಕೇಳಿದಂತೆಯೇ ಆಗುತ್ತದೆ.”

01189047a ದ್ರುಪದೈಷಾ ಹಿ ಸಾ ಜಜ್ಞೇ ಸುತಾ ತೇ ದೇವರೂಪಿಣೀ|

01189047c ಪಂಚಾನಾಂ ವಿಹಿತಾ ಪತ್ನೀ ಕೃಷ್ಣಾ ಪಾರ್ಷತ್ಯನಿಂದಿತಾ||

ದ್ರುಪದ! ಅವಳೇ ನಿನ್ನ ಈ ದೇವರೂಪಿಣಿ ಮಗಳಾಗಿ ಜನಿಸಿದ್ದಾಳೆ. ಕೃಷ್ಣಾ ಪಾಂಚಾಲಿಯು ಐವರ ಪತ್ನಿಯಾಗಿಯೂ ಅನಿಂದಿತೆಯಾಗಿರುತ್ತಾಳೆಂದು ವಿಹಿತವಾಗಿದೆ.

01189048a ಸ್ವರ್ಗಶ್ರೀಃ ಪಾಂಡವಾರ್ಥಾಯ ಸಮುತ್ಪನ್ನಾ ಮಹಾಮಖೇ|

01189048c ಸೇಹ ತಪ್ತ್ವಾ ತಪೋ ಘೋರಂ ದುಹಿತೃತ್ವಂ ತವಾಗತಾ||

ಘೋರ ತಪಸ್ಸನ್ನು ತಪಿಸಿ, ಪಾಂಡವರಿಗಾಗಿ ಸ್ವರ್ಗಶ್ರೀಯು ಮಹಾಮಖದಲ್ಲಿ ನಿನ್ನ ಮಗಳಾಗಿ ಹುಟ್ಟಿದಳು.

01189049a ಸೈಷಾ ದೇವೀ ರುಚಿರಾ ದೇವಜುಷ್ಟಾ|

                        ಪಂಚಾನಾಮೇಕಾ ಸ್ವಕೃತೇನ ಕರ್ಮಣಾ|

01189049c ಸೃಷ್ಟಾ ಸ್ವಯಂ ದೇವಪತ್ನೀ ಸ್ವಯಂಭುವಾ|

                        ಶ್ರುತ್ವಾ ರಾಜನ್ದ್ರುಪದೇಷ್ಟಂ ಕುರುಷ್ವ||

ಸ್ವಯಂ ಸ್ವಯಂಭುವನಿಂದ ಸೃಷ್ಟಳಾದ ದೇವತೆಗಳೂ ಬಯಸುವ ಈ ದೇವಪತ್ನಿ ದೇವಿಯು ತಾನೇ ಮಾಡಿದ ಕರ್ಮಗಳಿಂದ ಈ ಐವರಿಗೆ ಒಬ್ಬಳೇ ಪತ್ನಿಯಾಗುವಳು. ರಾಜನ್! ದ್ರುಪದ! ಇದನ್ನು ಕೇಳಿದ ನೀನು ನಿನಗಿಷ್ಟವಾದುದನ್ನು ಮಾಡು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಪಂಚೇಂದ್ರೋಪಾಖ್ಯಾನೇ ಏಕೋನನವತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಪಂಚೇಂದ್ರೋಪಾಖ್ಯಾನದಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.

Related image

[1] ಕುರುಕ್ಷೇತ್ರದಲ್ಲಿ ಬಹುಜನರು ನಾಶಗೊಂಡಿದ್ದುದಕ್ಕೆ ಕಾರಣ ಇದೇ ಇರಬಹುದೇ? ಯಮನು ಯಜ್ಞದೀಕ್ಷೆಯಲ್ಲಿರುವಾಗ ಜನರನ್ನು ಸಾಯಿಸದೇ ಇದ್ದುದರಿಂದ ಒಂದೇ ಸಮನೆ ಎಲ್ಲರನ್ನೂ ಸಂಹರಿಸುವ ಜಾಲವೇ ಈ ಮಹಾಭಾರತ ಯುದ್ಧವೇ?

Comments are closed.